July 28, 2018

ಜಗತ್ಪ್ರಸಿದ್ದ ಮ್ಯೂಸಿಯಂಗಳು. world Top Musiums

ದಿನಾಂಕ 28-07-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಜಗತ್ಪ್ರಸಿದ್ದ ಮ್ಯೂಸಿಯಂಗಳು.



ಮ್ಯೂಸಿಯಂ ಅಥವಾ ವಸ್ತು ಸಂಗ್ರಹಾಲಯಗಳು ಎಲ್ಲಡೆ ಇವೆ. ಕಲಾತ್ಮಕ, ಐತಿಹಾಸಿಕ, ಸಾಂಸ್ಕೃತಿಕ ಅಥವಾ ವೈಜ್ಞಾನಿಕ ಪ್ರಾಮುಖ್ಯತೆ ಇರುವ ಕಲಾಕೃತಿಗಳನ್ನು ಮತ್ತು ಇನ್ನಿತರೇ ವಸ್ತುಗಳನ್ನು ಸಂಗ್ರಹಿಸಿಟ್ಟ ಅಥವಾ ರಕ್ಷಿಸಲ್ಪಟ್ಟ ಸ್ಥಳವೇ ಮ್ಯೂಸಿಯಂ. ಬಹುತೇಕ ಮ್ಯೂಸಿಯಂಗಳು ಸಾರ್ವಜನಿಕ ಮ್ಯೂಸಿಯಂಗಳಾಗಿದ್ದು, ಅಲ್ಲಿನ ವಸ್ತುಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ಮಾಡುತ್ತವೆ. ಪ್ರದರ್ಶನವು ಶಾಶ್ವತವಾಗಿರಬಹುದು ಅಥವಾ ತಾತ್ಕಾಲಿಕವಾಗಿರಬಹುದು. ಒಟ್ಟಾರೆ ಅಲ್ಲಿನ ವಸ್ತುಗಳನ್ನು ಪ್ರದರ್ಶಿಸುವ ಹಾಗೂ ಕೆಲವು ವೇಳೆ ಮಾರಾಟ ಮಾಡುವ ವ್ಯವಸ್ಥೆ ಇರುತ್ತದೆ. 
ಸಾಂಸ್ಕೃತಿಕ, ಧಾರ್ಮಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ವಸ್ತುಗಳನ್ನು ಸಂಗ್ರಹಿಸುವುದು, ಅವುಗಳನ್ನು ಕಾಪಾಡುವುದರ ಜೊತೆಗೆ ಶಿಕ್ಷಣ ಮತ್ತು ಮನೋರಂಜನೆ ನೀಡುವುದು ವಸ್ತು ಸಂಗ್ರಹಾಲಯಗಳ ಉದ್ದೆÃಶವಾಗಿದೆ. ವಸ್ತು ಸಂಗ್ರಹಾಲಯಗಳು ಸಾಮಾನ್ಯ ಜನರಿಂದ ಸಂಶೋಧಕರಿಗೆ ಅನೇಕ ರೀತಿಯ ಸೇವೆಗಳನ್ನು ಒದಗಿಸುತ್ತವೆ. ಸಂಶೋಧನೆಗೆ ಮ್ಯೂಸಿಯಂಗಳು ಮುಕ್ತ ಅವಕಾಶ ನೀಡುತ್ತವೆ. ಸಂಗ್ರಹಾಲಯದಲ್ಲಿನ ವಸ್ತುಗಳ ಆಧಾರದ ಮೇಲೆ ವಿವಿಧ ಪ್ರಕಾರಗಳಾಗಿ ವಿಂಗಡಿಸಲಾಗುತ್ತದೆ. ಕಲಾ ವಸ್ತು ಸಂಗ್ರಹಾಲಯ, ವಿಜ್ಞಾನ ವಸ್ತು ಸಂಗ್ರಹಾಲಯ, ಯುದ್ದ ವಸ್ತು ಸಂಗ್ರಹಾಲಯ, ಇತಿಹಾಸ ವಸ್ತು ಸಂಗ್ರಹಾಲಯ, ಮತ್ತು ಮಕ್ಕಳ ವಸ್ತು ಸಂಗ್ರಹಾಲಯ ಹೀಗೆ ವಿವಿಧ ಪ್ರಕಾರದ ವಸ್ತು ಸಂಗ್ರಹಾಲಯಗಳನ್ನು ಕಾಣುತ್ತೆÃವೆ. 
ವಸ್ತು ಸಂಗ್ರಹಾಲಯದ ಪ್ರಯೋಜನಗಳು:
     ಒಂದು ರೀತಿಯಲ್ಲಿ ಹೇಳುವುದಾದರೆವಸ್ತು ಸಂಗ್ರಹಾಲಯಗಳು ಭೂತ(ಇತಿಹಾಸ)ವನ್ನು ತಿಳಿಸುವ ಭವಿಷ್ಯದ ಬೆಳಕಿಂಡಿಗಳು ಇದ್ದಂತೆ. ವಸ್ತು ಸಂಗ್ರಹಾಲಯಗಳು ಸಾಕಷ್ಟು ಪ್ರಯೋಜನಗಳನ್ನು ಹೊಂದಿವೆ. ಅವುಗಳು ಕೆಳಗಿನಂತಿವೆ.
ಸಂಸ್ಕೃತಿ ಮತ್ತು ಪರಂಪರೆಯ ಕುರುಹನ್ನು ನೀಡುತ್ತವೆ.
ಇತಿಹಾಸಕ್ಕೆ ಪುರಾವೆ ಒದಗಿಸುತ್ತವೆ.
ಕುತೂಹಲವನ್ನು ಉತ್ತೆÃಜಿಸಿ ಸಂಶೋಧನೆಗೆ ನಾಂದಿ ಹಾಡುತ್ತವೆ.
ಇತಿಹಾಸವನ್ನು ತಿಳಿಯುವ ಭವಿಷ್ಯದ ಮಾರ್ಗದರ್ಶಿಗಳಾಗಿವೆ.
ಪುರಾತನ ಮತ್ತು ಆಧುನಿಕ ಜಗತ್ತಿನ ಕೊಂಡಿಗಳು.
ಕಲಿಕೆಗೆ ಗಟ್ಟಿಯಾದ ಸಾಕ್ಷಾö್ಯಧಾರಗಳನ್ನು ಒದಗಿಸುತ್ತವೆ.
ಸಮುದಾಯ ಕೇಂದ್ರಗಳಾಗಿ ಸಮಾಜ ಮತ್ತು ವಿಜ್ಞಾನಗಳ ಸಮಾಗಮ ಕೇಂದ್ರಗಳಾಗಿವೆ.
ಇತಿಹಾಸದ ಜ್ಞಾನವನ್ನು ವೃದ್ದಿಸುತ್ತವೆ.
ಮಾನವ ಇತಿಹಾಸದ ಪರಂಪರೆಯನ್ನು ತಿಳಿಸುತ್ತವೆ.
ಮನೋರಂನೆಯ ಜೊತೆಗೆ ಜ್ಞಾನವನ್ನು ಬೆಳೆಸುತ್ತವೆ. 
ಪ್ರಶ್ನಿಸುವ ಮನೋಭಾವ ಬೆಳೆಸುವ ಜೊತೆಗೆ ಭಾಷಾ ಬೆಳವಣಿಗೆಗೆ ಪೂರಕವಾಗಿವೆ.
ಮನಸ್ಸನ್ನು ಉತ್ತೆÃಜಿಸುವ ಮೂಲಕ ಹೊಸ ಐಡಿಯಾವನ್ನು ಬೆಳೆಸುತ್ತವೆ.

ಥೀಮ್ ಎಂಟರ್ಟೈನ್ಮೆಂಟ್ ಅಸೋಸಿಯೇಷನ್‌ನ 12ನೇ ವಾರ್ಷಿಕ ಮ್ಯೂಸಿಯಂ ಇಂಡೆಕ್ಸ್ನ ಪ್ರಕಾರ ಕೆಳಗಿನ ಮ್ಯೂಸಿಯಂ ಅತೀ ಹೆಚ್ಚು ಜನರು ವೀಕ್ಷಿಸಿದ ಮ್ಯೂಸಿಯಂಗಳಾಗಿವೆ. ಅವುಗಳ ಕಿರುಮಾಹಿತಿ ಇಲ್ಲಿದೆ.
1. ಫ್ರಾನ್ಸ್ನ ಲೌವ್ರೆ : ಫ್ರಾನ್ಸ್ನ ಪ್ಯಾರಿಸ್ ನಗರದಲ್ಲಿರುವ ಲೌವ್ರೆ ವಸ್ತು ಸಂಗ್ರಹಾಲಯವು ವಿಶ್ವದ ಅತಿ ದೊಡ್ಡ ಕಲಾ ವಸ್ತು ಸಂಗ್ರಹಾಲಯವಾಗಿದೆ. ಇದು ಫ್ರಾನ್‌ನ ಐತಿಹಾಸಿಕ ಸ್ಮಾರಕವಾಗಿದ್ದು, 72,735 ಚದರ ಮೀಟರ್ ವಿಸ್ತಿÃರ್ಣ ಹೊಂದಿದೆ. ಲೌವ್ರೆ ಮ್ಯೂಸಿಯಂ ಪ್ರಪಂಚದ ಅತಿ ಹೆಚ್ಚು ಜನರು ಸಂದರ್ಶಿತ ವಸ್ತು ಸಂಗ್ರಹಾಲಯವಾಗಿದೆ. ಕಳೆದ ವರ್ಷ 81 ಲಕ್ಷ ಪ್ರವಾಸಿಗರು ಈ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದ್ದಾರೆ.
ಈ ಸಂಗ್ರಹಾಲಯವು ಲೌವ್ರೆಯ ಅರಮನೆಯಾಗಿದ್ದು, ಆಗಸ್ಟ್ 10, 1793 ರಲ್ಲಿ ಪ್ರಾರಂಭವಾಗಿದೆ. 537 ವರ್ಣಚಿತ್ರಗಳ ಪ್ರದರ್ಶನದೊಂದಿಗೆ ಪ್ರಾರಂಭವಾದ ಈ ವಸ್ತು ಸಂಗ್ರಹಾಲಯದಲ್ಲಿ ಪ್ರಸ್ತುತ 38,000 ವಿವಿಧ ಕಲಾಕೃತಿಗಳಿವೆ. ಈಜಿಪ್ಟ್, ಗ್ರಿÃಕ್, ರೋಮನ್ ನಾಗರೀಕತೆಗಳಿಂದ ಇಂದಿನ ಇಸ್ಲಾಮಿಕ್‌ವರೆಗಿನ ಕಲೆ, ಶಿಲ್ಪ, ಧಾರ್ಮಿಕ, ಸಾಂಸ್ಕೃತಿಕ, ಅಲಂಕಾರಿಕ ವರ್ಣ ಚಿತ್ರಗಳು, ಮುದ್ರಣ ಮತ್ತು ರೇಖಾಚಿತ್ರಗಳಿವೆ. (ಚಿತ್ರ – 1)
2. ಚೀನಾದ ರಾಷ್ಟಿçÃಯ ವಸ್ತುಸಂಗ್ರಹಾಲಯ : ಚೀನಾದ ಬೀಜಿಂಗ್‌ನಲ್ಲಿರುವ ರಾಷ್ಟಿçÃಯ ವಸ್ತುಸಂಗ್ರಹಾಲಯವು ಚೀನಾದ ಕಲೆ ಮತ್ತು ಇತಿಹಾಸದ ಬಗ್ಗೆ ಶಿಕ್ಷಣ ನೀಡುವ ಉದ್ದೆÃಶ ಹೊಂದಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಂಸ್ಕೃತಿ ಸಚಿವಾಲಯ ಇದರ ಉಸ್ತುವಾರಿ ಹೊತ್ತಿದೆ. ಕಳೆದ ವರ್ಷ 80 ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ವೀಕ್ಷಿಸಿದ ವಸ್ತುಸಂಗ್ರಹಾಲಯವಾಗಿದೆ. 
1959ರಿಂದ ಒಂದೇ ಕಟ್ಟಡದಲ್ಲಿದ್ದ ಎರಡು ಪ್ರತ್ಯೆÃಕ ಸಂಗ್ರಹಾಲಯಗಳನ್ನು 2003ರಲ್ಲಿ ಒಟ್ಟುಗೂಡಿಸುವ ಮೂಲಕ ಈ ವಸ್ತುಸಂಗ್ರಹಾಲಯ ಸ್ಥಾಪನೆಯಾಗಿದೆ. 17 ಲಕ್ಷ ವರ್ಷಗಳ ಹಿಂದೆ ಯುವಾನ್ಮೌ ಮಾನವನಿಂದ ಹಿಡಿದು ಕ್ವಿಂಗ್ ರಾಜವಂಶದವರೆಗಿನ ಚೀನಾ ಇತಿಹಾಸವನ್ನು ಇದು ಒಳಗೊಂಡಿದೆ. 16 ಎಕರೆ ವಿಸ್ತಾರದ ಪ್ರದೇಶದಲ್ಲಿ 10 ಲಕ್ಷಕ್ಕೂ ಅಧಿಕ ಕಲಾಕೃತಿಗಳನ್ನು ಒಳಗೊಂಡಿದೆ. ಚೀನಾ ಒಳಗೊಂಡಂತೆ ಪ್ರಪಂಚದ ವಿವಿಧ ದೇಶಗಳ ಅಪರೂಪದ ಹಸ್ತಪ್ರತಿಗಳು, ಕಲಾಕೃತಿಗಳು ಈ ಸಂಗ್ರಹಾಲಯದಲ್ಲಿವೆ. (ಚಿತ್ರ – 2)
3. ಅಮೇರಿಕಾದ ನ್ಯಾಷನಲ್ ಏರ್ ಅಂಡ್ ಸ್ಪೆÃಸ್ ಮ್ಯೂಸಿಯಂ : ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಈ ಮ್ಯೂಸಿಯಂನಲ್ಲಿ ವಾಯಯಾನ ಮತ್ತು ಅಂತರಿಕ್ಷ ಯಾನಕ್ಕೆ ಸಂಬಂಧಿಸಿದ ಮಾದರಿಗಳನ್ನು ಕಾಣಬಹುದು. 1946ರಲ್ಲಿ ನ್ಯಾಷನಲ್ ಏರ್ ಮ್ಯೂಸಿಯಂ ಆಗಿ ಸ್ಥಾಪನೆಯಾಗಿ 1976 ರಲ್ಲಿ ನ್ಯಾಷನಲ್ ಮಾಲ್ನಿÃಯರ್ ಎಲ್ ಎನ್ಫಾಂಟ್ ಪ್ಲಾಜಾದಲ್ಲಿ ತನ್ನ ಮುಖ್ಯ ಕಟ್ಟಡ ತೆರೆಯಿತು. ಯುನೈಟೆಡ್ ಸ್ಟೆÃಟ್ಸ್ನಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ಸಂಗ್ರಹಾಲಯ ಇದಾಗಿದೆ. 
ಇಲ್ಲಿ ಅಪೋಲೋ11, ಕಮಾಂಡ್ ಮಾಡ್ಯೂಲ್, ರೈಟ್ ಸಹೋದರರ ವಿಮಾನದ ಮಾಡ್ಯೂಲ್‌ಗಳು ಇಲ್ಲಿವೆ. ವಾಯುಯಾನ ಮತ್ತು ಬಾಹ್ಯಾಕಾಶ ಹಾರಾಟದ ಇತಿಹಾಸ ಮತ್ತು ವಿಜ್ಞಾನದ ಸಂಶೋಧನಾ ಕೇಂದ್ರವಾಗಿದೆ. ಬಾಹ್ಯಾಕಾಶ ಮತ್ತು ವಿಮಾನಯಾನಕ್ಕೆ ಸಂಬಂಧಿಸಿದ ಅನೇಕ ಕಾಪ್ಟರ್‌ಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ. 7.6 ಲಕ್ಷ ಚದರ ಅಡಿ ವಿಸ್ತಿÃರ್ಣ ಹೊಂದಿದ ಈ ಸಂಗ್ರಹಾಲಯವನ್ನು ಕಳೆದ ವರ್ಷ 75 ಲಕ್ಷ ಜನ ವೀಕ್ಷಿಸಿದ್ದಾರೆ. (ಚಿತ್ರ – 3) 
4. ಯುನೈಟೆಡ್ ಸ್ಟೆÃಟ್ಸ್ನ ಮೆಟ್ರೊÃಪಾಲಿಟಿನ್ ಆರ್ಟ್ ಮ್ಯೂಸಿಯಂ : ನ್ಯೂಯಾರ್ಕ್ ನಗರದಲ್ಲಿರುವ ಮೆಟ್ರೊÃಪಾಲಿಟಿನ್ ಆರ್ಟ್ ಮ್ಯೂಸಿಯಂ ಅತಿದೊಡ್ಡ ಕಲಾ ಮತ್ತು ಐತಿಹಾಸಿಕ ವಸ್ತುಸಂಗ್ರಹಾಲಯವಾಗಿದೆ. 2017ರಲ್ಲಿ 70 ಲಕ್ಷಕ್ಕೂ ಅಧಿಕ ಪ್ರವಾಸಿಗರು ಈ ಮ್ಯೂಸಿಯಂಗೆ ಭೇಟಿ ನೀಡಿದ್ದಾರೆ.
ಇದರಲ್ಲಿ 20 ಲಕ್ಷ ಕಲಾಕೃತಿಗಳಿವೆ. ಮಧ್ಯಕಾಲೀನ ಯುರೋಪಿನ ಕಲೆ, ವಾಸ್ತುಶಿಲ್ಪಗಳಿಗೆ ಸಂಬಂಧಿಸಿದ ವ್ಯಾಪಕ ಸಂಗ್ರಹವನ್ನು ಹೊಂದಿದೆ. ಮೆಟ್ ಆಫ್ರಿಕನ್, ಏಷ್ಯನ್, ಓಷಿಯನ್, ಬೈಜಾಂಟೈನ್ ಮತ್ತು ಇಸ್ಲಾಮಿಕ್ ಕಲಾಕೃತಿಗಳನ್ನು ಒಳಗೊಂಡಿದೆ. ಸಂಗೀತ ವಾದ್ಯಗಳು, ವೇಷಭೂಷಣಗಳು, ಪುರಾತನ ಆಯುಧಗಳು ಮತ್ತು ರಕ್ಷಾಕವಚಗಳು, ಮುಂತಾದವುಗಳನ್ನು ಹೊಂದಿದೆ. 1872 ರ ಫೆಬ್ರವರಿ 20 ರಂದು ಈ ಮ್ಯೂಸಿಯಂ ಸ್ಥಾಪಿತವಾಗಿದೆ. ಅಮೇರಿಕನ್ ಜನರಿಗೆ ಕಲೆ ಮತ್ತು ಕಲಾ ಶಿಕ್ಷಣವನ್ನು ಕೊಡುವ ಉದ್ದೆÃಶದಿಂದ ಈ ಮ್ಯೂಸಿಯಂ ಸ್ಥಾಪಿಸಲಾಗಿದೆ. (ಚಿತ್ರ – 4)
5. ವ್ಯಾಟಿಕನ್ ವಸ್ತುಸಂಗ್ರಹಾಲಯ : ವ್ಯಾಟಿಕನ್ ನಗರದಲ್ಲಿರುವ ಈ ಸಂಗ್ರಹಾಲಯವು ಕ್ರಿಶ್ಚಿಯನ್ ಪೋಪ್‌ಗಳು ಸಂಗ್ರಹಿಸಿದ ಅಪಾರ ವಸ್ತುಗಳ ಸಂಗ್ರಹದಿಂದ ಕೂಡಿದೆ. ಪ್ರಸಿದ್ದ ಶಾಸ್ತಿçÃಯ ಶಿಲ್ಪಗಳು ಮತ್ತು ವಿಶ್ವ ನವೋದಯ ಕಲೆಯ ಮೇರು ಕಲಾಕೃತಿಗಳು ಇಲ್ಲಿವೆ. ಈ ವಸ್ತು ಸಂಗ್ರಹಾಲಯದಲ್ಲಿ 70 ಸಾವಿರಕ್ಕೂ ಹೆಚ್ಚಿನ ಕಲಾಕೃತಿಗಳಿವೆ. ಅದರಲ್ಲಿ 20 ಸಾವಿರ ವಸ್ತುಗಳನ್ನು ಮಾತ್ರ ಪ್ರದರ್ಶನಕ್ಕೆ ಇಡಲಾಗಿದೆ. ಉಳಿದ ಕಲಾಕೃತಿಗಳನ್ನು ಆಡಳಿತ, ಪಾಂಡಿತ್ಯ ಮತ್ತು ಸಂಶೋಧನೆಗಾಗಿ ಬಳಸಲಾಗುತ್ತದೆ.
16ನೇ ಶತಮಾನದ ಆರಂಭದಲ್ಲಿ ಪೋಪ್ ಜ್ಯೂಲಿಯಸ್-2 ಈ ಸಂಗ್ರಹಾಲಯವನ್ನು ಸ್ಥಾಪಿಸಿದರು. 54 ಗ್ಯಾಲರಿಗಳನ್ನು ಹೊಂದಿದ ಈ ಸಂಗ್ರಹಾಲಯವನ್ನು 2017 ರಲ್ಲಿ 60 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆಧುನಿಕ ಧಾರ್ಮಿಕ ಕಲಾಕೃತಿಗಳ ಜೊತೆಗೆ ಕಾರ್ಲೋ ಕಾರಾ, ಜಾರ್ಜಿಯೋ ಡೇ, ವಿನ್ಸೆಂಟ್ ವ್ಯಾನ್ ಗಾಗ್, ಸಲ್ವಡಾರ್ ಡಾಲಿ, ಪ್ಯಾಬ್ಲೊÃ ಪಿಕಾಸೋರಂತಹ ಪ್ರಸಿದ್ದ ವರ್ಣಚಿತ್ರಗಾರರ ಕಲಾಕೃತಿಗಳು ಇಲ್ಲಿವೆ. (ಚಿತ್ರ – 5)
6. ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಮ್ಯೂಸಿಯಂ : ಶಾಂಘೈ ನಗರದಲ್ಲಿರುವ ಅತೀ ದೊಡ್ಡ ವಸ್ತುಸಂಗ್ರಹಾಲಯ ಇದಾಗಿದೆ. 1995ರಲ್ಲಿ ಪ್ರಾರಂಭವಾದ ಈ ಮ್ಯೂಸಿಯಂ ಪ್ರಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನಗಳೊಂದಿಗಿನ ಮಾನವ ಕುಲದ ಸಾಧನೆಗಳನ್ನು ತಿಳಿಸುತ್ತದೆ. ‘ಸ್ವರ್ಗ ಮತ್ತು ಭೂಮಿ’, ‘ಜೀವನ’, ‘ಸಾಮ್ರಾಜ್ಯ’, ‘ಸೃಜನಶೀಲತೆ’ ಮತ್ತು ‘ಭವಿಷ್ಯ’ ಎಂಬ ಐದು ಪ್ರದರ್ಶನ ಸಭಾಂಗಣಗಳಿವೆ. ಕಳೆದ ವರ್ಷ 64 ಲಕ್ಷ ವೀಕ್ಷಕರು ಇಲ್ಲಿಗೆ ಭೇಟಿ ನೀಡಿದ್ದಾರೆ. 
ಚೀನಾದ ಪುರಾತನ ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವೆÃಷಕ ಮಾದರಿಗಳು ಇಲ್ಲಿವೆ. 7500 ಚದರ ಅಡಿ ವಿಸ್ತಾರದಲ್ಲಿ ದೃಕ್-ಶ್ರವಣ ಸಂಶೋಧನೆಯ ಮಾದರಿ, ಸಣ್ಣ ಪ್ರಮಾಣದ ಜಲ ವಿದ್ಯುತ್ ಕೇಂದ್ರ, ಮಳೆಕಾಡು, ಅಕ್ವೆÃರಿಯಂ ಹಾಗೂ ಭೂಕಂಪ ಮಾಪನ ಕೇಂದ್ರವೂ ಇದೆ. ಅಲ್ಲದೇ ವೈಜ್ಞಾನಿಕ ಅಭಿವೃದ್ದಿಯನ್ನು ತಿಳಿಸುವ ಅನೇಕ ವೀಡಿಯೋಗಳ ಪ್ರದರ್ಶನವು ಇಲ್ಲಿದೆ. (ಚಿತ್ರ – 6)
7. ಅಮೇರಿಕಾದ ನ್ಯಾಷನಲ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ : ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಈ ಮ್ಯೂಸಿಯಂನ ಪ್ರವೇಶ ಉಚಿತ. ನೈಸರ್ಗಿಕ ವಸ್ತುಗಳ ಸಂಗ್ರಹಾಲಯವಾಗಿರುವ ಇದು ಪ್ರವಾಸಿಗೆ ನೆಚ್ಚಿನ ಸ್ಥಳವಗಿದೆ. 15 ಲಕ್ಷ ಚದರ ಅಡಿ ವಿಸ್ತಾರವುಳ್ಳ ಈ ಸಂಗ್ರಹಾಲಯಕ್ಕೆ ಕಳೆದ ವರ್ಷ 71 ಲಕ್ಷ ಜನ ಭೇಟಿ ನೀಡಿದ್ದಾರೆ. ಇಲ್ಲಿ 1.26 ಕೋಟಿ ವಿವಿಧ ಮಾದರಿಯ ಕಲಾಕೃತಿಗಳಿವೆ. ಪ್ರಾಣಿಗಳ ಪಳೆಯುಳಿಕೆಗಳು, ಖನಿಜಗಳು, ಉಲ್ಕೆಗಳು, ಮಾನವ ಅವಶೇಷಗಳು ಮತ್ತು ಮಾನವನ ಸಾಂಸ್ಕೃತಿಕ  ಕಲಾಕೃತಿಗಳನ್ನು ಹೊಂದಿದೆ. ಇಲ್ಲಿ ವಿಜ್ಞಾನಿಗಳ ದೊಡ್ಡ ನೆಲೆಯಾಗಿದೆ. ವಿಶ್ವದ ನೈಸರ್ಗಿಕ ಮತ್ತು ಸಾಂಸ್ಕೃತಿಕ ಅಧ್ಯಯನಕ್ಕೆ ಮೀಸಲಾದ ತಾಣ ಇದಾಗಿದೆ.  (ಚಿತ್ರ – 7)
8. ಲಂಡನ್‌ನ ಬ್ರಿಟಿಷ್ ಮ್ಯೂಸಿಯಂ : ಲಂಡನ್ನಿನ ಬ್ಲೂಮ್ಸ್ಬರಿ ಪ್ರದೇಶದಲ್ಲಿರುವ ಈ ಮ್ಯೂಸಿಯಂ ಮಾನವನ ಇತಿಹಾಸ, ಕಲೆ ಮತ್ತು ಸಂಸ್ಕೃತಿಗೆ ಸಮರ್ಪಿತವಾದ ಒಂದು ಸಾರ್ವಜನಿಕ ಸಂಸ್ಥೆಯಾಗಿದೆ. 80 ಲಕ್ಷ ಕಲಾಕೃತಿಗಳನ್ನು ಒಳಗೊಂಡಿದೆ. ಪ್ರಾರಂಭದಿಂದ ಇಂದಿನವರೆಗಿನ ಮಾನವ ಸಂಸ್ಕೃತಿಯ ಕಥೆಯನ್ನು ಹಾಗೂ ಬ್ರಿಟಿಷ್ ಸಾಮ್ರಾಜ್ಯ ಯುಗದ ವ್ಯಾಪಕ ಮೂಲಗಳನ್ನು ದಾಖಲಿಸಿದೆ. 
1753ರಲ್ಲಿ ಪ್ರಾರಂಭವಾದ ಈ ಮ್ಯೂಸಿಯಂ ವೈದ್ಯ ವಿಜ್ಞಾನಿ ಸರ್.ಹ್ಯಾನ್ಸ್ ಸ್ಲೊÃಯೆನ್ ಅವರ ಸಂಗ್ರಹಗಳನ್ನು ಆಧರಿಸಿತ್ತು. ಪ್ರಾರಂಭದಲ್ಲಿ ಕೇವಲ ಗ್ರಂಥಾಲಯವಾಗಿದ್ದ ಇದು ಕ್ರಮೇಣವಾಗಿ ಮಾನವ ಸಂಸ್ಕೃತಿಯ ಪ್ರದರ್ಶನಗಳ ಕೇಂದ್ರವಾಗಿ ಮಾರ್ಪಾಟಾಯಿತು. ಕಳೆದ ವರ್ಷ 59 ಲಕ್ಷ ಜನ ಈ ಸಂಗ್ರಹಾಲಯವನ್ನು ವೀಕ್ಷಿಸಿದ್ದಾರೆ. (ಚಿತ್ರ – 8)
9. ಲಂಡನ್‌ನ ಟೇಟ್ ಮಾರ್ಡನ್ : ಲಂಡನ್ ನಗರದಲ್ಲಿರುವ ಇದು ಆಧುನಿಕ ಕಲಾ ಸಂಪುಟವಾಗಿದೆ. 1900 ರಿಂದ ಇಂದಿನವರೆಗೆ ಅಂತರರಾಷ್ಟಿçÃಯ ಆಧುನಿಕ ಮತ್ತು ಸಮಕಾಲೀನ ಕಲೆಯ ಸಮಾಗಮವಾಗಿದೆ. ವಿಶ್ವದ ಸಮಕಾಲೀನ ಕಲೆಯ ದೊಡ್ಡ ಸಂಗ್ರಹಾಲಯಗಳಲ್ಲಿ ಟೇಟ್ ಮಾರ್ಡನ್ ಕೂಡಾ ಒಂದಾಗಿದೆ. ಇದರ ಪ್ರವೇಶ ಉಚಿತ. ವಿವಿಧ ದೇಶಗಳ ಆಧುನಿಕ ಕಲೆಯ ಮೂಲ ಕಲ್ಪನೆಗಳನ್ನು ಪರಿಚಯಿಸುವ ಹಿನ್ನಲೆಯಲ್ಲಿ ಈ ಮ್ಯೂಸಿಯಂ ನಿರ್ಮಾಣಗೊಂಡಿದೆ. ಇಲ್ಲಿ ಥೀಮ್ ಆಧಾರಿತ ಎಂಟು ಪ್ರದರ್ಶನ ಗ್ಯಾಲರಿಗಳಿವೆ. ಶಾಶ್ವತ ಪ್ರದರ್ಶನಗಳ ಜೊತೆಗೆ ಕೆಲವು ತಾತ್ಕಾಲಿಕ ಪ್ರದರ್ಶನಗಳನ್ನೂ ಸಹ ಏರ್ಪಡಿಸಲಾಗುತ್ತದೆ. ತಾತ್ಕಾಲಿಕ ಪ್ರದರ್ಶನಗಳಿಗೆ ಪ್ರವೇಶ ಶುಲ್ಕ ಇರುತ್ತದೆ. ಸಾಮಾನ್ಯವಾಗಿ ಇವು ಮರ‍್ನಾಲಕು ತಿಂಗಳುಗಳ ಕಾಲ ನಡೆಯುತ್ತವೆ. ಶಾಶ್ವತ ಪ್ರದರ್ಶನದ ಬಳಿ ಪುಸ್ತಕ ಮತ್ತು ಕೆಲವು ಸರಕುಗಳ ಪ್ರದರ್ಶನ ಮತ್ತು ಮಾರಾಟವೂ ಇರುತ್ತದೆ. (ಚಿತ್ರ – 9)
10. ವಾಷಿಂಗ್ಟನ್‌ನ ನ್ಯಾಷನಲ್ ಆರ್ಟ್ ಗ್ಯಾಲರಿ : 1937 ರಲ್ಲಿ ಖಾಸಗಿಯಾಗಿ ಪ್ರಾರಂಭವಾದ ಈ ಸಂಗ್ರಹಾಲಯ ವಾಷಿಂಗ್ಟನ್ ಡಿ.ಸಿ.ಯಲ್ಲಿದೆ. ಈಗ ಸಾರ್ವಜನಿಕವಾದ ಇದು ಸಂಪೂರ್ಣವಾಗಿ ಕಲಾ ಸಂಗ್ರಹಾಲಯವಾಗಿದೆ. ಇದರಲ್ಲಿ ವರ್ಣಚಿತ್ರಗಳು, ರೇಖಾ ಚಿತ್ರಗಳು, ಮುದ್ರಿತ ಪ್ರತಿಗಳು, ಛಾಯಾ ಚಿತ್ರಗಳು, ಶಿಲ್ಪಗಳು, ಪದಕಗಳು, ಅಲಂಕಾರಿಕ ವಸ್ತುಗಳಿವೆ. ಇದರಲ್ಲಿ ಲಿಯೋನಾರ್ಡ್ ಡಾವಿಂಚಿಯ ಕಲಾಕೃತಿಗಳು ಇವೆ. 
ಸಂಗ್ರಹಾಲಯವು ಎರಡು ಕಟ್ಟಡಗಳನ್ನು ಒಳಗೊಂಡಿದೆ. ಈ ಎರಡೂ ಕಟ್ಟಡಗಳು ಬೇರೆ ಬೇರೆಯಾಗಿದ್ದು ಭೂಗತ ಮಾರ್ಗಗಳನ್ನು ಹೊಂದಿವೆ. ಸಂಗ್ರಹಾಲಯದಲ್ಲಿ ಮಧ್ಯಯುಗದಿಂದ ಇಂದಿನವರೆಗಿನ ಪಾಶ್ಚಿಮಾತ್ಯ ಕಲೆಯ ಬೆಳವಣಿಗೆಯನ್ನು ಪತ್ತೆಹಚ್ಚುವ 141,000 ಕ್ಕೂ ಹೆಚ್ಚಿನ ಕಲಾಕೃತಿಗಳಿವೆ. ಕಳೆದ ವರ್ಷ ಈ ಸಂಗ್ರಹಾಲಯಕ್ಕೆ 52 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. (ಚಿತ್ರ – 10)
11. ತೈಪೈಯ ರಾಷ್ಟಿçÃಯ ಅರಮನೆ ಮ್ಯೂಸಿಯಂ : ಚೀನೀ ಚಕ್ರಾಧಿಪತ್ಯದ ಕಲಾಕೃತಿಗಳನ್ನು ಹೊಂದಿದ ಈ ಮ್ಯೂಸಿಯಂ ಚೀನಾದ ತೈಪೈಯಲ್ಲಿದೆ. ನವಶಿಲಾಯುಗದಿಂದ ಆಧುನಿಕದವರೆಗಿನ 8000 ವರ್ಷಗಳ ಚೀನೀಯರ ಕಲೆಯ ಇತಿಹಾಸವನ್ನು ಹೊಂದಿದ ಈ ಮ್ಯೂಸಿಯಂನಲ್ಲಿ 7 ಲಕ್ಷಕ್ಕೂ ಅಧಿಕ ಕಲಾಕೃತಿಗಳಿವೆ. 1925ರಲ್ಲಿ ಪ್ರಾರಂಭವಾದ ಈ ಮ್ಯೂಸಿಯಂನ ಈಗಿನ ಮುಖ್ಯ ಕಟ್ಟಡವನ್ನು ಹುವಾಂಗ್ ಬಾಯುಯು ವಿನ್ಯಾಸಗೊಳಿಸಿ 1965ರಲ್ಲಿ ನಿರ್ಮಿಸಿದ್ದಾರೆ. ಮಿಂಗ್ ಮತ್ತು ಕ್ವಿಂಗ್ ರಾಜವಂಶಗಳ ಸಾಮ್ರಾಜ್ಯದ ಅರಮನೆ ಸಂಗ್ರಹಗಳು ಇಲ್ಲಿವೆ. ಚಿತ್ರಕಲೆ ಮತ್ತು ಕಾಲಿಗ್ರಫಿಯ ಶಾಶ್ವತ ಪ್ರದರ್ಶನ ಮೂರು ತಿಂಗಳಿಗೊಮ್ಮೆ ನಡೆಯುತ್ತದೆ. 2017 ರಲ್ಲಿ 44 ಲಕ್ಷ ಪ್ರವಾಸಿಗರು ಈ ಮ್ಯೂಸಿಯಂ ವೀಕ್ಷಿಸಿದ್ದಾರೆ. (ಚಿತ್ರ – 11)
12. ರಷ್ಯಾದ ಸ್ಟೆÃಟ್ ಹರ್ಮಿಟೇಜ್ ಮ್ಯೂಸಿಯಂ : ಸೇಂಟ್ ಪೀರ‍್ಸ್ಬರ್ಗ್ನಲ್ಲಿರುವ ಸ್ಟೆÃಟ್ ಹರ್ಮಿಟೇಜ್ ಮ್ಯೂಸಿಯಂ ಕಲೆ ಮತ್ತು ಸಂಸ್ಕೃತಿಯ ಆಗರವಾಗಿದೆ. ಇದು 1764 ರಲ್ಲಿ ಎಂಪ್ರಾಸ್ ಕ್ಯಾಥರೀನ್ ದಿ ಗ್ರೆÃಟ್ ಬರ್ಲಿನ್ ಎಂಬ ವ್ಯಾಪಾರಿಯ ವರ್ಣ ಚಿತ್ರಗಳ ಸಂಗ್ರಹದಿಂದ ಪ್ರಾರಂಭವಾಗಿದೆ. ರಷ್ಯಾದ ಐತಿಹಾಸಿಕ ಕಟ್ಟಡಗಳಾದ ವಿಂಟರ್ ಅರಮನೆ, ಮೆನ್ಶಿಕೋವ್ ಪ್ಯಾಲೇಸ್, ಮ್ಯೂಸಿಯಂ ಆಫ್ ಪಿರ್ಸಿಲೈನ್ ಮುಂತಾದವುಗಳನ್ನು ಒಳಗೊಂಡ ಸಂಕೀರ್ಣ ಸಂಗ್ರಹಾಲಯವಾಗಿದೆ. ಅಲ್ಲದೇ ಇದು ಸಿನಿಮಾ ಮತ್ತು ದೂರದರ್ಶನಗಳ ಚಿತ್ರಿÃಕರಣ ತಾಣವೂ ಆಗಿದೆ. ಕಳೆದ ವರ್ಷ 42 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿನೀಡಿದ್ದಾರೆ.  (ಚಿತ್ರ – 12)
13. ಮ್ಯಾಡ್ರಿಡ್‌ನ ರೇನಾ ಸೋಫಿಯಾ : ಸ್ಪೆÃನ್‌ನ ಮ್ಯಾಡ್ರಿಡ್‌ನಲ್ಲಿರುವ ಇದು ರಾಷ್ಟಿçÃಯ ಮ್ಯೂಸಿಕ್ ಸಂಗ್ರಹಾಲಯವಾಗಿದೆ. ಸಂಗೀತಕ್ಕಾಗಿಯೇ ಮೀಸಲಾದ ಇದರಲ್ಲಿ ಪ್ರಸಿದ್ದ ಸಂಗೀತಗಾರರ ಸಂಗ್ರಹಗಳಿವೆ. 1992ರ ಸೆಪ್ಟಂಬರ್ 10 ರಂದು ಪ್ರಾರಂಭವಾದ ಈ ಮ್ಯೂಸಿಯಂಗೆ ಕ್ವಿÃನ್ ಸೋಫಿಯಾ ಹೆಸರಿಡಲಾಗಿದೆ. ಸ್ಪೆÃನ್‌ನ ಪ್ಯಾಬ್ಲೊà ಪಿಕಾಸೋ ಮತ್ತು ಸಾಲ್ವಡಾರ್ ಡಾಲಿಯ ಅತ್ಯುತ್ತಮ ಸಂಗ್ರಹಗಳನ್ನು ಒಳಗೊಂಡಿದೆ. ಇದಲ್ಲದೇ ಜೋನಾ ಮೀರೋ, ಪಾಬ್ಲೊà ಗಾರ್ಗಲ್ಲೊÃ, ಲೂಯಿಸ್ ಗಾರ್ಡಿಲ್ಲೊ, ಲೂಯಿಸ್ ಮನೋಜ್, ಜಾರ್ಜ್ ಓಟೈಟಾ ಮುಂತಾದ ಕಲಾವಿದರ ಸಂಗ್ರಹದಿಂದ ಈ ಮ್ಯೂಸಿಯಂ ಕಾರ್ಯ ನಿರ್ವಹಿಸುತ್ತದೆ. ಈ ಮ್ಯೂಸಿಯಂನಲ್ಲಿ 1 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳು, 3500 ಕ್ಕೂ ಹೆಚ್ಚಿನ ಧ್ವನಿ ಮುದ್ರಣಗಳು ಮತ್ತಿ 1000 ಕ್ಕೂ ಹೆಚ್ಚಿನ ವೀಡಿಯೋಗಳ ಹೊಂದಿದ ಗ್ರಂಥಾಲಯವಿದೆ. ಕಳೆದ ವರ್ಷ 39 ಲಕ್ಷ ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡಿದ್ದಾರೆ.  (ಚಿತ್ರ – 13)
ಆರ್.ಬಿ.ಗುರುಬಸವರಾಜ ಹೊಳಗುಂದಿ

July 21, 2018

ಸಂಬಂಧಗಳು ಸೇತುವೆಯಾಗಲಿ

ಸಂಬಂಧಗಳು ಸೇತುವೆಯಾಗಲಿ
ಜುಲೈ 2018ರ ಟೀಚರ್ ಮಾಸಪತ್ರಿಕೆಯಲ್ಲಿ ಪ್ರಕಟವಾದ ಬರಹ.

ಒಂದೆಡೆ ಮಾನವನ ವ್ಯವಹಾರಗಳು ಜಗತ್ತಿನಾದ್ಯಂತ ವಿಸ್ತಿರಿಸುತ್ತಿವೆ. ಇನ್ನೊಂದೆಡೆ ಮಾನವ ಸಂಬಂಧಗಳು ದೂರವಾಗುತ್ತಿವೆ. ಕೂಡು ಕುಟುಂಬಗಳಲ್ಲಿನ ಅವಿನಾಭವ ಸಂಬಂಧಗಳು ಕಡಿತಗೊಂಡಿವೆ. ಅಜ್ಜ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ-ಮಾವ, ನಾದಿನಿ-ಮೈದುನ, ಇತ್ಯಾದಿ ಸಂಬಂಧಗಳು  ಅರ್ಥ ಕಳೆದುಕೊಳ್ಳುತ್ತಿವೆ. ಎಲ್ಲವೂ ತಾಂತ್ರಿಕ ಜಗತ್ತಿನ ಓಟಕ್ಕೆ ಓಡತೊಡಗಿವೆ.  ಎಲ್ಲಾ ಮಾನವೀಯ ಸಂಬಂಧಗಳ ಸ್ವಾಸ್ಥವು ವ್ಯಕ್ತಿ ವ್ತಕ್ತಿಗಳ ನಡುವಿನ ಸದ್ಭಾವನೆಗಳನ್ನು ಅವಲಂಬಿಸಿವೆ ಎಂಬುದನ್ನು ಮರೆತಿದ್ದೆವೆ. 
ಆಧುನಿಕ ಜಗತ್ತಿನಲ್ಲಿ ಸಣ್ಣ ಕುಟುಂಬಗಳು ಅನಿವಾರ್ಯವಾದರೂ ಸಂಬಂಧಗಳನ್ನು ಕಡಿದುಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಕೇವಲ ಸಾಮಾಜಿಕ ಜಾಲ ತಾಣಗಳ ಮೂಲಕ ತಾಂತ್ರಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆವೆ. ಭಾವನಾತ್ಮಕ ಸಂಬಂಧಗಳ ಪರಿಚಯವೇ ಇಲ್ಲದಾಗಿದೆ. ಸಣ್ಣ ಕುಟುಂಬಗಳಲ್ಲೂ ಸಹ ಅವಿನಾಭಾವ ಭಾವನಾತ್ಮಕ ಸಂಬಂಧಗಳು ದೂರವಾಗುತ್ತಿವೆ. ವ್ಯಕ್ತಿ ವ್ಯಕ್ತಿಗಳ ನಡುವೆ ಸಂಬಂಧಗಳು ಮುರಿದು ಬೀಳಲು ಪ್ರಮುಖ ಕಾರಣವೇನೆಂದರೆ ವಿಚಾರಗಳೊಂದಿಗಿನ ಭಿನ್ನಾಭಿಪ್ರಾಯ. ಪ್ರತಿ ವ್ಯಕ್ತಿಯೂ ತನ್ನದೇ ಸರಿ ಎಂದು ರುಜುವಾತುಗೊಳಿಸಲು ವಾದಕ್ಕಿಳಿಯುತ್ತಾನೆ. ಈ ವಾದಗಳೇ ಮನುಷ್ಯ ಸಂಬಂಧಗಳಿಗೆ ಮಾರಕವಾಗುತ್ತವೆ. ಮನುಷ್ಯ ಸಂಬಂಧಗಳ ದೃಷ್ಟಿಯಿಂದ ನೋಡಿದಾಗ ವಾದ ಮಾಡಿ ಗೆಲ್ಲುವುದು ಗೆಲುವಲ್ಲ. ಬದಲಿಗೆ ವಾದಗಳು ನಡೆಯದಂತೆ ತಡೆಹಿಡಿಯುವುದೇ ನಿಜವಾದ ಗೆಲುವು.
ಸಹಜೀವಿಗಳೊಂದಿಗೆ ಪ್ರಿಯವಾದ ಮಾತು ಹಾಗೂ ಕೆಲಸ ಕಾರ್ಯಗಳಲ್ಲಿ ಸಹಾಯ ಹಸ್ತ ನೀಡುವುದು, ನೋವಿನಲ್ಲಿ ಸಹಾನುಭೂತಿ ತೋರುವುದು ಇವು ಸಹಜೀವಿಗಳಲ್ಲಿ ಸಂತಸ ಸಮಾಧಾನ ತರುತ್ತವೆ. ವ್ಯಕ್ತಿಗಳನ್ನು ಕುರಿತು ನಮ್ಮಲ್ಲಿರುವ ಪ್ರೀತಿ, ಮೆಚ್ಚುಗೆ ಕಾಳಜಿಗಳನ್ನು ಅಭಿವ್ಯಕ್ತಿಸುವುದನ್ನು ಕಲಿಯಬೇಕು. ಗುಣಗಳನ್ನು ಗುರುತಿಸುವ ಬದಲು ಸದಾ ಕಣ್ಣಿಗೆ ಪಟ್ಟಿಕೊಂಡವರಂತೆ ದೋಷಗಳನ್ನೆ ಹೇಳುತ್ತಾ ಹೋಗುತ್ತೆವೆ. ಆಗ ಗಟ್ಟಿಯಾಗಬೇಕಿದ್ದ ಸಂಬಂಧಗಳು ಮುರಿದು ಬೀಳುತ್ತವೆ. ಇತರರ ಸ್ಥಾನದಲ್ಲಿ ನಿಂತು ಆಲೋಚಿಸಿ ನೋಡಿದಾಗ, ಮಾತ್ರ ಅವರ ನಡೆ-ನುಡಿಗಳನ್ನು ಅರ್ಥೈಸಿಕೊಳ್ಳಲು ಅಭ್ಯಾಸ ಮಾಡಿಕೊಂಡಾಗ ಮಾತ್ರ ಬಹುಪಾಲು ಭಿನ್ನಾಭಿಪ್ರಾಯಗಳು ಮಾಯವಾಗಿ ಮಾನವ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಪ್ರೀತಿ, ಗೌರವ, ಕಾಳಜಿಗಳೆಂಬ ಅಂಟಿನ್ನು ಹಾಕಿ ಮಾನವೀಯ ಸಂಬಂಧಗಳನ್ನು ಗಂಬಂಧಗಳನ್ನಾಗಿ ಮಾಡೋಣ. ಸಂಬಂಧಗಳು ಬೇಲಿಯಾಗದೇ ಸೇತುವೆಯಾಗಲಿ.
ಆರ್.ಬಿ.ಗುರುಬಸವರಾಜ ಹೊಳಗುಂದಿ


July 20, 2018

ತೆರೆದ ಪುಸ್ತಕ ಪರೀಕ್ಷೆ Open book Exam

ದಿನಾಂಕ 20-07-2018ರ ಕನ್ನಡಪ್ರಭದ ಸಂಪಾದಕೀಯ ಪುಟದಲ್ಲಿ ಪ್ರಕಟವಾದ ನನ್ನ ಬರಹ.


ಬದಲಾಗಬೇಕಾದದು ಕೇವಲ ಪರೀಕ್ಷಾ ಪದ್ದತಿಯಲ್ಲ!
ಕಲಿಕೆ ಕೇವಲ ಅಂಕ ಗಳಿಕೆಯ ಸಾಧನವಲ್ಲ. ಕಲಿಕೆ ಬದುಕಿನ ಭಾಗ. ಕಲಿಕೆ ಇಲ್ಲದ ದಿನವಿಲ್ಲ ಎಂದೇ ಹೇಳಬಹುದು. ಪ್ರತಿಯೊಬ್ಬರೂ ಪ್ರತಿದಿನ ಒಂದಲ್ಲ ಒಂದು ವಿಷಯವನ್ನು ಕಲಿಯುತ್ತಲೇ ಇರುತ್ತಾರೆ. ಆದರೆ ಶಾಲಾ ಹೊರಗಿನ ಕಲಿಕೆಗೆ ಅಂಕಗಳ ಹಣೆಪಟ್ಟಿ ಇರುವುದಿಲ್ಲ. ಅದು ಬದುಕಿನ ಭಾಗವಾಗಿರುತ್ತದೆ. ರಾಜ್ಯದ ಶಿಕ್ಷಣ ಸಚಿವರು ಇತ್ತಿÃಚಿಗೆ ತೆರೆದ ಪುಸ್ತಕ ಪರೀಕ್ಷೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ತೆರೆದ ಪುಸ್ತಕ ಪರೀಕ್ಷೆಯ ಕಲ್ಪನೆ ಹೊಸದೇನಲ್ಲ. ರಾಜ್ಯದಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ(ಸಿ.ಸಿ.ಇ) ಜಾರಿಗೆ ಬಂದಾಗಿನಿಂದಲೂ ತೆರೆದ ಪುಸ್ತಕ ಪರೀಕ್ಷೆಯ ಬಗ್ಗೆ ಪ್ರಯೋಗಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಸಿ.ಸಿ.ಇ.ಯಲ್ಲ್ಲಿ ತೆರೆದ ಪುಸ್ತಕ ಪರೀಕ್ಷೆ ಇದೆ. ಆದರೆ ಕಡ್ಡಾಯವಾಗಿಲ್ಲ. ಅವರವರ ಅನುಕೂಲತೆಗಳನ್ನು ಆಧರಿಸಿ ನೆಡೆಸಬಹುದಾಗಿತ್ತು. ಈಗ ಇದನ್ನು ಬೋರ್ಡ್ ಪರೀಕ್ಷೆಗಳಿಗೆ ಅಳವಡಿಸುವ ಚಿಂತನೆಗಳು ನಡೆಯುತ್ತಿವೆ.
        ತೆರೆದ ಪುಸ್ತಕ ಪರೀಕ್ಷೆಯ ಮೊದಲ ಪ್ರಯೋಜನವೆಂದರೆ ಬೋಧನಾ ಕಾರ್ಯದ ಸ್ವರೂಪವನ್ನು ಅರ್ಥೈಸಿಕೊಳ್ಳುವುದಾಗಿದೆ. ಬೋಧನೆಯ ಪ್ರಮುಖ ಗುರಿ ಜ್ಞಾನಪ್ರಸಾರ ಮಾಡುವುದಾಗಿದೆ. ಪಠ್ಯದಲ್ಲಿನ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸುವ ಮೂಲಕ ಜ್ಞಾನಪ್ರಸಾರ ಮಾಡುವುದೇ ಬೋಧನೆಯಾಗಿದೆ. ಹೀಗೆ ಪ್ರಸಾರ ಮಾಡಿದ ಮಾಹಿತಿಯನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವುದು, ಉಳಿಸಿಕೊಳ್ಳುವುದು ಮತ್ತು ಅಂತಿಮವಾಗಿ ಪರೀಕ್ಷೆಯಲ್ಲಿ ಅದನ್ನು ಪ್ರಸ್ತುತಪಡಿಸುವುದೇ ಕಲಿಕೆ ಎನ್ನುವಂತಾಗಿದೆ. 
ಈಗಿನ ಪಠ್ಯಪುಸ್ತಕಗಳು ಮತ್ತು ಬೋಧನಾ ಪದ್ದತಿ ಈಗಿರುವ ಸಾಂಪ್ರಾದಾಯಿಕ ಪರೀಕ್ಷಾ ಪದ್ದತಿಗೆ ಪೂರಕವಾಗಿಯೇ ಇದೆ. ಮುಖ್ಯಾಂಶಗಳನ್ನು ಬರೆಸುವುದು, ಉಕ್ತಲೇಖನ, ನೋಟ್ಸ್ ಬರೆಹ, ಇತ್ಯಾದಿಗಳೆಲ್ಲವೂ ಅಂಕಗಳ ಆಧಾರಿತ ಸಾಂಪ್ರದಾಯಿಕ ಪರೀಕ್ಷೆಗೆ ಮಕ್ಕಳನ್ನು ಸಿದ್ದಪಡಿಸುವ ನಿಟ್ಟಿನಲ್ಲಿಯೇ ನಡೆಯುತ್ತಿವೆ.
ತೆರೆದ ಪುಸ್ತಕ ಪರೀಕ್ಷಾ ಪದ್ದತಿಯನ್ನು ಜಾರಿಗೆ ತರುವ ಮೊದಲು ಪಠ್ಯವಸ್ತು, ಪಠ್ಯಪುಸ್ತಕ ಮತ್ತು ಬೋಧನಾ ಪದ್ದತಿಗಳನ್ನು ಬದಲಾಯಿಸಲೇಬೇಕು. ತರಗತಿಯಲ್ಲಿನ ಬೋಧನಾ ಸ್ವರೂಪ ಈಗಿರುವುದಕ್ಕಿಂತ ಭಿನ್ನಾವಾಗಿರಲೇಬೇಕು. ಏಕೆಂದರೆ ವಿದ್ಯಾರ್ಥಿಗಳು ತೆರೆದ ಪುಸ್ತಕ ಪರೀಕ್ಷೆಯನ್ನು ಎದುರಿಸಬೇಕಾದರೆ ಸಂಪೂರ್ಣವಾಗಿ ಎಲ್ಲಾ ಮಕ್ಕಳಿಗೂ ಕನಿಷ್ಟ ಓದು ಮತ್ತು ಬರಹದ ಬಗ್ಗೆ ಖಾತ್ರಿಯಿರಲೇಬೇಕು. ಕನಿಷ್ಟ ಓದು ಮತ್ತು ಬರಹದ ಬಗ್ಗೆ ಖಾತ್ರಿ ಇಲ್ಲದಿದ್ದರೆ ತೆರೆದ ಪುಸ್ತಕ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗುವುದೇ ಇಲ್ಲ. 
       ಇದಕ್ಕೆ ಶಿಕ್ಷಕರ ಮನೋಸ್ಥಿತಿಯೂ ಬದಲಾಗಬೇಕಿದೆ. ಯಾವುದೇ ಹೊಸ ಪದ್ದತಿ ಬಂದಾಗಲೂ ಅದನ್ನು ಜಾರಿಗೊಳಿಸುವಲ್ಲಿ ಶಿಕ್ಷಕರ ಶ್ರಮ ಹಾಗೂ ಅಭಿವೃದ್ದಿಪರ ಮನೋಸ್ಥಿತಿ ಅಗತ್ಯವಾಗಿದೆ. ಸ್ಥಳೀಯ ಸಂಪನ್ಮೂಲಗಳ ಸದ್ಭಳಕೆ ತೀರಾ ಅಗತ್ಯ ಎನಿಸುತ್ತದೆ. ಮಕ್ಕಳನ್ನೆÃ ಸಂಪೂರ್ಣವಾಗಿ ಕಲಿಕೆಯಲ್ಲಿ ತೊಡಗಿಸಬೇಕಾಗುತ್ತದೆ. ಉದಾಹರಣೆಗೆ ಶೌಚಾಲಯಗಳ ಸದ್ಭಳಕೆ ಬಗ್ಗೆ ಎಷ್ಟೆÃಹೊತ್ತು ತರಗತಿಯಲ್ಲಿ ಪಾಠ ಬೋಧಿಸಿದರೂ ಅದು ವ್ಯರ್ಥ. ಅದೇ ಕಲಿಕಾಂಶವನ್ನು ಮಕ್ಕಳಿಗೆ ಹೇಳಿ ಅವರ ಗ್ರಾಮ/ವಾಸಸ್ಥಳದಲ್ಲಿನ ಶೌಚಾಲಯಗಳ ಸ್ಥಿತಿಗತಿ ಅರಿಯುವ ಹಾಗೂ ಉತ್ತಮವಾಗಿ ನಿರ್ವಹಣೆ ಮಾಡುವ ಕುಟುಂಬಗಳ ಮಾಹಿತಿ ಸಂಗ್ರಹಿಸಿ ಅದನ್ನು ಮಕ್ಕಳೇ ಪ್ರಸ್ತುಪಡಿಸವಂತಾದರೆ ಆ ಕಲಿಕೆ ಯಶಸ್ವಿÃ ಮತ್ತು ಶಾಶ್ವತ ಕಲಿಕೆಯಾಗುತ್ತದೆ. ಅದೇ ರೀತಿ ನೀರಿನ ಸಂರಕ್ಷಣೆಗೆ ಬಗ್ಗೆ ತರಗತಿಯಲ್ಲಿ ಪಾಠ ಹೇಳುವ ಬದಲು ವಾಸಸ್ಥಳದಲ್ಲಿನ ನೀರಿನ ಸ್ಥಿತಿಗತಿ ಹಾಗೂ ಅದನ್ನು ಸಂರಕ್ಷಿಸುವ ವಿಧಾನಗಳ ಬಗ್ಗೆ ಮಕ್ಕಳಲ್ಲಿಯೇ ಚರ್ಚೆ ಹಾಗೂ ಸಂವಾದ ಏರ್ಪಡಿಸಬಹುದು. ಸಾಧ್ಯವಾದರೆ ಸ್ಥಳೀಯ ಸರಕಾರದ ಪ್ರತಿನಿಧಿಗಳನ್ನೂ ಈ ಚರ್ಚೆಯಲ್ಲಿ ತೊಡಗುವಂತೆ ಮಾಡಬೇಕು. ಘನ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್‌ನ ತೊಂದರೆಗಳು, ಜನಸಂಖ್ಯಾ ಸ್ಪೊÃಟ, ಸ್ಥಳೀಯ ಸರಕಾರಗಳ ಕಾರ್ಯನಿರ್ವಹಣೆ, ಇತ್ಯಾದಿ ಕಲಿಕಾಂಶಗಳನ್ನು ಸಂಯೋಜಿತ ಕಲಿಕಾ ವಿಧಾನದ ಮೂಲಕ ಕಲಿಸುವ ವ್ಯವಸ್ಥೆಯಾದರೆ ತೆರೆದ ಪುಸ್ತಕ ಪರೀಕ್ಷೆಗೆ ಒಂದು ಗಟ್ಟಿಯಾದ ನೆಲೆಗಟ್ಟು ದೊರೆಯುತ್ತದೆ. ಇಂತಹ ಕಲಿಕೆಗೆ ಹೆಚ್ಚು ಸಮಯ ಬೇಕಾಗುತ್ತದೆ. ಈ ಕಾರಣದಿಂದ ಈಗಿರುವ ಪಠ್ಯವಸ್ತು ಮತ್ತು ಪಠ್ಯಪುಸ್ತಕಗಳ ಹೊರೆಯನ್ನು ಕಡಿಮೆ ಮಾಡುವ ಅಗತ್ಯವಿದೆ. 
      ಇದುವರೆಗೂ ಪಠ್ಯೆÃತರ ಎಂದು ಗುರುತಿಸಿಕೊಂಡಿದ್ದ ಚರ್ಚೆ, ಸಂವಾದ ಗೋಷ್ಟಿಗಳು ತರಗತಿ ಕಲಿಕೆಯ ಭಾಗವಾಗಬೇಕು.  ಆಗ ಮಾತ್ರ ಮಕ್ಕಳಲ್ಲಿ ವಿವರಣಾತ್ಮಕ ಮತ್ತು ವಿಮರ್ಶಾತ್ಮಕ ಸಾಮರ್ಥ್ಯ ಬೆಳೆಯುತ್ತದೆ. ತರಗತಿಯಲ್ಲಿ ಚಿಕ್ಕ ಚಿಕ್ಕ ಗುಂಪಿನಲ್ಲಿ ಚರ್ಚೆಗಳು ನಡೆಯಬೇಕೆಂಬ ಆಶಯವೇನೋ ಇದೆ. ಆದರೆ ಇದಕ್ಕೆ ಪೂರಕವಾದ ವಾತಾವರಣ ಇಲ್ಲ. ಪಠ್ಯವಸ್ತುವನ್ನು ಬೇಗನೇ ಪೂರ್ಣಗೊಳಿಸಿ, ಪುನರಾವರ್ತನೆ ಮಾಡಿ ಮಕ್ಕಳನ್ನು ಪರೀಕ್ಷೆಗೆ ಅಣಿಸುವುದೇ ಶಿಕ್ಷಕರ ಕಾರ್ಯ ಎನ್ನುವಂತಾಗಿದೆ. ಪಠ್ಯದ ಆಚೆ ಏನೇನಿದೆ ಎಂದು ಶಿಕ್ಷಕರೂ ಹಾಗೂ ಮಕ್ಕಳು ನೋಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪಾಲಕರೂ ಹೊರತಲ್ಲ. ನಮ್ಮ ಮಗುವಿಗೆ ಪಾಠ ಓದಲು ಬರುವುದಿಲ್ಲ, ಲೆಕ್ಕ ಮಾಡಲು ಬರುವುದಿಲ್ಲ ಎಂದು ದೂರುತ್ತಾರೆಯೇ ವಿನಹ, ಬೋದನಾ ಪದ್ದತಿ ಬಗ್ಗೆ, ಪಠ್ಯವಸ್ತುವಿನ ಬಗ್ಗೆ ಯಾರೂ ಮಾತನಾಡುವುದಿಲ್ಲ. ಏಕೆಂದರೆ ಅದನ್ನು ರೂಪಿಸುವ ಜವಾಬ್ದಾರಿ ನಮ್ಮದಲ್ಲ ಎಂದು ಪಾಲಕರು ಭಾವಿಸಿದ್ದಾರೆ. 
             ಚಟುವಟಿಕೆಯುಕ್ತ ಬೋಧನೆ ಅಗತ್ಯ ಎಂದು ಹೇಳುತ್ತೆÃವೆ. ಆದರೆ ತರಗತಿ ವಾತಾವರಣ ಇದಕ್ಕೆ ಪೂರಕವಾಗಿಲ್ಲ. ಕೆಲ ಶಾಲೆಗಳ ತರಗತಿಗಳಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳಿದ್ದಾಗ ಚಟುವಟಿಕೆಗೆ ಅವಕಾಶವೇ ಇಲ್ಲದಂತಾಗುತ್ತದೆ. ಇನ್ನು ಇವೆಲ್ಲವನ್ನೂ ಮೀರಿ ಚಟುವಟಿಕೆಯುಕ್ತ ಬೋಧನೆಯಲ್ಲಿ ತೊಡಗಿದ ಕೆಲ ಶಿಕ್ಷಕರನ್ನು ನೋಡುವ ದೃಷ್ಟಿಕೋನವೇ ವಿಭಿನ್ನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತೆರೆದ ಪುಸ್ತಕ ಪರೀಕ್ಷೆಯ ಸಾಧಕಗಳ ಬಗ್ಗೆ ಗಂಭೀರವಾದ ಚರ್ಚೆಗಳಾಗಬೇಕಿದೆ. ಈಗಿರುವ ಬೋಧನೆ-ಕಲಿಕೆಗಿಂತ ವಿಭಿನ್ನವಾದ ವಾತಾವರಣ ನಿರ್ಮಾಣವಾಗಬೇಕಿದೆ. ಮಕ್ಕಳಲ್ಲಿ ಚಿಂತನೆ ಮತ್ತು ಆಲೋಚನೆಗಳನ್ನು ಹುಟ್ಟು ಹಾಕುವ ಹಾಗೂ ಮತ್ತು ಅವುಗಳನ್ನು ಉತ್ತೆÃಜಿಸುವ ರೀತಿಯಲ್ಲಿ ಬೋಧನೆ-ಕಲಿಕೆಯ ವಿಧಾನಗಳು ಬದಲಾಗಬೇಕಿದೆ. ತರಗತಿಯ ಭೌತಿಕ ಸ್ಥಿತಿಗತಿ ಬದಲಾಗಬೇಕಿದೆ. ಚಿಕ್ಕ ಚಿಕ್ಕ ಗುಂಪುಗಳಲ್ಲಿ ಚರ್ಚಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಆಸನಗಳ ವ್ಯವಸ್ಥೆಯಾಗಬೇಕಿದೆ. ಈ ಎಲ್ಲಾ ಬದಲಾವಣೆಗಳು ಬಂದ ನಂತರ ತೆರೆದ ಪುಸ್ತಕ ಪರೀಕ್ಷೆ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲವೇ?
  ಆರ್.ಬಿ.ಗುರುಬಸವರಾಜ 


July 2, 2018

ಟೀಕೆ ಬಿಡಿ, ಮಾರ್ಗದರ್ಶನ ನೀಡಿ stop Teasing Give guidence

ದಿನಾಂಕ 2-7-18ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ 

ಟೀಕೆ ಬಿಡಿ, ಮಾರ್ಗದರ್ಶನ ನೀಡಿ.


ರಜೆ ಮುಗಿಸಿಕೊಂಡು ಮರಳಿ ಶಾಲೆಗೆ ಬಂದ ಮಕ್ಕಳಿಗೆ ‘ನಿಮ್ಮ ಕುಟುಂಬದಲ್ಲಿ ನೀವು ಎದುರಿಸುವ ಸಾಮಾನ್ಯ ಸಮಸ್ಯೆ ಏನು?’ ಎಂಬ ಪ್ರಶ್ನೆಯನ್ನು ಮಕ್ಕಳಿಗೆ ಕೇಳಿದೆ. ಬಹುತೇಕ ಮಕ್ಕಳ ಉತ್ತರ ಹೀಗಿತ್ತು. “ಹೆತ್ತವರು ಪ್ರತೀ ಕೆಲಸದಲ್ಲೂ ತಪ್ಪು ಹುಡುಕುತ್ತಾರೆ. ಪದೇ ಪದೇ ಬಯ್ಯುತ್ತಾರೆ, ಹಂಗಿಸುತ್ತಾರೆ”. ಇದನ್ನು ಕೇಳಿ ಬೆಚ್ಚಿಬೀಳುವಂತಾಯ್ತು. ಈ ಬಗ್ಗೆ ಯೋಚಿಸುವಂತಾಯ್ತು. ಹಾಗಾದರೆ ನಮ್ಮ ಪಾಲಕರು ಮಕ್ಕಳನ್ನು ಬೆಳೆಸುವಲ್ಲಿ ಎಡವುತ್ತಿದ್ದಾರೆಯೇ? ಅಥವಾ ಮಕ್ಕಳ ಮೇಲಿನ ಅತಿಯಾದ ನಿರೀಕ್ಷೆಗಳಿಂದ ಹೀಗೆಲ್ಲಾ ಆಗುತ್ತಿದೆಯಾ? ಎಂಬ ಅನೇಕ ಪ್ರಶ್ನೆಗಳು ಕಾಡತೊಡಗಿದವು. 
ಪ್ರತೀ ಮಗುವಿನ ಬೆಳವಣಿಗೆಯಲ್ಲಿ ಪಾಲಕರ ಕಾಳಜಿ ಬಹುಮುಖ್ಯ. ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ಕೆಲವು ಅತಿಯಾದ ಕಾಳಜಿಯು ಮಕ್ಕಳ ಬೆಳವಣಿಗೆಯ ದುಷ್ಪರಿಣಾಮ ಬೀರುತ್ತದೆ. ನಮ್ಮ ಮಕ್ಕಳು ಚೆನ್ನಾಗಿರಬೇಕು, ಇತರರಿಗಿಂತ ಚೆನ್ನಾಗಿ ಓದಬೇಕು, ಹೆಚ್ಚು ಬುದ್ದಿವಂತರು ಎನಿಸಿಕೊಳ್ಳಬೇಕು ಎಂಬ ಅತಿಯಾದ ನಿರೀಕ್ಷೆಗಳನ್ನು ಪಾಲಕರು ಇಟ್ಟುಕೊಳ್ಳುವುದು ಸಹಜ. ತಮ್ಮ ನಿರೀಕ್ಷೆಗಳನ್ನು ಮಗು ಹುಸಿ ಮಾಡುವ ಸಂದರ್ಭಗಳು ಎದುರಾದಾಗಲೆಲ್ಲ ಪಾಲಕರು ಮಗುವನ್ನು ಟೀಕಿಸತೊಡಗುತ್ತಾರೆ. ಟೀಕೆ ಮಕ್ಕಳನ್ನು ಸರಿದಾರಿಯಲ್ಲಿ ಬೆಳೆಸುವ ಏಕೈಕ ಅಸ್ತçವೆಂದು ಬಹುತೇಕ ಪಾಲಕರು ಭಾವಿಸಿದ್ದಾರೆ. ಆದರೆ ಟೀಕೆಯಿಂದ ಮಕ್ಕಳ ಮನಸ್ಸಿನ ಮೇಲಾಗುವ ಕೆಟ್ಟ ಪರಿಣಾಮಗಳನ್ನು ಪಾಲಕರು ಅರ್ಥಮಾಡಿಕೊಳ್ಳಬೇಕಿದೆ. 
ಟೀಕೆಯಿಂದ ಮಕ್ಕಳ ಮೇಲಾಗುವ ಪರಿಣಾಮಗಳು:
ಟೀಕೆಯು ಮುಖ್ಯವಾಗಿ ಬಾಂಧವ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳನ್ನು ಟೀಕಿಸಿದಾಗ ಅವರು ನಿಷ್ಪಕ್ಷಪಾತವೆಂದು ಭಾವಿಸುವ ಹೆತ್ತವರ ಪ್ರಿತಿಯನ್ನೆ ಪ್ರಶ್ನಿಸಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅವರು ಮಕ್ಕಳಾಗಿದ್ದಾಗ ಪಾಲಕರ ಪ್ರಿತಿಯನ್ನು ಕಳೆದುಕೊಂಡಿದ್ದರಿಂದ ವಯಸ್ಕರಾದಾಗ ಬೇರೆಡೆ ಪ್ರಿತಿಯನ್ನು ಹುಡುಕಬಹುದು ಅಥವಾ ಮಧ್ಯವ್ಯಸನಿ/ಲೈಂಗಿಕ ವ್ಯಸನಿಗಳಾಗಬಹುದು. 
ಟೀಕೆಯಿಂದ ಮಕ್ಕಳಲ್ಲಿ ನಾಚಿಕೆ ಸ್ವಭಾವ ಬೆಳೆಯುತ್ತದೆ. ಪದೇ ಪದೇ ಟೀಕೆಗೆ ಒಳಗಾಗುವುದರಿಂದ ತಾನು ಮಾಡುವ ಕೆಲಸದಲ್ಲಿ ಏನೋ ತೊಂದರೆಯಾಗುತ್ತದೆ ಎಂದು ನಂಬುತ್ತಾರೆ. ಅವಮಾನದ ಭೀತಿಯಿಂದ ಸಾಮಾಜಿಕವಾಗಿ ಹಿಂದುಳಿಯುತ್ತಾರೆ. ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಹಿಂದುಳಿಯುತ್ತಾರೆ. 
ಸೋಮಾರಿ, ಮೂಕ, ಸ್ಟುಪಿಡ್, ಯೂಸ್‌ಲೆಸ್ ಇತ್ಯಾದಿ ನಕಾರಾತ್ಮಕ ಪದಗಳನ್ನು ಪಾಲಕರು ಪದೇ ಪದೇ ಬಳಸುವುದುರಿಂದ ಅದೇ ಸತ್ಯವೆಂದು ನಂಬುತ್ತಾರೆ ಮತ್ತು ಅದನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಾರೆ. ಭವಿಷ್ಯದಲ್ಲಿ ಹೊಸ ಮಾರ್ಗದ ಶೋಧಕ್ಕೆ ಹಿಂಜರಿಯುತ್ತಾರೆ.
ಬಹುತೇಕ ಪಾಲಕರು ಮಗುವನ್ನು ಟೀಕಿಸುವಾಗ ಅವರು ಆಡುವ ಪದದ ಬಗ್ಗೆ ಅಷ್ಟೆನೂ ಗಮನಕೊಡುವುದಿಲ್ಲ. ಆದರೆ ಮಗುವ ಪ್ರತೀ ಪದದ ಬಗ್ಗೆಯೂ ಯೋಚಿಸತೊಡಗುತ್ತದೆ. ಪಾಲಕರು ಬಳಸುವ ನಕರಾತ್ಮಕ ಪದ ಮಗುವಿನ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರತೊಡಗುತ್ತದೆ. ತಾನು ಇರುವುದು ಹೀಗೆಯೇ ಎಂದು ನಂಬತೊಡಗುತ್ತದೆ. ಹಾಗಾಗಿ ಮಗು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತದೆ.
ಮಗುವಿನ ಮನಸ್ಸಿನ ಮೇಲಾಗುವ ಭಾವನಾತ್ಮಕ ಗಾಯಗಳು ಮಗುವಿನ ಸಂವೇದನಾಶೀಲತೆಯನ್ನು ಹಾಳು ಮಾಡುತ್ತವೆ. ಎಲ್ಲರ ಗಮನವು ಮಗುವಿನ ತಪ್ಪುಗಳತ್ತಲೇ ಕೇಂದ್ರಿಕೃತವಾಗುತ್ತದೆ. ಆಗ ಮಗು ಮಾಡುವ ಉತ್ತಮ ಕೆಲಸಗಳು ಗಮನಕ್ಕೆ ಬಾರದೇ ಹೋಗುತ್ತವೆ. 
ಕಠಿಣವಾದ ಟೀಕೆಯು ಮಗುವಿನ ಸ್ವಾಭಿಮಾನದ ಅಡಿಪಾಯವನ್ನು ಅಲುಗಾಡಿಸುತ್ತದೆ. ಇದರಿಂದಾಗಿ ಅವರು ಕಳಪೆ ಗುಣಮಟ್ಟವನ್ನು ಪ್ರದರ್ಶಿಸುತ್ತಾರೆ. ಟೀಕೆಯು ಮಗುವನ್ನು ಒಂದು ಉತ್ಪಾದಕ ವ್ಯಕ್ತಿಯಾಗಿ ರೂಪಿಸುವುದಿಲ್ಲ. ಬದಲಿಗೆ ಅವನನ್ನು ಕೂಪ ಮಂಡೂಕನನ್ನಾಗಿಸುತ್ತದೆ ಅಥವಾ ಹೆದರುಪುಕಲನನ್ನಾಗಿಸುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ.

ಟೀಕೆ ಬಿಟ್ಹಾಕಿ: ಮಾರ್ಗದರ್ಶನ ನೀಡಿ

ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಪೋಷಕರ ಪಾತ್ರ ನಿರ್ಣಾಯಕವಾದದ್ದು. ನಮ್ಮ ಟೀಕೆ ಅಥವಾ ನಡವಳಿಕೆಗಳು ಹೆಚ್ಚಾಗಿ ಮಕ್ಕಳ ಜೀವನವನ್ನು ಪ್ರಭಾವಿಸುತ್ತವೆ. ಹಾಗಾಗಿ ಟೀಕೆಯು ಕೇವಲ ಮಗುವಿನ ಮನ ನೋಯಿಸುವ ಸಂಗತಿಯಾಗಬಾರದು. ಬದಲಾಗಿ ಟೀಕೆಯು ರಚನಾತ್ಮಕವಾಗಬೇಕಾದುದು ಇಂದಿನ ಅಗತ್ಯವಾಗಿದೆ. ಮಕ್ಕಳು ತಪ್ಪು ಮಾಡುವುದು ಸಹಜ. ತಪ್ಪು ಮಾಡಿದಾಗ ಅಥವಾ ಅಪಾಯಕಾರಿ ಕೆಲಸಗಳನ್ನು ಮಾಡಿದಾಗ ನೇರವಾಗಿ ದೂಷಿಸುತ್ತೆವೆ, ಬೆದರಿಕೆ ಹಾಕುತ್ತೆವೆ ಅಥವಾ ಏರುಧ್ವನಿಯಲ್ಲಿ ಮಗುವಿಗೆ ಗದರಿಸುತ್ತೆವೆ. ಅದರ ಬದಲಾಗಿ ಪ್ರಿತಿಯ ಮಾತುಗಳಿಂದ ಮಗು ಮಾಡಿದ ತಪ್ಪಿನಿಂದ ಆಗುವ ತೊಂದರೆಗಳನ್ನು ಮನವರಿಕೆ ಮಾಡಿಕೊಟ್ಟು ಅದರಿಂದ ದೂರ ಇರುವಂತೆ ರಚನಾತ್ಮಕ ಮಾರ್ಗದರ್ಶನದ ಮೂಲಕ ತಪ್ಪನ್ನು ಸರಿಪಡಿಸುವ ಪ್ರಯತ್ನ ಮಾಡಬೇಕಿದೆ. ಉದಾಹರಣೆಗೆ ಮಗು ಟಿ.ವಿ. ರಿಮೋಟನ್ನು ಬೀಳಿಸಿದ ಕೂಡಲೇ ಬಾಯಿಗೆ ಬಂದಂತೆ ಬಯ್ಯುತ್ತೆವೆ. ಬದಲಾಗಿ ಅದನ್ನು ಬೀಳಿಸಿದರೆ ಆಗುವ ತೊಂದರೆಗಳನ್ನು ತಿಳಿಸಿ ಇನ್ನೊಮ್ಮೆ ಬೀಳಿಸದಂತೆ ಮಾರ್ಗದರ್ಶನ ನೀಡುವುದು ಅಗತ್ಯ. ಸ್ನೆಹಭಾವದ ರೀತಿಯಲ್ಲಿ ಮಗುವಿಗೆ ಮಾರ್ಗದರ್ಶನ ನೀಡಬೇಕು. 
ಮಕ್ಕಳನ್ನು ಟೀಕಿಸುವುದು ಸುಲಭ. ಆದರೆ ಮಾರ್ಗದರ್ಶನ ಮಾಡುವುದು ತುಂಬಾ ಕಠಿಣ. ಮಾರ್ಗದರ್ಶನ ಒಂದು ರೀತಿಯ ತಪ್ಪಸ್ಸು ಇದ್ದಂತೆ. ಪಾಲಕರು ಕೆಲವು ನಡವಳಿಕೆಗಳನ್ನು ಅಥವಾ ತಮ್ಮ ಪೋಷಣಾ ಶೈಲಿಯನ್ನು ಬದಲಾವಣೆ ಮಾಡುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಕೆಳಗಿನ ಕೆಲವು ಅಂಶಗಳು ಉಪಯೋಗವಾಗುತ್ತವೆ.
ಮೇಲೆ ತಿಳಿಸಿದಂತೆ ಮಕ್ಕಳು ತಪ್ಪು ಮಾಡುವುದು ಸಹಜ. ಸಹಜ ತಪ್ಪುಗಳ ಬಗ್ಗೆ ಧೀರ್ಘವಾಗಿ ಆಲೋಚಿಸುವ ಅಗತ್ಯವಿಲ್ಲ. ಆದರೆ ತಪ್ಪುಗಳ ಪುನರಾವರ್ತನೆಯಾದರೆ ಪಾಲಕರು ಅದಕ್ಕೆ ಕಾರಣಗಳನ್ನು ಹುಡುಬೇಕು. ಮಗು ಬೇಕಂತಲೇ ಆ ತಪ್ಪು ಮಾಡುತ್ತಿದೆಯೋ ಅಥವಾ ತಿಳಿಯದೇ ತಪ್ಪು ಮಾಡುತ್ತಿದೆಯೋ ಎಂಬುದನ್ನು ಕಂಡುಕೊಳ್ಳಬೇಕು. ಮಗುವಿನ ಮನಸ್ಥಿತಿ ಮತ್ತು ವಯಸ್ಸಿಗೆ ಪೂರಕವಾದ ಮಾತುಗಳಿಂದ ಮಗುವನ್ನು ತಿದ್ದುವ ಪ್ರಯತ್ನ ಮಾಡಬೇಕು. 
ಕೆಲವು ಕಲಿಕಾ ವಿಷಯಗಳಲ್ಲಿ ಮಕ್ಕಳು ಹಿಂದೆ ಬೀಳುವುದು ಸಹಜ. ಇತರ ಮಕ್ಕಳೊಡನೆ ಮಕ್ಕಳನ್ನು ಹೋಲಿಸಿ ಹೀಯಾಳಿಸದೇ, ಮಗುವಿನ ಕಲಿಕಾ ಸಾಧನೆಯ ಸಮಸ್ಯೆಗಳನ್ನು ಗುರುತಿಸಿಕೊಳ್ಳಬೇಕು. ಉದಾಹರಣೆಗೆ ಎಲ್ಲಾ ವಿಷಯಗಳಲ್ಲಿ ಮುಂದೆ ಇರುವ ಮಗು ಗಣಿತದಲ್ಲಿ ಹಿಂದೆ ಇದ್ದರೆ ಮಗುವನ್ನು ನೇರವಾಗಿ ದೂಷಿಸದೇ ಪ್ರಿತಿಯ ಮಾತುಗಳಿಂದ “ನೀನು ಎಲ್ಲಾ ವಿಷಯಗಳಲ್ಲಿ ಚೆನ್ನಾಗಿದ್ದಿಯ. ಆದರೆ ಗಣಿತದಲ್ಲಿ ಮಾತ್ರ ಒಂಚೂರು ಹಿಂದೆ ಇರುವೆ. ಪರವಾಯಿಲ್ಲ. ಚಿಂತೆ ಮಾಡ್ಬೆಡ. ಚೆನ್ನಾಗಿ ಅಭ್ಯಾಸ ಮಾಡು. ಕಠಿಣ ಸಮಸ್ಯೆಗಳನ್ನು ಗುರುಗಳ ಬಳಿ ಕೇಳಿ ತಿಳಿದುಕೋ. ಮುಂದಿನ ಪರೀಕ್ಷೆಯಲ್ಲಿ ಖಂಡಿತವಾಗಿ ಉತ್ತಮ ಫಲಿತಾಂಶ ಸಾಧಿಸುವೆ ಎಂಬ ಭರವಸೆ ನನಗಿದೆ” ಎಂದು ನಲ್ನುಡಿಯಿಂದ ಮಗುವಿನ ತಲೆ ನೇವರಿಸಿ ಹೇಳಿ ನೋಡಿ. ಖಂಡಿತವಾಗಿ ಮಗುವಿನಲ್ಲಿ ಕಲಿಕಾ ಸುಧಾರಣೆ ಕಾಣುವಿರಿ.
ಮಗುವಿನೊಂದಿಗೆ ವ್ಯವಹರಿಸುವಾಗ ನೀವು ವಯಸ್ಕರಾಗಿಲ್ಲ, ಮಗುವಾಗಿದ್ದಿÃರಿ ಎಂಬುದನ್ನು ನೆನಪಿಡಿ. ಮಕ್ಕಳೂ ಸಹ ಭಾವನೆಗಳನ್ನು ಹೊಂದಿದ್ದಾರೆ. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಹ ಟೀಕೆಗಳನ್ನು ಕೇಳಲು ಯಾರೂ ಇಷ್ಟ ಪಡುವುದಿಲ್ಲ. ಮಗು ತಪ್ಪು ಮಾಡಿದಾಗ ಕೋಪಗೊಳ್ಳುವ ಮೊದಲು ಮಗುವನ್ನು ಮಾತನಾಡಿಸಲು ಪ್ರಯತ್ನಿಸಿ. ಮಗುವಿನೊಂದಿಗೆ ಮಾತನಾಡುವಾಗ ಧ್ವನಿ ತಾರಕ್ಕೆÃರದಿರಲಿ. ಸಮಯ ತೆಗೆದುಕೊಂಡು ಶಾಂತ ಚಿತ್ತದಿಂದ ಮಗುವಿಗೆ ಬುದ್ದಿ ಹೇಳಿ.
ಮಕ್ಕಳ ಬೆಳವಣಿಗೆಯ ಪ್ರಮುಖ ಅಂಶವೆಂದರೆ ತಪ್ಪುಗಳ ಪರಿಣಾಮಗಳನ್ನು ಮಕ್ಕಳಿಗೆ ತಿಳಿಸಬೇಕು. ಮಕ್ಕಳು ಮೊಬೈಲ್/ಟ್ಯಾಬ್ಲೆಟ್‌ಗಳನ್ನು ಬಳಸುವುದು ಸಹಜ. ಇದು ತಪ್ಪು ಎಂದು ಎಲ್ಲರಿಗೂ ಗೊತ್ತು. ಆದರೆ ಮಗುವಿಗೆ ಅದರಿಂದಾಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ಇಲ್ಲ. ಹೆಚ್ಚು ಹೊತ್ತು ಬರಿಗಣ್ಣಿನಿಂದ ಮೊಬೈಲ್/ಟ್ಯಾಬ್ಲೆಟ್ ಬಳಸುವುದರಿಂದ ಕಣ್ಣಿಗೆ ಮತ್ತು ನರಗಳ ಮೇಲಾಗುವ ಹಾನಿಯನ್ನು ಮಕ್ಕಳಿಗೆ ತಿಳಿಸಿ ಹೇಳಬೇಕು. ಒಂದು ವೇಳೆ ಅವರು ಅಂತಹ ವಸ್ತುಗಳನ್ನು ಬಳಸುವುದು ಅನಿವಾರ್ಯ ಎಂದಾದರೆ ಅದಕ್ಕೆ ಸುರಕ್ಷತೆಯ ತಂತ್ರಗಳನ್ನು ಅಳವಡಿಸುವುದು ಅನಿವಾರ್ಯ.
ನಿಮ್ಮ ಮುದ್ದಿನ ಮಕ್ಕಳನ್ನು ಟೀಕಿಸುವ ಮೊದಲು ಟೀಕೆಯ ಹಿಂದಿನ ಗುರಿ ಮತ್ತು ಉದ್ದೆಶಗಳು ಸ್ಪಷ್ಟವಾಗಿರಲಿ. ಟೀಕಿಸುವ ಭರಾಟೆಯಲ್ಲಿ ಮಕ್ಕಳು ನಿಮ್ಮ ಸಂದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ನಿಮ್ಮ ಮಗುವಿಗೆ ಶಿಕ್ಷಣ ಅಥವಾ ಶಿಕ್ಷೆ ನೀಡುವ ಮೊದಲು ಯೋಚಿಸಿ.
ಮಕ್ಕಳು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿ. ಮಗು ಶಾಲೆಯಲ್ಲಾಗಲೀ ಅಥವಾ ಮನೆಯಲ್ಲಾಗಲೀ ಅಸಹಜವಾಗಿ ತಪ್ಪನ್ನು ಮಾಡುತ್ತಿದೆಯೋ ಗಮನಿಸಿ. ರಚನಾತ್ಮಕ ಮಾರ್ಗದರ್ಶನದ ಅಂತಿಮ ಗುರಿ ಮಕ್ಕಳು ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಸೂಕ್ತ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಪ್ರೆÃರೇಪಿಸುವುದಾಗಿದೆ. ಹೀಗೆ ಮಾಡುವುದರಿಂದ ಭವಿಷ್ಯದಲ್ಲಿ ಮಕ್ಕಳು ತಮ್ಮ ಕಾರ್ಯಗಳ ಜವಾಬ್ದಾರಿಯನ್ನು ಕಲಿಯುತ್ತಾರೆ.
ಸಾಮಾನ್ಯವಾಗಿ ಮಕ್ಕಳು ತಡವಾಗಿ ಏಳುತ್ತಾರೆ. ಎದ್ದ ನಂತರ ಹಾಸಿಗೆ ತೆಗೆದಿಡಬೇಕೆಂದು ಎಷ್ಟೆ ಬಾರಿ ಹೇಳಿದರೂ ಕೇಳುವುದೇ ಇಲ್ಲ. ಅಂತಹ ಸಂದರ್ಭದಲ್ಲಿ ಟೀಕೆಯ ಬದಲಾಗಿ ಸಹಾಯ ಹಸ್ತ ಚಾಚಿ. “ಮಗು ಹಾಸಿಗೆ ತೆಗೆಯಲಿಲ್ಲವೇ? ಬಾ ನಿನಗೆ ಸಹಾಯ ಮಾಡುತ್ತೆÃನೆ” ಎಂದು ಸಹಾಯ ನೀಡಿ. ಒಂದೆರಡು ಬಾರಿ ಈ ಪ್ರಕ್ರಿಯೆ ಪುನರಾವರ್ತನೆಯಾದರೆ ಮಗು ಖಂಡಿತವಾಗಿ ತನ್ನ ಪಾಲಿನ ಜವಾಬ್ದಾರಿಯನ್ನು ಅರಿಯತೊಡಗುತ್ತದೆ. ಇದು ಕೇವಲ ಉದಾಹರಣೆ ಮಾತ್ರ. ಇಂತಹ ಅದೆಷ್ಟೊ ಕೆಲಸಗಳಲ್ಲಿ ಮಗುವಿಗೆ ಸಹಾಯ ಮಾಡುವ ಮೂಲಕ ಕೆಲಸದ ಜವಾಬ್ದಾರಿಯನ್ನು ಕಲಿಸಲು ಅವಕಾಶ ಇದೆ.
ವಿಪರ್ಯಾಸವೆಂದರೆ, ಮಗುವಿನಲ್ಲಿ ಶಿಸ್ತು ಬೆಳೆಸುವ ಭರಾಟೆಯಲ್ಲಿ ಕೇವಲ ತಪ್ಪುಗಳನ್ನು ಹುಡುತ್ತೆÃವೆಯೇ ಹೊರತು ಒಳ್ಳೆಯ ಕೆಲಸಗಳನ್ನಲ್ಲ. ಮಗು ಅನೇಕ ವೇಳೆ ಉತ್ತಮ ಕಾರ್ಯಗಳನ್ನು ಮಾಡುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ಗಮನಿಸಿದರೂ ಒಂದು ಪ್ರೆÃರಣಾತ್ಮಕ ಧನ್ಯವಾದವನ್ನು ಮಗುವಿಗೆ ಹೇಳುವುದಿಲ್ಲ. ಇದು ತಪ್ಪು. ಉತ್ತಮ ಕೆಲಸ ಮಾಡಿದಾಗ ಮಗುವನ್ನು ಪ್ರಶಂಸಿಸಬೇಕು. 

ಈ ಎಲ್ಲಾ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಪಾಲಕರಾದ ನಮಗೆ ತೊಂದರೆಯಾಗಬಹುದು. ಆದರೆ ಮಕ್ಕಳನ್ನು ಬೆಳೆಸಲು ಕೆಲ ಅಗತ್ಯ ತಂತ್ರಗಾರಿಕೆಗಳನ್ನು ಕಲಿಯುವುದು ಅನಿವಾರ್ಯ. ಸತತ ಅಭ್ಯಾಸದೊಂದಿಗೆ ಈ ತಂತ್ರಗಳನ್ನು ಪಾಲಿಸಲು ಪ್ರಯತ್ನಿಸಿದರೆ ಖಂಡಿತ ಯಶಸ್ಸು ಕಾಣಬಹುದು. ಆಗ ಕುಟುಂಬದ ಪ್ರತಿಯೊಬ್ಬರೂ ಸಂತೋಷವಾಗಿ ಇರುತ್ತಾರೆ. ಆ ಮೂಲಕ ಮಗು ದೇಶದ ನಗುವಾಗುತ್ತದೆ.

ಆರ್.ಬಿ.ಗುರುಬಸವರಾಜ