December 11, 2021

ಜೀವವೈವಿಧ್ಯ ಉಳಿಸೋಣ - ಸ್ವಾಯತ್ತತೆ ಮೆರೆಯೋಣ

  ಮಾರ್ಚ-2019ರ ಜೀವನ ಶಿಕ್ಷಣ ಮಾಸಿಕದಲ್ಲಿ ಪ್ರಕಟವಾದ ನನ್ನ ಬರಹ. 

ಜೀವವೈವಿಧ್ಯ ಉಳಿಸೋಣ - ಸ್ವಾಯತ್ತತೆ ಮೆರೆಯೋಣ


ಭಾರತವು ಜೈವಿಕ ಮತ್ತು ಸಾಂಸ್ಕೃತಿಕ ವೈವಿಧ್ಯದ ದೇಶವಾಗಿದೆ. ವಿಶ್ವದ 10 ಮಹಾ ಜೈವಿಕ ಸಂಪತ್ತಿನ ದೇಶಗಳಲ್ಲಿ ಒಂದಾಗಿದೆ. ಕೃಷಿ, ಮೀನುಗಾರಿಕೆಯಂತಹ ಚಟುವಟಿಕೆಗಳ ಪಾರಂಪರಿಕ ಜ್ಞಾನಸಂಪತ್ತನ್ನು ಹೊಂದಿರುವ ಅತಿಹೆಚ್ಚು ಜನಸಮುದಾಯಗಳು ಮತ್ತು ಚಲನಶೀಲ ಗುಂಪುಗಳು ಭಾರತ ದೇಶದಲ್ಲಿವೆ. ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳ ಅಭಿವೃದ್ಧಿಯಿಂದ ಜೈವಿಕ ವೈವಿಧ್ಯ ಮತ್ತು ಪಾರಂಪರಿಕ ಜ್ಞಾನವೂ ಸೇರಿದಂತೆ ಜೀವವೈವಿಧ್ಯಕ್ಕೆ ಸಂಬAಧಿತ ಜ್ಞಾನದ ಮೌಲ್ಯವರ್ಧನೆಯಾಗಿದೆ. ಹಿಂದಿಗಿAತಲೂ ಇಂದು ಜೈವಿಕವೈವಿಧ್ಯ, ಜೈವಿಕ ಸಂಪನ್ಮೂಲಗಳು, ಸಂಬAಧಿಸಿದ ಪಾರಂಪರಿಕ ಜ್ಞಾನದ ಬೆಳವಣಿಗೆಯ ಮಹತ್ವವು ನಿಚ್ಛಳವಾಗಿ ಮನವರಿಕೆಯಾಗಿದೆ. ಜೈವಿಕವೈವಿಧ್ಯದ ಸಂರಕ್ಷಣೆ, ಸುಸ್ಥಿರ ಬಳಕೆಯ ದಾಖಲಾತಿಯು ಜೀವವೈವಿಧ್ಯ ದಾಖಲಾತಿಯ ಮೊದಲ ಹೆಜ್ಜೆಯಾಗಿದೆ. 

ಜನತಾ ಜೀವವೈವಿಧ್ಯ ನಿರ್ವಹಣಾ ಸಮಿತಿ : ಇದು ಸ್ಥಳೀಯ ಸಂಸ್ಥೆಗಳ ಅಂದರೆ ಗ್ರಾಮ ಪಂಚಾಯ್ತಿ/ಸ್ಥಳೀಯ ಸರಕಾರಗಳ ವ್ಯಾಪ್ತಿಯಲ್ಲಿನ ಜೀವ ಪರಂಪರೆಯನ್ನು ದಾಖಲಿಸುವ ಮತ್ತು ಅವುಗಳನ್ನು ಸಂರಕ್ಷಿಸುವ ಸಮಿತಿಯಾಗಿದೆ. ಆ ಪ್ರದೇಶದ ಗಿಡ, ಮರ, ಪ್ರಾಣಿ, ಪಕ್ಷಿ ಒಟ್ಟಾರೆ ಜೀವಸಂಕುಲದ ಮಾಹಿತಿಯನ್ನು ದಾಖಲಿಸುವ ಏಕೈಕ ಅಧಿಕೃತ ಸಮಿತಿಯಾಗಿದೆ. 

ಜನತಾ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಮುಖ್ಯ ಕಾರ್ಯವೆಂದರೆ, ಜನರ ಜೀವವೈವಿಧ್ಯತೆ ದಾಖಲೆಗಳನ್ನು ತಯಾರಿಸುವದು. ಜನತಾ ಜೀವವೈವಿಧ್ಯ ದಾಖಲಾತಿಯು ಜೈವಿಕ ಸಂಪನ್ಮೂಲಗಳು ಮತ್ತು ಅವುಗಳಿಗೆ ಸಂಬAಧಿಸಿದ ಸಾಂಪ್ರದಾಯಿಕ ಜ್ಞಾನಗಳನ್ನು ತಿಳಿಯುವ ವಿಸ್ತಾರವಾದ ಸರಳ ದಾಖಲಾತಿಯಾಗಿದೆ. ಈ ಜೀವವೈವಿಧ್ಯ ದಾಖಲಾತಿಗಳ ತಯಾರಿಕೆಯು ಮಹತ್ತರ ಕಾರ್ಯವಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸ್ಥಳೀಯ ಜ್ಞಾನ ಹೊಂದಿರುವ ವ್ಯಕ್ತಿಗಳು ಪಾಲ್ಗೊಂಡಿರುತ್ತಾರೆ.

ಯುವಕರಿಗೆ ಆಗುವ ಪ್ರಯೋಜನಗಳು:

ಜನತಾ ಜೀವವೈವಿಧ್ಯ ದಾಖಲಾತಿಯಲ್ಲಿ ಯುವಕರು, ವಿದ್ಯಾರ್ಥಿಗಳು ಪಾಲ್ಗೊಳ್ಳುವುದಿರಿಂದ ಅನೇಕ ಪ್ರಯೋಜನಗಳಿವೆ. ಅವುಗಳನ್ನು ಕೆಳಗಿನಂತೆ ಪಟ್ಟಿ ಮಾಡಲಾಗಿದೆ.

ಸ್ಥಳೀಯ ಸಂಪನ್ಮೂಲದ ಜ್ಞಾನ ದೊರೆಯುತ್ತದೆ.

ಸ್ಥಳೀಯ ಸಸ್ಯ, ಪ್ರಾಣಿ, ಕೀಟ ಹಾಗೂ ಪಕ್ಷಿ ಪ್ರಪಂಚದ ಅರಿವು ಮೂಡುತ್ತದೆ. 

ಪ್ರತೀ ಪ್ರಾಣಿ. ಪಕ್ಷಿ, ಸಸ್ಯಗಳ ವೈಜ್ಞಾನಿಕ ಹೆಸರು ಹಾಗೂ ಅವುಗಳ ಮೂಲದ ಬಗ್ಗೆ ಜ್ಞಾನ ದೊರೆಯುತ್ತದೆ.

ಪರಿಸರ ವ್ಯವಸ್ಥೆಯ ರಚನೆ, ಕಾರ್ಯ ಮತ್ತು ಪರಸ್ಪರ ಕ್ರಿಯೆಗಳ ಕುರಿತ ಸಂಶೋಧನೆ ಕೈಗೊಳ್ಳಲು ಸಹಕಾರಿ.

ಸ್ಥಳೀಯ ಸಂರಕ್ಷಣಾ ಯೋಜನೆಗಳನ್ನು ಅಭಿವೃದ್ದಿ ಪಡಿಸುವ ಮೂಲಕ ಮುಂದಿನ ಜೀವನಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲು ಸಹಕಾರಿ.

ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸುವ ಹೊಸ ಆಲೋಚನೆಗಳ ಸೃಷ್ಟಿ.

ಔಪಚಾರಿಕ ಶಿಕ್ಷಣದ ಜೊತೆಗೆ ಅನೌಪಚಾರಿಕ ಶಿಕ್ಷಣ ವ್ಯವಸ್ಥೆಯನ್ನು ತಳುಕು ಹಾಕುವುದು.

ಸ್ಥಳೀಯ ಔಷಧ ಸಸ್ಯಗಳನ್ನು ಬಳಸಿ ಔಷದೋಪಚಾರ ನೀಡುವ ನಾಟಿ ವೈದ್ಯಜ್ಞಾನ ಬೆಳೆಸಿಕೊಳ್ಳಲು ಸಹಕಾರಿ.

ಸ್ಥಳೀಯ ವಿಶೇಷ ಪ್ರಾಣಿ, ಪಕ್ಷಿ ಹಾಗೂ ಸಸ್ಯಗಳ ಸಂರಕ್ಷಣೆಯ ಅರಿವು ಮೂಡುತ್ತದೆ.

ಸ್ಥಳೀಯ ಸರಕಾರಕ್ಕೆ ಪ್ರಜ್ಞಾವಂತಿಕೆಯ ಕೊಡುಗೆ ನೀಡಿದ ಧನ್ಯತೆ ದೊರೆಯುತ್ತದೆ.

ಸ್ಥಳೀಯ ಸರಕಾರದ ಆಡಳಿತದಲ್ಲಿ ಭಾಗಿಯಾದ ಸಂತಸ ದೊರೆಯುತ್ತದೆ. 

ದಾಖಲಾತಿ ಸಮಯದಲ್ಲಿ ವಿವಧ ಜ್ಞಾನಶೀಲ ವ್ಯಕ್ತಿಗಳ ಪರಿಚಯವಾಗುತ್ತದೆ. ಇದು ಮುಂದಿನ ಜೀವನಕ್ಕೆ ಸಹಕಾರಿ.

ಮಹತ್ತರ ದಾಖಲಾತಿಯಲ್ಲಿ ಭಾಗವಹಿಸುವುದರಿಂದ ಸ್ಥಳೀಯ ಜನರಿಂದ ಪ್ರಶಂಶೆ ದೊರೆಯುತ್ತದೆ.

ದಾಖಲಾತಿಯ ಅವಶ್ಯಕತೆ : ಸ್ಥಳಿಯ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಸ್ಥಳೀಯ ಜ್ಞಾನ/ಸಂಪನ್ಮೂಲಕ್ಕೆ ಸ್ವಾನುಭೂತ(ಪೇಟೆಂಟ್) ಪಡೆಯುವುದು. ಇತ್ತೀಚಿನ ವರ್ಷಗಳಲ್ಲಿ ಅಮೇರಿಕಾ, ಜಪಾನ, ಯುರೋಪ ದೇಶಗಳು ಭಾರತೀಯ ಮೂಲದ ಬಾಸುಮತಿ, ಬೇವು, ಅರಿಷಿಣ, ನೆಲ್ಲಿ, ಮತ್ತು ಸಾಸಿವೆಗಳನ್ನು ಪೇಟೆಂಟ್ ಮಾಡಿಕೊಂಡಿವೆ. ಇಂತಹ ಸ್ಥಳೀಯ ಸಂಪನ್ಮೂಲಗಳನ್ನು ಸಂರಕ್ಷಿಸುವ, ಅದು ದೇಶಾಂತರಗೊಳ್ಳದAತೆ ಹಾಗೂ ಅದರ ಲಾಭಾಂಶ ಬೇರೆಯವರ ಪಾಲಾಗದಂತೆ ತಡೆಯುವುದು ಇಂದಿನ ಅಗತ್ಯವಾಗಿದೆ.

ಜೀವವೈವಿಧ್ಯ ದಾಖಲಾತಿಯ ಉದ್ದೇಶಗಳು :

ಜೈವಿಕ ಸಂಪನ್ಮೂಲಗಳ ಕಳ್ಳಸಾಗಣೆ ತಡೆಯುವುದು.

ಸ್ಥಳೀಯ ಜೀವವೈವಿಧ್ಯತೆಯಿಂದ ಬಂದ ಲಾಭದಲ್ಲಿ ಸಮಪಾಲು ಪಡೆಯುವ ಹಕ್ಕು ಒದಗಿಸುವುದು.

ಜನಪರ ಯೋಜನೆಗಳನ್ನು ಜೀವವೈವಿಧ್ಯ ದಾಖಲಾತಿ ಅಡಿಯಲ್ಲಿ ತರುವುದು.

ಸ್ಥಳೀಯ ಸಂಪನ್ಮೂಲಗಳ ಜ್ಞಾನ ಎಲ್ಲರಿಗೂ, ಅದರಲ್ಲೂ ವಿಶೇಷವಾಗಿ ಯುವಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ದೊರೆಯುವಂತೆ ಮಾಡುವುದು.

ಸ್ಥಳೀಯ ಜೀವವೈವಿಧ್ಯತೆ ಆಧರಿಸಿ ಸಂಶೋಧನೆಗಳನ್ನು ಕೈಗೊಳ್ಳುವುದು.

ದಾಖಲಿಸುವ ಅಂಶಗಳು : ಆ ಪ್ರದೇಶ ವ್ಯಾಪ್ತಿಯಲ್ಲಿನ ಸಸ್ಯ, ಪ್ರಾಣಿ ಹಾಗೂ ಪಕ್ಷಿಸಂಕುಲಗಳು, ಔಷಧಿಯ ಸಸ್ಯಗಳು, ಆಹಾರ ಬೆಳೆಗಳು, ವಾಣಿಜ್ಯ ಬೆಳೆಗಳು, ತರಕಾರಿಗಳು, ಹಣ್ಣುಗಳು, ಹೂಗಳು, ಮಸಾಲೆ ಪದಾರ್ಥಗಳು, ಹುಲ್ಲು ಸಸ್ಯಗಳು, ಅಲಂಕಾರಿಕ ಸಸ್ಯಗಳು, ಬೇಲಿ ಸಸ್ಯಗಳು, ಮಣ್ಣಿನ ವಿಧಗಳು, ಸಾಕು ಪ್ರಾಣಿಗಳು, ಕಾಡು ಪ್ರಾಣಿಗಳು, ಕೀಟಗಳು, ಚಿಟ್ಟೆಗಳ ಪ್ರಾದೇಶಿಕ ಹೆಸರುಗಳು ಮತ್ತು ಅವುಗಳ ವೈಜ್ಞಾನಿಕ ಹೆಸರುಗಳು, ವಿವಿಧ ಜನ ಸಮುದಾಯಗಳು(ವೃತ್ತಿ ಪರರು), ವಿವಿಧ ಭೂದೃಶ್ಯಗಳು(ಗುಡ್ಡ, ಬೆಟ್ಟ, ಸಮತಟ್ಟು, ಅರಣ್ಯ, ಕೆರೆ, ಹಳ್ಳ, ಬಾವಿ, ಚೆಕ್ ಡ್ಯಾಂ, ನದಿ), ಅಲ್ಲಿನ ಜನಸಂಖ್ಯೆ, ಸಾಕ್ಷರತೆಯ ಮಟ್ಟ, ಮೂಲಭೂತ ಸೌಲಭ್ಯಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ವ್ಯವಸ್ಥೆ, ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ, ಜನರ ವಾರ್ಷಿಕ ತಲಾ ಆದಾಯ  ಹೀಗೆ ಆ ಪ್ರದೇಶದ ಒಟ್ಟಾರೆ ಮಾಹಿತಿಯನ್ನು ದಾಖಲಿಸಲಾಗುತ್ತದೆ.

ದಾಖಲಿಸುವಾಗ ಯುವಕರು ಗಮನಿಸಬೇಕಾದ ಅಂಶಗಳು :

ಜೈವಿಕವೈವಿಧ್ಯ ದಾಖಲಾತಿಗೆ ಸಮಯದಲ್ಲಿ ಯುವಕರು ಈ ಕೆಳಕಂಡ ವಿಷಯಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಳ್ಳಬೇಕು.

ಗ್ರಾಮದ ವಿವಿಧ ರೀತಿಯ ಜನತೆಯ ಸಹಭಾಗಿತ್ವ ಪದ್ಧತಿಯಲ್ಲಿ ದಾಖಲಾತಿಯನ್ನು ಕೈಗೊಳ್ಳಬೇಕು.

ಗಂಡಸರ/ಹೆAಗಸರ ಜ್ಞಾನ ಮತ್ತು ದೃಷ್ಠಿ ಕೋನಗಳನ್ನು ದಾಖಲಿಸಬೇಕು.

ಜನತೆಯಿಂದ ದೊರೆತ ಮಾಹಿತಿಯ ಆಧಾರದ ಮೇಲೆ ದಾಖಲಾತಿಯನ್ನು ಮಾಡುವುದಕ್ಕಿಂತ ಮುಂಚೆ, ತಜ್ಞ ಸಲಹಾ ಗುಂಪಿನಿAದ ಪರಿಶೀಲನೆ, ವಿಂಗಡಣೆ ಮತ್ತು ವಿಚಾರಣೆಗೊಳಪಡಿಸಬೇಕು.

ಜನತಾ ಜೀವವೈವಿಧ್ಯದಾಖಲಾತಿಯು ಬಹು ಮುಖ್ಯ ಮೂಲವಾದ ಕಾನೂನಾತ್ಮಕ ಪ್ರಥಮ ಪ್ರಾಶಸ್ತö್ಯದ ಜ್ಞಾನವಾಗಿರುವುದರಿಂದ ಬಹಳ ಎಚ್ಚರಿಕೆಯಿಂದ ದಾಖಲಾತಿ ಮಾಡಬೇಕು.

ಯಾವುದೇ ಪ್ರಾಣಿ, ಪಕ್ಷಿ, ಸಸ್ಯ, ಕೀಟಗಳು ದಾಖಲಾತಿಯಿಮದ ಹೊರಗುಳಿಯದಂತೆ ಜಾಗ್ರತೆ ವಹಿಸುವುದು.

ಜೈವಿಕವೈವಿಧ್ಯ ದಾಖಲಾತಿಯು, ಶಾಲಾ-ಕಾಲೇಜುಗಳಲ್ಲಿ ಪರಿಸರ ಅಧ್ಯಯನ ಕುರಿತು ಬೋಧಿಸಲು ಸೂಕ್ತ ಮತ್ತು ಉಪಯುಕ್ತ ಆಧಾರವಾಗಿದೆ. ಆದ್ದರಿಂದ ಪಾರದರ್ಶಕ ದಾಖಲಾತಿ ಆಗುವಂತೆ ಎಚ್ಚರಿಕೆ ವಹಿಸುವುದು. 

ಜೈವಿಕವೈವಿಧ್ಯ ದಾಖಲಾತಿಗೆ ಪೂರಕ ಮತ್ತು ಹೊಸ ಮಾಹಿತಿಗಳು ಲಭ್ಯವಾದಾಗ ಮತ್ತು ನಿಯಮಿತ ಅವಧಿಯಲ್ಲಿ ದಾಖಲಾತಿಯನ್ನು ಖಾತರಿಗೊಳಿಸುವುದು.

ಯುವಕರ ಪಾತ್ರ :

ಜೀವವೈವಿಧ್ಯ ದಾಖಲಾತಿಯಲ್ಲಿ ಯುವಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಏಕೆಂದರೆ ಸ್ಥಳೀಯ ಸಂಪನ್ಮೂಲ ಸಂರಕ್ಷಣೆ ಯುವಕರ ಹೊಣೆಯಾಗಿದೆ. ಇಂದಿನ ಯುವಕರೇ ನಾಳಿನ ಭವ್ಯ ಭಾರತದ ಪ್ರಜೆಗಳಾಗಿರುವುದರಿಂದ ಅವರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಸ್ಥಳೀಯ ಜೀವವೈವಿಧ್ಯತೆಯ ಬಗ್ಗೆ ಮಾಹಿತಿ ತಿಳಿಯುವದರಿಂದ ಜ್ಞಾನವಲಯ ವಿಸ್ತರಿಸುತ್ತದೆ. ಸಕಾಲದಲ್ಲಿ ಆ ಜ್ಞಾವನ್ನು ವಿಸ್ತರಿಸುವ ಹಾಗೂ ಅದನ್ನು ಬಳಸುವ ಅವಕಾಶಗಳು ಹೆಚ್ಚುತ್ತವೆ. ಜೀವವೈವಿಧ್ಯ ದಾಖಲಾತಿಯಲ್ಲಿ ಯುವಕರು ಕೆಳಗಿನ ಜವಾಬ್ದಾರಿಗಳನ್ನು ವಹಿಸಿದರೆ ಅಮೂಲ್ಯ ಮಾಹಿತಿಯುಳ್ಳ ಒಂದು ಉತ್ತಮ ಮಾರ್ಗದರ್ಶಿ ಕೈಪಿಡಿ ಹೊರತರಬಹುದು.

ಪಂಚಾಯ್ತಿ ಮಟ್ಟದಲ್ಲಿ ನಡೆಯುವ ಜೀವವೈವಿಧ್ಯ ದಾಖಲೀಕರಣಕ್ಕೆ ಅಗತ್ಯ ಸಹಾಯ ನೀಡುವುದು.

ಸ್ವಯಂ ಸೇವಕರಾಗಿ ದಾಖಲೀಕರಣದಲ್ಲಿ ಭಾಗವಹಿಸುವುದು.

ವಸ್ತುನಿಷ್ಠ ದಾಖಲೀಕರಣಕ್ಕೆ ಒತ್ತು ನೀಡುವುದು.

ಸ್ಥಳೀಯ ವಿಶೇಷ ಸಂಪನ್ಮೂಲಗಳನ್ನು ಗುರುತಿಸುವುದು.

ಸ್ಥಳೀಯ ವಿಶೇಷ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳ ಬಗ್ಗೆ ಅಧ್ಯಯನ/ಸಂಶೋಧನೆ ಕೈಗೊಳ್ಳುವುದು.

ಸ್ಥಳೀಯ ಸಂಪನ್ಮೂಲಗಳ ಲಾಭಾಂಶದ ಸಮಾನ ಹಂಚಿಕೆಯ ಬಗ್ಗೆ ಗಮನ ಹರಿಸುವುದು.

ಸಂಪನ್ಮೂಲವು ಸ್ಥಳೀಯ ಮೂಲವಾಗಿದ್ದರೆ ಪೇಟೆಂಟ್ ಪಡೆಯುವುದು.

ಸಂಪನ್ಮೂಲದ ಸಂರಕ್ಷಣೆ ಮತ್ತು ಮುಂದಿನ ಪೀಳಿಗೆಗೆ ಅದರ ಲಾಭ ದೊರೆಯುವಂತೆ ಮಾಡುವುದು.

ಸಂಪನ್ಮೂಲದ ಮಾಹಿತಿಯನ್ನು ಪರಸ್ಪರ ವರ್ಗಾವಣೆ/ಪ್ರಚಾರ ಮಾಡುವುದು.






No comments:

Post a Comment