December 11, 2021

ಯೋಚನೆ ಬಿಡಿ, ಯೋಜನೆ ಮಾಡಿಸಿ

  ಆಗಸ್ಟ್ 2019ರ ಶಿಕ್ಷಣವಾರ್ತೆಯಲ್ಲಿ ಪ್ರಕಟವಾಧ ನನ್ನ ಬರಹ.

ಯೋಚನೆ ಬಿಡಿ, ಯೋಜನೆ ಮಾಡಿಸಿ




ಆರನೇ ತರಗತಿ ಓದುತ್ತಿರುವ ಫಾತೀಮಾಗೆ ವಿಜ್ಞಾನ ಶಿಕ್ಷಕರು ಏಕದಳ ಮತ್ತು ದ್ವಿದಳ ಧಾನ್ಯಗಳ ಚಿತ್ರಪಟ ತಯಾರಿಸಿಕೊಂಡು ಬರಲು ತಿಳಿಸಿದರು. ಗ್ರಾಮೀಣ ಪ್ರದೇಶದವಳಾದ ಫಾತೀಮಾ ಚಿತ್ರಗಳು ದೊರೆಯದೇ ಪರದಾಡಿದಳು. ಒಂಭತ್ತನೇ ತರಗತಿಯ ಆಕಾಶನಿಗೆ ಕನ್ನಡ ಶಿಕ್ಷಕರು ಜಾನಪದ ಗೀತೆ ಮತ್ತು ಜಾನಪದ ಕಥೆಗಳ ಸಂಗ್ರಹ ಮಾಡಿಕೊಂಡು ಬರಲು ತಿಳಿಸಿದರು. ಪುಸ್ತಕಗಳಿಗಾಗಿ ಎಲ್ಲೆಡೆ ಹುಡುಕಾಡಿದ. ಎಲ್ಲೂ ಸಿಗಲಿಲ್ಲ. ಈ ಬಗ್ಗೆ ಇಬ್ಬರೂ ತಮ್ಮ ತಮ್ಮ ಪಾಲಕರಿಗೆ ಒತ್ತಾಯ ಹೇರತೊಡಗಿದರು. ನಾಲ್ಕಾರು ದಿನಗಳ ನಂತರ ಪಕ್ಕದ ಪೇಟೆಯಿಂದ ಪಾಲಕರು ಅವರಿಗೆ ಬೇಕಾದ ಸಾಮಗ್ರಿಗಳನ್ನು ತಂದು ಕೊಟ್ಟರು. ಆಗ ಇಬ್ಬರೂ ತಮ್ಮ ಯೋಜನಾ ಕಾರ್ಯ ಮುಗಿಸಿದರು.  

ಯೋಜನಾ ಕಾರ್ಯ ಎಂದಕೂಡಲೇ ಬಹುತೇಕ ಪಾಲಕರಿಗೆ ಕಿರಿಕಿರಿ ಎನಿಸುತ್ತದೆ. ಸಂಗ್ರಹಿತ ಯೋಜನಾ ಕಾರ್ಯದಿಂದ ನಮ್ಮ ಮಕ್ಕಳು ಕಲಿಯುವುದೇನು? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಇಂತಹ ಮಾಹಿತಿ ಸಂಗ್ರಹಿತ ಕಲಿಕೆಯು ಶಾಲಾ ಕಲಿಕೆಯ ಒಂದು ಭಾಗವಾಗಿದೆ. ಆದರೆ ಬಹುತೇಕ ಶಾಲೆಗಳಲ್ಲಿ ಇದು ಮೇಲಿನ ಸನ್ನಿವೇಶಗಳಂತೆ ಮಾಹಿತಿಗೆ ಮಾತ್ರ ಸೀಮಿತವಾಗಿದೆ. ಫಾತೀಮಾ ಚಿತ್ರಪಟ ತಯಾರಿಸುವ ಬದಲು ನೈಜ ಧಾನ್ಯಗಳನ್ನೇ ಸಂಗ್ರಹಿಸಿಕೊAಡು ಹೋದರೆ ಅದೊಂದು ಉತ್ತಮ ಕಲಿಕೆಯಾಗುತ್ತಿತ್ತು. ಆಕಾಶ ಪುಸ್ತಕ ನೋಡಿ ಜಾನಪದ ಗೀತೆ ಮತ್ತು ಕಥೆ ಬರೆಯುವ ಬದಲು ತನ್ನ ಸುತ್ತಮುತ್ತಲ ಜನರಿಂದ ಕೇಳಿ ಸಂಗ್ರಹಿಸುವAತಾಗಿದ್ದರೆ ಅದೊಂದು ವಿಭಿನ್ನ ಸಂತಸದಾಯಕ ಕಲಿಕೆ ಆಗುತ್ತಿತ್ತು. ಉಳಿದವರಿಗಿಂತ ಇವರ ಮಾಹಿತಿಯು ನಿಖರ ಹಾಗೂ ಅರ್ಥಪೂರ್ಣವಾಗಿರುತ್ತದೆ. 

ಪ್ರೊಜೆಕ್ಟ್ ಲರ್ನಿಂಗ್ : ಇತ್ತೀಚಿನ ವರ್ಷಗಳಲ್ಲಿ ಯೋಜನಾ ಕಲಿಕೆ(ಪ್ರೊಜೆಕ್ಟ್ ಲರ್ನಿಂಗ್)ಯು ಹೆಚ್ಚು ಪ್ರಚಲಿತದಲ್ಲಿದೆ. ಜೆ.ಎ.ಸ್ಟೀವನ್‌ಸನ್ ಎಂಬುವವರು ಯೋಜನಾ ಆಧಾರಿತ ಕಲಿಕೆಯನ್ನು ರೂಪಿಸಿದರು. 1920ರಲ್ಲಿ  ಪ್ರೋ.ಕಿಲ್‌ಪ್ಯಾಟ್ರಿಕ್ ಅವರು ಜಾರಿಗೆ ತಂದರು. ಹಾಗಾಗಿ ಕಿಲ್‌ಪ್ಯಾಟ್ರಿಕ್ ಅವರನ್ನು ಯೋಜನಾ ಪದ್ದತಿಯ ಜನಕ ಎಂದು ಕರೆಯಲಾಗುತ್ತದೆ.  ಒಂದು ನಿರ್ದಿಷ್ಟ ಪರಿಕಲ್ಪನೆಯನ್ನು ಕಾರ್ಯಾಚರಣೆ ಮೂಲಕ ಕಲಿಯುವುದೇ ಯೋಜನಾ ಕಲಿಕೆಯಾಗಿದೆ. ಈ ವಿಧಾನದಲ್ಲಿ ಕಲಿಕಾರ್ಥಿಯು ನೇರವಾಗಿ ಕಲಿಕೆಯಲ್ಲಿ ಪಾಲ್ಗೊಳ್ಳುತ್ತಾನೆ. ಪ್ರಶ್ನಿಸುವುದನ್ನೇ ಕೇಂದ್ರವನ್ನಾಗಿಟ್ಟುಕೊAಡ ಯೋಜನಾ ಕಲಿಕೆಯು ವಿದ್ಯಾರ್ಥಿ ಕೇಂದ್ರಿತ ಕಲಿಕಾ ಪದ್ದತಿಯಾಗಿದೆ. ತರಗತಿ ಹೊರಗಿನ ಕಲಿಕೆಯನ್ನು ತರಗತಿ ಕೋಣೆಗೆ ಅನ್ವಯಿಸಿಕೊಳ್ಳಲು ಇದು ಪ್ರಭಾವಿಯುತ ಕಲಿಕಾ ವಿಧಾನವಾಗಿದೆ. 

ಕಲಿಕೆ ಮಕ್ಕಳಿಗೆ ಹೊರೆಯಾಗಬಾರದು ಮತ್ತು ಒತ್ತಡವನ್ನು ಹೇರಬಾರದು ಎಂಬುದನ್ನು ಉತ್ತೇಜಿಸಿದ ರಾಷ್ಟಿçÃಯ ಪಠ್ಯಕ್ರಮ ಚೌಕಟ್ಟು(ಎನ್.ಸಿ.ಎಫ್)-2005, ನಾಲ್ಕು ಮಾರ್ಗದರ್ಶಿ ತತ್ವಗಳನ್ನು ಪ್ರಸ್ತುತಪಡಿಸಿತು. ಅದರಲ್ಲಿ ‘ಜ್ಞಾನಕ್ಕೂ ಶಾಲೆಯ ಹೊರ ವಾತಾವರಣಕ್ಕೂ ಸಂಬAಧ ಕಲ್ಪಿಸುವುದು’ ಪ್ರಮುಖವಾದದ್ದು. ಅಂದರೆ ಮಗು ತನ್ನ ಜ್ಞಾನವನ್ನು ತಾನೇ ಕಟ್ಟಿಕೊಳ್ಳುವಂತೆ ಮಾಡಬೇಕು ಎಂಬುದು ಎನ್.ಸಿ.ಎಫ್-2005ರ ಆಶಯವಾಗಿದೆ. ಈ ಆಶಯಕ್ಕೆ ಪೂರಕವಾದ ಯೋಜನಾ ಕಲಿಕೆಯು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ಸಫಲವಾಗಿದೆ. ಮಗು ತನ್ನ ಸುತ್ತಲ ನೈಸರ್ಗಿಕ ಮತ್ತು ಸಾಮಾಜಿಕ ಪರಿಸರವನ್ನು ಅರ್ಥ ಮಾಡಿಕೊಳ್ಳಲು ಪೂರಕ ಚಟುವಟಿಕೆಗಳನ್ನು ರೂಪಿಸುವುದು ಯೋಜನಾ ಕಲಿಕೆಯ ಉದ್ದೇಶವಾಗಿದೆ.

ಹೊರೆಯಿಲ್ಲದ ಕಲಿಕೆ : ಯೋಜನಾ ಕಲಿಕೆಯು ಜ್ಞಾನ, ಆಲೋಚನೆ, ಅನ್ವೇಷಣೆ ಮತ್ತು  ಅನ್ವಯ ಈ ನಾಲ್ಕು ಕಲಿಕಾ ಆಯಾಮಗಳನ್ನು ಒಳಗೊಂಡಿದೆ. ಈ ವಿಧಾನದಲ್ಲಿ ಕಲಿಕೆಯು ನಿಜ ಜೀವನದೊಂದಿಗೆ ಸಾಗುವುದರಿಂದ ಕಲಿಕೆ ಆಸಕ್ತಿಯಿಂದ ಕೂಡಿದ್ದು ಶಾಶ್ವತವಾಗಿರುತ್ತದೆ. ಹಾಗಾಗಿ ಇದು ಹೊರೆಯಿಲ್ಲದ ಕಲಿಕೆಯಾಗಿದೆ.  ಮಕ್ಕಳು ತರಗತಿ ಹೊರಗಿನ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸುವುದರಿಂದ ವಿವಿಧ ಕೌಶಲ್ಯಗಳನ್ನು ಬಳಸಿ ರಚನಾತ್ಮಕ ಕಲಿಕೆಗೆ ಮುಂದಾಗುತ್ತಾರೆ. ರಚನಾವಾದದ ತಿರುಳು ಕೂಡಾ ಇದೇ ಆಗಿದೆ. 

ಯೋಜನಾ ಆಧಾರಿತ ಕಲಿಕೆಯಲ್ಲಿ ಮಕ್ಕಳು ಪರಿಕ್ಪನೆಗಳನ್ನು ತಮ್ಮ ಪರಿಸರದ ಮೂಲಕ ಕಲಿಯುವುದರಿಂದ ಅದನ್ನು ಭವಿಷ್ಯದಲ್ಲಿ ಅನ್ವಯಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಯಾಕೆಂದರೆ ಇಲ್ಲಿ ಅನುಭವದ ಮೂಲಕ ಕೌಶಲ್ಯಾಧಾರಿತ ಜ್ಞಾನವನ್ನು ಮಗು ಕಟ್ಟಿಕೊಳ್ಳುತ್ತದೆ. ತಂಡದಲ್ಲಿ ಕೆಲಸ ಮಾಡುವ, ತಂಡವನ್ನು ಮುನ್ನಡೆಸುವ, ವಿಷಯವನ್ನು ಆಯ್ಕೆ ಮಾಡುವ, ಸ್ವಂತAತ್ರ ತೀರ್ಮಾನಗಳನ್ನು ಕೈಗೊಳ್ಳುವ ಮುಂತಾದ ಕೌಶಲ್ಯಗಳನ್ನು ಕಲಿಯುತ್ತಾರೆ. ಇದು ಸಂಪೂರ್ಣವಾಗಿ ತರಗತಿ ಹೊರಗಿನ ಕಲಿಕೆಯಾಗಿದ್ದು, ಸಂಘಪರತೆ, ಸಹಕಾರಗಳು ಪರಸ್ಪರರಲ್ಲಿ ಮುಡುತ್ತವೆ. ಆದ್ದರಿಂದ ಇದು ಮಾನವೀಯ ಸಂಬAಧಗಳನ್ನು ಗಟ್ಟಿಗೊಳಿಸುವ ಕಲಿಕೆಯೂ ಆಗಿದೆ.

ಯೋಜನಾಧಾರಿತ ಕಲಿಕೆಯ ಲಕ್ಷಣಗಳು :

ಪ್ರಯೋಗಗಳು, ಸಂಶೋಧನೆ, ಉಪನ್ಯಾಸ, ಪುಸ್ತಕಗಳು ಹೀಗೆ ವಿವಿಧ ಮೂಲಗಳಿಂದ ಕಲಿಕೆ ಸಾಗುತ್ತದೆ.

ವಿಷಯ ಸಂಗ್ರಹಣೆಯಲ್ಲಿ ವಯಸ್ಕರು, ಹಿರಿಯರು, ಅನುಭವಿಗಳೊಂದಿಗೆ ಚರ್ಚಿಸಿ ಕಲಿಯುತ್ತಾರೆ.

ಯೋಜನೆಯ ಆಯ್ಕೆ, ಗುರಿ ಸಾಧನೆಗೆ ರೂಪಿಸುವ ಕಾರ್ಯಯೋಜನೆ, ಮುನ್ನಡೆಸುವ ಕಾರ್ಯತಂತ್ರಗಳು ಮುಂತಾದವುಗಳ ಬಗ್ಗೆ ಸ್ವತಃ ನಿರ್ಧಾರಣೆಯ ಮೂಲಕ ಮುಕ್ತ ಕಲಿಕೆ.

ಸಮಸ್ಯೆಯ ಪರಿಹಾರಕ್ಕಾಗಿ ವಿವಿಧ ಕೌಶಲ್ಯಗಳ ಬಳಕೆ. ಜೀವನ ಅನುಭವವನ್ನು ಶಿಕ್ಷಣಕ್ಕೆ ಅನ್ವಯಿಸಿಕೊಳ್ಳುತ್ತಾರೆ. 

ಪರಿಕಲ್ಪನೆಗಳ ಆಧಾರಿತ ಶಾಶ್ವತ ಕಲಿಕೆ.

ವಿವಿಧ ಸನ್ನಿವೇಶಗಳಲ್ಲಿ ಕಲಿಕೆ ಸಾಗುವುದರಿಂದ ತರ್ಕಶಕ್ತಿ ಮತ್ತು ಶೋಧಕ ದೃಷ್ಟಿ ಬೆಳೆಯುತ್ತದೆ. 

ಶಿಕ್ಷಕರ ಸಹಭಾಗಿತ್ವ: ಯೋಜನಾ ಕಲಿಕೆಯಲ್ಲಿ ಮಕ್ಕಳಷ್ಟೇ ಕಲಿಯುವುದಿಲ್ಲ. ಬದಲಾಗಿ ಶಿಕ್ಷಕರೂ ಕಲಿಯುತ್ತಾರೆ. ಶಿಕ್ಷಕರು ತಂಡದ ಒಬ್ಬ ಸದಸ್ಯರಾಗಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಹೊಸತನದ ಹರಿಕಾರರಾಗಲು ಸಾಧ್ಯ. ಶಿಕ್ಷಕರು ಇಲ್ಲಿ ಭೋದಕರಾಗುವುದರ ಜೊತೆಗೆ ಒಬ್ಬ ಮಾರ್ಗದರ್ಶಕರಾಗಿ, ಸಹಾಯಕರಾಗಿ, ಸ್ನೇಹಿತರಾಗಿ ತೊಡಗಿಕೊಳ್ಳಬೇಕು. ಯೋಜನೆಗೆ ಅಗತ್ಯವಿರುವ ಸಂಪನ್ಮೂಲ ಒದಗಿಸುವಲ್ಲಿ ಹಾಗೂ ದತ್ತಾಂಶ ಸಂಗ್ರಹಿಸುವಲ್ಲಿ ಮಕ್ಕಳಿಗೆ ಸಹಾಯ ಮಾಡಬೇಕು. 

ಶಿಕ್ಷಕರು ಮಕ್ಕಳನ್ನು ಅಭಿಪ್ರೇರಿಸಿ ಯೋಜನಾ ಕಲಿಕೆಯಲ್ಲಿ ಕುತೂಹಲ ಕೆರಳಿಸಬೇಕು. ಯೋಜನೆಯು ಮುಖ್ಯವಾಗಿ ಮಕ್ಕಳ ಮಾನಸಿಕ, ಬೌದ್ದಿಕ ಮತ್ತು ಪ್ರಾದೇಶಿಕ ಮಟ್ಟಕ್ಕನುಗುಣವಾಗಿ ಇರಬೇಕು. ಯೋಜನೆಯು ಪಠ್ಯದಾಚೆಗಿನ ಕಲಿಕೆಯನ್ನು ಪಠ್ಯಕ್ಕೆ ಪೂರಕವಾಗುವಂತೆ ಮಾಡುವಂತಿರಬೇಕು. ತಮಗೆ ಇಷ್ಟವಾದ ಯೋಜನೆ ಆಯ್ಕೆ ಮಾಡಲು ಮಕ್ಕಳಿಗೆ ಸ್ವಾತಂತ್ರ ನೀಡಬೇಕು. ತರಗತಿಯ ಎಲ್ಲಾ ಮಕ್ಕಳು ಪಾಲ್ಗೊಳ್ಳುವಂತೆ ಅವಕಾಶ ನೀಡಬೇಕು. ಯೋಜನಾ ಕಾರ್ಯವನ್ನು ನಿರಂತರವಾಗಿ ವೀಕ್ಷಿಸುತ್ತಾ ಮಾರ್ಗದರ್ಶನ ನೀಡಬೇಕು. ಮಾಹಿತಿ ಸಂಗ್ರಹಣೆಗಾಗಿ ಅಗತ್ಯ ಸಂಪನ್ಮೂಲ ಒದಗಿಸಬೇಕು. ಯೋಜನೆ ಕುರಿತು ಚರ್ಚಿಸಲು ಮತ್ತು ವಿಚಾರಗಳನ್ನು ಹಂಚಿಕೊಳ್ಳಲು ಸೂಕ್ತ ವೇದಿಕೆ ನಿರ್ಮಿಸಬೇಕು. ಹಿರಿಯರು, ಅನುಭವಿಗಳೊಂದಿಗೆ ಮಕ್ಕಳು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸಬೇಕು. ಅಂತಿಮವಾಗಿ ಯೋಜನಾ ವರದಿ ತಯಾರಿಸಲು ಮಾರ್ಗದರ್ಶನ ಮಾಡಬೇಕು. 

ಮಕ್ಕಳು ತಯಾರಿಸಿದ ಯೋಜನೆಗಳನ್ನು ಸಭೆ ಸಮಾರಂಭಗಳAದು ಪ್ರದರ್ಶನಕ್ಕೆ ವ್ಯವಸ್ಥೆಗೊಳಿಸಬೇಕು. ಅಲ್ಲಿ ಮಕ್ಕಳು ತಮ್ಮ ಯೋಜನಾ ವರದಿಯ ಬಗ್ಗೆ ವೀಕ್ಷಕರಿಗೆ ವಿವರಣೆ ನೀಡಬೇಕು. ಉತ್ತಮ ಯೋಜನಾ ವರದಿಗಳನ್ನು ಆಯ್ಕೆ ಮಾಡಿ ಸ್ಥಳೀಯ ಪ್ರಾಯೋಜಕರಿಂದ ಪ್ರಶಂಸೆ ನೀಡಬೇಕು. ಈ ಯೋಜನಾ ವರದಿಗಳನ್ನು ಅವಶ್ಯಕತೆ ಇದ್ದಾಗ ತರಗತಿ ಕೋಣೆಯಲ್ಲಿ ಬೋಧನೋಪಕರಣವಾಗಿ ಬಳಸಬೇಕು. 

ಪೋಷಕರ ಪಾತ್ರವೂ ಮುಖ್ಯ: ಯೋಜನಾ ಕಲಿಕೆಯಲ್ಲಿ ಪೋಷಕರ ಪಾತ್ರ ಮಹತ್ವದ್ದು. ಮಕ್ಕಳು ಯೋಜನೆಗಳನ್ನು ತಯಾರಿಸಿಲು ಪೋಷಕರು ಸಹಾಯ ಮಾಡಬೇಕು. ಇದರಿಂದ ತಾವೂ ಕಲಿಕೆಯಲ್ಲಿ ಭಾಗವಹಿಸಿದಂತಾಗುತ್ತದೆ. ಅಗತ್ಯ ಸಂಪನ್ಮೂಲ ಒದಗಿಸಲು ಮುಂದಾಗಬೇಕು. ಮಕ್ಕಳ ಕಲಿಕೆಯನ್ನು ಉತ್ತೇಜಿಸುತ್ತಾ ಅವರ ವ್ಯಕ್ತಿತ್ವ ನಿರ್ಮಾಣದಲ್ಲಿ ಭಾಗಿಯಾಗಬೇಕು. ಯೋಜನಾ ಕಲಿಕೆಯು ತರಗತಿ ಹೊರಗೆ ನಡೆಯುವುದರಿಂದ ಶಿಕ್ಷಕರ ಸ್ಥಾನವನ್ನು ಪೋಷಕರು ವಹಿಸಿಕೊಳ್ಳಬೇಕು. ಮಕ್ಕಳ ಕಲಿಕೆಯಲ್ಲಿ ಪೋಷಕರೂ ಭಾಗಿಯಾದಾಗ ಅವರು ತುಂಬಾ ಖುಷಿ ಪಡುತ್ತಾರೆ. ಮಕ್ಕಳ ಖುಷಿಯಲ್ಲಿ ನಮ್ಮ ನೋವನ್ನು ನೋವನ್ನು ಮರೆಯಬಹುದು ಅಲ್ಲವೇ?




ಇನ್ಪೈರ್ ಅವಾರ್ಡ್ಗೆ ಅರ್ಜಿ ಸಲ್ಲಿಸಿದ್ರಾ?

 ದಿನಾಂಕ  27-7-2019ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ. 


ಇನ್ಪೈರ್ ಅವಾರ್ಡ್ಗೆ ಅರ್ಜಿ ಸಲ್ಲಿಸಿದ್ರಾ?


ಮಕ್ಕಳೇ, ನೀವು ಇತರರಿಗಿಂತ ಭಿನ್ನವಾಗಿ ಯೋಚಿಸುತ್ತೀರಿ ಮತ್ತು ತುಂಬಾ ವೇಗವಾಗಿ ಕಲಿಯುತ್ತೀರಿ ಎಂಬ ಮಾತು ಎಲ್ಲೆಡೆ ಕೇಳಿಬರುವುದು ಸಹಜ. ಇದಕ್ಕೆ ಕಾರಣ ನಿಮ್ಮಲ್ಲಿನ ಕುತೂಹಲ. ಕುತೂಹಲವು ನವೀನ ಸಂಶೋಧನೆಗಳಿಗೆ ದಾರಿ ಮಾಡಿಕೊಡುತ್ತದೆ. ಕೈಗೊಂಡ ಸಂಶೋಧನೆಯು ದಿನನಿತ್ಯದ ಬದುಕಿನ ಭಾಗವಾಗಬೇಕು, ಎಲ್ಲರೂ ಅದನ್ನು ಬಳಸುವಂತಿರಬೇಕೆAಬ ನಿಮ್ಮ ಸಹಜ ಆಸೆಯನ್ನು ಸಾಕಾರಗೊಳಿಸಲು ಒಂದು ವಿಶಿಷ್ಠ ಅವಕಾಶ ಇದೆ. ಅದೇ ಇನ್ಪೆöÊರ್ ಅವಾರ್ಡ್ ಮನಾಕ್. 

ವಿಜ್ಞಾನ ಮತ್ತು ಸಾಮಾಜಿಕ ಅನ್ವಯಿಕೆಗಳಲ್ಲಿ ಶಾಲಾ ಮಕ್ಕಳಲ್ಲಿ ಸೃಜನಶೀಲತೆ ಮತ್ತು ನವೀನ ಚಿಂತನೆಯ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಇನ್ಪೆöÊರ್ ಅವಾರ್ಡ್ ಮನಾಕ್ ಯೋಜನೆ ಜಾರಿಯಾಗಿದೆ. ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಈ ಯೋಜನೆಯನ್ನು 2010 ರಿಂದ ಜಾರಿಗೆ ತಂದಿದೆ. ಇದು ವಿಶೇಷವಾಗಿ 10 ರಿಂದ 15 ವಯೋಮಾನದ ಅಂದರೆ 6 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗಾಗಿ ಜಾರಿಗೊಳಿಸಿದ ಯೋಜನೆಯಾಗಿದೆ. ಇದು ಅತ್ಯಂತ ಬೃಹತ್ ಯೋಜನೆಯಾಗಿದ್ದು, ರಾಷ್ಟçದಾದ್ಯಂತ ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಇಂತಹ ಒಂದು ಬೃಹತ್ ಯೋಜನೆಯಲ್ಲಿ ನೀಮ್ಮ ಹೊಸ ಆಲೋಚನೆಯೊಂದಿಗೆ ನೀವೂ ಪಾಲ್ಗೊಳ್ಳಿ. ನಿಮ್ಮ ಆಲೋಚನೆಯು ಉತ್ತಮವಾಗಿದ್ದರೆ ರಾಷ್ಟç ಮಟ್ಟದಲ್ಲಿ ಉತ್ತಮ ಪ್ರಶಂಸೆ ಗಳಿಸುತ್ತದೆ. ಜೊತೆಗೆ ನಿಮ್ಮ ಶಾಲೆ ಮತ್ತು ಶಿಕ್ಷಕರಿಗೆ ಒಳ್ಳೆಯ ಹೆಸರು ಮತ್ತು ಕೀರ್ತಿ ಲಭಿಸುತ್ತದೆ. 

ನೀವೇನು ಮಾಡಬಹುದು?

ನಿಮ್ಮಲ್ಲಿ ವಿಜ್ಞಾನ ಮತ್ತು ಸಾಮಾಜಿಕ ಅನ್ವಯಿಕೆಯಾಗುವ ಹೊಸ ವಿಚಾರಗಳು ಅಥವಾ ಐಡಿಯಾಗಳು ಇದ್ದರೆ ಅವುಗಳ ಬಗ್ಗೆ ನಿಮ್ಮ ಶಾಲೆಯ ವಿಜ್ಞಾನ ಶಿಕ್ಷಕರು ಅಥವಾ ಆಸಕ್ತ ಶಿಕ್ಷಕರೊಂದಿಗೆ ಚರ್ಚಿಸಿ. ಅವರು ಅದಕ್ಕೆ ಹೊಸ ರೂಪು ನೀಡುತ್ತಾರೆ. ಈಗಾಗಲೇ ಈ ಯೋಜನೆಯ ಕುರಿತಾಗಿ ಶಾಲಾ ಮುಖ್ಯಸ್ಥರಿಗೆ ಮತ್ತು ವಿಜ್ಞಾನಾಸಕ್ತ ಶಿಕ್ಷಕರಿಗೆ ಮಾಹಿತಿ ಇರುತ್ತದೆ. ನಿಮ್ಮ ಐಡಿಯಾದ ಆಧಾರದ ಮೇಲೆ ಯೋಜನೆಯೊಂದನ್ನು ತಯಾರಿಸಿ ಅದನ್ನು ಇನ್ಪೆöÊರ್ ಅವಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸುತ್ತಾರೆ. ಅರ್ಜಿ ಸಲ್ಲಿಕೆ ಮತ್ತು ಪ್ರಾಥಮಿಕ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕವೇ ನಡೆಯುತ್ತದೆ. 

ನಿಮ್ಮ ಆಲೋಚನೆಯು ಉತ್ತಮವಾಗಿದ್ದು, ನಾವೀನ್ಯತೆಯಿಂದ ಕೂಡಿದ್ದರೆ, ಪ್ರಾಥಮಿಕ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗುತ್ತದೆ. ನಂತರ ಜಿಲ್ಲಾ ಹಂತದಲ್ಲಿ ನಡೆಯುವ ಪ್ರದರ್ಶನದಲ್ಲಿ ನಿಮ್ಮ ಐಡಿಯಾಕ್ಕೆ ಪೂರಕವಾದ ಕಾರ್ಯನಿರ್ವಹಣಾ ಪ್ರಾತ್ಯಕ್ಷತಾ ಮಾದರಿಯನ್ನು ಪ್ರದರ್ಶಿಸಬೇಕಾಗುತ್ತದೆ. ಜಿಲ್ಲಾ ಹಂತಕ್ಕೆ ನಿಮ್ಮ ಮಾದರಿ ಆಯ್ಕೆಯಾದರೆ, ಪ್ರಾತ್ಯಕ್ಷಿತಾ ಮಾದರಿ ತಯಾರಿಕೆಗಾಗಿ ವಿದ್ಯಾರ್ಥಿಗಳ ಖಾತೆಗೆ 10,000 ರೂಪಾಯಿಗಳನ್ನು ಇಲಾಖೆಯು ನೇರವಾಗಿ ವರ್ಗಾವಣೆ ಮಾಡುತ್ತದೆ.  ಪ್ರದರ್ಶನದ ವೇಳೆ ನಿಮ್ಮ ಮಾದರಿ ಕುರಿತು ವಿಸ್ತೃತವಾಗಿ ವಿವರಿಸಬೇಕಾಗುತ್ತದೆ ಹಾಗೂ ಆಯ್ಕೆ ಸಮಿತಿ ಕೇಳುವ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದರೆ ರಾಜ್ಯ ಹಂತಕ್ಕೆ ಆಯ್ಕೆಯಾಗುತ್ತೀರಿ. ರಾಜ್ಯಹಂತದಲ್ಲಿ ಒಟ್ಟು 1000 ಮಾದರಿಗಳು ಪ್ರದರ್ಶಿತವಾಗುತ್ತವೆ. ಅಲ್ಲಿಯೂ ನಿಮ್ಮ ಮಾದರಿ ಉತ್ತಮವಾಗಿದ್ದರೆೆ ರಾಷ್ಟç ಹಂತಕ್ಕೆ ಆಯ್ಕೆಯಾಗುತ್ತದೆ. ರಾಷ್ಟç ಹಂತದಲ್ಲಿ 1000 ಮಾದರಿಗಳು ಪ್ರದರ್ಶಿತವಾಗುತ್ತವೆ. ಅಂತಿಮವಾಗಿ 60 ಅತ್ಯುತ್ತಮ ಮಾದರಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ 60 ಮಾದರಿಗಳನ್ನು ರಾಷ್ಟçಭವನದಲ್ಲಿ ನಡೆಯುವ ವಾರ್ಷಿಕ ಉತ್ಸವದಲ್ಲಿ ಪ್ರದರ್ಶಿಸಿ ಪುರಸ್ಕಾರ ನೀಡಲಾಗುತ್ತದೆ. ಅದರಲ್ಲಿ ಮೂರು ಅತ್ಯುತ್ತಮ ಮಾದರಿಗಳಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ದೊರೆಯುತ್ತದೆ. ರಾಷ್ಟç ಮಟ್ಟದಲ್ಲಿ ಆಯ್ಕೆಯಾದ ಮಾದರಿಗಳಲ್ಲಿ ವಿಶೇಷತೆಯುಳ್ಳ ಮಾದರಿಗಳಿಗೆ ಪೇಟೆಂಟ್ ಕೂಡಾ ದೊರೆಯುತ್ತದೆ. 

ನೆನಪಿಡಿ : ಎಲ್ಲಾ ಹಂತದಲ್ಲೂ ನಿಮ್ಮ ಐಡಿಯಾ ಆಯ್ಕೆಯಾಗಬೇಕಾದರೆ ಅದು ಜನಸ್ನೇಹಿ, ವಿಜ್ಞಾನ ಸ್ನೇಹಿ ಹಾಗೂ ಸಾಮಾಜಿಕ ಅನ್ವಯಿಕ ಮಾದರಿಯಾಗಿರಬೇಕು ಹಾಗೂ ನಾವಿನ್ಯತೆಯಿಂದ ಕೂಡಿರಬೇಕು ಮತ್ತು ನಿಮ್ಮ ಸ್ವಂತದ್ದಾಗಿರಬೇಕು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 31-07-2019 ಕೊನೆ ದಿನಾಂಕವಾಗಿರುತ್ತದೆ. ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಅರ್ಹ ವಯೋಮಾನದ ಆಸಕ್ತ ಮಕ್ಕಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ತಿತಿತಿ.iಟಿsಠಿiಡಿeಚಿತಿಚಿಡಿಜs-ಜsಣ.gov.iಟಿ   ವೆಬ್‌ಸೈಟ್‌ಗೆ ಭೇಟಿಕೊಡಿ ಅಥವಾ ವಿವರಗಳಿಗೆ 9638418605 ಕ್ಕೆ ಸಂಪರ್ಕಿಸಿ.




ಕಂಬದ ಮ್ಯಾಲಿನ ಗೊಂಬೆಯೇ,,,

 ದಿನಾಂಕ  02-07-2019ರ ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟವಾದ ನನ್ನ ಬರಹ. 


ಕಂಬದ ಮ್ಯಾಲಿನ ಗೊಂಬೆಯೇ,,,



ಇಡೀ ಜಗತ್ ಸೃಷ್ಟಿ ಮತ್ತು ರಕ್ಷಣೆಯಲ್ಲಿ ಮಹಿಳೆಯ ಪಾತ್ರ ಮಹತ್ವದ್ದು. ತನ್ನ ಕುಟುಂಬದ ಅಕ್ಕರೆ ಆರೈಕೆಯಲ್ಲಿ ಸದಾ ಬ್ಯುಸಿಯಾಗಿರುವ ಜೀವಿ. ತನ್ನವರ ಒಳಿತಿಗಾಗಿ ಸದಾ ಹಂಬಲಿಸುತ್ತಾ, ತನ್ನನ್ನೇ ಮೈಮರೆಯುವ ಜೀವಿ. ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲದಿರುವುದಕ್ಕೆ ತಾಯಿಯನ್ನು ಸೃಷ್ಟಿಸಿದ ಎಂಬ ಮಾತು ಅಕ್ಷರಶಃ ನಿಜ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ವಿವಿಧ ಪಾತ್ರಗಳನ್ನು ನಿರ್ವಹಿಸುವ ಮೂಲಕ, ವಿವಿಧ ಕಾರ್ಯಗಳನ್ನು ಪೂರೈಸುವ ಮಹಿಳೆಯ ಶ್ರಮ ಅವಿರತವಾದುದು. 

ಮಹಿಳೆಯ ದಿನನಿತ್ಯದ ಬದುಕನ್ನು ಬಿಂಬಿಸಲು ಅನೇಕ ಹಾಡು, ಕಥೆ, ಕವನಗಳೇನೋ ಇವೆ. ಆದಾಗ್ಯೂ ಅವಳ ಬದುಕನ್ನು ವರ್ಣಿಸಲು ಗೊಂಬೆಗಳೇ ರೂಪುಗೊಂಡಿವೆ. ಈ ಗೊಂಬೆಗಳು ಬಲು ಅಪರೂಪದ ಗೊಂಬೆಗಳು. ಸಣ್ಣವರಿಂದ ದೊಡ್ಡವರಾದಿಯಾಗಿ ಎಲ್ಲರಿಗೂ ಇಷ್ಟವಾಗುವ ಗೊಂಬೆಗಳು. ನಾಗಮಂಡಲದ ಸಿನಿಮಾದ ‘ಕಂಬದ ಮ್ಯಾಲಿನ ಗೊಂಬೆಯೇ,,,’ ಎಂಬ ಹಾಡಿನ ಸಾಲುಗಳನ್ನು ಗುಣುಗುಣಿಸುವಂತೆ ಮಾಡುತ್ತವೆ. ಈ ಹಾಡನ್ನು ಗೋಪಾಲ ವಾಜಪೇಯಿ ಅವರು ರಚಿಸಿದ್ದು, ಹೆಣ್ಣಿನ ತುಡಿತ, ಮಿಡಿತಗಳ ಪ್ರತೀಕವಾಗಿದೆ. ನಾನಿಲ್ಲಿ ಹೇಳಹೊರಟಿರುವ ಗೊಂಬೆಗಳೂ ಸಹ ಕಂಬದ ಮೇಲಿದ್ದು, ಅಂತಹದ್ದೇ ಆಕರ್ಷಣೆ, ಘನತೆ, ಗಾಂಭೀರ್ಯ ಹೊಂದಿವೆ. ಹಾಗಾದರೆ ಈ ಗೊಂಬೆಗಳು ಯಾವುವು? ಅವು ಎಲ್ಲಿವೆ ಎಂಬುದು ನಿಮ್ಮ ಪ್ರಶ್ನೆಯಲ್ಲವೇ? ಮುಂದೆ ಓದಿ.

ಕಂಬದ ಮ್ಯಾಲಿನ ಗೊಂಬೆಗಳು ಇರುವುದು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲೂಕ ಗೊಟಗೋಡಿಯ ಉತ್ಸವ ರಾಕ್‌ಗಾರ್ಡನ್‌ನಲ್ಲಿ. ಪ್ರವೇಶ ದ್ವಾರದ ಸಮೀಪದಲ್ಲೇ ನಿರ್ಮಾಣಗೊಂಡ ಕಂಬಗಳ ಮೇಲಿನ ಚಿತ್ತಾರಗಳು ಗ್ರಾಮೀಣ ಬದುಕಿಗೆ ತುಂಬಾ ಸನಿಹವಾದವುಗಳಾಗಿವೆ. ರಾಕ್‌ಗಾರ್ಡನ್‌ನ ಕಂಬದ ಮೇಲೆ ವಿವಧ ಮಗ್ಗಲುಗಳಲ್ಲಿ ಮಹಿಳೆಯ ದೈನಂದಿನ ಬದುಕಿನ ಚಟುವಟಿಕೆಗಳನ್ನು ಗೊಂಬೆಗಳಾಗಿ ಪ್ರತಿಬಿಂಬಿಸಲಾಗಿದೆ.

ಮನೆಗೆ ಕಂಬಗಳು ಹೇಗೆ ಆಧಾರವೋ ಹಾಗೆ ಕುಟುಂಬಕ್ಕೆ ಮಹಿಳೆಯೇ ಆಧಾರ ಎಂಬುದನ್ನು ಇಲ್ಲಿನ ಕಂಬಗಳು ಗಟ್ಟಿಗೊಳಿಸುತ್ತವೆ. ಪ್ರತಿ ಮನೆಯ ಮಹಿಳಾ ಚಟುವಟಿಕೆಗಳೇ ಇಲ್ಲಿನ ಕಂಬದ ಗೊಂಬೆಗಳಾಗಿವೆ. ಪಾತ್ರೆ ತೊಳೆಯುವುದು, ಧಾನ್ಯಗಳನ್ನು ಹಸನು ಮಾಡುವುದು, ಬುಟ್ಟಿಯಲ್ಲಿ ಸಾಮಾನುಗಳನ್ನು ಹೊತ್ತು ಸಾಗುವುದು, ರೊಟ್ಟಿ ತಟ್ಟುವುದು, ಕೃಷಿ ಕಾರ್ಯ ಮಾಡುವುದು ಹೀಗೆ ಗ್ರಾಮೀಣ ಬದುಕಿನ ವೈವಿಧ್ಯಮಯ ಚಟುವಟಿಕೆಗಳು ಇಲ್ಲಿ ಗೊಂಬೆಗಳಾಗಿ ರೂಪುಗೊಂಡಿವೆ. ಹಾಗಂತ ಇವು ನೈಜ ಚಿತ್ರಣಗಳಲ್ಲ. ಇವು ಸಿಮೆಂಟ್ ಶಿಲ್ಪಗಳು. ಕಲೆಯೊಂದಿಗೆ ನವ್ಯತೆಯನ್ನು ಮೇಳವಿಸಿ ಕಲಾಭಿವ್ಯಕ್ತಿಗೊಳಿಸಲಾಗಿದೆ. ದಿನನಿತ್ಯದ ಚಟುವಟಿಕೆಗಳನ್ನು ಸಮಕಾಲೀನ ಕಲೆಯೊಂದಿಗೆ ತಳಕುಹಾಕಿ ಚಿತ್ರಗಳನ್ನು ರೂಪಿಸಿರುವುದು ಪ್ರೇಕ್ಷಕರಿಗೆ ವಿಭಿನ್ನವಾಗಿ ಗೋಚರಿಸುತ್ತವೆ. ಕಂಬಗಳ ಮೇಲಿನ ಬಹುತೇಕ ಗೊಂಬೆಗಳೆಲ್ಲವೂ ಮಹಿಳೆಯ ದಿನಚರಿಯ ಕುರುಹುಗಳಾದ್ದರಿಂದ ಇವುಗಳನ್ನು “ಮಹಿಳಾ ಬದುಕಿನ ಕಂಬಗಳು” ಎಂದು ಹೆಸರಿಸಲಾಗಿದೆ ಎನ್ನುತ್ತಾರೆ ಉತ್ಸವ ರಾಕ್‌ಗಾರ್ಡನ್‌ನ ರೂವಾರಿ ಪ್ರೋ.ಟಿ.ಬಿ.ಸೊಲಬಕ್ಕನವರ್.

ಮಹಿಳಾ ಬದುಕಿನ ಚಿತ್ರಗಳ ಪ್ರತಿಪಾದನೆಯ ಜೊತೆಗೆ ಕೆಲವು ಜನಪದ ಕಲಾ ಪ್ರಕಾರಗಳನ್ನು ಕಂಬಗಳ ಮೇಲೆ ಗೊಂಬೆಗಳಾಗಿ ಬಿಂಬಿಸಲಾಗಿದೆ. ಪ್ರತಿ ಗೊಂಬೆಯಲ್ಲಿನ ಸೂಕ್ಷö್ಮತೆ, ಕುಸುರಿತನ, ಅದಕ್ಕೆ ತಕ್ಕದಾದ ವರ್ಣ ಲೇಪನ ಎಲ್ಲವೂ ಪೂರ್ವ ನಿರ್ಧಾರಿತ ಕಲ್ಪನೆಗಳಾಗಿವೆ. ಇದರಲ್ಲಿ ತಂಡದ ನಾಯಕರ ಶ್ರಮ ಹಾಗೂ ಮಾರ್ಗದರ್ಶನ ಎಲ್ಲರಿಗೂ ಹಿತವಾಗುವಂತೆ ಶಿಲ್ಪ ನಿರ್ಮಿಸಿರುವುದು ಅವರ ದೂರದೃಷ್ಟಿತ್ವವನ್ನು ಪ್ರತಿಪಾದಿಸುತ್ತವೆ. ಆಧುನಿಕತೆಗೆ ಮಾರುಹೋದ ಯಾಂತ್ರಿಕ ಜೀವನದಲ್ಲಿ ಕಳೆದುಹೋದ ಗ್ರಾಮೀಣ ಬದುಕಿನ ವೈವಿಧ್ಯಮಯ ಸ್ವರೂಪವನ್ನು ಜೀವಂತವಾಗಿಡುವ ಇಲ್ಲಿನ ಪ್ರಯತ್ನ ಶ್ಲಾಘನೀಯ. 42 ಎಕರೆ ವಿಶಾಲವಾದ ಪ್ರದೇಶದಲ್ಲಿ ಅಭಿವೃದ್ದಿಗೊಳಿಸಲಾದ ಈ ಗಾರ್ಡನ್‌ನ ಪ್ರತಿ ಶಿಲ್ಪಗಳು ತನ್ನದೇ ಮಹತ್ವ ಹೊಂದಿವೆ. ಮಹಿಳೆಯ ಬದುಕಿನ ಅದರಲ್ಲೂ ಗ್ರಾಮೀಣ ಮಹಿಳೆಯ ಬದುಕಿನ ಚಿತ್ರಣಗಳನ್ನು ಸವಿಯಲು ಒಮ್ಮೆಯಾದರೂ ನೋಡಬಹುದಾದ ತಾಣ ಉತ್ಸವ ರಾಕ್‌ಗಾರ್ಡನ್.




ಕುತೂಹಲ ಕುಂದಿಸಬೇಡಿ,,,

  ದಿನಾಂಕ 09-05-2019ರ ಸುಧಾ ದಲ್ಲಿ ಹಾಗೂ 10-12-2019ರ ವಿಜಯವಾಣಿಯ ಲಲಿತಾ ಪುರವಣಿಯಲ್ಲಿ ಪ್ರಕಟವಾದ ನನ್ನ ಬರಹ. 


ಕುತೂಹಲ ಕುಂದಿಸಬೇಡಿ,,,





ತಾಯಿಯ ಜೊತೆ ಮಾರ್ಕೆಟ್‌ಗೆ ಹೋದ ಮಗು ಅಮ್ಮ ಅದೇನು? ಅದೇಕೆ ಹೀಗೆ? ಅವರೇನು ಮಾಡುತ್ತಿದ್ದಾರೆ? ಅವರ ಉಡುಪು ಹೀಗೇಕೆ? ಇತ್ಯಾದಿಯಾಗಿ ಪ್ರಶ್ನಿಸುತ್ತದೆ. ಅಲ್ಲಿ ತಾನು ನೋಡಿದ ಪ್ರತಿ ವಸ್ತು ಹಾಗೂ ವಿಭಿನ್ನ ವ್ಯಕ್ತಿತ್ವಗಳನ್ನು ಪ್ರಶ್ನಿಸತೊಡಗುತ್ತದೆ. ಮನೆಯಿಂದ ಪ್ರಾರಂಭವಾದ ಪ್ರಶ್ನೆಗಳು ವಾಪಾಸ್ಸು ಮನೆಗೆ ಬಂದರೂ ನಿಲ್ಲುವುದಿಲ್ಲ. ಇದಕ್ಕೆಲ್ಲಾ ಕಾರಣ ಮಗುವಿನ ಕುತೂಹಲ. ಮಗುವಿನ ಪ್ರತೀ ಕುತೂಹಲದ ವೀಕ್ಷಣೆಯು ಪ್ರಶ್ನೆಯ ಮೂಲಕ ಸೂಕ್ತ ಉತ್ತರದಲ್ಲಿ ಅಂತ್ಯವಾಗುತ್ತದೆ. ಆಗ ಹೊಸ ಹಾಗೂ ಸಂತಸದ ಕಲಿಕೆ ಮಗುವಿನಲ್ಲಿ ಉಂಟಾಗಿರುತ್ತದೆ. 

    ಮಗು ಹೊಸತನ್ನು ನೋಡಿದಾಗ ಅದನ್ನು ಅನ್ವೇಷಿಸಲು ಬಯಸುತ್ತದೆ. ಕಿಟಕಿಯಿಂದ ಒಳ ಬರುವ ಬೆಳಕಿನ ಕಿರಣಗಳನ್ನು ಹಿಡಿಯಲು ಪ್ರತ್ನಿಸುವ ಮಗು ಅದು ಕೈಗೆ ಸಿಗದಿದ್ದಾಗ ಪ್ರಶ್ನಿಸುತ್ತದೆ. ಬೆಂಕಿಯನ್ನು ಮುಟ್ಟಿ ಕೈಸುಟ್ಟುಕೊಂಡ ನಂತರವೇ ಅದು ಉತ್ತರ ಕಂಡುಕೊಳ್ಳುತ್ತದೆ. ಬೇರೆ ಬೇರೆ ಆಕಾರದ ಪಾತ್ರೆಯೊಳಗೆ ನೀರನ್ನು ಹಾಕಿ ನೀರಿನ ದ್ರವ್ಯರಾಶಿ ಮತ್ತು ಪರಿಮಾಣದ ಬಗ್ಗೆ ತನ್ನದೇ ಆದ ವ್ಯಾಖ್ಯಾನ ನೀಡುತ್ತದೆ. ಚಾಕೋಲೇಟ್‌ನ ಮಾಧುರ್ಯ, ನಿಂಬೆಯ ಹುಳಿ, ಬೆಂಕಿಯ ಶಾಖ, ಐಸ್‌ಕ್ರೀಮ್‌ನ ಶೀತ ಎಲ್ಲವನ್ನೂ ಕುತೂಹಲ ಕಣ್ಣುಗಳಿಂದ ನೋಡಿ ಅನುಭವಿಸಿ ತಿಳಿಯುತ್ತದೆ. ಅಚ್ಚರಿಯೊಂದಿಗೆ ಖುಷಿಪಡುತ್ತದೆ. ಆ ಮೂಲಕ ಕಲಿಯುತ್ತದೆ. ಹುಟ್ಟಿನಿಂದ ಪ್ರಾರಂಭವಾಗುವ ಮಾನವನ ಕುತೂಹಲದ ಗುಣ ಅವನ ಅಭಿವೃದ್ದಿಗೆ ಪೂರಕವಾದುದು.

    ಕುತೂಹಲ ಮಗುವಿನ ಸಹಜ ಸ್ವಾಭಾವಿಕ ಗುಣವಾಗಿದೆ. ಕುತೂಹಲದಿಂದ ಕೂಡಿದ ಮಗು ಸದಾ ಅನ್ವೇಷಿಸಲು ಮುಂದಾಗುತ್ತದೆ. ಅನ್ವೇಷಣೆಯಿಂದ ಸಂತೋಷ ಅನುಭವಿಸುತ್ತದೆ. ಸಂತಸದ ಮುಂದುವರೆದ ಭಾಗವಾಗಿ ಪರಿಶೋಧನೆಯನ್ನು ಪುನರಾವರ್ತಿಸುತ್ತದೆ. ತನ್ನ ಸಂತಸದ ಕಲಿಕೆಯನ್ನು ಇತರರೊಂದಿಗೆ ಹಂಚಿಕೊಳ್ಳುತ್ತದೆ. ಇದು ಕಲಿಕೆಯ ಇನ್ನೊಂದು ಆಯಾಮವಾಗಿದೆ. 

    ನಾವೆಲ್ಲರೂ ಸಾಮಾಜಿಕ ಮತ್ತು ಪರಿಸರ ಜೀವಿಗಳು. ನಮ್ಮ ಸುತ್ತಲಿನ ಪರಿಸರದಿಂದ ಮತ್ತು ನಾವು ವಾಸಿಸುವ ಸಮುದಾಯದಿಂದ ಸಾಕಷ್ಟು ಕಲಿಯುತ್ತೇವೆ. ಯಾವ ಮಗುವಿನಲ್ಲಿ ಕುತೂಹಲ ಮಂಕಾಗಿರುತ್ತದೆಯೋ ಆ ಮಗುವಿನ ಕಲಿಕೆ ಮಂದವಾಗಿರುತ್ತದೆ. ಕುತೂಹಲ ಹೆಚ್ಚಿರುವ ಮಗುವಿನ ಗೆಳೆಯರ ಬಳಗ ದೊಡ್ಡದಿರುತ್ತದೆ. ಆದರೆ ಕಡಿಮೆ ಕುತೂಹಲವುಳ್ಳ ಮಗುವಿನ ಗೆಳೆಯರ ಬಳಗ ತೀರಾ ಚಿಕ್ಕದು. ಹೊಸ ಗೆಳೆಯರೊಂದಿಗೆ ಸೇರಲು ಆ ಮಗು ಹಿಂಜರಿಯುತ್ತದೆ. ಕಡಿಮೆ ಪುಸ್ತಕಗಳನ್ನು ಓದುವುದು, ಚಿಕ್ಕ ಸಾಮಾಜಿಕ ಗುಂಪು ಹೊಂದಿರುತ್ತದೆ. ಇಂತಹ ಮಗುವಿಗೆ ಕಲಿಸುವುದೂ ಕೂಡಾ ಕಠಿಣವಾಗುತ್ತದೆ. ಏಕೆಂದರೆ ಆ ಮಗುವಿಗೆ ಸ್ಪೂರ್ತಿ ಉತ್ಸಾಹ ನೀಡಿ ಪ್ರೇರೇಪಿಸುವುದು ತುಂಬಾ ಕಷ್ಟ. 

ಕುತೂಹಲದ ಪ್ರಯೋಜನಗಳು

ಕುತೂಹಲವು ಅನೇಕ ಲಾಭಗಳನ್ನು ನೀಡುತ್ತದೆ. ಮಗುವಿನ ಕುತೂಹಲದ ಪ್ರಶ್ನೆಗಳಿಗೆ ದೊಡ್ಡವರಾದ ನಾವು ಭಯಭೀತರಾಗಿ ಪ್ರಶ್ನೆ ಕೇಳುವುದನ್ನೇ ನಿಲ್ಲಿಸುತ್ತಿದ್ದೇವೆ. ಏಕೆಂದರೆ ನಾವು ಸೋಮಾರಿಯಾಗಿದ್ದೇವೆ ಅಥವಾ ಮಗು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರ್ದಿಷ್ಟ ಉತ್ತರಗಳ ಹುಡುಕಾಟದಲ್ಲಿ ನಾವು ಸೋತಿದ್ದೇವೆ. ಆದಾಗ್ಯೂ ಕುತೂಹಲದ ಲಾಭಗಳನ್ನು ಅರಿತರೆ ಖಂಡಿತವಾಗಿಯೂ ನಮ್ಮ ಪ್ರಯತ್ನ ಉತ್ತಮವಾಗುತ್ತದೆ. ಕುತೂಹಲದ ಪ್ರಯೋಜನಗಳು ಕೇವಲ ಭೌದ್ದಿಕತೆಗೆ ಸೀಮಿತವಾಗಿಲ್ಲ. ಅದು ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ.

ಬದುಕಲು ಸಹಾಯ ಮಾಡುತ್ತದೆ: ಕುತೂಹಲವು ನಿರಂತರವಾಗಿ ಬದಲಾಗುತ್ತಿರುವ ಪರಿಸರದ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಲು ಸಹಾಯಕವಾಗುತ್ತದೆ. ಇದರಿಂದ ಹೊಸ ವಿಷಯಗಳನ್ನು ಎದರಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ. ಅದು ನವೀನ ಅನ್ವೇಷಣೆಗೆ ಪ್ರಚೋದಿಸುತ್ತದೆ. ವಿವಿಧ ಸನ್ನಿವೇಶಗಳನ್ನು ಎದುರಿಸುವ ಕೌಶಲ್ಯ ಬೆಳೆಸುತ್ತದೆ. 

ಸಂತಸ ನೀಡುತ್ತದೆ : ಕುತೂಹಲವುಳ್ಳ ಜನರು ಹೆಚ್ಚು ಸಂತೋಷವುಳ್ಳವರಾಗಿರುತ್ತಾರೆ. ಕುತೂಹಲ ಹೊಂದಿದವರು ಉನ್ನತ ಮಟ್ಟದ ಸಕಾರಾತ್ಮಕ ಭಾವನೆಗಳನ್ನು ಮತ್ತು ಕಡಿಮೆ ಮಟ್ಟದ ಆತಂಕವನ್ನು ಹೊಂದಿರುತ್ತಾರೆ. ಕುತೂಹಲವು ಯೋಗಕ್ಷೇಮಗಳನ್ನು ಅಧಿಕಗೊಳಿಸಿ ಸಂಶೋಧನೆಗಳ ಮೂಲಕ ವ್ಶೆಜ್ಞಾನಿಕ ಮನೋಭಾವ ಹೆಚ್ಚಿಸುತ್ತದೆ. 

ಸಾಧನೆ ಹೆಚ್ಚಿಸುತ್ತದೆ : ಕುತೂಹಲವು ಸಂತೋಷದ ಮೂಲಕ ಕಲಿಕೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವುದರಿಂದ ಶೈಕ್ಷಣಿಕ ಸಾಧನೆ ಉತ್ತುಂಗಕ್ಕೇರುತ್ತದೆ. ಆ ಕಲಿಕೆಯು ನಿಶ್ಚಿತ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ. ಕುತೂಹಲದ ಕಾರ್ಯ ಸಾಮಾನ್ಯ ಅರ್ಥದಲ್ಲಿ ಕಾಣಬಹುದು. ಆದರೆ ಹೆಚ್ಚು ಕುತೂಹಲವುಳ್ಳ ಮಗುವಿನಲ್ಲಿ ಆಸಕ್ತಿಯೂ ಹೆಚ್ಚಿರುತ್ತದೆ. ಆದ್ದರಿಂದ ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಲಭಿಸುತ್ತದೆ. 

ಪರಾನುಭೂತಿಯನ್ನು ವಿಸ್ತರಿಸುತ್ತದೆ : ಕುತೂಹಲವು ಮಗುವಿನ ಸಾಮಾಜಿಕ ವೃತ್ತದ ಪರಿಧಿಯನ್ನು ವಿಸ್ತರಿಸುತ್ತದೆ. ವೃತ್ತದ ಹೊರಗಿನ ಜನರೊಂದಿಗೆ ಮಾತನಾಡುವಾಗ ಮಗು ತನ್ನ ಜೀವನಕ್ಕಿಂತ ವಿಭಿನ್ನವಾದ ಜೀವನಾನುಭವವನ್ನು ಮತ್ತು ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಅಪರಿಚಿತರೊಂದಿಗೆ ಮಾತನಾಡಲು ಅವಕಾಶ ಇರುವುದರಿಂದ ವಿಭಿನ್ನ ವ್ಯಕ್ತಿತ್ವದ ಹುಟುಕಾಟ ಪ್ರಾರಂಭವಾಗುತ್ತದೆ. ಇದು ಮಗುವಿನ ಸಾಮಾಜಿಕ ವಲಯನ್ನು ವಿಸ್ತರಿಸುವ ಮೂಲಕ ಪರಾನುಭೂತಿಯನ್ನು ಬೆಳೆಸುತ್ತದೆ. 

ಆರೋಗ್ಯವನ್ನು ಬಲಪಡಿಸುತ್ತದೆ : ವೈದ್ಯರು ತಮ್ಮ ರೋಗಿಗಳ ಮೇಲೆ ಕುತೂಹಲದ ದೃಷ್ಟಿಕೋನ ಹೊಂದಿದಾಗ ರೋಗಿಯ ರೋಗ ಬೇಗನೇ ಗುಣಮುಖವಾಗುತ್ತದೆ. ಅಂತೆಯೇ ಕುತೂಹಲದ ಮನಸ್ಸು ಆರೋಗ್ಯ ಸುಧಾರಿಸುವಲ್ಲಿ ಹೆಚ್ಚಿನ ಪ್ರಭಾವ ಬೀರುತ್ತದೆ. ಇಲ್ಲಿ ಸಚಿತಸ ಮತ್ತು ನಿಶ್ಚಿತತೆ ಇರುವ್ಯದರಿಂದ ಮಾನಸಿಕ ತೊಳಲಾಟ ಇರುವುದರಿಲ್ಲ. ಹಾಗಾಗಿ ದೇಹ ಮತ್ತು ಮನಸ್ಸು ಎರಡೂ ಸುಸ್ಥಿತಿಯಲ್ಲಿರುತ್ತವೆ. 

ಕುತೂಹಲದ ಸ್ವರೂಪ:

ಕುತೂಹಲ ಎಲ್ಲಾ ಮಕ್ಕಳಲ್ಲಿ ಒಂದೇ ರೀತಿಯಾಗಿರುವುದಿಲ್ಲ. ಕೆಲವು ಮಕ್ಕಳು ಮಾನಸಿಕ ಕುತೂಹಲ ಹೊಂದಿರುತ್ತಾರೆ. ಆದರೆ ಕೆಲವು ಮಕ್ಕಳು ದೈಹಿಕ ಕುತೂಹಲ ಹೊಂದಿರುತ್ತಾರೆ. ಸ್ಪರ್ಶಿಸುವ, ವಾಸನೆ ಗ್ರಹಿಸುವ, ರುಚಿ ಆಸ್ವಾದಿಸುವ, ಏರುವ, ಇಳಿಯುವ ಇತ್ಯಾದಿ ದೈಹಿಕ ಚಟುವಟಿಕೆಗಳ ಮೂಲಕ ಕುತೂಹಲ ವ್ಯಕ್ತ ಪಡಿಸುತ್ತಾರೆ. ಕೆಲವು ಮಕ್ಕಳು ಅಂಜುಬುರುಕರಾಗಿದ್ದರೆ ಕೆಲವು ಮಕ್ಕಳು ಸಾಹಸ ಪ್ರವೃತ್ತಿಯ ಕುತೂಹಲಿಗಳಾಗಿರುತ್ತಾರೆ. 

ಕೆಲವು ಮಕ್ಕಳಿಗೆ ವಿಫಲತೆಯನ್ನು ಮರು ವ್ಯಾಖ್ಯಾನಿಸಬೇಕಾಗುತ್ತದೆ. ಕುತೂಹಲವು ಸಾಮಾನ್ಯ ಪಾಂಡಿತ್ಯಕ್ಕಿAತ ಹೆಚ್ಚಿನ ಪರಿಶೋಧನೆಗೆ ಪೂರಕವಾದುದು. ವಿವಿಧ ಹಂತದ ಪ್ರಯತ್ನಗಳು ಅವ್ಯವಸ್ಥ ಕಲಿಕೆಯನ್ನು ಶುದ್ದಗೊಳಿಸುತ್ತವೆ. ಪ್ರತೀ ಮಗುವಿನಲ್ಲಿ ಅನ್ವೇಷಣಾ ಗುಣ ಇದ್ದೇ ಇರುತ್ತದೆ. ಆದರೆ ವೇಗದಲ್ಲಿ ವ್ಯತ್ಯಾಸಗಳಿರುತ್ತವೆ. ಪ್ರತೀ ಮಗುವಿಗೆ ಸೂಕ್ತ ಪರಿಸರ ಮತ್ತು ಅಗತ್ಯ ಅವಕಾಶ ದೊರೆತಾಗ ಮಗು ಪರಿಶೋಧನೆಯ ಹಾದಿಯಲ್ಲಿ ಮುನ್ನಡೆಯುತ್ತದೆ. 

ಕುತೂಹಲವನ್ನು ಉತ್ತೇಜಿಸುವ ವಿಧಾನಗಳು :

ಪ್ರಶ್ನೆಗಳಿಗೆ ಉತ್ತರಿಸಿ: ಮಕ್ಕಳ ಪ್ರಶ್ನೆಗೆ ಉತ್ತರಿಸುವುದು ನಿಜ್ಜಕ್ಕೂ ಕಷ್ಟಕರ. ಹಾಗಂತ ಉತ್ತರಿಸದೇ ಹೋದರೆ ಮಕ್ಕಳ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿಯುತ್ತವೆ ಮತ್ತು ಆ ಮಗುವಿನ ಕಲಿಕೆ ಮೊಟಕುಗೊಳ್ಳುತ್ತದೆ. ಆದ್ದರಿಂದ ಮಕ್ಕಳ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸುವ ಪ್ರಯತ್ನ ಮಾಡಿ. ಇತ್ತಿಚಿನ ದಿನಗಳಲ್ಲಿ ಮಗುವಿನೊಂದಿಗೆ ಬೆರೆಯಲು ಅಥವಾ ಪ್ರಶ್ನೆಗೆ ಉತ್ತರಿಸಲು ಪುರುಸೊತ್ತಿಲ್ಲ ಎಂಬುದೇ ಬಹುತೇಕ ಪಾಲಕರ ಹೇಳಿಕೆ. ಆದರೆ ಇದು ಶುದ್ದ ತಪ್ಪು. ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ನಿಗದಿತ ಸಮಯ ಮೀಸಲಿಡುವುದು ಅನಿವಾರ್ಯವಾಗಿದೆ. ಈ ಸಮಯದಲ್ಲಿ ಮಕ್ಕಳು ಪ್ರಶ್ನೆ ಕೇಳಲು ಅವಕಾಶ ನೀಡಿ. ಚರ್ಚೆಯ ಮೂಲಕ ವಿವರಣಾತ್ಮಕ ಉತ್ತರ ನೀಡಿ. ಇದರಿಂದ ಮಗುವಿನ ಕುತೂಹಲ ಪುರಸ್ಕರಿಸಲ್ಪಡುತ್ತದೆ.

ಆಸಕ್ತಿಗಳನ್ನು ಪ್ರೋತ್ಸಾಹಿಸಿ: ಮಗುವಿನ ಕುತೂಹಲವು ನೈಸರ್ಗಿಕವಾಗಿದ್ದು, ಆಸಕ್ತಿಗೆ ಒಳಪಡುವ ವಿಷಯ ಅಥವಾ ಚಟುವಟಿಕೆಗಳ ಕಡೆಗೆ ಗಮನ ಕೇಂದ್ರೀಕೃತವಾಗುತ್ತದೆ. ಮಗು ರಚನಾತ್ಮಕ ಚಟುವಟಿಕೆಯಲ್ಲಿ ತೊಡಗಿದಾಗ ಆಸಕ್ತಿಯ ಕ್ಷೇತ್ರಗಳ ಪರಿಚಯವಾಗುತ್ತದೆ. ಮಗುವಿನ ಆಸಕ್ತಿಗಳನ್ನು ಪ್ರಚೋದಿಸಿ ಮತ್ತು ಪೂರಕವಾದ ಸಾಧನ ಸಲಕರಣೆ ಒದಗಿಸಿ. ಮಗು ಇಚ್ಚಿಸುವ ಪುಸ್ತಕ ಒದಗಿಸಿ ಅಥವಾ ಹೊರಗಡೆ ಸುತ್ತಾಡಲು ಕರೆದೊಯ್ಯಿರಿ.

ಸಾಧನಗಳನ್ನು ನೀಡಿ: ಪ್ರತೀ ಮಗುವಿಗೆ ತನ್ನ ವಯಸ್ಸಿಗನುಗುಣವಾದ ಸಾಮರ್ಥ್ಯ ಪ್ರದರ್ಶಿಸುವ ಬಯಕೆ ಇರುತ್ತದೆ. ಅದಕ್ಕೆ ಪೂರಕವಾದ ಸಾಧನ ಸಲಕರಣೆಗಳನ್ನು ಒದಗಿಸುವ ಪ್ರಯತ್ನ ನಮ್ಮದಾಗಬೇಕು. ಆಗ ಮಗುವಿನ ಕುತೂಹಲದ ಬುಗ್ಗೆ ಚಿಮ್ಮುತ್ತದೆ. ಬಣ್ಣದ ಪೇರ‍್ಸ್, ಕ್ರೆಯಾನ್ಸ್, ಭೂತಗನ್ನಡಿ, ಪಾಕೆಟ್ ನಿಘಂಟು ಇತ್ಯಾದಿಗಳು ಮಕ್ಕಳಿಗೆ ನೀಡಬಹುದಾದ ಕೆಲವು ಸಲಕರಣೆಗಳಾಗಿವೆ. 

ಉತ್ತೇಜಕ ಪರಿಸರ ನಿರ್ಮಿಸಿ: ಇಡೀ ಮನೆಯನ್ನು ಆಟದ ಮೈದಾನವನ್ನಾಗಿ ಮಾಡಬೇಕಿಲ್ಲ. ಬದಲಿಗೆ ಮಗುವಿನ ಕುತೂಹಲ ಹೆಚ್ಚಿಸುವ ಹಾಗೂ ಅದಕ್ಕೆ ಪೂರಕ ಮಾಹಿತಿ ಒದಗುವ ರೀತಿಯ ವಾತಾವರಣ ನಿರ್ಮಾಣ ಮಾಡುವುದು ಪೋಷಕರ ಹೊಣೆಗಾರಿಕೆಯಾಗಬೇಕು. ಮಗುವಿನ ಮೆದುಳಿಗೆ ಒಂದಿಷ್ಟು ಕೆಲಸ ಹೊಸ ವಿಷಯಗಳನ್ನು ತುಂಬುವ ವಾತಾವರಣ ಕುತೂಹಲ ಹೆಚ್ಚಲು ಕಾರಣವಾಗುತ್ತದೆ. ಆಗಾಗ ಮನೆಯೊಳಗಿನ ಸಲಕರಣೆಗಳ ಸ್ಥಾನ ಮತ್ತು ಅಲಂಕಾರ ಬದಲಿಸುವುದೂ ಸಹ ಕುತೂಹಲದ ಕಲಿಕೆಗೆ ಕಾರಣವಾಗುತ್ತದೆ. 

ಮುಕ್ತ ಅವಕಾಶವಿರಲಿ: ಮಗು ಸ್ವತಂತ್ರವಾಗಿ ಆಲೋಚಿಸಲು ಮುಕ್ತತೆ ಅಗತ್ಯ. ತನ್ನಲ್ಲಿ ಮೂಡಿದ ಪ್ರಶ್ನೆಗಳಿಗೆ ತಾನೇ ಸ್ವತಃ ಉತ್ತರ ಕಂಡುಕೊಳ್ಳಲು ಅವಕಾಶ ನೀಡುವುದು ಹಾಗೂ ಅದನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ಮುಕ್ತತೆಯ ಮೆಟ್ಟಿಲಾಗಿದೆ. 

ತಪ್ಪು ಮಾಡಲು ಅನುಮತಿಸಿ: ಮಗು ಮಾಡುವ ತಪ್ಪಿಗೆ ಅನುಮತಿ ಇರಲಿ. ಇಲ್ಲದಿದ್ದರೆ ಮಗುವಿನಲ್ಲಿ ನಿರಾಶೆ ಮತ್ತು ನಿರುತ್ಸಾಹಗಳು ಇಮ್ಮಡಿಸುತ್ತವೆ. ತಪ್ಪುಗಳಾಗುವುದು ಸಹಜ ಸ್ವಭಾವ. ಆದರೆ ಒಮ್ಮೆ ಆದ ತಪ್ಪಿಗೆ ಕಾರಣ ಹಾಗೂ ಸಾಧ್ಯತೆಗಳನ್ನು ತಿಳಿಸಿ. ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಿ. ಆಗ ಖಂಡಿತವಾಗಿಯೂ ತಪ್ಪುಗಳ ಸಂಖ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತದೆ ಮತ್ತು ಕಲಿಕೆ ಹೆಚ್ಚು ಸ್ಪಷ್ಟವಾಗುತ್ತ ಹೋಗುತ್ತದೆ. 

ವೀಕ್ಷಣೆಗೆ ನಿರ್ದಿಷ್ಟತೆ ನೀಡಿ: ನಮ್ಮ ಸುತ್ತಲಿನ ಪರಿಸರ ನಿಗೂಢತೆಗಳ ಆಗರ. ಇದನ್ನು ಆಸ್ವಾದಿಸುವ ಮತ್ತು ಅನುಭಾವಿಸುವ ಶೈಲಿ ತಿಳಿದಿರಬೇಕಷ್ಟೇ. ಅದಕ್ಕೆ ಬೇಕಾಗಿರುವುದು ವೀಕ್ಷಿಸುವ ತಂತ್ರಗಾರಿಕೆ. ಆ ತಂತ್ರಗಾರಿಕೆಯನ್ನು ಮಕ್ಕಳಲ್ಲಿ ಬೆಳೆಸಬೇಕು. ಆಗ ಸಣ್ಣ ಸಣ್ಣ ಬದಲಾವಣೆಗಳನ್ನೂ ಸಹ ಕುತೂಹಲದ ಕಣ್ಣುಗಳಿಂದ ವೀಕ್ಷಿಸುತ್ತಾರೆ. ಇದು ನಿರ್ದಿಷ್ಟ ಕಲಿಕೆಗೆ ಸಹಕಾರಿ. 

ಕುತೂಹಲ ಹೆಚ್ಚಲು ಇವುಗಳೂ ಮುಖ್ಯ

ಪೋಷಕರು ಕುತೂಹಲದಿಂದ ವಸ್ತು/ಘಟನೆ ವೀಕ್ಷಿಸುವ ಮತ್ತು ಅದನ್ನು ವಿವರಸಿವ ಕೌಶಲ್ಯ ಹೊಂದಿರಬೇಕು. ಪರಿಸರದಲ್ಲಿನ ಪ್ರತೀ ಸನ್ನಿವೇಶ ಅಥವಾ ವಸ್ತುವಿನಲ್ಲಿರುವ ಸೂಕ್ಷö್ಮತೆಯನ್ನು ವೀಕ್ಷಿಸಲು ತಿಳಿಸುವುದು. 

ಪ್ರಾರಂಭದಲ್ಲಿ ಮಗು ಯಾವುದಾದರೂ ಕೆಲಸ/ಚಟುವಟಿಕೆಯಲ್ಲಿ ತೊಡಗಿದಾಗ ಮಗುವಿನ ಕ್ರಿಯಾಶೀಲತೆಯನ್ನು ಪತ್ತೆ ಹಚ್ಚಿ ಅಭಿಪ್ರೇರಣೆ ನೀಡಬೇಕು. ಇದರಿಂದ ಉತ್ತೇಜಿತವಾದ ಮಗು ಕುತೂಹಲದ ಕೌಶಲ್ಯ ಬೆಳೆಸಿಕೊಳ್ಳುತ್ತದೆ. 

ಮಕ್ಕಳಿಗೆ ಗೊಂದಲಗಳು ಉಂಟಾದಾಗ ನಿಖರವಾದ ಉತ್ತರ ಹುಡುಕಲು ಪ್ರಾರಂಭಿಸುತ್ತಾರೆ. ಅಂತೆಯೇ ಕಲಿಕೆಯಲ್ಲಿ ಗೂಢತೆ ಅಡಗಿದ್ದರೆ ಅದನ್ನು ಭೇಧಿಸಲು ತವಕಿಸುತ್ತಾರೆ. ಆಗ ಹೊಸ ಹುಟುಕಾಟದ ಕಲಿಕೆ ಪ್ರಾರಂಭವಾಗುತ್ತದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಕ್ತ ಅವಕಾಶ ನೀಡಬೇಕು. 

ಮಕ್ಕಳು ಸ್ವತಂತ್ರವಾಗಿ ಯೋಚಿಸಲು ಉತ್ತೇಜಿಸಿ. ಕಲ್ಪನೆ ಮತ್ತು ಪರಿಕಲ್ಪನೆಗಳನ್ನು ನೀಡಿ ಹೊಸ ಯೋಚನೆ ಕೈಗೊಳ್ಳಲು ಅವಕಾಶ ನೀಡಿ. ಆಲೋಚನೆ ಮತ್ತು ಭಾವನೆಗಳ ಜೊತೆಗೆ ಕಲ್ಪನೆಯು ಕುತೂಹಲವನ್ನು ಉತ್ತೇಜಿಸುತ್ತದೆ ಮತ್ತು ನವೀನ ಪರಿಣಾಮಗಳಿಗೆ ಕಾರಣವಾಗುತ್ತದೆ. 

ಪ್ರಸ್ತುತತೆ ಅರಿಯಲು ಅವಕಾಶ ಒದಗಿಸಿ. ದಿನ ಪತ್ರಿಕೆ ಅಥವಾ ಮಾಧ್ಯಗಳಲ್ಲಿನ ಪ್ರಚಲಿತ ವಿಷಯ ಅಥವಾ ಘಟನೆಗಳ ಕುರಿತ ಕಿರು ಮಾಹಿತಿ ಸಂಗ್ರಹಿಸಿ ಪ್ರಸ್ತುತ ಪಡಿಸಲು ಅವಕಾಶ ನೀಡಿ. ಪ್ರಸ್ತುತ ದಿನದ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅರಿಯಲು ತಿಳಿಸಿ. ಪ್ರಾರಂಭದಲ್ಲಿ ಇದು ಕಠಿಣ ಎನಿಸಿದರೂ ನಂತರದ ದಿನಗಳಲ್ಲಿ ಮಕ್ಕಳ ಕುತೂಹಲವನ್ನು ಹೆಚ್ಚಿಸುತ್ತದೆ ಮತ್ತು ಆ ಮೂಲಕ ಜ್ಞಾನಾರ್ಜನೆಗೆ ಅನುವು ಮಾಡಿಕೊಡುತ್ತದೆ. 

ವಿವಿಧ ಸಂಸ್ಕೃತಿ ಮತ್ತು ಸಮಾಜಗಳನ್ನು ಪರಿಚಯಿಸಿ. ಒಂದು ಸಂಸ್ಕೃತಿ ಅಥವಾ ಸಮಾಜ ಇನ್ನೊಂದಕ್ಕಿAತ ಹೇಗೆ ಭಿನ್ನವಾಗಿದೆ? ಇತರೆ ಸಂಸ್ಕೃತಿಗಳಿಗೂ ತಮ್ಮ ಸಂಸ್ಕೃತಿಗೂ ಇರುವ ಭಾವನಾತ್ಮಕ ಸಂಬAಧಗಳನ್ನು ಲಿಂಕ್ ಮಾಡಲು ಪ್ರೋತ್ಸಾಹಿಸಿ. ಇತರೆ ಸಮಾಜದ ಮೌಲ್ಯಗಳು ಹಾಗೂ ನಂಬಿಕೆಗಳ ಬಗ್ಗೆ ತಿಳಿಯಲು ಅವಕಾಶ ನೀಡಿ.

    ಪೋಷಕರು ಮೊದಲು ಕುತೂಹಲದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳಬೇಕು. ನಂತರ ಮಕ್ಕಳಲ್ಲಿ ಅದನ್ನು ಬೆಳೆಸುವ ವಿಧಾನಗಳ ಬಗ್ಗೆ ಮತ್ತು ಬೆಳೆಸುವಲ್ಲಿ ತಮ್ಮ ಪಾತ್ರದ ಅವಶ್ಯಕತೆ ಬಗ್ಗೆ ತಿಳಿಯಬೇಕು. ಮೊದಲು ತಾವು ಕುತೂಹಲ ಬೆಳೆಸಿಕೊಂಡು ಮಗುವಿನಲ್ಲಿ ಬೆಳೆಸಲು ಪ್ರಯತ್ನಿಸಬೇಕು. ಉತ್ತಮ ಹಾಗೂ ಅಭಿವೃದ್ದಿಪರ ಸಮಾಜಕ್ಕಾಗಿ ಮಕ್ಕಳ ಕುತೂಹಲ ಭದ್ರಬುನಾದಿ. ಅದನ್ನು ಬೆಳೆಸಲು ಎಲ್ಲರೂ ಶ್ರಮಿಸೋಣ.




ಉನ್ನತ ವ್ಯಾಸಂಗದ ಕನಸು ಶೈಕ್ಷಣಿಕ ಸಾಲದಿಂದ ನನಸು

ದಿನಾಂಕ  19-6-2019ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.


 ಉನ್ನತ ವ್ಯಾಸಂಗದ ಕನಸು ಶೈಕ್ಷಣಿಕ ಸಾಲದಿಂದ ನನಸು  




ಭಾರತದ ಶಿಕ್ಷಣ ವ್ಯವಸ್ಥೆ ಅತ್ಯಂತ ತೀಕ್ಷ÷್ಣವಾದುದು. ಕಲೆ, ವಿಜ್ಞಾನ, ಎಂಜಿನಿಯರಿAಗ್, ವೈದ್ಯಕೀಯ, ಸಾಹಿತ್ಯ ಮತ್ತು ಬದುಕಿಗಾಗಿ ಪರ್ಯಾಯ ಶಿಕ್ಷಣ ಇವೆಲ್ಲವೂ ಭಾರತದ ಶಿಕ್ಷಣದ ವಿಶೇಷತೆಗಳು. ಇವುಗಳ ಜೊತೆಗೆ ವಿಶೇಷತೆ ಹೊಂದಿದ ನೂರಾರು ವಿಶ್ವವಿದ್ಯಾಲಯಗಳು ವಿದೇಶಿ ವಿದ್ಯಾರ್ಥಿಗಳನ್ನು ಅಧ್ಯಯನಕ್ಕಾಗಿ ಸೂಜಿಗಲ್ಲಿನಂತೆ ಸೆಳೆಯುತ್ತವೆ. ಏಕೆಂದರೆ ಭಾರತದಲ್ಲಿ ಅಧ್ಯಯನಕ್ಕಾಗಿ ಹಲವಾರು ಆಯ್ಕೆಗಳಿವೆ. 

ವಿಶ್ವದ ಅತ್ಯಂತ ಶ್ರೇಷ್ಠ ಮತ್ತು ಅಭಿವೃದ್ದಿ ಶಿಕ್ಷಣ ಕೇಂದ್ರಗಳಲ್ಲಿ ಭಾರತವೂ ಒಂದು. ಹೊಸ ಹೊಸ ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ವಿವಿಧ ಶಿಕ್ಷಣ ಉಪಕ್ರಮಗಳ ಮೂಲಕ ಶೈಕ್ಷಣಿಕ ಸಮೂಹವನ್ನೇ ಸೃಷ್ಟಿಸಿವೆ. ಆ ಹಿನ್ನೆಲೆಯಲ್ಲಿ ಅಂತರಾಷ್ಟಿçÃಯ ಮಟ್ಟದ ವಿದ್ಯಾರ್ಥಿಗಳು ವೈವಿಧ್ಯಮಯ ಅಧ್ಯಯನಕ್ಕಾಗಿ ಭಾರತದೆಡೆಗೆ ಮುಖಮಾಡುತ್ತಿರುವುದು ಆಶಾದಾಯಕ ಬೆಳವಣಿಗೆ.

ಗುಣಮಟ್ಟದ ಶಿಕ್ಷಣ ಹಾಗೂ ಯಶಸ್ವಿ ಜೀವನ ನಿರ್ವಹಣೆ ಸದುದ್ದೇಶದಿಂದ ಭಾರತದ ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಹಣವನ್ನು ಬಂಡವಾಳದ ರೂಪದಲ್ಲಿ ವ್ಯಯಮಾಡುತ್ತಿದ್ದಾರೆ. ಒಂದು ಅಧ್ಯಯನದ ಪ್ರಕಾರ ಭಾರತದ ಉನ್ನತ ಶಿಕ್ಷಣದ ಸರಾಸರಿ ವೆಚ್ಚವು ವರ್ಷದಿಂದ ವರ್ಷಕ್ಕೆ ಶೇಕಡಾ 15 ರಷ್ಟು ಹೆಚ್ಚುತ್ತಿದೆ. ಈ ವೆಚ್ಚವನ್ನು ಸರಿದೂಗಿಸಲು ಪಾಲಕರು ಮ್ಯೂಚುವಲ್ ಫಂಡ್, ಆವರ್ತಕ ನಿಧಿಗಳು, ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಯೋಜನೆಗಳು ಹಾಗೂ ಷೇರುಗಳಲ್ಲಿ ಹಣವನ್ನು ಹೂಡಿಕೆ ಮಾಡುತ್ತಾರೆ. 

ಭಾರತದ ವಿದ್ಯಾರ್ಥಿಗಳ ಕಲಿಕೆ ಇಡೀ ವಿಶ್ವದಲ್ಲಿಯೇ ಉತ್ತಮವಾದದ್ದು ಎಂಬ ಹೆಗ್ಗಳಿಕೆ ಇದೆ. ಆದರೆ ಬಹುತೇಕ ಭಾರತದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಶಿಕ್ಷಣದ ಕನಸು ಆರ್ಥಿಕ ಸಂಕಷ್ಟದಲ್ಲಿಯೇ ಕಮರುತ್ತಿದೆ. ಪ್ರತಿಭೆಗಳ ಕನಸನ್ನು ಸಾಕಾರಗೊಳಿಸುವ ಸಲುವಾಗಿಯೇ ಭಾರತದ ಮಾನವ ಸಂಪನ್ಮೂಲ ಇಲಾಖೆ ಹಾಗೂ ಭಾರತದ ಹಣಕಾಸು ಸಂಸ್ಥೆ(ಬ್ಯಾAಕ್)ಗಳು ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸನ್ನು ನನಸಾಗಿಸಲು ಇತ್ತೀಚಿನ ವರ್ಷಗಳಲ್ಲಿ ಹಣಕಾಸು ಸೌಲಭ್ಯ ನೀಡಲು ಮುಂದೆ ಬಂದಿವೆ. ಈ ಹಿನ್ನೆಲೆಯಲ್ಲಿ ಜಾರಿಗೆ ಬಂದ ಸೌಲಭ್ಯವೇ ಶೈಕ್ಷಣಿಕ ಸಾಲ. ಅಂದರೆ ಉನ್ನತ ಶಿಕ್ಷಣದ ಕನಸು ಹೊತ್ತ ವಿದ್ಯಾರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಸಮೀಪದ ಬ್ಯಾಂಕ್‌ನಲ್ಲಿ ಸಾಲ ಪಡೆದು, ವಿದ್ಯಾಭ್ಯಾಸ ಪೂರೈಸುವುದು. ನಂತರ ಕನಿಷ್ಠ ಕಂತು ಹಾಗೂ ಕನಿಷ್ಠ ಬಡ್ಡಿ ದರದಲ್ಲಿ ಸಾಲವನ್ನು ಮರುಪಾವತಿಸುವ ಯೋಜನೆ ಇದಾಗಿದೆ. ಶಿಕ್ಷಣ ಸಾಲದ ಪ್ರಮಾಣದಲ್ಲಿ ನಿರ್ಧಿಷ್ಟತೆ ಇಲ್ಲ. ಎಂಜಿನಿಯರಿAಗ್, ವೈದ್ಯಕೀಯ, ಕಾನೂನು, ಮ್ಯಾನೇಜ್‌ಮೆಂಟ್ ಕೋರ್ಸ್ಗಳು, ವಾಯುಯಾನ, ಇತ್ಯಾದಿ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ 180ಕ್ಕೂ ಹೆಚ್ಚು ಕೋರ್ಸ್ಗಳಿಗಾಗಿ ಭಾರತದಲ್ಲಿ ಉತ್ತಮ ಸಾಲ ಸೌಲಭ್ಯಗಳನ್ನು ವಿನ್ಯಾಸ ಮಾಡಲಾಗಿದೆ. ಆಸಕ್ತರು ಅನುಕೂಲವಾಗುವಂತಹ ಯೋಜನೆಯನ್ವಯ ಸಾಲ ಪಡೆಯಬಹುದು.

ಶಿಕ್ಷಣ ಸಾಲ ಏನನ್ನು ಒಳಗೊಂಡಿದೆ? : ಶೈಕ್ಷಣಿಕ ಸಾಲವು ಕೋರ್ಸ್ಗೆ ಸಂಬAಧಿತ ಎಲ್ಲಾ ಶುಲ್ಕಗಳನ್ನು ಅಂದರೆ ಕಾಲೇಜು/ವಿಶ್ವವಿದ್ಯಾಲಯದ ಮೂಲಭೂತ ಶುಲ್ಕ, ಹಾಸ್ಟಲ್ ಶುಲ್ಕ, ಪರೀಕ್ಷಾ ಶುಲ್ಕ, ಕೋರ್ಸ್ಗೆ ಸಂಬAಧಿತ ಪರಿಕರಗಳ ಶುಲ್ಕವನ್ನು ಒಳಗೊಂಡಿರುತ್ತದೆ. 

ಯಾರಿಗೆ ಎಷ್ಟು ಸಾಲ? : ಭಾರತದಲ್ಲಿ ಅಥವಾ ವಿದೇಶಗಳಲ್ಲಿ ಅಧ್ಯಯನ ಮಾಡಬಯಸಿದ ಪ್ರತಿಭಾವಂತ ವಿದ್ಯಾರ್ಥಿಗಳೆಲ್ಲರೂ ಈ ಸಾಲ ಪಡೆಯಬಹುದು. ಸಾಲದ ಮೊತ್ತವು ಅರ್ಜಿದಾರರು ವ್ಯಾಸಂಗ ಮಾಡುವ ಕೋರ್ಸ್ ಹಾಗೂ ಸ್ಥಳವನ್ನಾಧರಿಸಿರುತ್ತದೆ. ಕೆಲವು ಬ್ಯಾಂಕ್‌ಗಳು ಶೇಕಡಾ 100 ರಷ್ಟು ಸಾಲ ನೀಡುತ್ತವೆ ಹಾಗೂ ಕೆಲವು ಬ್ಯಾಂಕ್‌ಗಳು ಶೇಕಡಾ90 ರಷ್ಟು ಮಾತ್ರ ನೀಡುತ್ತವೆ. ಉಳಿದ ಮೊತ್ತವನ್ನು ಅರ್ಜಿದಾರರೇ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಸ್ವದೇಶಿ ಹಾಗೂ ವಿದೇಶಿ ಸಾಲದ ಮೊತ್ತವು ಬ್ಯಾಂಕ್‌ನಿAದ ಬ್ಯಾಂಕಿಗೆ ವಿಭಿನ್ನವಾಗಿರುತ್ತದೆ.

ಅರ್ಹತೆ ಮತ್ತು ದಾಖಲೆಗಳು : ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿ ಭಾರತೀಯ ನಾಗರೀಕನಾಗಿರಬೇಕು. ಓದಲು ಬಯಸಿದ ಕಾಲೇಜು/ವಿಶ್ವವಿದ್ಯಾಲಯ ಅರ್ಹ ಪ್ರಾಧಿಕಾರದಿಂದ ಅಂಗೀಕೃತವಾಗಿರಬೇಕು. ಅರ್ಜಿದಾರರು ಕೋರ್ಸ್ ಸಂಬAಧಿತ ಪೂರ್ವ ಶಿಕ್ಷಣವನ್ನು ಪೂರ್ಣಗೊಳಿಸಿರಬೇಕು. ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಬಗ್ಗೆ ಅಧಿಕೃತ ಪ್ರಮಾಣ ಪತ್ರ ಸಲ್ಲಿಸಬೇಕು. ವಿಳಾಸ ಪುರಾವೆಗಾಗಿ ಆಧಾರ್/ವೋಟರ್ ಐ.ಡಿ, ಅರ್ಜಿದಾರರು/ಪೋಷಕರು/ಜಾಮೀನುದಾರರ ಆರು ತಿಂಗಳ ಬ್ಯಾಂಕ್ ವಹಿವಾಟಿನ ಮಾಹಿತಿ, ವಿದೇಶ ವ್ಯಾಸಂಗ ಸಾಲಕ್ಕೆ ಸೂಕ್ತ ದಾಖಲೆಗಳಾದ ಪಾಸ್‌ಪೋರ್ಟ್, ವೀಸಾ, ಸೂಕ್ತ ಆರ್ಥಿಕ ಹಾಗೂ ಸೇವಾ ಭದ್ರತೆ ದಾಖಲೆಗಳು, ಪ್ಯಾನ್ ಕಾರ್ಡ್, ಕರಾರು ಪತ್ರ ಇತ್ಯಾದಿ.

ಶೈಕ್ಷಣಿಕ ಸಾಲದ ವೈಶಿಷ್ಠö್ಯತೆಗಳು ಮತ್ತು ಪ್ರಯೋಜನಗಳು : 

ಸಾಲವು ಸಾರ್ವತ್ರಿಕವಾಗಿ ಲಭ್ಯವಿದ್ದು, ಉನ್ನತ ಶಿಕ್ಷಣ ಪಡೆಯಲಿಚ್ಛಿಸುವ ಯಾರು ಬೇಕಾದರೂ ಈ ಸೌಲಭ್ಯ ಪಡೆಯಬಹುದು.

ಸ್ವದೇಶ ಮತ್ತು ವಿದೇಶದಲ್ಲಿ ಪದವಿ ಮತ್ತು ಸ್ನಾತಕ, ವೃತ್ತಿಪರ ಶಿಕ್ಷಣ ಕೋರ್ಸ್ಗಳಿಗೆ ಸಾಲ ಸಿಗುತ್ತದೆ.

ಸಾಲದ ಪ್ರಮಾಣ ಕನಿಷ್ಠ 2 ಲಕ್ಷದಿಂದ 15 ಲಕ್ಷದವರೆಗೂ ದೊರೆಯುತ್ತದೆ. ಬ್ಯಾಂಕ್ ಹಾಗೂ ಕೋರ್ಸ್ಗಳ ಆಧಾರದ ಮೇಲೆ ಮೊತ್ತ ಬದಲಾಗುತ್ತದೆ.

ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ಸಾಲದ ಮೊತ್ತಕ್ಕೆ ಪ್ರಮುಖ ನಿರ್ಣಾಯಕವಾಗಿದೆ. ಸಾಮಾನ್ಯವಾಗಿ ಮಹಿಳಾ ವಿದ್ಯಾರ್ಥಿಗಳಿಗೆ ರಿಯಾಯಿತಿ ಹೆಚ್ಚು ಹಾಗೂ ಬಡ್ಡಿ ದರ ಕಡಿಮೆ.

ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಕೋರ್ಸ್ಗೆ ಅನುಗುಣವಾಗಿ ಸರ್ಕಾರದ ಸಬ್ಸಿಡಿ ದೊರೆಯುತ್ತದೆ.

ಅರ್ಜಿದಾರರು ಸಾಲವನ್ನು ತಕ್ಷಣವೇ ಮರುಪಾವತಿ ಮಾಡಬೇಕಾದ ಭಯವಿಲ್ಲ. ಕೋರ್ಸ್ ಪೂರ್ಣಗೊಂಡ 5 ರಿಂದ 7 ವರ್ಷದವರೆಗೆ ಸಾಲ ಮರುಪಾವತಿಸಲು ಅವಕಾಶ ಇರುತ್ತದೆ. 

ಸಾಮಾನ್ಯವಾಗಿ 4 ಲಕ್ಷಕ್ಕಿಂತ ಕಡಿಮೆ ಸಾಲಕ್ಕೆ ಸುರಕ್ಷತೆ ಅಥವಾ ಜಾಮೀನಿನ ಅಗತ್ಯವಿಲ್ಲ.

ಯೋಜನೆ ಮತ್ತು ಪ್ರಯೋಜನಗಳು ಬ್ಯಾಂಕ್‌ನಿAದ ಬ್ಯಾಂಕ್‌ಗೆ ಬದಲಾಗುತ್ತವೆ.

ಕೋಲ್ಯಾಟರಲ್ ರೂಲ್ಸ್ನ ಅನ್ವಯಿಕೆ : ಶಿಕ್ಷಣ ಸಾಲಕ್ಕೆ ಯಾವುದೇ ವಿಧವಾದ ಸ್ಥಿರಾಸ್ತಿ ಅಥವಾ ಚರಾಸ್ತಿಯ ಭದ್ರತೆಯನ್ನು ಮೇಲಾಧಾರವಾಗಿ ನೀಡುವುದೇ ಕೊಲ್ಯಾಟರಲ್ ರೂಲ್ಸ್ ಆಗಿದೆ. ಇದು ಸಾಲ ಮರುಪಾವತಿಯ ವಿಳಂಬ ಹಾಗೂ ಅಪಾಯಗಳನ್ನು ಕಡಿಮೆ ಮಾಡುತ್ತದೆ. ಕೆಲವು ವೇಳೆ ನೀಡುವ ಸಾಲದ ಮೊತ್ತ ಅಧಿಕವಾಗಿದ್ದಾಗ ಅದರ ಮರುಪಾವತಿ ವ್ಯವಸ್ಥೆ ವಿದ್ಯಾರ್ಥಿ/ಪಾಲಕರಿಗೆ ಸಮಸ್ಯೆಯಾಗುತ್ತದೆ. ಇದನ್ನು ತಪ್ಪಿಸಲು ಬ್ಯಾಂಕ್‌ನವರು ಕೋಲ್ಯಾಟರಲ್ ನಿಯಮವನ್ನು ಅನುಸರಿಸುತ್ತಾರೆ. ನಾಲ್ಕು ಲಕ್ಷದವರೆಗಿನ ಸಾಲಕ್ಕೆ ಯಾವುದೇ ಭದ್ರತೆ ಅವಶ್ಯಕತೆ ಇಲ್ಲ. ನಾಲ್ಕರಿಂದ ಏಳುವರೆ ಲಕ್ಷದವರೆಗೆ ಮೂರನೇ ವ್ಯಕ್ತಿಯ ಜಾಮೀನಿನೊಂದಿಗೆ ಸಾಲ ಪಡೆಯಬಹುದು. ಅದಕ್ಕೂ ಹೆಚ್ಚಿನ  ಸಾಲದ ಮೊತ್ತಕ್ಕೆ ಮಾತ್ರ ಕೋಲ್ಯಾಟರಲ್ ರೂಲ್ಸ್ ಪ್ರಕಾರ ಮೇಲಾಧಾರ ಭದ್ರತೆ ನೀಡಬೇಕಾಗುತ್ತದೆ. ಅದಕ್ಕಾಗಿ ಅರ್ಜಿದಾರರು ಯಾವುದೇ ವಿಧವಾದ ಸ್ಥಿರಾಸ್ತಿ ಅಂದರೆ ಮನೆ, ನಿವೇಶನ, ವಾಣಿಜ್ಯ ಕಟ್ಟಡಗಳು, ಮಾಲ್‌ಗಳನ್ನು ಭದ್ರತೆಗೆ ನೀಡಬೇಕಾಗುತ್ತದೆ. ಚರಾಸ್ಥಿಗಳಾದ ಭಾರಿ ವಾಹನಗಳು, ಎಫ್ಡಿ, ಚಿನ್ನ, ಮ್ಯೂಚುವಲ್ ಫಂಡ್ಸ್, ಷೇರುಗಳು, ಜೀವ ವಿಮಾ ಪಾಲಸಿ, ಬ್ಯಾಂಕ್ ಠೇವಣಿಗಳು, ಡಿಬೆಂಚರ್‌ಗಳು, ಬಾಂಡ್‌ಗಳು ಇತ್ಯಾದಿಗಳನ್ನು ನೀಡಬಹುದಾಗಿದೆ. ಆದರೆ ಕೃಷಿ ಜಮೀನು ಎಂದಿಗೂ ಮೇಲಾಧಾರವಾಗಿ ಅಂಗೀಕೃತವಾಗುವುದಿಲ್ಲ. 

ಶೈಕ್ಷಣಿಕ ಸಾಲ ನೀಡುವ ಬ್ಯಾಂಕ್‌ಗಳು:

ಅಲಹಬಾದ್ ಬ್ಯಾಂಕ್

ಆAದ್ರöಬ್ಯಾAಕ್

ಬ್ಯಾAಕ್ ಆಫ್ ಬರೋಡಾ

ಬ್ಯಾಂಕ್ ಆಫ್ ಇಂಡಿಯಾ

ಕೆನರಾ ಬ್ಯಾಂಕ್

ಕಾರ್ಪೋರೇಷನ್ ಬ್ಯಾಂಕ್

ಇAಡಿಯನ್ ಓವರ್‌ಸೀಸ್ ಬ್ಯಾಂಕ್

ಪAಜಾಬ್ ನ್ಯಾಶನಲ್ ಬ್ಯಾಂಕ್

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸಿAಡಿಕೇಟ್ ಬ್ಯಾಂಕ್

ಯುಕೋ ಬ್ಯಾಂಕ್

ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ

ವಿಜಯ ಬ್ಯಾಂಕ್


ಒಪ್ಪAದವನ್ನು ಎಚ್ಚರಿಕೆಯಿಂದ ಓದಿ: ಬಹುತೇಕರು ಸಾಲ ಪಡೆಯುವಾಗ ಹಣಕಾಸು ಸಂಸ್ಥೆಯವರು ಎಲ್ಲೆಲ್ಲಿ ಸಾಹಿ ಹಾಕಲು ತಿಳಿಸುತ್ತಾರೋ ಅಲ್ಲೆಲ್ಲಾ ಸಹಿ ಹಾಕುತ್ತಾರೆ. ಓದದೇ ಸಹಿ ಹಾಕುವುದು ತಪ್ಪು. ನಿಮಗೆ ನೀಡಿದ ಅರ್ಜಿ ಹಾಗೂ ಒಪ್ಪಂದ ಪತ್ರವನ್ನು ಕೂಲಂಕಷವಾಗಿ ಓದಿ ಸರಿ ಎನಿಸಿದರೆ ಸಹಿ ಹಾಕಿ. ಯಾವುದೇ ಪದ ಅಥವಾ ವಿಷಯದ ಕುರಿತು ಸಂದೇಹಗಳಿದ್ದರೆ ಬ್ಯಾಂಕ್‌ನ ಪ್ರತಿನಿಧಿ ಅಥವಾ ಸಂಬAಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಪರಿಹರಿಸಿಕೊಳ್ಳಿ.

ಸಾಲ ಪಡೆಯುವ ಮುನ್ನ : ಸಾಲ ಪಡೆಯುವ ಮುನ್ನ ಸಾಲದ ಮೊತ್ತವನ್ನು ಮರುಪಾವತಿಸುವ ಯೋಜನೆ ಇದ್ದರೆ ಒಳಿತು. ಸಾಲ ಮರುಪಾವತಿಯಾಗದಿದ್ದರೆ ಹಣಕಾಸು ಸಂಸ್ಥೆಯವರ ಕಿರುಕುಳ ಎದುರಿಸಬೇಕಾಗುತ್ತದೆ. ಅಲ್ಲದೇ ನೀಡಿದ ಜಾಮೀನುದಾರರು ತೊಂದರೆಗೆ ಒಳಗಾಗುತ್ತಾರೆ. ಅಲ್ಲದೇ ನೀಡಿದ ಮೇಲಾಧಾರ ಭದ್ರತೆಗೆ ನೀಡಿದ ಆಸ್ತಿಯೂ ಮುಟ್ಟುಗೋಲಾಗುವ ಸಂಭವ ಇರುತ್ತದೆ. ಆದ್ದರಿಂದ ಸಾಲ ಪಡೆಯುವಾಗಿನ ಖುಷಿಯು ತೀರಿಸುವಾಗಲೂ ಇದ್ದರೆ ಒಳಿತು. ಕೆಲವು ವ್ಯಕ್ತಿಗಳು ಮತ್ತು ಸಂಸ್ಥೆಗಳು ತಾವು ಶೈಕ್ಷಣಿಕ ಸಾಲ ಕೊಡಿಸುವುದಾಗಿ ನಿಮ್ಮಿಂದ ನಿಗದಿತ ಮೊತ್ತ ಕಸಿಯಬಹುದು. ಇಂತಹ ವ್ಯಕ್ತಿಗಳಿಂದ ಮೋಸಹೋಗಬೇಡಿ.

ವಿದ್ಯಾಲಕ್ಷಿö್ಮ ಪೋರ್ಟಲ್ : ಶೈಕ್ಷಣಿಕ ಸಾಲ ಪಡೆಯುವವರು ಬ್ಯಾಂಕ್‌ಗಳಿಗೆ ಅಲೆದಾಡುವುದನ್ನು ತಪ್ಪಿಸಲು ಮತ್ತು ಇನ್ನಿತರೇ ಸಾಲ ಸಂಬAಧಿತ ಮಾಹಿತಿಗಾಗಿ “ವಿದ್ಯಾಲಕ್ಷಿö್ಮ ಪೋರ್ಟಲ್” ರೂಪುಗೊಂಡಿದೆ. ಭಾರತೀಯ ಹಣಕಾಸು ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ(ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಹಾಗೂ ಭಾರತೀಯ ಬ್ಯಾಂಕುಗಳ ಸಂಘದ ಮಾರ್ಗದರ್ಶನದಲ್ಲಿ ಈ ಪೋರ್ಟಲ್ ಕಾರ್ಯನಿರ್ವಹಿಸುತ್ತದೆ. ಸಾಲಕ್ಕಾಗಿ ಅರ್ಜಿ ಸಲ್ಲಿಸಬಯಸುವವರಿಗೆ ಈ ಪೋರ್ಟಲ್ ಗೇಟ್ ವೇ ಇದ್ದಂತೆ. ಇದರಲ್ಲಿ ಭಾರತದ ಬಹುತೇಕ ಬ್ಯಾಂಕ್‌ಗಳ ಶೈಕ್ಷಣಿಕ ಸಾಲದ ಮಾಹಿತಿ ಇದೆ. ಸಾಲದ ಅರ್ಜಿ ಸಲ್ಲಿಕೆಯಿಂದ ಸಾಲ ಮಂಜೂರಾತಿ ಹಾಗೂ ಮರುಪಾವತಿವರೆಗಿನ ಎಲ್ಲಾ ಮಾಹಿತಿಯನ್ನು ಟ್ರಾö್ಯಕ್ ಮಾಡುವ ಸೌಲಭ್ಯವನ್ನು ಈ ಪೋರ್ಟಲ್ ಹೊಂದಿದೆ. ವಿವರಗಳಿಗೆ ತಿತಿತಿ.viಜಥಿಚಿಟಚಿಞshmi.ಛಿo.iಟಿ ನ್ನು ವೀಕ್ಷಿಸಿ.





ಮನೆಯಲ್ಲಿರಲಿ ಮಗುಸ್ನೇಹಿ ಕಲಿಕಾ ವಾತಾವರಣ

 ದಿನಾಂಕ 19-6-2019ರ ಪ್ರಜಾವಾಣಿ ಯಲ್ಲಿ ಪ್ರಕಟವಾದ ನನ್ನ ಬರಹ


ಮನೆಯಲ್ಲಿರಲಿ ಮಗುಸ್ನೇಹಿ ಕಲಿಕಾ ವಾತಾವರಣ



    ಶಿಕ್ಷಣ ಕ್ಷೇತ್ರದಲ್ಲಿ ಮಕ್ಕಳು ಪ್ರಮುಖ ಭಾಗೀದಾರರು. ಮಕ್ಕಳಿಗೆ ಅರ್ಥಪೂರ್ಣ ಶಿಕ್ಷಣವನ್ನು ಕೊಡಬೇಕಾದರೆ ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ಚರ್ಚೆ ಸಂವಾದಗಳು ನಡೆಯುವಾಗ ಮಕ್ಕಳ ವಿಚಾರ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತದೆ. ಮಕ್ಕಳ ಬಗೆಗಿನ ಕಲ್ಪನೆ, ಮಕ್ಕಳ ಸಾಮರ್ಥ್ಯಗಳನ್ನು ಅರ್ಥಮಾಡಿಕೊಳ್ಳುವುದು, ಮಕ್ಕಳ ಬೆಳವಣಿಗೆ ಹಾಗೂ ಕಲಿಕೆಯನ್ನು  ಪ್ರೇರೇಪಿಸುವ ಅಂಶಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. 

    ಮಗು ಕೇವಲ ಶಾಲೆಯಲ್ಲದೇ ಮನೆಯ ವಾತಾವರಣದಲ್ಲಿಯೂ ಕಲಿಯುತ್ತದೆ. ಮಗುವಿನ ಕಲಿಕಾ ವಾತಾವರಣವು ಮಗುವಿನ ತಕ್ಷಣದ ಸುತ್ತಮುತ್ತಲಿನ ವಾತಾವರಣದಲ್ಲಿ ನಡೆಯುವ ಅನೌಪಚಾರಿಕ ಕಲಿಕಾ ಪ್ರಕ್ರಿಯೆಗಳ ಮೇಲೆ ಅವಲಂಬಿತವಾಗಿರುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಎಲ್ಲಾ ಬದಲಾವಣೆಗಳು ಸಹ ಮಕ್ಕಳ ಮೇಲೆ ಗಂಭೀರವಾದ ಪರಿಣಾಮ ಬೀರುತ್ತಿವೆ. ಆದಕಾರಣ ಪಾಲಕರು ಮಗುವಿನ ಮಗುವಿನ ಕಲಿಕಾ ಪರಿಸರವನ್ನು ಅರ್ಥಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಬಹು ಮುಖ್ಯವಾಗಿ ಮಗುವಿನ ಬಾಲ್ಯವು ಹೆಚ್ಚು ಸಂಕೀರ್ಣವಾಗಿದ್ದು ಬದಲಾವಣೆಯಾಗುತ್ತಲೇ ಇದೆ. ಸಮಾಜದ ಎಲ್ಲಾ ಸಂಕೀರ್ಣ ಬದಲಾವಣೆಗಳು ಮಗುವಿನ ಕಲಿಕಾ ಸಾಮರ್ಥ್ಯ ಹಾಗೂ ಅನಾವರಣಗೊಳ್ಳುವ ಸಾಮರ್ಥ್ಯಗಳ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತವೆ. 

    ಮಗುವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ತ್ರಾಸದಾಯಕ ಕೆಲಸ. ಮಗುವೊಂದನ್ನು ಸಮಾಜದ ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದು ತುಂಬಾ ಕಷ್ಟದ ಕೆಲಸ. ಏಕೆಂದರೆ ಪ್ರತೀ ಮಗುವೂ ಅನನ್ಯ. ಪ್ರತೀ ಮಗುವಿನ ಕಲಿಕಾ ವಿಧಾನ, ವೇಗ ಮತ್ತು ಗ್ರಹಿಕೆಗಳು ವಿಭಿನ್ನವಾಗಿರುತ್ತವೆ. ಇದನ್ನು ಆಧರಿಸಿ ಮನೋವಿಜ್ಞಾನಿಗಳು ಅನೇಕ ಕಲಿಕಾ ಸಿದ್ದಾಂತಗಳನ್ನು ರೂಪಿಸಿದ್ದಾರೆ. 

ಮಗುಸ್ನೇಹಿ ವಾತಾವರಣ ಏಕೆ?

    ಮಗುವಿನ ಸಾಮರ್ಥ್ಯಗಳು, ಆಸಕ್ತಿಯ ಕ್ಷೇತ್ರಗಳು, ಕಲಿಕಾ ಶೈಲಿ ಮತ್ತು ಮಗುವಿನ ಅಗತ್ಯತೆಗಳು ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಆದ್ದರಿಂದ ಪಠ್ಯಕ್ರಮ, ಕಲಿಕಾ ವಿಧಾನಗಳು, ಕಲಿಕಾ ಚಟುವಟಿಕೆಗಳು, ಮತ್ತು ಕಲಿಕೆಯ ವಾತಾವರಣಗಳು ಮಗುಸ್ನೇಹಿಯಾಗಿದ್ದಾಗ ಕಲಿಕೆಯು ಸುಗಮವಾಗುತ್ತದೆ ಎಂಬುದು ಶಿಕ್ಷಣ ತಜ್ಞರ ಅಭಿಮತವಾಗಿದೆ. ರೂಸೋ, ಪ್ರೊಬೆಲ್, ಪೆಸ್ಟಾಲಜಿ, ಜಾನ್‌ಡ್ಯೂಯಿ, ಜಾನ್‌ಪಿಯಾಜೆ, ರವೀಂದ್ರನಾಥ ಠ್ಯಾಗೋರ್ ಮುಂತಾದ ಶಿಕ್ಷಣ ತಜ್ಞರು ಮಗುಸ್ನೇಹಿ ಕಲಿಕಾ ವಾತಾವರಣದ ಅಗತ್ಯತೆಯನ್ನು ಅರಿತು ಅದನ್ನು ತಮ್ಮ ಪ್ರಯೋಗಗಳಲ್ಲಿ ಸಾಧಿಸಿ ತೋರಿಸಿದ್ದಾರೆ. 

    ಮಗುಸ್ನೇಹಿ ವಾತಾವರಣವು ಮಗು ಸ್ವಂತAತ್ರವಾಗಿ ಕಲಿಕೆಯಲ್ಲಿ ತೊಡಗುವಂತೆ ಮಾಡುತ್ತದೆ. ಮಗುವಿನ ಭೌತಿಕ, ಬೌದ್ದಿಕ, ಸಾಮಾಜಿಕ ಮತ್ತು ನೈತಿಕ ಬೆಳವಣಿಗೆಗೆ ಆಧ್ಯತೆ ನೀಡುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿ. ಎಲ್ಲಾ ಆಯಾಮಗಳಲ್ಲಿ ಮಗು ಅಭಿವೃದ್ದಿ ಹೊಂದಿದಾಗ ಸರ್ವತೋಮುಖ ಬೆಳವಣಿಗೆಯಾಗಿದೆ ಎನ್ನುತ್ತೇವೆ. ಇದು ಮುಖ್ಯವಾಗಿ ಭಯರಹಿತ ಮುಕ್ತ ವಾತಾವರಣವನ್ನು ಅವಲಂಬಿಸಿದೆ. 

    ಮಕ್ಕಳಲ್ಲಿನ ಸಾಮಾನ್ಯ ಗುಣಲಕ್ಷಣಗಳೆಂದರೆ  ಮೇರೆ ಇಲ್ಲದ ಕುತೂಹಲ, ಸ್ವಾತಂತ್ರ‍್ಯದ ಹಂಬಲ, ಅನ್ವೇಷಣೆ ಅಥವಾ ಪ್ರಯೋಗ ನಡೆಸಬೇಕೆಂಬ ಅಗತ್ಯತೆ ಹಾಗೂ ಎಲ್ಲವನ್ನೂ ತಾನೇ ಮಾಡಬೇಕೆಂಬ ತುಡಿತ. ಮಗುವಿನ ಬಗ್ಗೆ ಪಾಲಕರಿಗೆ ಸೂಕ್ತ ಕಾಳಜಿ ಇರಬೇಕು. ಮಗು ಅನ್ವೇಷಣೆ ಮಾಡಲು, ತಾನೇ ಸ್ವತಃ ಕೆಲಸ ಕಾರ್ಯಗಳನ್ನು ಮಾಡಲು ಬಿಡಬೇಕು. ಮಗುವಿನ ಸಂಕಲ್ಪ ಶಕ್ತಿ ಹಾಗೂ ನಿರ್ಧಾರಗಳಿಗೆ ಮನ್ನಣೆ ನೀಡಬೇಕು. ಹಾಗೆಯೇ ಮಗುವಿನ ಸಾಮರ್ಥ್ಯದ ಬಗ್ಗೆ ಗೌರವ ಇರಬೇಕು. ಪಾಲಕರು ಮಕ್ಕಳಿಗೆ ಮುಕ್ತ ಅವಕಾಶ ಒದಗಿಸಬೇಕು ಮತ್ತು ಮಗುವು ಅಪಾಯಕಾರಿಯಲ್ಲದ ಸವಾಲುಗಳು ಮತ್ತು ಸಾಹಸಗಳಿಗೆ ಮಾತ್ರ ಕೈ ಹಾಕುವಂತೆ ನೋಡಿಕೊಳ್ಳಬೇಕು.  

    ಮನೆಯಲ್ಲದೆ, ಮಗುವಿಗೆ ದೊರೆಯುವ ಇನ್ನೊಂದು ಪರಿಸರವೆಂದರೆ ಶಾಲೆ.  ಮನೆಗೂ ಶಾಲೆಗೂ ವ್ಯತ್ಯಾಸವಿದೆ. ಶಾಲೆಯಲ್ಲಿ ಶಿಕ್ಷಕರ ಬೋಧನಾ ಶೈಲಿಗೂ, ಮನೆಯಲ್ಲಿ ಪಾಲಕರು ಹೇಳುವ ಶೈಲಿಗೂ ವ್ಯತ್ಯಾಸ ಇರಬಹುದು. ಆದರೆ ಶಾಲೆಯಲ್ಲಿನ ಕಲಿಕಾ ಪರಿಸರದಂತೆ ಮನೆಯಲ್ಲಿಯೂ ಕಲಿಕಾ ಪರಿಸರ ನಿರ್ಮಿಸಿದರೆ ಖಂಡಿತವಾಗಿ ಮಗುವು ಹೆಚ್ಚು ಆಸಕ್ತಿಯಿಂದ ಕಲಿಕೆಯಲ್ಲಿ ಮುನ್ನುಗ್ಗುತ್ತದೆ.  ಶಾಲೆಯಲ್ಲಿ ಶಿಕ್ಷಕರು ಮತ್ತು ಮಗುವಿನ ಸಂಬAಧಕ್ಕೂ, ಮನೆಯಲ್ಲಿನ ಮಕ್ಕಳು ಮತ್ತು ಹಿರಿಯರ ಸಂಬAಧಕ್ಕೂ ಬಹಳ ಭಿನ್ನತೆ ಇರುತ್ತದೆ.  ಅದೇ ರೀತಿ ಮಗುವಿನ ಬಗ್ಗೆ ಅವರು ತೋರುವ ಕಾಳಜಿಯೂ ಬಹಳ ಭಿನ್ನವಾಗಿರುತ್ತದೆ.  

    ಶಾಲೆಯಲ್ಲಿ ದೊರಕುವ ಸಮಯ ಮತ್ತು ಅವಕಾಶಗಳು ಸೀಮಿತ.  ಪ್ರತಿಯೊಂದು ಮಗುವು ಏನನ್ನು  ಅನ್ವೇಷಣೆ ಮಾಡಲು ಇಚ್ಛಿಸುತ್ತದೋ ಅದನ್ನೆಲ್ಲಾ  ಅನ್ವೇಷಿಸಲು ಅಥವಾ ಏನೇನು ಕಲಿಯಲು ಇಚ್ಛಿಸುತ್ತದೆಯೋ ಅದನ್ನು ಕಲಿಯಲು ಮನೆಯಲ್ಲಿ ಅವಕಾಶ ಮಾಡಿಕೊಡುವುದು ಸಾಧ್ಯವಿಲ್ಲ. ಶಾಲೆಯ ಸಂದರ್ಭದಲ್ಲಿ ಮಕ್ಕಳ ಗುಣಲಕ್ಷಣಗಳನ್ನು ಅರ್ಥೈಸಿಕೊಳ್ಳುವ ಹಿನ್ನಲೆಯನ್ನು ಪಾಲಕರು ಅರಿಯಬೇಕಿದೆ. ಆಗ ಮಾತ್ರ ಕೌಟುಂಬಿಕ ವಾತಾವರಣದಲ್ಲಿ ಮಗುಸ್ನೇಹಿ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ಕೆಳಗಿನ ಒಂದಿಷ್ಟು ತಂತ್ರಗಳನ್ನು ಮನೆಯಲ್ಲಿ ಅನುಸರಿಸುವ ಮೂಲಕ ಮಗುಸ್ನೇಹಿ ವಾತಾವರಣ ನಿರ್ಮಿಸಬಹುದು.

ಹೀಗಿರಲಿ ಶಾಲೆಯಲ್ಲಿ ಮಗುಸ್ನೇಹಿ ವಾತಾವರಣ

ಪ್ರತೀ ಕುಟುಂಬದಲ್ಲೂ ತರಬೇತಿ ಪಡೆದ ಮಕ್ಕಳ ಆಪ್ತ ಸಲಹೆಗಾರರಿರಬೇಕು. ಇವರು ಆ ಕುಟಂಬದ ಸದಸ್ಯರು ಅಗಿದ್ದರೆ ಒಳಿತು. ಮಗುವಿನ ಸಮಸ್ಯೆಯ ಕುರಿತು ಅಗತ್ಯವಿರುವ ಆಪ್ತ ಸಲಹೆ ನೀಡುವಂತಿರಬೇಕು. 

ಪಾಲಕರು ಆಗಾಗ್ಗೆ ಶಾಲೆಗೆ ಭೇಟಿ ನೀಡಬೇಕು. ಮಗುವಿನ ತರಗತಿಯ ಪ್ರಗತಿ ಮಾತ್ರವಲ್ಲದೇ ಸರ್ವಾಂಗೀಣ ಅಭಿವೃದ್ದಿಯ ಬಗ್ಗೆ ಶಿಕ್ಷಕರೊಂದಿಗೆ ಸಮಾಲೋಚನೆ ಮಾಡಬೇಕು. 

ಕುಟುಂಬದ ಅಭಿವೃದ್ದಿಗೆ ಸಂಬAಧಿಸಿದ ಕೌಟುಂಬಿಕ ಚರ್ಚೆಯಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಬೇಕು. ಇದರಿಂದ ಅವರಿಗೂ ಒಂದಿಷ್ಟು ಜವಾಬ್ದಾರಿಗಳು ಅರ್ಥವಾಗುತ್ತವೆ. ಜೊತೆಗೆ ಅವರ ಪಾತ್ರಗಳ ಸ್ಪಷ್ಟ ಅರಿವು ಉಂಟಾಗುತ್ತದೆ. 

ಕುಟುಂಬದಲ್ಲಿ ವಿಕಲ ಚೇತನ ಮಕ್ಕಳಿದ್ದರೆ ಅವರಿಗೆ ಸೂಕ್ತವಾದ ಮೂಲಸೌಕರ್ಯಗಳು ಹಾಗೂ ಅವರಿಗೆ ಅಗತ್ಯ ಪೀಠೋಪಕರಣ ಮತ್ತು ಕಲಿಕೋಪಕರಣಗಳು ಇರಬೇಕು. 

ಲಿಂಗ, ವಿಕಲತೆ, ಅಥವಾ ಕಾಯಿಲೆಗಳ(ಹೆಚ್.ಐ.ವಿ/ಏಡ್ಸ್) ಆಧಾರದ ಮೇಲೆ ಮಗುವನ್ನು ತಾರತಮ್ಯ ಮಾಡಬಾರದು. 

ಜೀವನ ಕೌಶಲ್ಯಗಳು ಶಿಕ್ಷಣದ ಮುಖ್ಯ ಭಾಗವಾಗಬೇಕು. ಅಂದರೆ ಆಗಾಗ ಮನೆಯಲ್ಲಿ ವೃತ್ತಿ ಕುಶಲತೆ ಬಗ್ಗೆ ಮಾಹಿತಿ ಮತ್ತು ತರಬೇತಿ ನೀಡಬೇಕು. ಆಗ ಶಿಕ್ಷಣವು ಬದುಕಿನ ಭಾಗವಾಗುತ್ತದೆ. 

ಮಕ್ಕಳಿಗೆ ಶಿಸ್ತಿನ ಹೆಸರಿನಲ್ಲಿ ಶಿಕ್ಷೆ ನೀಡುವುದನ್ನು ರದ್ದುಗೊಳಿಸಬೇಕು. ಮನೆಯಲ್ಲಿ ಭಯ ಮುಕ್ತ ವಾತಾವರಣ ನಿರ್ಮಾಣವಾಗಬೇಕು. ಸರಿ ತಪ್ಪುಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡುವಂತಿರಬೇಕು. 

ಮನೆಯಲ್ಲಿಯೂ ಒತ್ತಡ ರಹಿತ ವಾತಾವರಣ ನಿರ್ಮಿಸಬೇಕು. ಅಪಾಯಕಾರಿಯಲ್ಲದ ಸಂತಸದ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಅದರ ಮೂಲಕ ಕಲಿಕಾ ವಾತಾವರಣ ನಿರ್ಮಿಸಬೇಕು.

ಮಗುವಿನಲ್ಲಿ ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಬೇಕು. ಅದಕ್ಕಾಗಿ ಪೋಷಕರು ಪ್ರತಿದಿನ ನಿಗದಿತ ವೇಳೆಯಲ್ಲಿ ಮಗುವಿನೊಂದಿಗೆ ಬೆರೆಯುವ ಮೂಲಕ ಸಾಮರ್ಥ್ಯಗಳನ್ನು ವೃದ್ದಿಸಬೇಕು ಹಾಗೂ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು.

ನೈತಿಕತೆಯ ಪಾಠ ಮನೆಯಿಂದಲೇ ಪ್ರಾರಂಭವಾಗಬೇಕು. ಆದರೆ ಅದು ಒತ್ತಾಯಪೂರ್ವಕವಾಗಬಾರದು.

ಮಗುವಿಗೆ ಶೈಕ್ಷಣಿಕ ಹಾಗೂ ಮಾನಸಿಕ ಸ್ಥಿತಿಯನ್ನು ಉತ್ತಮ ಪಡಿಸಲು ಮಕ್ಕಳ ಪುಸ್ತಕಗಳಿರಬೇಕು.

ಯಾವುದೇ ಕಾರಣಕ್ಕೂ ಯಾವ ಮಗುವೂ ತಿರಸ್ಕೃತವಾಗಬಾರದು. ಪ್ರತೀ ಮಗುವಿನ ಭಾವನಾತ್ಮಕತೆಯನ್ನು ಗಟ್ಟಿಗೊಳಿಸಬೇಕು. 

ಮನೆಯಲ್ಲಿ ಅಥವಾ ಸಮುದಾಯದಲ್ಲಿ ಮಕ್ಕಳ ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು. ಹೆಣ್ಣುಮಕ್ಕಳಿಗೆ ರಕ್ಷಣೆಯ ಭರವಸೆ ಇರಬೇಕು. ಹದಿಹರೆಯದ ಮಕ್ಕಳು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಇರಬೇಕು.

ಏಕತಾನತೆ ಹೊಡೆದೋಡಿಸಲು ಮಕ್ಕಳಿಗೆ ವಿಭಿನ್ನ ಚಟುವಟಿಕೆಗಳಿರಬೇಕು. ಗಂಡು ಮಕ್ಕಳು ಅಡುಗೆ ಕೆಲಸ ಹಾಗೂ ಮನೆಕೆಲಸಗಳಲ್ಲಿ ಸಹಾಯ ಮಾಡುವ, ಹೆಣ್ಣು ಮಕ್ಕಳು ಹೊರಗಿನ ವ್ಯವಹಾರ ಅಥವಾ ಮಾರ್ಕೆಟ್‌ನಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡುವ, ತಂದೆಗೆ ಸಹಾಯ ಮಾಡುವ ಅಥವಾ ಇನ್ನಿತರೇ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ನೀಡಬೇಕು.

    ಒಟ್ಟಾರೆ ಹೇಳುವುದಾದರೆ ‘ಬೆತ್ತ ಬಳಸದೇ ಬಾಲ್ಯ ಉಳಿಸಿ’ ಎಂಬುದು ಕುಟುಂಬದ, ತಂದೆ ತಾಯಿಯರ ಅಥವಾ ಸಮುದಾಯದ ಘೋಷಣೆ ಮತ್ತು ಸಂದೇಶವಾಗಬೇಕು. ಆಗ ಮಾತ್ರ ಮಗುಸ್ನೇಹಿ ಸುಂದರ ವಾತಾವರಣ ನಿರ್ಮಾಣ ಮಾಡಲು ಸಾಧ್ಯ. ಆ ಮೂಲಕ ಮಗುವಿನ ಸಾಮರ್ಥ್ಯಗಳನ್ನು ಅಭಿವೃದ್ದಿಗೊಳಿಸಿ ಸರ್ವಾಂಗೀಣ ಬೆಳೆವಣಿಗೆ ಉಂಟು ಮಾಡಲು ಸಾಧ್ಯ. 





ತ್ರಿಪದಿಕವಿ ಸರ್ವಜ್ಞನನ್ನು ಉತ್ತುಂಗಕ್ಕೇರಿಸಿದ ರೆವೆರೆಂಡ್ ಉತ್ತಂಗಿ ಚನ್ನಪ್ಪನವರು.


 ಮೇ-2019ರ ಟೀಚರ್  ಮಾಸಪತ್ರಿಕೆಯಲ್ಲಿ ಪ್ರಕಟವಾದ ನನ್ನ ಬರಹ. 

 ತ್ರಿಪದಿಕವಿ ಸರ್ವಜ್ಞನನ್ನು ಉತ್ತುಂಗಕ್ಕೇರಿಸಿದ  ರೆವೆರೆಂಡ್ ಉತ್ತಂಗಿ ಚನ್ನಪ್ಪನವರು. 

ಅವು ಬಹುಬೆಲೆಯುಳ್ಳ ಜೀವನಾನುಭವದ ಸಂಪತ್ತುಗಳು. ನಿತ್ಯ ಜೀವನದ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲ ಮಾರ್ಗದರ್ಶಿ ಸೂತ್ರಗಳು. ಕೈಯೊಳಗಿನ ಆಪದ್ಧನ. ಸವಿಯನ್ನು ಉಣಬಡಿಸುವ ಪಕ್ವಾನ್ನ ಪರಮಾನ್ನಗಳು. ಇವು ಯಾವುವೆಂದು ಅರ್ಥವಾಗಲಲ್ಲವೇ? ಅವೇ ನಮ್ಮ ಸರ್ವಜ್ಞನ ವಚನಗಳು. ಸರ್ವಜ್ಞನ ವಚನಗಳಿಗೆ ಎಂತಹ ಮೋಹಕಶಕ್ತಿ ಇದೆ ಎಂದರೆ ಅದೊಂಥರಾ ಅಮಲು ಇದ್ದಂತೆ. ಓದುತ್ತಾ ಓದುತ್ತಾ ಅದರ ರಸಸ್ವಾದ ಗಳಿಸುತ್ತಾ ಹೋದರೆ ಇಡೀ ಜಗತ್ತನ್ನೇ ಮರೆಸುವ ಮತ್ತು ಜಗತ್ತನ್ನು ಪರಿಚಯಿಸುವ ಶಕ್ತಿ ಈ ವಚನಗಳಿಗೆ ಇದೆ ಎಂದರೆ ಅತಿಶಯೋಕ್ತಿ ಏನಲ್ಲ.

ಸರ್ವಜ್ಞನನ್ನು ಹಾಗೂ ಆತನ ವಚನಗಳನ್ನು ಕುರಿತು ಮೂಗು ಮುರಿದು ಮಾತನಾಡುವ ಕಾಲವೊಂದಿತ್ತು. ಆದರೆ ಇಂದು ಹಳ್ಳಿಯಿಂದ ಪಟ್ಟಣದ ಎಲ್ಲರ ಬಾಯಲ್ಲೂ ನಲಿದಾಡುತ್ತಿವೆ. ಎಲ್ಲರ ಮನೆಯ ಮಂತ್ರಾಕ್ಷತೆಗಳAತಾಗಿವೆ. 

ನಡೆವುದೊಂದೆ ಭೂಮಿ, ಕುಡಿವುದೊಂದೇ ನೀರು

ಸುಡುವಗ್ನಿಯೊಂದೇ ಇರುತಿರಲು, ಕುಲಗೋತ್ರ

ನಡುವೆಯೆತ್ತಣದು ಸರ್ವಜ್ಞ|| ಇಂತಹ ಮನಪರಿವರ್ತನೆಯ ವಚನಗಳ ಮೂಲಕ 

ನಮ್ಮಲ್ಲಿನ ದುಷ್ಟ ಮನೋಸ್ಥಿತಿಯನ್ನು ತಿದ್ದಲು ಸರ್ವಜ್ಞ ಪ್ರಯತ್ನಿಸಿದ. ಇಂತಹ ಅದೆಷ್ಟೋ ವಚನಗಳು ಇಂದು ನಮ್ಮ ನಾಲಿಗೆಯ ಮೇಲೆ ನಲಿದಾಡುತ್ತಿವೆ. ಸರ್ವಜ್ಞನ ವಚನಗಳನ್ನು ಕೇಳದ ಕಿವಿಗಳಿಲ್ಲ, ಮಾತುಗಳಲ್ಲಿ ಬಳಸದ ಭಾಷಣಕಾರನಿಲ್ಲ ಎಂಬAತಾಗಿದೆ. ಇಂತಹ ಮಹತ್ವವುಳ್ಳ ಸರ್ವಜ್ಞ ಮತ್ತು ಆತನ ವಚನಗಳು ಯಾರಿಗೂ ಪರಿಚಯವಿರದ ಕಾಲವೊಂದಿತ್ತು. ಅಜ್ಞಾತವಾಗಿದ್ದ ಅಂತಹ ಸರ್ವಜ್ಞನ ವಚನಗಳನ್ನು ದಶದಿಕ್ಕುಗಳಿಗೆ ಪಸರಿಸಿದ ಕೀರ್ತಿ ತಿರುಳ್‌ಗನ್ನಡ ತಿರುಕನೆಂದೇ ಖ್ಯಾತಿ ಪಡೆದ ರೆವೆರೆಂಡ್ ಉತ್ತಂಗಿ ಚೆನ್ನಪ್ಪನವರಿಗೆ ಸಲ್ಲುತ್ತದೆ.

ಮೂಲೆಗುಂಪಾಗಿದ್ದ ಸರ್ವಜ್ಞನ ವಚನಗಳನ್ನು ಹುಡುಕಿ ತಂದು ಕನ್ನಡದ ಸಿಂಹಾಸನದಲ್ಲಿ ಕುಳ್ಳಿರಿಸಿ, ಜಗತ್ತಿನಾದ್ಯಂತ ಮೆರೆಸಿದ ಉತ್ತಂಗಿಯವರ ಪ್ರಯತ್ನ ಪ್ರಶಂಸನೀಯ. ಸರಳ ಭಾಷೆ ಹಾಗೂ ವೈಚಾರಿಕ ಪ್ರಜ್ಞೆಯುಳ್ಳ ಸರ್ವಜ್ಞನ ತ್ರಿಪದಿಗಳಿಗೆ ಕ್ರೆöÊಸ್ತ ಮಿಶನರಿ ರೆವೆರೆಂಡ್ ಜೆ.ಜೆ.ರ‍್ನರ್‌ರವರು ಮನಸೋತಿದ್ದರು. ಅವರು ಉತ್ತಂಗಿ ಚೆನ್ನಪ್ಪನವರನ್ನು ಈ ಸಂಗ್ರಹ ಕಾರ್ಯದಲ್ಲಿ ತೊಡಗುವಂತೆ ಪ್ರೇರೇಪಣೆ ಮಾಡಿದ್ದು ಒಂದು ವಿಶಿಷ್ಠ ಸಂಗತಿ. 

ಮಹಾನ್ ಕಾರ್ಯಕ್ಕೆ ಪ್ರೇರಣೆ

    


ಸರ್ವಜ್ಞನನ್ನು ಕುರಿತು ರ‍್ನರ್ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಹೆಣಗಾಡಿದ ಸಂದರ್ಭವೇ ಉತ್ತಂಗಿಯವರು ಈ ಕೆಲಸದಲ್ಲಿ ತೊಡಗಲು ಪ್ರೇರಣೆಯಾಯಿತು. ಈ ಹಿನ್ನಲೆಯಲ್ಲಿ ಸರ್ವಜ್ಞನ ವಚನಗಳ ಅಭ್ಯಾಸಕ್ಕೆ ಉತ್ತಂಗಿಯವರು ಕೈಹಾಕಿದರು. 

ಒಮ್ಮೆ ಉತ್ತಂಗಿಯವರು ಮಹಾರಾಷ್ಟçದ ವಿಶನರಿ ನೆಲ್ಸನ್ ಫ್ರೇಜರ್ ಅವರ ಕಛೇರಿಗೆ ಹೋದರು. ಟೇಬಲ್ ಮೇಲಿದ್ದ ತುಕಾರಾಮನ ಅಭಂಗಗಳ ಎರಡು ಪುಸ್ತಕಗಳು ಇವರ ಗಮನ ಸೆಳೆದವು. ಮಹಾರಾಷ್ಟçದವರು ತುಕಾರಾಮನ ಹೆಸರನ್ನು ಜಗಜ್ಜಾಹೀರು ಮಾಡಿದಂತೆ ಕನ್ನಡಿಗರಾದ ನಾವು ಸರ್ವಜ್ಞನನ್ನು ಪ್ರಚುರ ಪಡಿಸಬೇಕೆಂಬ ಉದ್ದೇಶವೂ ಸೇರಿತು. ಅದಾಗಲೇ ನೆಲ್ಸನ್ ಫ್ರೇಜರ್ ಅವರು ಸರ್ವಜ್ಞನ ವಚನಗಳನ್ನು ಆಂಗ್ಲಭಾಷೆಗೆ ತರ್ಜುಮೆ ಮಾಡುವ ಕಾಯಕದಲ್ಲಿ ನಿರತರಾಗಿದ್ದರು. ಅನ್ಯದೇಶಿಯರಿಂದ ಸಾಧ್ಯವಾಗುತ್ತಿರುವ ಈ ಕಾರ್ಯವನ್ನು ನಾವೇಕೆ ಮಾಡಬಾರದು ಎಂಬ ಪ್ರಶ್ನೆ ಉತ್ತಂಗಿಯವರನ್ನು ಕಾಡತೊಡಗಿತು. ಹಾಗಾಗಿ ಕೂತಲ್ಲಿ, ನಿಂತಲ್ಲಿ, ಹೋದಲ್ಲಿ, ಬಂದಲ್ಲಿ, ಎಲ್ಲೆಲ್ಲೂ ಸರ್ವಜ್ಞ ಸದಾ ಕಾಡತೊಡಗಿದ.

ಉತ್ತಂಗಿಯವರಿಗೆ ತತ್ವಶಾಸ್ತçದಲ್ಲಿ ವಿಶೇಷ ಆಸಕ್ತಿ ಇತ್ತು. ಆದರೆ ಕೆಲವಾರು ವರ್ಷಗಳ ಬಳಿಕ ತತ್ವಶಾಸ್ತçದಲ್ಲಿ ಕ್ರಮೇಣವಾಗಿ ನಿರಾಸಕ್ತಿ ಉಂಟಾಗಿ, ಕೊನೆಗೆ ತಿರಸ್ಕಾರ ಭಾವನೆ ಮೂಡಿತು. ಇದು ಜೀವನದ ಜಿಗುಪ್ಸೆಗೂ ಕಾರಣವಾಯಿತು. ಇಂತಹ ಸಮಯದಲ್ಲಿಯೇ ರ‍್ನರ್‌ರವರು ಸರ್ವಜ್ಞನ ಜೀವನ ಹಾಗೂ ಕೃತಿಗಳ ಸಂಶೋಧನೆ ಮಾಡುವಂತೆ ಪ್ರೋತ್ಸಾಹಿಸಿದರು. ಇದು ಉತ್ತಂಗಿಯವರ ಜೀವನದ ಮಹಾನ್ ತಿರುವು ಎನ್ನಬಹುದು.

ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ

ಕೊಟ್ಟಿದ್ದು ಕೆಟ್ಟಿತೆನಬೇಡ, ಮುಂದೆ

ಕಟ್ಟಿಹುದು ಬುತ್ತಿ, ಸರ್ವಜ್ಞ || ಇಂತಹ ತರ್ಕಶಾಸ್ತç ಹಾಗೂ ತತ್ವಶಾಸ್ತç ಎರಡನ್ನೂ 

ತನ್ನ ವಚನಗಳಲ್ಲಿ ಬಳಸಿದ ಸರ್ವಜ್ಞನ ನಿಜಕ್ಕೂ ಜ್ಞಾನವನ್ನು ಮೆಚ್ಚಲೇಬೇಕು. ಇಂತಹ

ತರ್ಕವೇ ಉತ್ತಂಗಿಯವರನ್ನು ಉತ್ತುಂಗಕ್ಕೇರಿಸಿತು.

“ಭಗ್ನಾಶನಾಗಿ ಸಾಗುತ್ತಿದ್ದ ನನ್ನ ಜೀವನದ ಹಾದಿಯಲ್ಲಿ ಸರ್ವಜ್ಞನೆಂಬ ತಿರುಕನ ದರ್ಶನವಾಯಿತು. ಉಭಯತರ ಹಾಡು ಒಂದೇ ಎನಿಸಿತು. ಆಗ ನಾನು ಅವನಲ್ಲಿ ನನ್ನನ್ನು ಕಂಡೆ” ಎಂದು ಉತ್ತಂಗಿಯವರು ತಮ್ಮ ಜೀವನಚರಿತ್ರೆಯಲ್ಲಿ ದಾಖಲಿಸಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡ ಉತ್ತಂಗಿಯವರಿಗೆ ಸರ್ವಜ್ಞನ ವಚನಗಳನ್ನು ಹುಡುಕುವ ಜಾಡು ತಿಳಿಯದಿದ್ದರೆ ಇಂದು ಸರ್ವಜ್ಞನನಾಗಲೀ, ಉತ್ತಂಗಿ ಚೆನ್ನಪ್ಪನವÀರಾಗಲೀ ಮುನ್ನಲೆಗೆ ಬರುತ್ತಲೇ ಇರಲಿಲ್ಲ. ಇಬ್ಬರ ತಾತ್ವಿಕ ವಿಚಾರಗಳು, ಸ್ವಭಾವಗಳು ಪರಸ್ಪರ ಹೊಂದಾಣಿಕೆಯಾಗುತ್ತವೆ. ಇಬ್ಬರೂ ನಾಡಿನುದ್ದಕ್ಕೂ ಸಂಚರಿಸಿದವರು. 

ಹೆಚ್ಚಿದ ಹುಚ್ಚು

    


ಮೂಲೆಗುಂಪಾಗಿದ್ದ ಸರ್ವಜ್ಞನ ವಚನಗಳಿಗೆ ಅಂತರರಾಷ್ಟಿçÃಯ ಮನ್ನಣೆ ನೀಡುವ ಮಹದಾಸೆ ಉತ್ತಂಗಿಯವರಲ್ಲಿ ಮೂಡಿತು. ತೆಲುಗಿನಲ್ಲಿ ವೇಮನ, ತಮಿಳಿನಲ್ಲಿ ಅಮ್ಮಾಯಿ, ಮರಾಠಿಯಲ್ಲಿ ತುಕಾರಾಮನಿಗೆ ದೊರೆತ ಸ್ಥಾನಕ್ಕಿಂತಲೂ ಮಿಗಲಾದ ಸ್ಥಾನವನ್ನು ಕನ್ನಡದಲ್ಲಿ ಸರ್ವಜ್ಞನಿಗೆ ನೀಡಬೇಕೆಂದು ನಿಶ್ಚಯಿಸಿದರು. ಅದರ ಮೊದಲ ಭಾಗವಾಗಿ ವಚನಗಳನ್ನು ಆಂಗ್ಲಭಾಷೆಗೆ ತರ್ಜುಮೆ ಮಾಡಲು ಮುಂದಾದರು. 

ತರ್ಜುಮೆ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಉತ್ತಂಗಿಯವರಿಗೆ, ಮುದ್ರಿತ ವಚನಗಳಲ್ಲಿ ದೋಷವಿರುವುದು ದೃಷ್ಟಿಗೋಚರವಾಯಿತು. ಇಂತಹ ಅಶುದ್ದ ವಚನಗಳನ್ನು ಅನುವಾದಿಸಿದರೆ ದೋಷಗಳನ್ನು ಎತ್ತಿ ಹಿಡಿದಂತಾಗುತ್ತದೆ ಮತ್ತು ತಪ್ಪು ಸಂದೇಶ ರವಾನೆಯಾಗುತ್ತದೆ, ಅಲ್ಲದೇ ಸರ್ವಜ್ಞನಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದೆನಿಸಿ ಅನುವಾದ ಕಾರ್ಯವನ್ನು ಅಲ್ಲಿಗೆ ನಿಲ್ಲಿಸಿದರು. ಈ ಸಮಸ್ಯೆಗೆ ಪರಿಹಾರ ತಿಳಿದುಕೊಳ್ಳಲು ಕೆಲದಿನಗಳೇ ಬೇಕಾದವು. ಪರಿಹಾರಾರ್ಥವಾಗಿ ಮೂಲ ವಚನಗಳ ಸಂಶೋಧನೆ ಹಾಗೂ ಶುದ್ದೀಕರಣಕ್ಕೆ ಕೈ ಹಾಕಿದರು. ಕೆಲವು ತಿಂಗಳಲ್ಲಿ ಮುಗಿಯಬಹುದು ಎಂದುಕೊAಡಿದ್ದ ಕಾರ್ಯ ಕೆಲವು ವರ್ಷಗಳವರೆಗೂ ಸಾಗಿತು. 

ಮುದ್ರಿತ ವಚನಗಳಲ್ಲಿನ ದೋಷ ತಿದ್ದುವ ಕಾರ್ಯದ ಭಾಗವಾಗಿ ಮೂಲ ತಾಡವೋಲೆ ಪ್ರತಿಗಳನ್ನು ಹುಡುಕಿ ಹೊರಟರು. ಇದು ಸುಲಭ ಕಾರ್ಯವಾಗಿರಲಿಲ್ಲ. ಮನೆ, ಮಠ, ಊರು, ಕೇರಿ, ಪ್ರಾಂತ್ಯಗಳನ್ನು ಸುತ್ತಿದರೂ ಎಲ್ಲಿಯೂ ಮೂಲ ಪ್ರತಿಗಳು ದೊರೆಯದೇ ಹತಾಶರಾದರು. ಕನ್ನಡ ಪಸರಿಕೆಯ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದ ಅನೇಕ ವ್ಯಕ್ತಿಗಳು ಮತ್ತು ಕೆಲ ಸಂಘ ಸಂಸ್ಥೆಗಳಿಗೆ ಪತ್ರ ಬರೆದರು. ಇಲ್ಲೂ ಯಾವುದೇ ಮಾಹಿತಿ ದೊರೆಯಲಿಲ್ಲ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮರಳಿ ಯತ್ನವ ಮಾಡಿದರು. ಮದ್ರಾಸ್ ಮತ್ತು ಮೈಸೂರಿನ ಪ್ರಾಚ್ಯಕೋಶಗಾರಗಳಿಗೂ ಪತ್ರ ಬರೆದರು. ಉತ್ತಂಗಿ ಚೆನ್ನಪ್ಪನವರ ಕನ್ನಡದ ಕಳಕಳಿಯನ್ನು ಗಮನಿಸಿದ ಮದ್ರಾಸ್ ಮತ್ತು ಮೈಸೂರು ಪ್ರಾಚ್ಯಕೋಶಾಧಿಕಾರಿಗಳು ಸರ್ವಜ್ಞನ ವಚನಗಳುಳ್ಳ ತಾಳೆಗರಿಗಳ ಹಸ್ತಪ್ರತಿಗಳನ್ನು ಕರಾರಿನ ಮೇಲೆ ಕಳಿಸಿಕೊಟ್ಟರು. ಆಗ ಉತ್ತಂಗಿಯವರು ಸರ್ವಜ್ಞನೇ ದೊರೆತಷ್ಟು ಸಂತಸಗೊAಡರು. 

ದೋಷ ಹುಡುಕುವಲ್ಲಿ ಘಾಸಿಗೊಂಡ ಬದುಕು

ಸರ್ವಜ್ಞನ ಮೂಲ ವಚನಗಳನ್ನು ಪರಿಶೀಲಿಸಿದಾಗ, ಮುದ್ರಿತ ಹಾಗೂ ಮೂಲ ವಚನಗಳಲ್ಲಿ ಸಾಕಷ್ಟು ದೋಷ ಹಾಗೂ ವ್ಯತ್ಯಾಸಗಳಿರುವುದನ್ನು ಗಮನಿಸಿದರು. ಜೊತೆಗೆ ಅದುವರೆಗೂ ಅರೆಬರೆ ರೂಪದಲ್ಲಿ ದರ್ಶನವಾಗಿದ್ದ ಸರ್ವಜ್ಞ ಈಗ ಪರಿಪೂರ್ಣ ಪಂಡಿತನಾಗಿ ಗೋಚರಿಸಿದ.

ಆರು ಬೆಟ್ಟವನೊಬ್ಬ ಹಾರಬಹುದೆಂದರೆ

ಹಾರಬಹುದೆAದು ಎನಬೇಕು, ಮೂರ್ಖನೊಡ

ಹೋರಾಟ ಸಲ್ಲ ಸರ್ವಜ್ಞ|| ಇತರರ ಮಾತಿಗೆ ಬೆಲೆಕೊಡುತ್ತಾ, ವಿತಂಡವಾದಿಗಳ ವಿರುದ್ದ ಗುದ್ದಾಡಬಾರದು ಎಂಬುದನ್ನು ಮನಗಂಡಿದ್ದ ರೆವೆರೆಂಡ್ ಚೆನ್ನಪ್ಪನವರು ತಮ್ಮ ಪಾಡಿಗೆ ತಾವು ಸರ್ವಜ್ಞನ ವಚನಗಳನ್ನು ಸಂಗ್ರಹಿಸುವಲ್ಲಿ ತೊಡಗಿಕೊಂಡರು.

ಉತ್ತAಗಿಯವರು ಜೀವನವನ್ನು ಪಣಕ್ಕಿಟ್ಟು ವಚನಗಳನ್ನು ತಿದ್ದುವ ಕಾರ್ಯದಲ್ಲಿ ತೊಡಗಿಕೊಂಡರು. ಒಂದೆಡೆ ಬಡತನದ ಬದುಕು, ಇನ್ನೊಂದೆಡೆ ದೊಡ್ಡ ಕುಟುಂಬದ ಭಾರ, ಮತ್ತೊಂದೆಡೆ ಸಮಾಜದ ಕಲ್ಯಾಣ ಕಾರ್ಯಗಳು. ಇವೆಲ್ಲವುಗಳ ನಡುವೆ ಮಿಶನರಿಯ ಕರ್ತವ್ಯ. ಹಗಲಿನಲ್ಲಿ ಇವೆಲ್ಲವುಗಳನ್ನು ಸಂಭಾಳಿಸಿ, ರಾತ್ರಿ ವೇಳೆ ಮರ‍್ನಾಲ್ಕು ಗಂಟೆಗಳ ಕಾಲ ವಚನಗಳನ್ನು ತಿದ್ದುವ ಕೆಲಸದಲ್ಲಿ ನಿರತರಾದರು. ಈ ಮಧ್ಯೆ ತಂದೆಯನ್ನೂ ಕಳೆದುಕೊಂಡರು. ಓದು ಮತ್ತು ಬರಹ ದಿನೇ ದಿನಕ್ಕೂ ಅಧಿಕವಾಗತೊಡಗಿತು. ಹಗಲು ಸಂಸಾರಕ್ಕಾಗಿ ದುಡಿಮೆ. ರಾತ್ರಿ ಸರ್ವಜ್ಞನಿಗಾಗಿ ದುಡಿಮೆ. ಅವಿಶ್ರಾಂತ ದುಡಿಮೆಯಿಂದ ನಿದ್ರಾಭಂಗವಾಗಿ ಹಾಸಿಗೆ ಹಿಡಿಯುವ ಪರಿಸ್ಥಿತಿ ಒದಗಿಬಂತು. ದೇಹ ಸಂಪೂರ್ಣವಾಗಿ ದುರ್ಬಗೊಂಡಿತ್ತು. ಆಸ್ಪತ್ರೆಗೆ ಸೇರಬೇಕಾದುದು ಅನಿವಾರ್ಯವಾಗಿತ್ತು.

ಮಂದ ಬೆಳಕಿನಲ್ಲಿನ ಸತತ ಅಭ್ಯಾಸದಿಂದಾಗಿ ದೃಷ್ಟಿಯೂ ಕಡಿಮೆಯಾಗಿತ್ತು. ಅಲ್ಲದೇ ಕಣ್ಣಿನ ನರಗಳು ದುರ್ಬಲಗೊಂಡು ನೆವೆ ಪ್ರಾರಂಭವಾಗಿ ನೋವು ಹೆಚ್ಚಾಯಿತು. ದೃಷ್ಟಿ ಮರಳಿ ಬಾರದೇನೋ ಎಂಬಷ್ಟು ನೋವು ಹೆಚ್ಚಾಯಿತು. ಎಲ್ಲರಿಗೂ ಆತಂಕ ಶುರುವಾಯಿತು. ರೋಗ ಗುಣಮುಖವಾಗಲು ಒಂದೆರಡು ತಿಂಗಳುಗಳೇ ಬೇಕಾಯಿತು. ಆಸ್ಪತ್ರೆ ಸೇರಿದ್ದರಿಂದ ವಚನಗಳ ತಿದ್ದುಪಡಿ ಕಾರ್ಯ ಮೊಟಕುಗೊಂಡಿತು. ಇದು ಉತ್ತಂಗಿಯವರನ್ನು ತೀವ್ರವಾಗಿ ಬಾಧಿಸತೊಡಗಿತು. ಕೈಗೊಂಡ ಕಾರ್ಯ ವ್ಯರ್ಥವಾಯಿತಲ್ಲ ಎಂದು ಅನೇಕ ಸಲ ಹಳಹಳಿಸಿದರು. 

ಆಸ್ಪತ್ರೆಯಿಂದ ಮನೆಗೆ ಮರಳಿದ ನಂತರ ಪತ್ನಿಯ ಒತ್ತಾಸೆಯಿಂದ ರಾತ್ರಿ ನಿದ್ದೆಗೆಡುವ ಸಂಭವ ನಿಂತಿತು. ಇವರ ಈ ಮಹಾನ್ ಕಾರ್ಯದಲ್ಲಿ ಹೆಂಡತಿ, ಮಕ್ಕಳು ನೀಡಿದ ಸಹಕಾರವನ್ನು ಉತ್ತಂಗಿಯವರು ನೆನೆಯುತ್ತಲೇ ಇದ್ದರು. ಧಾರವಾಡದ ಟ್ರೆöÊನಿಂಗ್ ಕಾಲೇಜಿನಲ್ಲಿ ಶಿಕ್ಷಕಿಯಾಗಿದ್ದ ಹೆಂಡತಿ, ಬಿಡುವಿನ ವೇಳೆಯಲ್ಲಿ ತನ್ನ ಸಹೋದ್ಯೋಗಿ ಮತ್ತು ವಿದ್ಯಾರ್ಥಿಗಳನ್ನು ಕರೆತಂದು ವಚನಗಳ ಪರಿಶೋಧನೆ ಹಾಗೂ ಆಕಾರಾದಿ ಜೋಡಣೆಗೆ ಸಹಾಯ ಮಾಡುತ್ತಿದ್ದರು. ದ.ರಾ.ಬೇಂದ್ರೆ, ಸಿದ್ದರಾಮಪ್ಪ ಪಾವಟೆ, ಮ.ಪ್ರ.ಪೂಜಾರ, ಬೆನಗಲ್ ರಾಮರಾಯರು, ಮೂರ್ತಾಚಾರ ಕಟ್ಟಿ, ಚನ್ನಬಸಪ್ಪ ಶಿರಹಟ್ಟಿ, ನಾಮದಾರ ಬೆಳವಿ ಮುಂತಾದ ಪಂಡಿತ ಪಾಮರರ ಸಲಹೆ ಸೂಚನೆ ಅವಲೋಕನಗಳಿಗೆ ಒಳಪಟ್ಟ ಸರ್ವಜ್ಞನ ಗ್ರಂಥದ ಹಸ್ತಪ್ರತಿ ಸಿದ್ದವಾಯಿತು.

ಪುಟಿದೆದ್ದ ಚಿನ್ನ

ಹಸ್ತಪ್ರತಿಯೇನೋ ಸಿದ್ದವಾಯಿತು. ಆದರೆ ಅದನ್ನು ಮುದ್ರಿಸುವಷ್ಟು ಹಣಕಾಸಿನ ಶಕ್ತಿ ಉತ್ತಂಗಿಯವರಿಗೆ ಇರಲಿಲ್ಲ. ಆ ಕಾಲದ ಅನೇಕ ಪ್ರಕಾಶಕರನ್ನು ಭೇಟಿಯಾಗಿ ಪ್ರಕಟಣೆಗೆ ಭಿನ್ನಹ ಮಾಡಿಕೊಂಡರು. ಆದರೆ ಯಾವೊಬ್ಬ ಪ್ರಕಾಶಕರೂ ಪ್ರಕಟಿಸಲು ಮನಸ್ಸು ಮಾಡಲಿಲ್ಲ. ಈ ಗ್ರಂಥದ ಮಹತ್ವ ಅವರಿಗೆ ಅರ್ಥವಾಗಲಿಲ್ಲವೋ ಅಥವಾ ದೊಡ್ಡ ಮೊತ್ತ ಬಂಡವಾಳ ಹೂಡಿಕೆಯ ಕೊರತೆಯೋ ತಿಳಿಯಲಿಲ್ಲ. ಹಸ್ತಪ್ರತಿ ಸಿದ್ದವಾಗಿ ಎರಡು ವರ್ಷವಾದರೂ ಪ್ರಕಟಣೆಯ ಭಾಗ್ಯ ದೊರೆಯದಿರುವುದು ಉತ್ತಂಗಿಯವರನ್ನು ಮತ್ತಷ್ಟು ಚಿಂತೆಗೀಡುಮಾಡಿತು. ಮಿತ್ರರೊಬ್ಬರು ತೋರಿದ ಕೊನೆಯ ಹಾದಿಯಲ್ಲಿ ಧಾರವಾಡದ ಕರ್ನಾಟಕ ಪ್ರಿಟಿಂಗ್ ವರ್ಕ್ಸ್ನ ಯಶವಂತರಾಯ ಜಠಾರರು ಗ್ರಂಥವನ್ನು ಮುದ್ರಿಸಲು ಒಪ್ಪಿದರು.

600 ಪುಟಗಳ ಬೃಹದಾಕಾರದ ಗ್ರಂಥಾಲಯ ಆವೃತ್ತಿಯನ್ನು ಮುದ್ರಿಸಲಾಯಿತು. ಅಂತೂ ಇಂತೂ ಗ್ರಂಥ ಮುದ್ರಣವಾಯಿತಲ್ಲ ಎಂಬ ಖುಷಿ ಬಹಳ ದಿನ ಉಳಿಯಲಿಲ್ಲ. ಮತ್ತೊಂದು ಚಿಂತೆ ಪ್ರಾರಂಭವಾಯಿತು. ಮುದ್ರಣಗೊಂಡು ಎರಡು ವರ್ಷ ಕಳೆದರೂ ಗ್ರಂಥಗಳು ಮಾರಾಟವಾಗದೇ ಮೂಲೆಗುಂಪಾದವು. ಇದು ಉತ್ತಂಗಿಯವರನ್ನು ಹಾಗೂ ಜಠಾರರನ್ನು ಕಳವಳಕ್ಕೀಡು ಮಾಡಿತು. ಆದರೂ ಎದೆಗುಂದದೆ ಮುಂದಿನ ಕಾರ್ಯಕ್ಕೆ ತೊಡಗಿದರು. 600 ಪುಟಗಳುಳ್ಳ ಗ್ರಂಥಕ್ಕೆ ಟಿಪ್ಪಣಿ ಹಾಗೂ ವಿವರಣೆಯನ್ನೊಳಗೊಂಡ 300 ಪುಟಗಳನ್ನು ಹೆಚ್ಚುವರಿಯಾಗಿ ಜೋಡಿಸಲಾಯಿತು. ಆಗ ಅದೇನು ಮಾಯೆ ನಡೆಯಿತೋ ಯಾರಿಗೂ ತಿಳಿಯದು. ಒಮ್ಮೆಲೆ ಈ ಗ್ರಂಥಕ್ಕೆ ಎಲ್ಲೆಡೆಗಳಿಂದ ಬೇಡಿಕೆ ಬರತೊಡಗಿತು. ಪ್ರತಿಗಳು ಪುನಃ ಪುನಃ ಮುದ್ರಣಗೊಂಡವು. ಓದಿದ ಪ್ರತಿಯೊಬ್ಬರೂ ಉತ್ತಂಗಿ ಹಾಗೂ ಜಠಾರರನ್ನು ಮುಕ್ತ ಮನಸ್ಸಿನಿಂದ ಹೊಗಳಿದರು.

ಉತ್ತಂಗಿಯವರ ಕೆಲಸ ಇಲ್ಲಿಗೆ ನಿಲ್ಲಲಿಲ್ಲ. ತಮ್ಮ ಜೀವನದುದ್ದಕ್ಕೂ ಸರ್ವಜ್ಞನ ವಚನಗಳನ್ನು ಪರಿಷ್ಕರಿಸುವ, ವಿವಿಧ ಆವೃತ್ತಿಗಳನ್ನು ಪ್ರಕಟಿಸುವ ಕಾರ್ಯದಲ್ಲಿ ತೊಡಗಿಕೊಂಡರು. ಹಳ್ಳಿ ಪಟ್ಟಣಗಳನ್ನು ಸುತ್ತಿ ಸರ್ವಜ್ಞನ ವ್ಯಕ್ತಿತ್ವವನ್ನು ಆತನ ವಚನಗಳಿಂದಲೇ ವಿವರಿಸುತ್ತಾ ನಾಡಿನುದ್ದಕ್ಕೂ ಸಂಚರಿಸಿದರು. ಯಾವುದೇ ಸಭೆ, ಸಮಾರಂಭ, ಉತ್ಸವಗಳಲ್ಲಿ ಪಾಲ್ಗೊಂಡರೂ ಸರ್ವಜ್ಞ ಮತ್ತು ಆತನ ವಚನಗಳೇ ಅವರ ಭಾಷಣದ ವಿಷಯವಾಗಿರುತ್ತಿತ್ತು. ದಿನಗಟ್ಟಲೇ ಬೇಸರವಾಗದಂತೆ ಸರ್ವಜ್ಞನ ಬಗ್ಗೆ ಮಾತನಾಡುವಷ್ಟು ವಿಷಯ ಅವರ ಆಂತರ್ಯದಲ್ಲಿ ಅಡಗಿತ್ತು. ಸರ್ವಜ್ಞನ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಹಾಗೂ ಬರೆಯುವ ಯೋಗ್ಯತೆ ಇದ್ದದ್ದು ಒಬ್ಬರಿಗೆ ಮಾತ್ರ. ಅದು ರೆವೆರೆಂಡ್ ಉತ್ತಂಗಿ ಚೆನ್ನಪ್ಪನವರು ಎನ್ನುವುದು ಕನ್ನಡ ಸಾರಸತ್ವ ಲೋಕದ ಅಭಿಮತವಾಗಿತ್ತು.

ಏಳು ಕೋಟಿಯೆ ಕೋಟಿ, ಏಳು ಲಕ್ಷವೇ ಲಕ್ಷ

ಏಳು ಸಾವಿರದ ಎಪ್ಪತ್ತು ವಚನಗಳ

ಹೇಳಿದನು ಕೇಳ ಸರ್ವಜ್ಞ || ಎಂಬಲ್ಲಿ ಸರ್ವಜ್ಞ ರಚಿಸಿದ ವಚನಗಳ ಸಂಖ್ಯೆ ತಿಳಿಯುತ್ತದೆ. ಚೆನ್ನಪ್ಪನವರು ಈ ಕಾರ್ಯ ಕೈಗೆತ್ತಿಕೊಳ್ಳದೇ ಹೋಗಿದ್ದರೆ ಇಷ್ಟೊಂದು ವಚನಗಳು ದರ್ಶನ ಹಾಗೂ ಶ್ರವಣ ಭಾಗ್ಯ ನಮಗೆ ದೊರೆಯುತ್ತಿರಲಿಲ್ಲ ಅಲ್ಲವೇ?


    ಶಾರೀರಿಕ ಹಾಗೂ ಮಾನಸಿಕ ಶ್ರಮವನ್ನು ಪರಿಗಣಿಸದೇ ಉತ್ತಂಗಿಯವರು ಸರ್ವಜ್ಞನ ವಚನಗಳನ್ನು ಬೆಳಕಿಗೆ ತಂದರು. ಇಂದು ಸರ್ವಜ್ಞನ ಸೊಲ್ಲು ಸರ್ವರ ನಾಲಿಗೆಯಲ್ಲಿ ನಲಿಯುವಂತೆ ಮಾಡುವಲ್ಲಿ ಉತ್ತಂಗಿಯವರ ಶ್ರಮ ಶ್ಲಾಘನೀಯ. 





ಗಿರಿಕಣಿವೆಗಳ ವಗಮೋನ್

ದಿನಾಂಕ  02-05-2019 ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.


ಗಿರಿಕಣಿವೆಗಳ ವಗಮೋನ್


    ವಿಸ್ತಾರವಾದ ಹುಲ್ಲುಗಾವಲು, ಆಳವಾದ ಕಣಿವೆ, ದಟ್ಟವಾದ ಪೈನ್ ಮರದ ಕಾಡು, ಬೆಟ್ಟಕ್ಕೆ ಹಸಿರು ಚಾದರ ಹೊದಿಸಿದ ಚಹಾ ತೋಟಗಳು, ರಮಣೀಯ ಜಲಪಾತಗಳು ಬೇಸಿಗೆಯಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಇವೆಲ್ಲವೂ ಒಂದೇ ತಾಣದಲ್ಲಿ ಸಿಗುವಂತಿದ್ದರೆ ಎಂತಾ ಮಜಾ ಅಲ್ಲವೇ? ಹೌದು, ಅಂತಹದ್ದೊAದು ತಾಣ ಕೇರಳದಲ್ಲಿದೆ. ‘ಸ್ವರ್ಗದ ತುಣುಕು’ ಎಂದೇ ಹೆಸರುವಾಸಿಯಾದ ವಗಮೋನ್‌ನಲ್ಲಿ ಇವೆಲ್ಲವೂ ಲಭ್ಯ ಇವೆ. 

ವಗಮೋನ್ ಕೇರಳದ ಕೊಟ್ಟಾಯಂ ಜಿಲ್ಲೆಯ ಪೆರ್ಮಡೆ ತಾಲೂಕಿನಲ್ಲಿದೆ. ಮೀನಚಲ್ ಮತ್ತು ಕಾಂಜಿರಪಲ್ಲಿ ತಾಲೂಕಿನ ಗಡಿಭಾಗದವರೆಗೂ ಚಾಚಿಕೊಂಡ ಗಿರಿಧಾಮವಾಗಿದೆ. ಅಂತರರಾಷ್ಟಿçÃಯ 50 ಅತ್ಯಾಕರ್ಷಕ ಗಿರಿಧಾಮಗಳಲ್ಲಿ ವಗಮೋನ್ ಒಂದಾಗಿದೆ. ಸಮುದ್ರ ಮಟ್ಟದಿಂದ 1100 ಮೀಟರ್ ಎತ್ತರದಲ್ಲಿರೂ ಅತ್ಯಂತ ಪ್ರಶಾಂತವಾದ ಹಾಗೂ ತಂಪಾದ ಪ್ರದೇಶವಾಗಿದೆ. ಬಿರುಬೇಸಿಗೆಯಲ್ಲೂ ಸಹ 10 ರಿಂದ 230 ಉಷ್ಣಾಂಶ ಮಾತ್ರ ಹೊಂದಿದೆ. ಹಾಗಾಗಿ ಇದನ್ನು ‘ಏಷ್ಯಾದ ಸ್ಕಾಟ್‌ಲ್ಯಾಂಡ್’ ಎಂದೂ ಕರೆಯುತ್ತಾರೆ. 

ವಗಮೋನ್‌ಗೆ ಭೇಟಿ ನೀಡಲು ಹಲವು ಕಾರಣಗಳಿವೆ. ಒಂದೆಡೆ ನೈಸರ್ಗಿಕ ತಾಣವಾಗಿ, ಗುಡ್ಡ ಬೆಟ್ಟಗಳ ಸ್ಥಳವಾಗಿ, ನಿಸರ್ಗ ರಮಣೀಯ ಕಣಿವೆಗಳಿಂದ, ಸುಂದರವಾದ ಜಲಪಾತಗಳಿಂದ ಪ್ರವಾಸಿಗರನ್ನು ಆಕರ್ಷಿಸಿದರೆ ಮತ್ತೊಂದೆಡೆ ಟ್ರಕ್ಕಿಂಗ್, ಪ್ಯಾರಾಗ್ಲೆöÊಡಿಂಗ್, ಪರ್ವತಾರೋಹಣ, ರಾಕ್ ಕ್ಲೆöÊಂಬಿAಗ್‌ನAತಹ ಸಾಹಸ ಕ್ರೀಡೆಗಳ ತಾಣವಾಗಿಯೂ ಅದು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಪ್ರವಾಸೋಧ್ಯಮ ಇಲಾಖೆಯು ಇಲ್ಲಿ ಪ್ರತಿವರ್ಷ ಅಂತರಾಷ್ಟಿçÃಯ ಪ್ಯಾರಾಗ್ಲೆöÊಡಿಂಗ್ ಉತ್ಸವವನ್ನು ಆಯೋಜಿಸುತ್ತದೆ. ಆ ಸಂದರ್ಭದಲ್ಲಿ ವಗಮೋನ್‌ಗೆ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ.

ವೆಗಮೋನ್ ಬೆಟ್ಟವನ್ನು ಲೆಮೆನ್ ಗ್ರಾಸ್ ಆವರಿಸಿಕೊಂಡಿದ್ದು ನೋಡಲು ಅತ್ಯಾಕರ್ಷಕವಾಗಿ ಕಾಣುತ್ತದೆ. ಮುಂಜಾನೆಯ ಮಂಜಿನಲ್ಲಿ ಸೂರ್ಯೋದಯದ ಸೊಬಗು ಒಂದು ರೀತಿಯಾದರೆ, ಸಂಜೆಯ ಸೂರ್ಯಾಸ್ತ ಮತ್ತೊಂದು ವೈಭವದ ಮೆರಗನ್ನು ನೀಡುತ್ತದೆ. ಮಧ್ಯಾಹ್ನ ಬಿಸಿಲಿಗೆ ಇಲ್ಲಿನ ಮರ್ಮಲಾ ಜಲಪಾತದ ಜಲಕ್ರೀಡೆ ದೇಹ ಮತ್ತು ಮನಸ್ಸಿಗೆ ತಂಪೆರೆಯುತ್ತದೆ.  ಹಾಗಾಗಿ ಇಡೀ ದಿನದ ಪ್ರವಾಸಕ್ಕೆ ವೆಗಮೋನ್ ಹೇಳಿ ಮಾಡಿಸಿದಂತಹ ತಾಣ. 

ಒಂದಿಷ್ಟು ಮುಂಚಿತವಾಗಿ ಸರಿಯಾಗಿ ಪ್ಲಾನ್ ಮಾಡಿಕೊಂಡರೆ ಅಕ್ಕಪಕ್ಕದ ಸಾಕಷ್ಟು ಸ್ಥಳಗಳನ್ನು ಸುತ್ತಾಡಬಹುದು. ಅದಕ್ಕೆಂದೇ ಅಲ್ಲಿ ಜೀಪ್ ಸಫಾರಿ ವ್ಯವಸ್ಥೆ ಇದೆ. ಬೆಳಿಗ್ಗೆ 7.30ಕ್ಕೆ ವೆಗಮೋನ್ ಬಸ್ ನಿಲ್ದಾಣದಿಂದ ಜೀಪ್ ಸಫಾರಿ ಪ್ರಾರಂಭವಾಗುತ್ತದೆ. ಸಂಜೆ 6 ಗಂಟೆಗೆ ಪುನಃ ನಿಮ್ಮನ್ನು ಅದೇ ಸ್ಥಳಕ್ಕೆ ತಂದು ನಿಲ್ಲಿಸುತ್ತದೆ. ಈ ಸಫಾರಿಯಲ್ಲಿ ನೀವು ಪ್ರಮುಖವಾಗಿ ವಗಮೋನ್, ಪಾಲೋಕೋಕಂ ಪ್ಯಾರಾ, ಸೂಯಿಸೈಡ ಪಾಯಿಂಟ್, ತಾಂಗಲ್ ಪ್ಯಾರಾ, ಮುಂಡಕ್ಕಯA ವಾಚ್ ಟವರ್, ಕುರಿಸುಮಾಲಾ ಆಶ್ರಮ, ಮುರುಗನ್ ಮಾಲಾ ಮತ್ತು ಉಲುಪ್ಪುನಿಗಳನ್ನು ಸುತ್ತಾಡಬಹುದು. ಈ ತಿರುಗಾಟದಲ್ಲಿ ಕಾಫಿ, ಟೀ ತೋಟಗಳ ಜೊತೆಗೆ ಪೈನ್ ಮರಗಳ ಸುಂದರ ಅರಣ್ಯ ಮನಸ್ಸಿಗೆ ಮುದನೀಡುತ್ತದೆ.

ವಗಮೋನ್‌ನ ಬಳಿಯ ತಾಂಗಲ್ ಪ್ಯಾರಾ ಪ್ರಸಿದ್ದ ಸೂಫಿ ಸಂತ ಹಸ್ರತ್ ಶೇಖ್ ಪರೀದುದ್ದೀನ್ ಅವರ ವಿಶ್ರಾಂತಿ ತಾಣವಾಗಿದ್ದು, ಈಗ ಅದು ಪ್ರಸಿದ್ದ ತೀರ್ಥಯಾತ್ರ ಸ್ಥಳವಾಗಿದೆ. ವಗಮೋನ್ ಸರೋವರವು ಬೋಟಿಂಗ್ ಮತ್ತು ರೋಯಿಂಗ್‌ನAತಹ ಚಟುವಟಿಕೆಗಳಿಂದ ಯುವಕರನ್ನು ಆಕರ್ಷಿಸುತ್ತದೆ. 

ಮಕ್ಕಳ ಕಲಿಕೆಗಂತೂ ವಗಮೋನ್ ಸಾಕಷ್ಟು ಮಾಹಿತಿ ಒದಗಿಸುವ ಆಗರವಾಗಿದೆ. ಹೊಸ ನಗರಗಳ ಸಂಸ್ಕೃತಿ, ವಿವಿಧ ಜಾತಿಯ ಕಾಡಿನ ಮರಗಳು, ಹುಲ್ಲುಗಳು, ಪ್ರಾಣಿ ಪಕ್ಷಿಗಳು, ಕೀಟಗಳು ಮಕ್ಕಳ ಕಲಿಕೆಗೆ ಸಾಕಷ್ಟು ಮಾಹಿತಿ ಒದಗಿಸುತ್ತವೆ. 

ಹೋಗುವುದು ಸುಲಭ : ವಗಮೋನ್ ಕೊಟ್ಟಾಯಂನಿAದ 65 ಕಿ.ಮೀ ಮತ್ತು ಕೊಚ್ಚಿಯಿಂದ 93 ಕಿ.ಮೀ ದೂರದಲ್ಲಿದೆ. ವಗಮೋನ್‌ಗೆ ಸಾರ್ವಜನಿಕ ಹಾಗೂ ಖಾಸಗೀ ವಾಹನಗಳ ವ್ಯವಸ್ಥೆ ಇದೆ. ಅಲ್ಲದೇ ಸಮೀಪದಲ್ಲಿ ಸಾಕಷ್ಟು ಸರಕಾರಿ ಹಾಗೂ ಖಾಸಗೀ ರೆಸ್ಟೋರೆಂಟ್‌ಗಳೂ ಲಭ್ಯ ಇವೆ. ಅಲ್ಲಿ ಉತ್ತರ ಭಾರತ ಹಾಗೂ ದಕ್ಷಿಣ ಭಾರತೀಯ ಊಟ ಲಭ್ಯ ಇರುತ್ತದೆ.




ಪರಿಭಾವನಾತ್ಮಕ(ಲೆಟೆಂಟ್) ಕಲಿಕೆ

 

ದಿನಾಂಕ  01-05-2019ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಪರಿಭಾವನಾತ್ಮಕ(ಲೆಟೆಂಟ್) ಕಲಿಕೆ : ಕಲಿಕೆಯ ಪ್ರದರ್ಶನ ರೂಪ

ಎರಡನೇ ತರಗತಿಯಲ್ಲಿ ಓದುವ ರವಿ ಪ್ರತಿದಿನವೂ ತಂದೆಯ ಬೈಕ್‌ನಲ್ಲಿ ಶಾಲೆಗೆ ಹೋಗಿಬರುತ್ತಾನೆ. ಹೀಗಾಗಿ ಮನೆ ಹಾಗೂ ಶಾಲೆಯ ದಾರಿಯ ಕಲಿಕೆಯಾಗುತ್ತದೆ. ಒಂದು ದಿನ ಅರ್ಜಂಟಾಗಿ ಬೇರೆ ಊರಿಗೆ ಹೋಗಬೇಕಾಯಿತು. ಆಗ ರವಿ ಅನಿವಾರ್ಯವಾಗಿ ಒಬ್ಬನೇ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗಬೇಕಾಯಿತು. ಬೈಕಿನಲ್ಲಿ ಹೋಗುತ್ತಿದ್ದ ದಾರಿಯಲ್ಲಿಯೇ ನಡೆಯುತ್ತಾ ಶಾಲೆ ಸೇರಿದ. ಏಳನೇ ತರಗತಿ ಓದುವ ಸವಿತ ದಿನವೂ ಟಿ.ವಿ.ಯಲ್ಲಿ ಪ್ರಸಾರವಾಗುವ ಹಾಡುಗಳನ್ನು ಕೇಳುತ್ತಾ ಕಲಿತ್ತಿದ್ದಾಳೆ. ಶಾಲೆಯಲ್ಲಿ ಶಿಕ್ಷಕರ ಒತ್ತಾಯಕ್ಕೆ ಹಾಡಿದ ಸವಿತ ಹಾಡುಗಾರಿಕೆಯಲ್ಲಿ ಪ್ರಥಮ ಶ್ರೇಣಿ ಪಡೆಯುತ್ತಾಳೆ.

ರವಿಯ ಶಾಲಾ ದಾರಿ ಮತ್ತು ಸವಿತಳ ಹಾಡಿನ ಕಲಿಕೆ ಇಲ್ಲಿ ಉದಾಹರಣೆ ಮಾತ್ರ. ಮಕ್ಕಳು ಹೀಗೆ ತಮ್ಮಷ್ಟಕ್ಕೆ ತಾವೇ ಅನೇಕ ಅಂಶಗಳನ್ನು ಕಲಿಯುತ್ತಲೇ ಇರುತ್ತಾರೆ. ಇಂತಹ ಕಲಿಕೆಯನ್ನು ಪರಿಭಾವನಾತ್ಮಕ ಕಲಿಕೆ ಎನ್ನಲಾಗುತ್ತದೆ. ಈ ಕಲಿಕೆಯ ಪ್ರದರ್ಶನಕ್ಕೆ ಬಾಹ್ಯ ಪ್ರಚೋದನೆಯ ಅಗತ್ಯವಿರುತ್ತದೆ. ಅದೆಷ್ಟೋ ಬಾರಿ ಕಲಿಕೆಯನ್ನು ಪ್ರದರ್ಶಿಸುವ ಅಥವಾ ಪ್ರಸ್ತುತಿ ಪಡಿಸುವ ಅವಕಾಶವೇ ದೊರೆಯುವುದೇ ಇಲ್ಲ. ಹಾಗಾಗಿ ಅದು ಶಾಶ್ವತ ಕಲಿಕೆಯಾಗಿ ಪರಿವರ್ತನೆಗೊಳ್ಳುವುದೇ ಇಲ್ಲ.  

ಪರಿಭಾವನಾತ್ಮಕ ಕಲಿಕೆ: ಲೆಟೆಂಟ್ ಲರ್ನಿಂಗ್ ಎಂದು ಕರೆಯಲ್ಪಡುವ ಇದೂ ಸಹ ಕಲಿಕೆಯ ಒಂದು ರೂಪವಾಗಿದ್ದು, ತಕ್ಷಣದ ಪ್ರತಿಕ್ರಿಯೆಯಾಗಿ ಪ್ರಕಟಗೊಳ್ಳುವುದಿಲ್ಲ. ಬಾಹ್ಯ ಪ್ರಚೋದನೆಯಿಲ್ಲದೇ ಈ ಕಲಿಕೆ ಹೊರಬೀಳುವುದೇ ಇಲ್ಲ. ಮೇಲ್ನೋಟಕ್ಕೆ ಕಲಿಕೆ ಕಾಣುವುದಿಲ್ಲ. ಮಗು ಸಾಮಾನ್ಯ ನಡವಳಿಕೆಯಲ್ಲಿ ಈ ಕಲಿಕೆಯನ್ನು ಹೊರಹಾಕುವುದಿಲ್ಲ. ಇದಕ್ಕೆ ಸಾಕಷ್ಟು ಪ್ರೇರಣೆಯ ಅಗತ್ಯವಿದೆ.

ಬಲವಾದ ಬಲವರ್ಧನೆಯನ್ನು ನೀಡಿದಾಗ ಮಾತ್ರ ತಾನೇ ತಾನಾಗಿ ಸ್ಪಷ್ಟವಾಗಿ ಕಾಣುವ ಕಲಿಕೆಯೇ ಪರಿಭಾವನಾತ್ಮಕ ಕಲಿಕೆ. ಇದು ಸಂಪೂರ್ಣವಾಗಿ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವ ಮೂಲಕ ನಡೆಯುವ ಕಲಿಕೆಯಾಗಿದೆ. ಶೈಕ್ಷಣಿಕ ಮನೋವಿಜ್ಞಾನದ ಪ್ರಕಾರ ಇದನ್ನು ಸುಪ್ತ ಕಲಿಕೆ ಎಂದೂ ಕರೆಯಲಾಗುತ್ತದೆ. ಕಲಿಕಾರ್ಥಿಗೆ ಬಾಹ್ಯ ಪ್ರೋತ್ಸಾಹ ನೀಡಿದಾಗ ಮಾತ್ರ ತನ್ನ ಕಲಿಕೆಯನ್ನು ಪ್ರದರ್ಶಿಸಲು ಮುಂದಾಗುತ್ತಾನೆ. ಇದು ಮಗುವಿನ ಆಂತರಿಕ ಜ್ಞಾನದ ಪ್ರತೀಕವಾಗಿದೆ. ಉದಾಹರಣೆಗೆ ಒಂದು ಮಗು ಗಣಿತದ ಸಮಸ್ಯೆಯನ್ನು ಹೇಗೆ ಬಿಡಿಸಬೇಕೆಂದು ಕಲಿಯುತ್ತದೆ. ಅದೇ ಸಮಸ್ಯೆಯನ್ನು ಬೋರ್ಡ್ ಮೇಲೆ ಬಿಡಿಸಲು ತಿಳಿಸದಾಗ ಬಿಡಿಸಲು ಹಿಂಜರಿಯುತ್ತದೆ. ಆದರೆ ಮಗುವಿಗೆ ವಿವಿಧ ರೀತಿಯಲ್ಲಿ ಬಲವರ್ಧನೆ ನೀಡಿದಾಗ ಮಾತ್ರ ತನ್ನ ಕಲಿಕೆಯನ್ನು ಬಹಿರಂಗಪಡಿಸುತ್ತದೆ. ಕೆಲವು ಮಕ್ಕಳು ಹೆತ್ತವರ ಕಾರ್ಯಗಳನ್ನು ಗಮನಿಸುವುದರ ಮೂಲಕ ಕಲಿಯುತ್ತಾರೆ. ಆದರೆ ಬಲವಾದ ಪ್ರೇರಣೆ ಮತ್ತು ಅಗತ್ಯತೆ ಇದ್ದಾಗ ಮಾತ್ರ ಅಂತಹ ಕಲಿಕೆಯನ್ನು ಪ್ರದರ್ಶಿಸುತ್ತಾರೆ. 

ಎಡ್ವರ್ಡ್ ಟೋಲ್ಮನ್ ಎಂಬುವವರು ಮೊದಲ ಬಾರಿಗೆ ಈ ಕಲಿಕೆಯನ್ನು ಪತ್ತೆ ಹಚ್ಚುತ್ತಾರೆ. ಇಲಿಗಳ ಮೇಲೆ ನಡೆಸಿದ ಪ್ರಯೋಗದ ನಂತರ ಮನುಷ್ನ ಕಲಿಕೆಯನ್ನು ಸಮೀಕರಿಸಿ ಇಂತಹ ಕಲಿಕೆಯನ್ನು ಸಾಬೀತುಪಡಿಸಿದರು.

ಲೇಟೆಂಟ್ ಲರ್ನಿಂಗ್ ಏಕೆ ಮುಖ್ಯ?: ಬಹುತೇಕ ಸಂದರ್ಭಗಳಲ್ಲಿ ಮಗುವಿಗೆ ತನ್ನ ಕಲಿಕೆಯನ್ನು ಪ್ರದರ್ಶಿಸಲು ಅವಕಾಶವೇ ಇರುವುದಿಲ್ಲ. ಅದು ಆಂತರಿಕ ರೂಪದಲ್ಲಿ ಹಾಗೇ ಹುದುಗಿರುತ್ತದೆ. ಕಲಿಕೆಯನ್ನು ಪ್ರದರ್ಶಿಸುವ ಅವಕಾಶ ದೊರೆತಾಗ ತಕ್ಷಣವೇ ಪ್ರದರ್ಶಿಸುವುದಿಲ್ಲ. ಯಾವಾಗ ಬಾಹ್ಯವಾಗಿ ಪ್ರೇರಣೆ ದೊರೆಯುತ್ತದೆಯೋ ಆಗ ಮಾತ್ರ ಮಗು ಕಲಿಕೆಯನ್ನು ಪ್ರದರ್ಶಿಸಲು ಮುಂದಾಗುತ್ತದೆ. 

ಬಹುತೇಕ ವೇಳೆ ಕಲಿಕಾ ಪ್ರಕ್ರಿಯೆಯ ಬಗ್ಗೆ ನಾವು ಯೋಚಿಸುವಾಗ ತಕ್ಷಣದ ಪ್ರದರ್ಶನವನ್ನು ಬಯಸುತ್ತೇವೆ. ಇಂತಹ ವೇಳೆ ಪ್ರದರ್ಶಿತಗೊಂಡ ಕಲಿಕೆ ಬೇಗನೇ ಮರೆಯಾಗುವ ಅಥವಾ ಮರೆತುಹೋಗುವ ಸಂಭವ ಹೆಚ್ಚು. ಆದರೆ ಮಗು ವಿವಿಧ ಕಾರ್ಯತಂತ್ರಗಳ ಮೂಲಕ ಕಲಿಕೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು ಅಂದರೆ ಪರಿಭಾವಿಸಿಕೊಂಡು ಗಳಿಸಿಕೊಂಡರೆ ಅದು ಶಾಶ್ವತ ಕಲಿಕೆಯಾಗುತ್ತದೆ. ಆದರೆ ಈ ಕಲಿಕೆ ಬಾಹ್ಯ ಪ್ರಚೋದನೆ ಇರದ ಹೊರತು ಪ್ರದರ್ಶಿತವಾಗುವುದಿಲ್ಲ. ಇಂತಹ ಪ್ರಚೋದನೆಯನ್ನು ಮನೋವಿಜ್ಞಾನಿಗಳು ಕಲಿಕೆಯ ಉತ್ತೇಜಕಗಳು ಎಂದು ಗುರುತಿಸುತ್ತಾರೆ. 

ಕಲಿಕಾ ಹಂತಗಳು : ಈ ವಿಧದ ಕಲಿಕೆಯಲ್ಲಿ ನಾಲ್ಕು ಹಂತಗಳಿರುವುದನ್ನು ಗುರುತಿಸಲಾಗಿದೆ. ಅವುಗಳೆಂದರೆ ಗಮನ, ಧಾರಣ, ಉತ್ಪಾದಕತೆ ಮತ್ತು ಪ್ರೇರಣೆ. ಮಗುವು ತನ್ನ ಪರಿಸರದಲ್ಲಿನ ಅನೇಕ ಅಂಶಗಳನ್ನು ವೀಕ್ಷಣೆಯ ಮೂಲಕ ಗಮನಿಸುತ್ತದೆ. ಸೂಕ್ತರೀತಿಯ ಗಮನವು ಮನದಲ್ಲಿ ಧಾರಣವಾಗುತ್ತದೆ. ಧಾರಣವು ಕಲಿಕೆಯಾಗಿ ರೂಪುಗೊಳ್ಳುತ್ತದೆ. ಆದರೆ ಈ ಕಲಿಕೆಯು ಬಾಹ್ಯಪ್ರೇರಣೆಯಿಂದ ಮಾತ್ರ ಪ್ರದರ್ಶಿತಗೊಳ್ಳುತ್ತದೆ. ಆ ಮೂಲಕ ಶಾಶ್ವತ ಕಲಿಕೆಯಾಗಿ ರೂಪುಗೊಳ್ಳುತ್ತದೆ.

ಲೇಟೆಂಟ್ ಲರ್ನಿಂಗ್‌ಗೆ ಕೆಲವು ಉದಾಹರಣೆಗಳು:

ದಿನವೂ ಟಿ.ವಿ ವೀಕ್ಷಿಸುವ ಮಗುವೊಂದು ನೃತ್ಯ ಮಾಡುವುದನ್ನು ಕಲಿಯುತ್ತದೆ. ಆದರೆ ಇತರರು ಒತ್ತಾಯಪಡಿಸಿದಾಗ ಮಾತ್ರ ನೃತ್ಯ ಪ್ರದರ್ಶನ ಮಾಡುತ್ತದೆ.

ದಿನವೂ ತಾಯಿ ಅನ್ನ ಮಾಡುವುದನ್ನು ನೋಡಿದ ಮಗುವು, ತಾಯಿ ಇಲ್ಲದಿದ್ದಾಗ ಅನ್ನ ತಯಾರಿಸುವ ಅನಿವಾರ್ಯತೆ ಎದುರಾಗ ಮಾತ್ರ ತಯಾರಿಕೆಯಲ್ಲಿ ತೊಡಗುತ್ತದೆ. 

ದಿನವೂ ಕಾಲ್ನಡಿಗೆಯಲ್ಲಿ ಶಾಲೆಗೆ ಹೋಗುವ ಮಗುವು ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತದೆ. ರಿಪೇರಿಯಿಂದ ಒಂದು ರಸ್ತೆ ಮುಚ್ಚಿದಾಗ ಇನ್ನೊಂದು ದಾರಿಯಲ್ಲಿ ಸುಲಭವಾಗಿ ಶಾಲೆ ಸೇರುತ್ತದೆ. 

ಶೌಚಾಲಯ ಹೇಗೆ ಬಳಸಬೇಕೆಂದು ಕೆಲವು ಗ್ರಾಮೀಣ ಮಕ್ಕಳಿಗೆ ದಿನವೂ ಹೇಳಿದಾಗ್ಯೂ ಬಾಹ್ಯ ಉತ್ತೇಜಕ ನೀಡದ ಹೊರತು ಸರಿಯಾಗಿ ಬಳಸುವುದನ್ನು ಕಲಿಯುವುದಿಲ್ಲ. 

ತರಬೇತಿ ಕೇಂದ್ರಗಳಲ್ಲಿ ಹೇಗೆ ಪಾಠ ಬೋಧಿಸಬೇಕೆಂದು ಹೇಳಿಕೊಡಲಾಗುತ್ತದೆ. ಆದರೆ ಶಿಕ್ಷಕ ಹುದ್ದೆಗೆ ಸೇರುವವರೆಗೂ ಆ ಕಲಿಕೆಯನ್ನು ಬಳಸುವದೇ ಇಲ್ಲ.

ದಿನವೂ ತಾಯಿ ಬಟ್ಟೆ ಹೊಲಿಯುವುದನ್ನು ನೋಡಿದ ಮಗುವು ತನ್ನ ಕಿತ್ತುಹೋದ ಅಂಗಿಯ ಗುಂಡಿ ಹಚ್ಚಿಕೊಳ್ಳಲು ಒತ್ತಾಯಿಸಿದಾಗ ಮಾತ್ರ ಆ ಕಲಿಕೆಯನ್ನು ಪ್ರದರ್ಶಿಸುತ್ತದೆ. 

ಇತರರು ಚಿತ್ರಿಸುವುದನ್ನು ನೋಡಿದ ವಿದ್ಯಾರ್ಥಿ ಚಿತ್ರಿಸುವುದನ್ನು ಕಲಿಯುತ್ತಾನೆ. ಆದರೆ ತರಗತಿ ಶಿಕ್ಷಕರು ಚಿತ್ರ ಬಿಡಿಸಲು ಒತ್ತಾಯಿಸಿದಾಗ ಮಾತ್ರ ಆ ಕಲಿಕೆಯನ್ನು ಪ್ರದರ್ಶಿಸುತ್ತಾನೆ. 

ಒಬ್ಬ ಬಾಲಕ ಕಬ್ಬಡ್ಡಿ ಆಡುವುದು ಹೇಗೆ ಎಂಬುದನ್ನು ಹಿರಿಯ ವಿದ್ಯಾರ್ಥಿಗಳನ್ನು ನೋಡಿ ಕಲಿಯುತ್ತಾನೆ. ಆದರೆ ಅವನನ್ನು ತಂಡಕ್ಕೆ ಸೇರಿಸಿಕೊಂಡಾಗ ಮಾತ್ರ ಕಲಿಕೆಯನ್ನು ಪ್ರದರ್ಶಿಸುತ್ತಾನೆ. 

ಯುವಕನೊಬ್ಬ ಕಂಪ್ಯೂಟರ್ ತರಬೇತಿಗೆ ಸೇರಿಕೊಳ್ಳುತ್ತಾನೆ. ಆದರೆ ತಂದೆ ಕಂಪ್ಯೂಟರ್ ಕೊಡಿಸಿದಾಗ ಮಾತ್ರ ತನ್ನ ಕಲಿಕೆಯನ್ನು ಪ್ರದರ್ಶಿಸುತ್ತಾನೆ. 

ಪಾಲಕರು/ಶಿಕ್ಷಕರ ಪಾತ್ರ : ಇದೊಂದು ವಿಶಿಷ್ಠ ರೂಪದ ಕಲಿಕೆಯಾದ್ದರಿಂದ ಪಾಲಕರು ಮತ್ತು ಶಿಕ್ಷಕರು ಈ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಪ್ರತಿ ಮಗುವೂ ವಿಭಿನ್ನ ಎಂದು ಹೇಳುವಾಗ ಪ್ರತಿ ಮಗುವಿನ ಕಲಿಕಾ ವಿಧಾನಗಳು ವಿಭಿನ್ನವಾಗಿರುತ್ತವೆ. ಇಂತಹ ಕಲಿಕಾ ವಿಧಾನಗಳು ಪತ್ತೆಯಾದರೆ ಅವರಿಗೆ ಬಾಹ್ಯ ಪ್ರೇರಣೆ ನೀಡುವ ಉತ್ತೇಜಕಗಳನ್ನು ಬಳಸುವ ಮೂಲಕ ಕಲಿಕೆಯನ್ನು ಉತ್ತಮಪಡಿಸಬಹುದು. ಆ ಮೂಲಕ ಕಲಿಕೆಗೊಂದು ಹೊಸರೂಪ ನೀಡಬಹುದು.





ಅಮ್ಮಾ! ನಾ ಫೇಲಾದೆ.

ದಿನಾಂಕ  24-4-2019ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ

 ಅಮ್ಮಾ! ನಾ ಫೇಲಾದೆ.


1992 ರ ಮೇ ತಿಂಗಳು. ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟವಾದ ದಿನ. ಈಗಿನಂತೆ ಮೊಬೈಲ್, ಕಂಪ್ಯೂಟರ್‌ಗಳಲ್ಲಿ ಫಲಿತಾಂಶ ಲಭ್ಯವಿಲ್ಲದ ದಿನಗಳು. ಕಾಲೇಜಿಗೆ ಹೋಗಿ ರಿಸೆಲ್ಟ್ ನೋಡಿದೆವು. ಅಲ್ಲಿ ನನ್ನ ಹಾಗೂ ನನ್ನ ಗೆಳೆಯರ ಗ್ಯಾಂಗ್‌ನವರ ಹೆಸರು ಇಲ್ಲ. ಆದರೂ ಮತಿಗೆಡದೇ ಊರಿಗೆ ಹಿಂದಿರುಗಿದೆ. ಬಸ್ ಇಳಿಯುತ್ತಿದ್ದಂತೆ ಕಟ್ಟೆ ಮೇಲೆ ಕುಳಿತ ಕಾಕರಾಜನ ಸಂತತಿಯ ಕೆಲವರು “ಏನಪ್ಪಾ ರಿಸೆಲ್ಟ್ ಏನಾಯ್ತು?” ಎಂದರು. ‘ಫೇಲ್’ ಎಂದೆ ಅಷ್ಟೇ. ಶುರುವಾಯ್ತು ಅವರ ಸುಪ್ರಬಾತ. ಸುಪ್ರಬಾತವನ್ನು ಕೇಳುತ್ತಲೇ ಮನೆಗೆ ಬಂದೆ. 

    ಫಲಿತಾಂಶ ಕೇಳಿ ತಂದೆ ಕೆಂಡಾಮAಡಲವಾದರು. ಆದರೂ ಮರುಪ್ರವೇಶ ಕೊಡಿಸುವ ಭರವಸೆ ನೀಡಿದರು. ಕೂಲಿ ಕೆಲಸಕ್ಕೆ ಹೋದ ಅಮ್ಮ ಸಂಜೆ ಮನೆಗೆ ಬಂದಳು. “ಏನಪ್ಪಾ ಏನಾಯ್ತು ನಿನ್ನ ರಿಸೆಲ್ಟ್?” ಅವಳ ದನಿಯಲ್ಲಿ ಕಾತರ ಹಾಗೂ ದುಗುಡ ಎರಡೂ ಇದ್ದವು. ದಾರಿಯಲ್ಲಿ ಬರುವಾಗ ಇತರರು ಆಡಿದ ಕೊಂಕು ಮಾತುಗಳು ಅವಳ ಕಿವಿಗೆ ಬಿದ್ದಿದ್ದವು. ಆದರೂ ಧೈರ್ಯವಾಗಿ “ಅಮ್ಮಾ! ನಾ ಫೇಲಾದೆ” ಎಂದೆ. ಈ ಮಾತನ್ನು ಹೇಳುತ್ತಿದ್ದಂತೆ ಕಪಾಳಕ್ಕೆ ಎರಡು ಏಟು ಬೀದ್ದೇ ಬೀಳುತ್ತದೆ ಎಂದು ನಿರೀಕ್ಷಿಸಿದ್ದೆ. ಏಕೆಂದರೆ ಕಷ್ಟಪಟ್ಟು ದುಡಿಯುತ್ತಿದ್ದ ಆ ಜೀವಕ್ಕೆ ‘ಪಾಸ್’ ಎಂಬ ಶಬ್ದ ಕೇಳುವ ಆಸೆ. ನಿಧಾನವಾಗಿ ಬಳಿಬಂದಳು. ಕೈಎತ್ತಿದವಳೇ “ಮಗನೇ ಜೀವಕ್ಕೇನೂ ತೊಂದರೆ ಮಾಡಿಕೊ ಬೇಡಪ್ಪ. ಆದದ್ದು ಆಗಿ ಹೋಯ್ತು. ಇನ್ನೂ ಅವಕಾಶ ಇದೆ. ಪರೀಕ್ಷೆ ಕಟ್ಟು. ಚೆನ್ನಾಗಿ ಓದು. ಮುಂದಿನ ವರ್ಷಕ್ಕಾದರೂ ಸರಿ. ಖಂಡಿತ ಪಾಸ್ ಆಗ್ತೀಯ” ಎಂದಳು. ತಾಯಿಯ ಸಾಂತ್ವನದ ನುಡಿಗಳು ನನ್ನ ಭವಿಷ್ಯವನ್ನೇ ಬದಲಿಸಿದವು. ಅದು ನನ್ನ ಜೀವನದ ಮೊದಲ ಮತ್ತು ಕೊನೆಯ ಫೇಲ್ ಆಗಿತ್ತು.

    ಯರ‍್ಯಾರದೋ ಮಾತನ್ನು ಕೇಳಿ ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದೆ. ಸರಿಯಾಗಿ ಅರ್ಥವಾಗದ ಕಾರಣ ಓದು ಅಷ್ಟಕಷ್ಟೆ ಆಗಿ ಫಲಿತಾಂಶ ನಪಾಸಾಗಿತ್ತು. ತಾಯಿಯ ಮಾತು, ತಂದೆಯ ಸಹಕಾರ ಹಾಗೂ ಹೊರಗಿನವರ ಸುಪ್ರಬಾತಗಳು ಓದಲೇಬೇಕಂಬ ಹಠ ಮೂಡಿಸಿದವು. ವಿಜ್ಞಾನಕ್ಕೆ ತಿಲಾಂಜಲಿ ಹೇಳಿ ಪ್ರಥಮ ವರ್ಷದ ಕಲಾ ವಿಭಾಗಕ್ಕೆ ಪ್ರವೇಶ ಪಡೆದುಕೊಂಡೆ. ಹೊಸದಾದ ಸರ್ಕಾರಿ ಕಾಲೇಜು. ರಾಜ್ಯಶಾಸ್ತç ಉಪನ್ಯಾಸಕರನ್ನು ಹೊರತುಪಡಿಸಿದರೆ ಬೇರೆ ಉಪನ್ಯಾಸಕರು ಇಲ್ಲ. ಈಗಿನಂತೆ ಅತಿಥಿ ಉಪನ್ಯಾಸಕರ ಸೇವೆಯೂ ಇರಲಿಲ್ಲ. ಗೌರವ ಉಪನ್ಯಾಸಕರೆ ವರ್ಷದ ಸಿಲೆಬಸ್ ಮುಗಿಸಿದರು. ಕಷ್ಟಪಟ್ಟು ಓದಿದೆ ಎನ್ನುವುದಕ್ಕಿಂತ ಇಷ್ಟಪಟ್ಟು ಓದಿದೆ. ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ಕಾಲೇಜಿಗೆ ಪ್ರಥಮ ಸ್ಥಾನದಲ್ಲಿ ನಿಂತುಕೊAಡೆ. ಮುಂದೆ ಟಿ.ಸಿ.ಎಚ್ ಮಾಡಿಕೊಂಡು ಪ್ರಾಥಮಿಕ ಶಾಲಾ ಶಿಕ್ಷಕನಾದೆ. ಮದುವೆಯಾಗಿ ಮಗಳು ಹುಟ್ಟಿದ ನಂತರ ಬಿ.ಎ. ಪದವಿ ಪೂರೈಸಿದೆ. ನಂತರ ಎರಡು ಸ್ನಾತಕೋತ್ತರ ಪದವಿ ಪಡೆದೆ. ಈಗ ಒಂಚೂರು ಓದು, ಬರಹ ಮತ್ತು ಶಾಲಾ ಮಕ್ಕಳ ಜೊತೆ ಒಡನಾಟ ಇವು ನನ್ನ ಹವ್ಯಾಸ.