October 24, 2018

ಮೊಬೈಲ್ ಗೀಳು ಜೀವನ ಹಾಳು ನೋಮೋಫೋಬಿಯಾ/ Nomophobia

ದಿನಾಂಕ 17-10-2018ರ ವಿಜಯವಾಣಿಯಲ್ಲಿ  ನನ್ನ ಬರಹ.


ಮೊಬೈಲ್ ಗೀಳು   ಜೀವನ ಹಾಳು

ಪಿ.ಯು.ಸಿ ಓದಿ ಮನೆಯಲ್ಲಿರುವ ಇಪ್ಪತ್ಮೂರು ವರ್ಷದ ರಮೇಶ ಕಳೆದ ಒಂದು ವಾರದಿಂದ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾನೆ. ಸದಾ ಮಂಪರಿನಲ್ಲಿರುವ ರಮೇಶ ಕೈಯಲ್ಲಿ ಮೊಬೈಲ್ ಹಿಡಿದ ರೀತಿಯಲ್ಲಿ ವರ್ತಿಸುತ್ತಾನೆ. ಎಚ್ಚರವಾದೊಡನೆ ಮೊಬೈಲ್ ಎಲ್ಲಿ ಎಂದು ಹುಡುಕಾಡುತ್ತಾನೆ. ಅಕ್ಕಪಕ್ಕದವರಲ್ಲಿ ಮೊಬೈಲ್ ಕೇಳುತ್ತಾನೆ. ರಮೇಶನ ಸ್ಥಿತಿಯನ್ನು ಅಧ್ಯಯನ ಮಾಡಿದ ವೈದ್ಯರು ಈ ಕಾಯಿಲೆಗೆ ನೊಮೋಫೋಬಿಯಾ ಎಂದು ಹೇಳಿದ್ದಾರೆ. ರಮೇಶನ ಈ ಸ್ಥಿತಿ ಬಡ ತಂದೆ ತಾಯಿಗೆ ಚಿಂತೆಯಾಗಿದೆ.  
    ಹತ್ತನೇ ತರಗತಿಯ ಜ್ಯೊತಿ ಮಾಹಿತಿ ಹುಡುಕುವ ನೆಪದಲ್ಲಿ ಸಂಜೆಯಿಂದ ರಾತ್ರಿ ಮಲಗುವವೆರಗೂ ಸ್ಮಾರ್ಟ್ಫೋನ್‌ಗೆ ಅಂಟಿಕೊಂಡಿರುತ್ತಾಳೆ. ಮಗಳ ಸ್ಮಾರ್ಟ್ಪೋನ್ ಪುರಾಣ ಕುರಿತು ತಾಯಿ ಚಿಂತಿತಳಾಗಿದ್ದಾಳೆ. 
ಇದು ಕೇವಲ ಜ್ಯೊತಿ ಹಾಗೂ ರಮೇಶರ ಕಥೆಯಲ್ಲ. ಬಹುತೇಕ ಯುವಕರ ಸ್ಥಿತಿಯೂ ಇದೇ ಆಗಿದೆ. ಶಾಲೆ/ಕಾಲೇಜು ಸಮಯ ಹೊರತು ಪಡಿಸಿದರೆ ಬಹುತೇಕ ವೇಳೆ ಮೊಬೈಲ್ ಫೋನಿಗೆ ಅಂಟಿಕೊಂಡಿರುತ್ತಾರೆ. ಇತ್ತಿಚಿಗೆ ಶಾಲೆ/ಕಾಲೇಜಿನಲ್ಲೂ ಪಾಠದ ವೇಳೆಯಲ್ಲಿ ಮೊಬೈಲ್ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿರುವ ಬಗ್ಗೆ ವರದಿಯಾಗಿವೆ. ಯುವಕರನ್ನು ಆಕರ್ಷಿಸುವ ಅಪ್ಲಿಕೇಶನ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ತಮ್ಮ ವಯಸ್ಸಿನ ಫ್ರೆಂಡ್ಸ್  ಜೊತೆ ಹೊರಗಡೆ ಬಯಲಿನಲ್ಲಿ ಆಡವಾಡುವುದನ್ನು ಬಿಟ್ಟು, ಮೊಬೈಲ್ ಕೈಯಲ್ಲಿ ಹಿಡಿದು ಮೂಲೆ ಸೇರುತ್ತಿದ್ದಾರೆ. ನಾಲ್ಕಾರು ಗೆಳೆಯರು ಒಂದೆಡೆ ಸೇರಿದ್ದರೂ ಸಹ ಪರಸ್ಪರ ಮಾತನಾಡದೇ ಮೊಬೈಲ್‌ನಲ್ಲೆ ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ಅವರು ಸ್ಮಾರ್ಟ್ಫೋನ್ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ಹೇಗೆ ಬಿಡಿಸಬೇಕೆಂಬುದೇ ಬಹುತೇಕ ಪಾಲಕರ ಚಿಂತೆಯಾಗಿದೆ. ಯುವಕರು ಮೊಬೈಲ್ ಫೋನಿಗೆ ಅಂಟಿಕೊಂಡರುವ ಪ್ರಕರಣಗಳನ್ನು ಮನೋವಿಜ್ಞಾನದಲ್ಲಿ ‘ನೊಮೋಫೋಬಿಯಾ’ ಎಂದು ಗುರುತಿಸಲಾಗಿದೆ. ಇದರಿಂದ ಆಗುವ ತೊಂದರೆಗಳು ಹಾಗೂ ಯುವಕರು ಇದರಿಂದ ದೂರವಿರುವ ಕ್ರಮಗಳ ಕುರಿತ ಕಿರು ಮಾಹಿತಿ ಇಲ್ಲಿದೆ.
ನೊಮೋಫೋಬಿಯಾ ಎಂದರೆ,,,,,, : ಮೊಬೈಲ್ ಫೋನ್‌ನಿಂದ ದೂರ ಇರಲಾಗದ ಭಯವೇ ನೊಮೋಫೋಬಿಯಾ. ಅಂದರೆ ಸದಾ ಮೊಬೈಲ್ ಫೋನಿಗೆ ಅಂಟಿಕೊಂಡು, ಅದರಲ್ಲಿಯೇ ಕಾಲ ಕಳೆಯುವ ದುರಭ್ಯಾಸವೇ ನೊಮೋಫೋಬಿಯಾ. ಇಂತಹ ತೊಂದರೆಗೆ ಒಳಗಾದರು ಫೋನ್‌ನ್ನು ಸದಾ ಬಳಿಯೇ ಇಟ್ಟುಕೊಂಡಿರುತ್ತಾರೆ. ಆಗಾಗ್ಗೆ ಮೊಬೈಲ್ ಸ್ಕಿçನ್ ಓಪನ್ ಮಾಡುವುದು, ನೋಟಿಫಿಕೇಶನ್‌ಗಳನ್ನು ಗಮನಿಸುವತ್ತ ಚಿತ್ತ ಹರಿಸುತ್ತಾರೆ. ಪದೇ ಪದೇ ಸಾಮಾಜಿಕ ಜಾಲ ತಾಣಗಳಾದ ಫೇಸ್‌ಬುಕ್, ವಾಟ್ಸಪ್‌ಗಳನ್ನು ಓಪನ್ ಮಾಡುತ್ತಾ ಅದರಲ್ಲೆ ಕಾಲ ಕಳೆಯುತ್ತಾರೆ. 
ಲಕ್ಷಣಗಳು :
ಪದೇ ಪದೇ ಮೊಬೈಲ್ ನೋಡುವುದು.
ಒಂಟಿಯಾಗಿರಲು ಬಯಸುವುದು. 
ಪ್ರತ್ಯೆಕ ಕೊಠಡಿಗಳಲ್ಲಿ ಅವಿತುಕೊಳ್ಳುವುದು. 
ಟಾಯ್ಲೆಟ್ ರೂಮಿಗೂ ಮೊಬೈಲ್ ಕೊಂಡೊಯ್ಯುವುದು. 
ಮೊಬೈಲ್ ಕಾಣಿಸದಿದ್ದರೆ ಏನನ್ನೊ ಕಳೆದುಕೊಂಡವರಂತೆ ವರ್ತಿಸುವುದು. 
ರಾತ್ರಿ ಮಲಗುವಾಗ ತಲೆದಿಂಬಿನ ಪಕ್ಕದಲ್ಲಿಯೇ ಇಟ್ಟುಕೊಂಡು ಮಲಗುವುದು. 
ಎಚ್ಚರವಾದ ಕೂಡಲೇ ಮೊಬೈಲ್ ಸ್ಕಿçನ್ ಓಪನ್ ಮಾಡಿ ನೋಟಿಫಿಕೇಶನ್ ಗಮನಿಸುವುದು. 
ನಿದ್ರಾಹೀನತೆಯಿಂದ ಬಳಲುವುದು.
ಡ್ರಗ್ ವ್ಯಸನಿಯಂತೆ ವರ್ತಿಸುವುದು.
ಕಾರಣಗಳು : ಇಂದಿನ ವಿಭಕ್ತ ಕುಟುಂಬ ಪದ್ದತಿಯು ನೊಮೋಫೋಬಿಯಾಕ್ಕೆ ಮೂಲಕಾರಣ ಎನ್ನಲಾಗುತ್ತದೆ. ತಂದೆ-ತಾಯಿ ಇಬ್ಬರೂ ದುಡಿಮೆಯ ನೆಪದಲ್ಲಿ ಮಕ್ಕಳಿಂದ ಹೆಚ್ಚು ಸಮಯ ದೂರವಿರುತ್ತಾರೆ. ಮಕ್ಕಳ ಓಲೈಕೆಗಾಗಿ ಮೊಬೈಲ್ ಫೋನ್ ಕೊಡಿಸುತ್ತಾರೆ. ಆಕರ್ಷಕ ದೃಶ್ಯಿಕೆಗಳು, ಖುಷಿ ನೀಡುವ ವೀಡಿಯೋ ಗೇಮ್‌ಗಳು, ಕಣ್ಮನ ಸೆಳೆಯುವ ನೃತ್ಯಗಳು, ನಗಿಸುವ ಹಾಸ್ಯ ತುಣುಕುಗಳು ನೊಮೋಫೋಬಿಯಾಕ್ಕೆ ಕಾರಣಗಳು. ಅಲ್ಲದೇ ಕಡಿಮೆ ಬೆಲೆಗೆ ದೊರೆಯುವ ವೇಗದ ಇಂಟರ್‌ನೆಟ್ ಸೌಲಭ್ಯವೂ ಸಹ ಈ ದುರಭ್ಯಾಸಕ್ಕೆ ಕಾರಣವೆಂದರೆ ತಪ್ಪಲ್ಲ. 
ಪರಿಣಾಮಗಳು : 
ಸಂಪರ್ಕ ಕ್ರಾಂತಿಯ ಭಾಗವೆಂದು ಭಾವಿಸಿದ, ಮಿನಿ ಕಂಪ್ಯೂಟರ್‌ಗಳಾದ ಮೊಬೈಲ್ ಫೋನ್‌ಗಳು ಯುಜನತೆಯ ಮೇಲೆ ಅನೇಕ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ. ಇಂದಿನ ಮಕ್ಕಳು ಹಾಗೂ ಯುವಜನತೆ ಹೆಚ್ಚಿನ ರೇಡಿಯೋ ಫ್ರಿಕ್ವೆನ್ಸಿ ಪರಿಸರದಲ್ಲಿ ಬೆಳೆಯುತ್ತಿದ್ದಾರೆ. ಮೊಬೈಲ್‌ಗಳಿಂದ ಹೊರಸೂಸುವ ವಿಕಿರಣಗಳು ಅವರ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತಿವೆ.
         ಇತ್ತಿಚಿನ ವರ್ಷಗಳಲ್ಲಿ ದೇಹದಲ್ಲಿ ಸೆಲ್‌ಫೋನ್ ವಿಕಿರಣ ಪರಿಣಾಮ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ‘ದಿ ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಅಸೋಸಿಯೇಶನ್’ ನಡೆಸಿದ ಅಧ್ಯಯನವು ಮಕ್ಕಳು/ಯುವಕರು ಮೊಬೈಲ್ ಫೋನ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದೆ. 
ಮೊಬೈಲ್ ಬಳಸುತ್ತಿರುವ ಯುವಕರ ಮೆದುಳು ಮತ್ತು ಕಿವಿಯಲ್ಲಿ ಮಾರಣಾಂತಿಕ ಟ್ಯುಮರ್ ಬೆಳೆಯುವ ಸಾಧ್ಯತೆಯನ್ನು ಅಧ್ಯಯನವು ತೋರಿಸಿದೆ. 
ವಿಶ್ವ ಆರೋಗ್ಯ ಸಂಸ್ಥೆಯು ಸೆಲ್‌ಫೋನ್ ವಿಕಿರಣ ಭಾಗಶಃ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಹೇಳಿದೆ. ಮಕ್ಕಳು/ಯುವಕರು ಶೇಕಡಾ ೬೦ರಷ್ಟು ವಿಕಿರಣವನ್ನು ಹೀರಿಕೊಳ್ಳುತ್ತಾರೆ. ಅವರ ಮೆದುಳಿನ ತೆಳುವಾದ ಚರ್ಮ, ಅಂಗಾಂಶಗಳು ಮತ್ತು ಮೂಳೆಗಳು ವಯಸ್ಕರಿಗಿಂತ ಎರಡು ಪಟ್ಟು ವಿಕಿರಣವನ್ನು ಹೀರಿಕೊಳ್ಳುತ್ತವೆ ಎಂದು ಅಧ್ಯಯನವು ಹೇಳುತ್ತದೆ. ಈ ವಿಕಿರಣಗಳು ನರಮಂಡಲವನ್ನು ದುರ್ಬಲಗೊಳಿಸಿ ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ಹೇಳಿದೆ.
ಕೇವಲ ೨ ನಿಮಿಷದ ಕರೆಯು ೧೬ ವರ್ಷದೊಳಗಿನ ಮಕ್ಕಳ ಮೆದುಳಿನ ಕಾರ್ಯನಿರ್ವಾಹಕ ಚಟುವಟಿಕೆಯನ್ನು ಬದಲಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಿವಿಗೆ ಹತ್ತಿರವಾಗಿ ಮೊಬೈಲ್ ಹಿಡಿದು ಮಾತನಾಡುವಾಗ ಅದರಿಂದ ಬರುವ ರೇಡಿಯೋ ತರಂಗಗಳು ಮಕ್ಕಳ ಮೆದುಳಿನಲ್ಲಿ ವ್ಯಾಪಿಸಿ ಕಲಿಕಾ ಸಾಮರ್ಥ್ಯ ಹಾಗೂ ಇನ್ನಿತರೇ ವರ್ತನೆಯ ಸಮಸ್ಯೆಗಳನ್ನು ದುರ್ಬಲಗೊಳಿಸುತ್ತದೆ. ಇದು ಕಲಿಯುವವರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.
ಸದಾ ಮೊಬೈಲ್ ಬಳಸುತ್ತಿದ್ದರೆ, ಕಲಿಕಾ ಸಾಮರ್ಥ್ಯ ಕಡಿಮೆಯಾಗಿ ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ. ಕ್ರಮೇಣವಾಗಿ ಕಲಿಕೆಯಲ್ಲಿ ನಿರಾಸಕ್ತಿ ಉಂಟಾಗುತ್ತದೆ.
ಸದಾ ಮೊಬೈಲ್ ಫೋನ್‌ಗೆ ಅಂಟಿಕೊಂಡಿರುವುದರಿಂದ ದೈಹಿಕ ಚಟುವಟಿಕೆಗಳು ಇಲ್ಲದೇ ದಢೂತಿದೇಹ ಉಂಟಾಗುತ್ತದೆ. 
ಸೆಲ್‌ಫೋನ್ ಮಕ್ಕಳು/ಯುವಕರಲ್ಲಿ ಅನುಚಿತ ವರ್ತನೆಗೆ ಕಾರಣವಾಗುತ್ತದೆ. ಅನಗತ್ಯ ಪಠ್ಯ ಹಾಗೂ ಚಿತ್ರ ಸಂದೇಶದ ಚಾಟಿಂಗ್‌ನಲ್ಲಿ ತೊಡಗುವ ಸಮಸ್ಯೆ ಉಂಟಾಗುತ್ತದೆ. ಕುಟುಂಬದ ವ್ಯಕ್ತಿಗಳ ಚಿತ್ರಗಳು ಕೆಲವೊಮ್ಮೆ ಕೈತಪ್ಪಿ ಅಂತರಜಾಲದಲ್ಲಿ ಸಿಲುಕಿ, ಅಶ್ಲಿಲ ಸೈಟ್‌ಗಳಿಗೆ ಪ್ರವೇಶಹೊಂದಿ ಅವಾಂತರ ತರುವ ಸಾಧ್ಯತೆಗಳಿವೆ. 
ಮೊಬೈಲ್ ಬಳಕೆಯಿಂದ ಕಲಿಕೆಯಲ್ಲಿ ಹಿಂದುಳಿದವರು ಆಂತರಿಕ ಮತ್ತು ಬಾಹ್ಯ ಪರೀಕ್ಷೆಗಳಲ್ಲಿ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಪರೀಕ್ಷೆಗಳಲ್ಲಿ ನಕಲು ಮಾಡುವಂತಹ ದುಷ್ಕೃತ್ಯ ಎಸಗಬಹುದು.
ಮೊಬೈಲ್ ವ್ಯಸನಕ್ಕೆ ಒಳಗಾದವರು ಮೌಲ್ಯಯುತವಾದ ಹವ್ಯಾಸಗಳು ಮತ್ತು ಪ್ರಿತಿಪಾತ್ರರಿಂದ ದೂರವಾಗುತ್ತದೆ. 
ಸ್ಮಾರ್ಟ್ಫೋನ್ ಬಳಕೆಯಿಂದ ಯುವಕರಲ್ಲಿ ಆಕ್ರಮಣಕಾರಿ ವರ್ತನೆಗಳು ಪ್ರಕಟಗೊಳ್ಳುತ್ತವೆ. ಇದರಿಂದ ಅವರಲ್ಲಿ ಆತಂಕ, ಒತ್ತಡ, ಖಿನ್ನತೆ, ಚಡಪಡಿಕೆ ಉಂಟಾಗುತ್ತದೆ. 
ಮೊಬೈಲ್ ಬಳಕೆ ನಿದ್ರಾಹೀನತೆಗೂ ಕಾರಣವಾಗುತ್ತದೆ. ನಿದ್ರಾಹೀನತೆಯಿಂದ ಸ್ಮರಣಶಕ್ತಿಯೂ ಕಡಿಮೆಯಾಗುತ್ತದೆ ಮತ್ತು ಆ ಕಾರಣದಿಂದ ಶೈಕ್ಷಣಿಕ ಪ್ರಗತಿ ವೇಗವಾಗಿ ಕುಂಟಿತವಾಗುತ್ತದೆ. 
ಬ್ಲೂವ್ಹೆಲ್, ಮೊಮೋನಂತಹ ಆನ್‌ಲೈನ್ ಗೇಮ್‌ಗಳು ಮಕ್ಕಳು/ಯುವಕರ ಪ್ರಾಣಕ್ಕೆ ಕಂಟಕವಾಗಬಹುದು. 
ಭವಿಷ್ಯದಲ್ಲಿ ಭಾವನೆಗಳು ನಶಿಸುವ ಸಾಧ್ಯತೆ ಇದೆ.
ಮುಕ್ತಿಮಾರ್ಗ :
ನೊಮೋಫೋಬಿಯಾದಿಂದ ಹೊರಬರುವುದು ಯುವಕರಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಶಾಂತವಾಗಿ ಯೋಚಿಸಿದರೆ ಇದೇನೂ ದೊಡ್ಡ ಸಮಸ್ಯೆಯಲ್ಲ. ಆದರೆ ಗಂಭೀರ ಪರಿಣಾಮಗಳ ಬಗ್ಗೆ ಯೋಚಿಸಿದರೆ ಖಂಡಿತವಾಗಿ ಹೊರಬರಲೇಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಯುವಕರು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. 
ಆದಷ್ಟೂ ಬಯಲಿನಲ್ಲಿ ದೈಹಿಕ ಶ್ರಮದ ಆಟಗಳಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮ ಮನಸ್ಸು ಉಲ್ಲಿಸತವಾಗುವಂತೆ ಮಾಡುತ್ತದೆ.
ಸ್ಮಾರ್ಟ್ಫೋನ್‌ಗಳು ನಮ್ಮ ಜೀವನದ ಭಾಗವೇನಲ್ಲ. ಅದನ್ನು ಬದಿಗಿಟ್ಟು ಸೃಜನಾತ್ಮಕ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. 
ಕುಟುಂಬದ ಸದಸ್ಯರೊಡನೆ ಭೌತಿಕವಾಗಿ ಹೆಚ್ಚು ಹೆಚ್ಚು ಬರೆಯಿರಿ. ಸಣ್ಣ ಸಣ್ಣ ಮನೆಕೆಲಸಗಳಲ್ಲಿ ಪೋಷಕರಿಗೆ ನೆರವಾಗಿ.
ಒಡನಾಡಿಗಳು, ಬಂಧು-ಬಾಂಧವರ ಜೊತೆ ಹೆಚ್ಚು ಹೆಚ್ಚು ಬೆರೆಯಿರಿ.
ಹಾಡುಗಾರಿಕೆ, ನೃತ್ಯ, ಯೋಗ, ಚಿತ್ರಕಲೆ, ಕ್ಲೆಮಾಡಲಿಂಗ್‌ನಂತಹ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. 
ಚೆಸ್, ಕೇರಂ, ಟೇಬಲ್ ಟೆನ್ನಿಸ್, ಈಜುಗಳಂತಹ ಒಳಾಂಗಣ ಕ್ರಿಡೆಗಳು ವಿರಾಮ ವೇಳೆಯ ಸದುಪಯೋಗದ ಜೊತೆಗೆ ನೀವು ಸದಾ ಆಕ್ಟಿವ್ ಆಗಿರಲು ಸಹಾಯಮಾಡುತ್ತವೆ. 
ಕಥೆ, ಕವನ, ಕಾದಂಬರಿ, ಜೀವನಚರಿತ್ರೆಗಳಂತಹ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಓದುವ ಹವ್ಯಾಸ ಎಲ್ಲೆಡೆ ನೀವು ತಲೆ ಎತ್ತಿ ನಡೆಯುವಂತೆ ಮಾಡುತ್ತದೆ. 
ಮೊಬೈಲ್ ಬೇಕೇ ಬೇಕು ಎಂದಾದರೆ ಕಡಿಮೆ ವಿಕಿರಣ ಮಟ್ಟ ಹೊಂದಿರುವ ಮೊಬೈಲ್ ಖರೀದಿಸಿ. ಇದಕ್ಕಾಗಿ ಎಸ್.ಎ.ಆರ್(ನಿರ್ದಿಷ್ಟ ಹೀರಿಕೆ ದರ) ಕಡಿಮೆ ಇರುವ ಮೊಬೈಲ್ ಖರೀದಿಸಿ. ಭಾರತದಲ್ಲಿ ಎಸ್.ಎ.ಆರ್ ಮಟ್ಟವು ೧.೬ ತಿ/ಞg ಆಗಿದೆ. ನಿಮ್ಮ ಮೊಬೈಲ್‌ನ ಎಸ್.ಎ.ಆರ್ ಮಟ್ಟ ಪರೀಕ್ಷಿಸಲು *#೦೭# ಡಯಲ್ ಮಾಡಿ. 
ಪ್ರಯಾಣದ ವೇಳೆ ಮೊಬೈಲ್ ಬಳಸಬೇಡಿ. ರೈಲು, ಬಸ್ಸು, ಕಾರು ಮುಂತಾದ ವಾಹನಗಳಲ್ಲಿ ಪ್ರಯಾಣಿಸುವಾಗ ಮೊಬೈಲ್ ಸಿಗ್ನಲ್‌ಗಳಿಗಾಗಿ ರೇಡಿಯೇಶನ್ ಸ್ಕಾö್ಯನಿಂಗ್ ಮಾಡುತ್ತಿರುತ್ತದೆ. ಈ ವೇಳೆಯಲ್ಲಿ ಹೆಚ್ಚು ವಿಕರಣಗಳು ಹೊರಸೂಸುತ್ತಿರುತ್ತವೆ. 
ರಾತ್ರಿ ಮಲಗುವಾಗ ಹತ್ತಿರ ಮೊಬೈಲ್ ಇಟ್ಟುಕೊಳ್ಳಬೇಡಿ. ವಿಕಿರಣಗಳಿಂದ ನೆನಪಿನ ಶಕ್ತಿಯ ಮೇಲೆ ಪರಿಣಾಮಗಳಾಗುತ್ತವೆ. 
ಎರಡು ನಿಮಿಷಕ್ಕಿಂತ ಹೆಚ್ಚಿಗೆ ಮಾತನಾಡಬೇಕಿದ್ದರೆ ಲ್ಯಾಂಡ್‌ಲೈನ್ ಬಳಸಿ. ಇಲ್ಲವಾದರೆ ಮೊಬೈಲ್‌ನಲ್ಲಿ ಓಪನ್ ಸ್ಪಿಕರ್ ಹಾಕಿ ಮಾತನಾಡಿಸಿ. ಮಾತು ಆದಷ್ಟೂ ಹಿತಮಿತವಾಗಿರಲಿ.
ಸಾಮಾಜಿಕ ಜಾಲತಾಣ ಬಳಸುವುದು ಅನಿವಾರ್ಯವಾದರೆ ಮೊಬೈಲ್‌ನ ಬದಲು  ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಬಳಸಿ. 
           ನಿಮ್ಮ ಮೇಲೆ ಇಡೀ ಸಮಾಜ ಹಾಗೂ ಕುಟುಂಬ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ನಿಮ್ಮನ್ನು ನಂಬಿದವರ ನಿರೀಕ್ಷೆಗಳನ್ನು ನನಸು ಮಾಡುವುದು ನಿಮ್ಮ ಮೊದಲ ಆಧ್ಯತೆಯಾಗಲಿ. ಪುಸ್ತಕ ಹಾಗೂ ಸೃಜನಾತ್ಮಕ ಚಟುವಟಿಕೆಗಳು ನಿಮ್ಮನ್ನು ತಲೆ ಎತ್ತಿ ನಡೆಯುವಂತೆ ಮಾಡುತ್ತವೆ. ಆದರೆ ಮೊಬೈಲ್ ನಿಮ್ಮನ್ನು ತಲೆ ತಗ್ಗಿಸಿ ನಡೆಸುತ್ತದೆ. ನಿಮಗೆ ನಿಮ್ಮ ಭವಿಷ್ಯ ಮುಖ್ಯವಾಗಬೇಕೆ ಹೊರತು ಕ್ಷಣಿಕ ಸುಖದ ಮೊಬೈಲ್ ಅಲ್ಲ. 
ಆರ್.ಬಿ.ಗುರುಬಸವರಾಜ

ಆ್ಯಂಕರಿಂಗ್ ಎಂಬ ಕನಸಿನ ಲೋಕ Anchoring

ದಿನಾಂಕ 26-9-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಆ್ಯಂಕರಿಂಗ್ ಎಂಬ ಕನಸಿನ ಲೋಕ 


ಉಪಗ್ರಹ ಆಧಾರಿತ ಚಾನಲ್‌ಗಳ ಪ್ರವೇಶದೊಂದಿಗೆ ಜನಪ್ರಿಯ ವೃತ್ತಿಯಾದ ಆ್ಯಂಕರಿಂಗ್ ಯುವಪೀಳಿಗೆಯ ಆಕರ್ಷಣೆಯ ಕ್ಷೆÃತ್ರವಾಗಿದೆ. ಹಲವಾರು ಸುದ್ದಿ ಹಾಗೂ ಮನೋರಂಜನಾ ಚಾನಲ್‌ಗಳಲ್ಲಿ ವೈಯಾರದ ಮಾತುಗಳಿಂದ ಪ್ರೆÃಕ್ಷಕರ ಮನ ಗೆದ್ದ ಅನೇಕರು ತಾರೆಗಳ ಸಾಲಿನಲ್ಲಿ ಸೇರಿರುವುದೂ ಸಹ ಆಕರ್ಷಣೆಯ ಮತ್ತೊಂದು ಬಿಂದುವಾಗಿದೆ. 
ಇಂದಿನ ಯುವಪೀಳಿಗೆಗೆ ದೃಶ್ಯ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವಾಸೆ ಅಧಿಕ. ನಟರಾಗಿ, ಕಾರ್ಯಕ್ರಮ ನಿರೂಪಕರಾಗಿ, ವಾರ್ತಾ ವಾಚಕರಾಗಿ, ಸಂವಹನಕಾರರಾಗಿ ಹೀಗೆ ವಿಭಿನ್ನ ರೂಪಗಳಲ್ಲಿ ಕಾಣಿಸಿಕೊಳ್ಳುವಾಸೆ. ಏಕೆಂದರೆ ಏಕಕಾಲದಲ್ಲಿ ಸಾವಿರಾರು ಕಣ್ಣುಗಳು ತಮ್ಮನ್ನು ನೋಡುತ್ತಾರೆ, ತಮ್ಮ ಅಂದ ಹಾಗೂ ವಿದ್ವತ್ತನ್ನು ಮೆಚ್ಚುತ್ತಾರೆ, ತಮ್ಮ ಶೈಲಿಯನ್ನು ಅನುಸರಿಸುತ್ತಾರೆ, ಅಭಿಮಾನಗಳ ಸಂಖ್ಯೆ ಹೆಚ್ಚುತ್ತದೆ ಎಂಬ ಕಲ್ಪನೆ ಸಹಜ. ನಾವೂ ಅವರಂತೆ ಆ್ಯಂಕರ್ ಆಗಬೇಕು ಎಂಬ ತುಡಿತ ಮಿಡಿತ ಯುವಪೀಳಿಗೆಯಲ್ಲಿರುವುದು ಸಹಜ. ಹೌದು ಆ್ಯಂಕರ್ ಆಗುವುದರಿಂದ ಮೇಲಿನ ಎಲ್ಲಾ ಪ್ರಯೋಜನಗಳು ದೊರೆಯುತ್ತವೆ. ಹಾಗಾದರೆ ಆ್ಯಂಕರ್ ಆಗಲು ಬೇಕಾದ ಅರ್ಹತೆಗಳೇನು, ಅನುಸರಿಸಬೇಕಾದ ನಿಯಮಗಳೇನು ಎಂಬುದನ್ನು ತಿಳಿಯೋಣ.  
ಆ್ಯಂಕರ್ ಎಂದರೆ,,,,, : ಕನ್ನಡದಲ್ಲಿ ನಿರೂಪಕರು ಎಂದು ಕರೆಯಲ್ಪಡುವ ಆ್ಯಂಕರ್ ಎಂಬ ಪದವು ಹಲವು ರೂಪಗಳನ್ನು ಹೊಂದಿದೆ. ಪ್ರೆಸೆಂಟರ್, ಹೋಸ್ಟ್, ನ್ಯೂಸ್ ರೀಡರ್, ಪ್ರೊÃಗ್ರಾಂ ಆ್ಯಂಕರ್ ಹೀಗೆ ವಿವಿಧ ರೂಪಗಳನ್ನು ಹೊಂದಿದೆ. ಇವರು ಚಾನಲ್ ಮತ್ತು ಪ್ರೆÃಕ್ಷಕರ ನಡುವೆ ಮಧ್ಯವರ್ತಿಗಳಾಗಿದ್ದಾರೆ. ಚಾನಲ್‌ನ ಕಾರ್ಯಕ್ರಮಗಳನ್ನು ಪ್ರೆÃಕ್ಷಕರಿಗೆ ಮನಮುಟ್ಟುವಂತೆ ತಲುಪಿಸುವುದೇ ಆ್ಯಂಕರ್‌ಗಳ ಕೆಲಸವಾಗಿದೆ. ಇವರು ಕೇವಲ ನಿರೂಪಕರಲ್ಲದೇ ತಮ್ಮ ಜ್ಞಾನವನ್ನು ವಿಸ್ತರಿಸುವ ಹಾಗೂ ಅದನ್ನು ಪ್ರೆÃಕ್ಷಕರಿಗೆ ಹಂಚುವ ಕಾರ್ಯ ಮಾಡುತ್ತಾರೆ. ಮನೋರಂಜನೆ ಅಥವಾ ಗಂಭೀರ ಸುದ್ದಿ ಪ್ರಸ್ತುತಿ ಇರಲಿ ಕಾರ್ಯಕ್ರಮದ ಉದ್ದಕ್ಕೂ ವೀಕ್ಷಕರನ್ನು ಆಕರ್ಷಿಸುವ ಗುಣಮಟ್ಟವನ್ನು ಅವರು ಹೊಂದಿರಬೇಕು. ಇದು ಅತ್ಯಂತ ಸವಾಲಿನ ಕ್ಷೆÃತ್ರವಾಗಿದೆ. ಕೇವಲ ಮಾಹಿತಿಯನ್ನು ವಿನಿಮಯ ಮಾಡದೇ ಕಾರ್ಯಕ್ರಮವನ್ನು ಮನೋರಂಜನಾತ್ಮಕ ರೀತಿಯಲ್ಲಿ ಪ್ರೆÃಕ್ಷಕರಿಗೆ ತಲುಪಿಸುವ ಗುರುತರ ಜವಾಬ್ದಾರಿ ಇವರ ಮೇಲಿದೆ. 

ಆ್ಯಂಕರ್‌ಗಳಲ್ಲಿ ಮೂರು ರೀತಿಯ ಆ್ಯಂಕರ್‌ಗಳನ್ನು ನೋಡುತ್ತೆÃವೆ. ಅವುಗಳೆಂದರೆ 
ಪ್ರೊÃಗ್ರಾಂ ಆ್ಯಂಕರ್: ನಿರ್ಧಿಷ್ಟ ಕಾರ್ಯಕ್ರಮವನ್ನು ನಡೆಸಿಕೊಡುವ ನಿರೂಪಕರು. ಇವರು ಮನೋರಂಜನಾ ಕಾರ್ಯಕ್ರಮ, ಹಾಸ್ಯ ಕಾರ್ಯಕ್ರಮಗಳು, ಸನ್ಮಾನ ಸಮಾರಂಭಗಳು, ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ, ವಿವಿಧ ಸಾಂಸ್ಕೃತಿಕ/ದಿನಾಚರಣೆಗಳ ವೇದಿಕೆ ಕಾರ್ಯಕ್ರಮಗಳ ನಿರ್ವಹಣೆ ಮಾಡುವುದು.
ನ್ಯೂಸ್ ರೀಡರ್ : ವಿವಿಧ ಭಾಷೆಗಳ ಪ್ರಾದೇಶಿಕ/ರಾಜ್ಯ/ರಾಷ್ಟಿçÃಯ ಸುದ್ದಿಗಳನ್ನು ಓದುವವರು.
ಲೈವ್ ಆ್ಯಂಕರ್ : ರಿಯಾಲಿಟಿ ಷೋಗಳು, ಅಡುಗೆ ಕಾರ್ಯಕ್ರಮಗಳು, ಕ್ರಿÃಡೆಗಳು, ಚರ್ಚೆ, ಸಂವಾದಗಳು, ಮುಂತಾದ ಲೈವ್ ಕಾರ್ಯಕ್ರಮ ನಿರೂಪಕರು. 
ಇರಬೇಕಾದ ಅರ್ಹತೆಗಳು : ಆ್ಯಂಕರಿಂಗ್ ಎಂಬುದು ಸಾಮಾನ್ಯವಾದ ಕೆಲಸವಲ್ಲ. ಇದು ಆಕರ್ಷಕವಾಗಿ ಕಾಣುವ ಸವಾಲಿನ ಕೆಲಸ. ಕೆಲವೊಂದು ಅರ್ಹತೆಗಳು ಅಗತ್ಯವಾಗಿ ಬೇಕು. ನ್ಯೂಸ್ ರೀಡರ್‌ಗಳಿಗೆ ಪತ್ರಿಕೋಧ್ಯಮ ಹಾಗೂ ಸಮೂಹ ಮಾಧ್ಯಮದಂತಹ ಸ್ನಾತಕ ಪದವಿ ಅತ್ಯಗತ್ಯ. ಕೇವಲ ಪದವಿ ಇದ್ದರೆ ಸಾಲದು. ಅದರ ಜೊತೆಗೊಂದಿಷ್ಟು ಸಾಮಾನ್ಯ ಅರ್ಹತೆಗಳು ಅವಶ್ಯಕ. 
ಶುದ್ದ ಭಾಷಾಜ್ಞಾನ
ಉತ್ತಮ ಸಂವಹನ ಕೌಶಲ್ಯ
ಪ್ರಾಪಂಚಿಕ ಜ್ಞಾನ(ಆಗುಹೋಗುಗಳ ಪರಿಚಯ)
ಶಬ್ದಭಂಢಾರ
ಆಕರ್ಷಕ ದೇಹ ಮತ್ತು ಆರೋಗ್ಯಯುತ ಮನಸ್ಸು
ಮೋಡಿಮಾಡುವ ಮಾತುಗಾರಿಕೆ
ಆತ್ಮವಿಶ್ವಾಸ
ಸಹಕಾರ ಮತ್ತು ಹೊಂದಿಕೊಳ್ಳುವ ಗುಣ 
ಕನಸಿಗೆ ಪರಿಶ್ರಮದ ಬಣ್ಣ ಬಳಿಯಿರಿ:
ಇಂದಿನ ಯುವಜನತೆ ತಾವೊಬ್ಬ ಉತ್ತಮ ಆ್ಯಂಕರ್ ಆಗಬೇಕೆಂಬ ಕನಸು ಕಾಣುವುದು ತಪ್ಪೆÃನಲ್ಲ. ಆದರೆ ಅದಕ್ಕೊಂದಿಷ್ಟು ಕಿರು ತಯಾರಿ ಅಗತ್ಯ ಎಂಬುದನ್ನು ಮರೆಯಬಾರದು. ಕೆಳಗಿನ ಕೆಲವು ಕ್ರಮಗಳನ್ನು ಪಾಲಿಸುವ ಮೂಲಕ ಕೌಶಲ್ಯ ಗಳಿಸಿಕೊಂಡರೆ, ನೀವೊಬ್ಬ ಉತ್ತಮ ಆ್ಯಂಕರ್ ಆಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಅರ್ಹತೆ : ಸಾಮಾನ್ಯ ಕಾರ್ಯಕ್ರಮಗಳ ನಿರೂಪಕರಾಗಲು ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ. ಆದರೂ ಭಾಷಾಜ್ಞಾನ ಮತ್ತು ಸಂವಹನ ಕೌಶಲ್ಯ ಬೆಳೆಸಿಕೊಳ್ಳಲು ಅಗತ್ಯ ವಿದ್ಯಾರ್ಹತೆ ಅಗತ್ಯ. ಟಿ.ವಿ.ಗಳಲ್ಲಿ ನ್ಯೂಸ್ ರೀಡರ್ ಆಗಬೇಕಾದರೆ ಬ್ರಾಡ್‌ಕಾಸ್ಟ್ ಜರ್ನಲಿಸಂನಲ್ಲಿ ಸ್ನಾತಕ ಪದವಿ ಹೊಂದಿದವರಿಗೆ ಹೆಚ್ಚಿನ ಅವಕಾಶಗಳಿವೆ. ಜೊತೆಗೆ ಇಂಗ್ಲಿÃಷ್ ಮತ್ತು ಮಾಸ್ ಕಮ್ಯೂನಿಕೇಶನ್‌ನಲ್ಲಿ ಪದವಿ ಗಳಿಸಿದವರಿಗೆ ಆಧ್ಯತೆ ಹೆಚ್ಚು. 
ಜವಾಬ್ದಾರಿಯುತ ಕಾರ್ಯನಿರ್ವಹಣೆ : ನಿಮಗೆ ನೀಡಿದ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕಾದುದು ಅಗತ್ಯ. ನಿಮಗೆ ನೀಡಿದ ಕಾರ್ಯದ ಎಲ್ಲಾ ಆಯಾಮಗಳನ್ನು ಅರ್ಥೈಸಿಕೊಂಡು ಅದರ ಯಶಸ್ಸಿಗೆ ಪರಿಶ್ರಮಿಸುವ ಬದ್ದತೆ ಇರಬೇಕು. ಇಲ್ಲಿ ವೈಯಕ್ತಿಕ ಜೀವನಕ್ಕಿಂತ ವೃತ್ತಿ ಜೀವನಕ್ಕೆ ಹೆಚ್ಚು ಗಮನಕೊಡಬೇಕಾಗುತ್ತದೆ. ಅದಕ್ಕಾಗಿ ಕಎಲವು ಯಶಸ್ವಿ ಆ್ಯಂಕರ್‌ಗಳ ಜೀವನವನ್ನು ಅಧ್ಯಯನ ಮಾಡಿದಾಗ ಅವರ ಪ್ರಯತ್ನದ ಹಾದಿ ತಿಳಿಯುತ್ತದೆ. ಅರ್ಹತೆಯುಳ್ಳ ಅನೇಕರು ಅರ್ದಕ್ಕೆ ಕೆಲಸ ಬಿಟ್ಟ ಉದಾಹರಣೆಗಳಿವೆ. ಅಂತಯೇ ವಿದ್ಯಾರ್ಹತೆ ಇಲ್ಲದಿದ್ದರೂ ಬದ್ದತೆಯಿಂದ ಕೆಲಸ ಮಾಡುವವರು ಉನ್ನತ ಹಂತ ತಲುಪಿದ್ದಾರೆ. ವರದಿಗಾರರು, ಕ್ಯಾಮೆರಾಮನ್ ಆಗಿ ಸೇರಿದವರು ಇಂದು ಉನ್ನತ ಹಂತಕ್ಕೆ ಏರಿದ್ದಾರೆ. ತಮಗೆ ನೀಡಿದ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿರುವುದೇ ಬೆಳವಣಿಗೆಗೆ ಕಾರಣ.
ಪ್ರಾಪಂಚಿಕ ಘಟನೆಗಳ ಜ್ಞಾನ : ಆ್ಯಂಕರ್ ಆಗಬೇಕಾದರೆ ಪ್ರಾಪಂಚಿಕ ಜ್ಞಾನದ ಅರಿವು ಅಗತ್ಯ. ಜಗತ್ತಿನಲ್ಲಿ ನಡೆಯುತ್ತಿರುವ ಸಧ್ಯದ ಘಟನೆಗಳು, ವಿಸ್ಮಯಗಳ ಬಗ್ಗೆ ಅರಿವು ಇರಬೇಕಾಗುತ್ತದೆ. ಘಟನೆಗಳನ್ನು ವಿವಿಧ ಆಯಾಮಗಳಿಂದ ವಿಶ್ಲೆÃಷಿಸುವ ಕೌಶಲ್ಯ ಇರಬೇಕು. 
ಮಾತಿನ ಕೌಶಲ್ಯ :  ಮಾತಿನ ಕೌಶಲ್ಯ ಇರದ ಹೊರತು ಆ್ಯಂಕರ್‌ಗಳಾಗಲು ಸಾಧ್ಯವೇ ಇಲ್ಲ. ಪ್ರಸ್ತುತಪಡಿಸುವ ಸುದ್ದಿ ಅಥವಾ ಕಾರ್ಯಕ್ರಮಕ್ಕೆ ವೀಕ್ಷಕರನ್ನು ಸೆಳೆಯುವ ಕಾರ್ಯತಂತ್ರವೆಂದರೆ ಮಾತಿನ ಕುಶಲತೆ. ಧ್ವನಿ, ಹಾವಭಾವ, ಶಭ್ದಗಳ ಬಳಕೆ, ಮುಕ್ತ ಸಂವಹನ ಇವೆಲ್ಲವೂ  ಮಾತಿನಶೈಲಿಯನ್ನು ನಿರ್ಧರಿಸುತ್ತವೆ. ಸಂದರ್ಶನದ ವೇಳೆಯಲ್ಲಿ ಪ್ರಶ್ನಿಸುವ ಕೌಶಲ್ಯ ಹಾಗೂ ಸಂದರ್ಶಕರ ಮಾತಿನಲ್ಲಿನ ಆಂತರ್ಯವನ್ನು ಬಿಂಬಿಸುವ ಕುಶಲತೆ ಇರಬೇಕು. ಸ್ಪಷ್ಟ ಉಚ್ಛಾರ, ವಿವಿಧ ಪದಗಳ ಬಳಕೆ, ಧ್ವನಿಯ ಏರಿಳಿತ ಅಗತ್ಯ.
ಸ್ಟೆಮಿನಾ : ರಾಷ್ಟಿçÃಯ ಹಾಗೂ ಅಂತರರಾಷ್ಟಿçÃಯ ಸುದ್ದಿ ಚಾನಲ್‌ಗಳಲ್ಲಿ ಕೆಲಸ ಮಾಡುವವರು ಸಮಯದ ಹಂಗನ್ನು ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಯಾವ ಸಂಧರ್ಭದಲ್ಲಿ ಎಲ್ಲಿಗೆ ಹೋಗಿ ಸುದ್ದಿ ಮಾಡುವ ಅಗತ್ಯವಿರುತ್ತದೆ ಎಂಬುದನ್ನು ಊಹಿಸಲಾಗುವುದಿಲ್ಲ. ಅಲ್ಲಿಗೆ ಹೋದ ಮೇಲೆ ವಾಪಾಸಾಗುವುದು ಯಾವಾಗ ಎಂಬುದು ಸಹ ತಿಳಿದಿರುವುದಿಲ್ಲ. ಇಂತಹ ವೇಳೆ ಆಹಾರ ನೀರಡಿಕೆಗಳನ್ನು ತ್ಯಜಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಅದಕ್ಕಾಗಿ ಅಗತ್ಯ ಸ್ಟೆಮಿನಾ(ತ್ರಾಣ) ಬಳೆಸಿಕೊಳ್ಳಬೇಕಾಗುತ್ತದೆ. 
ಕ್ಯಾಮೆರಾಸ್ನೆÃಹಿ ನೋಟ : ಆ್ಯಂಕರ್‌ಗಳು ಸಾಮಾನ್ಯವಾಗಿ ಕ್ಯಾಮೆರಾ ಮುಂದೆ ಕೆಲಸ ಮಾಡಬೇಕಾಗಿರುತ್ತದೆ. ಅದಕ್ಕಾಗಿ ಕ್ಯಾಮೆರಾಸ್ನೆÃಹಿ ಮುಖ ಹಾಗೂ ದೇಹ ಹೊಂದಬೇದುದು ಅಗತ್ಯ. ಇದಕ್ಕಾಗಿ ಆಹಾರ ಕ್ರಮದ ಮೇಲೆ ನಿಯಂತ್ರಣ ಇರಬೇಕಾಗುತ್ತದೆ. ಶಕ್ತಿ ಮತ್ತು ಹುರುಪು ಪಡೆಯಲು ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಆಹಾರಕ್ಕಾಗಿ ಆಯ್ಕೆ ಮಾಡಿಕೊಳ್ಳಬೇಗುತ್ತದೆ. ಕೊಬ್ಬು ಬೆಳವಣಿಗೆಯಾಗದಂತೆ ನಿಯಮಿತ ವ್ಯಾಯಾಮದಲ್ಲಿ ತೊಡಗಿಕೊಳ್ಳಬೇಕು. 
ಉಡುಪುಗಳ ಸಭ್ಯತೆ : ಆ್ಯಂಕರ್‌ಗಳು ಸದಾ ವೀಕ್ಷಕರ ಮುಂದೆ ಇರಬೇಕಾದುದರಿಂದ ಆಕರ್ಷಕ ಉಡುಪು ಧರಿಸಿಬೇಕಾಗುತ್ತದೆ. ಉಡುಪುಗಳು ವ್ಯಕ್ತಿತ್ವದ ಸಂಕೇತ. ಇತರರ ಭಾವನೆಗಳಿಗೆ ತೊಂದರೆಯಾಗದಂತಹ ರೀತಿಯಲ್ಲಿ ಉಡುಪು ಧರಿಸುವುದು ಇಂದಿನ ಅಗತ್ಯವಾಗಿದೆ. ಆ್ಯಂಕರ್‌ಗಳನ್ನು ಕೇವಲ ಒಂದು ವರ್ಗದ ಜನ ವೀಕ್ಷಿಸುವುದಿಲ್ಲ. ಮಕ್ಕಳಿಂದ ವೃದ್ದರವರೆಗೆ ಎಲ್ಲಾ ಹಂತದ ಜನ ವೀಕ್ಷಿಸುವುದರಿಂದ ಉಡುಪುಗಳಲ್ಲಿ ಸಭ್ಯತೆ ಅಗತ್ಯ. ಸೂಟ್‌ಗಳಂತಹ ಉಡುಪುಗಳು ಎಲ್ಲರಿಗೂ ಅಚ್ಚುಮೆಚ್ಚು. ಹಾಗಾಗಿ ಆ್ಯಂಕರ್‌ಗಳು ಸೂಟ್‌ಗಳನ್ನು ಹೆಚ್ಚಾಗಿ ಧರಿಸುತ್ತಾರೆ. 
ಬದಲಾವಣೆಗೆ ಸಿದ್ದತೆ : ನಿರೂಪಣೆಯಲ್ಲಿ ಕೊನೆ ಕ್ಷಣದ ಬದಲಾವಣೆಗಳು ಸಹಜ. ಇಂತಹ ಬದಲಾವಣೆಗೆ ಹೊಂದಿಕೊಳ್ಳುವ ಹಾಗೂ ಅದನ್ನು ನಿಭಾಯಿಸುವ ಕೌಶಲ್ಯ ನಿರೂಪಕರಿಗೆ ಇರಬೇಕಾದುದು ಅಪೇಕ್ಷಣೀಯ. ಬದಲಾವಣೆಗೆ ಹೊಂದಿಕೊಳ್ಳದಿದ್ದರೆ ಆ್ಯಂಕರ್‌ಗಳ ಇಮೇಜ್ ಹಾಳಾಗುತ್ತದೆ. 
ಮಾನವೀಯತೆಯತೆ : ನಿರೂಪಕರಿಗೆ ಇರಲೇಬೇಕಾದ ಬಹುದೊಡ್ಡ ಗುಣ ಅಥವಾ ಮಾನವೀತೆ. ಸಂದರ್ಶನ ಅಥವಾ ಚರ್ಚೆ ವೇಳೆ ನಾವೂ ಒಬ್ಬ ಮನುಷ್ಯರಾಗಿ ಇನ್ನೊಬ್ಬ ಮನುಷ್ಯರೊಂದಿಗೆ ಸಂವಾದ ನಡೆಸುತ್ತಿದ್ದೆÃವೆ ಎಂಬುದನ್ನು ಮನದಲ್ಲಿಟ್ಟುಕೊಂಡು ವರ್ತಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಯಾರನ್ನೂ ಅನಗತ್ಯವಾಗಿ ದೂಷಿಸದೇ, ತೇಜೋವಧೆ ಮಾಡದೇ, ಮಾನವೀಯ ಹಕ್ಕುಗಳ ನೆಲೆಯಲ್ಲಿ ಪ್ರಸ್ತುತಿ ನಡೆಸಬೇಕು. ಆ ಮೂಲಕ ಮಾನವೀಯತೆ ಮೆರೆಯಬೇಕು.
ಜವಾಬ್ದಾರಿಗಳು
ತಂಡದ ಸದಸ್ಯರಿಂದ ಪಡೆದ ಸುದ್ದಿ/ವಿಷಯವನ್ನು ಸಮಯದ ಮಿತಿಗನುಗುಣವಾಗಿ ಹಿರಿಯರ ಸಲಹೆ ಪಡೆದು ಪಸ್ತುತಿಗೆ ಇದ್ದಪಡಿಸುವುದು.
ಸುದ್ದಿ ಕಥೆಯನ್ನು ವಿಷಯಕ್ಕೆ ಅನುಗುಣವಾಗಿ ನಿರೂಪಿಸುವುದು.
ವ್ಯಕ್ತಿ ಸಂದರ್ಶನದಲ್ಲಿ ಅಗತ್ಯ ಮಾಹಿತಿ ಸಂಗ್ರಹಿಸುವುದು. ವ್ಯಕ್ತಿಯ ಪೂರ್ವಾಪರಗಳನ್ನು ತಿಳಿದು ಸಂದರ್ಶನ ಪ್ರಶ್ನೆಗಳನ್ನು ಸಿದ್ದಪಡಿಸಿಕೊಳ್ಳುವುದು.
ಸ್ಥಳ/ಘಟನೆಯ ಪರಿಚಯದಲ್ಲಿ ಅದಕ್ಕೆ ಪೂರಕ ಮಾಹಿತಿಗಳನ್ನು ಕಲೆಹಾಕುವುದು.
ತಪ್ಪು ಮಾಹಿತಿ ನೀಡುವುದನ್ನು ತಡೆಯುವುದು.
ವಿವಿಧ ಮೂಲಗಳಿಂದ ಸಂಗ್ರಹಿಸಿದ ಸುದ್ದಿ/ವಿಷಯಗಳನ್ನು ಲೈವ್‌ಗೆ ಮುಂಚಿತವಾಗಿ ಪರಿಶೀಲಿಸುವುದು.
ವ್ಯಕ್ತಿಯ ತೇಜೋವಧೆ/ ಹಕ್ಕುಗಳ ಉಲ್ಲಂಘನೆ ಆಗುವುದನ್ನು ತಡೆಯುವುದು.
ಪ್ರಸ್ತುತ ವಿದ್ಯಮಾನಗಳಿಗೆ ಸಂಬಂಧಿಸಿದ ಹೊಸ ಶೈಲಿಯ ಸುದ್ದಿಯನ್ನು ಸೃಜಿಸುವುದು. ಆ ಮೂಲಕ ವೀಕ್ಷಕರ ಸಂಖ್ಯೆ ಹೆಚ್ಚುವಂತೆ ಮಾಡುವುದು.
ಅಂತರಜಾಲ ಸುದ್ದಿಗಳ ಸತ್ಯಾಸತ್ಯತೆ ತಿಳಿದು ಪ್ರಸಾರಕ್ಕೆ ಆಯ್ಕೆ ಮಾಡಿಕೊಳ್ಳುವುದು.
ನಿರ್ದಿಷ್ಟ ಸಮಯದೊಳಗೆ ಸುದ್ದಿ/ಮಾಹಿತಿಯನ್ನು ಓದುವುದು ಮತ್ತು ಪ್ರಸ್ತುತಿ ಪಡಿಸುವುದು. 
ಬೃಹತ್ ಪ್ರಮಾಣದಲ್ಲಿ ಒಳಬರುವ ಡಾಟಾವನ್ನು ವಿಂಗಡಿಸುವುದು, ಸಂಸ್ಕರಿಸುವುದು ಮತ್ತು ಆಧ್ಯತೆಗೆ ತಕ್ಕಂತೆ ಆಯ್ಕೆ ಮಾಡಿಕೊಂಡು ಪ್ರಸ್ತುಪಡಿಸುವುದು.
- ಆರ್.ಬಿ.ಗುರುಬಸವರಾಜ ಹೊಳಗುಂದಿ
                               

ಅರೋರಾ ಕಂಡೀರಾ! Arorea

ದಿನಾಂಕ 22-9-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.
ಅರೋರಾ ಕಂಡೀರಾ!


ಅರೋರಾ ಕಂಡಿರಾ!

ಕೆಲವೊಮ್ಮೆ ಸಂಜೆಯ ವೇಳೆ ಆಕಾಶದಲ್ಲಿ ಮಾಂತ್ರಿಕ ಪ್ರದರ್ಶನ ಏರ್ಪಟ್ಟಿರುತ್ತದೆ. ಸಂಜೆಯ ಆಗಸದಲ್ಲಿ ಬಣ್ಣಬಣ್ಣದ ಮೋಡಗಳ ಚಿತ್ತಾರವನ್ನು ಕಂಡಿದ್ದಿÃರಾ? ನೋಡಲು ಬಹು ಸುಂದರವಾಗಿರುತ್ತದೆ ಅಲ್ಲವೇ? ಬಣ್ಣ ಬಣ್ಣದ ಮೋಡಗಳಲ್ಲಿ ವಿವಿಧ ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಕಲ್ಪಿಸಿಕೊಂಡು ಅವುಗಳನ್ನು ನೋಡುವುದೇ ಒಂದು ಸಂಭ್ರಮ. ಇಂತಹ ಸನ್ನಿವೇಶಗಳು ಅನಿರೀಕ್ಷಿತವಾಗಿ ಘಟಿಸುತ್ತವೆ. ಬೆಳಕಿನ ವರ್ಣ ವಿಭಜನೆಯಿಂದದ ಇಂತಹ ನೈಸರ್ಗಿಕ ವಿದ್ಯಮಾನಗಳನ್ನು ನೋಡಿ ಸವಿಯತ್ತೆÃವೆ. ಧ್ರುವ ಪ್ರದೇಶಗಳಲ್ಲಿ ಇಂತಹ ಇನ್ನೊಂದು ವೈವಿಧ್ಯಮಯ ವಿದ್ಯಮಾನ ಜರುಗುತ್ತದೆ. ಅದೇ ಅರೋರಾ. ಈ ಅರೋರಾದ ಬಗ್ಗೆ ತಿಳಿಯುವ ಕುತುಹಲವಿದ್ದರೆ ಮುಂದೆ ಓದಿ.
ಅರೋರಾ ಎಂದರೆ,,,,,,
ಧ್ರುವ ಪ್ರದೇಶಗಳಲ್ಲಿ ರಾತ್ರಿಯ ವೇಳೆ ಆಗಸದಲ್ಲಿ ಕಾಣಬರುವ ವರ್ಣರಂಜಿತ ಬೆಳಕಿನಾಟವೇ ಅರೋರಾ. ಇದೊಂದು ನೈಸರ್ಗಿಕ ವಿದ್ಯಮಾನವಾಗಿದ್ದು, ಇದನ್ನು ಅರೋರಾ ಬೋರಿಯಾಲಿಸ್ ಎಂತಲೂ ಕರೆಯುತ್ತಾರೆ. ಅರೋರಾ ಸಾಮಾನ್ಯವಾಗಿ ಹಸಿರು ಬಣ್ಣದ ಹೊಳಪಿನಿಂದ ಕೂಡಿರುತ್ತದೆ. ಕೆಲವೊಮ್ಮೆ ತಿಳಿಕೆಂಪು ಬಣ್ಣವೂ ಸಹ ಇದರಲ್ಲಿ ಕೂಡಿರುತ್ತದೆ. ಮೊದಲ ನೋಟಕ್ಕೆ ಬೇರಾವುದೇ ದಿಕ್ಕಿನಲ್ಲಿ ಜರುಗುವ ಸೂರ್ಯೋದಯದಂತೆ ಭಾಸವಾಗುತ್ತದೆ. ಅರೋರಾ ಬೋರಿಯಾಲಿಸನ್ನು ತೆಂಕಣ ಬೆಳಕು ಎಂತಲೂ ಕರೆಯುತ್ತಾರೆ. 
ಬಣ್ಣದ ಬೆಳಕನ್ನು ಚೆಲ್ಲುತ್ತಿರುವ ಕುಂಡದಂತೆ ಅಥವಾ ಪೂರ್ವದಿಂದ ಪಶ್ಚಿಮಕ್ಕೆ ಕಟ್ಟಿರುವ ಒಂದು ಬಣ್ಣದ ಪರದೆಯಂತೆ ಅರೋರಾವು ಗೋಚರಿಸುತ್ತದೆ. ಕೆಲವೊಮ್ಮೆ ಇವು ಆಗಸದಲ್ಲಿ ದಪ್ಪನಾಗಿ ಎಳೆದಿರುವ ಸ್ಥಿರ ವಕ್ರ ರೇಖೆಗಳಂತೆ ಕಂಡರೆ, ಕೆಲವು ಸಲ ಅರೋರಾಗಳು ಕ್ಷಣಕ್ಷಣಕ್ಕೂ ಆಕಾರ ಬದಲಿಸುತ್ತವೆ. ಪ್ರತಿ ಬಣ್ಣದ ಪರದೆಯು ಕೆಲವಾರು ಸಮಾನಾಂತರ ರೇಖೆಗಳನ್ನು ಹೊಂದಿದ್ದು ಈ ಗೆರೆಗಳು ಆ ಕ್ಷೇತ್ರದ ಕಾಂತೀಯ ಗೆರೆಗಳಿಗೆ ಅನುಗುಣವಾಗಿಯೇ ಇರುತ್ತವೆ. ಇದರಿಂದಾಗಿ ಅರೋರಾಗಳ ಆಕಾರವು ಭೂಮಿಯ ಕಾಂತತ್ವದ ಮೇಲೆ ನಿರ್ಧರಿಸಲ್ಪಡುತ್ತದೆಂದು ತಿಳಿಯಲಾಗಿದೆ. ಧ್ರುವಪ್ರದೇಶಗಳಲ್ಲಿ ಆರೋರಾದ ಉಗಮವು ಅತಿ ಸಾಮಾನ್ಯ.
ಅರೋರಾ ಹೀಗೆ ಉಂಟಾಗುತ್ತದೆ
ಭೂಮಿಯ ವಾತಾವರಣದ ಮೇಲ್ಪದರದಲ್ಲಿರುವ ಪರಮಾಣುಗಳಿಗೆ ಕಾಂತಗೋಲದಲ್ಲಿನ ವಿದ್ಯುತ್ಪೆçÃರಿತ ಧನ ಅಥವಾ ಋಣ ಆಯಾನುಗಳು ಢಿಕ್ಕಿ ಹೊಡೆದಾಗ ಅರೋರಾ ಉಂಟಾಗುತ್ತದೆ. ಸೂರ್ಯನ ಮಧ್ಯಭಾಗದಲ್ಲಿನ ಸರಾಸರಿ ತಾಪವು 15 ದಶಲಕ್ಷ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇದು ಕೆಲವು ವೇಳೆ ಏರಿಳಿತವಾಗುತ್ತದೆ. ಸೌರಜ್ವಾಲೆಗಳು ಸೌರಮಾರುತಗಳು ಎಂದು ಕರೆಯಲ್ಪಡುವ ಪ್ಲಾಸ್ಮಾ ಕಣಗಳನ್ನು ಅಂತರಿಕ್ಷಕ್ಕೆ ಹರಿಸುತ್ತವೆ. 
ಸೌರಮಾರುತಗಳು ಗಂಟೆಗೆ 300 ರಿಂದ 1200 ಕಿ.ಮೀ ವೇಗದಲ್ಲಿ ಅಂತರಿಕ್ಷದತ್ತ ಸಾಗುತ್ತವೆ. ವಿದ್ಯುತ್ಪೆçÃರಿತವಾದ ಈ ಕಣಗಳು ಭೂಮಿಯ ವಾತಾವರಣದಲ್ಲಿನ ಅನಿಲಗಳ ಪರಮಾಣುಗಳಿಗೆ ಢಿಕ್ಕಿ ಹೊಡೆದಾಗ ಅವು ಉತ್ತೆÃಜಿತವಾಗುತ್ತವೆ. ಅನಿಲಗಳ ಪರಮಾಣುಗಳು ಸೌರಮಾರುತದಿಂದ ಪಡೆದ ಶಕ್ತಿಯನ್ನು ಬೆಳಕಿನ ರೂಪದಲ್ಲಿ ಹೊರಹಾಕುತ್ತವೆ. ಬೆಳಕಿನ ಈ ಶಕ್ತಿಯು ಆಗಸದಲ್ಲಿ ವರ್ಣರಂಜಿತವಾಗಿ  ಕಾಣಿಸುವುದು. ಇದೇ ಅರೋರಾ. 
ಅರೋರಾ ಬಣ್ಣಬಣ್ಣವೇಕೆ?
ಅರೋರಾ ಗುಲಾಬಿ, ತಿಳಿಗೆಂಪು, ಹಸಿರು, ಹಳದಿ, ನೀಲಿ, ನೇರಳೆ, ಮತ್ತು ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ಕಣಗಳು ಆಮ್ಲಜನಕದೊಂದಿಗೆ ಘರ್ಷಿಸಿದಾಗ ಹಳದಿ ಮತ್ತು ಹಸಿರು ಬಣ್ಣ ಉತ್ಪತ್ತಿಯಾಗುತ್ತದೆ. ಸಾರಜನಕದೊಂದಿಗೆ ಘರ್ಷಿಸಿದಾಗ ಕೆಂಪು, ನೇರಳೆ ಮತ್ತು ಸಾಂದರ್ಬಿಕವಾಗಿ ನೀಲಿ ಬಣ್ಣ ಉತ್ಪತ್ತಿ ಮಾಡುತ್ತದೆ. ಬಣ್ಣಗಳೂ ಸಹ ಎತ್ತರದ ಮೂಲಕ ಪ್ರಭಾವಿತವಾಗುತ್ತದೆ. ಹಸಿರು ಮತ್ತು ಕೆಂಪು ಬಣ್ಣವು ವಿಶಿಷ್ಠವಾಗಿ 241 ಕಿ.ಮೀ(150 ಮೈಲು) ದೂರದವರೆಗೂ ಗೋಚರಿಸಿದರೆ, ನೀಲಿ ಮತ್ತು ನೇರಳೆ ಬಣ್ಣವು 96.5 ಕಿ.ಮೀ(60 ಮೈಲಿ) ದೂರದವರೆಗೆ ಗೋಚರಿಸುತ್ತದೆ.
ಅರೋರಾ ವೀಕ್ಷಣೆಗೆ ಸೂಕ್ತ ಸಮಯ
ಅರೋರಾ ನೋಡಲು ಚಳಿಗಾಲ ಸೂಕ್ತ ಕಾಲ. ಈ ಸಮಯದಲ್ಲಿ ಮಾಲಿನ್ಯದ ಮಟ್ಟ ಕಡಿಮೆ ಇದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಸೆಪ್ಟಂಬರ್, ಅಕ್ಟೊÃಬರ್, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಅರೋರಾ ವೀಕ್ಷಿಸಲು ಉತ್ತಮ ಸಮಯ. ಸೌರಜ್ವಾಲೆಗಳು ಹೆಚ್ಚು ಸಕ್ರಿಯವಾದ ಎರಡು ದಿನಗಳ ನಂತರ ಅರೋರಾ ಹೆಚ್ಚು ಪ್ರಕಾಶಮಾನವಾಗಿರುತ್ತದೆ.
ಅರೋರಾ ಎಲ್ಲೆಲ್ಲಿ ನೋಡಬಹುದು?
ಅರೋರಾ ನೋಡಲು ಅತ್ಯುತ್ತಮ ಸ್ಥಳವೆಂದರೆ ಅಮೇರಿಕಾದ ಅಲಾಸ್ಕಾ ಮತ್ತು ಉತ್ತರ ಕೆನಡಾ. ಇವು ಹೆಚ್ಚು ವಿಶಾಲ ಪ್ರದೇಶಗಳಾಗಿದ್ದು ಯಾವಾಗಲೂ ಅರೋರಾ ನೋಡುವುದು ಸುಲಭವಲ್ಲ. ನಾರ್ವೆ, ಸ್ವಿÃಡನ್ ಮತ್ತು ಫಿನ್‌ಲ್ಯಾಂಡ್‌ಗಳು ಉತ್ತಮ ವೀಕ್ಷಣಾ ತಾಣಗಳಾಗಿವೆ. ಸೌರಸ್ಪೊÃಟವು ಸಕ್ರಿಯವಾಗಿದ್ದಾಗ ದಕ್ಷಿಣದ ಸ್ಕಾಟ್‌ಲ್ಯಾಂಡ್ ಮತ್ತು ಉತ್ತರದ ಇಂಗ್ಲೆಂಡ್‌ನಲ್ಲೂ ಅರೋರಾವನ್ನು ಕಾಣಬಹುದು. ಅಪರೂಪದ ಸಂದರ್ಭಗಳಲ್ಲಿ ದಕ್ಷಿಣದ ಇಂಗ್ಲೆಂಡಿನಲ್ಲೂ ಕಾಣಬಹುದು. 
ಇತರೆ ಗ್ರಹಗಳಲ್ಲೂ ಅರೋರಾ !
ನಮ್ಮ ಸೌರಮಂಡಲದಲ್ಲಿ ಅನಿಲ ದೈತ್ಯರು ಎನಿಸಿಕೊಂಡ ಗುರು, ಶನಿ, ಯುರೇನೆಸ್, ನೆಪ್ಚೂನ್‌ಗಳಲ್ಲಿ ದಟ್ಟ ವಾಯುಮಂಡಲ ಮತ್ತು ಬಲವಾದ ಕಾಂತೀಯ ಕ್ಷೆÃತ್ರವಿದೆ. ಹಾಗಾಗಿ ಈ ಅನಿಲದೈತ್ಯ ಗ್ರಹಗಳಲ್ಲೂ ಅರೋರಾ ಕಾಣಬಹುದು. ಆದರೆ ಇಲ್ಲಿನ ಅರೋರಾ ಭೂಮಿಗಿಂತ ಸ್ವಲ್ಪ ಭಿನ್ನ ಸ್ಥಿತಿಯಲ್ಲಿ ರೂಪುಗೊಳ್ಳುತ್ತದೆ.
ಅರೋರಾದ ಇತಿಹಾಸ 
ಶತಶತಮಾನಗಳಿಂದಲೂ ಬೆಳಕು ಊಹಾಪೋಹ, ಮೂಢನಂಬಿಕೆ ಮತ್ತು ವಿಸ್ಮಯಗಳ ಮೂಲವಾಗಿತ್ತು. 30,000 ವರ್ಷಗಳ ಇತಿಹಾಸವಿರುವ ಫ್ರಾನ್ಸ್ನ ಗುಹೆಗಳಲ್ಲಿನ ವರ್ಣಚಿತ್ರಗಳು ಬೆಳಕಿನ ನೈಸರ್ಗಿಕ ವಿದ್ಯಮಾನದ ವಿವರಣೆ ಹೊಂದಿವೆ ಎಂದು ಭಾವಿಸಲಾಗಿದೆ. ಧ್ರುವ ಪ್ರದೇಶಗಳಲ್ಲಿ ಅರೋರಾದಂತಹ ಬೆಳಕು ಯುದ್ದ ಅಥವಾ ವಿನಾಶದ ಮುಂದಾಲೋಚನೆ ಎಂದು ಭಾವಿಸಲಾಗಿತ್ತು. ಅರಿಸ್ಟಾಟಲ್, ಡೆಸ್ಕಾರ್ಟೆ, ಗಯಟೆ, ಹ್ಯಾಲಿ ಮುಂತಾದ ಖಗೋಳಶಾಸ್ತçಜ್ಞರು ತಮ್ಮ ಕೃತಿಗಳಲ್ಲಿ ಅರೋರಾ ಬೆಳಕಿನ ಬಗ್ಗೆ ಉಲ್ಲೆÃಖೀಸಿದ್ದಾರೆ. 1616 ರಷ್ಟು ಮುಂಚೆ ಗೆಲಿಲಿಯೋ ಗೆಲಿಲಿ ಅರೋರಾ ಬೋರೊಯಾಲಿಸ್ ಎಂಬ ಹೆಸರನ್ನು ಬಳಸಿದ್ದಾರೆ. ರೋಮನ್ ಪುರಾಣ ದೇವತೆಯಾದ ಅರೋರಾ ಮತ್ತು ಗ್ರಿÃಕ್‌ನ ಉತ್ತರದ ಗಾಳಿಯಾದ ಬೋರಾಸ್ ಹೆಸರಿನಲ್ಲಿ ಅರೋರಾ ಬೋರೊಯಾಲಿಸ್ ಎಂಬ ಹೆಸರು ಬಂದಿದೆ ಎನ್ನುತ್ತಾರೆ.
ಆರ್.ಬಿ.ಗುರುಬಸವರಾಜ


ಸವಾಲಾದಿರಲಿ ಮಕ್ಕಳ ಸಂಕೋಚ ಸ್ವಭಾವ Shyness in Children

ದಿನಾಂಕ 18-9-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.



ಸವಾಲಾದಿರಲಿ ಮಕ್ಕಳ ಸಂಕೋಚ ಸ್ವಭಾವ

ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಕನಸು ಮನೆಗೆ ಯಾರಾದರೂ ಅತಿಥಿಗಳು ಬಂದರೆ ಸಾಕು, ತಂದೆ ತಾಯಿಗೆ ಅಂಟಿಕೊಂಡುಬಿಡುತ್ತಾಳೆ. ಯಾರೊಂದಿಗೂ ಮಾತನಾಡುವುದಿಲ್ಲ. ಅಳುಮೋರೆ ಹಾಕಿಕೊಂಡು ಪೆಚ್ಚಾಗಿರುತ್ತಾಳೆ. ಅತಿಥಿಗಳು ಹೋಗಿ ಕೆಲ ಕಾಲದ ನಂತರ ಮೊದಲಿನಂತಾಗುತ್ತಾಳೆ. ಸಭೆ ಸಮಾರಂಭಗಳಲ್ಲಂತೂ ಯಾವಾಗಲೂ ತಾಯಿಗೆ ಅಂಟಿಕೊಂಡೇ ಇರುತ್ತಾಳೆ. ಕನಸುವಿನ ಈ ವರ್ತನೆ ತಂದೆ ತಾಯಿಗಳಿಗೆ ಬೇಸರ ತಂದಿದೆ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ.
ಶಾಲೆಯಲ್ಲಿ ಕಲಿತ ಹಾಡು, ಮಗ್ಗಿ, ಇತ್ಯಾದಿಗಳನ್ನು ತಂದೆ-ತಾಯಿ ಕೇಳದಿದ್ದರೂ ಪಟಪಟನೇ ಹೇಳುವ ಶಶಾಂಕ ಬಂಧುಗಳ ಎದಿರು ಹೇಳಲು ತಡವರಿಸುತ್ತಾನೆ. ಒಂದೊಂದು ಅಕ್ಷರ/ಪದ ಹೇಳಲು ಕಷ್ಟಪಡುತ್ತಾನೆ. ಶಾಲೆಯಲ್ಲಿ ಸ್ನೆÃಹಿತರ ಜೊತೆಗೆ ಸದಾ ಮಾತನಾಡುವ ಶಶಾಂಕ ಶಿಕ್ಷಕರ ಮಾತಿಗೆ ಪ್ರತಿಕ್ರಿಯೆ ನೀಡುವುದೇ ಇಲ್ಲ. ಸದಾ ಮೌನಿಯಾಗಿರುತ್ತಾನೆ. 
ಇದು ಕೇವಲ ಕನಸು ಮತ್ತು ಶಶಾಂಕರ ಸಮಸ್ಯೆಯಲ್ಲ. ಬಹುತೇಕ ಮಕ್ಕಳು ಇಂತಹ ವರ್ತನೆ ತೋರುತ್ತಿರುತ್ತಾರೆ. ಪರಿಚಯವಿಲ್ಲದ ಸಂದರ್ಭಗಳಲ್ಲಿ ಕೆಲವು ಮಕ್ಕಳು ಸಂವಹನ ಮಾಡಲು ಹಿಂಜರಿಯುತ್ತಾರೆ. ಅದನ್ನೆÃ ನಾವು ಸಂಕೋಚ ಅಥವಾ ನಾಚಿಕೆ ಎನ್ನುತ್ತೆÃವೆ. ಮಗುವಿನಲ್ಲಿ ಇಂತಹ ವರ್ತನೆ ಪೋಷಕರಿಗೆ ಗಾಬರಿ ಹುಟ್ಟಿಸಬಹುದು. ಸ್ನೆÃಹಪರರು ಮತ್ತು ಒಡನಾಡಿಗಳೊಂದಿಗೆ ಮಾತ್ರ ಮುಕ್ತವಾಗಿ ಸಂವಹನ ಮಾಡುವ ಮಕ್ಕಳು, ಹೊಸ ಸನ್ನಿವೇಶ ಅಥವಾ ಹೊಸಬರೊಂದಿಗೆ ವ್ಯವಹರಿಸಲು ಹಿಂಜರಿಯುತ್ತದೆ. 
ಮಗು ಬೆಳೆದು ದೊಡ್ಡದಾದಂತೆ ಪರಿಚಿತ ಪ್ರಪಂಚವು ವಿಸ್ತರಿಸುತ್ತದೆ. ವಿವಿಧ ಜನರನ್ನು ಭೇಟಿಯಾಗುವ, ಮಾತಮಾಡುವ, ವ್ಯವಹರಿಸುವ ಸಂದರ್ಭಗಳು ಪದೇ ಪದೇ ಜರುಗುತ್ತವೆ. ಇದರಿಂದಾಗಿ ಮಗು ನಿಧಾನವಾಗಿ ಸಂಕೋಚವನ್ನು ಕಳೆದುಕೊಂಡು ಮುಕ್ತವಾಗಿ ವ್ಯವಹರಿಸಲು ಪ್ರಾರಂಭಿಸುತ್ತದೆ. ಹೆತ್ತವರ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಮಗು ಕ್ರಮೇಣ ಸ್ವಾವಲಂಬಿಯಾಗಲು ಪ್ರಯತ್ನಿಸುತ್ತದೆ. ಮಗುವಿನ ಪರಿಕಲ್ಪನೆ ಮತ್ತು ವಿಷಯಗಳ ಪ್ರಪಂಚ ವಿಸ್ತರಿಸುತ್ತದೆ. ಸಾಮಾಜೀಕರಣದ ಪ್ರಭಾವದಿಂದಾಗಿ ಮಗು ಎಲ್ಲರೊಂದಿಗೆ ಬೆರೆಯುವ ಗುಣ ಅಭಿವೃದ್ದಿಪಡಿಸಿಕೊಳ್ಳುತ್ತದೆ. 
ಕೆಲವು ಮಕ್ಕಳು ಎಲ್ಲಾ ವಯಸ್ಸಿನಲ್ಲೂ ನಾಚಿಕೆ ಪಡುತ್ತಾರೆ. ತೀಕ್ಷ÷್ಣವಾದ ಸ್ವಭಾವದಿಂದ ಬಳಲುವ ಮಕ್ಕಳ ಸಂಕೋಚ/ನಾಚಿಕೆ ಪ್ರೌಢಾವಸ್ಥೆಯಲ್ಲೂ ಮುಂದುವರೆಯಬಹುದು. ಇದರಿಂದ ಮಕ್ಕಳು ಪ್ರತಿಯೊಂದು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಾರೆ. ಸಂಕೋಚವು ಮಗುವಿನ ಸಾಮರ್ಥ್ಯಾಭಿವೃದ್ದಿಯ ಮೇಲೆ ನೇರ ಪ್ರಭಾವ ಬೀರುತ್ತದೆ. ಯಾವ ಮಗು ಮುಕ್ತವಾಗಿ ಎಲ್ಲರೊಂದಿಗೂ ಬೆರೆತು ಸಂವಹನ ಮಾಡುತ್ತದೆಯೋ ಆ ಮಗುವಿನಲ್ಲಿ ಸಾಮಾಜಿಕ, ಭಾವನಾತ್ಮಕ ಮತ್ತು ಶೈಕ್ಷಣಿಕ ಸಾಮರ್ಥ್ಯಗಳು ಬೇಗನೇ ವೃದ್ದಿಯಾಗುತ್ತವೆ. ಹಾಗಾಗಿ ಪಾಲಕರು ಪ್ರಾರಂಭಿಕ ಹಂತದಲ್ಲಿ ಸಂಕೋಚವನ್ನು ಗುರುತಿಸಿ, ಸೂಕ್ತ ಮಾರ್ಪಾಡುಗಳೊಂದಿಗೆ ಮಗುವಿನ ಸಾಮರ್ಥ್ಯಾಭಿವೃದ್ದಿಗೆ ಸಹಕರಿಸಬಹುದು.

ಸಂಕೋಚದ ಚಿಹ್ನೆಗಳು :
ಹೊಸಬರನ್ನು ಅನುಮಾನದಿಂದ ನೋಡುವುದು.
ಇತರರ ಸುತ್ತಲೂ ವಿಚಿತ್ರ ಭಾವನೆಯನ್ನು ಅನುಭವಿಸುವುದು.
ಸದಾ ಅಸುರಕ್ಷತೆಯ ಮತ್ತು ಅಹಿತಕರ ಭಾವನೆ ಅನುಭವಿಸುತ್ತಿರುವುದು.
ಅಂಜುಬುರುಕತನ ಭಾವನೆ.
ನಾಚಿಕೆ ಸ್ವಭಾವದ ಪ್ರದರ್ಶನ.
ಸಮರ್ಥಿಸಿಕೊಳ್ಳಲು ನಿಷ್ಕಿçÃಯವಾದ ಕಾರಣಗಳ ಪ್ರದರ್ಶನ.
ಭೌತಿಕ ಸಂವೇದನೆಗಳ ಪ್ರದರ್ಶನ.
ವೇಗವಾಗಿ ಉಸಿರಾಡುವಿಕೆ.
ಮುಖ ಮತ್ತು ಕೈಗಳಲ್ಲಿ ಅನಗತ್ಯ ಬೆವರು ಒಸರುವಿಕೆ.
ವಿಶ್ವಾಸಿಗರು ಅಥವಾ ಗೋಡೆ ಹಿಂದೆ ಅವಿತುಕೊಳ್ಳುವುದು.
ಸಂಕೋಚಕ್ಕೆ ಕಾರಣಗಳು:
ಅನಿವಂಶೀಯತೆ. 
ಭಯದ ವಾತಾವರಣ.
ಕಲಿಕೆಯ ನಡವಳಿಕೆಗಳ ಮೇಲೆ ಆತ್ಮವಿಶ್ವಾಸ ಇಲ್ಲದಿರುವುದು.
ಕೌಟುಂಬಿಕ ಸಮಸ್ಯೆಗಳ ಕೆಟ್ಟ ಪರಿಣಾಮ
ಪಾಲಕರ ಅಸಮಂಜಸ ನಡವಳಿಕೆಗಳು.
ಕುಟುಂಬದಲ್ಲಿ ಅಸುರಕ್ಷತೆ ಭಾವನೆ.
ಸಾಮಾಜಿಕ ಸಂವಹನ ಕೌಶಲ್ಯಗಳ ಕೊರತೆ.
ಪಾಲಕರು/ಪೋಷಕರ ಕಠಿಣವಾದ ವಿಮರ್ಶೆ .
ಟೀಕೆ ಮತ್ತು ಅಪನಿಂದನೆಗಳು.
ವೈಫಲ್ಯದ ಭಯ.
ಕುಟುಂಬದಲ್ಲಿ ಗಮನದ ಕೊರತೆ.
ಗಮನಾರ್ಹ ವ್ಯಕ್ತಿಗಳಿಂದ ಕಿರುಕುಳ ಅಥವಾ ಹಿಂಸೆ.
ಅಂತರ್ಮುಖಿಗಳಾಗಿರುವುದು.

ಸಂಕೋಚದ ಕೆಲವು ಲಾಭಗಳು: 
ಸಂಕೋಚದಿಂದ ಮಗು ಕೇವಲ ತೊಂದರೆಗೆ ಒಳಗಾಗುವುದಿಲ್ಲ. ಬದಲಾಗಿ ಕೆಲವು ಲಾಭಗಳನ್ನೂ ಅನುಭವಿಸುತ್ತದೆ. ಅವುಗಳೆಂದರೆ ಹೊಸಬರನ್ನು ನಂಬಿ ತೊಂದರೆಗೆ ಸಿಲುಕದೇ ಇರುವುದು, ಸದಾ ಜಾಗೃತಿಯಲ್ಲಿರುವುದು, ವಾತಾವರಣಕ್ಕೆ ಅನುಗುಣವಾಗಿ ವರ್ತಿಸುವುದು, ವರ್ತನೆಯಲ್ಲಿ ಸದಾ ಜಾಗೃತಿಯಿಂದ ಇರುವುದು, ಉತ್ತಮವಾಗಿ ಕೆಲಸ ಮಾಡಬೇಕೆಂಬ ಹಂಬಲ ಹೆಚ್ಚುವುದು, ತಪ್ಪು ಮಾಡಲೇಬಾರದೆಂಬ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವುದು. ಹೀಗೆ ಅನೇಕ ವ್ಯಕ್ತಿಗತ ಲಾಭಗಳು ದೊರೆಯುತ್ತವೆ.

ಬದಲಾಗಬೇಕಾದ ಪೋಷಕರ ವರ್ತನೆಗಳು :
ನಾಚಿಕೆಗೇಡಿ, ಸಂಕೋಚ ಸ್ವಭಾವ ಎಂದು ಮಗುವಿಗೆ ಹಣೆಪಟ್ಟಿ ಹಚ್ಚಬೇಡಿ.
ನಾಚಿಕೆಪಡಿಸುವಂತಹ ಸಂದರ್ಭಗಳಿಂದ ಮಗುವನ್ನು ದೂರವಿಡಿ.
ಮಗು ನಾಚಿಕೆ/ಸಂಕೋಚಪಡುವಾಗ ಟೀಕಿಸಬೇಡಿ ಅಥವಾ ಗೇಲಿ ಮಾಡಬೇಡಿ. ಬದಲಿಗೆ ಮಗುವಿಗೆ ಬೆಂಬಲ, ಅನುಭೂತಿ ನೀಡಿ.
ಭಯ ರಹಿತ ವಾತಾವರಣ ನಿರ್ಮಿಸಿ. ಸಂಕೋಚದ ಕಾರಣಗಳ ಬಗ್ಗೆ ಮಾತನಾಡಲು ಪ್ರೊÃತ್ಸಾಹಿಸಿ ಅಥವಾ ಅವಕಾಶ ನೀಡಿ. 
ಮಗುವಿನಲ್ಲಿ ಆತಂಕ ಹಾಗೂ ದುಗುಡ ಹೆಚ್ಚಿಸಬೇಡಿ.  
ಮಗುವನ್ನು ಒಬ್ಬಂಟಿಯಾಗಿ ಬಿಟ್ಟು ಹೋಗುವ ಸಂದರ್ಭ ಬಂದಾಗ ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕಲಿಸಿ.
ಪೋಷಕರ ತಂತ್ರಗಾರಿಕೆ :
ನೀವು ಮಗುವಾಗಿದ್ದಾಗ ಸಂಕೋಚ ಅನುಭವಿಸಿದಾಗ ಅದನ್ನು ಹೇಗೆ ಎದುರಿಸಿದಿರಿ ಎಂಬುದನ್ನು ಮಗುವಿಗೆ ತಿಳಿಸಿ ಹೇಳಿ.
ಸಂಕೋಚಪಡದೇ ಇರುವಂತಹ ಅನೇಕ ಪ್ರಯೋಜನಗಳ ಬಗ್ಗೆ ಮಗುವಿಗೆ ತಿಳಿಸಿ. ನಿಮ್ಮ ಜೀವನದ ಸ್ವಂತ ಉದಾಹರಣೆ ತಿಳಿಸಿ.
ಸಭೆ, ಕಾರ್ಯಕ್ರಮಗಳು, ಸಮಾರಂಭಗಳು ಇತ್ಯಾದಿಗಳಿಗೆ ಮಗುವನ್ನು ಮನೆಯಿಂದ ಹೊರ ಕರೆದೊಯ್ಯಿರಿ. 
ಪರಿಚಯವಿಲ್ಲವರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಹೇಳಿಕೊಡಿ. 
ಮನೆಗೆ ಆಗಾಗ ಅತಿಥಿಗಳನ್ನು, ಸ್ನೆÃಹಿತರನ್ನು, ಬಂಧುಗಳನ್ನು ಆಹ್ವಾನಿಸಿ, ಮಗುವಿಗೆ ಪರಿಚಯ ಮಾಡಿಕೊಡಿ. ಅವರ ಮತ್ತು ನಿಮ್ಮ ಸಂಬಂಧದ ಬಗ್ಗೆ ಮಗುವಿಗೆ ವಿವರವಾಗಿ ತಿಳಿಸಿ.
ಮನೆಗೆ ಬಂದ ಅತಿಥಿಗಳನ್ನು ಮಾತನಾಡಿಸಲು ಮಗುವಿಗೆ ತಿಳಿಸಿ. 
ಹೊಸ ವ್ಯಕ್ತಿಗಳನ್ನು ಮಗು ಮಾತನಾಡಿಸಿದಾಗ ಮಗುವನ್ನು ಅಭಿನಂದಿಸಿ. 
ಮಗುವಿಗೆ ಭಾವನಾತ್ಮಕ ಬೆಂಬಲ ನೀಡಿ. 
ಹೊಸ ವಾತಾವರಣದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂಬ ಬಗ್ಗೆ ತಿಳುವಳಿಕೆ ನೀಡಿ.
ಮುಕ್ತವಾಗಿ ಮಾತನಾಡಲು ಅವಕಾಶಗಳನ್ನು ಸೃಷ್ಟಿಸಿ.
ಸಾಮಾಜಿಕ ಕೌಶಲ್ಯಗಳ ಕುರಿತ ಆತ್ಮವಿಶ್ವಾಸ ಮೂಡಿಸಿ.
ನಿಮ್ಮ ಕೋಪವನ್ನು ಮೊದಲು ಕಡಿಮೆ ಮಾಡಿಕೊಂಡು ನಂತರ ಮಗುವಿನ ಕೋಪವನ್ನು ಕಡಿಮೆ ಮಾಡಿ.
ಬದಲಾವಣೆ ಅಥವಾ ಪರಿವರ್ತನೆ ಜಗದ ನಿಯಮ ಎಂಬುದನ್ನು ಮಗುವಿಗೆ ಮನವರಿಕೆ ಮಾಡಿಕೊಡಿ.
ವೈಫಲ್ಯ ಎದುರಿಸುವುದನ್ನು ಕಲಿಸಿ.
ಧೈರ್ಯ ಸ್ಥೆöÊರ್ಯ ತುಂಬಿ ಆತ್ಮವಿಶ್ವಾಸ ಬೆಳೆಸಿ.
ಅಪಾಯಕಾರಿ ಸಂದರ್ಭಗಳಿಂದ ಮಗು ದೂರವಿರಲು ತಿಳಿಸಿ.

ಆರ್.ಬಿ.ಗುರುಬಸವರಾಜ