December 11, 2021

ಕೌಶಲ್ಯವಂತರಿಗೆ ಶಿಲ್ಪಕಲಾ ಕೋರ್ಸ್ ಕೋರ್ಸ್ ಉಚಿತ, ಜಾಬ್ ಖಚಿತ

 ದಿನಾಂಕ 24-7-2019ರ ವಿಜಯವಾಣಿಯ ಮಸ್ತ್ ಪುರವಣಿಯಲ್ಲಿ ಪ್ರಕಟವಾದ ನನ್ನ ಬರಹ.


ಕೌಶಲ್ಯವಂತರಿಗೆ ಶಿಲ್ಪಕಲಾ ಕೋರ್ಸ್

ಕೋರ್ಸ್ ಉಚಿತ, ಜಾಬ್ ಖಚಿತ



ಉತ್ತಮ ನೌಕರಿ ಗಳಿಸುವ ಹಾಗೂ ಪ್ರತಿ ತಿಂಗಳೂ ನಿಗದಿತ ವೇತನ ಪಡೆಯುವ ಆಸೆ ಪ್ರತಿಯೊಬ್ಬ ವಿದ್ಯಾವಂತರಿಗೂ ಇರುತ್ತದೆ. ಆದರೆ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಎಲ್ಲರೂ ನೂರಕ್ಕೆ ನೂರು ಅಂಕ ಗಳಿಸಲು ಸಾಧ್ಯವಿಲ್ಲ. ಏಕೆಂದರೆ ಪ್ರತಿಯೊಬ್ಬರ ಕಲಿಕಾ ವಿಧಾನ ಭಿನ್ನ ಭಿನ್ನ. ಕಡಿಮೆ ಅಂಕ ಬಂದವರೆಲ್ಲ ದಡ್ಡರಲ್ಲ ಎಂಬುದಕ್ಕೆ ನಮ್ಮ ನಿತ್ಯ ಜೀವನದಲ್ಲಿ ಅನೇಕರು ಸಾಕ್ಷಿಯಾಗುತ್ತಾರೆ. ಒಬ್ಬ ಆಟೋಮೋಬೈಲ್ ಇಂಜಿನಿಯರ್ ತನ್ನ ಬೈಕನ್ನು ಅನಕ್ಷರಸ್ಥ/ಅರೆ-ಅಕ್ಷರಸ್ಥ ಮೆಕ್ಯಾನಿಕ್‌ನ ಬಳಿ ಕೊಟ್ಟು ರಿಪೇರಿ ಮಾಡಿಸಿಕೊಳ್ಳುತ್ತಾನೆ. ಇದು ತಾತ್ವಿಕ ವಿದ್ಯೆಗೂ ಮತ್ತು ಪ್ರಾಯೋಗಿಕ ವಿದ್ಯೆಗೂ ಇರುವ ವ್ಯತ್ಯಾಸ. ಭಾರತದಂತಹ ರಾಷ್ಟçದಲ್ಲಿ ಎಲ್ಲರಿಗೂ ನೌಕರಿ ಸಿಗಲು ಸಾಧ್ಯವಿಲ್ಲ. ಹಾಗಾಗಿ ಜೀವನ ನಿರ್ವಹಣೆಗೆ ಕೌಶಲ್ಯಾಧಾರಿತ ಜ್ಞಾನ ಗಳಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಕೌಶಲ್ಯ ಗಳಿಸಿಕೊಳ್ಳಲು ಇಂದು ಹಲವಾರು ಅವಕಾಶಗಳಿವೆ.

ನಿಗದಿತ ಶುಲ್ಕ ಸ್ವೀಕರಿಸಿ ಕೌಶಲ್ಯ ಕಲಿಸಲು ಅನೇಕ ಕಾಲೇಜು/ಶಿಕ್ಷಣ ಸಂಸ್ಥೆಗಳಿವೆ. ಆದರೆ ಇಲ್ಲೊಂದು ಕೋರ್ಸ್ ಉಚಿತ ಕೌಶಲ್ಯ ಕಲಿಸುವ ಜೊತೆಗೆ ಉದ್ಯೋಗ ಭರವಸೆಯನ್ನೂ ನೀಡುತ್ತದೆ. ಹಾಗಾದರೆ ಆ ಕೋರ್ಸ್ ಯಾವುದು? ಉದ್ಯೋಗ ಭರವಸೆ ಏನು? ಇತ್ಯಾದಿ ಕುರಿತ ಮಾಹಿತಿಗಾಗಿ ಮುಂದೆ ಓದಿ. 

ಚಿತ್ರಕಲಾ ಮತ್ತು ಶಿಲ್ಪಕಲಾ ತರಬೇತಿ : ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ಎಲ್ಲರಿಗೂ ಗೊತ್ತು. ಅಲ್ಲಿನ ಶಿಲ್ಪಗಳು ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತವೆ. ಸಿಮೆಂಟ್ ಶಿಲ್ಪಗಳ ರಚನೆ ಮತ್ತು ವರ್ಣಲೇಪನ ಎಲ್ಲರಿಗೂ ತುಂಬಾ ಇಷ್ಟವಾಗುತ್ತವೆ. ಅಂತಹ ಅತ್ಯಾಕರ್ಷಕ ಕಲೆಯನ್ನು ಕಲಿಸುವುದೇ ಚಿತ್ರಕಲಾ ಮತ್ತು ಶಿಲ್ಪಕಲಾ ತರಬೇತಿ. ಹಾವೇರಿ ಜಿಲ್ಲೆ ಗೊಟಗೋಡಿಯ ಶಿಲ್ಪಕಲಾ ಕುಟೀರ ಸಂಸ್ಥೆಯು ಕಳೆದ 18 ವರ್ಷಗಳಿಂದ ಇಂತದ್ದೊAದು ತರಬೇತಿ ನೀಡುತ್ತಿದೆ. ಈಗಾಗಲೇ 3000 ಹೆಚ್ಚು ಅಭ್ಯರ್ಥಿಗಳು ತರಬೇತಿ ಪಡೆದು ದೇಶದ ವಿವಿಧ ಭಾಗಗಳಲ್ಲಿ ಉದ್ಯೋಗ ನಡೆಸುತ್ತಿದ್ದಾರೆ.  

ಇದು 5 ವರ್ಷಗಳ ಕೋರ್ಸ್ ಆಗಿದ್ದು, ಚಿತ್ರಕಲೆ ಹಾಗೂ ಶಿಲ್ಪಕಲೆಯ ಮೂಲಾಂಶಗಳು, ಚಿತ್ರ/ಶಿಲ್ಪ ರಚನೆಯ ತಂತ್ರಗಾರಿಕೆ, ಶಿಲ್ಪ ಹಾಗೂ ವರ್ಣ ಸಂಯೋಜನೆ, ಆಧುನಿಕ ಕಾಲಘಟ್ಟಕ್ಕೆ ತಕ್ಕಂತೆ ಶಿಲ್ಪ ರಚನೆಯ ವಿನ್ಯಾಸಗಾರಿಕೆ, ಚಿತ್ರ/ಶಿಲ್ಪಗಳನ್ನು ನಾಜೂಕುಗೊಳಿಸುವಿಕೆ, ಮುಂತಾದ ಕೌಶಲ್ಯಗಳನ್ನು ಪ್ರಾಯೋಗಿಕ ಅನುಭವದ ಮೂಲಕ ಕಲಿಸಲಾಗುತ್ತದೆ. 

ಅರ್ಹತೆ ಮತ್ತು ವಯೋಮಿತಿ: ಕನಿಷ್ಠ 10 ನೇ ತರಗತಿ, ಗರಿಷ್ಠ ಪಿ.ಯು.ಸಿ. ಇಲ್ಲಿ ಅನುತ್ತೀರ್ಣರಾದವರಿಗೂ ಕಲಿಯಲು ಅವಕಾಶ ಇದೆ. 16 ರಿಂದ 20 ವರ್ಷದೊಳಗಿನವರಿಗೆ ಮಾತ್ರ ಕೋರ್ಸ್ಗೆ ಸೇರಲು ಅವಕಾಶ. ನಿಗದಿತ ಸೀಟುಗಳಿಗೆ ಮಾತ್ರ ಲಭ್ಯ ಇರುವುದರಿಂದ ಮೊದಲು ಬಂದ ಆಸಕ್ತರಿಗೆ ಮಾತ್ರ ಅವಕಾಶ.

ಉದ್ದೇಶಗಳು : 

ಸ್ಕಿಲ್ ಇಂಡಿಯಾಕ್ಕೆ ಪೂರಕವಾಗಿ ಕೌಶಲ್ಯವಂತ ಯುವಕರ ನಿರ್ಮಾಣ.

ನಿರುದ್ಯೋಗ ನಿವಾರಣೆಗೆ ಸೂಕ್ತ ತಂತ್ರಗಾರಿಕೆ.

ಸ್ವಾವಲAಬಿ ಯುವಕರನ್ನು ರೂಪಿಸುವುದು.

ಕಲಿಕಾ ಆಸಕ್ತಿಗೆ ಅನುಗುಣವಾದ ತರಬೇತಿ.

ಉತ್ತಮ ಕೌಶಲ್ಯಯುಕ್ತ ತಂಡ ರಚನೆ.

ಕಲಿಯುತ್ತಾ ಗಳಿಸು : ಇಲ್ಲಿ ಕೇವಲ ಕಲಿಕೆ ಇಲ್ಲ. ಕಲಿಕೆಯ ಜೊತೆಗೆ ಪ್ರತಿ ತಿಂಗಳು ಹಣ ಗಳಿಕೆಯೂ ಇದೆ. ಅಂದರೆ ಪ್ರತಿ ತಿಂಗಳು ಸ್ಟೆöÊಫಂಡರಿ ಇದೆ. ಮೊದಲನೆ ವರ್ಷ ಪ್ರತಿ ತಿಂಗಳು 2000 ರೂ. ಇದ್ದರೆ ಐದನೆ ವರ್ಷ ಪ್ರತಿ ತಿಂಗಳು 6000 ರೂ. ಇದೆ. ಹಾಗಾಗಿ ಈ ಕೋರ್ಸ್ ಯಾರಿಗೂ ಹೊರೆ ಎನಿಸುವುದಿಲ್ಲ.

ಉಚಿತ ಕೋರ್ಸ್ : ಕೋರ್ಸ್ಗೆ ಯಾವುದೇ ಶುಲ್ಕವಿಲ್ಲ. ಸಂಪೂರ್ಣ ಉಚಿತ. ಜೊತೆಗೆ ಊಟ ಮತ್ತು ವಸತಿ ವ್ಯವಸ್ಥೆಗಾಗಿ ಸಂಸ್ಥೆಯು ಪ್ರತಿ ತಿಂಗಳು 2500 ರೂ.ಗಳನ್ನು(ಸ್ಟೆöÊಫಂಡರಿ ಹೊರತುಪಡಿಸಿ) ಹೆಚ್ಚುವರಿಯಾಗಿ ನೀಡುತ್ತದೆ.

ಖಚಿತ ಉದ್ಯೋಗ : ಕೋರ್ಸ್ ಮುಗಿದ ನಂತರ ಅಲ್ಲಿಯೇ ಉದ್ಯೋಗಾವಕಾಶದ ಅವಕಾಶ ಇರುತ್ತದೆ. ಕೌಶಲ್ಯಕ್ಕೆ ತಕ್ಕಂತೆ ಪ್ರತಿತಿಂಗಳು 25,000 ದಿಂದ 1,00,000 ರೂ.ಗಳವರೆಗೆ ವೇತನ ಪಡೆಯಬಹುದು. ಉದ್ಯೋಗದ ವೇಳೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ. ಸ್ವತಂತ್ರ ಉದ್ಯೋಗ ಮಾಡಲು ಬಯಸಿದಲ್ಲಿ ಸಂಸ್ಥೆಯು ಸೂಕ್ತ ಮಾರ್ಗದರ್ಶನ ಮತ್ತು ಸಹಕಾರ ನೀಡುತ್ತದೆ. ವಿವರಗಳಿಗೆ 9620270920 ಅಥವಾ 9739257237 ಸಂಖ್ಯೆಗಳನ್ನು ಸಂಪರ್ಕಿಸಿರಿ.

ಆರ್.ಬಿ.ಗುರುಬಸವರಾಜ

ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು

ಹೊಳಗುಂದಿ(ಪೊ) ಹಡಗಲಿ(ತಾ) ಬಳ್ಳಾರಿ(ಜಿ)

9902992905



No comments:

Post a Comment