November 10, 2018

ಆರ್ಕಿಡ್​ಗಳ ಬಣ್ಣದ ಲೋಕ/Orchids

ದಿನಾಂಕ 10-11-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಆರ್ಕಿಡ್​ಗಳ ಬಣ್ಣದ ಲೋಕ



ಹೂಗಳನ್ನು ನೋಡಿದಾಗ ಮನಸ್ಸು ಕೂಡ ಹೂವಿನಂತೆ ಅರಳುವುದು ಸಹಜ. ಬಣ್ಣ ಹಾಗೂ ಸುವಾಸನೆಯಿಂದ ಎಲ್ಲರನ್ನೂ ಆಕರ್ಷಿಸುವ ಹೂವುಗಳನ್ನು ಇಷ್ಟಪಡದವರು ಯಾರೂ ಇರಲಿಕ್ಕಿಲ್ಲ. ಅವುಗಳ ಸುವಾಸನೆಯಂತೂ ಇಡೀ ಪ್ರದೇಶವನ್ನೇ ವ್ಯಾಪಿಸಿ ಮೋಹಕಗೊಳಿಸುತ್ತದೆ. ಅದೆಷ್ಟು ಪ್ರಭೇದಗಳು, ಅದೆಷ್ಟು ವಿಭಿನ್ನತೆಗಳು. ಇಂತಿಪ್ಪ ಹೂಗಳ ಲೋಕದಲ್ಲಿಯೇ ಅತ್ಯಂತ ಹೆಚ್ಚು ಪ್ರಭೇದಗಳಿರುವ ಹೂಗಳೆಂದರೆ ಆರ್ಕಿಡ್​ಗಳು.
ಆರ್ಕಿಡ್ ವಿಶೇಷ ಬಗೆಯ ಹೂವು. ವೈವಿಧ್ಯಮಯ ಬಣ್ಣ ಮತ್ತು ಆಕಾರಗಳಿಂದ ಕಣ್ಣು ಮತ್ತು ಮನಸ್ಸಿಗೆ ಮುದ ನೀಡುತ್ತವೆ. ಕನ್ನಡದಲ್ಲಿ ಸೀತಾಳೆ ಹೂವು ಅಥವಾ ಸೀತೆ ಹೂವು ಎಂದು ಕರೆಯಲ್ಪಡುವ ಆರ್ಕಿಡ್​ಗಳನ್ನು ಜಗತ್ತಿನಾದ್ಯಂತ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಸಭೆ ಸಮಾರಂಭಗಳಲ್ಲಿ ವೇದಿಕೆ ಅಂದಗೊಳಿಸಲು ಆರ್ಕಿಡ್​ಗಳನ್ನೇ ಹೆಚ್ಚು ಬಳಸಲಾಗುತ್ತವೆ. ಕೆಲವು ಆರ್ಕಿಡ್​ಗಳನ್ನು ಮನೆಯ ಬಳಿ ಅಲಂಕಾರಕ್ಕಾಗಿಯೂ ಬೆಳೆಸಲಾಗುತ್ತದೆ. ವಿವಿಧ ಬಣ್ಣಗಳ ಕಾಂಬಿನೇಷನ್ ಇವುಗಳ ವೈಶಿಷ್ಟ್ಯ ಒಂದೇ ಒಂದು ಕೊರತೆ ಎಂದರೆ, ಇವುಗಳಲ್ಲಿರುವ ಎಲ್ಲ ಪ್ರಭೇದಗಳು ನಮ್ಮ ಮನೆಯಂಗಳದ ಮಲ್ಲಿಗೆ, ಸಂಪಿಗೆಗಳಂತೆ ಸುವಾಸನೆಭರಿತವಾಗಿರುವುದಿಲ್ಲ. ಅಷ್ಟೇ ಅಲ್ಲ, ಕೆಲ ಆರ್ಕಿಡ್​ಗಳು ದುರ್ವಾಸನೆಯನ್ನೂ ಬೀರುತ್ತವೆ.
ಕಾಡು ಹೂವು ಆರ್ಕಿಡ್: ಜಗತ್ತಿನಾದ್ಯಂತ 35 ಸಾವಿರಕ್ಕಿಂತಲೂ ಹೆಚ್ಚಿನ ಆರ್ಕಿಡ್ ಪ್ರಭೇದಗಳಿರುವುದನ್ನು ಸಸ್ಯಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ಉಷ್ಣ ವಲಯದ ಕಾಡುಗಳಲ್ಲಿ ಇಂತಹ ಆರ್ಕಿಡ್​ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದು. ಭಾರತದ ಈಶಾನ್ಯ ಗಡಿರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯಗಳಲ್ಲಿ ಹೇರಳವಾಗಿ ಬೆಳೆಯುತ್ತವೆ. ಬಹುತೇಕ ಆರ್ಕಿಡ್​ಗಳು ಪರೋಪಜೀವಿಗಳು. ಮರ ಅಥವಾ ಇನ್ನಿತರ  ಕೊಳೆತ ಸಸ್ಯಗಳ ಮೇಲೆ ಬೆಳೆದು, ಅವುಗಳಿಂದಲೇ ಆಹಾರ ಪಡೆದು ಜೀವಿಸುತ್ತವೆ.
ಗಾತ್ರ ವೈವಿಧ್ಯ!: ಆರ್ಕಿಡ್​ಗಳು ವಿವಿಧ ಗಾತ್ರಗಳಲ್ಲಿರುತ್ತವೆ. ಕೆಲವು ಆರ್ಕಿಡ್​ಗಳು ಸೆಂಟಿಮೀಟರ್​ಗಿಂತ ಕಡಿಮೆ ಗಾತ್ರ ಹೊಂದಿದ್ದರೆ ಇನ್ನು ಕೆಲವು ಆರ್ಕಿಡ್​ಗಳು 20 ಮೀಟರ್​ನಷ್ಟು ಉದ್ದಕ್ಕೆ ಬೆಳೆಯಬಲ್ಲವು. ಆರ್ಕಿಡ್​ಗಳು ಎರಡು ಆಯಾಮದ ಸಮಮಿತಿಗೆ ಒಳಪಟ್ಟಿರುತ್ತವೆ. ಅಂದರೆ, ಎರಡೂ ಅಂಚುಗಳನ್ನು ಮಡಿಸಿದರೆ ಸಮಮಿತಿಯ ಅರ್ಧ ಹೂವು ಕಾಣುತ್ತದೆ. ಪಳೆಯುಳಿಕೆ ದಾಖಲೆಗಳ ಪ್ರಕಾರ, ಆರ್ಕಿಡ್​ಗಳು 10 ಕೋಟಿ ವರ್ಷಗಳ ಹಿಂದಿನಿಂದಲೂ ಇರುವುದು ತಿಳಿದುಬಂದಿದೆ. ಕಪ್ಪುಬಣ್ಣವನ್ನು ಹೊರತುಪಡಿಸಿ ಪ್ರತಿಬಣ್ಣದಲ್ಲೂ ಆರ್ಕಿಡ್ ಲಭ್ಯ ಇರುವುದು ವಿಶೇಷ. ಕೆಲವು ಜಾತಿಯ ಆರ್ಕಿಡ್​ಗಳನ್ನು ಆಹಾರ, ಮಸಾಲೆ ಮತ್ತು ಗಿಡಮೂಲಿಕೆ ಔಷಧವಾಗಿ ಮತ್ತು ಸುಗಂಧದ್ರವ್ಯ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ.
ಮಂಕಿ
ಈ ಆರ್ಕಿಡ್ ಮಂಕಿಯ ಮುಖ ಹೋಲುವುದರಿಂದ ಇದಕ್ಕೆ ಮಂಕಿ ಆರ್ಕಿಡ್ ಎಂಬ ಹೆಸರಿದೆ. ಇದು ದಕ್ಷಿಣ ಪೂರ್ವ ಈಕ್ವೆಡಾರ್ ಮತ್ತು ಪೆರು ಮೌಂಟೇನ್ ಅರಣ್ಯ ಪ್ರದೇಶದಲ್ಲಿ ಬೆಳೆಯುತ್ತದೆ. ಇದರ ವೈಜ್ಞಾನಿಕ ಹೆಸರು ಸಿಮಿಯಾನ್. ಇದು ಸಿಟ್ರಸ್ ವಾಸನೆಯನ್ನು ಹೊಂದಿರುತ್ತದೆ ಮತ್ತು ಸಂಪೂರ್ಣ ಅರಳಿದಾಗ ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ.
ಲೇಡಿ ಸ್ಲಿಪ್ಪರ್
ವಿಚಿತ್ರ ನೋಟವನ್ನು ಒಳಗೊಂಡ ಈ ಆರ್ಕಿಡ್ ಸ್ಲಿಪ್ಪರ್ ಆಕಾರದ ಚೀಲಗಳನ್ನು ಹೊಂದಿರುತ್ತದೆ. ಪರಾಗಸ್ಪರ್ಶಕ್ಕಾಗಿ ಚೀಲಗಳನ್ನು ಹೊಂದಿದ್ದು, ಇದಕ್ಕೆ ಕೀಟಗಳನ್ನು ಅಂಟಿಸಿಕೊಳ್ಳುತ್ತವೆ. ಇದು ಭೂ ಪ್ರದೇಶದಲ್ಲಿ ಬೆಳೆಯುವ ಆರ್ಕಿಡ್ ಆಗಿದ್ದು, ಎಲ್ಲ ರೀತಿಯ ಕಡಿಮೆ ಹಾಗೂ ಹೆಚ್ಚು ತಾಪಮಾನದಲ್ಲೂ ಬೆಳೆಯುತ್ತದೆ.
ಡಾನ್ಸಿಂಗ್ ಲೇಡಿ
ಹೆಸರೇ ಸೂಚಿಸುವಂತೆ ಇದು ನೋಡಲು ಸ್ತ್ರೀರೂಪದಲ್ಲಿ ಇರುತ್ತದೆ. ತಿಳಿಹಳದಿ, ಗಾಢ ಹಳದಿ ಮತ್ತು ಕೆಂಪು ಬಣ್ಣಗಳಲ್ಲಿ ಕಾಣುವ ಇದು ನೃತ್ಯ ಮಾಡುವ ಮಹಿಳೆಯಂತೆ ಕಾಣುತ್ತದೆ. ಉಷ್ಣವಲಯದಲ್ಲಿ ಬೆಳೆಯುವ ಇದಕ್ಕೆ ನಿಯಮಿತ ನೀರಿನ ಅವಶ್ಯಕತೆ ಇದೆ. ಇದು ಅತಿಹೆಚ್ಚು ತಾಪಮಾನವನ್ನು ಅಂದರೆ 100 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಸಹಿಸಿಕೊಳ್ಳಬಲ್ಲದು! ಅತ್ಯದ್ಭುತ ಪರಿಮಳ ಹೊಂದಿದ ಇದನ್ನು ಮನೆಯ ಆವರಣದಲ್ಲಿ ಬೆಳೆಯಬಹುದು. ನೋಡಲು ಅತ್ಯಾಕರ್ಷಕವಾಗಿರುತ್ತದೆ.
ಫ್ಲೈಯಿಂಗ್ ಡಕ್
ಹಾರಲು ತಯಾರಾದ ಬಾತುಕೋಳಿಯಂತೆ ಕಾಣುವ ಈ ಆರ್ಕಿಡ್ ಪೂರ್ವ ಮತ್ತು ದಕ್ಷಿಣ ಆಸ್ಟ್ರೇಲಿಯಾದಲ್ಲಿ ಬೆಳೆಯುತ್ತದೆ. ಕ್ಯಾಲೀನಾ ಮೇಜರ್ ಎಂಬ ವೈಜ್ಞಾನಿಕ ಹೆಸರುಳ್ಳ ಇದು ಸುಮಾರು 50 ಸೆಂಟಿಮೀಟರ್ ಉದ್ದ ಇರುತ್ತದೆ. ಇದು ಪರಾಗಸ್ಪರ್ಶಕ್ಕಾಗಿ ಕೀಟಗಳನ್ನು ಆಕರ್ಷಿಸುತ್ತದೆ.
ವೈಟ್ ಎಗ್ರೆಟ್
ಹೇಬೆನರಿಯಾ ರೇಡಿಯಾಟ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ಇದು ಅಸಾಮಾನ್ಯ ಆರ್ಕಿಡ್ ಆಗಿದೆ. ಹಕ್ಕಿಯ ಬಿಳಿ ತುಪ್ಪಳದಂತೆ ಕಾಣುವ ಈ ಆರ್ಕಿಡ್ ಗಮನಾರ್ಹ ಆಕರ್ಷಣೆ ಹೊಂದಿದೆ. ಇದು ಮುಖ್ಯವಾಗಿ ದಕ್ಷಿಣ ಕೊರಿಯಾ, ರಷ್ಯಾ, ಚೀನಾ ಮತ್ತು ಜಪಾನ್​ಗಳಲ್ಲಿ ಕಂಡುಬರುತ್ತದೆ.
ಬೀ ಆರ್ಕಿಡ್
ಜೇನುನೊಣವು ಹಾರಿ ಹೋಗುತ್ತಿರುವಂತೆ ಕಾಣುವ ಈ ಆರ್ಕಿಡ್ ಇಂಗ್ಲೆಂಡ್, ಐರ್ಲೆಂಡ್​ಗಳಲ್ಲಿ ಕಂಡುಬರುತ್ತದೆ. ಇದರ ವೈಜ್ಞಾನಿಕ ಹೆಸರು ಒಫ್ರೀಸ್ ಆಫಿಫೆರಾ. ಸಾಮಾನ್ಯವಾಗಿ ಇದು ಗುಲಾಬಿ ಬಣ್ಣದಲ್ಲಿರುತ್ತದೆ.

ಆರ್.ಬಿ.ಗುರುಬಸವರಾಜ ಹೊಳಗುಂದಿ

October 24, 2018

ಮೊಬೈಲ್ ಗೀಳು ಜೀವನ ಹಾಳು ನೋಮೋಫೋಬಿಯಾ/ Nomophobia

ದಿನಾಂಕ 17-10-2018ರ ವಿಜಯವಾಣಿಯಲ್ಲಿ  ನನ್ನ ಬರಹ.


ಮೊಬೈಲ್ ಗೀಳು   ಜೀವನ ಹಾಳು

ಪಿ.ಯು.ಸಿ ಓದಿ ಮನೆಯಲ್ಲಿರುವ ಇಪ್ಪತ್ಮೂರು ವರ್ಷದ ರಮೇಶ ಕಳೆದ ಒಂದು ವಾರದಿಂದ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾನೆ. ಸದಾ ಮಂಪರಿನಲ್ಲಿರುವ ರಮೇಶ ಕೈಯಲ್ಲಿ ಮೊಬೈಲ್ ಹಿಡಿದ ರೀತಿಯಲ್ಲಿ ವರ್ತಿಸುತ್ತಾನೆ. ಎಚ್ಚರವಾದೊಡನೆ ಮೊಬೈಲ್ ಎಲ್ಲಿ ಎಂದು ಹುಡುಕಾಡುತ್ತಾನೆ. ಅಕ್ಕಪಕ್ಕದವರಲ್ಲಿ ಮೊಬೈಲ್ ಕೇಳುತ್ತಾನೆ. ರಮೇಶನ ಸ್ಥಿತಿಯನ್ನು ಅಧ್ಯಯನ ಮಾಡಿದ ವೈದ್ಯರು ಈ ಕಾಯಿಲೆಗೆ ನೊಮೋಫೋಬಿಯಾ ಎಂದು ಹೇಳಿದ್ದಾರೆ. ರಮೇಶನ ಈ ಸ್ಥಿತಿ ಬಡ ತಂದೆ ತಾಯಿಗೆ ಚಿಂತೆಯಾಗಿದೆ.  
    ಹತ್ತನೇ ತರಗತಿಯ ಜ್ಯೊತಿ ಮಾಹಿತಿ ಹುಡುಕುವ ನೆಪದಲ್ಲಿ ಸಂಜೆಯಿಂದ ರಾತ್ರಿ ಮಲಗುವವೆರಗೂ ಸ್ಮಾರ್ಟ್ಫೋನ್‌ಗೆ ಅಂಟಿಕೊಂಡಿರುತ್ತಾಳೆ. ಮಗಳ ಸ್ಮಾರ್ಟ್ಪೋನ್ ಪುರಾಣ ಕುರಿತು ತಾಯಿ ಚಿಂತಿತಳಾಗಿದ್ದಾಳೆ. 
ಇದು ಕೇವಲ ಜ್ಯೊತಿ ಹಾಗೂ ರಮೇಶರ ಕಥೆಯಲ್ಲ. ಬಹುತೇಕ ಯುವಕರ ಸ್ಥಿತಿಯೂ ಇದೇ ಆಗಿದೆ. ಶಾಲೆ/ಕಾಲೇಜು ಸಮಯ ಹೊರತು ಪಡಿಸಿದರೆ ಬಹುತೇಕ ವೇಳೆ ಮೊಬೈಲ್ ಫೋನಿಗೆ ಅಂಟಿಕೊಂಡಿರುತ್ತಾರೆ. ಇತ್ತಿಚಿಗೆ ಶಾಲೆ/ಕಾಲೇಜಿನಲ್ಲೂ ಪಾಠದ ವೇಳೆಯಲ್ಲಿ ಮೊಬೈಲ್ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿರುವ ಬಗ್ಗೆ ವರದಿಯಾಗಿವೆ. ಯುವಕರನ್ನು ಆಕರ್ಷಿಸುವ ಅಪ್ಲಿಕೇಶನ್‌ಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ತಮ್ಮ ವಯಸ್ಸಿನ ಫ್ರೆಂಡ್ಸ್  ಜೊತೆ ಹೊರಗಡೆ ಬಯಲಿನಲ್ಲಿ ಆಡವಾಡುವುದನ್ನು ಬಿಟ್ಟು, ಮೊಬೈಲ್ ಕೈಯಲ್ಲಿ ಹಿಡಿದು ಮೂಲೆ ಸೇರುತ್ತಿದ್ದಾರೆ. ನಾಲ್ಕಾರು ಗೆಳೆಯರು ಒಂದೆಡೆ ಸೇರಿದ್ದರೂ ಸಹ ಪರಸ್ಪರ ಮಾತನಾಡದೇ ಮೊಬೈಲ್‌ನಲ್ಲೆ ಕಾಲ ಕಳೆಯುತ್ತಿದ್ದಾರೆ. ಇದರಿಂದಾಗಿ ಅವರು ಸ್ಮಾರ್ಟ್ಫೋನ್ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ಹೇಗೆ ಬಿಡಿಸಬೇಕೆಂಬುದೇ ಬಹುತೇಕ ಪಾಲಕರ ಚಿಂತೆಯಾಗಿದೆ. ಯುವಕರು ಮೊಬೈಲ್ ಫೋನಿಗೆ ಅಂಟಿಕೊಂಡರುವ ಪ್ರಕರಣಗಳನ್ನು ಮನೋವಿಜ್ಞಾನದಲ್ಲಿ ‘ನೊಮೋಫೋಬಿಯಾ’ ಎಂದು ಗುರುತಿಸಲಾಗಿದೆ. ಇದರಿಂದ ಆಗುವ ತೊಂದರೆಗಳು ಹಾಗೂ ಯುವಕರು ಇದರಿಂದ ದೂರವಿರುವ ಕ್ರಮಗಳ ಕುರಿತ ಕಿರು ಮಾಹಿತಿ ಇಲ್ಲಿದೆ.
ನೊಮೋಫೋಬಿಯಾ ಎಂದರೆ,,,,,, : ಮೊಬೈಲ್ ಫೋನ್‌ನಿಂದ ದೂರ ಇರಲಾಗದ ಭಯವೇ ನೊಮೋಫೋಬಿಯಾ. ಅಂದರೆ ಸದಾ ಮೊಬೈಲ್ ಫೋನಿಗೆ ಅಂಟಿಕೊಂಡು, ಅದರಲ್ಲಿಯೇ ಕಾಲ ಕಳೆಯುವ ದುರಭ್ಯಾಸವೇ ನೊಮೋಫೋಬಿಯಾ. ಇಂತಹ ತೊಂದರೆಗೆ ಒಳಗಾದರು ಫೋನ್‌ನ್ನು ಸದಾ ಬಳಿಯೇ ಇಟ್ಟುಕೊಂಡಿರುತ್ತಾರೆ. ಆಗಾಗ್ಗೆ ಮೊಬೈಲ್ ಸ್ಕಿçನ್ ಓಪನ್ ಮಾಡುವುದು, ನೋಟಿಫಿಕೇಶನ್‌ಗಳನ್ನು ಗಮನಿಸುವತ್ತ ಚಿತ್ತ ಹರಿಸುತ್ತಾರೆ. ಪದೇ ಪದೇ ಸಾಮಾಜಿಕ ಜಾಲ ತಾಣಗಳಾದ ಫೇಸ್‌ಬುಕ್, ವಾಟ್ಸಪ್‌ಗಳನ್ನು ಓಪನ್ ಮಾಡುತ್ತಾ ಅದರಲ್ಲೆ ಕಾಲ ಕಳೆಯುತ್ತಾರೆ. 
ಲಕ್ಷಣಗಳು :
ಪದೇ ಪದೇ ಮೊಬೈಲ್ ನೋಡುವುದು.
ಒಂಟಿಯಾಗಿರಲು ಬಯಸುವುದು. 
ಪ್ರತ್ಯೆಕ ಕೊಠಡಿಗಳಲ್ಲಿ ಅವಿತುಕೊಳ್ಳುವುದು. 
ಟಾಯ್ಲೆಟ್ ರೂಮಿಗೂ ಮೊಬೈಲ್ ಕೊಂಡೊಯ್ಯುವುದು. 
ಮೊಬೈಲ್ ಕಾಣಿಸದಿದ್ದರೆ ಏನನ್ನೊ ಕಳೆದುಕೊಂಡವರಂತೆ ವರ್ತಿಸುವುದು. 
ರಾತ್ರಿ ಮಲಗುವಾಗ ತಲೆದಿಂಬಿನ ಪಕ್ಕದಲ್ಲಿಯೇ ಇಟ್ಟುಕೊಂಡು ಮಲಗುವುದು. 
ಎಚ್ಚರವಾದ ಕೂಡಲೇ ಮೊಬೈಲ್ ಸ್ಕಿçನ್ ಓಪನ್ ಮಾಡಿ ನೋಟಿಫಿಕೇಶನ್ ಗಮನಿಸುವುದು. 
ನಿದ್ರಾಹೀನತೆಯಿಂದ ಬಳಲುವುದು.
ಡ್ರಗ್ ವ್ಯಸನಿಯಂತೆ ವರ್ತಿಸುವುದು.
ಕಾರಣಗಳು : ಇಂದಿನ ವಿಭಕ್ತ ಕುಟುಂಬ ಪದ್ದತಿಯು ನೊಮೋಫೋಬಿಯಾಕ್ಕೆ ಮೂಲಕಾರಣ ಎನ್ನಲಾಗುತ್ತದೆ. ತಂದೆ-ತಾಯಿ ಇಬ್ಬರೂ ದುಡಿಮೆಯ ನೆಪದಲ್ಲಿ ಮಕ್ಕಳಿಂದ ಹೆಚ್ಚು ಸಮಯ ದೂರವಿರುತ್ತಾರೆ. ಮಕ್ಕಳ ಓಲೈಕೆಗಾಗಿ ಮೊಬೈಲ್ ಫೋನ್ ಕೊಡಿಸುತ್ತಾರೆ. ಆಕರ್ಷಕ ದೃಶ್ಯಿಕೆಗಳು, ಖುಷಿ ನೀಡುವ ವೀಡಿಯೋ ಗೇಮ್‌ಗಳು, ಕಣ್ಮನ ಸೆಳೆಯುವ ನೃತ್ಯಗಳು, ನಗಿಸುವ ಹಾಸ್ಯ ತುಣುಕುಗಳು ನೊಮೋಫೋಬಿಯಾಕ್ಕೆ ಕಾರಣಗಳು. ಅಲ್ಲದೇ ಕಡಿಮೆ ಬೆಲೆಗೆ ದೊರೆಯುವ ವೇಗದ ಇಂಟರ್‌ನೆಟ್ ಸೌಲಭ್ಯವೂ ಸಹ ಈ ದುರಭ್ಯಾಸಕ್ಕೆ ಕಾರಣವೆಂದರೆ ತಪ್ಪಲ್ಲ. 
ಪರಿಣಾಮಗಳು : 
ಸಂಪರ್ಕ ಕ್ರಾಂತಿಯ ಭಾಗವೆಂದು ಭಾವಿಸಿದ, ಮಿನಿ ಕಂಪ್ಯೂಟರ್‌ಗಳಾದ ಮೊಬೈಲ್ ಫೋನ್‌ಗಳು ಯುಜನತೆಯ ಮೇಲೆ ಅನೇಕ ದುಷ್ಪರಿಣಾಮಗಳನ್ನುಂಟು ಮಾಡುತ್ತದೆ. ಇಂದಿನ ಮಕ್ಕಳು ಹಾಗೂ ಯುವಜನತೆ ಹೆಚ್ಚಿನ ರೇಡಿಯೋ ಫ್ರಿಕ್ವೆನ್ಸಿ ಪರಿಸರದಲ್ಲಿ ಬೆಳೆಯುತ್ತಿದ್ದಾರೆ. ಮೊಬೈಲ್‌ಗಳಿಂದ ಹೊರಸೂಸುವ ವಿಕಿರಣಗಳು ಅವರ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತಿವೆ.
         ಇತ್ತಿಚಿನ ವರ್ಷಗಳಲ್ಲಿ ದೇಹದಲ್ಲಿ ಸೆಲ್‌ಫೋನ್ ವಿಕಿರಣ ಪರಿಣಾಮ ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ‘ದಿ ಜರ್ನಲ್ ಆಫ್ ಅಮೇರಿಕನ್ ಮೆಡಿಕಲ್ ಅಸೋಸಿಯೇಶನ್’ ನಡೆಸಿದ ಅಧ್ಯಯನವು ಮಕ್ಕಳು/ಯುವಕರು ಮೊಬೈಲ್ ಫೋನ್ ಬಳಕೆಯಿಂದಾಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದೆ. 
ಮೊಬೈಲ್ ಬಳಸುತ್ತಿರುವ ಯುವಕರ ಮೆದುಳು ಮತ್ತು ಕಿವಿಯಲ್ಲಿ ಮಾರಣಾಂತಿಕ ಟ್ಯುಮರ್ ಬೆಳೆಯುವ ಸಾಧ್ಯತೆಯನ್ನು ಅಧ್ಯಯನವು ತೋರಿಸಿದೆ. 
ವಿಶ್ವ ಆರೋಗ್ಯ ಸಂಸ್ಥೆಯು ಸೆಲ್‌ಫೋನ್ ವಿಕಿರಣ ಭಾಗಶಃ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಹೇಳಿದೆ. ಮಕ್ಕಳು/ಯುವಕರು ಶೇಕಡಾ ೬೦ರಷ್ಟು ವಿಕಿರಣವನ್ನು ಹೀರಿಕೊಳ್ಳುತ್ತಾರೆ. ಅವರ ಮೆದುಳಿನ ತೆಳುವಾದ ಚರ್ಮ, ಅಂಗಾಂಶಗಳು ಮತ್ತು ಮೂಳೆಗಳು ವಯಸ್ಕರಿಗಿಂತ ಎರಡು ಪಟ್ಟು ವಿಕಿರಣವನ್ನು ಹೀರಿಕೊಳ್ಳುತ್ತವೆ ಎಂದು ಅಧ್ಯಯನವು ಹೇಳುತ್ತದೆ. ಈ ವಿಕಿರಣಗಳು ನರಮಂಡಲವನ್ನು ದುರ್ಬಲಗೊಳಿಸಿ ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದು ಹೇಳಿದೆ.
ಕೇವಲ ೨ ನಿಮಿಷದ ಕರೆಯು ೧೬ ವರ್ಷದೊಳಗಿನ ಮಕ್ಕಳ ಮೆದುಳಿನ ಕಾರ್ಯನಿರ್ವಾಹಕ ಚಟುವಟಿಕೆಯನ್ನು ಬದಲಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕಿವಿಗೆ ಹತ್ತಿರವಾಗಿ ಮೊಬೈಲ್ ಹಿಡಿದು ಮಾತನಾಡುವಾಗ ಅದರಿಂದ ಬರುವ ರೇಡಿಯೋ ತರಂಗಗಳು ಮಕ್ಕಳ ಮೆದುಳಿನಲ್ಲಿ ವ್ಯಾಪಿಸಿ ಕಲಿಕಾ ಸಾಮರ್ಥ್ಯ ಹಾಗೂ ಇನ್ನಿತರೇ ವರ್ತನೆಯ ಸಮಸ್ಯೆಗಳನ್ನು ದುರ್ಬಲಗೊಳಿಸುತ್ತದೆ. ಇದು ಕಲಿಯುವವರ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ.
ಸದಾ ಮೊಬೈಲ್ ಬಳಸುತ್ತಿದ್ದರೆ, ಕಲಿಕಾ ಸಾಮರ್ಥ್ಯ ಕಡಿಮೆಯಾಗಿ ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ. ಕ್ರಮೇಣವಾಗಿ ಕಲಿಕೆಯಲ್ಲಿ ನಿರಾಸಕ್ತಿ ಉಂಟಾಗುತ್ತದೆ.
ಸದಾ ಮೊಬೈಲ್ ಫೋನ್‌ಗೆ ಅಂಟಿಕೊಂಡಿರುವುದರಿಂದ ದೈಹಿಕ ಚಟುವಟಿಕೆಗಳು ಇಲ್ಲದೇ ದಢೂತಿದೇಹ ಉಂಟಾಗುತ್ತದೆ. 
ಸೆಲ್‌ಫೋನ್ ಮಕ್ಕಳು/ಯುವಕರಲ್ಲಿ ಅನುಚಿತ ವರ್ತನೆಗೆ ಕಾರಣವಾಗುತ್ತದೆ. ಅನಗತ್ಯ ಪಠ್ಯ ಹಾಗೂ ಚಿತ್ರ ಸಂದೇಶದ ಚಾಟಿಂಗ್‌ನಲ್ಲಿ ತೊಡಗುವ ಸಮಸ್ಯೆ ಉಂಟಾಗುತ್ತದೆ. ಕುಟುಂಬದ ವ್ಯಕ್ತಿಗಳ ಚಿತ್ರಗಳು ಕೆಲವೊಮ್ಮೆ ಕೈತಪ್ಪಿ ಅಂತರಜಾಲದಲ್ಲಿ ಸಿಲುಕಿ, ಅಶ್ಲಿಲ ಸೈಟ್‌ಗಳಿಗೆ ಪ್ರವೇಶಹೊಂದಿ ಅವಾಂತರ ತರುವ ಸಾಧ್ಯತೆಗಳಿವೆ. 
ಮೊಬೈಲ್ ಬಳಕೆಯಿಂದ ಕಲಿಕೆಯಲ್ಲಿ ಹಿಂದುಳಿದವರು ಆಂತರಿಕ ಮತ್ತು ಬಾಹ್ಯ ಪರೀಕ್ಷೆಗಳಲ್ಲಿ ಮೋಸ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಪರೀಕ್ಷೆಗಳಲ್ಲಿ ನಕಲು ಮಾಡುವಂತಹ ದುಷ್ಕೃತ್ಯ ಎಸಗಬಹುದು.
ಮೊಬೈಲ್ ವ್ಯಸನಕ್ಕೆ ಒಳಗಾದವರು ಮೌಲ್ಯಯುತವಾದ ಹವ್ಯಾಸಗಳು ಮತ್ತು ಪ್ರಿತಿಪಾತ್ರರಿಂದ ದೂರವಾಗುತ್ತದೆ. 
ಸ್ಮಾರ್ಟ್ಫೋನ್ ಬಳಕೆಯಿಂದ ಯುವಕರಲ್ಲಿ ಆಕ್ರಮಣಕಾರಿ ವರ್ತನೆಗಳು ಪ್ರಕಟಗೊಳ್ಳುತ್ತವೆ. ಇದರಿಂದ ಅವರಲ್ಲಿ ಆತಂಕ, ಒತ್ತಡ, ಖಿನ್ನತೆ, ಚಡಪಡಿಕೆ ಉಂಟಾಗುತ್ತದೆ. 
ಮೊಬೈಲ್ ಬಳಕೆ ನಿದ್ರಾಹೀನತೆಗೂ ಕಾರಣವಾಗುತ್ತದೆ. ನಿದ್ರಾಹೀನತೆಯಿಂದ ಸ್ಮರಣಶಕ್ತಿಯೂ ಕಡಿಮೆಯಾಗುತ್ತದೆ ಮತ್ತು ಆ ಕಾರಣದಿಂದ ಶೈಕ್ಷಣಿಕ ಪ್ರಗತಿ ವೇಗವಾಗಿ ಕುಂಟಿತವಾಗುತ್ತದೆ. 
ಬ್ಲೂವ್ಹೆಲ್, ಮೊಮೋನಂತಹ ಆನ್‌ಲೈನ್ ಗೇಮ್‌ಗಳು ಮಕ್ಕಳು/ಯುವಕರ ಪ್ರಾಣಕ್ಕೆ ಕಂಟಕವಾಗಬಹುದು. 
ಭವಿಷ್ಯದಲ್ಲಿ ಭಾವನೆಗಳು ನಶಿಸುವ ಸಾಧ್ಯತೆ ಇದೆ.
ಮುಕ್ತಿಮಾರ್ಗ :
ನೊಮೋಫೋಬಿಯಾದಿಂದ ಹೊರಬರುವುದು ಯುವಕರಿಗೆ ಬಹುದೊಡ್ಡ ಸಮಸ್ಯೆಯಾಗಿದೆ. ಶಾಂತವಾಗಿ ಯೋಚಿಸಿದರೆ ಇದೇನೂ ದೊಡ್ಡ ಸಮಸ್ಯೆಯಲ್ಲ. ಆದರೆ ಗಂಭೀರ ಪರಿಣಾಮಗಳ ಬಗ್ಗೆ ಯೋಚಿಸಿದರೆ ಖಂಡಿತವಾಗಿ ಹೊರಬರಲೇಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಯುವಕರು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. 
ಆದಷ್ಟೂ ಬಯಲಿನಲ್ಲಿ ದೈಹಿಕ ಶ್ರಮದ ಆಟಗಳಲ್ಲಿ ತೊಡಗಿಸಿಕೊಳ್ಳಿ. ಇದು ನಿಮ್ಮ ಮನಸ್ಸು ಉಲ್ಲಿಸತವಾಗುವಂತೆ ಮಾಡುತ್ತದೆ.
ಸ್ಮಾರ್ಟ್ಫೋನ್‌ಗಳು ನಮ್ಮ ಜೀವನದ ಭಾಗವೇನಲ್ಲ. ಅದನ್ನು ಬದಿಗಿಟ್ಟು ಸೃಜನಾತ್ಮಕ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. 
ಕುಟುಂಬದ ಸದಸ್ಯರೊಡನೆ ಭೌತಿಕವಾಗಿ ಹೆಚ್ಚು ಹೆಚ್ಚು ಬರೆಯಿರಿ. ಸಣ್ಣ ಸಣ್ಣ ಮನೆಕೆಲಸಗಳಲ್ಲಿ ಪೋಷಕರಿಗೆ ನೆರವಾಗಿ.
ಒಡನಾಡಿಗಳು, ಬಂಧು-ಬಾಂಧವರ ಜೊತೆ ಹೆಚ್ಚು ಹೆಚ್ಚು ಬೆರೆಯಿರಿ.
ಹಾಡುಗಾರಿಕೆ, ನೃತ್ಯ, ಯೋಗ, ಚಿತ್ರಕಲೆ, ಕ್ಲೆಮಾಡಲಿಂಗ್‌ನಂತಹ ಬೇರೆ ಬೇರೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ. 
ಚೆಸ್, ಕೇರಂ, ಟೇಬಲ್ ಟೆನ್ನಿಸ್, ಈಜುಗಳಂತಹ ಒಳಾಂಗಣ ಕ್ರಿಡೆಗಳು ವಿರಾಮ ವೇಳೆಯ ಸದುಪಯೋಗದ ಜೊತೆಗೆ ನೀವು ಸದಾ ಆಕ್ಟಿವ್ ಆಗಿರಲು ಸಹಾಯಮಾಡುತ್ತವೆ. 
ಕಥೆ, ಕವನ, ಕಾದಂಬರಿ, ಜೀವನಚರಿತ್ರೆಗಳಂತಹ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಓದುವ ಹವ್ಯಾಸ ಎಲ್ಲೆಡೆ ನೀವು ತಲೆ ಎತ್ತಿ ನಡೆಯುವಂತೆ ಮಾಡುತ್ತದೆ. 
ಮೊಬೈಲ್ ಬೇಕೇ ಬೇಕು ಎಂದಾದರೆ ಕಡಿಮೆ ವಿಕಿರಣ ಮಟ್ಟ ಹೊಂದಿರುವ ಮೊಬೈಲ್ ಖರೀದಿಸಿ. ಇದಕ್ಕಾಗಿ ಎಸ್.ಎ.ಆರ್(ನಿರ್ದಿಷ್ಟ ಹೀರಿಕೆ ದರ) ಕಡಿಮೆ ಇರುವ ಮೊಬೈಲ್ ಖರೀದಿಸಿ. ಭಾರತದಲ್ಲಿ ಎಸ್.ಎ.ಆರ್ ಮಟ್ಟವು ೧.೬ ತಿ/ಞg ಆಗಿದೆ. ನಿಮ್ಮ ಮೊಬೈಲ್‌ನ ಎಸ್.ಎ.ಆರ್ ಮಟ್ಟ ಪರೀಕ್ಷಿಸಲು *#೦೭# ಡಯಲ್ ಮಾಡಿ. 
ಪ್ರಯಾಣದ ವೇಳೆ ಮೊಬೈಲ್ ಬಳಸಬೇಡಿ. ರೈಲು, ಬಸ್ಸು, ಕಾರು ಮುಂತಾದ ವಾಹನಗಳಲ್ಲಿ ಪ್ರಯಾಣಿಸುವಾಗ ಮೊಬೈಲ್ ಸಿಗ್ನಲ್‌ಗಳಿಗಾಗಿ ರೇಡಿಯೇಶನ್ ಸ್ಕಾö್ಯನಿಂಗ್ ಮಾಡುತ್ತಿರುತ್ತದೆ. ಈ ವೇಳೆಯಲ್ಲಿ ಹೆಚ್ಚು ವಿಕರಣಗಳು ಹೊರಸೂಸುತ್ತಿರುತ್ತವೆ. 
ರಾತ್ರಿ ಮಲಗುವಾಗ ಹತ್ತಿರ ಮೊಬೈಲ್ ಇಟ್ಟುಕೊಳ್ಳಬೇಡಿ. ವಿಕಿರಣಗಳಿಂದ ನೆನಪಿನ ಶಕ್ತಿಯ ಮೇಲೆ ಪರಿಣಾಮಗಳಾಗುತ್ತವೆ. 
ಎರಡು ನಿಮಿಷಕ್ಕಿಂತ ಹೆಚ್ಚಿಗೆ ಮಾತನಾಡಬೇಕಿದ್ದರೆ ಲ್ಯಾಂಡ್‌ಲೈನ್ ಬಳಸಿ. ಇಲ್ಲವಾದರೆ ಮೊಬೈಲ್‌ನಲ್ಲಿ ಓಪನ್ ಸ್ಪಿಕರ್ ಹಾಕಿ ಮಾತನಾಡಿಸಿ. ಮಾತು ಆದಷ್ಟೂ ಹಿತಮಿತವಾಗಿರಲಿ.
ಸಾಮಾಜಿಕ ಜಾಲತಾಣ ಬಳಸುವುದು ಅನಿವಾರ್ಯವಾದರೆ ಮೊಬೈಲ್‌ನ ಬದಲು  ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಬಳಸಿ. 
           ನಿಮ್ಮ ಮೇಲೆ ಇಡೀ ಸಮಾಜ ಹಾಗೂ ಕುಟುಂಬ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ನಿಮ್ಮನ್ನು ನಂಬಿದವರ ನಿರೀಕ್ಷೆಗಳನ್ನು ನನಸು ಮಾಡುವುದು ನಿಮ್ಮ ಮೊದಲ ಆಧ್ಯತೆಯಾಗಲಿ. ಪುಸ್ತಕ ಹಾಗೂ ಸೃಜನಾತ್ಮಕ ಚಟುವಟಿಕೆಗಳು ನಿಮ್ಮನ್ನು ತಲೆ ಎತ್ತಿ ನಡೆಯುವಂತೆ ಮಾಡುತ್ತವೆ. ಆದರೆ ಮೊಬೈಲ್ ನಿಮ್ಮನ್ನು ತಲೆ ತಗ್ಗಿಸಿ ನಡೆಸುತ್ತದೆ. ನಿಮಗೆ ನಿಮ್ಮ ಭವಿಷ್ಯ ಮುಖ್ಯವಾಗಬೇಕೆ ಹೊರತು ಕ್ಷಣಿಕ ಸುಖದ ಮೊಬೈಲ್ ಅಲ್ಲ. 
ಆರ್.ಬಿ.ಗುರುಬಸವರಾಜ

ಆ್ಯಂಕರಿಂಗ್ ಎಂಬ ಕನಸಿನ ಲೋಕ Anchoring

ದಿನಾಂಕ 26-9-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಆ್ಯಂಕರಿಂಗ್ ಎಂಬ ಕನಸಿನ ಲೋಕ 


ಉಪಗ್ರಹ ಆಧಾರಿತ ಚಾನಲ್‌ಗಳ ಪ್ರವೇಶದೊಂದಿಗೆ ಜನಪ್ರಿಯ ವೃತ್ತಿಯಾದ ಆ್ಯಂಕರಿಂಗ್ ಯುವಪೀಳಿಗೆಯ ಆಕರ್ಷಣೆಯ ಕ್ಷೆÃತ್ರವಾಗಿದೆ. ಹಲವಾರು ಸುದ್ದಿ ಹಾಗೂ ಮನೋರಂಜನಾ ಚಾನಲ್‌ಗಳಲ್ಲಿ ವೈಯಾರದ ಮಾತುಗಳಿಂದ ಪ್ರೆÃಕ್ಷಕರ ಮನ ಗೆದ್ದ ಅನೇಕರು ತಾರೆಗಳ ಸಾಲಿನಲ್ಲಿ ಸೇರಿರುವುದೂ ಸಹ ಆಕರ್ಷಣೆಯ ಮತ್ತೊಂದು ಬಿಂದುವಾಗಿದೆ. 
ಇಂದಿನ ಯುವಪೀಳಿಗೆಗೆ ದೃಶ್ಯ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವಾಸೆ ಅಧಿಕ. ನಟರಾಗಿ, ಕಾರ್ಯಕ್ರಮ ನಿರೂಪಕರಾಗಿ, ವಾರ್ತಾ ವಾಚಕರಾಗಿ, ಸಂವಹನಕಾರರಾಗಿ ಹೀಗೆ ವಿಭಿನ್ನ ರೂಪಗಳಲ್ಲಿ ಕಾಣಿಸಿಕೊಳ್ಳುವಾಸೆ. ಏಕೆಂದರೆ ಏಕಕಾಲದಲ್ಲಿ ಸಾವಿರಾರು ಕಣ್ಣುಗಳು ತಮ್ಮನ್ನು ನೋಡುತ್ತಾರೆ, ತಮ್ಮ ಅಂದ ಹಾಗೂ ವಿದ್ವತ್ತನ್ನು ಮೆಚ್ಚುತ್ತಾರೆ, ತಮ್ಮ ಶೈಲಿಯನ್ನು ಅನುಸರಿಸುತ್ತಾರೆ, ಅಭಿಮಾನಗಳ ಸಂಖ್ಯೆ ಹೆಚ್ಚುತ್ತದೆ ಎಂಬ ಕಲ್ಪನೆ ಸಹಜ. ನಾವೂ ಅವರಂತೆ ಆ್ಯಂಕರ್ ಆಗಬೇಕು ಎಂಬ ತುಡಿತ ಮಿಡಿತ ಯುವಪೀಳಿಗೆಯಲ್ಲಿರುವುದು ಸಹಜ. ಹೌದು ಆ್ಯಂಕರ್ ಆಗುವುದರಿಂದ ಮೇಲಿನ ಎಲ್ಲಾ ಪ್ರಯೋಜನಗಳು ದೊರೆಯುತ್ತವೆ. ಹಾಗಾದರೆ ಆ್ಯಂಕರ್ ಆಗಲು ಬೇಕಾದ ಅರ್ಹತೆಗಳೇನು, ಅನುಸರಿಸಬೇಕಾದ ನಿಯಮಗಳೇನು ಎಂಬುದನ್ನು ತಿಳಿಯೋಣ.  
ಆ್ಯಂಕರ್ ಎಂದರೆ,,,,, : ಕನ್ನಡದಲ್ಲಿ ನಿರೂಪಕರು ಎಂದು ಕರೆಯಲ್ಪಡುವ ಆ್ಯಂಕರ್ ಎಂಬ ಪದವು ಹಲವು ರೂಪಗಳನ್ನು ಹೊಂದಿದೆ. ಪ್ರೆಸೆಂಟರ್, ಹೋಸ್ಟ್, ನ್ಯೂಸ್ ರೀಡರ್, ಪ್ರೊÃಗ್ರಾಂ ಆ್ಯಂಕರ್ ಹೀಗೆ ವಿವಿಧ ರೂಪಗಳನ್ನು ಹೊಂದಿದೆ. ಇವರು ಚಾನಲ್ ಮತ್ತು ಪ್ರೆÃಕ್ಷಕರ ನಡುವೆ ಮಧ್ಯವರ್ತಿಗಳಾಗಿದ್ದಾರೆ. ಚಾನಲ್‌ನ ಕಾರ್ಯಕ್ರಮಗಳನ್ನು ಪ್ರೆÃಕ್ಷಕರಿಗೆ ಮನಮುಟ್ಟುವಂತೆ ತಲುಪಿಸುವುದೇ ಆ್ಯಂಕರ್‌ಗಳ ಕೆಲಸವಾಗಿದೆ. ಇವರು ಕೇವಲ ನಿರೂಪಕರಲ್ಲದೇ ತಮ್ಮ ಜ್ಞಾನವನ್ನು ವಿಸ್ತರಿಸುವ ಹಾಗೂ ಅದನ್ನು ಪ್ರೆÃಕ್ಷಕರಿಗೆ ಹಂಚುವ ಕಾರ್ಯ ಮಾಡುತ್ತಾರೆ. ಮನೋರಂಜನೆ ಅಥವಾ ಗಂಭೀರ ಸುದ್ದಿ ಪ್ರಸ್ತುತಿ ಇರಲಿ ಕಾರ್ಯಕ್ರಮದ ಉದ್ದಕ್ಕೂ ವೀಕ್ಷಕರನ್ನು ಆಕರ್ಷಿಸುವ ಗುಣಮಟ್ಟವನ್ನು ಅವರು ಹೊಂದಿರಬೇಕು. ಇದು ಅತ್ಯಂತ ಸವಾಲಿನ ಕ್ಷೆÃತ್ರವಾಗಿದೆ. ಕೇವಲ ಮಾಹಿತಿಯನ್ನು ವಿನಿಮಯ ಮಾಡದೇ ಕಾರ್ಯಕ್ರಮವನ್ನು ಮನೋರಂಜನಾತ್ಮಕ ರೀತಿಯಲ್ಲಿ ಪ್ರೆÃಕ್ಷಕರಿಗೆ ತಲುಪಿಸುವ ಗುರುತರ ಜವಾಬ್ದಾರಿ ಇವರ ಮೇಲಿದೆ. 

ಆ್ಯಂಕರ್‌ಗಳಲ್ಲಿ ಮೂರು ರೀತಿಯ ಆ್ಯಂಕರ್‌ಗಳನ್ನು ನೋಡುತ್ತೆÃವೆ. ಅವುಗಳೆಂದರೆ 
ಪ್ರೊÃಗ್ರಾಂ ಆ್ಯಂಕರ್: ನಿರ್ಧಿಷ್ಟ ಕಾರ್ಯಕ್ರಮವನ್ನು ನಡೆಸಿಕೊಡುವ ನಿರೂಪಕರು. ಇವರು ಮನೋರಂಜನಾ ಕಾರ್ಯಕ್ರಮ, ಹಾಸ್ಯ ಕಾರ್ಯಕ್ರಮಗಳು, ಸನ್ಮಾನ ಸಮಾರಂಭಗಳು, ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರಧಾನ ಕಾರ್ಯಕ್ರಮ, ವಿವಿಧ ಸಾಂಸ್ಕೃತಿಕ/ದಿನಾಚರಣೆಗಳ ವೇದಿಕೆ ಕಾರ್ಯಕ್ರಮಗಳ ನಿರ್ವಹಣೆ ಮಾಡುವುದು.
ನ್ಯೂಸ್ ರೀಡರ್ : ವಿವಿಧ ಭಾಷೆಗಳ ಪ್ರಾದೇಶಿಕ/ರಾಜ್ಯ/ರಾಷ್ಟಿçÃಯ ಸುದ್ದಿಗಳನ್ನು ಓದುವವರು.
ಲೈವ್ ಆ್ಯಂಕರ್ : ರಿಯಾಲಿಟಿ ಷೋಗಳು, ಅಡುಗೆ ಕಾರ್ಯಕ್ರಮಗಳು, ಕ್ರಿÃಡೆಗಳು, ಚರ್ಚೆ, ಸಂವಾದಗಳು, ಮುಂತಾದ ಲೈವ್ ಕಾರ್ಯಕ್ರಮ ನಿರೂಪಕರು. 
ಇರಬೇಕಾದ ಅರ್ಹತೆಗಳು : ಆ್ಯಂಕರಿಂಗ್ ಎಂಬುದು ಸಾಮಾನ್ಯವಾದ ಕೆಲಸವಲ್ಲ. ಇದು ಆಕರ್ಷಕವಾಗಿ ಕಾಣುವ ಸವಾಲಿನ ಕೆಲಸ. ಕೆಲವೊಂದು ಅರ್ಹತೆಗಳು ಅಗತ್ಯವಾಗಿ ಬೇಕು. ನ್ಯೂಸ್ ರೀಡರ್‌ಗಳಿಗೆ ಪತ್ರಿಕೋಧ್ಯಮ ಹಾಗೂ ಸಮೂಹ ಮಾಧ್ಯಮದಂತಹ ಸ್ನಾತಕ ಪದವಿ ಅತ್ಯಗತ್ಯ. ಕೇವಲ ಪದವಿ ಇದ್ದರೆ ಸಾಲದು. ಅದರ ಜೊತೆಗೊಂದಿಷ್ಟು ಸಾಮಾನ್ಯ ಅರ್ಹತೆಗಳು ಅವಶ್ಯಕ. 
ಶುದ್ದ ಭಾಷಾಜ್ಞಾನ
ಉತ್ತಮ ಸಂವಹನ ಕೌಶಲ್ಯ
ಪ್ರಾಪಂಚಿಕ ಜ್ಞಾನ(ಆಗುಹೋಗುಗಳ ಪರಿಚಯ)
ಶಬ್ದಭಂಢಾರ
ಆಕರ್ಷಕ ದೇಹ ಮತ್ತು ಆರೋಗ್ಯಯುತ ಮನಸ್ಸು
ಮೋಡಿಮಾಡುವ ಮಾತುಗಾರಿಕೆ
ಆತ್ಮವಿಶ್ವಾಸ
ಸಹಕಾರ ಮತ್ತು ಹೊಂದಿಕೊಳ್ಳುವ ಗುಣ 
ಕನಸಿಗೆ ಪರಿಶ್ರಮದ ಬಣ್ಣ ಬಳಿಯಿರಿ:
ಇಂದಿನ ಯುವಜನತೆ ತಾವೊಬ್ಬ ಉತ್ತಮ ಆ್ಯಂಕರ್ ಆಗಬೇಕೆಂಬ ಕನಸು ಕಾಣುವುದು ತಪ್ಪೆÃನಲ್ಲ. ಆದರೆ ಅದಕ್ಕೊಂದಿಷ್ಟು ಕಿರು ತಯಾರಿ ಅಗತ್ಯ ಎಂಬುದನ್ನು ಮರೆಯಬಾರದು. ಕೆಳಗಿನ ಕೆಲವು ಕ್ರಮಗಳನ್ನು ಪಾಲಿಸುವ ಮೂಲಕ ಕೌಶಲ್ಯ ಗಳಿಸಿಕೊಂಡರೆ, ನೀವೊಬ್ಬ ಉತ್ತಮ ಆ್ಯಂಕರ್ ಆಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಅರ್ಹತೆ : ಸಾಮಾನ್ಯ ಕಾರ್ಯಕ್ರಮಗಳ ನಿರೂಪಕರಾಗಲು ಯಾವುದೇ ವಿದ್ಯಾರ್ಹತೆಯ ಅಗತ್ಯವಿಲ್ಲ. ಆದರೂ ಭಾಷಾಜ್ಞಾನ ಮತ್ತು ಸಂವಹನ ಕೌಶಲ್ಯ ಬೆಳೆಸಿಕೊಳ್ಳಲು ಅಗತ್ಯ ವಿದ್ಯಾರ್ಹತೆ ಅಗತ್ಯ. ಟಿ.ವಿ.ಗಳಲ್ಲಿ ನ್ಯೂಸ್ ರೀಡರ್ ಆಗಬೇಕಾದರೆ ಬ್ರಾಡ್‌ಕಾಸ್ಟ್ ಜರ್ನಲಿಸಂನಲ್ಲಿ ಸ್ನಾತಕ ಪದವಿ ಹೊಂದಿದವರಿಗೆ ಹೆಚ್ಚಿನ ಅವಕಾಶಗಳಿವೆ. ಜೊತೆಗೆ ಇಂಗ್ಲಿÃಷ್ ಮತ್ತು ಮಾಸ್ ಕಮ್ಯೂನಿಕೇಶನ್‌ನಲ್ಲಿ ಪದವಿ ಗಳಿಸಿದವರಿಗೆ ಆಧ್ಯತೆ ಹೆಚ್ಚು. 
ಜವಾಬ್ದಾರಿಯುತ ಕಾರ್ಯನಿರ್ವಹಣೆ : ನಿಮಗೆ ನೀಡಿದ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕಾದುದು ಅಗತ್ಯ. ನಿಮಗೆ ನೀಡಿದ ಕಾರ್ಯದ ಎಲ್ಲಾ ಆಯಾಮಗಳನ್ನು ಅರ್ಥೈಸಿಕೊಂಡು ಅದರ ಯಶಸ್ಸಿಗೆ ಪರಿಶ್ರಮಿಸುವ ಬದ್ದತೆ ಇರಬೇಕು. ಇಲ್ಲಿ ವೈಯಕ್ತಿಕ ಜೀವನಕ್ಕಿಂತ ವೃತ್ತಿ ಜೀವನಕ್ಕೆ ಹೆಚ್ಚು ಗಮನಕೊಡಬೇಕಾಗುತ್ತದೆ. ಅದಕ್ಕಾಗಿ ಕಎಲವು ಯಶಸ್ವಿ ಆ್ಯಂಕರ್‌ಗಳ ಜೀವನವನ್ನು ಅಧ್ಯಯನ ಮಾಡಿದಾಗ ಅವರ ಪ್ರಯತ್ನದ ಹಾದಿ ತಿಳಿಯುತ್ತದೆ. ಅರ್ಹತೆಯುಳ್ಳ ಅನೇಕರು ಅರ್ದಕ್ಕೆ ಕೆಲಸ ಬಿಟ್ಟ ಉದಾಹರಣೆಗಳಿವೆ. ಅಂತಯೇ ವಿದ್ಯಾರ್ಹತೆ ಇಲ್ಲದಿದ್ದರೂ ಬದ್ದತೆಯಿಂದ ಕೆಲಸ ಮಾಡುವವರು ಉನ್ನತ ಹಂತ ತಲುಪಿದ್ದಾರೆ. ವರದಿಗಾರರು, ಕ್ಯಾಮೆರಾಮನ್ ಆಗಿ ಸೇರಿದವರು ಇಂದು ಉನ್ನತ ಹಂತಕ್ಕೆ ಏರಿದ್ದಾರೆ. ತಮಗೆ ನೀಡಿದ ಕಾರ್ಯಗಳನ್ನು ಜವಾಬ್ದಾರಿಯಿಂದ ನಿರ್ವಹಿಸಿರುವುದೇ ಬೆಳವಣಿಗೆಗೆ ಕಾರಣ.
ಪ್ರಾಪಂಚಿಕ ಘಟನೆಗಳ ಜ್ಞಾನ : ಆ್ಯಂಕರ್ ಆಗಬೇಕಾದರೆ ಪ್ರಾಪಂಚಿಕ ಜ್ಞಾನದ ಅರಿವು ಅಗತ್ಯ. ಜಗತ್ತಿನಲ್ಲಿ ನಡೆಯುತ್ತಿರುವ ಸಧ್ಯದ ಘಟನೆಗಳು, ವಿಸ್ಮಯಗಳ ಬಗ್ಗೆ ಅರಿವು ಇರಬೇಕಾಗುತ್ತದೆ. ಘಟನೆಗಳನ್ನು ವಿವಿಧ ಆಯಾಮಗಳಿಂದ ವಿಶ್ಲೆÃಷಿಸುವ ಕೌಶಲ್ಯ ಇರಬೇಕು. 
ಮಾತಿನ ಕೌಶಲ್ಯ :  ಮಾತಿನ ಕೌಶಲ್ಯ ಇರದ ಹೊರತು ಆ್ಯಂಕರ್‌ಗಳಾಗಲು ಸಾಧ್ಯವೇ ಇಲ್ಲ. ಪ್ರಸ್ತುತಪಡಿಸುವ ಸುದ್ದಿ ಅಥವಾ ಕಾರ್ಯಕ್ರಮಕ್ಕೆ ವೀಕ್ಷಕರನ್ನು ಸೆಳೆಯುವ ಕಾರ್ಯತಂತ್ರವೆಂದರೆ ಮಾತಿನ ಕುಶಲತೆ. ಧ್ವನಿ, ಹಾವಭಾವ, ಶಭ್ದಗಳ ಬಳಕೆ, ಮುಕ್ತ ಸಂವಹನ ಇವೆಲ್ಲವೂ  ಮಾತಿನಶೈಲಿಯನ್ನು ನಿರ್ಧರಿಸುತ್ತವೆ. ಸಂದರ್ಶನದ ವೇಳೆಯಲ್ಲಿ ಪ್ರಶ್ನಿಸುವ ಕೌಶಲ್ಯ ಹಾಗೂ ಸಂದರ್ಶಕರ ಮಾತಿನಲ್ಲಿನ ಆಂತರ್ಯವನ್ನು ಬಿಂಬಿಸುವ ಕುಶಲತೆ ಇರಬೇಕು. ಸ್ಪಷ್ಟ ಉಚ್ಛಾರ, ವಿವಿಧ ಪದಗಳ ಬಳಕೆ, ಧ್ವನಿಯ ಏರಿಳಿತ ಅಗತ್ಯ.
ಸ್ಟೆಮಿನಾ : ರಾಷ್ಟಿçÃಯ ಹಾಗೂ ಅಂತರರಾಷ್ಟಿçÃಯ ಸುದ್ದಿ ಚಾನಲ್‌ಗಳಲ್ಲಿ ಕೆಲಸ ಮಾಡುವವರು ಸಮಯದ ಹಂಗನ್ನು ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಯಾವ ಸಂಧರ್ಭದಲ್ಲಿ ಎಲ್ಲಿಗೆ ಹೋಗಿ ಸುದ್ದಿ ಮಾಡುವ ಅಗತ್ಯವಿರುತ್ತದೆ ಎಂಬುದನ್ನು ಊಹಿಸಲಾಗುವುದಿಲ್ಲ. ಅಲ್ಲಿಗೆ ಹೋದ ಮೇಲೆ ವಾಪಾಸಾಗುವುದು ಯಾವಾಗ ಎಂಬುದು ಸಹ ತಿಳಿದಿರುವುದಿಲ್ಲ. ಇಂತಹ ವೇಳೆ ಆಹಾರ ನೀರಡಿಕೆಗಳನ್ನು ತ್ಯಜಿಸಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇರುತ್ತದೆ. ಅದಕ್ಕಾಗಿ ಅಗತ್ಯ ಸ್ಟೆಮಿನಾ(ತ್ರಾಣ) ಬಳೆಸಿಕೊಳ್ಳಬೇಕಾಗುತ್ತದೆ. 
ಕ್ಯಾಮೆರಾಸ್ನೆÃಹಿ ನೋಟ : ಆ್ಯಂಕರ್‌ಗಳು ಸಾಮಾನ್ಯವಾಗಿ ಕ್ಯಾಮೆರಾ ಮುಂದೆ ಕೆಲಸ ಮಾಡಬೇಕಾಗಿರುತ್ತದೆ. ಅದಕ್ಕಾಗಿ ಕ್ಯಾಮೆರಾಸ್ನೆÃಹಿ ಮುಖ ಹಾಗೂ ದೇಹ ಹೊಂದಬೇದುದು ಅಗತ್ಯ. ಇದಕ್ಕಾಗಿ ಆಹಾರ ಕ್ರಮದ ಮೇಲೆ ನಿಯಂತ್ರಣ ಇರಬೇಕಾಗುತ್ತದೆ. ಶಕ್ತಿ ಮತ್ತು ಹುರುಪು ಪಡೆಯಲು ತಾಜಾ ತರಕಾರಿ ಮತ್ತು ಹಣ್ಣುಗಳನ್ನು ಆಹಾರಕ್ಕಾಗಿ ಆಯ್ಕೆ ಮಾಡಿಕೊಳ್ಳಬೇಗುತ್ತದೆ. ಕೊಬ್ಬು ಬೆಳವಣಿಗೆಯಾಗದಂತೆ ನಿಯಮಿತ ವ್ಯಾಯಾಮದಲ್ಲಿ ತೊಡಗಿಕೊಳ್ಳಬೇಕು. 
ಉಡುಪುಗಳ ಸಭ್ಯತೆ : ಆ್ಯಂಕರ್‌ಗಳು ಸದಾ ವೀಕ್ಷಕರ ಮುಂದೆ ಇರಬೇಕಾದುದರಿಂದ ಆಕರ್ಷಕ ಉಡುಪು ಧರಿಸಿಬೇಕಾಗುತ್ತದೆ. ಉಡುಪುಗಳು ವ್ಯಕ್ತಿತ್ವದ ಸಂಕೇತ. ಇತರರ ಭಾವನೆಗಳಿಗೆ ತೊಂದರೆಯಾಗದಂತಹ ರೀತಿಯಲ್ಲಿ ಉಡುಪು ಧರಿಸುವುದು ಇಂದಿನ ಅಗತ್ಯವಾಗಿದೆ. ಆ್ಯಂಕರ್‌ಗಳನ್ನು ಕೇವಲ ಒಂದು ವರ್ಗದ ಜನ ವೀಕ್ಷಿಸುವುದಿಲ್ಲ. ಮಕ್ಕಳಿಂದ ವೃದ್ದರವರೆಗೆ ಎಲ್ಲಾ ಹಂತದ ಜನ ವೀಕ್ಷಿಸುವುದರಿಂದ ಉಡುಪುಗಳಲ್ಲಿ ಸಭ್ಯತೆ ಅಗತ್ಯ. ಸೂಟ್‌ಗಳಂತಹ ಉಡುಪುಗಳು ಎಲ್ಲರಿಗೂ ಅಚ್ಚುಮೆಚ್ಚು. ಹಾಗಾಗಿ ಆ್ಯಂಕರ್‌ಗಳು ಸೂಟ್‌ಗಳನ್ನು ಹೆಚ್ಚಾಗಿ ಧರಿಸುತ್ತಾರೆ. 
ಬದಲಾವಣೆಗೆ ಸಿದ್ದತೆ : ನಿರೂಪಣೆಯಲ್ಲಿ ಕೊನೆ ಕ್ಷಣದ ಬದಲಾವಣೆಗಳು ಸಹಜ. ಇಂತಹ ಬದಲಾವಣೆಗೆ ಹೊಂದಿಕೊಳ್ಳುವ ಹಾಗೂ ಅದನ್ನು ನಿಭಾಯಿಸುವ ಕೌಶಲ್ಯ ನಿರೂಪಕರಿಗೆ ಇರಬೇಕಾದುದು ಅಪೇಕ್ಷಣೀಯ. ಬದಲಾವಣೆಗೆ ಹೊಂದಿಕೊಳ್ಳದಿದ್ದರೆ ಆ್ಯಂಕರ್‌ಗಳ ಇಮೇಜ್ ಹಾಳಾಗುತ್ತದೆ. 
ಮಾನವೀಯತೆಯತೆ : ನಿರೂಪಕರಿಗೆ ಇರಲೇಬೇಕಾದ ಬಹುದೊಡ್ಡ ಗುಣ ಅಥವಾ ಮಾನವೀತೆ. ಸಂದರ್ಶನ ಅಥವಾ ಚರ್ಚೆ ವೇಳೆ ನಾವೂ ಒಬ್ಬ ಮನುಷ್ಯರಾಗಿ ಇನ್ನೊಬ್ಬ ಮನುಷ್ಯರೊಂದಿಗೆ ಸಂವಾದ ನಡೆಸುತ್ತಿದ್ದೆÃವೆ ಎಂಬುದನ್ನು ಮನದಲ್ಲಿಟ್ಟುಕೊಂಡು ವರ್ತಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಯಾರನ್ನೂ ಅನಗತ್ಯವಾಗಿ ದೂಷಿಸದೇ, ತೇಜೋವಧೆ ಮಾಡದೇ, ಮಾನವೀಯ ಹಕ್ಕುಗಳ ನೆಲೆಯಲ್ಲಿ ಪ್ರಸ್ತುತಿ ನಡೆಸಬೇಕು. ಆ ಮೂಲಕ ಮಾನವೀಯತೆ ಮೆರೆಯಬೇಕು.
ಜವಾಬ್ದಾರಿಗಳು
ತಂಡದ ಸದಸ್ಯರಿಂದ ಪಡೆದ ಸುದ್ದಿ/ವಿಷಯವನ್ನು ಸಮಯದ ಮಿತಿಗನುಗುಣವಾಗಿ ಹಿರಿಯರ ಸಲಹೆ ಪಡೆದು ಪಸ್ತುತಿಗೆ ಇದ್ದಪಡಿಸುವುದು.
ಸುದ್ದಿ ಕಥೆಯನ್ನು ವಿಷಯಕ್ಕೆ ಅನುಗುಣವಾಗಿ ನಿರೂಪಿಸುವುದು.
ವ್ಯಕ್ತಿ ಸಂದರ್ಶನದಲ್ಲಿ ಅಗತ್ಯ ಮಾಹಿತಿ ಸಂಗ್ರಹಿಸುವುದು. ವ್ಯಕ್ತಿಯ ಪೂರ್ವಾಪರಗಳನ್ನು ತಿಳಿದು ಸಂದರ್ಶನ ಪ್ರಶ್ನೆಗಳನ್ನು ಸಿದ್ದಪಡಿಸಿಕೊಳ್ಳುವುದು.
ಸ್ಥಳ/ಘಟನೆಯ ಪರಿಚಯದಲ್ಲಿ ಅದಕ್ಕೆ ಪೂರಕ ಮಾಹಿತಿಗಳನ್ನು ಕಲೆಹಾಕುವುದು.
ತಪ್ಪು ಮಾಹಿತಿ ನೀಡುವುದನ್ನು ತಡೆಯುವುದು.
ವಿವಿಧ ಮೂಲಗಳಿಂದ ಸಂಗ್ರಹಿಸಿದ ಸುದ್ದಿ/ವಿಷಯಗಳನ್ನು ಲೈವ್‌ಗೆ ಮುಂಚಿತವಾಗಿ ಪರಿಶೀಲಿಸುವುದು.
ವ್ಯಕ್ತಿಯ ತೇಜೋವಧೆ/ ಹಕ್ಕುಗಳ ಉಲ್ಲಂಘನೆ ಆಗುವುದನ್ನು ತಡೆಯುವುದು.
ಪ್ರಸ್ತುತ ವಿದ್ಯಮಾನಗಳಿಗೆ ಸಂಬಂಧಿಸಿದ ಹೊಸ ಶೈಲಿಯ ಸುದ್ದಿಯನ್ನು ಸೃಜಿಸುವುದು. ಆ ಮೂಲಕ ವೀಕ್ಷಕರ ಸಂಖ್ಯೆ ಹೆಚ್ಚುವಂತೆ ಮಾಡುವುದು.
ಅಂತರಜಾಲ ಸುದ್ದಿಗಳ ಸತ್ಯಾಸತ್ಯತೆ ತಿಳಿದು ಪ್ರಸಾರಕ್ಕೆ ಆಯ್ಕೆ ಮಾಡಿಕೊಳ್ಳುವುದು.
ನಿರ್ದಿಷ್ಟ ಸಮಯದೊಳಗೆ ಸುದ್ದಿ/ಮಾಹಿತಿಯನ್ನು ಓದುವುದು ಮತ್ತು ಪ್ರಸ್ತುತಿ ಪಡಿಸುವುದು. 
ಬೃಹತ್ ಪ್ರಮಾಣದಲ್ಲಿ ಒಳಬರುವ ಡಾಟಾವನ್ನು ವಿಂಗಡಿಸುವುದು, ಸಂಸ್ಕರಿಸುವುದು ಮತ್ತು ಆಧ್ಯತೆಗೆ ತಕ್ಕಂತೆ ಆಯ್ಕೆ ಮಾಡಿಕೊಂಡು ಪ್ರಸ್ತುಪಡಿಸುವುದು.
- ಆರ್.ಬಿ.ಗುರುಬಸವರಾಜ ಹೊಳಗುಂದಿ
                               

ಅರೋರಾ ಕಂಡೀರಾ! Arorea

ದಿನಾಂಕ 22-9-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.
ಅರೋರಾ ಕಂಡೀರಾ!


ಅರೋರಾ ಕಂಡಿರಾ!

ಕೆಲವೊಮ್ಮೆ ಸಂಜೆಯ ವೇಳೆ ಆಕಾಶದಲ್ಲಿ ಮಾಂತ್ರಿಕ ಪ್ರದರ್ಶನ ಏರ್ಪಟ್ಟಿರುತ್ತದೆ. ಸಂಜೆಯ ಆಗಸದಲ್ಲಿ ಬಣ್ಣಬಣ್ಣದ ಮೋಡಗಳ ಚಿತ್ತಾರವನ್ನು ಕಂಡಿದ್ದಿÃರಾ? ನೋಡಲು ಬಹು ಸುಂದರವಾಗಿರುತ್ತದೆ ಅಲ್ಲವೇ? ಬಣ್ಣ ಬಣ್ಣದ ಮೋಡಗಳಲ್ಲಿ ವಿವಿಧ ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಕಲ್ಪಿಸಿಕೊಂಡು ಅವುಗಳನ್ನು ನೋಡುವುದೇ ಒಂದು ಸಂಭ್ರಮ. ಇಂತಹ ಸನ್ನಿವೇಶಗಳು ಅನಿರೀಕ್ಷಿತವಾಗಿ ಘಟಿಸುತ್ತವೆ. ಬೆಳಕಿನ ವರ್ಣ ವಿಭಜನೆಯಿಂದದ ಇಂತಹ ನೈಸರ್ಗಿಕ ವಿದ್ಯಮಾನಗಳನ್ನು ನೋಡಿ ಸವಿಯತ್ತೆÃವೆ. ಧ್ರುವ ಪ್ರದೇಶಗಳಲ್ಲಿ ಇಂತಹ ಇನ್ನೊಂದು ವೈವಿಧ್ಯಮಯ ವಿದ್ಯಮಾನ ಜರುಗುತ್ತದೆ. ಅದೇ ಅರೋರಾ. ಈ ಅರೋರಾದ ಬಗ್ಗೆ ತಿಳಿಯುವ ಕುತುಹಲವಿದ್ದರೆ ಮುಂದೆ ಓದಿ.
ಅರೋರಾ ಎಂದರೆ,,,,,,
ಧ್ರುವ ಪ್ರದೇಶಗಳಲ್ಲಿ ರಾತ್ರಿಯ ವೇಳೆ ಆಗಸದಲ್ಲಿ ಕಾಣಬರುವ ವರ್ಣರಂಜಿತ ಬೆಳಕಿನಾಟವೇ ಅರೋರಾ. ಇದೊಂದು ನೈಸರ್ಗಿಕ ವಿದ್ಯಮಾನವಾಗಿದ್ದು, ಇದನ್ನು ಅರೋರಾ ಬೋರಿಯಾಲಿಸ್ ಎಂತಲೂ ಕರೆಯುತ್ತಾರೆ. ಅರೋರಾ ಸಾಮಾನ್ಯವಾಗಿ ಹಸಿರು ಬಣ್ಣದ ಹೊಳಪಿನಿಂದ ಕೂಡಿರುತ್ತದೆ. ಕೆಲವೊಮ್ಮೆ ತಿಳಿಕೆಂಪು ಬಣ್ಣವೂ ಸಹ ಇದರಲ್ಲಿ ಕೂಡಿರುತ್ತದೆ. ಮೊದಲ ನೋಟಕ್ಕೆ ಬೇರಾವುದೇ ದಿಕ್ಕಿನಲ್ಲಿ ಜರುಗುವ ಸೂರ್ಯೋದಯದಂತೆ ಭಾಸವಾಗುತ್ತದೆ. ಅರೋರಾ ಬೋರಿಯಾಲಿಸನ್ನು ತೆಂಕಣ ಬೆಳಕು ಎಂತಲೂ ಕರೆಯುತ್ತಾರೆ. 
ಬಣ್ಣದ ಬೆಳಕನ್ನು ಚೆಲ್ಲುತ್ತಿರುವ ಕುಂಡದಂತೆ ಅಥವಾ ಪೂರ್ವದಿಂದ ಪಶ್ಚಿಮಕ್ಕೆ ಕಟ್ಟಿರುವ ಒಂದು ಬಣ್ಣದ ಪರದೆಯಂತೆ ಅರೋರಾವು ಗೋಚರಿಸುತ್ತದೆ. ಕೆಲವೊಮ್ಮೆ ಇವು ಆಗಸದಲ್ಲಿ ದಪ್ಪನಾಗಿ ಎಳೆದಿರುವ ಸ್ಥಿರ ವಕ್ರ ರೇಖೆಗಳಂತೆ ಕಂಡರೆ, ಕೆಲವು ಸಲ ಅರೋರಾಗಳು ಕ್ಷಣಕ್ಷಣಕ್ಕೂ ಆಕಾರ ಬದಲಿಸುತ್ತವೆ. ಪ್ರತಿ ಬಣ್ಣದ ಪರದೆಯು ಕೆಲವಾರು ಸಮಾನಾಂತರ ರೇಖೆಗಳನ್ನು ಹೊಂದಿದ್ದು ಈ ಗೆರೆಗಳು ಆ ಕ್ಷೇತ್ರದ ಕಾಂತೀಯ ಗೆರೆಗಳಿಗೆ ಅನುಗುಣವಾಗಿಯೇ ಇರುತ್ತವೆ. ಇದರಿಂದಾಗಿ ಅರೋರಾಗಳ ಆಕಾರವು ಭೂಮಿಯ ಕಾಂತತ್ವದ ಮೇಲೆ ನಿರ್ಧರಿಸಲ್ಪಡುತ್ತದೆಂದು ತಿಳಿಯಲಾಗಿದೆ. ಧ್ರುವಪ್ರದೇಶಗಳಲ್ಲಿ ಆರೋರಾದ ಉಗಮವು ಅತಿ ಸಾಮಾನ್ಯ.
ಅರೋರಾ ಹೀಗೆ ಉಂಟಾಗುತ್ತದೆ
ಭೂಮಿಯ ವಾತಾವರಣದ ಮೇಲ್ಪದರದಲ್ಲಿರುವ ಪರಮಾಣುಗಳಿಗೆ ಕಾಂತಗೋಲದಲ್ಲಿನ ವಿದ್ಯುತ್ಪೆçÃರಿತ ಧನ ಅಥವಾ ಋಣ ಆಯಾನುಗಳು ಢಿಕ್ಕಿ ಹೊಡೆದಾಗ ಅರೋರಾ ಉಂಟಾಗುತ್ತದೆ. ಸೂರ್ಯನ ಮಧ್ಯಭಾಗದಲ್ಲಿನ ಸರಾಸರಿ ತಾಪವು 15 ದಶಲಕ್ಷ ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇದು ಕೆಲವು ವೇಳೆ ಏರಿಳಿತವಾಗುತ್ತದೆ. ಸೌರಜ್ವಾಲೆಗಳು ಸೌರಮಾರುತಗಳು ಎಂದು ಕರೆಯಲ್ಪಡುವ ಪ್ಲಾಸ್ಮಾ ಕಣಗಳನ್ನು ಅಂತರಿಕ್ಷಕ್ಕೆ ಹರಿಸುತ್ತವೆ. 
ಸೌರಮಾರುತಗಳು ಗಂಟೆಗೆ 300 ರಿಂದ 1200 ಕಿ.ಮೀ ವೇಗದಲ್ಲಿ ಅಂತರಿಕ್ಷದತ್ತ ಸಾಗುತ್ತವೆ. ವಿದ್ಯುತ್ಪೆçÃರಿತವಾದ ಈ ಕಣಗಳು ಭೂಮಿಯ ವಾತಾವರಣದಲ್ಲಿನ ಅನಿಲಗಳ ಪರಮಾಣುಗಳಿಗೆ ಢಿಕ್ಕಿ ಹೊಡೆದಾಗ ಅವು ಉತ್ತೆÃಜಿತವಾಗುತ್ತವೆ. ಅನಿಲಗಳ ಪರಮಾಣುಗಳು ಸೌರಮಾರುತದಿಂದ ಪಡೆದ ಶಕ್ತಿಯನ್ನು ಬೆಳಕಿನ ರೂಪದಲ್ಲಿ ಹೊರಹಾಕುತ್ತವೆ. ಬೆಳಕಿನ ಈ ಶಕ್ತಿಯು ಆಗಸದಲ್ಲಿ ವರ್ಣರಂಜಿತವಾಗಿ  ಕಾಣಿಸುವುದು. ಇದೇ ಅರೋರಾ. 
ಅರೋರಾ ಬಣ್ಣಬಣ್ಣವೇಕೆ?
ಅರೋರಾ ಗುಲಾಬಿ, ತಿಳಿಗೆಂಪು, ಹಸಿರು, ಹಳದಿ, ನೀಲಿ, ನೇರಳೆ, ಮತ್ತು ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ಕಣಗಳು ಆಮ್ಲಜನಕದೊಂದಿಗೆ ಘರ್ಷಿಸಿದಾಗ ಹಳದಿ ಮತ್ತು ಹಸಿರು ಬಣ್ಣ ಉತ್ಪತ್ತಿಯಾಗುತ್ತದೆ. ಸಾರಜನಕದೊಂದಿಗೆ ಘರ್ಷಿಸಿದಾಗ ಕೆಂಪು, ನೇರಳೆ ಮತ್ತು ಸಾಂದರ್ಬಿಕವಾಗಿ ನೀಲಿ ಬಣ್ಣ ಉತ್ಪತ್ತಿ ಮಾಡುತ್ತದೆ. ಬಣ್ಣಗಳೂ ಸಹ ಎತ್ತರದ ಮೂಲಕ ಪ್ರಭಾವಿತವಾಗುತ್ತದೆ. ಹಸಿರು ಮತ್ತು ಕೆಂಪು ಬಣ್ಣವು ವಿಶಿಷ್ಠವಾಗಿ 241 ಕಿ.ಮೀ(150 ಮೈಲು) ದೂರದವರೆಗೂ ಗೋಚರಿಸಿದರೆ, ನೀಲಿ ಮತ್ತು ನೇರಳೆ ಬಣ್ಣವು 96.5 ಕಿ.ಮೀ(60 ಮೈಲಿ) ದೂರದವರೆಗೆ ಗೋಚರಿಸುತ್ತದೆ.
ಅರೋರಾ ವೀಕ್ಷಣೆಗೆ ಸೂಕ್ತ ಸಮಯ
ಅರೋರಾ ನೋಡಲು ಚಳಿಗಾಲ ಸೂಕ್ತ ಕಾಲ. ಈ ಸಮಯದಲ್ಲಿ ಮಾಲಿನ್ಯದ ಮಟ್ಟ ಕಡಿಮೆ ಇದ್ದು ಸ್ಪಷ್ಟವಾಗಿ ಗೋಚರಿಸುತ್ತದೆ. ಸೆಪ್ಟಂಬರ್, ಅಕ್ಟೊÃಬರ್, ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳು ಅರೋರಾ ವೀಕ್ಷಿಸಲು ಉತ್ತಮ ಸಮಯ. ಸೌರಜ್ವಾಲೆಗಳು ಹೆಚ್ಚು ಸಕ್ರಿಯವಾದ ಎರಡು ದಿನಗಳ ನಂತರ ಅರೋರಾ ಹೆಚ್ಚು ಪ್ರಕಾಶಮಾನವಾಗಿರುತ್ತದೆ.
ಅರೋರಾ ಎಲ್ಲೆಲ್ಲಿ ನೋಡಬಹುದು?
ಅರೋರಾ ನೋಡಲು ಅತ್ಯುತ್ತಮ ಸ್ಥಳವೆಂದರೆ ಅಮೇರಿಕಾದ ಅಲಾಸ್ಕಾ ಮತ್ತು ಉತ್ತರ ಕೆನಡಾ. ಇವು ಹೆಚ್ಚು ವಿಶಾಲ ಪ್ರದೇಶಗಳಾಗಿದ್ದು ಯಾವಾಗಲೂ ಅರೋರಾ ನೋಡುವುದು ಸುಲಭವಲ್ಲ. ನಾರ್ವೆ, ಸ್ವಿÃಡನ್ ಮತ್ತು ಫಿನ್‌ಲ್ಯಾಂಡ್‌ಗಳು ಉತ್ತಮ ವೀಕ್ಷಣಾ ತಾಣಗಳಾಗಿವೆ. ಸೌರಸ್ಪೊÃಟವು ಸಕ್ರಿಯವಾಗಿದ್ದಾಗ ದಕ್ಷಿಣದ ಸ್ಕಾಟ್‌ಲ್ಯಾಂಡ್ ಮತ್ತು ಉತ್ತರದ ಇಂಗ್ಲೆಂಡ್‌ನಲ್ಲೂ ಅರೋರಾವನ್ನು ಕಾಣಬಹುದು. ಅಪರೂಪದ ಸಂದರ್ಭಗಳಲ್ಲಿ ದಕ್ಷಿಣದ ಇಂಗ್ಲೆಂಡಿನಲ್ಲೂ ಕಾಣಬಹುದು. 
ಇತರೆ ಗ್ರಹಗಳಲ್ಲೂ ಅರೋರಾ !
ನಮ್ಮ ಸೌರಮಂಡಲದಲ್ಲಿ ಅನಿಲ ದೈತ್ಯರು ಎನಿಸಿಕೊಂಡ ಗುರು, ಶನಿ, ಯುರೇನೆಸ್, ನೆಪ್ಚೂನ್‌ಗಳಲ್ಲಿ ದಟ್ಟ ವಾಯುಮಂಡಲ ಮತ್ತು ಬಲವಾದ ಕಾಂತೀಯ ಕ್ಷೆÃತ್ರವಿದೆ. ಹಾಗಾಗಿ ಈ ಅನಿಲದೈತ್ಯ ಗ್ರಹಗಳಲ್ಲೂ ಅರೋರಾ ಕಾಣಬಹುದು. ಆದರೆ ಇಲ್ಲಿನ ಅರೋರಾ ಭೂಮಿಗಿಂತ ಸ್ವಲ್ಪ ಭಿನ್ನ ಸ್ಥಿತಿಯಲ್ಲಿ ರೂಪುಗೊಳ್ಳುತ್ತದೆ.
ಅರೋರಾದ ಇತಿಹಾಸ 
ಶತಶತಮಾನಗಳಿಂದಲೂ ಬೆಳಕು ಊಹಾಪೋಹ, ಮೂಢನಂಬಿಕೆ ಮತ್ತು ವಿಸ್ಮಯಗಳ ಮೂಲವಾಗಿತ್ತು. 30,000 ವರ್ಷಗಳ ಇತಿಹಾಸವಿರುವ ಫ್ರಾನ್ಸ್ನ ಗುಹೆಗಳಲ್ಲಿನ ವರ್ಣಚಿತ್ರಗಳು ಬೆಳಕಿನ ನೈಸರ್ಗಿಕ ವಿದ್ಯಮಾನದ ವಿವರಣೆ ಹೊಂದಿವೆ ಎಂದು ಭಾವಿಸಲಾಗಿದೆ. ಧ್ರುವ ಪ್ರದೇಶಗಳಲ್ಲಿ ಅರೋರಾದಂತಹ ಬೆಳಕು ಯುದ್ದ ಅಥವಾ ವಿನಾಶದ ಮುಂದಾಲೋಚನೆ ಎಂದು ಭಾವಿಸಲಾಗಿತ್ತು. ಅರಿಸ್ಟಾಟಲ್, ಡೆಸ್ಕಾರ್ಟೆ, ಗಯಟೆ, ಹ್ಯಾಲಿ ಮುಂತಾದ ಖಗೋಳಶಾಸ್ತçಜ್ಞರು ತಮ್ಮ ಕೃತಿಗಳಲ್ಲಿ ಅರೋರಾ ಬೆಳಕಿನ ಬಗ್ಗೆ ಉಲ್ಲೆÃಖೀಸಿದ್ದಾರೆ. 1616 ರಷ್ಟು ಮುಂಚೆ ಗೆಲಿಲಿಯೋ ಗೆಲಿಲಿ ಅರೋರಾ ಬೋರೊಯಾಲಿಸ್ ಎಂಬ ಹೆಸರನ್ನು ಬಳಸಿದ್ದಾರೆ. ರೋಮನ್ ಪುರಾಣ ದೇವತೆಯಾದ ಅರೋರಾ ಮತ್ತು ಗ್ರಿÃಕ್‌ನ ಉತ್ತರದ ಗಾಳಿಯಾದ ಬೋರಾಸ್ ಹೆಸರಿನಲ್ಲಿ ಅರೋರಾ ಬೋರೊಯಾಲಿಸ್ ಎಂಬ ಹೆಸರು ಬಂದಿದೆ ಎನ್ನುತ್ತಾರೆ.
ಆರ್.ಬಿ.ಗುರುಬಸವರಾಜ


ಸವಾಲಾದಿರಲಿ ಮಕ್ಕಳ ಸಂಕೋಚ ಸ್ವಭಾವ Shyness in Children

ದಿನಾಂಕ 18-9-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.



ಸವಾಲಾದಿರಲಿ ಮಕ್ಕಳ ಸಂಕೋಚ ಸ್ವಭಾವ

ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಕನಸು ಮನೆಗೆ ಯಾರಾದರೂ ಅತಿಥಿಗಳು ಬಂದರೆ ಸಾಕು, ತಂದೆ ತಾಯಿಗೆ ಅಂಟಿಕೊಂಡುಬಿಡುತ್ತಾಳೆ. ಯಾರೊಂದಿಗೂ ಮಾತನಾಡುವುದಿಲ್ಲ. ಅಳುಮೋರೆ ಹಾಕಿಕೊಂಡು ಪೆಚ್ಚಾಗಿರುತ್ತಾಳೆ. ಅತಿಥಿಗಳು ಹೋಗಿ ಕೆಲ ಕಾಲದ ನಂತರ ಮೊದಲಿನಂತಾಗುತ್ತಾಳೆ. ಸಭೆ ಸಮಾರಂಭಗಳಲ್ಲಂತೂ ಯಾವಾಗಲೂ ತಾಯಿಗೆ ಅಂಟಿಕೊಂಡೇ ಇರುತ್ತಾಳೆ. ಕನಸುವಿನ ಈ ವರ್ತನೆ ತಂದೆ ತಾಯಿಗಳಿಗೆ ಬೇಸರ ತಂದಿದೆ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ.
ಶಾಲೆಯಲ್ಲಿ ಕಲಿತ ಹಾಡು, ಮಗ್ಗಿ, ಇತ್ಯಾದಿಗಳನ್ನು ತಂದೆ-ತಾಯಿ ಕೇಳದಿದ್ದರೂ ಪಟಪಟನೇ ಹೇಳುವ ಶಶಾಂಕ ಬಂಧುಗಳ ಎದಿರು ಹೇಳಲು ತಡವರಿಸುತ್ತಾನೆ. ಒಂದೊಂದು ಅಕ್ಷರ/ಪದ ಹೇಳಲು ಕಷ್ಟಪಡುತ್ತಾನೆ. ಶಾಲೆಯಲ್ಲಿ ಸ್ನೆÃಹಿತರ ಜೊತೆಗೆ ಸದಾ ಮಾತನಾಡುವ ಶಶಾಂಕ ಶಿಕ್ಷಕರ ಮಾತಿಗೆ ಪ್ರತಿಕ್ರಿಯೆ ನೀಡುವುದೇ ಇಲ್ಲ. ಸದಾ ಮೌನಿಯಾಗಿರುತ್ತಾನೆ. 
ಇದು ಕೇವಲ ಕನಸು ಮತ್ತು ಶಶಾಂಕರ ಸಮಸ್ಯೆಯಲ್ಲ. ಬಹುತೇಕ ಮಕ್ಕಳು ಇಂತಹ ವರ್ತನೆ ತೋರುತ್ತಿರುತ್ತಾರೆ. ಪರಿಚಯವಿಲ್ಲದ ಸಂದರ್ಭಗಳಲ್ಲಿ ಕೆಲವು ಮಕ್ಕಳು ಸಂವಹನ ಮಾಡಲು ಹಿಂಜರಿಯುತ್ತಾರೆ. ಅದನ್ನೆÃ ನಾವು ಸಂಕೋಚ ಅಥವಾ ನಾಚಿಕೆ ಎನ್ನುತ್ತೆÃವೆ. ಮಗುವಿನಲ್ಲಿ ಇಂತಹ ವರ್ತನೆ ಪೋಷಕರಿಗೆ ಗಾಬರಿ ಹುಟ್ಟಿಸಬಹುದು. ಸ್ನೆÃಹಪರರು ಮತ್ತು ಒಡನಾಡಿಗಳೊಂದಿಗೆ ಮಾತ್ರ ಮುಕ್ತವಾಗಿ ಸಂವಹನ ಮಾಡುವ ಮಕ್ಕಳು, ಹೊಸ ಸನ್ನಿವೇಶ ಅಥವಾ ಹೊಸಬರೊಂದಿಗೆ ವ್ಯವಹರಿಸಲು ಹಿಂಜರಿಯುತ್ತದೆ. 
ಮಗು ಬೆಳೆದು ದೊಡ್ಡದಾದಂತೆ ಪರಿಚಿತ ಪ್ರಪಂಚವು ವಿಸ್ತರಿಸುತ್ತದೆ. ವಿವಿಧ ಜನರನ್ನು ಭೇಟಿಯಾಗುವ, ಮಾತಮಾಡುವ, ವ್ಯವಹರಿಸುವ ಸಂದರ್ಭಗಳು ಪದೇ ಪದೇ ಜರುಗುತ್ತವೆ. ಇದರಿಂದಾಗಿ ಮಗು ನಿಧಾನವಾಗಿ ಸಂಕೋಚವನ್ನು ಕಳೆದುಕೊಂಡು ಮುಕ್ತವಾಗಿ ವ್ಯವಹರಿಸಲು ಪ್ರಾರಂಭಿಸುತ್ತದೆ. ಹೆತ್ತವರ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಮಗು ಕ್ರಮೇಣ ಸ್ವಾವಲಂಬಿಯಾಗಲು ಪ್ರಯತ್ನಿಸುತ್ತದೆ. ಮಗುವಿನ ಪರಿಕಲ್ಪನೆ ಮತ್ತು ವಿಷಯಗಳ ಪ್ರಪಂಚ ವಿಸ್ತರಿಸುತ್ತದೆ. ಸಾಮಾಜೀಕರಣದ ಪ್ರಭಾವದಿಂದಾಗಿ ಮಗು ಎಲ್ಲರೊಂದಿಗೆ ಬೆರೆಯುವ ಗುಣ ಅಭಿವೃದ್ದಿಪಡಿಸಿಕೊಳ್ಳುತ್ತದೆ. 
ಕೆಲವು ಮಕ್ಕಳು ಎಲ್ಲಾ ವಯಸ್ಸಿನಲ್ಲೂ ನಾಚಿಕೆ ಪಡುತ್ತಾರೆ. ತೀಕ್ಷ÷್ಣವಾದ ಸ್ವಭಾವದಿಂದ ಬಳಲುವ ಮಕ್ಕಳ ಸಂಕೋಚ/ನಾಚಿಕೆ ಪ್ರೌಢಾವಸ್ಥೆಯಲ್ಲೂ ಮುಂದುವರೆಯಬಹುದು. ಇದರಿಂದ ಮಕ್ಕಳು ಪ್ರತಿಯೊಂದು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಾರೆ. ಸಂಕೋಚವು ಮಗುವಿನ ಸಾಮರ್ಥ್ಯಾಭಿವೃದ್ದಿಯ ಮೇಲೆ ನೇರ ಪ್ರಭಾವ ಬೀರುತ್ತದೆ. ಯಾವ ಮಗು ಮುಕ್ತವಾಗಿ ಎಲ್ಲರೊಂದಿಗೂ ಬೆರೆತು ಸಂವಹನ ಮಾಡುತ್ತದೆಯೋ ಆ ಮಗುವಿನಲ್ಲಿ ಸಾಮಾಜಿಕ, ಭಾವನಾತ್ಮಕ ಮತ್ತು ಶೈಕ್ಷಣಿಕ ಸಾಮರ್ಥ್ಯಗಳು ಬೇಗನೇ ವೃದ್ದಿಯಾಗುತ್ತವೆ. ಹಾಗಾಗಿ ಪಾಲಕರು ಪ್ರಾರಂಭಿಕ ಹಂತದಲ್ಲಿ ಸಂಕೋಚವನ್ನು ಗುರುತಿಸಿ, ಸೂಕ್ತ ಮಾರ್ಪಾಡುಗಳೊಂದಿಗೆ ಮಗುವಿನ ಸಾಮರ್ಥ್ಯಾಭಿವೃದ್ದಿಗೆ ಸಹಕರಿಸಬಹುದು.

ಸಂಕೋಚದ ಚಿಹ್ನೆಗಳು :
ಹೊಸಬರನ್ನು ಅನುಮಾನದಿಂದ ನೋಡುವುದು.
ಇತರರ ಸುತ್ತಲೂ ವಿಚಿತ್ರ ಭಾವನೆಯನ್ನು ಅನುಭವಿಸುವುದು.
ಸದಾ ಅಸುರಕ್ಷತೆಯ ಮತ್ತು ಅಹಿತಕರ ಭಾವನೆ ಅನುಭವಿಸುತ್ತಿರುವುದು.
ಅಂಜುಬುರುಕತನ ಭಾವನೆ.
ನಾಚಿಕೆ ಸ್ವಭಾವದ ಪ್ರದರ್ಶನ.
ಸಮರ್ಥಿಸಿಕೊಳ್ಳಲು ನಿಷ್ಕಿçÃಯವಾದ ಕಾರಣಗಳ ಪ್ರದರ್ಶನ.
ಭೌತಿಕ ಸಂವೇದನೆಗಳ ಪ್ರದರ್ಶನ.
ವೇಗವಾಗಿ ಉಸಿರಾಡುವಿಕೆ.
ಮುಖ ಮತ್ತು ಕೈಗಳಲ್ಲಿ ಅನಗತ್ಯ ಬೆವರು ಒಸರುವಿಕೆ.
ವಿಶ್ವಾಸಿಗರು ಅಥವಾ ಗೋಡೆ ಹಿಂದೆ ಅವಿತುಕೊಳ್ಳುವುದು.
ಸಂಕೋಚಕ್ಕೆ ಕಾರಣಗಳು:
ಅನಿವಂಶೀಯತೆ. 
ಭಯದ ವಾತಾವರಣ.
ಕಲಿಕೆಯ ನಡವಳಿಕೆಗಳ ಮೇಲೆ ಆತ್ಮವಿಶ್ವಾಸ ಇಲ್ಲದಿರುವುದು.
ಕೌಟುಂಬಿಕ ಸಮಸ್ಯೆಗಳ ಕೆಟ್ಟ ಪರಿಣಾಮ
ಪಾಲಕರ ಅಸಮಂಜಸ ನಡವಳಿಕೆಗಳು.
ಕುಟುಂಬದಲ್ಲಿ ಅಸುರಕ್ಷತೆ ಭಾವನೆ.
ಸಾಮಾಜಿಕ ಸಂವಹನ ಕೌಶಲ್ಯಗಳ ಕೊರತೆ.
ಪಾಲಕರು/ಪೋಷಕರ ಕಠಿಣವಾದ ವಿಮರ್ಶೆ .
ಟೀಕೆ ಮತ್ತು ಅಪನಿಂದನೆಗಳು.
ವೈಫಲ್ಯದ ಭಯ.
ಕುಟುಂಬದಲ್ಲಿ ಗಮನದ ಕೊರತೆ.
ಗಮನಾರ್ಹ ವ್ಯಕ್ತಿಗಳಿಂದ ಕಿರುಕುಳ ಅಥವಾ ಹಿಂಸೆ.
ಅಂತರ್ಮುಖಿಗಳಾಗಿರುವುದು.

ಸಂಕೋಚದ ಕೆಲವು ಲಾಭಗಳು: 
ಸಂಕೋಚದಿಂದ ಮಗು ಕೇವಲ ತೊಂದರೆಗೆ ಒಳಗಾಗುವುದಿಲ್ಲ. ಬದಲಾಗಿ ಕೆಲವು ಲಾಭಗಳನ್ನೂ ಅನುಭವಿಸುತ್ತದೆ. ಅವುಗಳೆಂದರೆ ಹೊಸಬರನ್ನು ನಂಬಿ ತೊಂದರೆಗೆ ಸಿಲುಕದೇ ಇರುವುದು, ಸದಾ ಜಾಗೃತಿಯಲ್ಲಿರುವುದು, ವಾತಾವರಣಕ್ಕೆ ಅನುಗುಣವಾಗಿ ವರ್ತಿಸುವುದು, ವರ್ತನೆಯಲ್ಲಿ ಸದಾ ಜಾಗೃತಿಯಿಂದ ಇರುವುದು, ಉತ್ತಮವಾಗಿ ಕೆಲಸ ಮಾಡಬೇಕೆಂಬ ಹಂಬಲ ಹೆಚ್ಚುವುದು, ತಪ್ಪು ಮಾಡಲೇಬಾರದೆಂಬ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವುದು. ಹೀಗೆ ಅನೇಕ ವ್ಯಕ್ತಿಗತ ಲಾಭಗಳು ದೊರೆಯುತ್ತವೆ.

ಬದಲಾಗಬೇಕಾದ ಪೋಷಕರ ವರ್ತನೆಗಳು :
ನಾಚಿಕೆಗೇಡಿ, ಸಂಕೋಚ ಸ್ವಭಾವ ಎಂದು ಮಗುವಿಗೆ ಹಣೆಪಟ್ಟಿ ಹಚ್ಚಬೇಡಿ.
ನಾಚಿಕೆಪಡಿಸುವಂತಹ ಸಂದರ್ಭಗಳಿಂದ ಮಗುವನ್ನು ದೂರವಿಡಿ.
ಮಗು ನಾಚಿಕೆ/ಸಂಕೋಚಪಡುವಾಗ ಟೀಕಿಸಬೇಡಿ ಅಥವಾ ಗೇಲಿ ಮಾಡಬೇಡಿ. ಬದಲಿಗೆ ಮಗುವಿಗೆ ಬೆಂಬಲ, ಅನುಭೂತಿ ನೀಡಿ.
ಭಯ ರಹಿತ ವಾತಾವರಣ ನಿರ್ಮಿಸಿ. ಸಂಕೋಚದ ಕಾರಣಗಳ ಬಗ್ಗೆ ಮಾತನಾಡಲು ಪ್ರೊÃತ್ಸಾಹಿಸಿ ಅಥವಾ ಅವಕಾಶ ನೀಡಿ. 
ಮಗುವಿನಲ್ಲಿ ಆತಂಕ ಹಾಗೂ ದುಗುಡ ಹೆಚ್ಚಿಸಬೇಡಿ.  
ಮಗುವನ್ನು ಒಬ್ಬಂಟಿಯಾಗಿ ಬಿಟ್ಟು ಹೋಗುವ ಸಂದರ್ಭ ಬಂದಾಗ ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕಲಿಸಿ.
ಪೋಷಕರ ತಂತ್ರಗಾರಿಕೆ :
ನೀವು ಮಗುವಾಗಿದ್ದಾಗ ಸಂಕೋಚ ಅನುಭವಿಸಿದಾಗ ಅದನ್ನು ಹೇಗೆ ಎದುರಿಸಿದಿರಿ ಎಂಬುದನ್ನು ಮಗುವಿಗೆ ತಿಳಿಸಿ ಹೇಳಿ.
ಸಂಕೋಚಪಡದೇ ಇರುವಂತಹ ಅನೇಕ ಪ್ರಯೋಜನಗಳ ಬಗ್ಗೆ ಮಗುವಿಗೆ ತಿಳಿಸಿ. ನಿಮ್ಮ ಜೀವನದ ಸ್ವಂತ ಉದಾಹರಣೆ ತಿಳಿಸಿ.
ಸಭೆ, ಕಾರ್ಯಕ್ರಮಗಳು, ಸಮಾರಂಭಗಳು ಇತ್ಯಾದಿಗಳಿಗೆ ಮಗುವನ್ನು ಮನೆಯಿಂದ ಹೊರ ಕರೆದೊಯ್ಯಿರಿ. 
ಪರಿಚಯವಿಲ್ಲವರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಹೇಳಿಕೊಡಿ. 
ಮನೆಗೆ ಆಗಾಗ ಅತಿಥಿಗಳನ್ನು, ಸ್ನೆÃಹಿತರನ್ನು, ಬಂಧುಗಳನ್ನು ಆಹ್ವಾನಿಸಿ, ಮಗುವಿಗೆ ಪರಿಚಯ ಮಾಡಿಕೊಡಿ. ಅವರ ಮತ್ತು ನಿಮ್ಮ ಸಂಬಂಧದ ಬಗ್ಗೆ ಮಗುವಿಗೆ ವಿವರವಾಗಿ ತಿಳಿಸಿ.
ಮನೆಗೆ ಬಂದ ಅತಿಥಿಗಳನ್ನು ಮಾತನಾಡಿಸಲು ಮಗುವಿಗೆ ತಿಳಿಸಿ. 
ಹೊಸ ವ್ಯಕ್ತಿಗಳನ್ನು ಮಗು ಮಾತನಾಡಿಸಿದಾಗ ಮಗುವನ್ನು ಅಭಿನಂದಿಸಿ. 
ಮಗುವಿಗೆ ಭಾವನಾತ್ಮಕ ಬೆಂಬಲ ನೀಡಿ. 
ಹೊಸ ವಾತಾವರಣದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂಬ ಬಗ್ಗೆ ತಿಳುವಳಿಕೆ ನೀಡಿ.
ಮುಕ್ತವಾಗಿ ಮಾತನಾಡಲು ಅವಕಾಶಗಳನ್ನು ಸೃಷ್ಟಿಸಿ.
ಸಾಮಾಜಿಕ ಕೌಶಲ್ಯಗಳ ಕುರಿತ ಆತ್ಮವಿಶ್ವಾಸ ಮೂಡಿಸಿ.
ನಿಮ್ಮ ಕೋಪವನ್ನು ಮೊದಲು ಕಡಿಮೆ ಮಾಡಿಕೊಂಡು ನಂತರ ಮಗುವಿನ ಕೋಪವನ್ನು ಕಡಿಮೆ ಮಾಡಿ.
ಬದಲಾವಣೆ ಅಥವಾ ಪರಿವರ್ತನೆ ಜಗದ ನಿಯಮ ಎಂಬುದನ್ನು ಮಗುವಿಗೆ ಮನವರಿಕೆ ಮಾಡಿಕೊಡಿ.
ವೈಫಲ್ಯ ಎದುರಿಸುವುದನ್ನು ಕಲಿಸಿ.
ಧೈರ್ಯ ಸ್ಥೆöÊರ್ಯ ತುಂಬಿ ಆತ್ಮವಿಶ್ವಾಸ ಬೆಳೆಸಿ.
ಅಪಾಯಕಾರಿ ಸಂದರ್ಭಗಳಿಂದ ಮಗು ದೂರವಿರಲು ತಿಳಿಸಿ.

ಆರ್.ಬಿ.ಗುರುಬಸವರಾಜ 


September 18, 2018

ಮಕ್ಕಳ ಸಂಕೋಚ ಸ್ವಭಾವ

ದಿನಾಂಕ 18-9-18 ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.


ತಾಯಂದಿರಿಗೆ ಸವಾಲಾದಿರಲಿ ಮಕ್ಕಳ ಸಂಕೋಚ ಸ್ವಭಾವ
ನಾಲ್ಕನೇ ತರಗತಿಯಲ್ಲಿ ಓದುತ್ತಿರುವ ಕನಸು ಮನೆಗೆ ಯಾರಾದರೂ ಅತಿಥಿಗಳು ಬಂದರೆ ಸಾಕು, ತಂದೆ ತಾಯಿಗೆ ಅಂಟಿಕೊಂಡುಬಿಡುತ್ತಾಳೆ. ಯಾರೊಂದಿಗೂ ಮಾತನಾಡುವುದಿಲ್ಲ. ಅಳುಮೋರೆ ಹಾಕಿಕೊಂಡು ಪೆಚ್ಚಾಗಿರುತ್ತಾಳೆ. ಅತಿಥಿಗಳು ಹೋಗಿ ಕೆಲ ಕಾಲದ ನಂತರ ಮೊದಲಿನಂತಾಗುತ್ತಾಳೆ. ಸಭೆ ಸಮಾರಂಭಗಳಲ್ಲಂತೂ ಯಾವಾಗಲೂ ತಾಯಿಗೆ ಅಂಟಿಕೊಂಡೇ ಇರುತ್ತಾಳೆ. ಕನಸುವಿನ ಈ ವರ್ತನೆ ತಂದೆ ತಾಯಿಗಳಿಗೆ ಬೇಸರ ತಂದಿದೆ. ಏನು ಮಾಡಬೇಕೆಂಬುದೇ ತೋಚುತ್ತಿಲ್ಲ.
ಶಾಲೆಯಲ್ಲಿ ಕಲಿತ ಹಾಡು, ಮಗ್ಗಿ, ಇತ್ಯಾದಿಗಳನ್ನು ತಂದೆ-ತಾಯಿ ಕೇಳದಿದ್ದರೂ ಪಟಪಟನೇ ಹೇಳುವ ಶಶಾಂಕ ಬಂಧುಗಳ ಎದಿರು ಹೇಳಲು ತಡವರಿಸುತ್ತಾನೆ. ಒಂದೊಂದು ಅಕ್ಷರ/ಪದ ಹೇಳಲು ಕಷ್ಟಪಡುತ್ತಾನೆ. ಶಾಲೆಯಲ್ಲಿ ಸ್ನೆÃಹಿತರ ಜೊತೆಗೆ ಸದಾ ಮಾತನಾಡುವ ಶಶಾಂಕ ಶಿಕ್ಷಕರ ಮಾತಿಗೆ ಪ್ರತಿಕ್ರಿಯೆ ನೀಡುವುದೇ ಇಲ್ಲ. ಸದಾ ಮೌನಿಯಾಗಿರುತ್ತಾನೆ. 
ಇದು ಕೇವಲ ಕನಸು ಮತ್ತು ಶಶಾಂಕರ ಸಮಸ್ಯೆಯಲ್ಲ. ಬಹುತೇಕ ಮಕ್ಕಳು ಇಂತಹ ವರ್ತನೆ ತೋರುತ್ತಿರುತ್ತಾರೆ. ಪರಿಚಯವಿಲ್ಲದ ಸಂದರ್ಭಗಳಲ್ಲಿ ಕೆಲವು ಮಕ್ಕಳು ಸಂವಹನ ಮಾಡಲು ಹಿಂಜರಿಯುತ್ತಾರೆ. ಅದನ್ನೆÃ ನಾವು ಸಂಕೋಚ ಅಥವಾ ನಾಚಿಕೆ ಎನ್ನುತ್ತೆÃವೆ. ಮಗುವಿನಲ್ಲಿ ಇಂತಹ ವರ್ತನೆ ಪೋಷಕರಿಗೆ ಗಾಬರಿ ಹುಟ್ಟಿಸಬಹುದು. ಸ್ನೆÃಹಪರರು ಮತ್ತು ಒಡನಾಡಿಗಳೊಂದಿಗೆ ಮಾತ್ರ ಮುಕ್ತವಾಗಿ ಸಂವಹನ ಮಾಡುವ ಮಕ್ಕಳು, ಹೊಸ ಸನ್ನಿವೇಶ ಅಥವಾ ಹೊಸಬರೊಂದಿಗೆ ವ್ಯವಹರಿಸಲು ಹಿಂಜರಿಯುತ್ತದೆ. 
ಮಗು ಬೆಳೆದು ದೊಡ್ಡದಾದಂತೆ ಪರಿಚಿತ ಪ್ರಪಂಚವು ವಿಸ್ತರಿಸುತ್ತದೆ. ವಿವಿಧ ಜನರನ್ನು ಭೇಟಿಯಾಗುವ, ಮಾತಮಾಡುವ, ವ್ಯವಹರಿಸುವ ಸಂದರ್ಭಗಳು ಪದೇ ಪದೇ ಜರುಗುತ್ತವೆ. ಇದರಿಂದಾಗಿ ಮಗು ನಿಧಾನವಾಗಿ ಸಂಕೋಚವನ್ನು ಕಳೆದುಕೊಂಡು ಮುಕ್ತವಾಗಿ ವ್ಯವಹರಿಸಲು ಪ್ರಾರಂಭಿಸುತ್ತದೆ. ಹೆತ್ತವರ ಮೇಲೆ ಹೆಚ್ಚು ಅವಲಂಬಿತವಾಗಿದ್ದ ಮಗು ಕ್ರಮೇಣ ಸ್ವಾವಲಂಬಿಯಾಗಲು ಪ್ರಯತ್ನಿಸುತ್ತದೆ. ಮಗುವಿನ ಪರಿಕಲ್ಪನೆ ಮತ್ತು ವಿಷಯಗಳ ಪ್ರಪಂಚ ವಿಸ್ತರಿಸುತ್ತದೆ. ಸಾಮಾಜೀಕರಣದ ಪ್ರಭಾವದಿಂದಾಗಿ ಮಗು ಎಲ್ಲರೊಂದಿಗೆ ಬೆರೆಯುವ ಗುಣ ಅಭಿವೃದ್ದಿಪಡಿಸಿಕೊಳ್ಳುತ್ತದೆ. 
ಕೆಲವು ಮಕ್ಕಳು ಎಲ್ಲಾ ವಯಸ್ಸಿನಲ್ಲೂ ನಾಚಿಕೆ ಪಡುತ್ತಾರೆ. ತೀಕ್ಷ÷್ಣವಾದ ಸ್ವಭಾವದಿಂದ ಬಳಲುವ ಮಕ್ಕಳ ಸಂಕೋಚ/ನಾಚಿಕೆ ಪ್ರೌಢಾವಸ್ಥೆಯಲ್ಲೂ ಮುಂದುವರೆಯಬಹುದು. ಇದರಿಂದ ಮಕ್ಕಳು ಪ್ರತಿಯೊಂದು ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಾರೆ. ಸಂಕೋಚವು ಮಗುವಿನ ಸಾಮರ್ಥ್ಯಾಭಿವೃದ್ದಿಯ ಮೇಲೆ ನೇರ ಪ್ರಭಾವ ಬೀರುತ್ತದೆ. ಯಾವ ಮಗು ಮುಕ್ತವಾಗಿ ಎಲ್ಲರೊಂದಿಗೂ ಬೆರೆತು ಸಂವಹನ ಮಾಡುತ್ತದೆಯೋ ಆ ಮಗುವಿನಲ್ಲಿ ಸಾಮಾಜಿಕ, ಭಾವನಾತ್ಮಕ ಮತ್ತು ಶೈಕ್ಷಣಿಕ ಸಾಮರ್ಥ್ಯಗಳು ಬೇಗನೇ ವೃದ್ದಿಯಾಗುತ್ತವೆ. ಹಾಗಾಗಿ ಪಾಲಕರು ಪ್ರಾರಂಭಿಕ ಹಂತದಲ್ಲಿ ಸಂಕೋಚವನ್ನು ಗುರುತಿಸಿ, ಸೂಕ್ತ ಮಾರ್ಪಾಡುಗಳೊಂದಿಗೆ ಮಗುವಿನ ಸಾಮರ್ಥ್ಯಾಭಿವೃದ್ದಿಗೆ ಸಹಕರಿಸಬಹುದು.

ಸಂಕೋಚದ ಚಿಹ್ನೆಗಳು :
ಹೊಸಬರನ್ನು ಅನುಮಾನದಿಂದ ನೋಡುವುದು.
ಇತರರ ಸುತ್ತಲೂ ವಿಚಿತ್ರ ಭಾವನೆಯನ್ನು ಅನುಭವಿಸುವುದು.
ಸದಾ ಅಸುರಕ್ಷತೆಯ ಮತ್ತು ಅಹಿತಕರ ಭಾವನೆ ಅನುಭವಿಸುತ್ತಿರುವುದು.
ಅಂಜುಬುರುಕತನ ಭಾವನೆ.
ನಾಚಿಕೆ ಸ್ವಭಾವದ ಪ್ರದರ್ಶನ.
ಸಮರ್ಥಿಸಿಕೊಳ್ಳಲು ನಿಷ್ಕಿçÃಯವಾದ ಕಾರಣಗಳ ಪ್ರದರ್ಶನ.
ಭೌತಿಕ ಸಂವೇದನೆಗಳ ಪ್ರದರ್ಶನ.
ವೇಗವಾಗಿ ಉಸಿರಾಡುವಿಕೆ.
ಮುಖ ಮತ್ತು ಕೈಗಳಲ್ಲಿ ಅನಗತ್ಯ ಬೆವರು ಒಸರುವಿಕೆ.
ವಿಶ್ವಾಸಿಗರು ಅಥವಾ ಗೋಡೆ ಹಿಂದೆ ಅವಿತುಕೊಳ್ಳುವುದು.
ಸಂಕೋಚಕ್ಕೆ ಕಾರಣಗಳು:
ಅನಿವಂಶೀಯತೆ. 
ಭಯದ ವಾತಾವರಣ.
ಕಲಿಕೆಯ ನಡವಳಿಕೆಗಳ ಮೇಲೆ ಆತ್ಮವಿಶ್ವಾಸ ಇಲ್ಲದಿರುವುದು.
ಕೌಟುಂಬಿಕ ಸಮಸ್ಯೆಗಳ ಕೆಟ್ಟ ಪರಿಣಾಮ
ಪಾಲಕರ ಅಸಮಂಜಸ ನಡವಳಿಕೆಗಳು.
ಕುಟುಂಬದಲ್ಲಿ ಅಸುರಕ್ಷತೆ ಭಾವನೆ.
ಸಾಮಾಜಿಕ ಸಂವಹನ ಕೌಶಲ್ಯಗಳ ಕೊರತೆ.
ಪಾಲಕರು/ಪೋಷಕರ ಕಠಿಣವಾದ ವಿಮರ್ಶೆ .
ಟೀಕೆ ಮತ್ತು ಅಪನಿಂದನೆಗಳು.
ವೈಫಲ್ಯದ ಭಯ.
ಕುಟುಂಬದಲ್ಲಿ ಗಮನದ ಕೊರತೆ.
ಗಮನಾರ್ಹ ವ್ಯಕ್ತಿಗಳಿಂದ ಕಿರುಕುಳ ಅಥವಾ ಹಿಂಸೆ.
ಅಂತರ್ಮುಖಿಗಳಾಗಿರುವುದು.

ಸಂಕೋಚದ ಕೆಲವು ಲಾಭಗಳು: 
ಸಂಕೋಚದಿಂದ ಮಗು ಕೇವಲ ತೊಂದರೆಗೆ ಒಳಗಾಗುವುದಿಲ್ಲ. ಬದಲಾಗಿ ಕೆಲವು ಲಾಭಗಳನ್ನೂ ಅನುಭವಿಸುತ್ತದೆ. ಅವುಗಳೆಂದರೆ ಹೊಸಬರನ್ನು ನಂಬಿ ತೊಂದರೆಗೆ ಸಿಲುಕದೇ ಇರುವುದು, ಸದಾ ಜಾಗೃತಿಯಲ್ಲಿರುವುದು, ವಾತಾವರಣಕ್ಕೆ ಅನುಗುಣವಾಗಿ ವರ್ತಿಸುವುದು, ವರ್ತನೆಯಲ್ಲಿ ಸದಾ ಜಾಗೃತಿಯಿಂದ ಇರುವುದು, ಉತ್ತಮವಾಗಿ ಕೆಲಸ ಮಾಡಬೇಕೆಂಬ ಹಂಬಲ ಹೆಚ್ಚುವುದು, ತಪ್ಪು ಮಾಡಲೇಬಾರದೆಂಬ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವುದು. ಹೀಗೆ ಅನೇಕ ವ್ಯಕ್ತಿಗತ ಲಾಭಗಳು ದೊರೆಯುತ್ತವೆ.

ಬದಲಾಗಬೇಕಾದ ಪೋಷಕರ ವರ್ತನೆಗಳು :
ನಾಚಿಕೆಗೇಡಿ, ಸಂಕೋಚ ಸ್ವಭಾವ ಎಂದು ಮಗುವಿಗೆ ಹಣೆಪಟ್ಟಿ ಹಚ್ಚಬೇಡಿ.
ನಾಚಿಕೆಪಡಿಸುವಂತಹ ಸಂದರ್ಭಗಳಿಂದ ಮಗುವನ್ನು ದೂರವಿಡಿ.
ಮಗು ನಾಚಿಕೆ/ಸಂಕೋಚಪಡುವಾಗ ಟೀಕಿಸಬೇಡಿ ಅಥವಾ ಗೇಲಿ ಮಾಡಬೇಡಿ. ಬದಲಿಗೆ ಮಗುವಿಗೆ ಬೆಂಬಲ, ಅನುಭೂತಿ ನೀಡಿ.
ಭಯ ರಹಿತ ವಾತಾವರಣ ನಿರ್ಮಿಸಿ. ಸಂಕೋಚದ ಕಾರಣಗಳ ಬಗ್ಗೆ ಮಾತನಾಡಲು ಪ್ರೊÃತ್ಸಾಹಿಸಿ ಅಥವಾ ಅವಕಾಶ ನೀಡಿ. 
ಮಗುವಿನಲ್ಲಿ ಆತಂಕ ಹಾಗೂ ದುಗುಡ ಹೆಚ್ಚಿಸಬೇಡಿ.  
ಮಗುವನ್ನು ಒಬ್ಬಂಟಿಯಾಗಿ ಬಿಟ್ಟು ಹೋಗುವ ಸಂದರ್ಭ ಬಂದಾಗ ಇತರರೊಂದಿಗೆ ಹೇಗೆ ನಡೆದುಕೊಳ್ಳಬೇಕೆಂಬುದನ್ನು ಕಲಿಸಿ.
ಪೋಷಕರ ತಂತ್ರಗಾರಿಕೆ :
ನೀವು ಮಗುವಾಗಿದ್ದಾಗ ಸಂಕೋಚ ಅನುಭವಿಸಿದಾಗ ಅದನ್ನು ಹೇಗೆ ಎದುರಿಸಿದಿರಿ ಎಂಬುದನ್ನು ಮಗುವಿಗೆ ತಿಳಿಸಿ ಹೇಳಿ.
ಸಂಕೋಚಪÀಡದೇ ಇರುವಂತಹ ಅನೇಕ ಪ್ರಯೋಜನಗಳ ಬಗ್ಗೆ ಮಗುವಿಗೆ ತಿಳಿಸಿ. ನಿಮ್ಮ ಜೀವನದ ಸ್ವಂತ ಉದಾಹರಣೆ ತಿಳಿಸಿ.
ಸಭೆ, ಕಾರ್ಯಕ್ರಮಗಳು, ಸಮಾರಂಭಗಳು ಇತ್ಯಾದಿಗಳಿಗೆ ಮಗುವನ್ನು ಮನೆಯಿಂದ ಹೊರ ಕರೆದೊಯ್ಯಿರಿ. 
ಪರಿಚಯವಿಲ್ಲವರೊಂದಿಗೆ ಹೇಗೆ ವರ್ತಿಸಬೇಕೆಂಬುದನ್ನು ಹೇಳಿಕೊಡಿ. 
ಮನೆಗೆ ಆಗಾಗ ಅತಿಥಿಗಳನ್ನು, ಸ್ನೆÃಹಿತರನ್ನು, ಬಂಧುಗಳನ್ನು ಆಹ್ವಾನಿಸಿ, ಮಗುವಿಗೆ ಪರಿಚಯ ಮಾಡಿಕೊಡಿ. ಅವರ ಮತ್ತು ನಿಮ್ಮ ಸಂಬಂಧದ ಬಗ್ಗೆ ಮಗುವಿಗೆ ವಿವರವಾಗಿ ತಿಳಿಸಿ.
ಮನೆಗೆ ಬಂದ ಅತಿಥಿಗಳನ್ನು ಮಾತನಾಡಿಸಲು ಮಗುವಿಗೆ ತಿಳಿಸಿ. 
ಹೊಸ ವ್ಯಕ್ತಿಗಳನ್ನು ಮಗು ಮಾತನಾಡಿಸಿದಾಗ ಮಗುವನ್ನು ಅಭಿನಂದಿಸಿ. 
ಮಗುವಿಗೆ ಭಾವನಾತ್ಮಕ ಬೆಂಬಲ ನೀಡಿ. 
ಹೊಸ ವಾತಾವರಣದಲ್ಲಿ ಹೇಗೆ ಪ್ರತಿಕ್ರಿಯಿಸಬೇಕೆಂಬ ಬಗ್ಗೆ ತಿಳುವಳಿಕೆ ನೀಡಿ.
ಮುಕ್ತವಾಗಿ ಮಾತನಾಡಲು ಅವಕಾಶಗಳನ್ನು ಸೃಷ್ಟಿಸಿ.
ಸಾಮಾಜಿಕ ಕೌಶಲ್ಯಗಳ ಕುರಿತ ಆತ್ಮವಿಶ್ವಾಸ ಮೂಡಿಸಿ.
ನಿಮ್ಮ ಕೋಪವನ್ನು ಮೊದಲು ಕಡಿಮೆ ಮಾಡಿಕೊಂಡು ನಂತರ ಮಗುವಿನ ಕೋಪವನ್ನು ಕಡಿಮೆ ಮಾಡಿ.
ಬದಲಾವಣೆ ಅಥವಾ ಪರಿವರ್ತನೆ ಜಗದ ನಿಯಮ ಎಂಬುದನ್ನು ಮಗುವಿಗೆ ಮನವರಿಕೆ ಮಾಡಿಕೊಡಿ.
ವೈಫಲ್ಯ ಎದುರಿಸುವುದನ್ನು ಕಲಿಸಿ.
ಧೈರ್ಯ ಸ್ಥೆöÊರ್ಯ ತುಂಬಿ ಆತ್ಮವಿಶ್ವಾಸ ಬೆಳೆಸಿ.
ಅಪಾಯಕಾರಿ ಸಂದರ್ಭಗಳಿಂದ ಮಗು ದೂರವಿರಲು ತಿಳಿಸಿ.

ಆರ್.ಬಿ.ಗುರುಬಸವರಾಜ 


July 28, 2018

ಜಗತ್ಪ್ರಸಿದ್ದ ಮ್ಯೂಸಿಯಂಗಳು. world Top Musiums

ದಿನಾಂಕ 28-07-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಜಗತ್ಪ್ರಸಿದ್ದ ಮ್ಯೂಸಿಯಂಗಳು.



ಮ್ಯೂಸಿಯಂ ಅಥವಾ ವಸ್ತು ಸಂಗ್ರಹಾಲಯಗಳು ಎಲ್ಲಡೆ ಇವೆ. ಕಲಾತ್ಮಕ, ಐತಿಹಾಸಿಕ, ಸಾಂಸ್ಕೃತಿಕ ಅಥವಾ ವೈಜ್ಞಾನಿಕ ಪ್ರಾಮುಖ್ಯತೆ ಇರುವ ಕಲಾಕೃತಿಗಳನ್ನು ಮತ್ತು ಇನ್ನಿತರೇ ವಸ್ತುಗಳನ್ನು ಸಂಗ್ರಹಿಸಿಟ್ಟ ಅಥವಾ ರಕ್ಷಿಸಲ್ಪಟ್ಟ ಸ್ಥಳವೇ ಮ್ಯೂಸಿಯಂ. ಬಹುತೇಕ ಮ್ಯೂಸಿಯಂಗಳು ಸಾರ್ವಜನಿಕ ಮ್ಯೂಸಿಯಂಗಳಾಗಿದ್ದು, ಅಲ್ಲಿನ ವಸ್ತುಗಳು ಸಾರ್ವಜನಿಕ ವೀಕ್ಷಣೆಗೆ ಲಭ್ಯವಾಗುವಂತೆ ಮಾಡುತ್ತವೆ. ಪ್ರದರ್ಶನವು ಶಾಶ್ವತವಾಗಿರಬಹುದು ಅಥವಾ ತಾತ್ಕಾಲಿಕವಾಗಿರಬಹುದು. ಒಟ್ಟಾರೆ ಅಲ್ಲಿನ ವಸ್ತುಗಳನ್ನು ಪ್ರದರ್ಶಿಸುವ ಹಾಗೂ ಕೆಲವು ವೇಳೆ ಮಾರಾಟ ಮಾಡುವ ವ್ಯವಸ್ಥೆ ಇರುತ್ತದೆ. 
ಸಾಂಸ್ಕೃತಿಕ, ಧಾರ್ಮಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ವಸ್ತುಗಳನ್ನು ಸಂಗ್ರಹಿಸುವುದು, ಅವುಗಳನ್ನು ಕಾಪಾಡುವುದರ ಜೊತೆಗೆ ಶಿಕ್ಷಣ ಮತ್ತು ಮನೋರಂಜನೆ ನೀಡುವುದು ವಸ್ತು ಸಂಗ್ರಹಾಲಯಗಳ ಉದ್ದೆÃಶವಾಗಿದೆ. ವಸ್ತು ಸಂಗ್ರಹಾಲಯಗಳು ಸಾಮಾನ್ಯ ಜನರಿಂದ ಸಂಶೋಧಕರಿಗೆ ಅನೇಕ ರೀತಿಯ ಸೇವೆಗಳನ್ನು ಒದಗಿಸುತ್ತವೆ. ಸಂಶೋಧನೆಗೆ ಮ್ಯೂಸಿಯಂಗಳು ಮುಕ್ತ ಅವಕಾಶ ನೀಡುತ್ತವೆ. ಸಂಗ್ರಹಾಲಯದಲ್ಲಿನ ವಸ್ತುಗಳ ಆಧಾರದ ಮೇಲೆ ವಿವಿಧ ಪ್ರಕಾರಗಳಾಗಿ ವಿಂಗಡಿಸಲಾಗುತ್ತದೆ. ಕಲಾ ವಸ್ತು ಸಂಗ್ರಹಾಲಯ, ವಿಜ್ಞಾನ ವಸ್ತು ಸಂಗ್ರಹಾಲಯ, ಯುದ್ದ ವಸ್ತು ಸಂಗ್ರಹಾಲಯ, ಇತಿಹಾಸ ವಸ್ತು ಸಂಗ್ರಹಾಲಯ, ಮತ್ತು ಮಕ್ಕಳ ವಸ್ತು ಸಂಗ್ರಹಾಲಯ ಹೀಗೆ ವಿವಿಧ ಪ್ರಕಾರದ ವಸ್ತು ಸಂಗ್ರಹಾಲಯಗಳನ್ನು ಕಾಣುತ್ತೆÃವೆ. 
ವಸ್ತು ಸಂಗ್ರಹಾಲಯದ ಪ್ರಯೋಜನಗಳು:
     ಒಂದು ರೀತಿಯಲ್ಲಿ ಹೇಳುವುದಾದರೆವಸ್ತು ಸಂಗ್ರಹಾಲಯಗಳು ಭೂತ(ಇತಿಹಾಸ)ವನ್ನು ತಿಳಿಸುವ ಭವಿಷ್ಯದ ಬೆಳಕಿಂಡಿಗಳು ಇದ್ದಂತೆ. ವಸ್ತು ಸಂಗ್ರಹಾಲಯಗಳು ಸಾಕಷ್ಟು ಪ್ರಯೋಜನಗಳನ್ನು ಹೊಂದಿವೆ. ಅವುಗಳು ಕೆಳಗಿನಂತಿವೆ.
ಸಂಸ್ಕೃತಿ ಮತ್ತು ಪರಂಪರೆಯ ಕುರುಹನ್ನು ನೀಡುತ್ತವೆ.
ಇತಿಹಾಸಕ್ಕೆ ಪುರಾವೆ ಒದಗಿಸುತ್ತವೆ.
ಕುತೂಹಲವನ್ನು ಉತ್ತೆÃಜಿಸಿ ಸಂಶೋಧನೆಗೆ ನಾಂದಿ ಹಾಡುತ್ತವೆ.
ಇತಿಹಾಸವನ್ನು ತಿಳಿಯುವ ಭವಿಷ್ಯದ ಮಾರ್ಗದರ್ಶಿಗಳಾಗಿವೆ.
ಪುರಾತನ ಮತ್ತು ಆಧುನಿಕ ಜಗತ್ತಿನ ಕೊಂಡಿಗಳು.
ಕಲಿಕೆಗೆ ಗಟ್ಟಿಯಾದ ಸಾಕ್ಷಾö್ಯಧಾರಗಳನ್ನು ಒದಗಿಸುತ್ತವೆ.
ಸಮುದಾಯ ಕೇಂದ್ರಗಳಾಗಿ ಸಮಾಜ ಮತ್ತು ವಿಜ್ಞಾನಗಳ ಸಮಾಗಮ ಕೇಂದ್ರಗಳಾಗಿವೆ.
ಇತಿಹಾಸದ ಜ್ಞಾನವನ್ನು ವೃದ್ದಿಸುತ್ತವೆ.
ಮಾನವ ಇತಿಹಾಸದ ಪರಂಪರೆಯನ್ನು ತಿಳಿಸುತ್ತವೆ.
ಮನೋರಂನೆಯ ಜೊತೆಗೆ ಜ್ಞಾನವನ್ನು ಬೆಳೆಸುತ್ತವೆ. 
ಪ್ರಶ್ನಿಸುವ ಮನೋಭಾವ ಬೆಳೆಸುವ ಜೊತೆಗೆ ಭಾಷಾ ಬೆಳವಣಿಗೆಗೆ ಪೂರಕವಾಗಿವೆ.
ಮನಸ್ಸನ್ನು ಉತ್ತೆÃಜಿಸುವ ಮೂಲಕ ಹೊಸ ಐಡಿಯಾವನ್ನು ಬೆಳೆಸುತ್ತವೆ.

ಥೀಮ್ ಎಂಟರ್ಟೈನ್ಮೆಂಟ್ ಅಸೋಸಿಯೇಷನ್‌ನ 12ನೇ ವಾರ್ಷಿಕ ಮ್ಯೂಸಿಯಂ ಇಂಡೆಕ್ಸ್ನ ಪ್ರಕಾರ ಕೆಳಗಿನ ಮ್ಯೂಸಿಯಂ ಅತೀ ಹೆಚ್ಚು ಜನರು ವೀಕ್ಷಿಸಿದ ಮ್ಯೂಸಿಯಂಗಳಾಗಿವೆ. ಅವುಗಳ ಕಿರುಮಾಹಿತಿ ಇಲ್ಲಿದೆ.
1. ಫ್ರಾನ್ಸ್ನ ಲೌವ್ರೆ : ಫ್ರಾನ್ಸ್ನ ಪ್ಯಾರಿಸ್ ನಗರದಲ್ಲಿರುವ ಲೌವ್ರೆ ವಸ್ತು ಸಂಗ್ರಹಾಲಯವು ವಿಶ್ವದ ಅತಿ ದೊಡ್ಡ ಕಲಾ ವಸ್ತು ಸಂಗ್ರಹಾಲಯವಾಗಿದೆ. ಇದು ಫ್ರಾನ್‌ನ ಐತಿಹಾಸಿಕ ಸ್ಮಾರಕವಾಗಿದ್ದು, 72,735 ಚದರ ಮೀಟರ್ ವಿಸ್ತಿÃರ್ಣ ಹೊಂದಿದೆ. ಲೌವ್ರೆ ಮ್ಯೂಸಿಯಂ ಪ್ರಪಂಚದ ಅತಿ ಹೆಚ್ಚು ಜನರು ಸಂದರ್ಶಿತ ವಸ್ತು ಸಂಗ್ರಹಾಲಯವಾಗಿದೆ. ಕಳೆದ ವರ್ಷ 81 ಲಕ್ಷ ಪ್ರವಾಸಿಗರು ಈ ವಸ್ತು ಸಂಗ್ರಹಾಲಯವನ್ನು ವೀಕ್ಷಿಸಿದ್ದಾರೆ.
ಈ ಸಂಗ್ರಹಾಲಯವು ಲೌವ್ರೆಯ ಅರಮನೆಯಾಗಿದ್ದು, ಆಗಸ್ಟ್ 10, 1793 ರಲ್ಲಿ ಪ್ರಾರಂಭವಾಗಿದೆ. 537 ವರ್ಣಚಿತ್ರಗಳ ಪ್ರದರ್ಶನದೊಂದಿಗೆ ಪ್ರಾರಂಭವಾದ ಈ ವಸ್ತು ಸಂಗ್ರಹಾಲಯದಲ್ಲಿ ಪ್ರಸ್ತುತ 38,000 ವಿವಿಧ ಕಲಾಕೃತಿಗಳಿವೆ. ಈಜಿಪ್ಟ್, ಗ್ರಿÃಕ್, ರೋಮನ್ ನಾಗರೀಕತೆಗಳಿಂದ ಇಂದಿನ ಇಸ್ಲಾಮಿಕ್‌ವರೆಗಿನ ಕಲೆ, ಶಿಲ್ಪ, ಧಾರ್ಮಿಕ, ಸಾಂಸ್ಕೃತಿಕ, ಅಲಂಕಾರಿಕ ವರ್ಣ ಚಿತ್ರಗಳು, ಮುದ್ರಣ ಮತ್ತು ರೇಖಾಚಿತ್ರಗಳಿವೆ. (ಚಿತ್ರ – 1)
2. ಚೀನಾದ ರಾಷ್ಟಿçÃಯ ವಸ್ತುಸಂಗ್ರಹಾಲಯ : ಚೀನಾದ ಬೀಜಿಂಗ್‌ನಲ್ಲಿರುವ ರಾಷ್ಟಿçÃಯ ವಸ್ತುಸಂಗ್ರಹಾಲಯವು ಚೀನಾದ ಕಲೆ ಮತ್ತು ಇತಿಹಾಸದ ಬಗ್ಗೆ ಶಿಕ್ಷಣ ನೀಡುವ ಉದ್ದೆÃಶ ಹೊಂದಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಂಸ್ಕೃತಿ ಸಚಿವಾಲಯ ಇದರ ಉಸ್ತುವಾರಿ ಹೊತ್ತಿದೆ. ಕಳೆದ ವರ್ಷ 80 ಲಕ್ಷಕ್ಕೂ ಹೆಚ್ಚಿನ ಪ್ರವಾಸಿಗರು ವೀಕ್ಷಿಸಿದ ವಸ್ತುಸಂಗ್ರಹಾಲಯವಾಗಿದೆ. 
1959ರಿಂದ ಒಂದೇ ಕಟ್ಟಡದಲ್ಲಿದ್ದ ಎರಡು ಪ್ರತ್ಯೆÃಕ ಸಂಗ್ರಹಾಲಯಗಳನ್ನು 2003ರಲ್ಲಿ ಒಟ್ಟುಗೂಡಿಸುವ ಮೂಲಕ ಈ ವಸ್ತುಸಂಗ್ರಹಾಲಯ ಸ್ಥಾಪನೆಯಾಗಿದೆ. 17 ಲಕ್ಷ ವರ್ಷಗಳ ಹಿಂದೆ ಯುವಾನ್ಮೌ ಮಾನವನಿಂದ ಹಿಡಿದು ಕ್ವಿಂಗ್ ರಾಜವಂಶದವರೆಗಿನ ಚೀನಾ ಇತಿಹಾಸವನ್ನು ಇದು ಒಳಗೊಂಡಿದೆ. 16 ಎಕರೆ ವಿಸ್ತಾರದ ಪ್ರದೇಶದಲ್ಲಿ 10 ಲಕ್ಷಕ್ಕೂ ಅಧಿಕ ಕಲಾಕೃತಿಗಳನ್ನು ಒಳಗೊಂಡಿದೆ. ಚೀನಾ ಒಳಗೊಂಡಂತೆ ಪ್ರಪಂಚದ ವಿವಿಧ ದೇಶಗಳ ಅಪರೂಪದ ಹಸ್ತಪ್ರತಿಗಳು, ಕಲಾಕೃತಿಗಳು ಈ ಸಂಗ್ರಹಾಲಯದಲ್ಲಿವೆ. (ಚಿತ್ರ – 2)
3. ಅಮೇರಿಕಾದ ನ್ಯಾಷನಲ್ ಏರ್ ಅಂಡ್ ಸ್ಪೆÃಸ್ ಮ್ಯೂಸಿಯಂ : ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಈ ಮ್ಯೂಸಿಯಂನಲ್ಲಿ ವಾಯಯಾನ ಮತ್ತು ಅಂತರಿಕ್ಷ ಯಾನಕ್ಕೆ ಸಂಬಂಧಿಸಿದ ಮಾದರಿಗಳನ್ನು ಕಾಣಬಹುದು. 1946ರಲ್ಲಿ ನ್ಯಾಷನಲ್ ಏರ್ ಮ್ಯೂಸಿಯಂ ಆಗಿ ಸ್ಥಾಪನೆಯಾಗಿ 1976 ರಲ್ಲಿ ನ್ಯಾಷನಲ್ ಮಾಲ್ನಿÃಯರ್ ಎಲ್ ಎನ್ಫಾಂಟ್ ಪ್ಲಾಜಾದಲ್ಲಿ ತನ್ನ ಮುಖ್ಯ ಕಟ್ಟಡ ತೆರೆಯಿತು. ಯುನೈಟೆಡ್ ಸ್ಟೆÃಟ್ಸ್ನಲ್ಲಿ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ಸಂಗ್ರಹಾಲಯ ಇದಾಗಿದೆ. 
ಇಲ್ಲಿ ಅಪೋಲೋ11, ಕಮಾಂಡ್ ಮಾಡ್ಯೂಲ್, ರೈಟ್ ಸಹೋದರರ ವಿಮಾನದ ಮಾಡ್ಯೂಲ್‌ಗಳು ಇಲ್ಲಿವೆ. ವಾಯುಯಾನ ಮತ್ತು ಬಾಹ್ಯಾಕಾಶ ಹಾರಾಟದ ಇತಿಹಾಸ ಮತ್ತು ವಿಜ್ಞಾನದ ಸಂಶೋಧನಾ ಕೇಂದ್ರವಾಗಿದೆ. ಬಾಹ್ಯಾಕಾಶ ಮತ್ತು ವಿಮಾನಯಾನಕ್ಕೆ ಸಂಬಂಧಿಸಿದ ಅನೇಕ ಕಾಪ್ಟರ್‌ಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ. 7.6 ಲಕ್ಷ ಚದರ ಅಡಿ ವಿಸ್ತಿÃರ್ಣ ಹೊಂದಿದ ಈ ಸಂಗ್ರಹಾಲಯವನ್ನು ಕಳೆದ ವರ್ಷ 75 ಲಕ್ಷ ಜನ ವೀಕ್ಷಿಸಿದ್ದಾರೆ. (ಚಿತ್ರ – 3) 
4. ಯುನೈಟೆಡ್ ಸ್ಟೆÃಟ್ಸ್ನ ಮೆಟ್ರೊÃಪಾಲಿಟಿನ್ ಆರ್ಟ್ ಮ್ಯೂಸಿಯಂ : ನ್ಯೂಯಾರ್ಕ್ ನಗರದಲ್ಲಿರುವ ಮೆಟ್ರೊÃಪಾಲಿಟಿನ್ ಆರ್ಟ್ ಮ್ಯೂಸಿಯಂ ಅತಿದೊಡ್ಡ ಕಲಾ ಮತ್ತು ಐತಿಹಾಸಿಕ ವಸ್ತುಸಂಗ್ರಹಾಲಯವಾಗಿದೆ. 2017ರಲ್ಲಿ 70 ಲಕ್ಷಕ್ಕೂ ಅಧಿಕ ಪ್ರವಾಸಿಗರು ಈ ಮ್ಯೂಸಿಯಂಗೆ ಭೇಟಿ ನೀಡಿದ್ದಾರೆ.
ಇದರಲ್ಲಿ 20 ಲಕ್ಷ ಕಲಾಕೃತಿಗಳಿವೆ. ಮಧ್ಯಕಾಲೀನ ಯುರೋಪಿನ ಕಲೆ, ವಾಸ್ತುಶಿಲ್ಪಗಳಿಗೆ ಸಂಬಂಧಿಸಿದ ವ್ಯಾಪಕ ಸಂಗ್ರಹವನ್ನು ಹೊಂದಿದೆ. ಮೆಟ್ ಆಫ್ರಿಕನ್, ಏಷ್ಯನ್, ಓಷಿಯನ್, ಬೈಜಾಂಟೈನ್ ಮತ್ತು ಇಸ್ಲಾಮಿಕ್ ಕಲಾಕೃತಿಗಳನ್ನು ಒಳಗೊಂಡಿದೆ. ಸಂಗೀತ ವಾದ್ಯಗಳು, ವೇಷಭೂಷಣಗಳು, ಪುರಾತನ ಆಯುಧಗಳು ಮತ್ತು ರಕ್ಷಾಕವಚಗಳು, ಮುಂತಾದವುಗಳನ್ನು ಹೊಂದಿದೆ. 1872 ರ ಫೆಬ್ರವರಿ 20 ರಂದು ಈ ಮ್ಯೂಸಿಯಂ ಸ್ಥಾಪಿತವಾಗಿದೆ. ಅಮೇರಿಕನ್ ಜನರಿಗೆ ಕಲೆ ಮತ್ತು ಕಲಾ ಶಿಕ್ಷಣವನ್ನು ಕೊಡುವ ಉದ್ದೆÃಶದಿಂದ ಈ ಮ್ಯೂಸಿಯಂ ಸ್ಥಾಪಿಸಲಾಗಿದೆ. (ಚಿತ್ರ – 4)
5. ವ್ಯಾಟಿಕನ್ ವಸ್ತುಸಂಗ್ರಹಾಲಯ : ವ್ಯಾಟಿಕನ್ ನಗರದಲ್ಲಿರುವ ಈ ಸಂಗ್ರಹಾಲಯವು ಕ್ರಿಶ್ಚಿಯನ್ ಪೋಪ್‌ಗಳು ಸಂಗ್ರಹಿಸಿದ ಅಪಾರ ವಸ್ತುಗಳ ಸಂಗ್ರಹದಿಂದ ಕೂಡಿದೆ. ಪ್ರಸಿದ್ದ ಶಾಸ್ತಿçÃಯ ಶಿಲ್ಪಗಳು ಮತ್ತು ವಿಶ್ವ ನವೋದಯ ಕಲೆಯ ಮೇರು ಕಲಾಕೃತಿಗಳು ಇಲ್ಲಿವೆ. ಈ ವಸ್ತು ಸಂಗ್ರಹಾಲಯದಲ್ಲಿ 70 ಸಾವಿರಕ್ಕೂ ಹೆಚ್ಚಿನ ಕಲಾಕೃತಿಗಳಿವೆ. ಅದರಲ್ಲಿ 20 ಸಾವಿರ ವಸ್ತುಗಳನ್ನು ಮಾತ್ರ ಪ್ರದರ್ಶನಕ್ಕೆ ಇಡಲಾಗಿದೆ. ಉಳಿದ ಕಲಾಕೃತಿಗಳನ್ನು ಆಡಳಿತ, ಪಾಂಡಿತ್ಯ ಮತ್ತು ಸಂಶೋಧನೆಗಾಗಿ ಬಳಸಲಾಗುತ್ತದೆ.
16ನೇ ಶತಮಾನದ ಆರಂಭದಲ್ಲಿ ಪೋಪ್ ಜ್ಯೂಲಿಯಸ್-2 ಈ ಸಂಗ್ರಹಾಲಯವನ್ನು ಸ್ಥಾಪಿಸಿದರು. 54 ಗ್ಯಾಲರಿಗಳನ್ನು ಹೊಂದಿದ ಈ ಸಂಗ್ರಹಾಲಯವನ್ನು 2017 ರಲ್ಲಿ 60 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆಧುನಿಕ ಧಾರ್ಮಿಕ ಕಲಾಕೃತಿಗಳ ಜೊತೆಗೆ ಕಾರ್ಲೋ ಕಾರಾ, ಜಾರ್ಜಿಯೋ ಡೇ, ವಿನ್ಸೆಂಟ್ ವ್ಯಾನ್ ಗಾಗ್, ಸಲ್ವಡಾರ್ ಡಾಲಿ, ಪ್ಯಾಬ್ಲೊÃ ಪಿಕಾಸೋರಂತಹ ಪ್ರಸಿದ್ದ ವರ್ಣಚಿತ್ರಗಾರರ ಕಲಾಕೃತಿಗಳು ಇಲ್ಲಿವೆ. (ಚಿತ್ರ – 5)
6. ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ಮ್ಯೂಸಿಯಂ : ಶಾಂಘೈ ನಗರದಲ್ಲಿರುವ ಅತೀ ದೊಡ್ಡ ವಸ್ತುಸಂಗ್ರಹಾಲಯ ಇದಾಗಿದೆ. 1995ರಲ್ಲಿ ಪ್ರಾರಂಭವಾದ ಈ ಮ್ಯೂಸಿಯಂ ಪ್ರಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನಗಳೊಂದಿಗಿನ ಮಾನವ ಕುಲದ ಸಾಧನೆಗಳನ್ನು ತಿಳಿಸುತ್ತದೆ. ‘ಸ್ವರ್ಗ ಮತ್ತು ಭೂಮಿ’, ‘ಜೀವನ’, ‘ಸಾಮ್ರಾಜ್ಯ’, ‘ಸೃಜನಶೀಲತೆ’ ಮತ್ತು ‘ಭವಿಷ್ಯ’ ಎಂಬ ಐದು ಪ್ರದರ್ಶನ ಸಭಾಂಗಣಗಳಿವೆ. ಕಳೆದ ವರ್ಷ 64 ಲಕ್ಷ ವೀಕ್ಷಕರು ಇಲ್ಲಿಗೆ ಭೇಟಿ ನೀಡಿದ್ದಾರೆ. 
ಚೀನಾದ ಪುರಾತನ ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವೆÃಷಕ ಮಾದರಿಗಳು ಇಲ್ಲಿವೆ. 7500 ಚದರ ಅಡಿ ವಿಸ್ತಾರದಲ್ಲಿ ದೃಕ್-ಶ್ರವಣ ಸಂಶೋಧನೆಯ ಮಾದರಿ, ಸಣ್ಣ ಪ್ರಮಾಣದ ಜಲ ವಿದ್ಯುತ್ ಕೇಂದ್ರ, ಮಳೆಕಾಡು, ಅಕ್ವೆÃರಿಯಂ ಹಾಗೂ ಭೂಕಂಪ ಮಾಪನ ಕೇಂದ್ರವೂ ಇದೆ. ಅಲ್ಲದೇ ವೈಜ್ಞಾನಿಕ ಅಭಿವೃದ್ದಿಯನ್ನು ತಿಳಿಸುವ ಅನೇಕ ವೀಡಿಯೋಗಳ ಪ್ರದರ್ಶನವು ಇಲ್ಲಿದೆ. (ಚಿತ್ರ – 6)
7. ಅಮೇರಿಕಾದ ನ್ಯಾಷನಲ್ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ : ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಈ ಮ್ಯೂಸಿಯಂನ ಪ್ರವೇಶ ಉಚಿತ. ನೈಸರ್ಗಿಕ ವಸ್ತುಗಳ ಸಂಗ್ರಹಾಲಯವಾಗಿರುವ ಇದು ಪ್ರವಾಸಿಗೆ ನೆಚ್ಚಿನ ಸ್ಥಳವಗಿದೆ. 15 ಲಕ್ಷ ಚದರ ಅಡಿ ವಿಸ್ತಾರವುಳ್ಳ ಈ ಸಂಗ್ರಹಾಲಯಕ್ಕೆ ಕಳೆದ ವರ್ಷ 71 ಲಕ್ಷ ಜನ ಭೇಟಿ ನೀಡಿದ್ದಾರೆ. ಇಲ್ಲಿ 1.26 ಕೋಟಿ ವಿವಿಧ ಮಾದರಿಯ ಕಲಾಕೃತಿಗಳಿವೆ. ಪ್ರಾಣಿಗಳ ಪಳೆಯುಳಿಕೆಗಳು, ಖನಿಜಗಳು, ಉಲ್ಕೆಗಳು, ಮಾನವ ಅವಶೇಷಗಳು ಮತ್ತು ಮಾನವನ ಸಾಂಸ್ಕೃತಿಕ  ಕಲಾಕೃತಿಗಳನ್ನು ಹೊಂದಿದೆ. ಇಲ್ಲಿ ವಿಜ್ಞಾನಿಗಳ ದೊಡ್ಡ ನೆಲೆಯಾಗಿದೆ. ವಿಶ್ವದ ನೈಸರ್ಗಿಕ ಮತ್ತು ಸಾಂಸ್ಕೃತಿಕ ಅಧ್ಯಯನಕ್ಕೆ ಮೀಸಲಾದ ತಾಣ ಇದಾಗಿದೆ.  (ಚಿತ್ರ – 7)
8. ಲಂಡನ್‌ನ ಬ್ರಿಟಿಷ್ ಮ್ಯೂಸಿಯಂ : ಲಂಡನ್ನಿನ ಬ್ಲೂಮ್ಸ್ಬರಿ ಪ್ರದೇಶದಲ್ಲಿರುವ ಈ ಮ್ಯೂಸಿಯಂ ಮಾನವನ ಇತಿಹಾಸ, ಕಲೆ ಮತ್ತು ಸಂಸ್ಕೃತಿಗೆ ಸಮರ್ಪಿತವಾದ ಒಂದು ಸಾರ್ವಜನಿಕ ಸಂಸ್ಥೆಯಾಗಿದೆ. 80 ಲಕ್ಷ ಕಲಾಕೃತಿಗಳನ್ನು ಒಳಗೊಂಡಿದೆ. ಪ್ರಾರಂಭದಿಂದ ಇಂದಿನವರೆಗಿನ ಮಾನವ ಸಂಸ್ಕೃತಿಯ ಕಥೆಯನ್ನು ಹಾಗೂ ಬ್ರಿಟಿಷ್ ಸಾಮ್ರಾಜ್ಯ ಯುಗದ ವ್ಯಾಪಕ ಮೂಲಗಳನ್ನು ದಾಖಲಿಸಿದೆ. 
1753ರಲ್ಲಿ ಪ್ರಾರಂಭವಾದ ಈ ಮ್ಯೂಸಿಯಂ ವೈದ್ಯ ವಿಜ್ಞಾನಿ ಸರ್.ಹ್ಯಾನ್ಸ್ ಸ್ಲೊÃಯೆನ್ ಅವರ ಸಂಗ್ರಹಗಳನ್ನು ಆಧರಿಸಿತ್ತು. ಪ್ರಾರಂಭದಲ್ಲಿ ಕೇವಲ ಗ್ರಂಥಾಲಯವಾಗಿದ್ದ ಇದು ಕ್ರಮೇಣವಾಗಿ ಮಾನವ ಸಂಸ್ಕೃತಿಯ ಪ್ರದರ್ಶನಗಳ ಕೇಂದ್ರವಾಗಿ ಮಾರ್ಪಾಟಾಯಿತು. ಕಳೆದ ವರ್ಷ 59 ಲಕ್ಷ ಜನ ಈ ಸಂಗ್ರಹಾಲಯವನ್ನು ವೀಕ್ಷಿಸಿದ್ದಾರೆ. (ಚಿತ್ರ – 8)
9. ಲಂಡನ್‌ನ ಟೇಟ್ ಮಾರ್ಡನ್ : ಲಂಡನ್ ನಗರದಲ್ಲಿರುವ ಇದು ಆಧುನಿಕ ಕಲಾ ಸಂಪುಟವಾಗಿದೆ. 1900 ರಿಂದ ಇಂದಿನವರೆಗೆ ಅಂತರರಾಷ್ಟಿçÃಯ ಆಧುನಿಕ ಮತ್ತು ಸಮಕಾಲೀನ ಕಲೆಯ ಸಮಾಗಮವಾಗಿದೆ. ವಿಶ್ವದ ಸಮಕಾಲೀನ ಕಲೆಯ ದೊಡ್ಡ ಸಂಗ್ರಹಾಲಯಗಳಲ್ಲಿ ಟೇಟ್ ಮಾರ್ಡನ್ ಕೂಡಾ ಒಂದಾಗಿದೆ. ಇದರ ಪ್ರವೇಶ ಉಚಿತ. ವಿವಿಧ ದೇಶಗಳ ಆಧುನಿಕ ಕಲೆಯ ಮೂಲ ಕಲ್ಪನೆಗಳನ್ನು ಪರಿಚಯಿಸುವ ಹಿನ್ನಲೆಯಲ್ಲಿ ಈ ಮ್ಯೂಸಿಯಂ ನಿರ್ಮಾಣಗೊಂಡಿದೆ. ಇಲ್ಲಿ ಥೀಮ್ ಆಧಾರಿತ ಎಂಟು ಪ್ರದರ್ಶನ ಗ್ಯಾಲರಿಗಳಿವೆ. ಶಾಶ್ವತ ಪ್ರದರ್ಶನಗಳ ಜೊತೆಗೆ ಕೆಲವು ತಾತ್ಕಾಲಿಕ ಪ್ರದರ್ಶನಗಳನ್ನೂ ಸಹ ಏರ್ಪಡಿಸಲಾಗುತ್ತದೆ. ತಾತ್ಕಾಲಿಕ ಪ್ರದರ್ಶನಗಳಿಗೆ ಪ್ರವೇಶ ಶುಲ್ಕ ಇರುತ್ತದೆ. ಸಾಮಾನ್ಯವಾಗಿ ಇವು ಮರ‍್ನಾಲಕು ತಿಂಗಳುಗಳ ಕಾಲ ನಡೆಯುತ್ತವೆ. ಶಾಶ್ವತ ಪ್ರದರ್ಶನದ ಬಳಿ ಪುಸ್ತಕ ಮತ್ತು ಕೆಲವು ಸರಕುಗಳ ಪ್ರದರ್ಶನ ಮತ್ತು ಮಾರಾಟವೂ ಇರುತ್ತದೆ. (ಚಿತ್ರ – 9)
10. ವಾಷಿಂಗ್ಟನ್‌ನ ನ್ಯಾಷನಲ್ ಆರ್ಟ್ ಗ್ಯಾಲರಿ : 1937 ರಲ್ಲಿ ಖಾಸಗಿಯಾಗಿ ಪ್ರಾರಂಭವಾದ ಈ ಸಂಗ್ರಹಾಲಯ ವಾಷಿಂಗ್ಟನ್ ಡಿ.ಸಿ.ಯಲ್ಲಿದೆ. ಈಗ ಸಾರ್ವಜನಿಕವಾದ ಇದು ಸಂಪೂರ್ಣವಾಗಿ ಕಲಾ ಸಂಗ್ರಹಾಲಯವಾಗಿದೆ. ಇದರಲ್ಲಿ ವರ್ಣಚಿತ್ರಗಳು, ರೇಖಾ ಚಿತ್ರಗಳು, ಮುದ್ರಿತ ಪ್ರತಿಗಳು, ಛಾಯಾ ಚಿತ್ರಗಳು, ಶಿಲ್ಪಗಳು, ಪದಕಗಳು, ಅಲಂಕಾರಿಕ ವಸ್ತುಗಳಿವೆ. ಇದರಲ್ಲಿ ಲಿಯೋನಾರ್ಡ್ ಡಾವಿಂಚಿಯ ಕಲಾಕೃತಿಗಳು ಇವೆ. 
ಸಂಗ್ರಹಾಲಯವು ಎರಡು ಕಟ್ಟಡಗಳನ್ನು ಒಳಗೊಂಡಿದೆ. ಈ ಎರಡೂ ಕಟ್ಟಡಗಳು ಬೇರೆ ಬೇರೆಯಾಗಿದ್ದು ಭೂಗತ ಮಾರ್ಗಗಳನ್ನು ಹೊಂದಿವೆ. ಸಂಗ್ರಹಾಲಯದಲ್ಲಿ ಮಧ್ಯಯುಗದಿಂದ ಇಂದಿನವರೆಗಿನ ಪಾಶ್ಚಿಮಾತ್ಯ ಕಲೆಯ ಬೆಳವಣಿಗೆಯನ್ನು ಪತ್ತೆಹಚ್ಚುವ 141,000 ಕ್ಕೂ ಹೆಚ್ಚಿನ ಕಲಾಕೃತಿಗಳಿವೆ. ಕಳೆದ ವರ್ಷ ಈ ಸಂಗ್ರಹಾಲಯಕ್ಕೆ 52 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. (ಚಿತ್ರ – 10)
11. ತೈಪೈಯ ರಾಷ್ಟಿçÃಯ ಅರಮನೆ ಮ್ಯೂಸಿಯಂ : ಚೀನೀ ಚಕ್ರಾಧಿಪತ್ಯದ ಕಲಾಕೃತಿಗಳನ್ನು ಹೊಂದಿದ ಈ ಮ್ಯೂಸಿಯಂ ಚೀನಾದ ತೈಪೈಯಲ್ಲಿದೆ. ನವಶಿಲಾಯುಗದಿಂದ ಆಧುನಿಕದವರೆಗಿನ 8000 ವರ್ಷಗಳ ಚೀನೀಯರ ಕಲೆಯ ಇತಿಹಾಸವನ್ನು ಹೊಂದಿದ ಈ ಮ್ಯೂಸಿಯಂನಲ್ಲಿ 7 ಲಕ್ಷಕ್ಕೂ ಅಧಿಕ ಕಲಾಕೃತಿಗಳಿವೆ. 1925ರಲ್ಲಿ ಪ್ರಾರಂಭವಾದ ಈ ಮ್ಯೂಸಿಯಂನ ಈಗಿನ ಮುಖ್ಯ ಕಟ್ಟಡವನ್ನು ಹುವಾಂಗ್ ಬಾಯುಯು ವಿನ್ಯಾಸಗೊಳಿಸಿ 1965ರಲ್ಲಿ ನಿರ್ಮಿಸಿದ್ದಾರೆ. ಮಿಂಗ್ ಮತ್ತು ಕ್ವಿಂಗ್ ರಾಜವಂಶಗಳ ಸಾಮ್ರಾಜ್ಯದ ಅರಮನೆ ಸಂಗ್ರಹಗಳು ಇಲ್ಲಿವೆ. ಚಿತ್ರಕಲೆ ಮತ್ತು ಕಾಲಿಗ್ರಫಿಯ ಶಾಶ್ವತ ಪ್ರದರ್ಶನ ಮೂರು ತಿಂಗಳಿಗೊಮ್ಮೆ ನಡೆಯುತ್ತದೆ. 2017 ರಲ್ಲಿ 44 ಲಕ್ಷ ಪ್ರವಾಸಿಗರು ಈ ಮ್ಯೂಸಿಯಂ ವೀಕ್ಷಿಸಿದ್ದಾರೆ. (ಚಿತ್ರ – 11)
12. ರಷ್ಯಾದ ಸ್ಟೆÃಟ್ ಹರ್ಮಿಟೇಜ್ ಮ್ಯೂಸಿಯಂ : ಸೇಂಟ್ ಪೀರ‍್ಸ್ಬರ್ಗ್ನಲ್ಲಿರುವ ಸ್ಟೆÃಟ್ ಹರ್ಮಿಟೇಜ್ ಮ್ಯೂಸಿಯಂ ಕಲೆ ಮತ್ತು ಸಂಸ್ಕೃತಿಯ ಆಗರವಾಗಿದೆ. ಇದು 1764 ರಲ್ಲಿ ಎಂಪ್ರಾಸ್ ಕ್ಯಾಥರೀನ್ ದಿ ಗ್ರೆÃಟ್ ಬರ್ಲಿನ್ ಎಂಬ ವ್ಯಾಪಾರಿಯ ವರ್ಣ ಚಿತ್ರಗಳ ಸಂಗ್ರಹದಿಂದ ಪ್ರಾರಂಭವಾಗಿದೆ. ರಷ್ಯಾದ ಐತಿಹಾಸಿಕ ಕಟ್ಟಡಗಳಾದ ವಿಂಟರ್ ಅರಮನೆ, ಮೆನ್ಶಿಕೋವ್ ಪ್ಯಾಲೇಸ್, ಮ್ಯೂಸಿಯಂ ಆಫ್ ಪಿರ್ಸಿಲೈನ್ ಮುಂತಾದವುಗಳನ್ನು ಒಳಗೊಂಡ ಸಂಕೀರ್ಣ ಸಂಗ್ರಹಾಲಯವಾಗಿದೆ. ಅಲ್ಲದೇ ಇದು ಸಿನಿಮಾ ಮತ್ತು ದೂರದರ್ಶನಗಳ ಚಿತ್ರಿÃಕರಣ ತಾಣವೂ ಆಗಿದೆ. ಕಳೆದ ವರ್ಷ 42 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿನೀಡಿದ್ದಾರೆ.  (ಚಿತ್ರ – 12)
13. ಮ್ಯಾಡ್ರಿಡ್‌ನ ರೇನಾ ಸೋಫಿಯಾ : ಸ್ಪೆÃನ್‌ನ ಮ್ಯಾಡ್ರಿಡ್‌ನಲ್ಲಿರುವ ಇದು ರಾಷ್ಟಿçÃಯ ಮ್ಯೂಸಿಕ್ ಸಂಗ್ರಹಾಲಯವಾಗಿದೆ. ಸಂಗೀತಕ್ಕಾಗಿಯೇ ಮೀಸಲಾದ ಇದರಲ್ಲಿ ಪ್ರಸಿದ್ದ ಸಂಗೀತಗಾರರ ಸಂಗ್ರಹಗಳಿವೆ. 1992ರ ಸೆಪ್ಟಂಬರ್ 10 ರಂದು ಪ್ರಾರಂಭವಾದ ಈ ಮ್ಯೂಸಿಯಂಗೆ ಕ್ವಿÃನ್ ಸೋಫಿಯಾ ಹೆಸರಿಡಲಾಗಿದೆ. ಸ್ಪೆÃನ್‌ನ ಪ್ಯಾಬ್ಲೊà ಪಿಕಾಸೋ ಮತ್ತು ಸಾಲ್ವಡಾರ್ ಡಾಲಿಯ ಅತ್ಯುತ್ತಮ ಸಂಗ್ರಹಗಳನ್ನು ಒಳಗೊಂಡಿದೆ. ಇದಲ್ಲದೇ ಜೋನಾ ಮೀರೋ, ಪಾಬ್ಲೊà ಗಾರ್ಗಲ್ಲೊÃ, ಲೂಯಿಸ್ ಗಾರ್ಡಿಲ್ಲೊ, ಲೂಯಿಸ್ ಮನೋಜ್, ಜಾರ್ಜ್ ಓಟೈಟಾ ಮುಂತಾದ ಕಲಾವಿದರ ಸಂಗ್ರಹದಿಂದ ಈ ಮ್ಯೂಸಿಯಂ ಕಾರ್ಯ ನಿರ್ವಹಿಸುತ್ತದೆ. ಈ ಮ್ಯೂಸಿಯಂನಲ್ಲಿ 1 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳು, 3500 ಕ್ಕೂ ಹೆಚ್ಚಿನ ಧ್ವನಿ ಮುದ್ರಣಗಳು ಮತ್ತಿ 1000 ಕ್ಕೂ ಹೆಚ್ಚಿನ ವೀಡಿಯೋಗಳ ಹೊಂದಿದ ಗ್ರಂಥಾಲಯವಿದೆ. ಕಳೆದ ವರ್ಷ 39 ಲಕ್ಷ ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡಿದ್ದಾರೆ.  (ಚಿತ್ರ – 13)
ಆರ್.ಬಿ.ಗುರುಬಸವರಾಜ ಹೊಳಗುಂದಿ

July 21, 2018

ಸಂಬಂಧಗಳು ಸೇತುವೆಯಾಗಲಿ

ಸಂಬಂಧಗಳು ಸೇತುವೆಯಾಗಲಿ
ಜುಲೈ 2018ರ ಟೀಚರ್ ಮಾಸಪತ್ರಿಕೆಯಲ್ಲಿ ಪ್ರಕಟವಾದ ಬರಹ.

ಒಂದೆಡೆ ಮಾನವನ ವ್ಯವಹಾರಗಳು ಜಗತ್ತಿನಾದ್ಯಂತ ವಿಸ್ತಿರಿಸುತ್ತಿವೆ. ಇನ್ನೊಂದೆಡೆ ಮಾನವ ಸಂಬಂಧಗಳು ದೂರವಾಗುತ್ತಿವೆ. ಕೂಡು ಕುಟುಂಬಗಳಲ್ಲಿನ ಅವಿನಾಭವ ಸಂಬಂಧಗಳು ಕಡಿತಗೊಂಡಿವೆ. ಅಜ್ಜ-ಅಜ್ಜಿ, ದೊಡ್ಡಪ್ಪ-ದೊಡ್ಡಮ್ಮ, ಚಿಕ್ಕಪ್ಪ-ಚಿಕ್ಕಮ್ಮ, ಅತ್ತೆ-ಮಾವ, ನಾದಿನಿ-ಮೈದುನ, ಇತ್ಯಾದಿ ಸಂಬಂಧಗಳು  ಅರ್ಥ ಕಳೆದುಕೊಳ್ಳುತ್ತಿವೆ. ಎಲ್ಲವೂ ತಾಂತ್ರಿಕ ಜಗತ್ತಿನ ಓಟಕ್ಕೆ ಓಡತೊಡಗಿವೆ.  ಎಲ್ಲಾ ಮಾನವೀಯ ಸಂಬಂಧಗಳ ಸ್ವಾಸ್ಥವು ವ್ಯಕ್ತಿ ವ್ತಕ್ತಿಗಳ ನಡುವಿನ ಸದ್ಭಾವನೆಗಳನ್ನು ಅವಲಂಬಿಸಿವೆ ಎಂಬುದನ್ನು ಮರೆತಿದ್ದೆವೆ. 
ಆಧುನಿಕ ಜಗತ್ತಿನಲ್ಲಿ ಸಣ್ಣ ಕುಟುಂಬಗಳು ಅನಿವಾರ್ಯವಾದರೂ ಸಂಬಂಧಗಳನ್ನು ಕಡಿದುಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಕೇವಲ ಸಾಮಾಜಿಕ ಜಾಲ ತಾಣಗಳ ಮೂಲಕ ತಾಂತ್ರಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆವೆ. ಭಾವನಾತ್ಮಕ ಸಂಬಂಧಗಳ ಪರಿಚಯವೇ ಇಲ್ಲದಾಗಿದೆ. ಸಣ್ಣ ಕುಟುಂಬಗಳಲ್ಲೂ ಸಹ ಅವಿನಾಭಾವ ಭಾವನಾತ್ಮಕ ಸಂಬಂಧಗಳು ದೂರವಾಗುತ್ತಿವೆ. ವ್ಯಕ್ತಿ ವ್ಯಕ್ತಿಗಳ ನಡುವೆ ಸಂಬಂಧಗಳು ಮುರಿದು ಬೀಳಲು ಪ್ರಮುಖ ಕಾರಣವೇನೆಂದರೆ ವಿಚಾರಗಳೊಂದಿಗಿನ ಭಿನ್ನಾಭಿಪ್ರಾಯ. ಪ್ರತಿ ವ್ಯಕ್ತಿಯೂ ತನ್ನದೇ ಸರಿ ಎಂದು ರುಜುವಾತುಗೊಳಿಸಲು ವಾದಕ್ಕಿಳಿಯುತ್ತಾನೆ. ಈ ವಾದಗಳೇ ಮನುಷ್ಯ ಸಂಬಂಧಗಳಿಗೆ ಮಾರಕವಾಗುತ್ತವೆ. ಮನುಷ್ಯ ಸಂಬಂಧಗಳ ದೃಷ್ಟಿಯಿಂದ ನೋಡಿದಾಗ ವಾದ ಮಾಡಿ ಗೆಲ್ಲುವುದು ಗೆಲುವಲ್ಲ. ಬದಲಿಗೆ ವಾದಗಳು ನಡೆಯದಂತೆ ತಡೆಹಿಡಿಯುವುದೇ ನಿಜವಾದ ಗೆಲುವು.
ಸಹಜೀವಿಗಳೊಂದಿಗೆ ಪ್ರಿಯವಾದ ಮಾತು ಹಾಗೂ ಕೆಲಸ ಕಾರ್ಯಗಳಲ್ಲಿ ಸಹಾಯ ಹಸ್ತ ನೀಡುವುದು, ನೋವಿನಲ್ಲಿ ಸಹಾನುಭೂತಿ ತೋರುವುದು ಇವು ಸಹಜೀವಿಗಳಲ್ಲಿ ಸಂತಸ ಸಮಾಧಾನ ತರುತ್ತವೆ. ವ್ಯಕ್ತಿಗಳನ್ನು ಕುರಿತು ನಮ್ಮಲ್ಲಿರುವ ಪ್ರೀತಿ, ಮೆಚ್ಚುಗೆ ಕಾಳಜಿಗಳನ್ನು ಅಭಿವ್ಯಕ್ತಿಸುವುದನ್ನು ಕಲಿಯಬೇಕು. ಗುಣಗಳನ್ನು ಗುರುತಿಸುವ ಬದಲು ಸದಾ ಕಣ್ಣಿಗೆ ಪಟ್ಟಿಕೊಂಡವರಂತೆ ದೋಷಗಳನ್ನೆ ಹೇಳುತ್ತಾ ಹೋಗುತ್ತೆವೆ. ಆಗ ಗಟ್ಟಿಯಾಗಬೇಕಿದ್ದ ಸಂಬಂಧಗಳು ಮುರಿದು ಬೀಳುತ್ತವೆ. ಇತರರ ಸ್ಥಾನದಲ್ಲಿ ನಿಂತು ಆಲೋಚಿಸಿ ನೋಡಿದಾಗ, ಮಾತ್ರ ಅವರ ನಡೆ-ನುಡಿಗಳನ್ನು ಅರ್ಥೈಸಿಕೊಳ್ಳಲು ಅಭ್ಯಾಸ ಮಾಡಿಕೊಂಡಾಗ ಮಾತ್ರ ಬಹುಪಾಲು ಭಿನ್ನಾಭಿಪ್ರಾಯಗಳು ಮಾಯವಾಗಿ ಮಾನವ ಸಂಬಂಧಗಳು ಗಟ್ಟಿಗೊಳ್ಳುತ್ತವೆ. ಪ್ರೀತಿ, ಗೌರವ, ಕಾಳಜಿಗಳೆಂಬ ಅಂಟಿನ್ನು ಹಾಕಿ ಮಾನವೀಯ ಸಂಬಂಧಗಳನ್ನು ಗಂಬಂಧಗಳನ್ನಾಗಿ ಮಾಡೋಣ. ಸಂಬಂಧಗಳು ಬೇಲಿಯಾಗದೇ ಸೇತುವೆಯಾಗಲಿ.
ಆರ್.ಬಿ.ಗುರುಬಸವರಾಜ ಹೊಳಗುಂದಿ


July 20, 2018

ತೆರೆದ ಪುಸ್ತಕ ಪರೀಕ್ಷೆ Open book Exam

ದಿನಾಂಕ 20-07-2018ರ ಕನ್ನಡಪ್ರಭದ ಸಂಪಾದಕೀಯ ಪುಟದಲ್ಲಿ ಪ್ರಕಟವಾದ ನನ್ನ ಬರಹ.


ಬದಲಾಗಬೇಕಾದದು ಕೇವಲ ಪರೀಕ್ಷಾ ಪದ್ದತಿಯಲ್ಲ!
ಕಲಿಕೆ ಕೇವಲ ಅಂಕ ಗಳಿಕೆಯ ಸಾಧನವಲ್ಲ. ಕಲಿಕೆ ಬದುಕಿನ ಭಾಗ. ಕಲಿಕೆ ಇಲ್ಲದ ದಿನವಿಲ್ಲ ಎಂದೇ ಹೇಳಬಹುದು. ಪ್ರತಿಯೊಬ್ಬರೂ ಪ್ರತಿದಿನ ಒಂದಲ್ಲ ಒಂದು ವಿಷಯವನ್ನು ಕಲಿಯುತ್ತಲೇ ಇರುತ್ತಾರೆ. ಆದರೆ ಶಾಲಾ ಹೊರಗಿನ ಕಲಿಕೆಗೆ ಅಂಕಗಳ ಹಣೆಪಟ್ಟಿ ಇರುವುದಿಲ್ಲ. ಅದು ಬದುಕಿನ ಭಾಗವಾಗಿರುತ್ತದೆ. ರಾಜ್ಯದ ಶಿಕ್ಷಣ ಸಚಿವರು ಇತ್ತಿÃಚಿಗೆ ತೆರೆದ ಪುಸ್ತಕ ಪರೀಕ್ಷೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ತೆರೆದ ಪುಸ್ತಕ ಪರೀಕ್ಷೆಯ ಕಲ್ಪನೆ ಹೊಸದೇನಲ್ಲ. ರಾಜ್ಯದಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ(ಸಿ.ಸಿ.ಇ) ಜಾರಿಗೆ ಬಂದಾಗಿನಿಂದಲೂ ತೆರೆದ ಪುಸ್ತಕ ಪರೀಕ್ಷೆಯ ಬಗ್ಗೆ ಪ್ರಯೋಗಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಸಿ.ಸಿ.ಇ.ಯಲ್ಲ್ಲಿ ತೆರೆದ ಪುಸ್ತಕ ಪರೀಕ್ಷೆ ಇದೆ. ಆದರೆ ಕಡ್ಡಾಯವಾಗಿಲ್ಲ. ಅವರವರ ಅನುಕೂಲತೆಗಳನ್ನು ಆಧರಿಸಿ ನೆಡೆಸಬಹುದಾಗಿತ್ತು. ಈಗ ಇದನ್ನು ಬೋರ್ಡ್ ಪರೀಕ್ಷೆಗಳಿಗೆ ಅಳವಡಿಸುವ ಚಿಂತನೆಗಳು ನಡೆಯುತ್ತಿವೆ.
        ತೆರೆದ ಪುಸ್ತಕ ಪರೀಕ್ಷೆಯ ಮೊದಲ ಪ್ರಯೋಜನವೆಂದರೆ ಬೋಧನಾ ಕಾರ್ಯದ ಸ್ವರೂಪವನ್ನು ಅರ್ಥೈಸಿಕೊಳ್ಳುವುದಾಗಿದೆ. ಬೋಧನೆಯ ಪ್ರಮುಖ ಗುರಿ ಜ್ಞಾನಪ್ರಸಾರ ಮಾಡುವುದಾಗಿದೆ. ಪಠ್ಯದಲ್ಲಿನ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ವರ್ಗಾಯಿಸುವ ಮೂಲಕ ಜ್ಞಾನಪ್ರಸಾರ ಮಾಡುವುದೇ ಬೋಧನೆಯಾಗಿದೆ. ಹೀಗೆ ಪ್ರಸಾರ ಮಾಡಿದ ಮಾಹಿತಿಯನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳುವುದು, ಉಳಿಸಿಕೊಳ್ಳುವುದು ಮತ್ತು ಅಂತಿಮವಾಗಿ ಪರೀಕ್ಷೆಯಲ್ಲಿ ಅದನ್ನು ಪ್ರಸ್ತುತಪಡಿಸುವುದೇ ಕಲಿಕೆ ಎನ್ನುವಂತಾಗಿದೆ. 
ಈಗಿನ ಪಠ್ಯಪುಸ್ತಕಗಳು ಮತ್ತು ಬೋಧನಾ ಪದ್ದತಿ ಈಗಿರುವ ಸಾಂಪ್ರಾದಾಯಿಕ ಪರೀಕ್ಷಾ ಪದ್ದತಿಗೆ ಪೂರಕವಾಗಿಯೇ ಇದೆ. ಮುಖ್ಯಾಂಶಗಳನ್ನು ಬರೆಸುವುದು, ಉಕ್ತಲೇಖನ, ನೋಟ್ಸ್ ಬರೆಹ, ಇತ್ಯಾದಿಗಳೆಲ್ಲವೂ ಅಂಕಗಳ ಆಧಾರಿತ ಸಾಂಪ್ರದಾಯಿಕ ಪರೀಕ್ಷೆಗೆ ಮಕ್ಕಳನ್ನು ಸಿದ್ದಪಡಿಸುವ ನಿಟ್ಟಿನಲ್ಲಿಯೇ ನಡೆಯುತ್ತಿವೆ.
ತೆರೆದ ಪುಸ್ತಕ ಪರೀಕ್ಷಾ ಪದ್ದತಿಯನ್ನು ಜಾರಿಗೆ ತರುವ ಮೊದಲು ಪಠ್ಯವಸ್ತು, ಪಠ್ಯಪುಸ್ತಕ ಮತ್ತು ಬೋಧನಾ ಪದ್ದತಿಗಳನ್ನು ಬದಲಾಯಿಸಲೇಬೇಕು. ತರಗತಿಯಲ್ಲಿನ ಬೋಧನಾ ಸ್ವರೂಪ ಈಗಿರುವುದಕ್ಕಿಂತ ಭಿನ್ನಾವಾಗಿರಲೇಬೇಕು. ಏಕೆಂದರೆ ವಿದ್ಯಾರ್ಥಿಗಳು ತೆರೆದ ಪುಸ್ತಕ ಪರೀಕ್ಷೆಯನ್ನು ಎದುರಿಸಬೇಕಾದರೆ ಸಂಪೂರ್ಣವಾಗಿ ಎಲ್ಲಾ ಮಕ್ಕಳಿಗೂ ಕನಿಷ್ಟ ಓದು ಮತ್ತು ಬರಹದ ಬಗ್ಗೆ ಖಾತ್ರಿಯಿರಲೇಬೇಕು. ಕನಿಷ್ಟ ಓದು ಮತ್ತು ಬರಹದ ಬಗ್ಗೆ ಖಾತ್ರಿ ಇಲ್ಲದಿದ್ದರೆ ತೆರೆದ ಪುಸ್ತಕ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಗುವುದೇ ಇಲ್ಲ. 
       ಇದಕ್ಕೆ ಶಿಕ್ಷಕರ ಮನೋಸ್ಥಿತಿಯೂ ಬದಲಾಗಬೇಕಿದೆ. ಯಾವುದೇ ಹೊಸ ಪದ್ದತಿ ಬಂದಾಗಲೂ ಅದನ್ನು ಜಾರಿಗೊಳಿಸುವಲ್ಲಿ ಶಿಕ್ಷಕರ ಶ್ರಮ ಹಾಗೂ ಅಭಿವೃದ್ದಿಪರ ಮನೋಸ್ಥಿತಿ ಅಗತ್ಯವಾಗಿದೆ. ಸ್ಥಳೀಯ ಸಂಪನ್ಮೂಲಗಳ ಸದ್ಭಳಕೆ ತೀರಾ ಅಗತ್ಯ ಎನಿಸುತ್ತದೆ. ಮಕ್ಕಳನ್ನೆÃ ಸಂಪೂರ್ಣವಾಗಿ ಕಲಿಕೆಯಲ್ಲಿ ತೊಡಗಿಸಬೇಕಾಗುತ್ತದೆ. ಉದಾಹರಣೆಗೆ ಶೌಚಾಲಯಗಳ ಸದ್ಭಳಕೆ ಬಗ್ಗೆ ಎಷ್ಟೆÃಹೊತ್ತು ತರಗತಿಯಲ್ಲಿ ಪಾಠ ಬೋಧಿಸಿದರೂ ಅದು ವ್ಯರ್ಥ. ಅದೇ ಕಲಿಕಾಂಶವನ್ನು ಮಕ್ಕಳಿಗೆ ಹೇಳಿ ಅವರ ಗ್ರಾಮ/ವಾಸಸ್ಥಳದಲ್ಲಿನ ಶೌಚಾಲಯಗಳ ಸ್ಥಿತಿಗತಿ ಅರಿಯುವ ಹಾಗೂ ಉತ್ತಮವಾಗಿ ನಿರ್ವಹಣೆ ಮಾಡುವ ಕುಟುಂಬಗಳ ಮಾಹಿತಿ ಸಂಗ್ರಹಿಸಿ ಅದನ್ನು ಮಕ್ಕಳೇ ಪ್ರಸ್ತುಪಡಿಸವಂತಾದರೆ ಆ ಕಲಿಕೆ ಯಶಸ್ವಿÃ ಮತ್ತು ಶಾಶ್ವತ ಕಲಿಕೆಯಾಗುತ್ತದೆ. ಅದೇ ರೀತಿ ನೀರಿನ ಸಂರಕ್ಷಣೆಗೆ ಬಗ್ಗೆ ತರಗತಿಯಲ್ಲಿ ಪಾಠ ಹೇಳುವ ಬದಲು ವಾಸಸ್ಥಳದಲ್ಲಿನ ನೀರಿನ ಸ್ಥಿತಿಗತಿ ಹಾಗೂ ಅದನ್ನು ಸಂರಕ್ಷಿಸುವ ವಿಧಾನಗಳ ಬಗ್ಗೆ ಮಕ್ಕಳಲ್ಲಿಯೇ ಚರ್ಚೆ ಹಾಗೂ ಸಂವಾದ ಏರ್ಪಡಿಸಬಹುದು. ಸಾಧ್ಯವಾದರೆ ಸ್ಥಳೀಯ ಸರಕಾರದ ಪ್ರತಿನಿಧಿಗಳನ್ನೂ ಈ ಚರ್ಚೆಯಲ್ಲಿ ತೊಡಗುವಂತೆ ಮಾಡಬೇಕು. ಘನ ತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್‌ನ ತೊಂದರೆಗಳು, ಜನಸಂಖ್ಯಾ ಸ್ಪೊÃಟ, ಸ್ಥಳೀಯ ಸರಕಾರಗಳ ಕಾರ್ಯನಿರ್ವಹಣೆ, ಇತ್ಯಾದಿ ಕಲಿಕಾಂಶಗಳನ್ನು ಸಂಯೋಜಿತ ಕಲಿಕಾ ವಿಧಾನದ ಮೂಲಕ ಕಲಿಸುವ ವ್ಯವಸ್ಥೆಯಾದರೆ ತೆರೆದ ಪುಸ್ತಕ ಪರೀಕ್ಷೆಗೆ ಒಂದು ಗಟ್ಟಿಯಾದ ನೆಲೆಗಟ್ಟು ದೊರೆಯುತ್ತದೆ. ಇಂತಹ ಕಲಿಕೆಗೆ ಹೆಚ್ಚು ಸಮಯ ಬೇಕಾಗುತ್ತದೆ. ಈ ಕಾರಣದಿಂದ ಈಗಿರುವ ಪಠ್ಯವಸ್ತು ಮತ್ತು ಪಠ್ಯಪುಸ್ತಕಗಳ ಹೊರೆಯನ್ನು ಕಡಿಮೆ ಮಾಡುವ ಅಗತ್ಯವಿದೆ. 
      ಇದುವರೆಗೂ ಪಠ್ಯೆÃತರ ಎಂದು ಗುರುತಿಸಿಕೊಂಡಿದ್ದ ಚರ್ಚೆ, ಸಂವಾದ ಗೋಷ್ಟಿಗಳು ತರಗತಿ ಕಲಿಕೆಯ ಭಾಗವಾಗಬೇಕು.  ಆಗ ಮಾತ್ರ ಮಕ್ಕಳಲ್ಲಿ ವಿವರಣಾತ್ಮಕ ಮತ್ತು ವಿಮರ್ಶಾತ್ಮಕ ಸಾಮರ್ಥ್ಯ ಬೆಳೆಯುತ್ತದೆ. ತರಗತಿಯಲ್ಲಿ ಚಿಕ್ಕ ಚಿಕ್ಕ ಗುಂಪಿನಲ್ಲಿ ಚರ್ಚೆಗಳು ನಡೆಯಬೇಕೆಂಬ ಆಶಯವೇನೋ ಇದೆ. ಆದರೆ ಇದಕ್ಕೆ ಪೂರಕವಾದ ವಾತಾವರಣ ಇಲ್ಲ. ಪಠ್ಯವಸ್ತುವನ್ನು ಬೇಗನೇ ಪೂರ್ಣಗೊಳಿಸಿ, ಪುನರಾವರ್ತನೆ ಮಾಡಿ ಮಕ್ಕಳನ್ನು ಪರೀಕ್ಷೆಗೆ ಅಣಿಸುವುದೇ ಶಿಕ್ಷಕರ ಕಾರ್ಯ ಎನ್ನುವಂತಾಗಿದೆ. ಪಠ್ಯದ ಆಚೆ ಏನೇನಿದೆ ಎಂದು ಶಿಕ್ಷಕರೂ ಹಾಗೂ ಮಕ್ಕಳು ನೋಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪಾಲಕರೂ ಹೊರತಲ್ಲ. ನಮ್ಮ ಮಗುವಿಗೆ ಪಾಠ ಓದಲು ಬರುವುದಿಲ್ಲ, ಲೆಕ್ಕ ಮಾಡಲು ಬರುವುದಿಲ್ಲ ಎಂದು ದೂರುತ್ತಾರೆಯೇ ವಿನಹ, ಬೋದನಾ ಪದ್ದತಿ ಬಗ್ಗೆ, ಪಠ್ಯವಸ್ತುವಿನ ಬಗ್ಗೆ ಯಾರೂ ಮಾತನಾಡುವುದಿಲ್ಲ. ಏಕೆಂದರೆ ಅದನ್ನು ರೂಪಿಸುವ ಜವಾಬ್ದಾರಿ ನಮ್ಮದಲ್ಲ ಎಂದು ಪಾಲಕರು ಭಾವಿಸಿದ್ದಾರೆ. 
             ಚಟುವಟಿಕೆಯುಕ್ತ ಬೋಧನೆ ಅಗತ್ಯ ಎಂದು ಹೇಳುತ್ತೆÃವೆ. ಆದರೆ ತರಗತಿ ವಾತಾವರಣ ಇದಕ್ಕೆ ಪೂರಕವಾಗಿಲ್ಲ. ಕೆಲ ಶಾಲೆಗಳ ತರಗತಿಗಳಲ್ಲಿ ಐವತ್ತಕ್ಕೂ ಹೆಚ್ಚು ಮಕ್ಕಳಿದ್ದಾಗ ಚಟುವಟಿಕೆಗೆ ಅವಕಾಶವೇ ಇಲ್ಲದಂತಾಗುತ್ತದೆ. ಇನ್ನು ಇವೆಲ್ಲವನ್ನೂ ಮೀರಿ ಚಟುವಟಿಕೆಯುಕ್ತ ಬೋಧನೆಯಲ್ಲಿ ತೊಡಗಿದ ಕೆಲ ಶಿಕ್ಷಕರನ್ನು ನೋಡುವ ದೃಷ್ಟಿಕೋನವೇ ವಿಭಿನ್ನವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ತೆರೆದ ಪುಸ್ತಕ ಪರೀಕ್ಷೆಯ ಸಾಧಕಗಳ ಬಗ್ಗೆ ಗಂಭೀರವಾದ ಚರ್ಚೆಗಳಾಗಬೇಕಿದೆ. ಈಗಿರುವ ಬೋಧನೆ-ಕಲಿಕೆಗಿಂತ ವಿಭಿನ್ನವಾದ ವಾತಾವರಣ ನಿರ್ಮಾಣವಾಗಬೇಕಿದೆ. ಮಕ್ಕಳಲ್ಲಿ ಚಿಂತನೆ ಮತ್ತು ಆಲೋಚನೆಗಳನ್ನು ಹುಟ್ಟು ಹಾಕುವ ಹಾಗೂ ಮತ್ತು ಅವುಗಳನ್ನು ಉತ್ತೆÃಜಿಸುವ ರೀತಿಯಲ್ಲಿ ಬೋಧನೆ-ಕಲಿಕೆಯ ವಿಧಾನಗಳು ಬದಲಾಗಬೇಕಿದೆ. ತರಗತಿಯ ಭೌತಿಕ ಸ್ಥಿತಿಗತಿ ಬದಲಾಗಬೇಕಿದೆ. ಚಿಕ್ಕ ಚಿಕ್ಕ ಗುಂಪುಗಳಲ್ಲಿ ಚರ್ಚಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಆಸನಗಳ ವ್ಯವಸ್ಥೆಯಾಗಬೇಕಿದೆ. ಈ ಎಲ್ಲಾ ಬದಲಾವಣೆಗಳು ಬಂದ ನಂತರ ತೆರೆದ ಪುಸ್ತಕ ಪರೀಕ್ಷೆ ಯಶಸ್ವಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಲ್ಲವೇ?
  ಆರ್.ಬಿ.ಗುರುಬಸವರಾಜ 


July 2, 2018

ಟೀಕೆ ಬಿಡಿ, ಮಾರ್ಗದರ್ಶನ ನೀಡಿ stop Teasing Give guidence

ದಿನಾಂಕ 2-7-18ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ 

ಟೀಕೆ ಬಿಡಿ, ಮಾರ್ಗದರ್ಶನ ನೀಡಿ.


ರಜೆ ಮುಗಿಸಿಕೊಂಡು ಮರಳಿ ಶಾಲೆಗೆ ಬಂದ ಮಕ್ಕಳಿಗೆ ‘ನಿಮ್ಮ ಕುಟುಂಬದಲ್ಲಿ ನೀವು ಎದುರಿಸುವ ಸಾಮಾನ್ಯ ಸಮಸ್ಯೆ ಏನು?’ ಎಂಬ ಪ್ರಶ್ನೆಯನ್ನು ಮಕ್ಕಳಿಗೆ ಕೇಳಿದೆ. ಬಹುತೇಕ ಮಕ್ಕಳ ಉತ್ತರ ಹೀಗಿತ್ತು. “ಹೆತ್ತವರು ಪ್ರತೀ ಕೆಲಸದಲ್ಲೂ ತಪ್ಪು ಹುಡುಕುತ್ತಾರೆ. ಪದೇ ಪದೇ ಬಯ್ಯುತ್ತಾರೆ, ಹಂಗಿಸುತ್ತಾರೆ”. ಇದನ್ನು ಕೇಳಿ ಬೆಚ್ಚಿಬೀಳುವಂತಾಯ್ತು. ಈ ಬಗ್ಗೆ ಯೋಚಿಸುವಂತಾಯ್ತು. ಹಾಗಾದರೆ ನಮ್ಮ ಪಾಲಕರು ಮಕ್ಕಳನ್ನು ಬೆಳೆಸುವಲ್ಲಿ ಎಡವುತ್ತಿದ್ದಾರೆಯೇ? ಅಥವಾ ಮಕ್ಕಳ ಮೇಲಿನ ಅತಿಯಾದ ನಿರೀಕ್ಷೆಗಳಿಂದ ಹೀಗೆಲ್ಲಾ ಆಗುತ್ತಿದೆಯಾ? ಎಂಬ ಅನೇಕ ಪ್ರಶ್ನೆಗಳು ಕಾಡತೊಡಗಿದವು. 
ಪ್ರತೀ ಮಗುವಿನ ಬೆಳವಣಿಗೆಯಲ್ಲಿ ಪಾಲಕರ ಕಾಳಜಿ ಬಹುಮುಖ್ಯ. ‘ಅತಿಯಾದರೆ ಅಮೃತವೂ ವಿಷ’ ಎಂಬಂತೆ ಕೆಲವು ಅತಿಯಾದ ಕಾಳಜಿಯು ಮಕ್ಕಳ ಬೆಳವಣಿಗೆಯ ದುಷ್ಪರಿಣಾಮ ಬೀರುತ್ತದೆ. ನಮ್ಮ ಮಕ್ಕಳು ಚೆನ್ನಾಗಿರಬೇಕು, ಇತರರಿಗಿಂತ ಚೆನ್ನಾಗಿ ಓದಬೇಕು, ಹೆಚ್ಚು ಬುದ್ದಿವಂತರು ಎನಿಸಿಕೊಳ್ಳಬೇಕು ಎಂಬ ಅತಿಯಾದ ನಿರೀಕ್ಷೆಗಳನ್ನು ಪಾಲಕರು ಇಟ್ಟುಕೊಳ್ಳುವುದು ಸಹಜ. ತಮ್ಮ ನಿರೀಕ್ಷೆಗಳನ್ನು ಮಗು ಹುಸಿ ಮಾಡುವ ಸಂದರ್ಭಗಳು ಎದುರಾದಾಗಲೆಲ್ಲ ಪಾಲಕರು ಮಗುವನ್ನು ಟೀಕಿಸತೊಡಗುತ್ತಾರೆ. ಟೀಕೆ ಮಕ್ಕಳನ್ನು ಸರಿದಾರಿಯಲ್ಲಿ ಬೆಳೆಸುವ ಏಕೈಕ ಅಸ್ತçವೆಂದು ಬಹುತೇಕ ಪಾಲಕರು ಭಾವಿಸಿದ್ದಾರೆ. ಆದರೆ ಟೀಕೆಯಿಂದ ಮಕ್ಕಳ ಮನಸ್ಸಿನ ಮೇಲಾಗುವ ಕೆಟ್ಟ ಪರಿಣಾಮಗಳನ್ನು ಪಾಲಕರು ಅರ್ಥಮಾಡಿಕೊಳ್ಳಬೇಕಿದೆ. 
ಟೀಕೆಯಿಂದ ಮಕ್ಕಳ ಮೇಲಾಗುವ ಪರಿಣಾಮಗಳು:
ಟೀಕೆಯು ಮುಖ್ಯವಾಗಿ ಬಾಂಧವ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳನ್ನು ಟೀಕಿಸಿದಾಗ ಅವರು ನಿಷ್ಪಕ್ಷಪಾತವೆಂದು ಭಾವಿಸುವ ಹೆತ್ತವರ ಪ್ರಿತಿಯನ್ನೆ ಪ್ರಶ್ನಿಸಬಹುದು. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅವರು ಮಕ್ಕಳಾಗಿದ್ದಾಗ ಪಾಲಕರ ಪ್ರಿತಿಯನ್ನು ಕಳೆದುಕೊಂಡಿದ್ದರಿಂದ ವಯಸ್ಕರಾದಾಗ ಬೇರೆಡೆ ಪ್ರಿತಿಯನ್ನು ಹುಡುಕಬಹುದು ಅಥವಾ ಮಧ್ಯವ್ಯಸನಿ/ಲೈಂಗಿಕ ವ್ಯಸನಿಗಳಾಗಬಹುದು. 
ಟೀಕೆಯಿಂದ ಮಕ್ಕಳಲ್ಲಿ ನಾಚಿಕೆ ಸ್ವಭಾವ ಬೆಳೆಯುತ್ತದೆ. ಪದೇ ಪದೇ ಟೀಕೆಗೆ ಒಳಗಾಗುವುದರಿಂದ ತಾನು ಮಾಡುವ ಕೆಲಸದಲ್ಲಿ ಏನೋ ತೊಂದರೆಯಾಗುತ್ತದೆ ಎಂದು ನಂಬುತ್ತಾರೆ. ಅವಮಾನದ ಭೀತಿಯಿಂದ ಸಾಮಾಜಿಕವಾಗಿ ಹಿಂದುಳಿಯುತ್ತಾರೆ. ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಹಿಂದುಳಿಯುತ್ತಾರೆ. 
ಸೋಮಾರಿ, ಮೂಕ, ಸ್ಟುಪಿಡ್, ಯೂಸ್‌ಲೆಸ್ ಇತ್ಯಾದಿ ನಕಾರಾತ್ಮಕ ಪದಗಳನ್ನು ಪಾಲಕರು ಪದೇ ಪದೇ ಬಳಸುವುದುರಿಂದ ಅದೇ ಸತ್ಯವೆಂದು ನಂಬುತ್ತಾರೆ ಮತ್ತು ಅದನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಾರೆ. ಭವಿಷ್ಯದಲ್ಲಿ ಹೊಸ ಮಾರ್ಗದ ಶೋಧಕ್ಕೆ ಹಿಂಜರಿಯುತ್ತಾರೆ.
ಬಹುತೇಕ ಪಾಲಕರು ಮಗುವನ್ನು ಟೀಕಿಸುವಾಗ ಅವರು ಆಡುವ ಪದದ ಬಗ್ಗೆ ಅಷ್ಟೆನೂ ಗಮನಕೊಡುವುದಿಲ್ಲ. ಆದರೆ ಮಗುವ ಪ್ರತೀ ಪದದ ಬಗ್ಗೆಯೂ ಯೋಚಿಸತೊಡಗುತ್ತದೆ. ಪಾಲಕರು ಬಳಸುವ ನಕರಾತ್ಮಕ ಪದ ಮಗುವಿನ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರತೊಡಗುತ್ತದೆ. ತಾನು ಇರುವುದು ಹೀಗೆಯೇ ಎಂದು ನಂಬತೊಡಗುತ್ತದೆ. ಹಾಗಾಗಿ ಮಗು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತದೆ.
ಮಗುವಿನ ಮನಸ್ಸಿನ ಮೇಲಾಗುವ ಭಾವನಾತ್ಮಕ ಗಾಯಗಳು ಮಗುವಿನ ಸಂವೇದನಾಶೀಲತೆಯನ್ನು ಹಾಳು ಮಾಡುತ್ತವೆ. ಎಲ್ಲರ ಗಮನವು ಮಗುವಿನ ತಪ್ಪುಗಳತ್ತಲೇ ಕೇಂದ್ರಿಕೃತವಾಗುತ್ತದೆ. ಆಗ ಮಗು ಮಾಡುವ ಉತ್ತಮ ಕೆಲಸಗಳು ಗಮನಕ್ಕೆ ಬಾರದೇ ಹೋಗುತ್ತವೆ. 
ಕಠಿಣವಾದ ಟೀಕೆಯು ಮಗುವಿನ ಸ್ವಾಭಿಮಾನದ ಅಡಿಪಾಯವನ್ನು ಅಲುಗಾಡಿಸುತ್ತದೆ. ಇದರಿಂದಾಗಿ ಅವರು ಕಳಪೆ ಗುಣಮಟ್ಟವನ್ನು ಪ್ರದರ್ಶಿಸುತ್ತಾರೆ. ಟೀಕೆಯು ಮಗುವನ್ನು ಒಂದು ಉತ್ಪಾದಕ ವ್ಯಕ್ತಿಯಾಗಿ ರೂಪಿಸುವುದಿಲ್ಲ. ಬದಲಿಗೆ ಅವನನ್ನು ಕೂಪ ಮಂಡೂಕನನ್ನಾಗಿಸುತ್ತದೆ ಅಥವಾ ಹೆದರುಪುಕಲನನ್ನಾಗಿಸುತ್ತದೆ ಎಂದು ಸಂಶೋಧನೆಗಳಿಂದ ಸಾಬೀತಾಗಿದೆ.

ಟೀಕೆ ಬಿಟ್ಹಾಕಿ: ಮಾರ್ಗದರ್ಶನ ನೀಡಿ

ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಪೋಷಕರ ಪಾತ್ರ ನಿರ್ಣಾಯಕವಾದದ್ದು. ನಮ್ಮ ಟೀಕೆ ಅಥವಾ ನಡವಳಿಕೆಗಳು ಹೆಚ್ಚಾಗಿ ಮಕ್ಕಳ ಜೀವನವನ್ನು ಪ್ರಭಾವಿಸುತ್ತವೆ. ಹಾಗಾಗಿ ಟೀಕೆಯು ಕೇವಲ ಮಗುವಿನ ಮನ ನೋಯಿಸುವ ಸಂಗತಿಯಾಗಬಾರದು. ಬದಲಾಗಿ ಟೀಕೆಯು ರಚನಾತ್ಮಕವಾಗಬೇಕಾದುದು ಇಂದಿನ ಅಗತ್ಯವಾಗಿದೆ. ಮಕ್ಕಳು ತಪ್ಪು ಮಾಡುವುದು ಸಹಜ. ತಪ್ಪು ಮಾಡಿದಾಗ ಅಥವಾ ಅಪಾಯಕಾರಿ ಕೆಲಸಗಳನ್ನು ಮಾಡಿದಾಗ ನೇರವಾಗಿ ದೂಷಿಸುತ್ತೆವೆ, ಬೆದರಿಕೆ ಹಾಕುತ್ತೆವೆ ಅಥವಾ ಏರುಧ್ವನಿಯಲ್ಲಿ ಮಗುವಿಗೆ ಗದರಿಸುತ್ತೆವೆ. ಅದರ ಬದಲಾಗಿ ಪ್ರಿತಿಯ ಮಾತುಗಳಿಂದ ಮಗು ಮಾಡಿದ ತಪ್ಪಿನಿಂದ ಆಗುವ ತೊಂದರೆಗಳನ್ನು ಮನವರಿಕೆ ಮಾಡಿಕೊಟ್ಟು ಅದರಿಂದ ದೂರ ಇರುವಂತೆ ರಚನಾತ್ಮಕ ಮಾರ್ಗದರ್ಶನದ ಮೂಲಕ ತಪ್ಪನ್ನು ಸರಿಪಡಿಸುವ ಪ್ರಯತ್ನ ಮಾಡಬೇಕಿದೆ. ಉದಾಹರಣೆಗೆ ಮಗು ಟಿ.ವಿ. ರಿಮೋಟನ್ನು ಬೀಳಿಸಿದ ಕೂಡಲೇ ಬಾಯಿಗೆ ಬಂದಂತೆ ಬಯ್ಯುತ್ತೆವೆ. ಬದಲಾಗಿ ಅದನ್ನು ಬೀಳಿಸಿದರೆ ಆಗುವ ತೊಂದರೆಗಳನ್ನು ತಿಳಿಸಿ ಇನ್ನೊಮ್ಮೆ ಬೀಳಿಸದಂತೆ ಮಾರ್ಗದರ್ಶನ ನೀಡುವುದು ಅಗತ್ಯ. ಸ್ನೆಹಭಾವದ ರೀತಿಯಲ್ಲಿ ಮಗುವಿಗೆ ಮಾರ್ಗದರ್ಶನ ನೀಡಬೇಕು. 
ಮಕ್ಕಳನ್ನು ಟೀಕಿಸುವುದು ಸುಲಭ. ಆದರೆ ಮಾರ್ಗದರ್ಶನ ಮಾಡುವುದು ತುಂಬಾ ಕಠಿಣ. ಮಾರ್ಗದರ್ಶನ ಒಂದು ರೀತಿಯ ತಪ್ಪಸ್ಸು ಇದ್ದಂತೆ. ಪಾಲಕರು ಕೆಲವು ನಡವಳಿಕೆಗಳನ್ನು ಅಥವಾ ತಮ್ಮ ಪೋಷಣಾ ಶೈಲಿಯನ್ನು ಬದಲಾವಣೆ ಮಾಡುವ ಅಗತ್ಯವಿದೆ. ಈ ಹಿನ್ನಲೆಯಲ್ಲಿ ಕೆಳಗಿನ ಕೆಲವು ಅಂಶಗಳು ಉಪಯೋಗವಾಗುತ್ತವೆ.
ಮೇಲೆ ತಿಳಿಸಿದಂತೆ ಮಕ್ಕಳು ತಪ್ಪು ಮಾಡುವುದು ಸಹಜ. ಸಹಜ ತಪ್ಪುಗಳ ಬಗ್ಗೆ ಧೀರ್ಘವಾಗಿ ಆಲೋಚಿಸುವ ಅಗತ್ಯವಿಲ್ಲ. ಆದರೆ ತಪ್ಪುಗಳ ಪುನರಾವರ್ತನೆಯಾದರೆ ಪಾಲಕರು ಅದಕ್ಕೆ ಕಾರಣಗಳನ್ನು ಹುಡುಬೇಕು. ಮಗು ಬೇಕಂತಲೇ ಆ ತಪ್ಪು ಮಾಡುತ್ತಿದೆಯೋ ಅಥವಾ ತಿಳಿಯದೇ ತಪ್ಪು ಮಾಡುತ್ತಿದೆಯೋ ಎಂಬುದನ್ನು ಕಂಡುಕೊಳ್ಳಬೇಕು. ಮಗುವಿನ ಮನಸ್ಥಿತಿ ಮತ್ತು ವಯಸ್ಸಿಗೆ ಪೂರಕವಾದ ಮಾತುಗಳಿಂದ ಮಗುವನ್ನು ತಿದ್ದುವ ಪ್ರಯತ್ನ ಮಾಡಬೇಕು. 
ಕೆಲವು ಕಲಿಕಾ ವಿಷಯಗಳಲ್ಲಿ ಮಕ್ಕಳು ಹಿಂದೆ ಬೀಳುವುದು ಸಹಜ. ಇತರ ಮಕ್ಕಳೊಡನೆ ಮಕ್ಕಳನ್ನು ಹೋಲಿಸಿ ಹೀಯಾಳಿಸದೇ, ಮಗುವಿನ ಕಲಿಕಾ ಸಾಧನೆಯ ಸಮಸ್ಯೆಗಳನ್ನು ಗುರುತಿಸಿಕೊಳ್ಳಬೇಕು. ಉದಾಹರಣೆಗೆ ಎಲ್ಲಾ ವಿಷಯಗಳಲ್ಲಿ ಮುಂದೆ ಇರುವ ಮಗು ಗಣಿತದಲ್ಲಿ ಹಿಂದೆ ಇದ್ದರೆ ಮಗುವನ್ನು ನೇರವಾಗಿ ದೂಷಿಸದೇ ಪ್ರಿತಿಯ ಮಾತುಗಳಿಂದ “ನೀನು ಎಲ್ಲಾ ವಿಷಯಗಳಲ್ಲಿ ಚೆನ್ನಾಗಿದ್ದಿಯ. ಆದರೆ ಗಣಿತದಲ್ಲಿ ಮಾತ್ರ ಒಂಚೂರು ಹಿಂದೆ ಇರುವೆ. ಪರವಾಯಿಲ್ಲ. ಚಿಂತೆ ಮಾಡ್ಬೆಡ. ಚೆನ್ನಾಗಿ ಅಭ್ಯಾಸ ಮಾಡು. ಕಠಿಣ ಸಮಸ್ಯೆಗಳನ್ನು ಗುರುಗಳ ಬಳಿ ಕೇಳಿ ತಿಳಿದುಕೋ. ಮುಂದಿನ ಪರೀಕ್ಷೆಯಲ್ಲಿ ಖಂಡಿತವಾಗಿ ಉತ್ತಮ ಫಲಿತಾಂಶ ಸಾಧಿಸುವೆ ಎಂಬ ಭರವಸೆ ನನಗಿದೆ” ಎಂದು ನಲ್ನುಡಿಯಿಂದ ಮಗುವಿನ ತಲೆ ನೇವರಿಸಿ ಹೇಳಿ ನೋಡಿ. ಖಂಡಿತವಾಗಿ ಮಗುವಿನಲ್ಲಿ ಕಲಿಕಾ ಸುಧಾರಣೆ ಕಾಣುವಿರಿ.
ಮಗುವಿನೊಂದಿಗೆ ವ್ಯವಹರಿಸುವಾಗ ನೀವು ವಯಸ್ಕರಾಗಿಲ್ಲ, ಮಗುವಾಗಿದ್ದಿÃರಿ ಎಂಬುದನ್ನು ನೆನಪಿಡಿ. ಮಕ್ಕಳೂ ಸಹ ಭಾವನೆಗಳನ್ನು ಹೊಂದಿದ್ದಾರೆ. ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಹ ಟೀಕೆಗಳನ್ನು ಕೇಳಲು ಯಾರೂ ಇಷ್ಟ ಪಡುವುದಿಲ್ಲ. ಮಗು ತಪ್ಪು ಮಾಡಿದಾಗ ಕೋಪಗೊಳ್ಳುವ ಮೊದಲು ಮಗುವನ್ನು ಮಾತನಾಡಿಸಲು ಪ್ರಯತ್ನಿಸಿ. ಮಗುವಿನೊಂದಿಗೆ ಮಾತನಾಡುವಾಗ ಧ್ವನಿ ತಾರಕ್ಕೆÃರದಿರಲಿ. ಸಮಯ ತೆಗೆದುಕೊಂಡು ಶಾಂತ ಚಿತ್ತದಿಂದ ಮಗುವಿಗೆ ಬುದ್ದಿ ಹೇಳಿ.
ಮಕ್ಕಳ ಬೆಳವಣಿಗೆಯ ಪ್ರಮುಖ ಅಂಶವೆಂದರೆ ತಪ್ಪುಗಳ ಪರಿಣಾಮಗಳನ್ನು ಮಕ್ಕಳಿಗೆ ತಿಳಿಸಬೇಕು. ಮಕ್ಕಳು ಮೊಬೈಲ್/ಟ್ಯಾಬ್ಲೆಟ್‌ಗಳನ್ನು ಬಳಸುವುದು ಸಹಜ. ಇದು ತಪ್ಪು ಎಂದು ಎಲ್ಲರಿಗೂ ಗೊತ್ತು. ಆದರೆ ಮಗುವಿಗೆ ಅದರಿಂದಾಗುವ ಪರಿಣಾಮಗಳ ಬಗ್ಗೆ ತಿಳುವಳಿಕೆ ಇಲ್ಲ. ಹೆಚ್ಚು ಹೊತ್ತು ಬರಿಗಣ್ಣಿನಿಂದ ಮೊಬೈಲ್/ಟ್ಯಾಬ್ಲೆಟ್ ಬಳಸುವುದರಿಂದ ಕಣ್ಣಿಗೆ ಮತ್ತು ನರಗಳ ಮೇಲಾಗುವ ಹಾನಿಯನ್ನು ಮಕ್ಕಳಿಗೆ ತಿಳಿಸಿ ಹೇಳಬೇಕು. ಒಂದು ವೇಳೆ ಅವರು ಅಂತಹ ವಸ್ತುಗಳನ್ನು ಬಳಸುವುದು ಅನಿವಾರ್ಯ ಎಂದಾದರೆ ಅದಕ್ಕೆ ಸುರಕ್ಷತೆಯ ತಂತ್ರಗಳನ್ನು ಅಳವಡಿಸುವುದು ಅನಿವಾರ್ಯ.
ನಿಮ್ಮ ಮುದ್ದಿನ ಮಕ್ಕಳನ್ನು ಟೀಕಿಸುವ ಮೊದಲು ಟೀಕೆಯ ಹಿಂದಿನ ಗುರಿ ಮತ್ತು ಉದ್ದೆಶಗಳು ಸ್ಪಷ್ಟವಾಗಿರಲಿ. ಟೀಕಿಸುವ ಭರಾಟೆಯಲ್ಲಿ ಮಕ್ಕಳು ನಿಮ್ಮ ಸಂದೇಶವನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ನಿಮ್ಮ ಮಗುವಿಗೆ ಶಿಕ್ಷಣ ಅಥವಾ ಶಿಕ್ಷೆ ನೀಡುವ ಮೊದಲು ಯೋಚಿಸಿ.
ಮಕ್ಕಳು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿ. ಮಗು ಶಾಲೆಯಲ್ಲಾಗಲೀ ಅಥವಾ ಮನೆಯಲ್ಲಾಗಲೀ ಅಸಹಜವಾಗಿ ತಪ್ಪನ್ನು ಮಾಡುತ್ತಿದೆಯೋ ಗಮನಿಸಿ. ರಚನಾತ್ಮಕ ಮಾರ್ಗದರ್ಶನದ ಅಂತಿಮ ಗುರಿ ಮಕ್ಕಳು ತಮ್ಮ ತಪ್ಪುಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಸೂಕ್ತ ತಿದ್ದುಪಡಿಗಳನ್ನು ಮಾಡಿಕೊಳ್ಳಲು ಪ್ರೆÃರೇಪಿಸುವುದಾಗಿದೆ. ಹೀಗೆ ಮಾಡುವುದರಿಂದ ಭವಿಷ್ಯದಲ್ಲಿ ಮಕ್ಕಳು ತಮ್ಮ ಕಾರ್ಯಗಳ ಜವಾಬ್ದಾರಿಯನ್ನು ಕಲಿಯುತ್ತಾರೆ.
ಸಾಮಾನ್ಯವಾಗಿ ಮಕ್ಕಳು ತಡವಾಗಿ ಏಳುತ್ತಾರೆ. ಎದ್ದ ನಂತರ ಹಾಸಿಗೆ ತೆಗೆದಿಡಬೇಕೆಂದು ಎಷ್ಟೆ ಬಾರಿ ಹೇಳಿದರೂ ಕೇಳುವುದೇ ಇಲ್ಲ. ಅಂತಹ ಸಂದರ್ಭದಲ್ಲಿ ಟೀಕೆಯ ಬದಲಾಗಿ ಸಹಾಯ ಹಸ್ತ ಚಾಚಿ. “ಮಗು ಹಾಸಿಗೆ ತೆಗೆಯಲಿಲ್ಲವೇ? ಬಾ ನಿನಗೆ ಸಹಾಯ ಮಾಡುತ್ತೆÃನೆ” ಎಂದು ಸಹಾಯ ನೀಡಿ. ಒಂದೆರಡು ಬಾರಿ ಈ ಪ್ರಕ್ರಿಯೆ ಪುನರಾವರ್ತನೆಯಾದರೆ ಮಗು ಖಂಡಿತವಾಗಿ ತನ್ನ ಪಾಲಿನ ಜವಾಬ್ದಾರಿಯನ್ನು ಅರಿಯತೊಡಗುತ್ತದೆ. ಇದು ಕೇವಲ ಉದಾಹರಣೆ ಮಾತ್ರ. ಇಂತಹ ಅದೆಷ್ಟೊ ಕೆಲಸಗಳಲ್ಲಿ ಮಗುವಿಗೆ ಸಹಾಯ ಮಾಡುವ ಮೂಲಕ ಕೆಲಸದ ಜವಾಬ್ದಾರಿಯನ್ನು ಕಲಿಸಲು ಅವಕಾಶ ಇದೆ.
ವಿಪರ್ಯಾಸವೆಂದರೆ, ಮಗುವಿನಲ್ಲಿ ಶಿಸ್ತು ಬೆಳೆಸುವ ಭರಾಟೆಯಲ್ಲಿ ಕೇವಲ ತಪ್ಪುಗಳನ್ನು ಹುಡುತ್ತೆÃವೆಯೇ ಹೊರತು ಒಳ್ಳೆಯ ಕೆಲಸಗಳನ್ನಲ್ಲ. ಮಗು ಅನೇಕ ವೇಳೆ ಉತ್ತಮ ಕಾರ್ಯಗಳನ್ನು ಮಾಡುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ಗಮನಿಸಿದರೂ ಒಂದು ಪ್ರೆÃರಣಾತ್ಮಕ ಧನ್ಯವಾದವನ್ನು ಮಗುವಿಗೆ ಹೇಳುವುದಿಲ್ಲ. ಇದು ತಪ್ಪು. ಉತ್ತಮ ಕೆಲಸ ಮಾಡಿದಾಗ ಮಗುವನ್ನು ಪ್ರಶಂಸಿಸಬೇಕು. 

ಈ ಎಲ್ಲಾ ತಂತ್ರಗಳನ್ನು ಅಳವಡಿಸಿಕೊಳ್ಳುವುದು ಪಾಲಕರಾದ ನಮಗೆ ತೊಂದರೆಯಾಗಬಹುದು. ಆದರೆ ಮಕ್ಕಳನ್ನು ಬೆಳೆಸಲು ಕೆಲ ಅಗತ್ಯ ತಂತ್ರಗಾರಿಕೆಗಳನ್ನು ಕಲಿಯುವುದು ಅನಿವಾರ್ಯ. ಸತತ ಅಭ್ಯಾಸದೊಂದಿಗೆ ಈ ತಂತ್ರಗಳನ್ನು ಪಾಲಿಸಲು ಪ್ರಯತ್ನಿಸಿದರೆ ಖಂಡಿತ ಯಶಸ್ಸು ಕಾಣಬಹುದು. ಆಗ ಕುಟುಂಬದ ಪ್ರತಿಯೊಬ್ಬರೂ ಸಂತೋಷವಾಗಿ ಇರುತ್ತಾರೆ. ಆ ಮೂಲಕ ಮಗು ದೇಶದ ನಗುವಾಗುತ್ತದೆ.

ಆರ್.ಬಿ.ಗುರುಬಸವರಾಜ



May 30, 2018

ತಂಬಾಕಿಗೆ ಗುಡ್‌ಬೈ GOODBYE TO TOBACCO

ದಿನಾಂಕ 30-5-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ತಂಬಾಕಿಗೆ ಗುಡ್‌ಬೈ 



ಇಂದು ದೇಶವನ್ನು ಕಾಡುತ್ತಿರುವ ಆರೋಗ್ಯ ಸಂಬಂಧಿ ಪಿಡುಗುಗಳಲ್ಲಿ ಅತೀ ದೊಡ್ಡ ಪಿಡುಗು ಎಂದರೆ ತಂಬಾಕು. ಇದು ಏಡ್ಸ್, ಡ್ರಗ್ಸ್, ಕುಡಿತ, ಆತ್ಮಹತ್ಯೆ ಮತ್ತು ಕೊಲೆಗಿಂತ ಹೆಚ್ಚು ಅಪಾಯಕಾರಿ. ಭಾರತದಲ್ಲಿ ಪ್ರತಿವರ್ಷ ತಂಬಾಕು ಕ್ಯಾನ್ಸರ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ 10 ಲಕ್ಷ ಮೀರುತ್ತಿದೆ ಎಂದು `ಭಾರತೀಯ ವೈದ್ಯ ಸಂಸ್ಥೆ’(ಂIಒS)ಹೇಳಿದೆ. ಇದರಲ್ಲಿ ಪುರುಷÀರ ಸಂಖ್ಯೆ ಅಧಿಕ. ಅದರಲ್ಲೂ ಧೂಮಪಾನಿಗಳ ಸಂಖ್ಯೆ ಇನ್ನೂ ಅಧಿಕ. ಶೇ.56 ರಷ್ಟು ಪುರುಷರು ಮತ್ತು ಶೇ.44 ರಷ್ಟು ಮಹಿಳೆಯರು ತಂಬಾಕು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಶೇ.82 ರಷ್ಟು ಪ್ರಕರಣಗಳಲ್ಲಿ ಶ್ವಾಸಕೋಶದ ಕಾಯಿಲೆ, ಪುಪ್ಪುಸದ ಕ್ಯಾನ್ಸರ್‌ಗೆ ತಂಬಾಕು ಕಾರಣ ಎಂದು ಧೃಢಪಟ್ಟಿದೆ.
ಕಳೆದ ದಶಕದ ಅಂಕಿ-ಅಂಶಗಳನ್ನು ಗಮನಿಸಿದರೆ, ದಶಕದ ಪ್ರಾರಂಭಕ್ಕಿಂತ ಅಂತ್ಯದ ವೇಳೆಗೆ ತಂಬಾಕು ಸೇವಿಸುವವರ ಸಂಖ್ಯೆ ಹೆಚ್ಚಾಗಿರುವುದು ಕಂಡುಬರುತ್ತದೆ. ಇದೇ ಪರಿಸ್ಥಿತಿ ಮುಂದುವರೆದರೆ 2020 ರ ವೇಳೆಗೆ ತಂಬಾಕು ಸಂಬಂಧಿ ಕಾಯಿಲೆ ಮತ್ತು ಸಾವುಗಳ ಪ್ರಮಾಣ ಶೇಕಡಾ 8.9 ರಷ್ಟು ಹೆಚ್ಚುವ ಭೀತಿ ಇದೆ.
ಈ ಎಲ್ಲಾ ಅಂಕಿ-ಅಂಶಗಳನ್ನು ಗಮನಿಸಿದರೆ ತಂಬಾಕು ಸೇವನೆ ಪ್ರತಿವರ್ಷ ಅಧಿಕವಾಗುತ್ತಿರುವುದು ಶೋಚನೀಯ. ಅದರಲ್ಲೂ ಯುವಜನತೆ ಮತ್ತು ಮಕ್ಕಳು ಅಧಿಕ ಪ್ರಮಾಣದಲ್ಲಿ ಈ ಪಿಡುಗಿಗೆ ತುತ್ತಾಗುತ್ತಿರುವುದು ಅಘಾತಕಾರಿಯಾಗಿದೆ. ಒಂದು ಸಮೀಕ್ಷೆ ಪ್ರಕಾರ 12-14 ವಯೋಮಾನದ ಶೇ.21 ಬಾಲಕರು ಮತ್ತು ಶೇ.2 ಬಾಲಕಿಯರು ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳು ಮತ್ತು ಯುವಕರು ತಂಬಾಕು ಉತ್ಪನ್ನಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. 
ಕಾರಣಗಳು
ದೃಶ್ಯ ಮಾಧ್ಯಮ ಹಾಗೂ ಚಲನಚಿತ್ರಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ವೈಭವೀಕರಿಸಿ ತೋರಿಸುವುದು.
ಕುಟುಂಬ ಮತ್ತು ಸುತ್ತಲಿನ ಪರಿಸರದಲ್ಲಿನ ಬಹುತೇಕ ಜನರು ತಂಬಾಕು ಉತ್ಪನ್ನಗಳನ್ನು ಬಳಸುತ್ತಿರುವುದು.
ಸ್ನೆÃಹಿತರನ್ನು ಒಲಿಸಿಕೊಳ್ಳಲು/ಒತ್ತಾಯಕ್ಕಾಗಿ ಅಥವಾ ಅನುಕರಣೆಯಿಂದಾಗಿ ತಂಬಾಕು ಉತ್ಪನ್ನಗಳಿಗೆ ಬಲಿಯಾಗುತ್ತಿರುವುದು.
ವಿರಾಮವೇಳೆ ಕಳೆಯಲು ಹಾಗೂ ಮನೋರಂಜನೆಗಾಗಿ.
ಜಾಹೀರಾತಿನ ಪ್ರಭಾವಕ್ಕೆ ಒಳಗಾಗುವುದು.
ತಂಬಾಕಿನಿಂದಾಗುವ ದುಷ್ಪರಿಣಾಮಗಳು
ತಂಬಾಕು ಸೇವನೆಯಿಂದ ಅನೇಕ ರೀತಿಯ ನಷ್ಟಗಳಾಗುತ್ತವೆ. ಮೊದಲನೆಯದು ಸಾಮಾಜಿಕ ಸ್ಥಾನಮಾನ, ಗೌರವಕ್ಕೆ ಕುಂದುಂಟಾಗುತ್ತದೆ. ಎರಡನೆಯದು ಆರೋಗ್ಯ ಹಾನಿಯುಂಟಾಗುತ್ತದೆ. ಮೂರನೆಯದು ಆರ್ಥಿಕ ನಷ್ಟವಾಗುತ್ತದೆ. ಹೇಗೆಂದರೆ, ಒಬ್ಬ ವ್ಯಕ್ತಿ ತಂಬಾಕು ಸೇವನೆಗಾಗಿ (ಬೀಡಿ/ಸಿಗರೇಟು/ಹುಕ್ಕಾ/ಗುಟ್ಕಾ/ಖೈನಿ/ಜರ್ದಾಪಾನ್ ಇತ್ಯಾದಿ) ದಿನವೊಂದಕ್ಕೆ 30-50 ರೂ. ಖರ್ಚು ಮಾಡುತ್ತನೆ ಎಂದುಕೊಂಡರೆ, ಒಂದು ವರ್ಷಕ್ಕೆ 14,600 ರೂ.ಗಳನ್ನು ಹಾಗೂ 10 ವರ್ಷಕ್ಕೆ 1,46,000 ರೂ.ಗಳನ್ನು ಖರ್ಚು ಮಾಡುತ್ತಾನೆ. ಇಷ್ಟೊಂದು ಮೊತ್ತದ ಹಣವನ್ನು ತಂಬಾಕು ಸೇವನೆಗಾಗಿ ಖರ್ಚು ಮಾಡುವ ವೇಳೆಗೆ ಅವನ ಆರೋಗ್ಯ ಹದಗೆಟ್ಟಿರುತ್ತದೆ. ಆರೋಗ್ಯ ಸುಧಾರಣೆಗಾಗಿ ಲಕ್ಷ ಲಕ್ಷಗಳೇ ಖರ್ಚಾಗಬಹುದು. ಹೀಗೆ ತಂಬಾಕು ಆರ್ಥಿಕ ನಷ್ಟವನ್ನೂ ಉಂಟುಮಾಡುತ್ತದೆ. 
ಈಗಾಗಲೇ ನಮಗೆಲ್ಲಾ ತಿಳಿದಿರುವಂತೆ ತಂಬಾಕಿನಲ್ಲಿರುವ ‘ನಿಕೋಟಿನ್’ ಅತ್ಯಂತ ವಿಷಕಾರಿ ಎಂಬುದು ಸಾಬೀತಾಗಿದೆ. ನಿಕೋಟಿನ್ ಎಷ್ಟು ವಿಷಕಾರಿ ಎಂದರೆ, 6 ಮಿ.ಗ್ರಾಂ ನಿಕೋಟಿನ್‌ನ್ನು ನೇರವಾಗಿ ಒಂದು ನಾಯಿಗೆ ಪ್ರಯೋಗಿಸಿದರೆ ಕೆಲವೇ ಸೆಕೆಂಡುಗಳಲ್ಲಿ ನಾಯಿ ಸಾಯುತ್ತದೆ. ಇಂತಹ ನಿಕೋಟಿನ್ ನಮ್ಮ ಬಾಯಿಗೆ ಪ್ರವೇಶಿಸಿದ 10 ಸೆಕೆಂಡುಗಳಲ್ಲಿ ಮೆದುಳಿಗೆ ಹೋಗಿ ‘ಡೊಪಾಮಿನ್’ ಎಂಬ ವಿಷವನ್ನು ಉತ್ಪಾದಿಸಿ ಮೆದುಳಿಗೆ ಬರುವ ರಕ್ತ ಸಂಚಾರಕ್ಕೆ ತಡೆಯೊಡ್ಡುತ್ತದೆ. ಕ್ರಮೇಣವಾಗಿ ಇದು ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಧೂಮಪಾನಿಗಳು ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುವರು, ಅಲ್ಲದೇ ಅನ್ನನಾಳದ, ಹೊಟ್ಟೆಯ, ಮೂತ್ರಪಿಂಡದ, ಮೂತ್ರಕೋಶದ, ಮೇದೋಜೀರಕ ಗ್ರಂಥಿಯ, ಗರ್ಭಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ನಿಕೋಟಿನ್ ರಕ್ತದೊತ್ತಡ ಮತ್ತು ಕೊಲೆಸ್ಟಾçಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಗರ್ಭೀಣಿಯರ ಗರ್ಭದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.  
ತಂಬಾಕನ್ನು ಹದಗೊಳಿಸಲು ಮತ್ತು ಸ್ವಾದಿಷ್ಟಗೊಳಿಸಲು 4 ಸಾವಿರಕ್ಕಿಂತ ಹೆಚ್ಚಿನ ರಸಾಯನಿಕಗಳನ್ನು ಬೆರೆಸುತ್ತಾರೆ. ಅದರಲ್ಲಿ 250ಕ್ಕೂ ಹೆಚ್ಚಿನ ರಸಾಯನಿಕಗಳು ವಿಷಕಾರಿಗಳಾಗಿವೆ ಹಾಗೂ 50ಕ್ಕೂ ಹೆಚ್ಚಿನ ರಸಾಯನಿಕಗಳು ಕ್ಯಾನ್ಸರ್‌ಗೆ ಕಾರಣವಾಗಿವೆ. ಅಲ್ಲದೇ ಚರ್ಮ ಹದಮಾಡಲು ಬಳಸುವಂತಹ ಅತಿ ತೀಕ್ಷ÷್ಣವಾದ ರಸಾಯನಿಕಗಳನ್ನು ತಂಬಾಕು ಸಂಸ್ಕರಣೆಗೆ ಬಳಸುವುದರಿಂದ ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ರಸಾಯನಿಕ ಬೆರೆಸದಿದ್ದಾಗಲೂ ನಿಕೋಟಿನ್‌ನ ಪ್ರಮಾಣ ಪ್ರತಿ ಪೌಂಡಿಗೆ 22.8 ಗ್ರಾಂ ಇರುತ್ತದೆ. ಅಲ್ಲದೇ ಅದರಲ್ಲಿ ಕೊಲಿಡೀಸ್, ಅಮೋನಿಯಾ, ಪೈಯರಡೀನ್, ಕಾರ್ಬನ್ ಮೋನಾಕ್ಸೆöÊಡ್‌ಗಳೆಂಬ ಪ್ರತ್ಯೆÃಕ ವಿಷಕಾರಿಗÀಳಿವೆ. ಧೂಮಪಾನದೊಂದಿಗೆ ಹೊಗೆ ಮಾತ್ರ ದೇಹ ಸೇರುವುದಿಲ್ಲ. ಅದರ ಜೊತೆಗೆ ಅರ್ಸೆನಿಕ್, ಸೈನೈಡ್, ಫಾರ್ಮಾಲೈಡ್ ಮುಂತಾದ ವಿಷಕಾರಿಗಳು ಸೇರುತ್ತವೆ.
 


ದುಷ್ಟರಿಣಾಮದ ಕೆಲವು ಅಂಕಿ-ಅಂಶಗಳು
ತಂಬಾಕು ಅದರ ಬಳಕೆದಾರರ ಅರ್ದದಷ್ಟು ಜನರನ್ನು ಕೊಲ್ಲುತ್ತದೆ.
ತಂಬಾಕು ಪ್ರತಿವರ್ಷ 70 ಲಕ್ಷ ಜನರನ್ನು ಕೊಲ್ಲುತ್ತದೆ. ಅದರಲ್ಲಿ 60 ಲಕ್ಷ ಜನರು ನೇರ ತಂಬಾಕಿಗೆ ಬಲಿಯಾದರೆ, ಉಳಿದ ಒಂದು ಲಕ್ಷ ಜನರು ಸೆಕೆಂಡ್ ಹ್ಯಾಂಡ್ ಧೂಮಪಾನದಿಂದ ಸಾಯುತ್ತಾರೆ. 
ವಿಶ್ವದ 1.1 ಕೋಟಿ ಧೂಮಪಾನಿಗಳಲ್ಲಿ ಶೇಕಡಾ 80 ರಷ್ಟು ಜನರು ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ವಾಸಿಸುತ್ತಾರೆ.


ಸೆಕೆಂಡ್ ಹ್ಯಾಂಡ್ ಧೂಮಪಾನಿ
ಧೂಮಪಾನಿ ಬಿಟ್ಟ ಹೊಗೆಯನ್ನು ಸೇವಿಸುವವರನ್ನು ಸೆಕೆಂಡ್ ಹ್ಯಾಂಡ್ ಧೂಮಪಾನಿಗಳೆನ್ನುವರು. ಧೂಮಪಾನಿಯು ಬೀಡಿ, ಸಿಗರೇಟ್, ಹುಕ್ಕಾ, ಪೈಪ್ ಇತ್ಯಾದಿಗಳಿಂದ  ತಂಬಾಕು ಸೇವಿಸಿ ಬಿಟ್ಟ ಹೊಗೆಯನ್ನು ಪಕ್ಕದಲ್ಲಿರುವ ಇನ್ನಿತರರು ಸೇವಿಸುತ್ತಾರೆ. ಇವರೇ ಸೆಕೆಂಡ್ ಹ್ಯಾಂಡ್ ಧೂಮಪಾನಿಗಳು. ಸಾಮಾನ್ಯವಾಗಿ ಮನೆ, ಹೋಟೆಲ್, ರೆಸ್ಟೊರೆಂಟ್, ಬಸ್/ರೈಲು ನಿಲ್ದಾಣಗಳು ಇತ್ಯಾದಿ ಜನಸಾಂದ್ರತೆ ಇರುವ ಪ್ರದೇಶದಲ್ಲಿ ಇಂತಹ ಸೆಕೆಂಡ್ ಹ್ಯಾಂಡ್ ಧೂಮಪಾನಿಗಳಿರುತ್ತಾರೆ. ಇದರಲ್ಲಿ ಮಕ್ಕಳು, ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು, ವಯಸ್ಕರು, ಮುದುಕರೂ ಇರಬಹುದು. ಇವರು ನೇರವಾಗಿ ತಂಬಾಕನ್ನು ಸೇವಿಸದಿದ್ದರೂ ಧುಮಪಾನಿಯ ಹೊಗೆಯಿಂದ ಇವರಲ್ಲೂ ದುಷ್ಟರಿಣಾಮಗಳು ಕಾಣಿಸಿಕೊಳ್ಳುತ್ತವೆ.

ತಂಬಾಕು ತ್ಯಜಿಸುವುದರಿಂದ ಆಗುವ ಲಾಭಗಳು
ತಂಬಾಕು ತ್ಯಜಿಸುವುದರಿಂದ ಕೆಳಗಿನವುಗಳನ್ನು ಆನಂದಿಸಬಹುದು.
ಕೆಂಪು ಒಸಡುಗಳು, ಬಾಯಿ ಅಥವಾ ತುಟಿಯಲ್ಲಿನ ಬಿಳಿ ಕಲೆಗಳು ಮಾಯವಾಗುತ್ತವೆ.
ಒಸಡುಗಳಲ್ಲಿ ರಕ್ತ ಒಸರುವುದು ನಿಲ್ಲುತ್ತದೆ.
ಕೆಂಪು ಹಲ್ಲುಗಳಿಂದ ಮುಕ್ತಿ ದೊರೆಯುತ್ತದೆ.
ಸ್ವಸ್ಥ ಹಾಗೂ ಆರೋಗ್ಯಕರ ಬಾಯಿ ಇರುತ್ತದೆ.
ಆರೋಗ್ಯಪೂರ್ಣ ಹೊಳೆಯುವ ಕೆನ್ನೆಗಳು ನಿಮ್ಮದಾಗುತ್ತವೆ.
ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
ಸಾಮಾಜಿಕ ಮನ್ನಣೆ ದೊರೆಯುತ್ತದೆ. 
ಉಸಿರು ಹಾಗೂ ಬಟ್ಟೆಗಳು ಉತ್ತಮ ವಾಸನೆಯಿಂದ ಕೂಡಿರುತ್ತದೆ.
ಆಹಾರವು ರುಚಿಯನ್ನು ಪಡೆದು ಸಂಪೂರ್ಣವಾಗಿ ಜೀರ್ಣವಾಗುತ್ತದೆ.
ಬೆರಳುಗಳು ಮತ್ತು ಉಗುರುಗಳು ನಿಧಾನವಾಗಿ ಹಳದಿ ಮುಕ್ತವಾಗುತ್ತವೆ.
ಉದ್ಯೊÃಗದ ಅವಕಾಶಗಳು ಹೆಚ್ಚುತ್ತವೆ.
ಹಣದ ಉಳಿತಾಯ ಆರಂಭವಾಗುತ್ತದೆ.
ಮುಕ್ತಿಮಾರ್ಗ
ತಂಬಾಕು ಸೇವನೆ ಇಂದು ಸಮುದಾಯ ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ಬಲವಾದ ವಿರೋಧದ ಅಗತ್ಯವಿದೆ. ಬಹುತೇಕರು ತಂಬಾಕು ತ್ಯಜಿಸುವುದು ಸುಲಭವಲ್ಲ ಎನ್ನುತ್ತಾರೆ. ತಂಬಾಕು ಪದಾರ್ಥಗಳನ್ನು ತ್ಯಜಿಸುವುದು ದೇಹದ ತೂಕ ಕಳೆದುಕೊಳ್ಳುವಂತೆ ಬಹು ದೀರ್ಘಕಾಲದ ಪ್ರಯತ್ನ. ಆದರೆ ಬದ್ದತೆಯಿಂದ ಕೂಡಿದ ಗಟ್ಟಿ ನಿರ್ಧಾರದಿಂದ ಎಂತಹ ಚಟವನ್ನಾದರೂ ಬಿಡಬಹುದು. ತಂಬಾಕು ವಿರೋಧಿಸುವ ಪ್ರತಿಯೊಬ್ಬರೂ ಕೆಳಗಿನ ಅಂಶಗಳತ್ತ ಚಿತ್ತವಹಿಸಬೇಕಾಗಿದೆ.
ತಂಬಾಕು ತ್ಯಜಿಸುವ ದಿನಾಂಕವನ್ನು ನಿರ್ಧರಿಸಿ ಕ್ಯಾಲೆಂಡರನಲ್ಲಿ ಗುರುತಿಸಿಕೊಳ್ಳಿ.
ನೀವು ತಂಬಾಕು ತ್ಯಜಿಸುವ ದಿನಾಂಕದ ಬಗ್ಗೆ ನಿಮ್ಮ ಸ್ನೆÃಹಿತರು ಮತ್ತು ಕುಟುಂಬದವರಿಗೆ ತಿಳಿಸಿ.
ನಿಮ್ಮ ಮನೆ, ವಾಹನ, ಮತ್ತು ಕೆಲಸದ ಸ್ಥಳ ಎಲ್ಲವೂ ತಂಬಾಕು ಮುಕ್ತವಾಗಲಿ.
ತಂಬಾಕು ಸೇವಿಸುವ ಬಯಕೆಯಾದಾಗ ತಂಬಾಕಿನ ಬದಲು ಇನ್ನಿತರೇ ಅಪಾಯಕಾರಿಯಲ್ಲದ ಅಗಿಯುವ ವಸ್ತುಗಳು ಬಳಿಯಿರಲಿ. ಉದಾ: ಚಾಕೋಲೇಟ್, ಚ್ಯೂಯಿಂಗ್ ಗಮ್, ಕ್ಯಾಂಡಿ, ಲವಂಗ, ಯಾಲಕ್ಕಿ ಇತ್ಯಾದಿ.
ಕುಟುಂಬ ಅಥವಾ ದಂತ ವೈದ್ಯರನ್ನು ಸಂಪರ್ಕಿಸಿ ಬಾಯಿ ಪರೀಕ್ಷೆ ಮಾಡಿಸಿಕೊಳ್ಳಿ. 
ತಂಬಾಕು ಬಳಸುವ ಕುಟುಂಬ/ಸ್ನೆÃಹಿತರಿಂದ ದೂರವಿರಿ ಅಥವಾ ಬಳಸುವಂತೆ ಒತ್ತಾಯ ಮಾಡದಿರಲು ತಿಳಿಸಿ.
ವಾಕಿಂಗ್, ವ್ಯಾಯಾಮ, ಸೃಜನಾತ್ಮಕ ಚಟುವಟಿಕೆ ಅಥವಾ ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ.
ಆಗಾಗ ನೀರು ಅಥವಾ ಹಣ್ಣಿನ ರಸ/ಜ್ಯೂಸ್ ಕುಡಿಯಿರಿ.
ತಂಬಾಕು ಮುಕ್ತ ಮಾಡುವಲ್ಲಿ ಸಮುದಾಯದ ಪಾತ್ರ
ತಂಬಾಕು ಸೇವೆಯಿಂದಾಗುವ ದುಷ್ಪರಿಣಾಮಗಳನ್ನು ಮತ್ತು ಪರಿಹಾರ ಮಾರ್ಗಗಳನ್ನು ಉನ್ನತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ವನ್ನು ಪ್ರೊÃತ್ಸಾಹಿಸುವುದು.
ಮಕ್ಕಳು ಮತ್ತು ಯುವಜನತೆಯನ್ನು ತಂಬಾಕು ಮುಕ್ತರನ್ನಾಗಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು. ಶಾಲಾ ಶಿಕ್ಷಣದ ಮೂಲಕ ತಂಬಾಕು ಬಳಕೆಯನ್ನು ತಡೆಯಲು ಪ್ರಯತ್ನಿಸಬೇಕು.
ಶಾಲೆಗಳಲ್ಲಿ ಚರ್ಚೆ, ಸಂವಾದ, ಉಪನ್ಯಾಸ, ವಿಚಾರಗೋಷ್ಟಿ, ನಾಟಕ, ವೀಡಿಯೋ ಪ್ರದರ್ಶನಗಳಂತಹ ಕರ‍್ಯಕ್ರಮಗಳನ್ನು ಕಾಲಕಾಲಕ್ಕೆ ಹಮಿಕೊಂಡು ಅವುಗಳ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ ಬೆಂಬಲಿಸುವುದು.
ಮಕ್ಕಳು ಮತ್ತು ಯುವಜನತೆ ಸದಾಕಾಲ ಜ್ಞಾನಾಧಾರಿತ/ ಅಭಿವೃದ್ದಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೆÃರೇಪಿಸುವುದು.
ಹತಾಶೆ ಮತ್ತು ಖಿನ್ನತೆಯಿಂದ ಮುಕ್ತರನ್ನಾಗಿಸುವುದು.
ವಿರಾಮ ವೇಳೆಯ ಸದುಪಯೋಗಕ್ಕಾಗಿ ಕ್ರಿÃಡೆಗಳು/ ಓದುವ ಹವ್ಯಾಸ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳವಂತೆ ಮಾಡುವುದು.
ಮಾಧ್ಯಮಗಳ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ ನೀಡುವುದು.
ತಂಬಾಕನ್ನು ತಿರಸ್ಕರಿಸುವ ಕೌಶಲಗಳನ್ನು ಅಭಿವೃದ್ದಿಪಡಿಸುವದು ಮತ್ತು ತರಬೇತಿ ನೀಡುವದು.
ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳನ್ನು ಪ್ರೊÃತ್ಸಾಹಿಸುವುದು.
ತಂಬಾಕು ಸೇವನೆ ಪ್ರಚೋದಿಸುವ ದೃಶ್ಯಗಳು ಮತ್ತು ಜಾಹೀರಾತುಗಳಿಗೆ ತಡೆಯೊಡ್ಡುವುದು.
ತಂಬಾಕಿನಿಂದಾಗುವ ದುಷ್ಪರಿಣಾಮಗಳನ್ನು ಬಿಂಬಿಸುವ ಪೋಸ್ಟರ್/ಬ್ಯಾನರ್‌ಗಳನ್ನು ಪ್ರದರ್ಶಿಸುವುದು.
ಕಾನೂನುಗಳಿಗೆ ಸೂಕ್ತ ಮಾರ್ಪಾಡು ಮಾಡುವ ಮೂಲಕ ತಂಬಾಕು ಉತ್ಪನ್ನಗಳಿಗೆ ಕಡಿವಾಣ  ಹಾಕುವುದು.
ತಂಬಾಕು ವಿರೋಧಿ ಹೋರಾಟ ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯಿಂದ ಆಗುವ ಕೆಲಸವಲ್ಲ. ಇದಕ್ಕೆ ಸಾಮೂಹಿಕ ಬೆಂಬಲ ಅಗತ್ಯ. ಇದಕ್ಕೆ ಪೂರಕವಾಗಿ ಸರ್ಕಾರದ ನೀತಿ ನಿಯಮಗಳು ಬದಲಾಗಬೇಕು. ಪ್ರತಿಯೊಬ್ಬರೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು. ಬನ್ನಿ! ಎಲ್ಲರೂ ಕೈ ಜೋಡಿಸಿ ‘ತಂಬಾಕು ವಿರೋಧಿ ಶಿಕ್ಷಣ’ವನ್ನು ಬಲಪಡಿಸೋಣ.
ಆರ್.ಬಿ.ಗುರುಬಸವರಾಜ ಹೊಳಗುಂದಿ