May 30, 2018

ತಂಬಾಕಿಗೆ ಗುಡ್‌ಬೈ GOODBYE TO TOBACCO

ದಿನಾಂಕ 30-5-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ತಂಬಾಕಿಗೆ ಗುಡ್‌ಬೈ 



ಇಂದು ದೇಶವನ್ನು ಕಾಡುತ್ತಿರುವ ಆರೋಗ್ಯ ಸಂಬಂಧಿ ಪಿಡುಗುಗಳಲ್ಲಿ ಅತೀ ದೊಡ್ಡ ಪಿಡುಗು ಎಂದರೆ ತಂಬಾಕು. ಇದು ಏಡ್ಸ್, ಡ್ರಗ್ಸ್, ಕುಡಿತ, ಆತ್ಮಹತ್ಯೆ ಮತ್ತು ಕೊಲೆಗಿಂತ ಹೆಚ್ಚು ಅಪಾಯಕಾರಿ. ಭಾರತದಲ್ಲಿ ಪ್ರತಿವರ್ಷ ತಂಬಾಕು ಕ್ಯಾನ್ಸರ್‌ಗೆ ಬಲಿಯಾಗುತ್ತಿರುವವರ ಸಂಖ್ಯೆ 10 ಲಕ್ಷ ಮೀರುತ್ತಿದೆ ಎಂದು `ಭಾರತೀಯ ವೈದ್ಯ ಸಂಸ್ಥೆ’(ಂIಒS)ಹೇಳಿದೆ. ಇದರಲ್ಲಿ ಪುರುಷÀರ ಸಂಖ್ಯೆ ಅಧಿಕ. ಅದರಲ್ಲೂ ಧೂಮಪಾನಿಗಳ ಸಂಖ್ಯೆ ಇನ್ನೂ ಅಧಿಕ. ಶೇ.56 ರಷ್ಟು ಪುರುಷರು ಮತ್ತು ಶೇ.44 ರಷ್ಟು ಮಹಿಳೆಯರು ತಂಬಾಕು ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಶೇ.82 ರಷ್ಟು ಪ್ರಕರಣಗಳಲ್ಲಿ ಶ್ವಾಸಕೋಶದ ಕಾಯಿಲೆ, ಪುಪ್ಪುಸದ ಕ್ಯಾನ್ಸರ್‌ಗೆ ತಂಬಾಕು ಕಾರಣ ಎಂದು ಧೃಢಪಟ್ಟಿದೆ.
ಕಳೆದ ದಶಕದ ಅಂಕಿ-ಅಂಶಗಳನ್ನು ಗಮನಿಸಿದರೆ, ದಶಕದ ಪ್ರಾರಂಭಕ್ಕಿಂತ ಅಂತ್ಯದ ವೇಳೆಗೆ ತಂಬಾಕು ಸೇವಿಸುವವರ ಸಂಖ್ಯೆ ಹೆಚ್ಚಾಗಿರುವುದು ಕಂಡುಬರುತ್ತದೆ. ಇದೇ ಪರಿಸ್ಥಿತಿ ಮುಂದುವರೆದರೆ 2020 ರ ವೇಳೆಗೆ ತಂಬಾಕು ಸಂಬಂಧಿ ಕಾಯಿಲೆ ಮತ್ತು ಸಾವುಗಳ ಪ್ರಮಾಣ ಶೇಕಡಾ 8.9 ರಷ್ಟು ಹೆಚ್ಚುವ ಭೀತಿ ಇದೆ.
ಈ ಎಲ್ಲಾ ಅಂಕಿ-ಅಂಶಗಳನ್ನು ಗಮನಿಸಿದರೆ ತಂಬಾಕು ಸೇವನೆ ಪ್ರತಿವರ್ಷ ಅಧಿಕವಾಗುತ್ತಿರುವುದು ಶೋಚನೀಯ. ಅದರಲ್ಲೂ ಯುವಜನತೆ ಮತ್ತು ಮಕ್ಕಳು ಅಧಿಕ ಪ್ರಮಾಣದಲ್ಲಿ ಈ ಪಿಡುಗಿಗೆ ತುತ್ತಾಗುತ್ತಿರುವುದು ಅಘಾತಕಾರಿಯಾಗಿದೆ. ಒಂದು ಸಮೀಕ್ಷೆ ಪ್ರಕಾರ 12-14 ವಯೋಮಾನದ ಶೇ.21 ಬಾಲಕರು ಮತ್ತು ಶೇ.2 ಬಾಲಕಿಯರು ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿದ್ದಾರೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದಲ್ಲಿನ ಮಕ್ಕಳು ಮತ್ತು ಯುವಕರು ತಂಬಾಕು ಉತ್ಪನ್ನಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ. 
ಕಾರಣಗಳು
ದೃಶ್ಯ ಮಾಧ್ಯಮ ಹಾಗೂ ಚಲನಚಿತ್ರಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆಯನ್ನು ವೈಭವೀಕರಿಸಿ ತೋರಿಸುವುದು.
ಕುಟುಂಬ ಮತ್ತು ಸುತ್ತಲಿನ ಪರಿಸರದಲ್ಲಿನ ಬಹುತೇಕ ಜನರು ತಂಬಾಕು ಉತ್ಪನ್ನಗಳನ್ನು ಬಳಸುತ್ತಿರುವುದು.
ಸ್ನೆÃಹಿತರನ್ನು ಒಲಿಸಿಕೊಳ್ಳಲು/ಒತ್ತಾಯಕ್ಕಾಗಿ ಅಥವಾ ಅನುಕರಣೆಯಿಂದಾಗಿ ತಂಬಾಕು ಉತ್ಪನ್ನಗಳಿಗೆ ಬಲಿಯಾಗುತ್ತಿರುವುದು.
ವಿರಾಮವೇಳೆ ಕಳೆಯಲು ಹಾಗೂ ಮನೋರಂಜನೆಗಾಗಿ.
ಜಾಹೀರಾತಿನ ಪ್ರಭಾವಕ್ಕೆ ಒಳಗಾಗುವುದು.
ತಂಬಾಕಿನಿಂದಾಗುವ ದುಷ್ಪರಿಣಾಮಗಳು
ತಂಬಾಕು ಸೇವನೆಯಿಂದ ಅನೇಕ ರೀತಿಯ ನಷ್ಟಗಳಾಗುತ್ತವೆ. ಮೊದಲನೆಯದು ಸಾಮಾಜಿಕ ಸ್ಥಾನಮಾನ, ಗೌರವಕ್ಕೆ ಕುಂದುಂಟಾಗುತ್ತದೆ. ಎರಡನೆಯದು ಆರೋಗ್ಯ ಹಾನಿಯುಂಟಾಗುತ್ತದೆ. ಮೂರನೆಯದು ಆರ್ಥಿಕ ನಷ್ಟವಾಗುತ್ತದೆ. ಹೇಗೆಂದರೆ, ಒಬ್ಬ ವ್ಯಕ್ತಿ ತಂಬಾಕು ಸೇವನೆಗಾಗಿ (ಬೀಡಿ/ಸಿಗರೇಟು/ಹುಕ್ಕಾ/ಗುಟ್ಕಾ/ಖೈನಿ/ಜರ್ದಾಪಾನ್ ಇತ್ಯಾದಿ) ದಿನವೊಂದಕ್ಕೆ 30-50 ರೂ. ಖರ್ಚು ಮಾಡುತ್ತನೆ ಎಂದುಕೊಂಡರೆ, ಒಂದು ವರ್ಷಕ್ಕೆ 14,600 ರೂ.ಗಳನ್ನು ಹಾಗೂ 10 ವರ್ಷಕ್ಕೆ 1,46,000 ರೂ.ಗಳನ್ನು ಖರ್ಚು ಮಾಡುತ್ತಾನೆ. ಇಷ್ಟೊಂದು ಮೊತ್ತದ ಹಣವನ್ನು ತಂಬಾಕು ಸೇವನೆಗಾಗಿ ಖರ್ಚು ಮಾಡುವ ವೇಳೆಗೆ ಅವನ ಆರೋಗ್ಯ ಹದಗೆಟ್ಟಿರುತ್ತದೆ. ಆರೋಗ್ಯ ಸುಧಾರಣೆಗಾಗಿ ಲಕ್ಷ ಲಕ್ಷಗಳೇ ಖರ್ಚಾಗಬಹುದು. ಹೀಗೆ ತಂಬಾಕು ಆರ್ಥಿಕ ನಷ್ಟವನ್ನೂ ಉಂಟುಮಾಡುತ್ತದೆ. 
ಈಗಾಗಲೇ ನಮಗೆಲ್ಲಾ ತಿಳಿದಿರುವಂತೆ ತಂಬಾಕಿನಲ್ಲಿರುವ ‘ನಿಕೋಟಿನ್’ ಅತ್ಯಂತ ವಿಷಕಾರಿ ಎಂಬುದು ಸಾಬೀತಾಗಿದೆ. ನಿಕೋಟಿನ್ ಎಷ್ಟು ವಿಷಕಾರಿ ಎಂದರೆ, 6 ಮಿ.ಗ್ರಾಂ ನಿಕೋಟಿನ್‌ನ್ನು ನೇರವಾಗಿ ಒಂದು ನಾಯಿಗೆ ಪ್ರಯೋಗಿಸಿದರೆ ಕೆಲವೇ ಸೆಕೆಂಡುಗಳಲ್ಲಿ ನಾಯಿ ಸಾಯುತ್ತದೆ. ಇಂತಹ ನಿಕೋಟಿನ್ ನಮ್ಮ ಬಾಯಿಗೆ ಪ್ರವೇಶಿಸಿದ 10 ಸೆಕೆಂಡುಗಳಲ್ಲಿ ಮೆದುಳಿಗೆ ಹೋಗಿ ‘ಡೊಪಾಮಿನ್’ ಎಂಬ ವಿಷವನ್ನು ಉತ್ಪಾದಿಸಿ ಮೆದುಳಿಗೆ ಬರುವ ರಕ್ತ ಸಂಚಾರಕ್ಕೆ ತಡೆಯೊಡ್ಡುತ್ತದೆ. ಕ್ರಮೇಣವಾಗಿ ಇದು ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಧೂಮಪಾನಿಗಳು ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುವರು, ಅಲ್ಲದೇ ಅನ್ನನಾಳದ, ಹೊಟ್ಟೆಯ, ಮೂತ್ರಪಿಂಡದ, ಮೂತ್ರಕೋಶದ, ಮೇದೋಜೀರಕ ಗ್ರಂಥಿಯ, ಗರ್ಭಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ನಿಕೋಟಿನ್ ರಕ್ತದೊತ್ತಡ ಮತ್ತು ಕೊಲೆಸ್ಟಾçಲ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೇ ಗರ್ಭೀಣಿಯರ ಗರ್ಭದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ.  
ತಂಬಾಕನ್ನು ಹದಗೊಳಿಸಲು ಮತ್ತು ಸ್ವಾದಿಷ್ಟಗೊಳಿಸಲು 4 ಸಾವಿರಕ್ಕಿಂತ ಹೆಚ್ಚಿನ ರಸಾಯನಿಕಗಳನ್ನು ಬೆರೆಸುತ್ತಾರೆ. ಅದರಲ್ಲಿ 250ಕ್ಕೂ ಹೆಚ್ಚಿನ ರಸಾಯನಿಕಗಳು ವಿಷಕಾರಿಗಳಾಗಿವೆ ಹಾಗೂ 50ಕ್ಕೂ ಹೆಚ್ಚಿನ ರಸಾಯನಿಕಗಳು ಕ್ಯಾನ್ಸರ್‌ಗೆ ಕಾರಣವಾಗಿವೆ. ಅಲ್ಲದೇ ಚರ್ಮ ಹದಮಾಡಲು ಬಳಸುವಂತಹ ಅತಿ ತೀಕ್ಷ÷್ಣವಾದ ರಸಾಯನಿಕಗಳನ್ನು ತಂಬಾಕು ಸಂಸ್ಕರಣೆಗೆ ಬಳಸುವುದರಿಂದ ಬಾಯಿಯ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ರಸಾಯನಿಕ ಬೆರೆಸದಿದ್ದಾಗಲೂ ನಿಕೋಟಿನ್‌ನ ಪ್ರಮಾಣ ಪ್ರತಿ ಪೌಂಡಿಗೆ 22.8 ಗ್ರಾಂ ಇರುತ್ತದೆ. ಅಲ್ಲದೇ ಅದರಲ್ಲಿ ಕೊಲಿಡೀಸ್, ಅಮೋನಿಯಾ, ಪೈಯರಡೀನ್, ಕಾರ್ಬನ್ ಮೋನಾಕ್ಸೆöÊಡ್‌ಗಳೆಂಬ ಪ್ರತ್ಯೆÃಕ ವಿಷಕಾರಿಗÀಳಿವೆ. ಧೂಮಪಾನದೊಂದಿಗೆ ಹೊಗೆ ಮಾತ್ರ ದೇಹ ಸೇರುವುದಿಲ್ಲ. ಅದರ ಜೊತೆಗೆ ಅರ್ಸೆನಿಕ್, ಸೈನೈಡ್, ಫಾರ್ಮಾಲೈಡ್ ಮುಂತಾದ ವಿಷಕಾರಿಗಳು ಸೇರುತ್ತವೆ.
 


ದುಷ್ಟರಿಣಾಮದ ಕೆಲವು ಅಂಕಿ-ಅಂಶಗಳು
ತಂಬಾಕು ಅದರ ಬಳಕೆದಾರರ ಅರ್ದದಷ್ಟು ಜನರನ್ನು ಕೊಲ್ಲುತ್ತದೆ.
ತಂಬಾಕು ಪ್ರತಿವರ್ಷ 70 ಲಕ್ಷ ಜನರನ್ನು ಕೊಲ್ಲುತ್ತದೆ. ಅದರಲ್ಲಿ 60 ಲಕ್ಷ ಜನರು ನೇರ ತಂಬಾಕಿಗೆ ಬಲಿಯಾದರೆ, ಉಳಿದ ಒಂದು ಲಕ್ಷ ಜನರು ಸೆಕೆಂಡ್ ಹ್ಯಾಂಡ್ ಧೂಮಪಾನದಿಂದ ಸಾಯುತ್ತಾರೆ. 
ವಿಶ್ವದ 1.1 ಕೋಟಿ ಧೂಮಪಾನಿಗಳಲ್ಲಿ ಶೇಕಡಾ 80 ರಷ್ಟು ಜನರು ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ವಾಸಿಸುತ್ತಾರೆ.


ಸೆಕೆಂಡ್ ಹ್ಯಾಂಡ್ ಧೂಮಪಾನಿ
ಧೂಮಪಾನಿ ಬಿಟ್ಟ ಹೊಗೆಯನ್ನು ಸೇವಿಸುವವರನ್ನು ಸೆಕೆಂಡ್ ಹ್ಯಾಂಡ್ ಧೂಮಪಾನಿಗಳೆನ್ನುವರು. ಧೂಮಪಾನಿಯು ಬೀಡಿ, ಸಿಗರೇಟ್, ಹುಕ್ಕಾ, ಪೈಪ್ ಇತ್ಯಾದಿಗಳಿಂದ  ತಂಬಾಕು ಸೇವಿಸಿ ಬಿಟ್ಟ ಹೊಗೆಯನ್ನು ಪಕ್ಕದಲ್ಲಿರುವ ಇನ್ನಿತರರು ಸೇವಿಸುತ್ತಾರೆ. ಇವರೇ ಸೆಕೆಂಡ್ ಹ್ಯಾಂಡ್ ಧೂಮಪಾನಿಗಳು. ಸಾಮಾನ್ಯವಾಗಿ ಮನೆ, ಹೋಟೆಲ್, ರೆಸ್ಟೊರೆಂಟ್, ಬಸ್/ರೈಲು ನಿಲ್ದಾಣಗಳು ಇತ್ಯಾದಿ ಜನಸಾಂದ್ರತೆ ಇರುವ ಪ್ರದೇಶದಲ್ಲಿ ಇಂತಹ ಸೆಕೆಂಡ್ ಹ್ಯಾಂಡ್ ಧೂಮಪಾನಿಗಳಿರುತ್ತಾರೆ. ಇದರಲ್ಲಿ ಮಕ್ಕಳು, ಮಹಿಳೆಯರು, ಗರ್ಭಿಣಿಯರು, ಬಾಣಂತಿಯರು, ವಯಸ್ಕರು, ಮುದುಕರೂ ಇರಬಹುದು. ಇವರು ನೇರವಾಗಿ ತಂಬಾಕನ್ನು ಸೇವಿಸದಿದ್ದರೂ ಧುಮಪಾನಿಯ ಹೊಗೆಯಿಂದ ಇವರಲ್ಲೂ ದುಷ್ಟರಿಣಾಮಗಳು ಕಾಣಿಸಿಕೊಳ್ಳುತ್ತವೆ.

ತಂಬಾಕು ತ್ಯಜಿಸುವುದರಿಂದ ಆಗುವ ಲಾಭಗಳು
ತಂಬಾಕು ತ್ಯಜಿಸುವುದರಿಂದ ಕೆಳಗಿನವುಗಳನ್ನು ಆನಂದಿಸಬಹುದು.
ಕೆಂಪು ಒಸಡುಗಳು, ಬಾಯಿ ಅಥವಾ ತುಟಿಯಲ್ಲಿನ ಬಿಳಿ ಕಲೆಗಳು ಮಾಯವಾಗುತ್ತವೆ.
ಒಸಡುಗಳಲ್ಲಿ ರಕ್ತ ಒಸರುವುದು ನಿಲ್ಲುತ್ತದೆ.
ಕೆಂಪು ಹಲ್ಲುಗಳಿಂದ ಮುಕ್ತಿ ದೊರೆಯುತ್ತದೆ.
ಸ್ವಸ್ಥ ಹಾಗೂ ಆರೋಗ್ಯಕರ ಬಾಯಿ ಇರುತ್ತದೆ.
ಆರೋಗ್ಯಪೂರ್ಣ ಹೊಳೆಯುವ ಕೆನ್ನೆಗಳು ನಿಮ್ಮದಾಗುತ್ತವೆ.
ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.
ಸಾಮಾಜಿಕ ಮನ್ನಣೆ ದೊರೆಯುತ್ತದೆ. 
ಉಸಿರು ಹಾಗೂ ಬಟ್ಟೆಗಳು ಉತ್ತಮ ವಾಸನೆಯಿಂದ ಕೂಡಿರುತ್ತದೆ.
ಆಹಾರವು ರುಚಿಯನ್ನು ಪಡೆದು ಸಂಪೂರ್ಣವಾಗಿ ಜೀರ್ಣವಾಗುತ್ತದೆ.
ಬೆರಳುಗಳು ಮತ್ತು ಉಗುರುಗಳು ನಿಧಾನವಾಗಿ ಹಳದಿ ಮುಕ್ತವಾಗುತ್ತವೆ.
ಉದ್ಯೊÃಗದ ಅವಕಾಶಗಳು ಹೆಚ್ಚುತ್ತವೆ.
ಹಣದ ಉಳಿತಾಯ ಆರಂಭವಾಗುತ್ತದೆ.
ಮುಕ್ತಿಮಾರ್ಗ
ತಂಬಾಕು ಸೇವನೆ ಇಂದು ಸಮುದಾಯ ಆರೋಗ್ಯ ಸಮಸ್ಯೆಯಾಗಿದೆ. ಇದಕ್ಕೆ ಬಲವಾದ ವಿರೋಧದ ಅಗತ್ಯವಿದೆ. ಬಹುತೇಕರು ತಂಬಾಕು ತ್ಯಜಿಸುವುದು ಸುಲಭವಲ್ಲ ಎನ್ನುತ್ತಾರೆ. ತಂಬಾಕು ಪದಾರ್ಥಗಳನ್ನು ತ್ಯಜಿಸುವುದು ದೇಹದ ತೂಕ ಕಳೆದುಕೊಳ್ಳುವಂತೆ ಬಹು ದೀರ್ಘಕಾಲದ ಪ್ರಯತ್ನ. ಆದರೆ ಬದ್ದತೆಯಿಂದ ಕೂಡಿದ ಗಟ್ಟಿ ನಿರ್ಧಾರದಿಂದ ಎಂತಹ ಚಟವನ್ನಾದರೂ ಬಿಡಬಹುದು. ತಂಬಾಕು ವಿರೋಧಿಸುವ ಪ್ರತಿಯೊಬ್ಬರೂ ಕೆಳಗಿನ ಅಂಶಗಳತ್ತ ಚಿತ್ತವಹಿಸಬೇಕಾಗಿದೆ.
ತಂಬಾಕು ತ್ಯಜಿಸುವ ದಿನಾಂಕವನ್ನು ನಿರ್ಧರಿಸಿ ಕ್ಯಾಲೆಂಡರನಲ್ಲಿ ಗುರುತಿಸಿಕೊಳ್ಳಿ.
ನೀವು ತಂಬಾಕು ತ್ಯಜಿಸುವ ದಿನಾಂಕದ ಬಗ್ಗೆ ನಿಮ್ಮ ಸ್ನೆÃಹಿತರು ಮತ್ತು ಕುಟುಂಬದವರಿಗೆ ತಿಳಿಸಿ.
ನಿಮ್ಮ ಮನೆ, ವಾಹನ, ಮತ್ತು ಕೆಲಸದ ಸ್ಥಳ ಎಲ್ಲವೂ ತಂಬಾಕು ಮುಕ್ತವಾಗಲಿ.
ತಂಬಾಕು ಸೇವಿಸುವ ಬಯಕೆಯಾದಾಗ ತಂಬಾಕಿನ ಬದಲು ಇನ್ನಿತರೇ ಅಪಾಯಕಾರಿಯಲ್ಲದ ಅಗಿಯುವ ವಸ್ತುಗಳು ಬಳಿಯಿರಲಿ. ಉದಾ: ಚಾಕೋಲೇಟ್, ಚ್ಯೂಯಿಂಗ್ ಗಮ್, ಕ್ಯಾಂಡಿ, ಲವಂಗ, ಯಾಲಕ್ಕಿ ಇತ್ಯಾದಿ.
ಕುಟುಂಬ ಅಥವಾ ದಂತ ವೈದ್ಯರನ್ನು ಸಂಪರ್ಕಿಸಿ ಬಾಯಿ ಪರೀಕ್ಷೆ ಮಾಡಿಸಿಕೊಳ್ಳಿ. 
ತಂಬಾಕು ಬಳಸುವ ಕುಟುಂಬ/ಸ್ನೆÃಹಿತರಿಂದ ದೂರವಿರಿ ಅಥವಾ ಬಳಸುವಂತೆ ಒತ್ತಾಯ ಮಾಡದಿರಲು ತಿಳಿಸಿ.
ವಾಕಿಂಗ್, ವ್ಯಾಯಾಮ, ಸೃಜನಾತ್ಮಕ ಚಟುವಟಿಕೆ ಅಥವಾ ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ.
ಆಗಾಗ ನೀರು ಅಥವಾ ಹಣ್ಣಿನ ರಸ/ಜ್ಯೂಸ್ ಕುಡಿಯಿರಿ.
ತಂಬಾಕು ಮುಕ್ತ ಮಾಡುವಲ್ಲಿ ಸಮುದಾಯದ ಪಾತ್ರ
ತಂಬಾಕು ಸೇವೆಯಿಂದಾಗುವ ದುಷ್ಪರಿಣಾಮಗಳನ್ನು ಮತ್ತು ಪರಿಹಾರ ಮಾರ್ಗಗಳನ್ನು ಉನ್ನತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಪಠ್ಯಪುಸ್ತಕಗಳಲ್ಲಿ ಅಳವಡಿಸುವ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ವನ್ನು ಪ್ರೊÃತ್ಸಾಹಿಸುವುದು.
ಮಕ್ಕಳು ಮತ್ತು ಯುವಜನತೆಯನ್ನು ತಂಬಾಕು ಮುಕ್ತರನ್ನಾಗಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ವದ್ದು. ಶಾಲಾ ಶಿಕ್ಷಣದ ಮೂಲಕ ತಂಬಾಕು ಬಳಕೆಯನ್ನು ತಡೆಯಲು ಪ್ರಯತ್ನಿಸಬೇಕು.
ಶಾಲೆಗಳಲ್ಲಿ ಚರ್ಚೆ, ಸಂವಾದ, ಉಪನ್ಯಾಸ, ವಿಚಾರಗೋಷ್ಟಿ, ನಾಟಕ, ವೀಡಿಯೋ ಪ್ರದರ್ಶನಗಳಂತಹ ಕರ‍್ಯಕ್ರಮಗಳನ್ನು ಕಾಲಕಾಲಕ್ಕೆ ಹಮಿಕೊಂಡು ಅವುಗಳ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ ಬೆಂಬಲಿಸುವುದು.
ಮಕ್ಕಳು ಮತ್ತು ಯುವಜನತೆ ಸದಾಕಾಲ ಜ್ಞಾನಾಧಾರಿತ/ ಅಭಿವೃದ್ದಿ ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೆÃರೇಪಿಸುವುದು.
ಹತಾಶೆ ಮತ್ತು ಖಿನ್ನತೆಯಿಂದ ಮುಕ್ತರನ್ನಾಗಿಸುವುದು.
ವಿರಾಮ ವೇಳೆಯ ಸದುಪಯೋಗಕ್ಕಾಗಿ ಕ್ರಿÃಡೆಗಳು/ ಓದುವ ಹವ್ಯಾಸ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳವಂತೆ ಮಾಡುವುದು.
ಮಾಧ್ಯಮಗಳ ಮೂಲಕ ‘ತಂಬಾಕು ವಿರೋಧಿ ಶಿಕ್ಷಣ’ ನೀಡುವುದು.
ತಂಬಾಕನ್ನು ತಿರಸ್ಕರಿಸುವ ಕೌಶಲಗಳನ್ನು ಅಭಿವೃದ್ದಿಪಡಿಸುವದು ಮತ್ತು ತರಬೇತಿ ನೀಡುವದು.
ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳನ್ನು ಪ್ರೊÃತ್ಸಾಹಿಸುವುದು.
ತಂಬಾಕು ಸೇವನೆ ಪ್ರಚೋದಿಸುವ ದೃಶ್ಯಗಳು ಮತ್ತು ಜಾಹೀರಾತುಗಳಿಗೆ ತಡೆಯೊಡ್ಡುವುದು.
ತಂಬಾಕಿನಿಂದಾಗುವ ದುಷ್ಪರಿಣಾಮಗಳನ್ನು ಬಿಂಬಿಸುವ ಪೋಸ್ಟರ್/ಬ್ಯಾನರ್‌ಗಳನ್ನು ಪ್ರದರ್ಶಿಸುವುದು.
ಕಾನೂನುಗಳಿಗೆ ಸೂಕ್ತ ಮಾರ್ಪಾಡು ಮಾಡುವ ಮೂಲಕ ತಂಬಾಕು ಉತ್ಪನ್ನಗಳಿಗೆ ಕಡಿವಾಣ  ಹಾಕುವುದು.
ತಂಬಾಕು ವಿರೋಧಿ ಹೋರಾಟ ಕೇವಲ ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯಿಂದ ಆಗುವ ಕೆಲಸವಲ್ಲ. ಇದಕ್ಕೆ ಸಾಮೂಹಿಕ ಬೆಂಬಲ ಅಗತ್ಯ. ಇದಕ್ಕೆ ಪೂರಕವಾಗಿ ಸರ್ಕಾರದ ನೀತಿ ನಿಯಮಗಳು ಬದಲಾಗಬೇಕು. ಪ್ರತಿಯೊಬ್ಬರೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಬೇಕು. ಬನ್ನಿ! ಎಲ್ಲರೂ ಕೈ ಜೋಡಿಸಿ ‘ತಂಬಾಕು ವಿರೋಧಿ ಶಿಕ್ಷಣ’ವನ್ನು ಬಲಪಡಿಸೋಣ.
ಆರ್.ಬಿ.ಗುರುಬಸವರಾಜ ಹೊಳಗುಂದಿ





ಓದಿನ ಗಮ್ಮತ್ತು Benefits of Reading

ದಿನಾಂಕ 28-5-2018ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಓದಿನ ಗಮ್ಮತ್ತು


“ಇತ್ತಿÃಚಿನ ಯುವ ಪೀಳಿಗೆ ಇಂಟರ್‌ನೆಟ್‌ನಲ್ಲೆÃ ಮುಳುಗಿ ಹೋಗಿರುವಾಗ ಪುಸ್ತಕ ಓದುವ ಜನ ಎಲ್ಲಿದ್ದಾರೆ? ಈ ಪುಸ್ತಕವನ್ನು ಓದುವವರು ಯಾರು? ಯಾವ ಉದ್ದೆÃಶದಿಂದ ಹೊರತರುತ್ತಿÃರಿ?” ಇದು ಖ್ಯಾತ ಸಾಹಿತಿ ನಾಡೋಜ ಕೋ.ಚೆನ್ನಬಸಪ್ಪ ಅವರ ನೋವಿನ ನುಡಿ. ಇತ್ತಿÃಚೆಗೆ ಪುಸ್ತಕದ ಮುನ್ನುಡಿಗೆಂದು ಅವರ ಬಳಿ ಹೋದಾಗ ಪುಸ್ತಕ ಓದುವವರ ಸಂಖ್ಯೆ ಕ್ಷಿÃಣಿಸುತ್ತಿರುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಆದರೆ ಮುಂದುವರೆದು ಪುಸ್ತಕ ಓದುವುದರಿಂದ ತಮ್ಮ ವೈಯಕ್ತಿಕ ಜೀವನದಲ್ಲಿ ಆದ ಲಾಭಗಳ ಬಗ್ಗೆಯೂ ಚರ್ಚಿಸಿದರು. “ಓದು, ನನ್ನ ಆಲೋಚನೆಗಳ ದಿಕ್ಕನ್ನು ಬದಲಿಸಿತು ಮತ್ತು ಭಾವನೆಗಳನ್ನು ಅಭಿವ್ಯಕ್ತಿಗೊಳಿಸಲು ಸಹಾಯಕವಾಯಿತು. ಪುಸ್ತಕ ಓದಿನಿಂದ ಶೋಷಿತರ ಮತ್ತು ಅವ್ಯವಸ್ಥೆಯ ವಿರುದ್ದ ನನ್ನ ಧ್ವನಿ ಗಟ್ಟಿಯಾಗಿದೆ. ಪುಸ್ತಕಗಳು ಇಲ್ಲದೇ ಹೋಗಿದ್ದರೆ ನಾನಿಂದು ಈ ಹಂತಕ್ಕೆ ಬೆಳೆಯುತ್ತಿರಲಿಲ್ಲ. ಪುಸ್ತಕಗಳು ನನ್ನನ್ನು ಒಬ್ಬ ಮನುಷ್ಯನನ್ನಾಗಿಸಿವೆ”. 
 ಹೌದು ಇತ್ತಿಚಿಗೆ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ನಿಜಕ್ಕೂ ಖೇದಕರ ಸಂಗತಿ. ಆದಾಗ್ಯೂ ಕನ್ನಡದ ನೆಲದಲ್ಲಿ ಪುಸ್ತಕಗಳು, ಸಾಹಿತಿಗಳು, ಬರಹಗಾರರು, ಪ್ರಕಾಶಕರು ಮತ್ತು ಮಾರಾಟಗಾರರ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿಯಲ್ಲವೇ?
ಪ್ರತಿದಿನವೂ ಪುಸ್ತಕ ದಿನವನ್ನಾಗಿ ಮಾಡಿಕೊಂಡವರ ಬದುಕು ಸುಂದರವಾಗಿರುವುದನ್ನು ಕಾಣಬಹುದು. ದಶಕಕ್ಕೂ ಹಿಂದೆ ಪುಸ್ತಕ ಓದುವುದು ಬಹುತೇಕರ ದಿನದ ಅವಿಭಾಜ್ಯ ಅಂಗವಾಗಿತ್ತು. ಆದರೆ ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯಿಂದ ಉಂಟಾದ ಸಂಪರ್ಕ ಕ್ರಾಂತಿ ಮತ್ತು ಮೊಬೈಲ್ ಮೇನಿಯಾಗಳು ಜನರನ್ನು ಪುಸ್ತಕ ಓದಿನಿಂದ ದೂರ ಸರಿಸಿದವು. ಆದರೆ ಪುಸ್ತಕ ಓದುವುದರಿಂದ ದೊರೆಯುವ ಸುಖ ಮತ್ತು ಲಾಭಗಳನ್ನು ಬೇರೆ ಯಾವ ಸಾಧನಗಳೂ ನೀಡಲಾರವು. 
ಪುಸ್ತಕಗಳು ಜೀವನದ ಆತ್ಮ ಸಂಗಾತಿಗಳು. ಪ್ರತಿಯೊಬ್ಬ ಸಾಕ್ಷರರ ಜೀವನದಲ್ಲಿ ಕನಿಷ್ಠ ಒಂದು ಪುಸ್ತಕವಾದರೂ ಪ್ರಭಾವ ಬೀರಿರುತ್ತದೆ ಮತ್ತು ಅವರ ಜೀವನದ ದಿಕ್ಕನ್ನು ಉತ್ತಮಗೊಳಿಸಿರುತ್ತದೆ. ಪುಸ್ತಕದ ಓದು ಭವಿಷ್ಯಕ್ಕೊಂದು ದಿಕ್ಸೂಚಿ. ಓದುವುದರಿಂದ ಸ್ವಯಂ ಅಭಿವೃದ್ದಿ, ಸ್ವಯಂ ಶಿಕ್ಷಣ ಮತ್ತು ಮನೋರಂಜನೆ ದೊರೆಯುತ್ತದೆ. ಹಾಗಾಗಿ ಓದು ಅತ್ಯಂತ ಜನಪ್ರಿಯ ಹಾಗೂ ಸುಲಭ ಮಾಧ್ಯಮವಾಗಿದೆ. ಓದು ಮಕ್ಕಳ ಮತ್ತು ವಯಸ್ಕರ ಬೆಳೆವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಾಹಿತಿಯನ್ನು ಸಂಗ್ರಹಿಸಲು ಮತ್ತು ಕೇಂದ್ರಿÃಕರಿಸಲು ಓದು ಅತ್ಯಂತ ಅವಶ್ಯಕ. ಓದುವುದರಿಂದ ಜೀವನಕ್ಕೆ ಪರ್ಯಾಯ ದೃಷ್ಟಿಕೋನ, ವಿವಿಧ ಅಭಿಪ್ರಾಯಗಳು ಮತ್ತು ಅವುಗಳ ಒಳನೋಟಗಳು ಲಭಿಸುತ್ತದೆ. ಜೊತೆಗೆ ಕೆಲವೊಮ್ಮೆ ನಾವು ನಂಬಲು ಕಾರಣವಾದ ಅಂಶಗಳಿಗೆ ವಿಭಿನ್ನ ದೃಷ್ಟಿಕೋನ ದೊರೆಯುತ್ತದೆ. 
ಆದ್ದರಿಂದ ಒಂದು ಒಳ್ಳೆಯ ಪುಸ್ತಕ ಎತ್ತಿಕೊಳ್ಳಿ ಅಥವಾ ಒಂದು ಒಳ್ಳೆಯ ಲೇಖನ ಹುಡುಕಿ. ನಿಮ್ಮ ಎಲ್ಲಾ ತಂತ್ರಜ್ಞಾನ ಉಪಕರಣಗಳನ್ನು ಆಫ್ ಮಾಡಿ. ಮನಸ್ಸನ್ನು ಕೇಂದ್ರಿÃಕರಿಸಿ ಓದಲು ಪ್ರಾರಂಭಿಸಿ. ಖಂಡಿತವಾಗಿಯೂ ಆ ಓದು ನಿಮ್ಮನ್ನು ಉತ್ತಮರನ್ನಾಗಿಸುತ್ತದೆ. ಕೆಳಗಿನ ಅಂಶಗಳು ನಿಮಗೆ ಓದಿನ ಮಹತ್ವ ತಿಳಿಸುತ್ತವೆ.
ಓದಿನಿಂದ ಮನಸ್ಸು ಪ್ರಫುಲ್ಲವಾಗುತ್ತದೆ.
ಸಂಭಾಷಣೆಯ ಮಟ್ಟವನ್ನು ಸುಧಾರಿಸುತ್ತದೆ.
ಕುತೂಹಲವನ್ನು ತಣಿಸುತ್ತದೆ.
ವಿಭಿನ್ನ ಸ್ಥಳಗಳ ಮಾಹಿತಿ ಲಭ್ಯವಾಗುತ್ತದೆ.
ವಿಭಿನ್ನ ಸಂಸ್ಕೃತಿಗಳ ಪರಿಚಯವಾಗುತ್ತದೆ.
ಸಮಾಜದಲ್ಲಿ ವಿಭಿನ್ನ ವ್ಯಕ್ತಿಗಳ ಪಾತ್ರ ಪರಿಚಯವಾಗುತ್ತದೆ.
ಸೃಜನಶೀಲತೆಯನ್ನು ಉದ್ದಿÃಪಿಸುತ್ತದೆ.
ಸುಲಭ ರೀತಿಯಲ್ಲಿ ಮನೋರಂಜನೆ ನೀಡುತ್ತದೆ. 
ವಿಶ್ಲೆÃಷಣಾತ್ಮಕ ಚಿಂತನಾ ಸಾಮರ್ಥ್ಯ ಬೆಳೆಯುತ್ತದೆ.
ಶಬ್ದ ಭಂಡಾರ ಮತ್ತು ಜ್ಞಾನ ವಿಸ್ತಾರಗೊಳ್ಳುತ್ತದೆ.
ಬರವಣಿಗೆಯ ಸಾಮರ್ಥ್ಯವನ್ನು ಉನ್ನತೀಕರಿಸುತ್ತವೆ. 
ಪ್ರಾಪಂಚಿಕ ಜ್ಞಾನ ವೃದ್ದಿಯಾಗುತ್ತದೆ. 
ವಾಸ್ತವಿಕತೆಯ ಪರಿಚಯವಾಗುತ್ತದೆ.
ದೈನಂದಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತದೆ. 
ಒತ್ತಡವನ್ನು ಕಡಿಮೆ ಮಾಡುತ್ತದೆ.
ಧೈರ್ಯ, ಸ್ಥೆöÊರ್ಯ ಮತ್ತು ನಿರ್ಣಯ ಸಾಮರ್ಥ್ಯಗಳು ಬೆಳೆಯುತ್ತವೆ. 
ಓದಿನಿಂದ ಜನರ ಕಷ್ಟ-ನಷ್ಟ, ನೋವು-ನಲಿವುಗಳ ಪರಿಚಯವಾಗುತ್ತದೆ. 
ಆಂತರಿಕ ಸೌಂದರ್ಯ ಹೆಚ್ಚುತ್ತದೆ.

ಆರ್.ಬಿ.ಗುರುಬಸವರಾಜ ಹೊಳಗುಂದಿ


ವೈಯಕ್ತಿಕ ಸಾಧನೆಯ ತತ್ವಗಳು Principles of success

ದಿನಾಂಕ 16-5-2018ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ವೈಯಕ್ತಿಕ ಸಾಧನೆಯ ತತ್ವಗಳು


ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಬಯಸುತ್ತಾರೆ. ಆದರೆ ಬಹುತೇಕ ವೇಳೆ ಒಂದು ಸಣ್ಣ ಸಾಧನೆಯನ್ನು ಮಾಡಲೂ ಸಾಧ್ಯವಾಗುವುದಿಲ್ಲ. ಸಾಧಿಸಲು ಅನೇಕ ಅಡೆತಡೆಗಳು ಎದುರಾಗುತ್ತವೆ. ಸೋಲಿನ ಭೀತಿ ಆವರಿಸಿ ಸಾಧನೆಯ ಹಾದಿಗೆ ಮುಳ್ಳಾಗುತ್ತದೆ. ಕೆಲವು ವೇಳೆ ಗುರಿಗಳನ್ನು ಕಾರ್ಯ ರೂಪಕ್ಕೆ ತರಲಾಗದೇ ಸೋಲನ್ನು ಹಿಂಬಾಲಿಸಬೇಕಾಗುತ್ತದೆ. ಗುರಿಗಳನ್ನು ತಲುಪುವ ಹಾದಿಯಲ್ಲಿನ ಅಡೆತಡೆಗಳನ್ನು ನಿವಾರಿಸಲು ಬುದ್ದಿವಂತಿಕೆಗಿಂತ ತಂತ್ರಗಾರಿಕೆಯು ಮುಖ್ಯವಾಗಿರುತ್ತದೆ. ಯಾರಿಗೆ ತಂತ್ರಗಾರಿಕೆಯು ತಿಳಿದಿದೆಯೋ ಅವರು ಮಾತ್ರ ಯಶಸ್ವಿಯಾಗಬಲ್ಲರು. ಪ್ರಾಮಾಣಿಕ ಪ್ರಯತ್ನ ಮತ್ತು ಅವಕಾಶದ ಸದುಪಯೋದಿಂದ ಎಲ್ಲರೂ ಆ ಯಶಸ್ಸನ್ನು ಗಳಿಸಬಹುದು.  ಸಾಧನೆಗೆ ಶ್ರಿÃಮಂತಿಕೆ ಬೇಕಿಲ್ಲ. ಆದರೆ ಸಾಧಿಸುವ ಛಲ ಮತ್ತು ಪರಿಶ್ರಮ ಬೇಕು. ಅಂತಹ ಕೆಲ ತಂತ್ರಗಾರಿಕೆ ಮತ್ತು ಸಾಧನೆಯ ತತ್ವಗಳನ್ನು ಕೆಳಗೆ ನೀಡಲಾಗಿದೆ. ಅವುಗಳನ್ನು ಅನುಸರಿಸುವ ಸಾಧನೆಯ ಶಿಖರನ್ನು ನೀವೂ ಏರಬಹುದು. ಪ್ರಯತ್ನಿಸಿ.
ಸಾಧನೆಯ ಮಾರ್ಗಗಳು:
ಸಾಧನೆಯ ಉದ್ದೆÃಶ ಮತ್ತು ಗುರಿ ತಲುಪುವ ಕಾರ್ಯ ಯೋಜನೆಗಳು ಸ್ಪಷ್ಟವಾಗಿರಬೇಕು. 
ಕೇವಲ ಬುದ್ದಿ ಇದ್ದರೆ ಸಾಲದು. ಬುದ್ದಿಯಲ್ಲಿ ಚತುರತೆ ಬಹಳ ಮುಖ್ಯ. ಉದ್ದೆÃಶವನ್ನು ಸಾಧಿಸಲು ಸಾಮರಸ್ಯದಿಂದ ಕೆಲಸ ಮಾಡುವುದು ಅನಿವಾರ್ಯ. ಸಾಮರಸ್ಯದ ಕೆಲಸಕ್ಕೆ ಸಹಕಾರಿ ತತ್ವದ ಮೈತ್ರಿಯ ತಂತ್ರಗಾರಿಕೆ ತಿಳಿದಿರಬೇಕು.
ನಂಬಿಕೆ ಎಂಬುದು ಆಸೆ, ಉದ್ದೆÃಶ ಮತ್ತು ಯೋಜನೆಗಳ ಭೌತಿಕ ಮತ್ತು ಆರ್ಥಿಕ ಸ್ಥಿತಿಯಾಗಿದೆ. ಅದಕ್ಕಾಗಿ ಅನ್ವಯಿಕ ನಂಬಿಕೆ ಅಗತ್ಯ. ಕಾರ್ಯಕ್ಷೆÃತ್ರದಲ್ಲಿ ನಂಬಿಕೆ ಉಳಿಸಿಕೊಳ್ಳುವ ಮತ್ತು ಬೆಳೆಸಿಕೊಳ್ಳುವ ಪ್ರಯತ್ನ ಅವಶ್ಯಕ.
ಕಾರ್ಯಕ್ಷೆÃತ್ರದಲ್ಲಿ ಜವಾಬ್ದಾರಿ ತೆಗೆದುಕೊಳ್ಳವಿಕೆ ನಿಮ್ಮನ್ನು ಉನ್ನತ ಹಂತಕ್ಕೆ ತೆಗೆದುಕೊಂಡೊಯ್ಯುತ್ತದೆ. ನೀಡಿದ ಕೆಲಸಕ್ಕಿಂತ ಹೆಚ್ಚುವರಿಯಾಗಿ ತೆಗೆದುಕೊಳ್ಳುವ ಜವಾಬ್ದಾರಿಯು ನಿಮ್ಮ ಉತ್ತಮ ಸೇವೆಯನ್ನು ಪ್ರಶಂಸಿಸುವಂತೆ ಮಾಡುತ್ತದೆ. ಅದು ನಿಮ್ಮ ಸಾಧನೆಯ ಸೋಪಾನವಾಗಿದೆ.
ವ್ಯಕ್ತಿತ್ವವು ಒಬ್ಬ ವ್ಯಕ್ತಿಯ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ವೈಚಾರಿಕತೆಯ ಲಕ್ಷಣವಾಗಿದೆ. ಸಾಧನೆಯ ಶಿಖರ ತಲುಪಬಯಸುವ ಮುನ್ನ ಇನ್ನೊಬ್ಬರಿಗೆ ಮಾದರಿಯಾಗುವಂತಹ ವಿಭಿನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅಗತ್ಯವಾಗಿದೆ. 
ವೈಯಕ್ತಿಕ ಉಪಕ್ರಮ ಸಾಧನೆಯ ಮತ್ತೊಂದು ಮೆಟ್ಟಿಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ. ವೈಯಕ್ತಿಕ ಭಿನ್ನತೆಯಲ್ಲಿ ತನ್ನದೇ ಆದ ಪದ್ದತಿ ಅಥವಾ ಕ್ರಮಗಳ ಮೂಲಕ ವಿಶೇಷತೆಯನ್ನು ಸಾಧಿಸುವುದೇ ಉಪಕ್ರಮ. ಇದು ಕೆಲಸದ ಪ್ರಾರಂಭದಿಂದ ಹಿಡಿದು ಅದನ್ನು ಯಶಸ್ವಿಯಾಗಿ ಪುರ್ಣಗೊಳಸಿವವರೆಗಿನ ಎಲ್ಲಾ ಹಂತಗಳ ಕಾರ್ಯ ವಿಧಾನವಾಗಿದೆ. ಸಾಧನೆಗೈದ ಪ್ರತಿಯೊಬ್ಬರೂ ಇದನ್ನು ಬೆಳೆಸಿಕೊಂಡಿರುತ್ತಾರೆ.
ಸಕಾರಾತ್ಮಕ ಮಾನಸಿಕ ವರ್ತನೆಯು ನಿಮ್ಮನ್ನು ಸಾಧನೆಯ ಉತ್ತುಂಗಕ್ಕೆ ಒಯ್ಯುತ್ತದೆ. ಸಕಾರಾತ್ಮಕತೆಯು ಯಶಸ್ಸನ್ನು ಆಕರ್ಷಿಸುತ್ತದೆ ಮತ್ತು ವೈಪಲ್ಯಗಳನ್ನು ದೂರವಿರಿಸುತ್ತದೆ.
ಉತ್ಸಾಹವು ಆಂತರಿಕ ಧ್ವನಿಯಾಗಿದ್ದು ಮುಖಭಾವದ ಅಭಿವ್ಯಕ್ತಿಯಲ್ಲಿ ಹೊರಸೂಸುತ್ತದೆ ಮತ್ತು ಕಾರ್ಯದ ಯಶಸ್ಸಿಗೆ ಕಾರಣವಾಗುತ್ತದೆ. ಉತ್ಸಾಹದಿಂದ ಕಾರ್ಯದಲ್ಲಿ ನಂಬಿಕೆ ಉಂಟಾಗುತ್ತದೆ. 
ಚಿಂತನೆಯ ಪಾಂಡಿತ್ಯದಿಂದ ಸ್ವಯಂ ಶಿಸ್ತು ಪ್ರಾರಂಭವಾಗುತ್ತದೆ. ನಿಮ್ಮ ಆಲೋಚನೆಗಳನ್ನು ನೀವು ನಿಯಂತ್ರಿಸದಿದ್ದರೆ ನಿಮ್ಮ ಅಗತ್ಯಗಳನ್ನು ನಿಯಂತ್ರಿಸಲಾಗದು. ಸ್ವಯಂ ಶಿಸ್ತು ತರ್ಕಶಾಸ್ತçದ ಬೋಧನೆಯೊಂದಿಗೆ ನಿಮ್ಮ ಹೃದಯದ ಭಾವನೆಗಳನ್ನು ಸಮತೋಲನದಲ್ಲಿಡುತ್ತದೆ. ಇದರಿಂದ ಯಶಸ್ಸು ನಿಮ್ಮದಾಗುತ್ತದೆ.
ಚಿಂತನೆಯು ಮನುಷ್ಯನಿಗೆ ಅತ್ಯಂತ ಅಪಾಯಕಾರಿ ಅಥವಾ ಪ್ರಯೋಜನಕಾರಿ ಶಕ್ತಿಯಾಗಿದೆ. ಆದರೆ ಅದು ಹೇಗೆ ಬಳಸಲ್ಪಡುತ್ತದೆ ಎಂಬುದರ ಆಧಾರದ ಮೇಲೆ ಅದರ ಪರಿಣಾಮ ಅಡಗಿದೆ. ಆದ್ದರಿಂದ ಸರಿಯಾದ ಅಥವಾ ನಿಖರವಾದ ಚಿಂತನೆಯು ನಿಮ್ಮದಾಗಿರಲಿ.
ಸಾಧನೆಗೆ ನಿರ್ದಿಷ್ಟ ಕಾರ್ಯದಲ್ಲಿನ ಗಮನ ಬಹಳ ಮುಖ್ಯ. ಆದರೆ ಗಮನವು ನಿಮ್ಮ ನಿಯಂತ್ರಣದಲ್ಲಿರಬೇಕು. ಸಾಧನೆಗೆ ಕಾರ್ಯದ ಮೇಲೆ ಮನಸ್ಸಿನ ಶಕ್ತಿಯನ್ನು ಕೇಂದ್ರಿÃಕರಿಸುವುದು ಮತ್ತು ತನ್ನ ಇಚ್ಛೆಯಂತೆ ಅದನ್ನು ನಿರ್ದೇಶಿಸುವುದು ಅಗತ್ಯ. ನಿಯಂತ್ರಿತ ಗಮನವು ಮಾನವ ಪ್ರಯತ್ನದಲ್ಲಿ ಪಾಂಡಿತ್ಯಕ್ಕೆ ಕಾರಣವಾಗುತ್ತದೆ.
ಸಾಂಘಿಕ ಕೆಲಸವು ಉಧ್ಯಮದಲ್ಲಿ ಚೈತನ್ಯ ಮೂಡಿಸುತ್ತದೆ. ಸೌಹಾರ್ಧಯುತ ಸಹಭಾಗಿತ್ವವು ಸಾಮರಸ್ಯದ ಸಹಕಾರಕ್ಕೆ ಕಾರಣವಾಗುತ್ತದೆ. ಸಾಮರಸ್ಯದ ಸಹಕಾರವು ಅಮೂಲ್ಯ ಆಸ್ತಿಯಾಗಿದ್ದು ಅದರ ಕೊಡುಗೆ ಅನನ್ಯ. ಇದೊಂದು ಸಾಧನೆಯ ಹಾದಿಯಲ್ಲಿನ ಬಹು ಪ್ರಮುಖ ಮೈಲಿಗಲ್ಲು. 
ಸಾಧನೆಯ ಹಾದಿಯಲ್ಲಿನ ಕೆಲ ವೈಫಲ್ಯಗಳು ತಾತ್ಕಾಲಿಕ ಸೋಲನ್ನು ಪ್ರತಿನಿಧಿಸುತ್ತವೆ. ಸೋಲಿನ ನಿಖರವಾದ ಕಾರಣವು ಅದನ್ನು ಎದುರಿಸುವ ಮಾರ್ಗ ಸೂಚಿಸುತ್ತವೆ. ಹಾಗಾಗಿ ಸೋಲಿಗೆ ಎದುರದೇ ಅದನ್ನು ಮೆಟ್ಟಿನಿಲ್ಲುವ ತಾಳ್ಮೆ ಬೆಳೆಸಿಕೊಳ್ಳಬೇಕು.
ಸೃಜನಾತ್ಮಕ ದೃಷ್ಟಿಕೋನವು ಯಶಸ್ಸಿನ ಮತ್ತೊಂದು ಆಯಾಮವನ್ನು ತೆರೆದಿಡುತ್ತದೆ. ಕೇವಲ ಬುದ್ದಿವಂತಿಕೆ  ಇದ್ದರೆ ಸಾಲದು. ಬುದ್ದಿವಂತಿಕೆಯನ್ನು ಒರೆಗೆ ಹಚ್ಚುವ ಸೃಜನಾತ್ಮಕ ಬುದ್ದಿವಂತಿಕೆ ಪ್ರತಿಭಾವಂತಿಕೆಯನ್ನು ಗಳಿಸಿಕೊಡುತ್ತದೆ. 
ಆರೋಗ್ಯವು ಪ್ರಜ್ಞಾಪೂರ್ವಕ ಸಂಜ್ಞೆಯೊಂದಿಗೆ ಆರ್ಥಿಕ ಯಶಸ್ಸನ್ನು ಗಳಿಸುವ ಮೂಲಕ ಸಾಮಾಜಿಕ ಮನ್ನಣೆಗೆ ಕಾರಣವಾಗುತ್ತದೆ. ಆರೋಗ್ಯವಾದ ದೇಹದಲ್ಲಿ ಆರೋಗ್ಯವಾದ ಮನಸ್ಸಿರಬೇಕು ಎಂದಿರುವುದು ಇದಕ್ಕೆÃ ಅಲ್ಲವೇ?
ಸಮಯ ಮತ್ತು ಹಣ ಅಮೂಲ್ಯವವಾದ ಸಂಪನ್ಮೂಲಗಳಾಗಿವೆ. ಯಶಸ್ಸಿನ ಪ್ರಯತ್ನದಲ್ಲಿ ಇವುಗಳ ಬಳಕೆ ಮತ್ತು ಸದ್ವಿನಿಯೋಗ ತುಂಬಾ ಮಹತ್ವದ್ದಾಗಿದೆ. ಸಂದರ್ಭೋಚಿತವಾಗಿ ಇವುಗಳನ್ನು ಬಳಸುವ ಚಾಣಾಕ್ಷತೆ ತಿಳಿದಿರಬೇಕು.
ಮನಸ್ಸಿನ ಶಾಂತಿ ಮತ್ತು ಆರೋಗ್ಯಕ್ಕೆ ಆಹಾರ  ಪ್ರಮುಖವಾದದ್ದು. ಧನಾತ್ಮಕ ಆಹಾರ ಪದ್ದತಿಗಳನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಬಹುದು. 

ಆರ್.ಬಿ.ಗುರುಬಸವರಾಜ ಹೊಳಗುಂದಿ


ಎಜ್ಯು ಆ್ಯಪ್ಸ್ Educational apps

ದಿನಾಂಕ 4-4-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಭವಿಷ್ಯದ ಬೆಳಕಿಂಡಿಯಾಗುವ ಎಜ್ಯು ಆ್ಯಪ್ಸ್


ಇಂದು ಶಿಕ್ಷಣ ಕ್ಷೆತ್ರವು ವಿಸ್ತಾರವಾಗುತ್ತಿದೆ. ಕಲಿಕೆಯು ಕೇವಲ ತರಗತಿ ಕೋಣೆಗೆ ಸೀಮಿತವಾಗಿಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿವಿಧ ಮೂಲಗಳಿಂದ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವ ಅಗತ್ಯತೆ ಇದೆ. ಹಾಗಾಗಿ ಬೋಧನೆ ಮತ್ತು ಕಲಿಕಾ ವಿಧಾನಗಳು ಗ್ರಹಿಕೆಯನ್ನು ಮೀರಿ ವಿಸ್ತಾರಗೊಳ್ಳುತ್ತಿವೆ ಮತ್ತು ಅಭಿವೃದ್ದಿಗೊಳ್ಳುತ್ತಿವೆ. 
   ಇಂದಿನ ಪ್ರಪಂಚವು ವೇಗವಾಗಿ ಬದಲಾಗುತ್ತಿದೆ. ಅದಕ್ಕೆ ಪೂರಕವಾಗಿ ಶೈಕ್ಷಣಿಕ ವ್ಯವಸ್ಥೆಯಲ್ಲೂ ಬದಲಾವಣೆಗಳು ಅಗತ್ಯವಾಗಿವೆ. ಈ ನಿಟ್ಟಿನಲ್ಲಿ  ಹೆಚ್ಚುತ್ತಿರುವ ವಿದ್ಯಾರ್ಥಿಗಳ ನಡುವಿನ ಸ್ಪರ್ಧೆಯ ಒತ್ತಡವನ್ನು ನಿಭಾಯಿಸಲು ಕೆಲವು ಶೈಕ್ಷಣಿಕ ಆ್ಯಪ್‌ಗಳು ರೂಪುಗೊಂಡಿವೆ. ಮೊಬೈಲ್ ಆಧಾರಿತ ಕಲಿಕೆ ಮತ್ತು ಮೊಬೈಲ್ ಉಪಕರಣಗಳು ಇಂದಿನ ಯುವಜನತೆಯ ಅವಿಭಾಜ್ಯ ಅಂಗವಾಗಿವೆ. ಇದನ್ನು ಗಮನಿಸಿದ ಕೆಲವು ಶೈಕ್ಷಣಿಕ ಸಂಸ್ಥೆಗಳು ಶಾಲಾ ಕಾಲೇಜುಗಳ ಶೈಕ್ಷಣಿಕ ಕಲಿಕೆಗೆ ಪೂರಕವಾದ ಮಾಹಿತಿ/ಶಿಕ್ಷಣ ನೀಡುವ ಸದುದ್ದೆÃಶದಿಂದ ಶೈಕ್ಷಣಿಕ ಆ್ಯಪ್‌ಗಳನ್ನು ಸಿದ್ದಪಡಿಸಿವೆ. 
ತಂತ್ರಜ್ಞಾನದ ಆಗಮನವು ಸ್ವಯಂ ಕಲಿಕೆಯ ಸಾಧ್ಯತೆಗೆ ಸಾಕಷ್ಟು ಅವಕಾಶಗಳನ್ನು ತಂದಿಟ್ಟಿದೆ. ಯುವಜನತೆಯ ಆಶೊತ್ತರಗಳನ್ನು ಗಮನದಲ್ಲಿಟ್ಟುಕೊಂಡು ನಾವೀನ್ಯ ರೀತಿಯ ಬೋಧನಾ ಕಲಿಕಾ ವಿಧಾನಗಳು ರೂಪುಗೊಳ್ಳುತ್ತಿವೆ. ಅದಕ್ಕಾಗಿ ಅನೇಕ ಶೈಕ್ಷಣಿಕ ಆ್ಯಪ್‌ಗಳು ಸಿದ್ದಗೊಂಡಿವೆ. ನೀವು ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ ಬಳಸುತ್ತಿದ್ದರೆ ಇಂತಹ ಶೈಕ್ಷಣಿಕ ಆ್ಯಪ್‌ಗಳನ್ನು ಸುಲಭವಾಗಿ ಬಳಸಬಹುದು. 
         ಶೈಕ್ಷಣಿಕ ಆ್ಯಪ್‌ಗಳು ಕಲಿಕಾರ್ಥಿಗಳ ವೈಯಕ್ತಿಕ ಕಲಿಕೆಗೆ ಸಾಕಷ್ಟು ಅವಕಾಶಗಳನ್ನು ಒದಗಿಸುತ್ತವೆ. ವಿವಿಧ ವಿಷಯ ಮತ್ತು ಪರಿಕಲ್ಪನೆಗಳನ್ನು ವೈವಿಧ್ಯಮಯವಾಗಿ ಕಲಿಯುವ, ಅಭ್ಯಾಸ ಮತ್ತು ಅಧ್ಯಯನ ಮಾಡುವ ಸಾಧ್ಯತೆಗಳಿವೆ. ಇಲ್ಲಿ ವಿಷಯ ನಿರೂಪಣೆಯು ತರಗತಿ ಕೋಣೆಗಿಂತ ವಿಭಿನ್ನವಾಗಿರುವುದರಿಂದ ಕಲಿಕೆಯು ಆನಂದದಾಯಕವಾಗಿರುತ್ತದೆ. ಎಲ್ಲಾ ವಯಸ್ಸಿನ ವಿದ್ಯಾರ್ಥಿಗಳಿಗೂ ಪ್ರತ್ಯೆÃಕವಾದ ಉತ್ತಮ ಗುಣಮಟ್ಟದ ಶೈಕ್ಷಣಿಕ ಆ್ಯಪ್‌ಗಳಿವೆ. 2017ರ ಅಂತ್ಯಕ್ಕೆ ಒಟ್ಟು 116 ಶೈಕ್ಷಣಿಕ ಆ್ಯಪ್‌ಗಳು ಸಿದ್ದಗೊಂಡಿವೆ. ಅವುಗಳಲ್ಲಿ ಕೆಲವು ಆ್ಯಪ್‌ಗಳ ಬಗ್ಗೆ ತಿಳಿಯೋಣ. 
ಕೋರ್ಸೆರಾ(ಅouಡಿseಡಿಚಿ) : ಶಿಕ್ಷಣದ ವಿವಿಧ ಕ್ಷೆÃತ್ರಗಳ ವಿಸ್ತಾರವನ್ನು ಹೊಂದಿದ ಹಲವು ಅಪ್ಲಿಕೇಶನ್‌ಗಳಲ್ಲಿ ಕೋರ್ಸೆರಾ ಒಂದಾಗಿದೆ. ಕಂಪ್ಯೂಟರ್ ಸೈನ್ಸ್, ಡೇಟಾ ಸೈನ್ಸ್, ಹಣಕಾಸು ಮತ್ತು ವ್ಯವಹಾರ, ವಿದೇಶಿ ಭಾಷೆಗಳನ್ನು ಒಳಗೊಂಡಂತೆ ಹಲವಾರು ಸ್ವದೇಶಿ ಭಾಷೆಗಳನ್ನು ಈ ಆ್ಯಪ್ ಮೂಲಕ ಕಲಿಯಬಹುದು. 20ಕ್ಕೂ ಹೆಚ್ಚಿನ ಕ್ಷೆತ್ರಗಳ ವಿಷಯಗಳಿದ್ದು 100ಕ್ಕೂ ಹೆಚ್ಚಿನ ಉನ್ನತ ವಿಶ್ವವಿದ್ಯಾನಿಲಯದೊಂದಿಗೆ ಪಾಲುದಾರಿಕೆ ಇದೆ. 1000ಕ್ಕೂ ಹೆಚ್ಚು ಸಿಲಬಸ್‌ಗಳಿವೆ. ಅವುಗಳಲ್ಲಿ ವೀಡಿಯೋ ಪಾಠಗಳು ಮತ್ತು ಟ್ಯುಟೋರಿಯಲ್‌ಗಳಿವೆ. ಕೆಲವು ಪಾಠಗಳು ಉಚಿತವಾಗಿದ್ದರೆ ಕೆಲವು ಕನಿಷ್ಠ ಬೆಲೆಯನ್ನು ನಿಗದಿಪಡಿಸಿವೆ. ನಿಮ್ಮ ಬಜೆಟ್‌ಗೆ ತಕ್ಕಂತ ಪಾಠವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶಗಳಿವೆ. ಆನ್‌ಲೈನ್ ಟ್ಯುಟೋರಿಯಲ್‌ಗಳು ನಿರ್ದಿಷ್ಟ ಸಮಯಕ್ಕೆ ಲಾಕ್ ಆಗದಿರುವುದು ಬಳಕೆದಾರ ಸ್ನೆಹಿಯಾಗಿದೆ. 14 ಭಾಷೆಗಳಲ್ಲಿ ಲಭ್ಯವಿರುವ ಈ ಆ್ಯಪ್‌ನ್ನು ಪ್ಲೆಸ್ಟೊರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. 
ಇ.ಡಿ.ಎಕ್ಸ್. : ವಿಶಿಷ್ಠ ಶೈಕ್ಷಣಿಕ ಅಪ್ಲಿಕೇಶನ್‌ಗಳಲ್ಲಿ ಇ.ಡಿ.ಎಕ್ಸ್ ಕೂಡಾ ಒಂದಾಗಿದೆ. ಇದು ವೃತ್ತಿಪರರಿಂದ ಶಿಕ್ಷಣ ನೀಡುವ ಬದಲು ನೇರವಾಗಿ ಕಾಲೇಜುಗಳಿಂದ ಶಿಕ್ಷಣ ನೀಡುತ್ತದೆ. ಆದರೆ ಇದರಲ್ಲಿ ಕಾನೂನುಬದ್ದ ಪದವಿ ಪಡೆಯುವುದಿಲ್ಲ ಅಷ್ಟೆ. ಆದಾಗ್ಯೂ ಕಂಪ್ಯೂಟರ್ ಪ್ರೊÃಗ್ರಾಮಿಂಗ್, ಎಂಜಿನಿಯರಿಂಗ್, ಇತಿಹಾಸ, ಮನಶಾಸ್ತç, ಆರೋಗ್ಯ, ಇತರೆ ನೂರಾರು ಶೈಕ್ಷಣಿಕ ಕಲಿಕೆಗಳಿವೆ. ಇಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ವೀಡಿಯೋ ಉಪನ್ಯಾಸಗಳಿವೆ. ಜೊತೆಗೆ ಟ್ಯುಟೋರಿಯಲ್‌ಗಳೂ ಸಹ ಲಭ್ಯ ಇವೆ. ಇಲ್ಲಿ ಎಲ್ಲವೂ ಮುಕ್ತವಾಗಿದೆ. ಉನ್ನತ ಶಿಕ್ಷಣದ ಹಂಬಲ ಇರುವ ಯಾರಾದರೂ ಈ ಆ್ಯಪ್ ಬಳಸಬಹುದು. 
ಖಾನ್ ಅಕಾಡೆಮಿ : ಖಾನ್ ಅಕಾಡೆಮಿ ಮತ್ತೊಂದು ಶಿಕ್ಷಣ ವೇದಿಕೆಯಾಗಿದೆ. ಇದು ಯುವಜನತೆಗೆ ಮತ್ತು ಮಕ್ಕಳಿಗೆ ವಿವಿಧ ಶಿಕ್ಷಣ ಮತ್ತು ತರಗತಿ ನೀಡುತ್ತದೆ. ಪ್ರಸ್ತುತ 10,000ಕ್ಕೂ ಹೆಚ್ಚಿನ ವೀಡಿಯೋ ತರಗತಿಗಳನ್ನು ಹೊಂದಿದೆ. ಇವೆಲ್ಲವೂ ಸಂಪೂರ್ಣವಾಗಿ ಉಚಿತವಾಗಿವೆ. ಖಾನ್ ಅಕಾಡೆಮಿ ಗಣಿತ, ಅರ್ಥಶಾಸ್ತç, ಇತಿಹಾಸ, ವಿಜ್ಞಾನ ಹೀಗೆ ಅನೇಕ ವಿಷಯಗಳ ಸಂಕೀರ್ಣ ಅಂಶಗಳನ್ನು ಸುಲಭವಾಗಿ ತಿಳಿಸುವ ಪ್ರಯತ್ನ ಮಾಡುತ್ತದೆ. ಇದು ಆಫ್‌ಲೈನ್‌ನಲ್ಲೂ ಕೂಡಾ ಕಾರ್ಯ ನಿರ್ವಹಿಸುತ್ತದೆ. ಹಾಗಾಗಿ ಇದೊಂದು ಬೆಸ್ಟ್ ಅಪ್ಲಿಕೇಶನ್ ಆಗಿದೆ. 
ಮೆಸ್‌ಮೆರೈಸ್ : ಇದೊಂದು ಭಾಷಾ ಕಲಿಕೆಯ ಅಪ್ಲಿಕೇಶನ್ ಆಗಿದೆ. ಇಲ್ಲಿ ಸುಲಭವಾಗಿ ಭಾಷೆಯನ್ನು ಕಲಿಸಲಾಗುತ್ತದೆ. ಕಲಿಕೆಯನ್ನು ಪ್ರೊÃತ್ಸಾಹಿಸುವ ಆಟಗಳು, ಗುರಿ ತಲುಪುವ ಪ್ರೆÃರಕಾಂಶಗಳು ಇಲ್ಲಿವೆ. ಇದರ ಬಹುದೊಡ್ಡ ವಿಶೇಷ ಎಂದರೆ ನೀವು ಕಲಿಯಬಹುದಾದ 100 ಕ್ಕಿಂತ ಹೆಚ್ಚಿನ ಭಾಷಾ ಕೌಶಲ್ಯಗಳನ್ನು ಕಲಿಸುತ್ತದೆ. ಪ್ರಾಥಮಿಕ ಕಲಿಕೆಗೆ ಚಂದಾದಾರಿಕೆ ಉಚಿತವಾಗಿದ್ದು ಉನ್ನತ ಕಲಿಕೆಗೆ ಕನಿಷ್ಠ ಚಂದಾದಾರಿಕೆಯನ್ನು ಬೇಡುತ್ತದೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಸರಳವಾದ ಕಲಿಕೆ ಬಯಸುವವರಿಗೆ ಉತ್ತಮ ಆ್ಯಪ್ ಇದಾಗಿದೆ. 
ಯುಡೆಮಿ  : ಮೊಬೈಲ್ ಮೂಲಕ ಶಿಕ್ಷಣ ನೀಡುವ ಮೊಟ್ಟಮೊದಲ ಶೈಕ್ಷಣಿಕ ಆ್ಯಪ್ ಇದಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಅಡುಗೆಮನೆ ಶಿಕ್ಷಣದಿಂದ ವಿದೇಶಿ ಭಾಷಾ ಕಲಿಕೆವರೆಗಿನ ವ್ಯಾಪ್ತಿಯ 32.000 ಕ್ಕೂ ಹೆಚ್ಚಿನ ಕಲಿಕಾಂಶಗಳನ್ನು ಹೊಂದಿದೆ. ವ್ಯವಹಾರ, ಮಾರ್ಕೆಟಿಂಗ್, ಉಧ್ಯಮಶೀಲತೆ, ವಿನ್ಯಾಸ, ಆರೋಗ್ಯ, ಸಂಗೀತ, ಫಿಟ್ನೆಸ್, ಛಾಯಾಗ್ರಹಣ, ಸಾಫ್ಟ್ವೇರ್ ಇತ್ಯಾದಿ ಕೋರ್ಸ್ಗಳನ್ನು ಹೊಂದಿದೆ. ವಿಷಯದ ಗುಣಮಟ್ಟ ಉನ್ನತ ಶ್ರೆÃಣಿಯಲ್ಲಿದೆ. ಕೆಲವು ಪಾಠಗಳು ಸಾಧಾರಣವಾಗಿವೆ. ಇಲ್ಲಿ ಉಚಿತ ಮತ್ತು ಪಾವತಿಸುವ ಶಿಕ್ಷಣವೂ ಲಭ್ಯವಿದೆ. ಈ ಆ್ಯಪ್ ಕಲಿಕೆಗೆ ಬಹಳ ಯೋಗ್ಯವಾಗಿದೆ ಮತ್ತು ಹೆಚ್ಚು ವೈಶಿಷ್ಟö್ಯಗಳನ್ನು ಹೊಂದಿದೆ.
ಟೆಡ್ ಟಾಕ್ಸ್ : ಕೆಲವೊಮ್ಮೆ ನೇರ ಶಿಕ್ಷಣವು ಸಾಕಾಗುವುದಿಲ್ಲ ಅಥವ ಪರಿಣಾಮಕಾರಿಯಾಗುವುದಿಲ್ಲ. ಅದಕ್ಕಾಗಿ ಒಳನೋಟದ ಆರೋಗ್ಯಕರ ಡೋಸ್ ಬೇಕಾಗುತ್ತದೆ. ನಿಮ್ಮನ್ನು ನೀವೇ ಮಾನಸಿಕವಾಗಿ ಒಳಗಿನಿಂದಲೇ ತಿದ್ದಿಕೊಳ್ಳುವ ಅವಶ್ಯಕತೆ ಇರುತ್ತದೆ. ಇದಕ್ಕಾಗಿ ಒಂದಿಷ್ಟು ಪ್ರೆÃರಣಾತ್ಮಕ ಮಾತುಗಳು ಅಗತ್ಯ ಎನಿಸುತ್ತವೆ. ಇಂತಹ ಪ್ರೆÃರಣಾತ್ಮಕ ಮಾತುಗಳಿಗೆ ಪ್ರಸಿದ್ದವಾಗ ಅಪ್ಲಿಕೇಶನ್ ಎಂದರೆ ಟೆಡ್ ಟಾಕ್ಸ್. ಇಲ್ಲಿನ ಮಾತುಗಳು ಪ್ರಬುದ್ದವಾಗಿದ್ದು ನಿಮ್ಮನ್ನು ನೀವೇ ಅರಿಯಲು ಸಾಧ್ಯವಾಗುತ್ತದೆ ಮತ್ತು ಮಾನಸಿಕವಾಗಿ ಸಬಲತೆ ಹೊಂದುವಂತೆ ಮಾಡುತ್ತದೆ. ಪ್ರಪಂಚದಾದ್ಯಂತ ಪ್ರಸಿದ್ದರಾದ ಸ್ಪಿÃಕರ್‌ಗಳ ಮಾತಿನ ಬಹುದೊಡ್ಡ ಸಂಗ್ರಹವೇ ಇಲ್ಲಿದೆ. 1700ಕ್ಕೂ ಹೆಚ್ಚಿನ ವೀಡಿಯೋಗಳಿದ್ದು 22 ವಿವಿಧ ಭಾಷೆಗಳಲ್ಲಿ ಲಭ್ಯ ಇವೆ. 
ಬುಸು : ನಿಮ್ಮ ಹೊಸ ಆಂಡ್ರಾಯ್ಡ್ ಫೋನ್ ನಿಮಗೆ ಎಷ್ಟು ಭಾಷೆಗಳನ್ನು ಕಲಿಸಬಹುದು? ಭಾಷಾವಿನ್ಯಾಸ ಆಯ್ಕೆ ಮಾಡಲು ಹಲವಾರು ಭಾಷೆಗಳಿದ್ದರೂ ಆ ಭಾಷೆಯನ್ನು ಕಲಿಯಲು ಆಗುವುದಿಲ.್ಲ ಅಲ್ಲವೇ? ವಿಶ್ವದ 11 ಜನಪ್ರಿಯ ಭಾಷೆಗಳಲ್ಲಿ ಓದುವುದು, ಬರೆಯುವುದು, ಮಾತನಾಡುವುದನ್ನು ಕಲಿಸುವ ವಿಶಿಷ್ಠ ಆ್ಯಪ್ ಎಂದರೆ ಬುಸು. ಬುಸುವಿನ ತಂತ್ರಗಾರಿಕೆ ಕೇವಲ ಒಣ ಪುಸ್ತಕಗಳನ್ನು ಓದುವುದಕ್ಕಿಂತ ಅರ್ಥಗರ್ಭಿತ ಹಾಗೂ ಪರಿಣಾಮಕಾರಿಯಾಗಿವೆ. ನೀವು ಈ ಆ್ಯಪ್ ಮೂಲಕ 45 ಮಿಲಿಯನ್‌ಗೂ ಹೆಚ್ಚು ಜನರೊಂದಿಗೆ ಸಂವಹನ ಮಾಡಬಹುದು. ಸ್ಥಳಿಯ ಭಾಷಿಕರೊಡನೆ ಮಾತನಾಡುವ ಮೂಲಕ ನಿಮ್ಮ ಹೊಸ ಭಾಷೆಯನ್ನು ಕಲಿಯಬಹುದು. ಆ್ಯಪ್ ನೀಡುವ ಸಾಮರ್ಥ್ಯವನ್ನು ಗಳಿಸುವ ಮೂಲಕ ಮುಂದಿನ ಸಾಮರ್ಥ್ಯಕ್ಕೆ ಕಾಲಿಡಬಹುದು.
ಸ್ಟಾರ್ ಚಾರ್ಟ್  : ಬಾಹ್ಯಾಕಾಶವನ್ನು ಪ್ರಿÃತಿಸುವವರಿಗೆ ಈ ಅಪ್ಲಿಕೇಶನ್ ಅತ್ಯಗತ್ಯವಾಗಿದೆ. ಸ್ಟಾರ್ ಚಾರ್ಟ್ ನಿಮ್ಮ ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್‌ಗೆ ರಾತ್ರಿ ಆಕಾಶವನ್ನು ತರುತ್ತದೆ ಮತ್ತು ಯಾವುದೇ ಕೋನದಿಂದ ಅದನ್ನು ಅನ್ವೆÃಷಿಸುವ ಸಾಮರ್ಥ್ಯವನ್ನು ನೀಡುತ್ತದೆ. ನಿಮ್ಮ ಸಾಧನದಲ್ಲಿ ಅಪ್ಲಿಕೇಶನ್ ತೆರೆದು ಗಾಳಿಯಲ್ಲಿ ಕೈಆಡಿಸಿದರೆ ನಿಮ್ಮ ಸ್ಥಳವನ್ನಾಧರಿಸಿ ನೀವು ಎಲ್ಲಿದ್ದಿÃರಿ ಎಂಬುದನ್ನು ನಿರ್ಧರಿಸುತ್ತದೆ. ಸ್ಟಾರ್ ಚಾರ್ಟ್ನಲ್ಲಿ 88 ನಕ್ಷತ್ರಪುಂಜಗಳು ಮತ್ತು 1,20,000ಕ್ಕೂ ಹೆಚ್ಚಿನ ವಿಭಿನ್ನ ನಕ್ಷತ್ರಗಳನ್ನು ಒಳಗೊಂಡಿದೆ. ನಕ್ಷತ್ರ/ನಕ್ಷತ್ರಪುಂಜದ ಬಗ್ಗೆ ವಿವರವಾಗಿ ತಿಳಿಯಲು ಅದರ ಮೇಲೆ ಟ್ಯಾಪ್ ಮಾಡಿ ಝೂಮ್ ಮಾಡಿದರೆ ಸಾಕಷ್ಟು ವಿವರಗಳು ಲಭ್ಯವಾಗುತ್ತವೆ. ಈ ಕಾರಣಕ್ಕಾಗಿ ಆಂಡ್ರಾಯ್ಡ್ಗಳಲ್ಲಿ ಲಭ್ಯ ಇರುವ ಅತ್ಯುತ್ತಮ ಖಗೋಳವಿಜ್ಞಾನದ ಅಪ್ಲಿಕೇಶನ್ ಇದಾಗಿದೆ. ಸ್ಟಾರ್ ಚಾರ್ಟ್ ಸಾಕಾಗದಿದ್ದರೆ ಸೋಲಾರ್ ವಾಕ್ ಅಥವಾ ಸ್ಕೆöÊಮ್ಯಾಪ್ ಬಳಸಬಹುದು.
ಸ್ಪಿಡ್ ಅನಾಟಮಿ ಕ್ವಿಜ್  : ನಿಮ್ಮ ಸ್ವಂತ ದೇಹದ ಬಗ್ಗೆ ನಿಮಗೇನು ತಿಳಿದಿದೆ? ನಿಮ್ಮ ನರವ್ಯೂಹದಲ್ಲಿನ ಕೋಶಗಳೆಷ್ಟು? ನಿಮ್ಮ ಹೃದಯ ಒಂದು ದಿನದಲ್ಲಿ ಎಷ್ಟು ಬಾರಿ ರಕ್ತವನ್ನು ಪಂಪ್ ಮಾಡುತ್ತದೆ? ಇತ್ಯಾದಿ ವಿಷಯಗಳು ನಿಮಗೆ ಆಶ್ಚರ್ಯ ತರುತ್ತವೆ. ಅನಾಟಮಿ ಎಂಬುದು ಆಳವಾಗಿ ಕಲಿಯುವ ಒಂದು ವಿಷಯವಾಗಿದೆ. ಸ್ಪಿÃಡ್ ಅನಾಟಮಿ ಕ್ವಿಜ್ ಅಪ್ಲಿಕೇಶನ್ ಮೂಲಕ ದೇಹದ ವಿವಿಧ ಅಂಗಗಳ ಪರಿಚಯ, ಅವುಗಳ ಕಾರ್ಯ ರಚನೆ, ಕಾರ್ಯವಿಧಾನ, ಉಪಯುಕ್ತತೆ ಮುಂತಾದ ವಿಷಯಗಳನ್ನು ತಿಳಿಯಬಹುದು. ಇದೊಂದು ರೀತಿಯ ಆಟದಂತಿದ್ದು, ಸಮಯದ ಮಿತಿಯೊಳಗೆ ವಿವಿಧ ಅಂಗಗಳನ್ನು ಗುರುತಿಸುವ ಮತ್ತು ಅವುಗಳ ಬಗ್ಗೆ ತಿಳಿಯುವ ಆಟವಾಗಿದೆ. ಇದು ಮಾನವನ ದೇಹದ ಬಗ್ಗೆ ಹೆಚ್ಚು ವೇಗವಾಗಿ ಕಲಿಯುವ ಮೊದಲ ಹೆಜ್ಜೆಯಾಗಿದೆ.
ಸೋಕ್ರಾಂಟಿಕ್  : ಗಣಿತ ಎಂಬುದೇ ಬಹುತೇಕರಿಗೆ ಭಯದ ವಿಷಯ. ಕೆಲವೊಂದು ಗಣಿತದ ಸಮಸ್ಯೆಗಳನ್ನು ಬಿಡಿಸುವ ಮಾರ್ಗವೇ ತಿಳಿಯುವುದಿಲ್ಲ. ಅಂತಹ ಕಠಿಣ ಸಮಸ್ಯೆಯ ಲೆಕ್ಕವನ್ನು ಹಂತಹಂತವಾಗಿ ಬಿಡಿಸುವ ಮಾರ್ಗವನ್ನು ತಿಳಿಸುವ ಆ್ಯಪ್ ಎಂದರೆ ಸೋಕ್ರಾö್ಯಟಿಕ್. ಆ್ಯಪ್‌ನ್ನು ತೆರೆದಾಗ ಕ್ಯಾಮೆರಾ ತೆರೆಯುತ್ತದೆ. ಕ್ಯಾಮೆರಾವನ್ನು ಗಣಿತದ ಸಮಸ್ಯೆಯ ಮೇಲೆ ಕೇಂದ್ರಿಕರಿಸಿದರೆ ಸಮಸ್ಯೆಯನ್ನು ಸ್ಕಾö್ಯನ್ ಮಾಡುತ್ತದೆ. ನಂತರ ಅದರ ಲೆಕ್ಕಾಚಾರವನ್ನು ಹಂತಹಂತವಾಗಿ ಹೇಗೆ ಬಿಡಿಸಬಹುದು ಎಂಬುದನ್ನು ತಿಳಿಸುತ್ತದೆ. ಹಾಗಾಗಿ ಗಣಿತದ ಎಂತಹ ಸಮಸ್ಯೆಗಳನ್ನೂ ಕೂಡಾ ಇಲ್ಲಿ ಸುಲಭವಾಗಿ ಬಿಡಿಸುವ ವಿಧಾನ ತಿಳಿಯಬಹುದು. ಇದು ತೃಪ್ತಿ ನೀಡದಿದ್ದರೆ ಮಾಥ್ಸ್ ಟ್ರಿಕ್ಸ್ ಆ್ಯಪ್ ಬಳಸಬಹುದು.
ಇವುಗಳಲ್ಲದೇ ಇನ್ನೂ ಅನೇಕ ಶೈಕ್ಷಣಿಕ ಅಪ್ಲಿಕೇಶನ್‌ಗಳಿವೆ. ಅವುಗಳನ್ನು ಬಳಸಿಕೊಂಡು ನಿಮ್ಮ ಜ್ಞಾನವಲಯ ಉತ್ತಮಪಡಿಸಿಕೊಳ್ಳುವ ಮೂಲಕ ಶೈಕ್ಷಣಿಕ ಅಭಿವೃದ್ದಿ ಹೊಂದಬಹುದಾಗಿದೆ. 

ಆರ್.ಬಿ.ಗುರುಬಸವರಾಜ ಹೊಳಗುಂದಿ


March 29, 2018

ಹವಾಯಿ ಅವಾಂತರ Hawai in college

ವಿಜಯವಾಣಿಯ ಯುಗಾದಿ ವಿಶೇಷಾಂಕ 2018ರಲ್ಲಿ ಪ್ರಕಟವಾದ ಕಿರುಬರಹ

ಹವಾಯಿ ಅವಾಂತರ

ಈಗ್ಗೆ 28 ವರ್ಷಗಳ ಹಿಂದೆ ಕಾಲೇಜಿನಲ್ಲಿ ನಡೆದ ಪಜೀತಿಯನ್ನು ನೆನೆದರೆ ಈಗಲೂ ಮೈಜುಮ್ ಎನ್ನುತ್ತದೆ. ಹತ್ತನೇ ತರಗತಿ ಮುಗಿಸಿ ಹೂವಿನಹಡಗಲಿಯ ಜಿ,ಬಿ,ಆರ್ ಕಾಲೇಜಿನಲ್ಲಿ ಪಿಯುಸಿ(ವಿಜ್ಞಾನ ವಿಭಾಗ)ಗೆ ಸೇರಿದೆ. ಬೆಳಿಗ್ಗೆ ಎಂಟು ಗಂಟೆಯಿಂದ ಮದ್ಯಾಹ್ನ ಹನ್ನೆರಡರವರೆಗೆ ತರಗತಿಗಳು ನಡೆಯುತ್ತಿದ್ದವು. ವಾರದಲ್ಲಿ ಮೂರುದಿನ ಮದ್ಯಾಹ್ನ ಒಂದು ಗಂಟೆಯಿಂದ ಮೂರು ಗಂಟೆಯವರೆಗೆ ಪ್ರಾಯೋಗಿಕ ತರಗತಿಗಳು ನಡೆಯುತ್ತಿದ್ದವು.
ಕಾಲೇಜಿಗೆ ಸೇರಿದಾಗಲೇ ಮೊದಲ ಬಾರಿಗೆ ಚಪ್ಪಲಿ ಹಾಕಿಕೊಂಡದ್ದು. ಹವಾಯಿ ಚಪ್ಪಲಿ ಅಂದಿನ ಟ್ರೆಂಡ್. ಅವುಗಳನ್ನು ಹಾಕಿಕೊಂಡು, ಅವುಗಳಿಂದ ಪಟ್ ಪಟ್ ಎಂಬ ಸದ್ದು ಮಾಡುತ್ತಾ ನಡೆಯುವುದೇ ಒಂದು ಮೋಜು. ಅಂದು ನಮಗೆ ಕೆಮಿಷ್ಟ್ರಿ ಲ್ಯಾಬ್ ಇತ್ತು.  ಊರಿನಿಂದ ತಂದಿದ್ದ ಊಟ ಮುಗಿಸಿ ಮದ್ಯಾಹ್ನ ಹನ್ನೆರಡೂವರೆಗೆ ಗೆಳೆಯ ಇಸ್ರಾರ್ ಅಹ್ಮದ್ ಮತ್ತು ನಾನು ಕಾಲೇಜಿಗೆ ವಾಪಾಸಾದೆವು. ಪ್ರಾಯೋಗಿಕ ತರಗತಿಗೆ ಇನ್ನೂ ಅರ್ದಗಂಟೆ ಸಮಯವಿತ್ತು. ಕಾಲೇಜಿನಲ್ಲಿ ಯಾರೂ ಇರಲಿಲ್ಲ. ನೀರವ ಮೌನ ಅಲ್ಲಿ ನೆಲೆಸಿತ್ತು. ನಾವಿಬ್ಬರೂ ಪರಸ್ಪರ ಜೋಕ್ಸ್‍ಗಳನ್ನು ಹೇಳುತ್ತಾ ಜೋರಾಗಿ ನಗುತ್ತಾ ಲ್ಯಾಬ್ ಕಡೆಗೆ ಹೆಜ್ಜೆ ಹಾಕುತ್ತಿದ್ದೆವು. ಪ್ರಿನ್ಸಿಪಾಲ್ ಛೇಂಬರ್ ದಾಟಿ ಲ್ಯಾಬ್‍ಗೆ ಹೋಗಬೇಕಾಗಿತ್ತು.  ಕಾಲೇಜು ನಿಶಬ್ದವಾಗಿದ್ದರಿಂದ  ನಮ್ಮಿಬ್ಬರದೇ ನಗು ಮತ್ತು ಹವಾಯಿ ಚಪ್ಪಲಿ ಶಬ್ದ ಮಾರ್ಧನಿಸುತ್ತಿತ್ತು. ನಗುವಿಗಿಂತ ಚಪ್ಪಲಿ ಶಬ್ದ ಜೋರಾಗಿಯೇ ಇತ್ತು. ನಮಗೆ ಬೇರೆ ಯಾರ ಮತ್ತು ಯಾವುದರ ಪರಿವೆಯೇ ಇರಲಿಲ್ಲ. ಇಬ್ಬರೂ ನಗುವಿನಲ್ಲೇ ಮೈಮರೆತಿದ್ದೆವು.
ಆಗ ಇದ್ದಕ್ಕಿದ್ದಂತೆ “ಏಯ್ ಬನ್ರೋ ಇಲ್ಲಿ” ಎಂಬ ಮಾತು ಕೇಳಿ ಇಬ್ಬರೂ ಬೆಚ್ಚಿದೆವು. ಪ್ರಿನ್ಸಿಪಾಲರು ಛೇಂಬರಿನ ಬಾಗಿಲಲ್ಲಿ ನಿಂತು ಕರೆಯುವುದನ್ನು ಕಂಡು ಬೆಚ್ಚಿದೆವು. ಆಗ ಕೆ.ವಿರುಪಾಕ್ಷಗೌಡ್ರು ಪ್ರಿನ್ಸಿಪಾಲರಾಗಿದ್ದರು. ಶಿಸ್ತು ಮತ್ತು ಸಂಯಮಕ್ಕೆ ಮತ್ತೊಂದು ಹೆಸರೇ ಕೆ.ವಿ.ಗೌಡ್ರು. ಅಂತಹ ಘನ ವ್ಯಕ್ತಿತ್ವಕ್ಕೆ ಸಿಟ್ಟು ಬಂದ್ದದ್ದು ಕಂಡು ಆಶ್ಚರ್ಯ ಮತ್ತು ಭಯ ಮಿಶ್ರಭಾವಗಳು ಉಂಟಾಗಿ ಕಾಲುಗಳು ನಡುಗತೊಡಗಿದವು. ಆ ಧ್ವನಿ ಮತ್ತೊಮ್ಮೆ ಬಂತು. “ಏಯ್ ಬನ್ರೋ ಇಲ್ಲಿ, ಕರೆದದ್ದು ಕೇಳಲಿಲ್ವಾ?”. ಕೈಕಟ್ಟಿಕೊಂಡು ಛೇಂಬರಿನತ್ತ ಹೆಜ್ಜೆ ಹಾಕಿದೆವು. ಅವರು ಅದಾಗಲೇ ತಮ್ಮ ಆಸನದಲ್ಲಿ ಕುಳಿತರು. ನಾವು ಒಳಹೋಗಿ ಕೈಕಟ್ಟಿಕೊಂಡು ತಲೆಬಗ್ಗಿಸಿಕೊಂಡು ನಿಂತೆವು. “ಯಾವ ಕ್ಲಾಸ್?” ಎಂಬ ಮೊದಲ ಸೌಮ್ಯ ಪ್ರಶ್ನೆಗೆ ‘ಪಿ.ಯು.ಸಿ. ಮೊದಲನೆ ವರ್ಷ ಸರ್’ ಎಂದೆನು. “ಯಾವ ಸೆಕ್ಷನ್?” ಎಂಬ ಎರಡನೆ ಪ್ರಶ್ನೆಗೆ ‘ಸ,,,ಸೈನ್ಸ್,,,’ ಎಂದು ತಡವರಿಸುತ್ತಾ ಉತ್ತರಿಸಿದೆ. “ಸೈನ್ಸ್ ಅಂತೀರಾ, ಸ್ವಲ್ಪನಾದ್ರೂ ಕಾಮನ್ ಸೆನ್ಸ್ ಇದೆಯಾ? ಕಾಲೇಜಿನ ಸಮಯ ಮುಗೀತಲ್ಲಾ. ನಿಮಗೇನು ಕೆಲಸ” ಎಂದರು. ‘ಸರ್ ನಮಗೆ ಲ್ಯಾಬ್ ಇದೆ. ಅದ್ಕೆ ಪುನಃ ಬಂದೆವು’ ಎಂದ ಗೆಳೆಯ. 
“ಹೌದಾ, ಇದೇನು ನಿಮ್ಮ ಮಾವನ ಮನೆ ಅಂದ್ಕೊಂಡಿದ್ದೀರಾ? ಇದು ಕಾಲೇಜು ಎಂಬ ಪ್ರಜ್ಞೆ ನಿಮಗಿದೆಯಾ. ಏನು ನೀವಿಬ್ರೇನಾ ಚಪ್ಪಲಿ ಹಾಕ್ಕೊಂಡಿರೋದು? ಚಟ್‍ಪಟ್ ಚಟ್‍ಪಟ್ ಅಂತ ಅನ್ಸುತ್ತಾ  ನಡೆಯೋಕೆ ನೀವೇನು ರೌಡಿಗಳಾ? ನೀವಿಲ್ಲಿ ಕಲಿಯೋಕೆ ಬರ್ತೀರಾ ಅಥ್ವಾ  ಧಿಮಾಕು ಮಾಡೋಕೆ ಬರ್ತೀರಾ? ನಿಮ್ಮ ತಂದೆ ತಾಯಿ ನಿಮ್ಗೆ ಚಪ್ಪಲಿ ಕೊಡ್ಸಿರೋದು ಕಾಲಿಗೆ ಹಾಕಿಕೊಂಡು ನಡೆಯೋಕಾ ಅಥ್ವಾ ಅದ್ರಿಂದ ಶಬ್ದ ಮಾಡುತ್ತಾ ಇನ್ನೊಬ್ರಿಗೆ ತೊಂದ್ರೆ ಕೊಡೋಕಾ? ಗೋತ್ತಾಗೋಲ್ವ ನಿಮ್ಗೆ. ನೀವೇನು ಇನ್ನೂ ಚಿಕ್ಕ ಮಕ್ಳು ಅಂದ್ಕೋಂಡಿದ್ರಾ? ನಿಮ್ಮಂಥಾವ್ರಿಗೆ ಯಾಕೆ ಕಾಲೇಜು. ದನ ಕಾಯೋಕೆ ಮಾತ್ರ ನೀವು ಲಾಯಕ್ಕು,,,,,” ಎಂದು ಬಯ್ಯುತೊಡಗಿದರು. 
ಆ ವೇಳೆಗಾಗಲೇ ಅನೇಕ ವಿದ್ಯಾರ್ಥಿಗಳು ಆಗಮಿಸಿ ನಮಗೆ ಮಂಗಳಾರತಿ ಆಗುವುದನ್ನು ಕಿಟಕಿಗಳಿಂದ ಇಣುಕಿ ನೋಡುತ್ತಿದ್ದರು. ಮೊದಲೇ ಅವರನ್ನು ಕಂಡರೆ ವಿದ್ಯಾರ್ಥಿಗಳಿಗೆಲ್ಲಾ ಭಯ. ನಮಗೆ ಕಾಲುಗಳು ಸೋತ ಅನುಭವ. ತಗ್ಗಿದ ತಲೆ ಮೇಲೆ ಎತ್ತಲಾಗದ ಸಂಧಿಗ್ದ ಪರಿಸ್ಥಿತಿ. ಮುಖದಲ್ಲಿ ಬೆವರು ಹೆಚ್ಚಾಗಿ ಕೆಳಗಿಳಿಯುತಿದೆ. ಪ್ಯಾಂಟ್ ಜೇಬಿನಲ್ಲಿದ್ದ ಕರ್ಚೀಪ್ ತೆಗೆದು ಮುಖ ಒರೆಸಲೂ ಅಗದ ಪರಿಸ್ಥಿತಿ. ಕಿಟಿಕಿಯಲ್ಲಿ ಇಣುಕಿ ಹಾಕುವ ಕಣ್ಣುಗಳು ಒಂದೆಡೆಯಾದರೆ, ಬೈಗುಳದ ಸುರಿಮಳೆ ಮತ್ತೊಂದೆಡೆ. ಕಣ್ಣಲ್ಲಿನ ನೀರು ಹೊರಬರುವುದೊಂದೇ ಬಾಕಿ ಉಳಿದಿತ್ತು. ಇಂತದ್ದರ ನಡುವೆ “ಇನ್ನೊಮ್ಮೆ ಹೀಗೆ ಮಾಡಿದರೆ ನಿಮ್ಮನ್ನ ಕಾಲೇಜಿನಿಂದ ಸಸ್ಪೆಂಡ್ ಮಾಡ್ತೀನಿ” ಎಂಬ ಮಾತು ಕೇಳಿ ನಿಜಕ್ಕೂ ಸೋತುಹೋದೆವು. ಕ್ಷಮಾಪಣೆ ಕೇಳಿ ಚಪ್ಪಲಿಯನ್ನು ಕಾಲಲ್ಲಿ ಬಿಗಿಯಾಗಿ ಹಿಡಿದುಕೊಂಡು ಸದ್ದು ಮಾಡದೇ ಮೆಲ್ಲನೇ ಛೇಂಬರ್‍ನಿಂದ ಹೊರಬಂದೆವು. ಆಗ ಇಂತದ್ದೆಲ್ಲಾ ಅಸಹಜವಾಗಿತ್ತು. ನೇರವಾಗಿ ಲ್ಯಾಬ್‍ಗೆ ತೆರಳಿದೆವು. ಅಂದು ಹವಾಯಿ ಚಪ್ಪಲಿ ತಂದ ಪಜೀತಿಯನ್ನು  ಜೀವನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಜೊತೆಗೆ ಪ್ರಿನ್ಸಿಪಾಲರು ಹೇಳಿದ ಉಪದೇಶದ ಮಾತುಗಳನ್ನು ಈಗಲೂ ನನಗೆ ದಾರಿದೀಪವಾಗಿವೆ.  ಅಂದಿನಿಂದ ಹವಾಯಿ ಚಪ್ಪಲಿ ಧರಿಸಿದಾಗಲೆಲ್ಲ ಮತ್ತು ಯಾವುದೇ ಕಛೇರಿಗಳಲ್ಲಿ ಹವಾಯಿ ಧರಿಸಿದವರನ್ನು ಕಂಡರೆ ಕಾಲೇಜಿನ ಪಜೀತಿ ಪ್ರಸಂಗ ನೆನಪಿಗೆ ಬರುತ್ತದೆ. 
ಆರ್.ಬಿ.ಗುರುಬಸವರಾಜ ಹೊಳಗುಂದಿ


ಡಿ.ಪಿ.(ಪ್ರೋಫೈಲ್ ಪಿಕ್ಚರ್) D.P (profile picture)

ದಿನಾಂಕ 07-03-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ

ವ್ಯಕ್ತಿತ್ವಕ್ಕೆ ಕೈಗನ್ನಡಿ ಡಿ.ಪಿ.



ಪ್ರೋಫೈಲ್ ಪಿಕ್ಚರ್
ಆಧುನಿಕ ಜಗತ್ತಿನಲ್ಲಿ ಸಾಮಾಜಿಕ ಜಾಲ ತಾಣಗಳು ದೈನಂದಿನ ಜೀವನದ ಕೇಂದ್ರ ಅಂಶಗಳಾಗಿವೆ. ಅದರಲ್ಲೂ ಫೇಸ್ಬುಕ್, ವಾಟ್ಸಪ್, ಲಿಂಕ್ಡ್‍ಇನ್, ಟ್ವಿಟರ್ ಮುಂತಾದ ಚಾಟಿಂಗ್ ತಾಣಗಳ ಪ್ರೋಫೈಲ್ ಪಿಕ್ಚರ್ ಎಲ್ಲರ ಆಕರ್ಷಣೆಯ ಬಿಂದುಗಳಾಗಿವೆ. ಡಿ.ಪಿ.(ಡಿಸ್‍ಪ್ಲೇ ಪಿಕ್ಚರ್) ಎಂದು ಕರೆಯುವ ಪ್ರೋಫೈಲ್ ಪಿಕ್ಚರ್ ತನ್ನದೇ ವಿಶಿಷ್ಠತೆ ಹೊಂದಿದೆ. ತಮ್ಮ ಮೆಚ್ಚಿನ ಚಿತ್ರವನ್ನು ಪ್ರೋಫೈಲ್ ಪಿಕ್ಚರ್ ಆಗಿ ಇಡೀ ಜಗತ್ತಿಗೆ ತೋರಿಸುವ ತವಕ ಎಲ್ಲರಲ್ಲೂ ಹೆಚ್ಚುತ್ತಿದೆ. ಪ್ರತಿಯೊಂದು ತಾಣಗಳು ತಮ್ಮದೇ ಆದ ವಿಭಿನ್ನ ಹಾಗೂ ಆಕರ್ಷಕ ರೀತಿಯ ಫ್ರೇಮುಗಳೊಂದಿಗೆ ಪ್ರೋಫೈಲ್ ಪಿಕ್ಚರ್ ಪ್ರದರ್ಶನಕ್ಕೆ ಅನುವು ಮಾಡಿಕೊಟ್ಟಿವೆ. 
ಪ್ರತಿಯೊಂದು ಸಾಮಾಜಿಕ ಜಾಲ ತಾಣಗಳು ವೈವಿಧ್ಯಮಯ ಸಾಧನಗಳನ್ನು ಒದಗಿಸುತ್ತವೆ. ಸೂಕ್ತವಾದ ಪ್ರೋಫೈಲ್ ನಿರ್ಮಿಸಲು ಸಹಾಯ ಮಾಡುವ ಜೊತೆಗೆ ಪರಿಚಿತರು, ಸ್ನೇಹಿತರು ಮತ್ತು ಕುಟುಂಬ ವರ್ಗದವರನ್ನು ಒಂದು ವೇದಿಕೆಯಲ್ಲಿ ಸೇರಿ ವಿಷಯಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತವೆ. ಕೆಲವು ಜಾಲ ತಾಣಗಳು ಬಳಕೆದಾರರ ಬೇಡಿಕೆಗನುಗುಣವಾದ ವ್ಯಾಪಾರ ಮತ್ತು ಉದ್ಯೋಗಾವಕಾಶಗಳನ್ನು ತಿಳಿಸುತ್ತವೆ. 
ಪ್ರತಿ ಜಾಲ ತಾಣದ ಪ್ರಮುಖ ವೇದಿಕೆಯೆಂದರೆ ಪ್ರೋಫೈಲ್ ಪಿಕ್ಚರ್. ಇದು ನಮ್ಮನ್ನು ನಾವು ದೃಶ್ಯೀಕರಣದ ಮೂಲಕ ಹೊರಜಗತ್ತಿಗೆ ತೋರಿಸಿಕೊಳ್ಳುವ ಪ್ರಮುಖ ವೇದಿಕೆ ಇದ್ದಂತೆ. ನಮ್ಮ ಪ್ರೋಫೈಲ್ ಪಿಕ್ಚರನ್ನು ಯಾರು ಬೇಕಾದರೂ ನೋಡಲು ಮುಕ್ತ ಅವಕಾಶ ಇರುತ್ತದೆ. 
ಎಲ್ಲಾ ವೇದಿಕೆಗಳಲ್ಲಿ ಮಾನವ ಸಂವಹನ ಹೆಚ್ಚಾಗಿ ಅಮೌಖಿಕ ರೂಪದಲ್ಲಿರುತ್ತದೆ. ಚಿತ್ರ, ಪದ ಅಥವಾ ದೃಶ್ಯೀಕರಣದ ಮೂಲಕ ನಮ್ಮ ನಡವಳಿಕೆಗಳು, ಭಾವನೆಗಳು, ವಿಚಾರಗಳನ್ನು ಜಗತ್ತಿಗೆ ತೆರೆದು ತೋರಿಸುತ್ತವೆ. ಜಾಲ ತಾಣಗಳ ಮೂಕ ನಾವು ಇನ್ನೊಬ್ಬರೊಂದಿಗೆ ವ್ಯವಹರಿಸುವಾಗ ನಮ್ಮ ಮುಖದ ಅಭಿವ್ಯಕ್ತಿ, ಸನ್ನೆಗಳು, ದೇಹಭಾಷೆ, ಕಣ್ಣಿನ ಸಂಪರ್ಕ ಮತ್ತು ದೈಹಿಕ ಅಂತರಗಳು ಎಲ್ಲರೂ ಚರ್ಚೆಗೆ ಗ್ರಾಸವಾಗುತ್ತವೆ. ಪ್ರೋಫೈಲ್ ಪಿಕ್ಚರ್‍ನ ಸಂಕೇತಗಳು ಇತರೆ ಜನರನ್ನು ಅರ್ಥ ಮಾಡಿಕೊಳ್ಳಲು ಸಹಾಚಿiÀು ಮಾಡುತ್ತದೆ. 
ವಾಸ್ತವ ಜಗತ್ತಿನಲ್ಲಿ ಜಾಲತಾಣಗಳ ಮೂಲಕ ಸಂಭಾಷಿಸುವ ವ್ಯಕ್ತಿಯು ಬಹಿರಂಗ ಪಡಿಸುವ ಅಮೌಖಿಕ ಸಂವಹನಕ್ಕೆ ಯಾವುದೇ ಭರವಸೆ ಇಲ್ಲ. ಸಾಮಾನ್ಯವಾಗಿ ಪ್ರೋಫೈಲ್ ಪಿಕ್ಚರ್ ಬದಲಾದೊಡನೆ ಅದರ ಮೇಲೆ ಅನೇಕ ಅಭಿಪ್ರಾಯ/ಅನಿಸಿಕೆಗಳು ಪ್ರಕಟಗೊಳ್ಳುತ್ತವೆ. 
ಪ್ರೋಫೈಲ್ ಪಿಕ್ಚರ್ ಏನನ್ನು ಹೇಳುತ್ತದೆ?
ಒಂದು ಚಿತ್ರ ಸಾವಿರ ಪದಗಳಿಗೆ ಸಮ ಎನ್ನುವಂತೆ ನಿಮ್ಮ ಪ್ರೋಫೈಲ್ ಚಿತ್ರ ನಿಮ್ಮ ಬಗ್ಗೆ ಸಾವಿರಾರು ಪದಗಳನ್ನು ತಿಳಿಸುತ್ತದೆ. ಪ್ರೋಫೈಲ್ ಚಿತ್ರದಲ್ಲಿ ನೀವು ಕ್ಲೋಸಪ್‍ನಲ್ಲಿದ್ದರೆ ಅದು ನಿಮ್ಮ ಮುಕ್ತತೆಯನ್ನು ತಿಳಿಸುತ್ತದೆ. ಚಿತ್ರವು ಲಾಂಗ್‍ಶಾಟ್‍ನಲ್ಲಿದ್ದರೆ ಇತರರಿಂದ ದೂರ ಇರಲು ಬಯತ್ತೀರೆಂಬುದನ್ನು ತಿಳಿಸುತ್ತದೆ. ಚಿತ್ರದಲ್ಲಿ ಆಪ್ತರೊಂದಿಗೆ ಕಾಣಿಸಿಕೊಂಡಿದ್ದರೆ ಅದು ನಿಮ್ಮ ಅವರ ನಡುವಿನ ಗಟ್ಟಿಯಾದ ಸಂಬಂಧ ತಿಳಿಸುತ್ತದೆ. ಹೂವುಗಳೊಂದಿಗೆ ಕಾಣಿಸಿಕೊಂಡಿದ್ದರೆ ಪುಷ್ಟ ಪ್ರಿಯರೆಂಬುದನ್ನು, ಪ್ರಾಣಿಗಳೊಂದಿಗೆ ಕಾಣಿಸಿಕೊಂಡಿದ್ದರೆ ಪ್ರಾಣಿ ಪ್ರಿಯರೆಂಬುದನ್ನು ತಿಳಿಸುತ್ತದೆ. ನಿಸರ್ಗದಲ್ಲಿನ ನಿಮ್ಮ ಚಿತ್ರವು ನೀವು ನಿಸರ್ಗ ಪ್ರಿಯರೆಂಬುದನ್ನು, ಮಕ್ಕಳೊಂದಿಗಿನ ಚಿತ್ರವು ನಿಮ್ಮ ಮುಗ್ದತೆಯನ್ನು ತಿಳಿಸುತ್ತದೆ. ಅಲ್ಲದೇ ಇತ್ತಿಚೆಗೆ ಬಡ/ಅನಾಥ ಅಥವಾ ಸಂಕಷ್ಟದಲ್ಲಿನ ಮಕ್ಕಳೊಂದಿನ ಚಿತ್ರದ ಟ್ರೆಂಡ್ ಕೂಡಾ ಹೆಚ್ಚುತ್ತಿದೆ. ಇದು ಬಡ/ಅನಾಥ ಮಕ್ಕಳ ಮೇಲಿನ ಕಾಳಜಿ ತಿಳಿಸುತ್ತದೆ. ಅಂತೆಯೇ ಚಿತ್ರದಲ್ಲಿನ ಪ್ರತಿಯೊಂದು ಭಂಗಿಯೂ ನಿಮ್ಮ ಗುಣಾವಗುಣಗಳ ಬಗ್ಗೆ ತಿಳಿಸುತ್ತದೆ. 
ಕೆಲವರು ಆಗಾಗ್ಗೆ ತಮ್ಮ ಪ್ರೋಫೈಲ್ ಚಿತ್ರವನ್ನು ಬದಲಾಯಿಸುತ್ತಲೇ ಇರುತ್ತಾರೆ. ಇದು ಅವರ ಚಂಚಲಚಿತ್ತವನ್ನು ಸೂಚಿಸುತ್ತದೆ. ಕುಟುಂಬದೊಂದಿಗಿನ ಚಿತ್ರವು ನೀವು ಕುಟುಂಬಕ್ಕೆ ಎಷ್ಟು ಹತ್ತಿರದವರೆಂಬುದನ್ನು ಹಾಗೂ ಕುಟುಂಬಕ್ಕೆ ನಿಮ್ಮ ಬೆಂಬಲ ಎಷ್ಟಿದೆ ಎಂಬುದನ್ನು ತಿಳಿಸುತ್ತದೆ. ಸಂಗಾತಿಯೊಂದಿಗಿನ ಚಿತ್ರವು ನಿಮ್ಮ ಬಡನಾಟದ ಬಾಂಧವ್ಯವನ್ನು ತಿಳಿಸುತ್ತದೆ. ಒಟ್ಟಾರೆ ಪ್ರೋಫೈಲ್ ಚಿತ್ರವು ನಿಮ್ಮನ್ನು ಪ್ರತಿನಿಧಿಸುತ್ತದೆ. ನಿಮ್ಮೊಳಗಿನ ಅಂತರಾಳವನ್ನು ಜಗತ್ತಿಗೆ ತೆರೆದು ತೋರಿಸುತ್ತದೆ. ನಿಮ್ಮ ಆಸಕ್ತಿಗಳು, ಲೌಕಿಕ ಹಾಗೂ ಅಲೌಕಿಕ ಗುಣಾವಗುಣಗಳನ್ನು ಪ್ರಕಟಿಸುತ್ತದೆ. 
ಯಶಸ್ವಿ ಪ್ರೋಫೈಲ್ ಚಿತ್ರದ ಪ್ರಮುಖ ಅಂಶಗಳು:
1. ಆಕರ್ಷಕ ಹಿನ್ನಲೆ: ವಿಭಿನ್ನ ದೃಷ್ಟಿಕೋನವುಳ್ಳ ಸುಂದರ ಹಿನ್ನಲೆಯ ಚಿತ್ರವು ಎಲ್ಲರನ್ನು ಆಕರ್ಷಿಸುತ್ತದೆ. ಹಿನ್ನಲೆ ಸಂಕೀರ್ಣವಾಗಿರದೇ ಸರಳವೂ ಸುಂದರವೂ ಆಗಿದ್ದರೆ ಅದನ್ನು ಎಲ್ಲರೂ ಇಷ್ಟಪಡುತ್ತಾರೆ. ಹೂವಿಗೆ ಚಿಟ್ಟೆ ಆಕರ್ಷಿತವಗುವಂತೆ ನಿಮ್ಮ ಚಿತ್ರ ಎಲ್ಲರನ್ನು ಆಕರ್ಷಿಸುವಂತಿರಲಿ.
2. ವೈಯಕ್ತಿಕತೆ: ನಿಮ್ಮ ಪ್ರೋಫೈಲ್ ಚಿತ್ರದಲ್ಲಿ ನಿಮ್ಮ ಆಪ್ತರು, ಸಹುದ್ಯೋಗಿಗಳು, ಸ್ನೇಹಿತರು ಇರಬೇಕೆಂದು ಬಯಸುವುದು ತಪ್ಪಲ್ಲ. ಆದರೆ ಅವರಿಗೆ ಅದು ಮುಜುಗರ ತಾರದಿರಲಿ. ಆದ್ದರಿಂದ ವಿಶಿಷ್ಠತೆಯುಳ್ಳ ವೈಯಕ್ತಿಕ ಚಿತ್ರವನ್ನು ಆಯ್ಕೆ ಮಾಡಿಕೊಳ್ಳಿ.
3. ಹೆಡ್ ಶಾಟ್: ವೀಕ್ಷಕರನ್ನೇ ನೋಡುತ್ತಿರುವ ಚಿತ್ರವು ಎಲ್ಲರನ್ನು ಆಕರ್ಷಿಸುತ್ತದೆ. ಅಂದರೆ ಚಿತ್ರ ತೆಗೆಯುವಾಗ ನಿಮ್ಮ ಕಣ್ಣುಗಳು ಕ್ಯಾಮೆರಾ ನೋಡುವಂತಿದ್ದರೆ ಅಂತಹ ಚಿತ್ರ ಪ್ರೋಫೈಲ್‍ಗೆ ಅತ್ಯುತ್ತಮವಾಗಿ ಹೊಂದಿಕೆಯಾಗುತ್ತದೆ. 
4. ಬಣ್ಣದಿಂದ ವ್ಯಕ್ತಿತ್ವ: ನಿಮ್ಮ ಕಪ್ಪು ಬಿಳುಪು ಚಿತ್ರಕ್ಕೆ ಬಣ್ಣ ತುಂಬಿ. ಅಂದರೆ ನೀವು ಧರಿಸಿದ ಬಟ್ಟೆ ಹಾಗೂ ಅದರ ಹಿನ್ನಲೆಯ ಬಣ್ಣಗಳೂ ಸಹ ನಿಮ್ಮ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತವೆ. ಆದ್ದರಿಂದ ನಿಮಗಿಷ್ಟವಾದ ಬಣ್ಣ ಆಯ್ಕೆ ಮಾಡಿಕೊಳ್ಳಿ.
5. ನಗು : ‘ಉಚಿತ ನಗುವಿದ್ದಲ್ಲಿ ಖಚಿತ ಪ್ರೀತಿ ಇರುತ್ತದೆ’ ಎಂಬ ಮಾತಿದೆ. ಪ್ರೋಫೈಲ್ ಚಿತ್ರದಲ್ಲಿನ ನಿಮ್ಮ ನಗು ತ್ವರಿತ ಸಂಪರ್ಕವನ್ನು ಸೃಷ್ಟಿಸುತ್ತದೆ. ನಿಮ್ಮ ವೃತ್ತಿಪರತೆಯನ್ನು ಸಾಮಾಜಿಕರಣಗೊಳಿಸುತ್ತದೆ. ನಿಮಗೊಂದು ಬ್ರಾಂಡೆಡ್ ಐಡೆಂಟಿಟಿಯನ್ನು ನೀಡುತ್ತದೆ. 
ಹೀಗಿರಲಿ ನಿಮ್ಮ ಡಿ.ಪಿ
ಮುಖವು ಸ್ಪಷ್ಟವಾಗಿ ಕಾಣುವಂತಿರಲಿ.
ಆಕರ್ಷಕ ಹಿನ್ನಲೆ ಹೊಂದಿರಲಿ.
ಮುಖದಲ್ಲಿ ನಗು ತುಂಬಿರಲಿ.
ಚಿತ್ರವು ಆದಷ್ಟೂ ಕ್ಲೋಸ್‍ಅಪ್ ಆಗಿರಲಿ.
ನಿಮ್ಮದೇ ಸ್ವಂತ ಚಿತ್ರವಿರಲಿ.
ಬೇರೆಯವರ ಅಂದರೆ ಸೆಲೆಬ್ರಿಟಿಗಳ ಚಿತ್ರ ಬಳಸಬೇಡಿ.
ನಿಮ್ಮ ಉಡುಪು ಮುಜುಗರ ತರದಿರಲಿ.
ಇಡೀ ನಿಮ್ಮ ವ್ಯಕ್ತಿತ್ವದ ಪ್ರತೀಕವಾಗಿರಲಿ. 
ಗ್ರೂಫ್ ಫೋಟೋ ಆಗಿದ್ದರೆ ಎಲ್ಲರ ಮುಖಗಳು ಸ್ಪಷ್ಟವಾಗಿ ಕಾಣುವಂತಿರಲಿ.
ಇತರರನ್ನು ಕೆಣಕುವ, ಅಪಹಾಸ್ಯ ಮಾಡುವ ಚಿತ್ರಗಳು ಬೇಡ. 
ಕೃತಕವಲ್ಲದ ಸ್ವಾಭಾವಿಕ ಚಿತ್ರವಿರಲಿ. 
ಆರ್.ಬಿ.ಗುರುಬಸವರಾಜ ಹೊಳಗುಂದಿ


ಮಾಲ್ವಿ ಸ್ಕೂಲ್

ದಿನಾಂಕ 03-02-2018ರ ವಿಜಯವಾಣಿಯಲ್ಲಿ ಪ್ರಕಟಬಾದ ನನ್ನ ಬರಹ
ಸರ್ಕಾರಿ ಶಾಲೆಯೂ ಸ್ಮಾರ್ಟ್ 

ಇತ್ತೀಚೆಗೆ ಸರ್ಕಾರಿ ಶಾಲೆಗಳೆಂದರೆ ಎಲ್ಲರಲ್ಲೂ ಒಂದು ರೀತಿಯ ಅಸಡ್ಡೆ. ಅಲ್ಲಿ ಸರಿಯಾಗಿ ಕಲಿಸುವುದಿಲ್ಲ, ಕಟ್ಟಡಗಳು ಆಕರ್ಷಕವಾಗಿರುವುದಿಲ್ಲ, ಕಂಪ್ಯೂಟರ್ ಬಳಕೆ ಇಲ್ಲ, ಆಟಕ್ಕೆ ಪರಿಕರಗಳಿಲ್ಲ, ವಿಜ್ಞಾನ ಪ್ರಯೋಗಾಲಯಗಳಿಲ್ಲ ಮುಂತಾದವುಗಳ ಕುರಿತು ದೂರುವವರೇ ಹೆಚ್ಚು. ಆದರೆ ಇದೆಲ್ಲಕ್ಕೆಕ್ಕೂ ಅಪವಾದವೆಂಬಂತೆ ಕೆಲ ಸರ್ಕಾರಿ ಶಾಲೆಗಳು ಖಾಸಗೀ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅದರಲ್ಲಿ ಹಗರಿಬೊಮ್ಮನಹಳ್ಳಿ ತಾಲೂಕಿನ ಮಾಲವಿ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೂ ಒಂದು.
ಈ ಶಾಲೆ ವಿಶೇಷತೆಗಳ ಗುಚ್ಛ: ಉತ್ಸಾಹಿ ಶಿಕ್ಷಕರ ಬಳಗ ಈ ಶಾಲೆಯ ಮೊದಲ ವಿಶೇಷತೆ. ದಾನಿಗಳ ನೆರವಿನಿಂದ ಸರಕಾರಿ ಶಾಲೆಯನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಎಂಬುದಕ್ಕೆ ಮಾಲವಿ ಶಾಲೆ ಸಾಕ್ಷಿಯಾಗಿದೆ. ಅಬ್ದುಲ್ ಕಲಾಂ ಸ್ಮಾರ್ಟ್ ಕ್ಲಾಸ್, ಯು.ಆರ್.ರಾವ್ ವಿಜ್ಞಾನ ಪ್ರಯೋಗಾಲಯ, ಚಿಗುರು ಶಾಲಾ ಮಕ್ಕಳ ಬ್ಯಾಂಕ್, ಮಕ್ಕಳಿಗೆ ಆಡಲು ಇಳಿಜಾರು, ಕಾಮನಬಿಲ್ಲು, ತೊಟ್ಟಿಲು, ಮೆಟ್ಟಿಲು ಮುಂತಾದ ವಿಶೇಷ ಉಪಕರಣಗಳು, ಮಕ್ಕಳ ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆ ನಿರ್ಮಾಣ ಹೀಗೆ ಹತ್ತು ಹಲವು ಈ ಶಾಲೆಯ ವಿಶೇಷತೆಗಳಾಗಿದೆ.
ವಿಜ್ಞಾನ ಪ್ರಯೋಗಾಲಯ: ಸಾಮಾನ್ಯವಾಗಿ ಎಲ್ಲಾ ಪ್ರೌಢಶಾಲೆಗಳಲ್ಲೂ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯಗಳಿಲ್ಲ. ಆದರೆ ಮಾಲವಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವ್ಯವಸ್ಥಿತವಾಗಿ ನಾಡಿನ ಖ್ಯಾತ ವಿಜ್ಞಾನಿ ಪ್ರೋ||ಯು.ಆರ್.ರಾವ್ ಹೆಸರಿನ ಪ್ರಯೋಗಶಾಲೆ ನಿರ್ಮಿಸಲಾಗಿದೆ. ಮಕ್ಕಳು ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ತಾವೇ ಸ್ವತಃ ನಡೆಸಿ ಅವುಗಳ ಸತ್ಯಾಸತ್ಯತೆಯನ್ನು ಓರೆಗೆ ಹಚ್ಚುತ್ತಾರೆ. ಚಲನೆ, ಬಲ, ಶಕ್ತಿ, ವೇಗ, ವೇಗೋತ್ಕರ್ಷ, ಮುಂತಾದ ಅಮೂರ್ತ ಪರಿಕಲ್ಪನೆಗಳನ್ನು ಓರೆಗೆ ಹಚ್ಚಿ ಕಲಿಯುತ್ತಾರೆ. ಇದು ಅವರ ಮುಂದಿನ ಕಲಿಕೆಗೆ ಪೂರಕವಾಗಲಿದೆ ಎಂಬುದು ಅಲ್ಲಿನ ವಿಜ್ಞಾನ  ಶಿಕ್ಷಕ ಯು.ಮಲ್ಲೇಶ ಅವರ ಅಭಿಮತ. ಪ್ರಯೋಗಾಲಯದಲ್ಲಿ ಪ್ರಾಥಮಿಕ ಶಿಕ್ಷಣಕ್ಕೆ ಪೂಕರವಾದ ರಸಾಯನಿಕಗಳು, ಭೌತಶಾಸ್ತ್ರದ ಪರಿಕರಗಳು, ಜೀವಶಾಸ್ತ್ರಕ್ಕೆ ಸಂಬಂಧಿಸಿದ ಸೂಕ್ಷ್ಮದರ್ಶಕ ಹಾಗೂ ಕೆಲ ಚಾರ್ಟ್‍ಗಳು ಸಹ ಕಲಿಕೆಗೆ ಪೂರಕವಾಗಿವೆ. 
ಸ್ಮಾರ್ಟ್‍ಕ್ಲಾಸ್ : ಹೆಸರೆ ಹೇಳುವಂತೆ ಇದು ಈ ಶಾಲೆಗೆ ಸ್ಮಾರ್ಟ್‍ನೆಸ್ ತಂದಿದೆ. ಅಂದಾಜು ಒಂದು ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಆಕರ್ಷಕವಾಗಿ ದೇಶದ ಮಾಜಿ ರಾಷ್ಟ್ರಪತಿ ಮತ್ತು ಮಕ್ಕಳ ಪ್ರೇಮಿ ಅಬ್ದುಲ್ ಕಲಾಂ ಸ್ಮಾರ್ಟ್‍ಕ್ಲಾಸ್ ಹೆಸರಿನಲ್ಲಿ ನಿರ್ಮಿಸಲಾಗಿದೆ. ವಿಜ್ಞಾನ, ಗಣಿತ ಮತ್ತು ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗೆ ಸಂಬಂಧಿಸಿದ ಪಾಠಗಳ ಕೆಲ ವಿಡೀಯೋಗಳನ್ನು ವೀಕ್ಷಿಸುತ್ತಾ ಮಕ್ಕಳು ಖುಷಿಯಿಂದ ಕಲಿಯುತ್ತಾರೆ. ಇಂಗ್ಲೀಷ್ ರೈಮ್ಸ್‍ಗಳನ್ನು ಮಕ್ಕಳು ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಎನ್ನವಂತೆ ಹೇಳುವುದು ಕೇಳಿದರೆ ಶಿಕ್ಷಕರ ಶ್ರಮ ತಿಳಿಯುತ್ತದೆ. ಕಂಪ್ಯೂಟರ್‍ನಲ್ಲಿ ಭಾಷಾ ಆಟಗಳ ಮೂಲಕ ಭಾಷಾ ಸಂಪತ್ತನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆ ಜೊತೆಗೆ ನಮ್ಮ ಸಾಲೆ ಮಕ್ಕಳ ಕಲಿಕೆ ನೋಡಿ ಎರಡು ಶಾಲೆಯಲ್ಲಿ ಸ್ಮಾರ್ಟ್‍ಕ್ಲಾಸ್ ಪ್ರಾರಂಭವಾಗಿವೆ ಎಂದು ಹೇಳುತ್ತಾರೆ ಕಂಪ್ಯೂಟರ್ ಉಸ್ತುವಾರಿ ಶಿಕ್ಷಕರಾದ ಪರಮೇಶ್ವರಯ್ಯ ಸೊಪ್ಪಿಮಠ ಅವರು. 
ಆಟದ ಪರಿಕರಗಳು: ಮಕ್ಕಳ ದೈಹಿಕ ಹಾಗೂ ಮನೋರಂಜನಾ ಆಟಕ್ಕಾಗಿ ಇಳಿಜಾರು, ಕಾಮನಬಿಲ್ಲು, ತೊಟ್ಟಿಲು, ಮೆಟ್ಟಿಲು ಮುಂತಾದ ಪರಿಕರಗಳನ್ನು ದಾನಿಗಳ ನೆರವಿನಿಂದ ಅಳವಡಿಸಲಾಗಿದೆ. ಜೊತೆಗೆ ಶಾಲೆಗೆ ನೂತನವಾಗಿ ನಿರ್ಮಿಸಿರರುವ ಆಕರ್ಷಕ ಸ್ವಾಗತ ಕಮಾನು ಎಲ್ಲರನ್ನೂ ತನ್ನತ್ತ ಕೈ ಬೀಸಿ ಕರೆಯುತ್ತಿದೆ.  
ಚಿಗುರು ಮಕ್ಕಳ ಬ್ಯಾಂಕ್: ಮಕ್ಕಳು ತಾವು ಪೋಷಕರಿಂದ ಖರ್ಚಿಗೆಂದು ಪಡೆದ ಹಣದಲ್ಲಿ ಸ್ವಲ್ಪ ಉಳಿಸಿ ಶಾಲಾ ಬ್ಯಾಂಕ್‍ಗೆ ಠೇವಣಿ ರೂಪದಲ್ಲಿ ಕಟ್ಟುತ್ತಾರೆ ಮತ್ತು ಅಗತ್ಯವಿದ್ದಾಗ ಹಿಂಪಡೆಯುತ್ತಾರೆ. ಈ ಎಲ್ಲಾ ಜಮಾ ಖರ್ಚಿನ ಲೆಕ್ಕಾಚಾರವನ್ನು ಮಕ್ಕಳೇ ನಿರ್ವಹಿಸುತ್ತಿರುವುದು ಈ ಶಾಲೆಯ ವಿಶೇಷತೆ. ಮುಖ್ಯಗುರುಗಳು ಹಾಗೂ ಉಸ್ತುವಾರಿ ಶಿಕ್ಷಕರ ಹೆಸರಿನಲ್ಲಿ ಜಂಟಿ ಖಾತೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ತೆರೆಯಲಾಗಿದ್ದು, ಅಂದಿನ ಒಟ್ಟು ಜಮಾ ಹಣವನ್ನು ಈ ಖಾತೆಗೆ ಜಮಾ ಮಾಡಲಾಗುತ್ತದೆ. 18 ತಿಂಗಳ  ಅವಧಿಯಲ್ಲಿ ಒಟ್ಟು 76 ಸಾವಿರ ರೂಪಾಯಿಗಳನ್ನು ಮಕ್ಕಳು ಉಳಿತಾಯ ಮಾಡಿದ್ದಾರೆ. ಮಕ್ಕಳಲ್ಲಿ ಈಗಿನಿಂದಲೇ ಸ್ವಾವಲಂಬನೆಯ ಕನಸನ್ನು ಈ ಶಿಕ್ಷಕರು ಬಿತ್ತಿ ಸಾಕಾರಗೊಳಿಸಿದ್ದಾರೆ. 
                  ಶಿಕ್ಷಕರು ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಈ ಶಾಲಾ ಶಿಕ್ಷಕರೇ ಸಾಕ್ಷಿ. ಇಲ್ಲಿನ ಎಲ್ಲಾ ಶಿಕ್ಷಕರ ಕಾರ್ಯ ಬದ್ದತೆ ಹಾಗೂ ಪರಿಶ್ರಮಗಳ ಫಲವಾಗಿ ಗ್ರಾಮಸ್ಥರ ಸಹಕಾರದಿಂದ ಎರಡು ಲಕ್ಷ ರೂಪಾಯಿಗಳ ದೇಣಿಗೆ ಸಂಗ್ರಹಿಸಿ ಸ್ಮಾರ್ಟ್ ಕ್ಲಾಸ್ ಮತ್ತು ವಿಜ್ಞಾನ ಪ್ರಯೋಗಾಲಯಗಳು ಮಕ್ಕಳ ಕಲಿಕೆಯನ್ನು ಗಟ್ಟಿಗೊಳಿಸುತ್ತಿವೆ.  ಕಂಪ್ಯೂಟರ್ ಕೊಠಡಿಗೆ 12ಲಕ್ಷ ರೂಪಾಯಿ ಬಿಡುಗಡೆ ಮಾಡುವುದಾಗಿ ಶಾಸಕರು ಭರವಸೆ ನೀಡಿದ್ದು, ಈಗಾಗಲೇ ಟೆಂಡರ್ ಕಾರ್ಯ ಮುಗಿದಿದೆ. ಈ ಶಾಲಾ ಮಕ್ಕಳ ಪ್ರತಿಭೆ ಬೆಳಗಲು ಹೊಸಪೇಟೆ ಆಕಾಶವಾಣಿಯಲ್ಲಿ ಅನೇಕ ಕಾರ್ಯಕ್ರಮ ನೀಡಲಾಗಿದೆ. ಕೆಲವೇ ವರ್ಷದಲ್ಲಿ ಈ ಶಾಲೆಯಲ್ಲಿನ ಬದಲಾವಣೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಅದರ ಫಲವಾಗಿ ದಿನಂಪ್ರತಿ ಇತರೆ ಶಾಲೆಗಳಿಂದ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಅಂತೆಯೇ ದಾನಿಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ 9341444865ಸಂಪರ್ಕಿಸಬಹುದು.  
ಆರ್.ಬಿ.ಗುರುಬಸವರಾಜ ಹೊಳಗುಂದಿ


ಭಾವನಾತ್ಮಕ ಬುದ್ದಿವಂತಿಕೆ Emotional Intellegence

ದಿನಾಂಕ 31-01-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಭಾವನಾತ್ಮಕ ಬುದ್ದಿವಂತಿಕೆ


ಬಿಗ್‍ಬಾಸ್ ಸೀಸನ್-5 ಮುಕ್ತಾಯಗೊಂಡಿದೆ. ಇಲ್ಲಿನ ಪ್ರತಿಯೊಬ್ಬ ಸ್ಪರ್ಧಿಯೂ ಅತ್ಯುತ್ತಮವಾಗಿ ಆಡಬೇಕು, ತಾನೇ ವಿನ್ನರ್ ಆಗಬೇಕೆಂಬ ಆಸೆಯಿಂದ ಆಡಿದರು. ಕೆಲವು ಸ್ಪರ್ಧಿಗಳಂತೂ ವಿಭಿನ್ನವಾಗಿ ಮತ್ತು ವಿಶೇಷವಾಗಿ ಆಡಿದರು. ಎಲ್ಲರಂತೆ ಎಲ್ಲರ ಜೊತೆಯಲ್ಲಿಯೇ ಇದ್ದರೂ ಆದರೆ ಇತರರಿಗಿಂತ ಭಿನ್ನವಾಗಿ ಆಡಿದರು. ಟಾಸ್ಕ್ ವಿಚಾರಕ್ಕೆ ಬಂದರೆ ಪ್ರತಿಯೊಬ್ಬರಲ್ಲೂ ಆಂತರಿಕ ಲೆಕ್ಕಾಚಾರ ಶುರುವಾಗುತ್ತಿತ್ತು. ಈ ಲೆಕ್ಕಾಚಾರ ಯಾರ ಕಣ್ಣಿಗೂ ಕಾಣದು, ಯಾರ ಅನುಭವಕ್ಕೂ ಬಾರದು. ಇದು ಅವರ ಜಾಣತನ ಎಂದು ಮಾತ್ರ ಹೇಳುತ್ತೇವೆ. ಈ ರೀತಿಯ ಜಾಣತನವನ್ನು ಮನಶಾಸ್ತ್ರದಲ್ಲಿ ಭಾವನಾತ್ಮಕ ಬುದ್ದಿವಂತಿಕೆ ಎನ್ನುತ್ತಾರೆ. ಹಾಗಾದರೆ ಭಾವನಾತ್ಮಕ ಬುದ್ದಿವಂತಿಕೆಯ ಬಗ್ಗೆ ಇನ್ನಷ್ಟು ವಿವರ ತಿಳಿಯೋಣವೇ?
ಭಾವನಾತ್ಮಕ ಬುದ್ದಿವಂತಿಕೆ-ಹಾಗಂದರೇನು?: ಸರಳವಾಗಿ ಹೇಳುವುದಾದರೆ ಇತರರನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳುವ ಮತ್ತು ತಾವು ಏನೆಂದು ಇನ್ನೊಬ್ಬರಿಗೆ ಅರ್ಥವಾಗದ ವಿಧಾನ. ಅಂದರೆ ಇತರರೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸಿ, ಅನುಭೂತಿ ತೋರಿಸಿ, ಅವರನ್ನು ತಮ್ಮೆಡೆ ಸೆಳೆದುಕೊಂಡು ಅವರ ಆಸೆ-ಆಕಾಂಕ್ಷೆಗಳು, ಆಚಾರ-ವಿಚಾರಗಳು, ನಡೆ-ನುಡಿಗಳು, ನಿಲುವುಗಳು, ಸಾಮಥ್ರ್ಯಗಳು, ಕೊರತೆಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳುವ ಮತ್ತು ತಮ್ಮ ಬಗೆಗಿನ ನಿಖರವಾದ ಮಾಹಿತಿಯನ್ನು ಇತರರಿಗೆ ತಿಳಿಸದ ಜಾಣತನವೇ ಭಾವನಾತ್ಮಕ ಬುದ್ದಿವಂತಿಕೆ. ಸವಾಲುಗಳನ್ನು ಸ್ವೀಕರಿಸಿ ಸುಲಭವಾಗಿ ಜಯಿಸುವ ಮತ್ತು ಧನಾತ್ಮಕ ರೀತಿಯಲ್ಲಿ ಒತ್ತಡವನ್ನು ನಿವಾರಿಸುವ ಸಾಮಥ್ರ್ಯವೇ ಭಾವನಾತ್ಮಕ ಬುದ್ದಿವಂತಿಕೆ. ಇದು ಸ್ವಂತ ಭಾವನೆಗಳನ್ನು ಗುರುತಿಸುವ, ಬಳಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮಥ್ರ್ಯವೂ ಆಗಿದೆ. 
ಭಾವನಾತ್ಮಕ ಬುದ್ದಿವಂತಿಕೆ ಅವಶ್ಯಕವೇ?: ಹೌದು. ಪ್ರತಿಯೊಬ್ಬರೂ ಭಾವನಾತ್ಮಕ ಬುದ್ದಿವಂತಿಕೆಯನ್ನು ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನವನ್ನು ಬಹಳವಾಗಿ ಪ್ರಭಾವಿಸುತ್ತದೆ. ನೀವು ಯಾರು? ನಿಮ್ಮ ಕೆಲಸ ಇತರರ ಮೇಲೆ ಹೇಗೆ ಪ್ರಭಾವ ಬೀರುತ್ತದೆ? ಇತರರಿಗಿಂತ ನೀವು ಹೇಗೆ ಭಿನ್ನ? ವೃತ್ತಿಯಲ್ಲಿನ ನಿಮ್ಮ ಬಲವೇನು? ನಿಮ್ಮ ಕೊರತೆಗಳೇನು? ಇತ್ಯಾದಿ ಅಂಶಗಳ ಬಗ್ಗೆ ನಿಖರವಾದ ಮಾಹಿತಿ ತಿಳಿಯಲು ಭಾವನಾತ್ಮಕ ಬುದ್ದಿವಂತಿಕೆ ಅವಶ್ಯಕ. ಪ್ರತಿ ಕಾರ್ಯ ಸ್ಥಳವೂ ವಿಭಿನ್ನ ವ್ಯಕ್ತಿ ಮತ್ತು  ಶಕ್ತಿಗಳನ್ನು ಒಳಗೊಂಡಿರುತ್ತದೆ. ಆ ವ್ಯಕ್ತಿ ಮತ್ತು ಶಕ್ತಿಗಳು ಕೆಲಸ ಮಾಡುವ ರೀತಿಯನ್ನು ಅಭ್ಯಸಿಸಲು ಭಾವನಾತ್ಮಕ ಬುದ್ದಿವಂತಿಕೆ ಬೇಕು. 
ಗಮನಾರ್ಹ ಪ್ರಮುಖಾಂಶಗಳು
ಕೆಲಸದ ಸ್ಥಳದಲ್ಲಿ ವಿಭಿನ್ನವಾಗಿ ಕಾಣಲು ಭಾವನಾತ್ಮಕ ಬುದ್ದಿವಂತಿಕೆ ಅವಶ್ಯಕ ಎನ್ನುತ್ತಾರೆ ಅಮೇರಿಕಾದ ಖ್ಯಾತ ಮನಶಾಸ್ತ್ರಜ್ಞನಾದ ಡೇನಿಯಲ್ ಗೋಲ್ಮನ್. ಅವರು ಭಾವನಾತ್ಮಕ ಬುದ್ದಿವಂತಿಕೆಯಲ್ಲಿ ಐದು ಪ್ರಮುಖಾಂಶಗಳಿವೆ ಎಂದು ಹೇಳಿದ್ದಾರೆ. ಅವುಗಳೆಂದರೆ,
ಸ್ವಯಂ ಅರಿವು: ವ್ಯಕ್ತಿಗೆ ಸ್ವಯಂ ಅರಿವು ಇದ್ದರೆ ಆ ವ್ಯಕ್ತಿ ತನ್ನ ಸಾಮಥ್ರ್ಯ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳುತ್ತಾನೆ. ಆ ಮೂಲಕ ಇತರರ ಮೇಲೆ ಹೇಗೆ ಪ್ರಭಾವ ಬೀರಬಹುದು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾನೆ. ಸ್ವಯಂ ಅರಿವುಳ್ಳ ವ್ಯಕ್ತಿಯು ಎಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮಥ್ರ್ಯ ಹೊಂದಿರುತ್ತಾರೆ ಮತ್ತು ಅವರು ಟೀಕೆಗಳಿಂದ ರಚನಾತ್ಮಕ ಕಲಿಕೆ ಗಳಿಸಿಕೊಳ್ಳುತ್ತಾರೆ.
ಸ್ವಯಂ ನಿಯಂತ್ರಣ : ಭಾವನಾತ್ಮಕ ಬುದ್ದಿವಂತ ವ್ಯಕ್ತಿಯು ಅಗತ್ಯವಿದ್ದಾಗ ತನ್ನ ಭಾವನೆಗಳನ್ನು ಪ್ರಬುದ್ದವಾಗಿ ಬಹಿರಂಗಪಡಿಸುವ ಮತ್ತು ನಿಯಂತ್ರಿಸುವ ಸಾಮಥ್ರ್ಯ ಹೊಂದಿರುತ್ತಾನೆ. ಭಾವನೆಗಳನ್ನು ದುರ್ಬಲಗೊಳಿಸುವ ಬದಲು ಸಂಯಮ ಮತ್ತು ನಿಯಂತ್ರಣದೊಂದಿಗೆ ವ್ಯಕ್ತಪಡಿಸುತ್ತಾರೆ. 
ಪ್ರೇರಣೆ : ಭಾವನಾತ್ಮಕ ಬುದ್ದಿವಂತರು ಸಾಮಾನ್ಯವಾಗಿ ಸ್ವಯಂ ಪ್ರೇರಿತರಾಗಿರುತ್ತಾರೆ. ಅವರು ಹಣ, ಅಂತಸ್ತು ಇನ್ಯಾವುದೇ ಪ್ರಭಾವಗಳಿಂದ ಪ್ರೇರಿತರಾಗುವುದಿಲ್ಲ. ಅವರು ಸ್ವಾಮಿ ವಿವೇಕಾನಂದರಂತೆ ಯಾವಾಗಲೂ ಆಶಾವಾದಿಗಳಾಗಿದ್ದು, ಆಶಾಭಂಗ ಮತ್ತು ಆಂತರಿಕ ಮಹತ್ವಾಕಾಂಕ್ಷೆಗಳಿಂದ ಚೇತರಿಸಿಕೊಳ್ಳುತ್ತಿರುತ್ತಾರೆ. 
ಪರಾನುಭೂತಿ : ಮಾನವನ ಸಹಜ ಸ್ವಭಾವದ ತಿಳುವಳಿಕೆ ಹೊಂದಬೇಕಾದರೆ ಆ ವ್ಯಕ್ತಿಯಲ್ಲಿ ಪರಾನುಭೂತಿ ಮತ್ತು ಸಹಾನುಭೂತಿಗಳು ಇರಬೇಕು. ಆಗ ಮಾತ್ರ ಇತರ ಜನರೊಂದಿಗೆ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತದೆ. ಇದು ಭಾವನಾತ್ಮಕ ಬುದ್ದಿವಂತರಲ್ಲಿ ಅಧಿಕವಾಗಿರುತ್ತದೆ. ಪರಾನುಭೂತಿಯು ಉತ್ತಮ ಸೇವೆ ನೀಡಲು ಮತ್ತು ಇತರರ ಕಾಳಜಿಗೆ ಪ್ರಾಮಾಣಿಕ ಪ್ರತಿಕ್ರಿಯೆ ನೀಡಲು ಅನುವು ಮಾಡಿಕೊಡುತ್ತದೆ. 
ಸಾಮಾಜಿಕ ಕೌಶಲ್ಯಗಳು : ಭಾವನಾತ್ಮಕ ಬುದ್ದಿವಂತರು ತಂಡಸ್ಪೂರ್ತಿಯ ಬಾಂಧವ್ಯ ಹೊಂದಿರುತ್ತಾರೆ ಮತ್ತು ತಮ್ಮ ತಂಡದಲ್ಲಿ ತ್ವರಿತವಾಗಿ ಇತರರೊಂದಿಗೆ ಬೆರೆಯುತ್ತಾರೆ ಹಾಗೂ ಅವರನ್ನು ನಂಬುತ್ತಾರೆ. ಅವರು ಸಾಮಾನ್ಯವಾಗಿ ಇತರರೊಂದಿಗಿನ ಸಮಯವನ್ನು ಆನಂದಿಸುತ್ತಾರೆ. ಸುತ್ತಲಿನ ಇತರರನ್ನು ಗೌರವಿಸುತ್ತಾರೆ. ಇದರಿಂದ ಸುಲಭ ಜಯಗಳಿಸುತ್ತಾರೆ.
ಭಾವನಾತ್ಮಕ ಬುದ್ದಿವಂತಿಕೆಯ ಗುಣಲಕ್ಷಣಗಳು
ತಪ್ಪಿನಿಂದ ಕಲಿಕೆ: ಎಲ್ಲಾ ಬುದ್ದಿವಂತರೂ ಪರಿಪೂರ್ಣರೇನಲ್ಲ. ಅವರೂ ಇತರರಂತೆ ಅನೇಕ ತಪ್ಪುಗಳನ್ನು ಮಾಡುತ್ತಾರೆ. ಆದರೆ ಅವರು ಪ್ರತೀ ತಪ್ಪಿನಿಂದಲೂ ಕಲಿಯುತ್ತಾರೆ. ಪರಿಪೂರ್ಣತೆ ಹೊಂದಲು ತಪ್ಪಿನಿಂದ ಕಲಿಯುವುದು ಮತ್ತು ಪ್ರತಿದಿನವೂ ವೈಯಕ್ತಿಕವಾಗಿ ಶ್ರಮಿಸುವುದು ಮುಖ್ಯ.
ಸಮತೋಲನ: ದಿನದ ಹೆಚ್ಚು ವೇಳೆ ತಮ್ಮ ವೃತ್ತಿ ಜೀವನದಲ್ಲಿ ತೊಡಗಿಕೊಂಡವರಿಗೆ ವೈಯಕ್ತಿಕ ಜೀವನದ ಅನಗತ್ಯ ಒತ್ತಡಗಳು ಮತ್ತು ಆರೋಗ್ಯದ ಸಮಸ್ಯೆಗಳು ಬಾಧಿಸುವುದು ಸಹಜ. ಆದರೆ ಭಾವನಾತ್ಮಕ ಬುದ್ದಿವಂತಿಕೆಯುಳ್ಳವರು ಇವುಗಳನ್ನು ಸಮತೋಲನಗೊಳಿಸಿ ಎಲ್ಲದಕ್ಕೂ ಸಮಾನ ಆಧ್ಯತೆಗಳನ್ನು ನೀಡುತ್ತಾರೆ. 
ಬದಲಾವಣೆಗೆ ಬದ್ದತೆ: ಬಹುತೇಕರು ಬದಲಾವಣೆಗೆ ಭಯಗೊಂಡು ಯಶಸ್ಸಿನಿಂದ ಹಿಂದೆ ಸರಿಯುತ್ತಾರೆ. ಆದರೆ ಭಾವನಾತ್ಮಕ ಬುದ್ದಿವಂತರು ಬದಲಾವಣೆ ಜೀವನದ ಒಂದು ಭಾಗವೆಂದು ತಿಳಿಯುತ್ತಾರೆ. ಅವರು ಬದಲಾವಣೆಗೆ ಹೊಂದಿಕೊಂಡು ಅದಕ್ಕೆ ತಕ್ಕ ಯೋಜನೆ ರೂಪಿಸುತ್ತಾರೆ. 
ಅವಧಾನದ ಮಟ್ಟ: ಭಾವನಾತ್ಮಕ ಬುದ್ದಿವಂತರು ತಮ್ಮ ಮುಂದಿರುವ ಟಾಸ್ಕ್ ಅಥವಾ ಕಾರ್ಯದ ಮೇಲೆ ಹೆಚ್ಚು ಅವಧಾನ ಕೇಂದ್ರೀಕರಿಸುತ್ತಾರೆ. ಹೊರಗಿನ ಯಾವುದೇ ಸಂಗತಿಗಳಿಂದ ಸುಲಭವಾಗಿ ವಿಚಲಿತರಾಗುವುದಿಲ್ಲ. ತಮ್ಮ ಕಾರ್ಯ ಪೂರ್ಣಗೊಳಿಸುವತ್ತ ಮಾತ್ರ ಅವರು ಚಿತ್ತ ವಹಿಸಿರುತ್ತಾರೆ. 
ಮುನ್ನುಗ್ಗುವಿಕೆ: ಭಾವನಾತ್ಮಕ ಬುದ್ದಿವಂತರು ಯಾವುದೇ ಕೆಲಸದಿಂದ ಹಿಂದುಳಿಯುವುದಿಲ್ಲ. ಬದಲಾಗಿ ಮುನ್ನುಗ್ಗುತ್ತಾರೆ. ಅವರಿಗೆ ನಿನ್ನೆಗಿಂತ ನಾಳೆ ಮುಖ್ಯ. ನಿನ್ನೆಯ ಅನುಭಾವದ ಆಧಾರದಲ್ಲಿ ನಾಳೆಯ ಭವಿಷ್ಯವನ್ನು ಕಟ್ಟಿಕೊಳ್ಳುತ್ತಾರೆ. ಸೋಲಿಗೆ ಕಾರಣವಾದ ಯಾರನ್ನೂ ಯಾವುದನ್ನೂ ದ್ವೇಷಿಸುವುದಿಲ್ಲ. ಉತ್ತಮಾಂಶಗಳೊಂದಿಗೆ ಮುಂದೆ ನಡೆಯುತ್ತಾರೆ.
ಸಕಾರಾತ್ಮಕತೆಗೆ ಗಮನ: ಭಾವನಾತ್ಮಕ ಬುದ್ದಿವಂತರು ಯಾವಾಗಲೂ ಸಮಸ್ಯೆಯನ್ನು ಪರಿಹರಿಸಲು ತಮ್ಮ ಸಮಯ ಮತ್ತು ಶಕ್ತಿ ವಿನಿಯೋಗಿಸುತ್ತಾರೆ. ಪ್ರತೀ ನಕಾರಾತ್ಮಕ ಅಂಶವನ್ನು ಸಕಾರಾತ್ಮಕವಾಗಿಸುವ ಪ್ರಯತ್ನ ಮಾಡುತ್ತಾರೆ. 
ಚೌಕಟ್ಟು ಅಳವಡಿಕೆ: ಭಾವನಾತ್ಮಕ ಬುದ್ದಿವಂತರು ತಮ್ಮದೇ ಆದ ಚೌಕಟ್ಟು ನಿರ್ಮಿಸಿಕೊಳ್ಳುತ್ತಾರೆ. ತಮ್ಮ ವೈಯಕ್ತಿಕ ಏಳಿಗೆಗಾಗಿ ಈ ಚೌಕಟ್ಟನ್ನು ದಾಟಿ ಅಲ್ಲಿನ ಉತ್ತಮಾಂಶಗಳನ್ನು ಪಡೆಯುತ್ತಾರೆ. ಆದರೆ ತಮ್ಮ ಅಭಿವೃದ್ದಿಗೆ ಮಾರಕವಾಗುವ ವ್ಯಕ್ತಿ ಅಥವಾ ಅಂಶಗಳನ್ನು ತಮ್ಮ ಚೌಕಟ್ಟಿನೊಳಗೆ ಬರದಂತೆ ನೋಡಿಕೊಳ್ಳುತ್ತಾರೆ. ಆದಷ್ಟೂ ನಕಾರಾತ್ಮಕ ಪ್ರೇರಕಾಂಶಗಳನ್ನು ದೂರ ಇಡುತ್ತಾರೆ. 
ತೀರ್ಮಾನ: ಭಾವನಾತ್ಮಕ ಬುದ್ದಿವಂತರು ಯಾವಾಗಲೂ ನ್ಯಾಯಪರವಾದ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಸಮಸ್ಯೆಗೆ ಪೂರಕವಾದ ಮಾಹಿತಿಗಳನ್ನು ಎಲ್ಲಾ ಆಯಾಮಗಳಿಂದ ಸಂಗ್ರಹಿಸಿ ನಿಖರವಾದ ನಿರ್ಣಯ ಕೈಗೊಳ್ಳುವಲ್ಲಿ ಇವರು ನಿಷ್ಣಾತರು. 
ನೀವೂ ಭಾವನಾತ್ಮಕ ಬುದ್ದಿವಂತರಾಗಬೇಕೇ?
ಚಾಣಕ್ಯ ಹುಟ್ಟಿದಾಗಿನಿಂದಲೇ ಬುದ್ದಿವಂತನಲ್ಲ. ಅಂತೆಯೇ ಯಾರೂ ಜನ್ಮಧಾರಭ್ಯ ಬುದ್ದಿವಂತರಲ್ಲ. ತಾವು ವಾಸಿಸುವ ಪರಿಸರ ಹಾಗೂ ಅಳವಡಿಸಿಕೊಂಡ ಆಚಾರ ವಿಚಾರಗಳು, ನೀತಿ ನಿಯಮಗಳು ಅವರನ್ನು ಬುದ್ದಿವಂತರನ್ನಾಗಿ ಮಾಡುತ್ತದೆ. ನೀವೂ ಭಾವನಾತ್ಮಕ ಬುದ್ದಿವಂತರಾಗಬೇಕಾದರೆ ಕೆಳಗಿನ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಅವುಗಳೆಂದರೆ,
ದೃಢವಾದ ಭಾವನಾತ್ಮಕ ಶಬ್ದಕೋಶ ಬೆಳೆಸಿಕೊಳ್ಳಿ.
ಸುತ್ತಲಿನ ಜನರನ್ನು ಕುತೂಹಲದ ಕಣ್ಣುಗಳಿಂದ ವೀಕ್ಷಿಸಿ.
ಬದಲಾವಣೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿ.
ನಿಮ್ಮ ಸಾಮಥ್ರ್ಯ ಮತ್ತು ದೌರ್ಬಲ್ಯಗಳನ್ನು ಅರಿಯಿರಿ.
ನ್ಯಾಯಪರವಾದ ತೀರ್ಮಾನ ಕೈಗೊಳ್ಳಿ.
ಅಪರಾಧಗಳಿಗೆ ಕೈ ಹಾಕಬೇಡಿ.
ನಿಮ್ಮ ಸಾಧನೆಗಳ ಬಗ್ಗೆ ಜಂಭ ಬೇಡ.
ಪ್ರತೀ ತಪ್ಪಿನಿಂದ ಪಾಠ ಕಲಿಯಿರಿ.
ನಿಮ್ಮ ಕೆಲಸಕ್ಕೆ ನಿರ್ದಿಷ್ಟವಾದ ಪ್ರತಿಫಲ ಬೇಡಬೇಡಿ.
ದ್ವೇಷ ಅಸೂಯೆಗಳನ್ನು ದೂರವಿರಿಸಿ.
ಇತರರಲ್ಲಿ ಪರಿಪೂರ್ಣತೆಯನ್ನು ಹುಡುಕಬೇಡಿ. 
ಆತ್ಮವಿಶ್ವಾಸ ಇರಲಿ, ಅಂಧಾನುಕರಣೆ ಬೇಡ.
ಇತರರ ಅಲ್ಪ ಉತ್ತಮ ಕಾರ್ಯವನ್ನೂ ಶ್ಲಾಘಿಸಿ, ಪ್ರಶಂಸೆ ನೀಡಿ.
ಯಾರೊಂದಿಗೂ ಸಂಪರ್ಕ ಕಳೆದುಕೊಳ್ಳಬೇಡಿ. 
ಮಾದಕ ವಸ್ತುಗಳಿಂದ ದೂರವಿರಿ.
ಇನ್ನೊಬ್ಬರ ಬಗ್ಗೆ ನಕಾರಾತ್ಮಕ ಮಾತುಗಳು ಬೇಡ.
ಸಂತೋಷವನ್ನು ಸೀಮಿತಗೊಳಿಸಿಕೊಳ್ಳಬೇಡಿ. 

ಆರ್.ಬಿ.ಗುರುಬಸವರಾಜ ಹೊಳಗುಂದಿ


ಚಂದಮಾಮನ ಕಣ್ಣಾ ಮುಚ್ಚಾಲೆ ನೋಡೋಣ ಬನ್ನಿ

ದಿನಾಂಕ 20-01-2018ರ ವಿಜಯವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ಚಂದಮಾಮನ ಕಣ್ಣಾ ಮುಚ್ಚಾಲೆ ನೋಡೋಣ ಬನ್ನಿ
 




  ಪುರಾಣೇತಿಹಾಸ ಕಾಲದಿಂದಲೂ ಕಲೆ ಮತ್ತು ಸಾಹಿತ್ಯದ ಕಥಾ ವಸ್ತುವಾಗಿರುವ ಚಂದ್ರ ಅಸಂಖ್ಯಾತ ಕೆಲಸಗಳಿಗೆ ಸ್ಪೂರ್ತಿಯಾಗಿದೆ. ಕಥೆ, ಕಾವ್ಯ, ಗದ್ಯ, ಪದ್ಯ, ಸಂಗೀತ, ಕಲೆ ಇತ್ಯಾದಿಗಳ ಸೃಷ್ಟಿಗೆ ಪ್ರೇರಕಾಂಶ. ಲೌಕಿಕ ಮತ್ತು ಅಲೌಕಿಕ ಬದುಕಿನ ಒಂದು ಭಾಗವಾದ ಚಂದ್ರ ಅಬಾಲವೃದ್ದರಿಗೂ ಪ್ರಿಯವಾದ ವಸ್ತು. ಅರಿಸ್ಟಾಟಲ್‍ನಿಂದ ಇಂದಿನವರೆಗೂ ಅಧ್ಯಯನ ವಸ್ತುವಾಗಿರುವ ಚಂದ್ರನ ಬಗ್ಗೆ ಮೊಗೆದಷ್ಟೂ ಕುತೂಹಲ ಕಥನಗಳು ಹುಟ್ಟುತ್ತಲೇ ಇವೆ. ಇದೇನಿದು ಚಂದ್ರನ ಬಗ್ಗೆ ಇಷ್ಟೊಂದು ವರ್ಣನೆ ಎನ್ನುತ್ತೀರಾ? ಇದೇ ಜನವರಿ 31 ಕ್ಕೆ ರಾತ್ರಿ ಬಾನಂಗಳದಲ್ಲಿ ಒಂದು ವಿಸ್ಮಯ ನಡೆಯಲಿದೆ. ಅದೇನೇಂದು ಬಲ್ಲಿರಾ? ಅದೇ ಈ ವರ್ಷದ ಮೊದಲ ಚಂದ್ರಗ್ರಹಣ. ನೀವು ಈಗಾಗಲೇ ಚಂದ್ರಗ್ರಹಣದ ಬಗ್ಗೆ ತಿಳಿದಿರುತ್ತೀರಿ. ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕಿಗೆ ಅಡ್ಡಲಾಗಿ ಭೂಮಿ ಬಂದು ಕೆಲಕಾಲ ಚಂದ್ರನ ಮೇಲೆ ಭೂಮಿಯ ನೆರಳು  ಬೀಳುತ್ತದೆ. ಆಗ ಭೂಮಿಯಲ್ಲಿದ್ದ ಜೀವರಾಶಿಗೆ ಚಂದ್ರ ಕೆಲಕಾಲ ಕಾಣದಂತೆ ಮಾಯವಾಗುತ್ತಾನೆ. ಇದನ್ನೇ ನಾವು ಚಂದ್ರಗ್ರಹಣ ಎಂದು ಶಾಲಾ ಪಠ್ಯದಲ್ಲಿ ಓದಿದ್ದೇವೆ. ಆದರೆ ಜನವರಿ 31ರ ಚಂದ್ರಗ್ರಹಣ ತುಂಬಾ ವಿಶೇಷವುಳ್ಳದ್ದಾಗಿದೆ. ವಿಶೇಷತೆ ಏನು ಅಂತಿರಾ? 
ವಿಶೇಷ ಚಂದ್ರಗ್ರಹಣ : ಇದು ಈ ವರ್ಷದ ಮೊದಲ ಗ್ರಹಣವಾಗಿದ್ದು ಮೋಡಗಳಿಲ್ಲದ ರಾತ್ರಿ ಸಂಭವಿಸುವುದರಿಂದ ವೀಕ್ಷಣೆಗೆ ಸಾಕಷ್ಟು ಅವಕಾಶಗಳಿವೆ. ಅಲ್ಲದೇ ಇದು ಸೂಪರ್ ಮೂನ್ ದಿನದಂದೇ ಸಂಭವಿಸುತ್ತದೆ. ಇನ್ನೊಂದು ವಿಶೇಷ ಎಂದರೆ  ಜನವರಿ 31ರ ಹುಣ್ಣಿಮೆಯನ್ನು ಬ್ಲೂಮೂನ್ ಎಂತಲೂ ಕರೆಯುತ್ತಾರೆ. ಅಲ್ಲದೇ ಈ ಗ್ರಹಣವು ಹೆಚ್ಚಾಗಿ ಕರ್ನಾಟಕದೆಲ್ಲೆಡೆ ಸಂಜೆ ಚಂದ್ರೋದಯದ ಸಮಯದಲ್ಲಿ ಸಂಭವಿಸುವುದರಿಂದ ವೀಕ್ಷಿಸಲು ಅನುಕೂಲ. ಗ್ರಹಣವು 18:15(ಸಂಜೆ 6:15)ಕ್ಕೆ ಪ್ರಾರಂಭವಾಗಿ 21:38(ರಾತ್ರಿ 09:38) ಕ್ಕೆ ಮುಕ್ತಾಯವಾಗುತ್ತದೆ. ಒಟ್ಟು 3ಗಂಟೆ 23ನಿಮಿಷಗಳ ಕಾಲ ಈ ಗ್ರಹಣವನ್ನು ನೋಡಬಹುದು. 
ಬರಿಗಣ್ಣಿನಿಂದಲೇ ವೀಕ್ಷಿಸಿ : ಚಂದ್ರಗ್ರಹಣ ನೋಡಲು ಯಾವುದೇ ವಿಶೇಷ ಉಪಕರಣಗಳೇನೂ ಬೇಕಾಗಿಲ್ಲ. ಬರಿಗಣ್ಣಿನಿಂದಲೇ ನೋಡಿ ಆನಂದಿಸಬಹುದು ಮತ್ತು ಇದರಿಂದ ಕಣ್ಣಿಗೆ ಯಾವುದೇ ಅಪಾಯವಿಲ್ಲ. ಆದರೆ ಚಂದ್ರಗ್ರಹಣದ ಸಂಪೂರ್ಣ ವೀಕ್ಷಣೆಗೆ ಬೈನಾಕುಲರ್ ಅಥವಾ ದೂರದರ್ಶಕ ಯಂತ್ರಗಳಿದ್ದರೆ ಸಮೀಪದ ದೃಶ್ಯಾವಳಿಗಳ ಆನಂದ ಅನುಭವಿಸಬಹುದು. ಜೊತೆಗೆ ಚಂದ್ರಗ್ರಹಣದ ಸಂಪೂರ್ಣ ಗುಣಲಕ್ಷಣಗಳನ್ನು ನಿಖರವಾಗಿ ಅಧ್ಯಯನ ಮಾಡಬಹುದು. 


ಸೂಪರ್ ಮೂನ್ ಬ್ಲೂಮೂನ್
ಭೂಮಿಯ ಸುತ್ತ ಸುತ್ತುವ ಚಂದ್ರ ತನ್ನ ಕಕ್ಷೆಯಲ್ಲಿ ಭೂಮಿಗೆ ಅತೀ ಕನಿಷ್ಠ ದೂರ ಇರುವ ದಿನವನ್ನು ಸೂಪರ್ ಮೂನ್ ಎಂದು ಕರೆಯಲಾಗುತ್ತದೆ. ಸೂಪರ್ ಮೂನ್ ದಿನದಂದು ಚಂದ್ರನು ಸಾಮಾನ್ಯತೆಗಿಂತ 14% ಹೆಚ್ಚು ದೊಡ್ಡದಾಗಿ ಹಾಗೂ 30% ಹೆಚ್ಚು ಪ್ರಕಾಶಮಾನವಾಗಿ ಕಾಣುತ್ತದೆ. 3 ಡಿಸೆಂಬರ್ 2017, 1 ಜನವರಿ 2018 ಮತ್ತು 31 ಜನವರಿ 2018 ರ ಹುಣ್ಣಿಮೆಗಳು ಸೂಪರ್ ಮೂನ್‍ಗಳಾಗಿವೆ. ಎರಡು ಹುಣ್ಣಿಮೆಗಳ ನಡುವಿನ ಕಾಲಾವಧಿ 29.5 ದಿನಗಳು(709 ಗಂಟೆಗಳು). ಒಂದೇ ಕ್ಯಾಲೆಂಡರ ತಿಂಗಳಲ್ಲಿ ಎರಡು ಹುಣ್ಣಿಮೆಗಳಿದ್ದು, ಎರಡನೆ ಹುಣ್ಣಿಮೆಯನ್ನು ಬ್ಲೂಮೂನ್ ಎಂದು ಕರೆಯುಲಾಗುತ್ತದೆ. ಇದೇ ಜನವರಿ ತಿಂಗಳಲ್ಲಿ ಎರಡು ಹುಣ್ಣಿಮೆಗಳಿವೆ. ಜನವರಿ 1 ಹಾಗೂ  31.  ಹಾಗಾಗಿ ಜನವರಿ  31 ರ ಹುಣ್ಣಿಮೆಯನ್ನು ಬ್ಲೂಮೂನ್ ಎಂದು ಕರೆಯಲಾಗುತ್ತದೆ. 

ಭಯ ಬೇಡ : ಗ್ರಹಣ ಎಂದರೆ ನೆರಳಿನ ಕತ್ತಲು. ಗ್ರಹಣಗಳ ಬಗ್ಗೆ ಕೆಲವು ಜನರಲ್ಲಿ ತಪ್ಪು ಅಭಿಪ್ರಾಯಗಳಿವೆ. ಗ್ರಹಣಗಳ ಸಮಯದಲ್ಲಿ ಹೊರಗೆ ಬರಬಾರದು, ಊಟ ಮಾಡಬಾರದು, ಬಸುರಿ ಮತ್ತು ಬಾಣಂತಿಯರಿಗೆ ಗ್ರಹಣದ ನೆರಳು ಬೀಳಬಾರದು ಇತ್ಯಾದಿ ತಪ್ಪು ಅಭಿಪ್ರಾಯಗಳಿವೆ. ಇವೆಲ್ಲಾ ತಪ್ಪು ಅಭಿಪ್ರಾಯಗಳೇ ಹೊರತು ಸತ್ಯವಲ್ಲ. ಪ್ರತಿಯೊಂದಕ್ಕೂ ವೈಜ್ಞಾನಿಕ ಹಿನ್ನಲೆಗಳಿವೆ. ಹಿಂದಿನ ಕಾಲದಲ್ಲಿ ಈಗಿನಂತೆ ವಿದ್ಯುತ್ ದೀಪಗಳ ವ್ಯವಸ್ಥೆ ಇರಲಿಲ್ಲ. ಕತ್ತಲಿನಲ್ಲಿ ಊಟ ಮಾಡುವಾಗ ಹುಳು/ಕೀಟಗಳು ಆಹಾರದ ತಟ್ಟೆಯೊಳಗೆ ಬೀಳಬಹುದು ಎಂಬ ಕಾರಣಕ್ಕೆ ಗ್ರಹಣದ ವೇಳೆ ಆಹಾರ ಸೇವಿಸಬಾರದು ಎಂದು ಹೇಳಿರಬಹುದು. ಕತ್ತಲಲ್ಲಿ ಬಸುರಿ/ಬಾಣಂತಿ ಹೊರಗೆ ಬಂದರೆ ಬೀಳಬಹುದು ಎಂಬ ಕಾರಣಕ್ಕೆ ಹೊರಗೆ ಬರಬಾರದು ಎಂದು ಹೇಳಿದ್ದಾರೆಯೇ ವಿನಹ ಅನ್ಯ ಕಾರಣಗಳಿಗಲ್ಲ. ಗ್ರಹಣಗಳು ನಿಸರ್ಗದಲ್ಲಿ ನಡೆಯುವ ಅವಿಸ್ಮರಣೀಯ ವಿದ್ಯಮಾನಗಳು. ಇವು ಬೇಕೆಂದಾಗ ನೋಡಲು ಸಿಗುವುದಿಲ್ಲ. ಅವು ಸಂಭವಿಸಿದಾಗಲೇ ನೋಡಿ ಆನಂದಿಸಬೇಕು. ಸೂರ್ಯಗ್ರಹಣವನ್ನು ಮಾತ್ರ ಬರಿಗಣ್ಣಿನಿಂದ ನೋಡಬಾರದು. ಆದರೆ ಚಂದ್ರಗ್ರಹಣ ನೋಡಲು ಯಾವುದೇ ಅಭ್ಯಂತರ ಹಾಗೂ ಅಪಾಯಗಳಿಲ್ಲ. 
ನೆನಪಿರಲಿ :
ಹುಣ್ಣಿಮೆಯ ದಿನ ಚಂದ್ರಗ್ರಹಣ ಮತ್ತು ಅಮವಾಸ್ಯೆ ದಿನ ಸೂರ್ಯಗ್ರಹಣ ಸಂಭವಿಸುತ್ತವೆ. ಆದರೆ ಎಲ್ಲಾ ಹುಣ್ಣಿಮೆ ಅಥವಾ ಅಮವಾಸ್ಯೆ ದಿನ ಗ್ರಹಣ ಸಂಭವಿಸುವುದಿಲ್ಲ. ಗ್ರಹಣಗಳು ಸಂಭವಿಸಲು ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ನೇರದಲ್ಲಿ ಬರಬೇಕು. ಆಗ  ಮಾತ್ರ ಗ್ರಹಣಗಳು ಸಂಭವಿಸುತ್ತವೆ.

ನೀವೇನು ಮಾಡಬಹುದು? : 
ಮೊದಲು ನಿಮ್ಮ ಮನೆಯ ಎಲ್ಲಾ ಸದಸ್ಯರಿಗೆ ಚಂದ್ರಗ್ರಹಣದ ಬಗ್ಗೆ ಮಾಹಿತಿ ನೀಡಿ. ಗ್ರಹಣದ ದಿನ ಮನೆಯವರೊಡಗೂಡಿ ಗ್ರಹಣ ವೀಕ್ಷಿಸಿ.
ನಿಮ್ಮ ಗ್ರಾಮ ಅಥವಾ ನಗರಗಳ ವಾರ್ಡ್ ಮಟ್ಟದಲ್ಲಿ ಗ್ರಹಣಗಳ ಬಗ್ಗೆ ಜನರಲ್ಲಿ ಇರುವ ತಪ್ಪುಕಲ್ಪನೆ ಹೋಗಲಾಡಿಸಲು ಸಭೆ/ಗೋಷ್ಠಿಗಳನ್ನು ನಡೆಸಿ.
ಗ್ರಹಣ ಕುರಿತ ಜನರಲ್ಲಿನ ಅಂಧಾನುಕರಣೆ ಮತ್ತು ಮೌಢ್ಯತೆಗಳನ್ನು ಹೊಡೆದು ಹಾಕಲು ಮಾರ್ಗದರ್ಶನ ನೀಡಿ. 
ನಿಮ್ಮ ಸಮೀಪದ ಶಾಲಾ ಕಾಲೇಜುಗಳಲ್ಲಿ ಗ್ರಹಣ ಕುರಿತಾದ ಮಾಹಿತಿ ಕಾರ್ಯಾಗಾರ/ವೀಡಿಯೋ ಪ್ರದರ್ಶನ ಏರ್ಪಡಿಸಿ.
ಸಾಮಾಜಿಕ ಜಾಲತಾಣಗಳಲ್ಲಿ ಗ್ರಹಣ ವೀಕ್ಷಣೆಯ ಬಗ್ಗೆ ಹೆಚ್ಚು ಪ್ರಚಾರ ಕೈಗೊಳ್ಳುವುದು. ಆ ಮೂಲಕ ಜನಜಾಗೃತಿ ಮೂಡಿಸಿ.
ಗ್ರಹಣದ ದಿನ ಎತ್ತರವಾದ ಸ್ಥಳದಲ್ಲಿ ಗ್ರಹಣ ವೀಕ್ಷಣೆಗೆ ಸ್ಥಳ ಹುಡುಕಿಕೊಳ್ಳುವುದು. ಆದಷ್ಟೂ ಹೆಚ್ಚು ಜನರನ್ನು ಸೇರಿಸಿ ಗ್ರಹಣ ಕುರಿತಾದ ಚರ್ಚೆ ಹಾಗೂ ವೀಕ್ಷಣೆಗೆ ಅವಕಾಶ ಕಲ್ಪಿಸಿ.
ದೂರದರ್ಶಕ ಯಂತ್ರಗಳನ್ನು ಅಳವಡಿಸಿ ಗ್ರಹಣ ವೀಕ್ಷಣೆಗೆ ಅವಕಾಶ ಕಲ್ಪಿಸುವುದು. ಆ ಮೂಲಕ ಗ್ರಹಣ ಕುರಿತು ಅಧ್ಯಯನ ಕೈಗೊಳ್ಳಿ.
ಗ್ರಹಣ ಸಮಯದಲ್ಲಿ ಸಾಮೂಹಿಕ ಭೋಜನ ಸೇವನೆ ಹಾಗೂ ಮನೋರಂಜನೆ ಕಾರ್ಯಕ್ರಮ ಏರ್ಪಡಿಸಿ.
ಗ್ರಹಣ ವೀಕ್ಷಣೆಯ ನಂತರ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಾಖಲಿಸಿಡಿ.
ಆರ್.ಬಿ.ಗುರುಬಸವರಾಜ ಹೊಳಗುಂದಿ

January 8, 2018

ಮೈಂಡ್ ಮ್ಯಾಪಿಂಗ್ Mind Mapping

ಪ್ರಜಾವಾಣಿ 08-01-2018

ಮೈಂಡ್ ಮ್ಯಾಪಿಂಗ್ ಎಂಬ ಮಾಯಾವಿ ಕಲಿಕೆ 

ತರಗತಿಯಲ್ಲಿ ಕನ್ನಡ ಶಿಕ್ಷಕರು ವ್ಯಾಕರಣ ಪಾಠ ಮಾಡುವ ವೇಳೆ ಹತ್ತನೇ ತರಗತಿಯ  ಸುಂದರೇಶ ಚಿತ್ರ ತೆಗೆಯುತ್ತಾ ಕುಳಿತಿದ್ದಾನೆ. ಇದನ್ನು ಗಮನಿಸಿದ ಶಿಕ್ಷಕರು ಅವನ ಹತ್ತಿರ ಬಂದು ಫಟಾರನೇ ಕೆನ್ನೆಗೊಂದು ಏಟು ಕೊಟ್ಟು ನೋಟ್ಸ್ ಕಿತ್ತುಕೊಂಡು ಹೋದರು. ಕಪಾಳ ಉಜ್ಜುತ್ತಾ ತಲೆ ಎತ್ತಿ ನಿಂತಿದ್ದ ಸುಂದರೇಶ ‘ಸರ್ ನಾನು ವ್ಯಾಕರಣದ ಚಿತ್ರ ಬರೆಯುತ್ತಿದ್ದೆ’ ಎಂದನು. ಆಗ ಇಡೀ ತರಗತಿಯ ಮಕ್ಕಳು ಗೊಳ್ಳನೇ ನಕ್ಕರು. ಶಿಕ್ಷಕರು ಒಂದು ಕ್ಷಣ ದಂಗಾದರು. “ಏನು ವ್ಯಾಕರಣದ ಚಿತ್ರವಾ!?” ಎಂದು ಪುಸ್ತಕ ತೆರೆದು ನೋಡಿದರು. ಆಶ್ಚರ್ಯವಾಯಿತು. ಅರ್ಥ ಮಾಡಿಕೊಳ್ಳಲು ಕ್ಲಿಷ್ಟವಾದ ವ್ಯಾಕರಣದ ಅಂಶವನ್ನು ಇಷ್ಟೊಂದು ಸುಲಭವಾಗಿ ಚಿತ್ರದ ಮೂಲಕ ಬರೆದುಕೊಂಡ ಸುಂದರೇಶನ ಕೌಶಲ್ಯ ಮತ್ತು ಜಾಣ್ಮೆಯನ್ನು ಮನದಲ್ಲೇ ಮೆಚ್ಚಿದರು. ಅವನ ಈ ಕಾರ್ಯವನ್ನು ಗಮನಿಸದೇ ಏಟು ನೀಡಿದ್ದರ ತಮ್ಮ ತಪ್ಪಿನ ಅರಿವಾಯಿತು. ಹಾಗಾದರೆ ಸುಂದರೇಶ ಹೇಗೆ ವ್ಯಾಕರಣ ಚಿತ್ರವನ್ನು ಬರೆದ? ಇದನ್ನು ಹೇಗೆ ಕಲಿತ? ಇದರಿಂದ ಏನುಪಯೋಗ ಎಂಬ ಪ್ರಶ್ನೆಗಳು ಮೂಡುವುದು ಸಹಜ.  ಆ ಎಲ್ಲ ಪ್ರಶ್ನೆಗಳಿಗೆ ಉತ್ತರವೇ ಮೈಂಡ್ ಮ್ಯಾಪಿಂಗ್.
ಏನಿದು ಮೈಂಡ್ ಮ್ಯಾಪಿಂಗ್?: ಮೈಂಡ್ ಮ್ಯಾಪಿಂಗ್ ಎಂಬುದು ಪರಿಕಲ್ಪನೆ ಮತ್ತು ಕಲ್ಪನೆಗಳ ರೇಖಾತ್ಮಕ ಚಿತ್ರಿಕೆಯಾಗಿದೆ. ಅಂದರೆ ನಿರ್ದಿಷ್ಟ ಪರಿಕಲ್ಪನೆಯನ್ನು ಪದಗಳ ಆಧಾರಿತ ರೇಖಾಚಿತ್ರ, ನಕ್ಷೆ, ಆಲೇಖ ಅಥವಾ ವಿವಿಧ ದೃಶ್ಯಾವಳಿಗಳ ಮೂಲಕ ರಚಿಸುವ ಚಿತ್ರಿಕೆಯಾಗಿದೆ. ಇದು ದೃಶ್ಯಾತ್ಮಕ ಯೋಚನಾ ಸಾಧನವಾಗಿದ್ದು, ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳಲು, ವಿಶ್ಲೇಷಿಸಲು, ಸಂಶ್ಲೇಷಿಸಲು, ಮರುಸೃಷ್ಟಿಸಲು ಸಹಾಯ ಮಾಡುತ್ತದೆ. 
ಇಲ್ಲಿ ಪರಿಕಲ್ಪನೆಗೆ ಸಂಬಂಧಿಸಿದ ಮಾಹಿತಿಯನ್ನು ಕ್ರಮಾನುಗತವಾಗಿ ಚಿತ್ರದ ದೃಶ್ಯಾವಳಿಗಳ ಮೂಲಕ ಬಿಂಬಿಸಲಾಗುತ್ತದೆ. ಪರಿಕಲ್ಪನೆಗೆ ಸಂಬಂಧಿಸಿದ ಮುಖ್ಯ ಅಂಶ/ಪದವು ಕೇಂದ್ರದಲ್ಲಿದ್ದು, ಆ ಪರಿಕಲ್ಪನೆಗೆ ಸಂಬಂಧಿಸಿದ ಉಪ ಅಂಶಗಳನ್ನು ವಿವಿಧ ಶಾಖೆಗಳ ನಕ್ಷೆಯಲ್ಲಿ ಪ್ರಸ್ತುತ ಪಡಿಸಲಾಗುತ್ತದೆ. 
ವಿಶೇಷತೆ ಏನು?: ಮೈಂಡ್ ಮ್ಯಾಪಿಂಗ್ ಸಾಂಪ್ರದಾಯಿಕ ಟಿಪ್ಪಣಿ ಅಥವಾ ಚಿತ್ರ ವಿಧಾನಕ್ಕಿಂತ ಭಿನ್ನವಾಗಿದ್ದು, ಮೆದುಳಿನ ಕಾರ್ಯಕ್ಕೆ ನಿಕಟವಾದ ಹೋಲಿಕೆಯ ಕಲಿಕೆ/ಬೋಧನಾ ಮಾರ್ಗವಾಗಿದೆ. ಇದು ವಿಶ್ಲೇಷಣಾತ್ಮಕ ಮತ್ತು ಕಲಾತ್ಮಕ ಚಟುವಟಿಕೆಯಾಗಿದ್ದು, ಮೆದುಳನ್ನು ಕಲಿಕೆಯಲ್ಲಿ ಉತ್ಕøಷ್ಟವಾಗಿ ತೊಡಗಿಸುತ್ತದೆ. ಜ್ಞಾನಗ್ರಹಣ ಕಾರ್ಯದಲ್ಲಿ ಅತ್ಯಂತ ಉತ್ತಮ ಸಾಧನಾಗಿದ್ದು, ಕಲಿಕಾರ್ಥಿಗೆ ಹೆಚ್ಚು ಖುಷಿ ನೀಡುತ್ತದೆ. 
ಪ್ರಾರಂಭದಲ್ಲಿ ಇಲ್ಲಿನ ಕಲಿಕೆಯು ಗೊಂದಲ ಎನಿಸಬಹುದು. ಆದರೆ ಸ್ವಲ್ಪ ಪ್ರಯತ್ನದಿಂದ ರೇಖಾತ್ಮಕ ಟಿಪ್ಪಣಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರೆ ಸುಲಭ ಸಾಧನವಾಗುತ್ತದೆ. 
ಟಿಪ್ಪಣಿಗಿಂತಲೂ ಸುಲಭ: ಮೈಂಡ್ ಮ್ಯಾಪಿಂಗ್‍ನ ಮುಖ್ಯ ಪ್ರಯೋಜನವೆಂದರೆ, ಪರಿಕಲ್ಪನೆಗೆ ಸಂಬಂಧಿಸಿದ ಮಾಹಿತಿಗಳ ರಚನಾತ್ಮಕ ಜೋಡಣೆಯಾಗಿದೆ. ಇದರಿಂದ ಪುಟಗಟ್ಟಲೆ ನೋಟ್ಸ್/ಟಿಪ್ಪಣಿ ಬರೆಯುವ ಅನಾಯಾಸ ತಪ್ಪುತ್ತದೆ ಹಾಗೂ ಮಾಹಿತಿಯು ಸುಲಭವಾಗಿ ನೆನಪಿನಲ್ಲಿ ಉಳಿಯುತ್ತದೆ. ಉದ್ದುದ್ದ ವಾಕ್ಯಗಳನ್ನು ಬರೆದುಕೊಂಡು ಅವುಗಳನ್ನು ಕಲಿಯುವ ಬದಲು ಮಾಹಿತಿಯನ್ನು ರೇಖಾತ್ಮಕ ಚಿತ್ರಗಳ ಮೂಲಕ ಸುಲಭವಾಗಿ ಬರೆದುಕೊಳ್ಳುವುದಾಗಿದೆ. 
ಇದು ಬೋಧನೆ ಮತ್ತು ಕಲಿಕೆಯ ಕ್ರಾಂತಿಕಾರಿ ವಿಧಾನವಾಗಿದೆ. ವಿವಿಧ ವಿಚಾರಗಳ ನಡುವಿನ ಸಂಬಂಧವನ್ನು ವಿವಿಧ ಕೊಂಡಿಗಳ ಸಹಾಯದಿಂದ ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ಬಾಹ್ಯೀಕರಿಸಲು ಬಳಸುವ ಆಲೋಚನಾ ಸಾಧನವಾಗಿದೆ. 
ಸರಳ ರಚನೆ: ವಿಷಯ ಅಥವಾ ಪರಿಕಲ್ಪನೆಗೆ ಸಂಬಂಧಿಸಿದ ಮೈಂಡ್ ಮ್ಯಾಪಿಂಗ್ ರಚಿಸುವುದು ಬಹಳ ಸುಲಭ. ಆದರೆ ವಿಷಯವನ್ನು ವಿಭಿನ್ನವಾಗಿ ಪ್ರಸ್ತುತಪಡಿಸುವ ಹಾಗೂ ಕಾಲ್ಪನಿಕ ಕಲಾವಂತಿಕೆ ಇರಬೇಕು. 
ವಿಷಯ/ಪರಿಕಲ್ಪನೆಯ ಮುಖ್ಯ ಪದವನ್ನು ವೃತ್ತ/ಚೌಕ/ಆಯತ ವಿವಿಧ ಆಕೃತಿಗಳ ಮಧ್ಯ ಬರೆಯಬೇಕು. ಆ ಪರಿಕಲ್ಪನೆಗೆ ಸಂಬಂಧಿಸಿದ ಉಪಘಟಕಗಳ ಪದಗಳನ್ನು ವಿವಿಧ ಶಾಖಾ ಕೊಂಡಿಗಳನ್ನು ಬಳಸಿ ಚಿತ್ರಿಸಬೇಕು. ಮಾಹಿತಿ ಹೆಚ್ಚು ಇದ್ದರೆ ಉಪಘಟಕಗಳ ಉಪ ಅಂಶಗಳನ್ನು ಆಯಾ ಶಾಖಾ ಕೊಂಡಿಗಳ ಸುತ್ತಲೂ ಉಪಕೊಂಡಿ ರಚಿಸಿಕೊಳ್ಳಬೇಕು. ಇವೆಲ್ಲವನ್ನು ಸುಂದರ ರೇಖಾ ಚಿತ್ರದ ಮೂಲಕ ಚಿತ್ರಿಸುವ ಕಲೆಗಾರಿಕೆ ಪ್ರಮುಖವಾದದ್ದು. ಸಾಧ್ಯವಾದರೆ ಶಾಖಾ ಕೊಂಡಿಗಳನ್ನು ವಿವಿಧ ಬಣ್ಣಗಳಿಂದ ತುಂಬಿದರೆ ಇನ್ನಷ್ಟು ಅರ್ಥಪೂರ್ಣ ಹಾಗೂ ಸುಂದರ ಮ್ಯಾಪ್ ರಚಿಸಿಬಹುದು. 
ಕೇಂದ್ರ ವಿಷಯದ ಸುತ್ತಲೂ ಸಂಬಂಧಿತ ಉಪ ವಿಷಯಗಳನ್ನು ಅಭಿವೃದ್ದಿ ಪಡಿಸಬೇಕು. ಪ್ರತಿಯೊಂದು ಉಪ ವಿಷಯವನ್ನೂ ಕೇಂದ್ರದೊಂದಿಗೆ ರೇಖೆಯಿಂದ ಜೋಡಿಸಬೇಕು. ಉಪ ವಿಷಯಕ್ಕೆ ಇನ್ನಷ್ಟು ವಿಷಯಗಳಿದ್ದರೆ ಸೇರಿಸಿ ರೇಖೆಯ ಸಹಾಯದಿಂದ ಸಂಬಂಧಿಸಿದ ಉಪ ವಿಷಯದೊಂದಿಗೆ ಸೇರಿಸಬೇಕು.  
ಸಾಧ್ಯವಾದಷ್ಟೂ ಮಾಹಿತಿ ಪದಗಳು ಸಂಕ್ಷಿಪ್ತವಾಗಿರಲಿ. ಒಂದೇ ಪದ ಇದ್ದರೆ ನಕ್ಷೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಅಕ್ಷರಗಳ ಗಾತ್ರ, ಬೇರೆ ಬೇರೆಯಾಗಿರಲಿ ಮತ್ತು ಬೇರೆ ಬೇರೆ ಬಣ್ಣಗಳಿಂದ ಪದಗಳನ್ನು ಬರೆಯಿರಿ. 
ಉಪಯೋಗಗಳು: ಮೈಂಡ್ ಮ್ಯಾಪಿಂಗ್‍ನ ಉಪಯೋಗಗಳು ಹಲವಾರು. ಇದು ಇಡೀ ಕಲಿಕಾಂಶವನ್ನು ಒಂದೇ  ಚಿತ್ರಣದ ಮೂಲಕ ತೋರಿಸುವುದರಿಂದ ಕಲಿಕೆ ಸುಲಭ ಹಾಗೂ ಶಾಶ್ವತವಾಗಿರುತ್ತದೆ. ಚಿತ್ರಿಕೆಗಳನ್ನು ಮೆದುಳು ಸುಲಭವಾಗಿ ಗ್ರಹಿಸಿಟ್ಟುಕೊಳ್ಳುವುದರಿಂದ ಕಲಿಕೆ ಸುಗಮವಾಗುತ್ತದೆ. ಮೈಂಡ್ ಮ್ಯಾಪಿಂಗ್‍ನ ಉಪಯೋಗಗಳು ಕೆಳಗಿನಂತಿವೆ.
ಉದ್ದುದ್ದ ನೋಟ್ಸ್ ಬರೆಯುವ ಶ್ರಮ ತಪ್ಪುತ್ತದೆ.
ಸಮಯದ ಉಳಿತಾಯ.
ಸುಗಮ, ಸಂತಸ ಹಾಗೂ ಶಾಶ್ವತ ಕಲಿಕೆ.
ಕಲಿಕೆಯಲ್ಲಿ ಸೃಜನಶೀಲತೆಯ ಪ್ರಯೋಗ.
ಮಾಹಿತಿಯ ವರ್ಗೀಕರಣ ಮತ್ತು ವಿಶ್ಲೇಷಣೆಯ ಸುಲಭ ಮಾರ್ಗ
ಯೋಜನಾ ಬದ್ದ ಸ್ವತಂತ್ರ ಕಲಿಕೆ.
ಕಲಿಕೆಯನ್ನು ಪ್ರಸ್ತುತ ಪಡಿಸುವ ಹೊಸ ಮಾರ್ಗಗಳ ಸಂಶೋಧನೆ.
ಸಂಕೀರ್ಣ ಪರಿಕಲ್ಪನೆಗಳ ಸುಗಮ ಕಲಿಕೆ.
ಪರಿಕಲ್ಪನೆಯ ಸಮಗ್ರ ಮಾಹಿತಿ ವಿಶ್ಲೇಷಣೆ.
ಪರಿಕಲ್ಪನೆಯ ಸ್ಪಷ್ಟ ಚಿತ್ರಣ. ಗೊಂದಲಗಳಿಗೆ ಅವಕಾಶವಿರುವುದಿಲ್ಲ.
ಮಾಹಿತಿಗಳನ್ನು ನೆನಪಿಟ್ಟುಕೊಳ್ಳುವ ಸುಲಭ ವಿಧಾನ.
ವಿಷಯದ ಆಳವಾದ ಮತ್ತು ಉತ್ಕøಷ್ಟ ಕಲಿಕೆ.
ವಿಷಯದ ಕುರಿತ ಹೆಚ್ಚಿನ ಮಾಹಿತಿಯ ಅನ್ವೇಷಣೆ.
ವಿಮರ್ಶಾತ್ಮಕ ಚಿಂತನೆಗೆ ಪ್ರೇರಣೆ.
ಯಶಸ್ವಿ ಸ್ವ-ಅಧ್ಯಯನ ಕೌಶಲ್ಯ ಬೆಳೆಸುತ್ತದೆ.
ವಿಷಯದ ಸುಲಭ ಗ್ರಹಿಕೆಗೆ ರಹದಾರಿ.
ಪರೀಕ್ಷಾರ್ಥಿಗೆ ವಿಷಯ ಮನದಟ್ಟಾಗುತ್ತದೆ.
ಬೋಧಕರಿಗೆ/ಉಪನ್ಯಾಸಕರಿಗೆ ವಿಷಯ ಪ್ರಸ್ತುತತೆ ಸುಲಭವಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ದತೆ ನಡೆಸುವವರಿಗೆ ಅತ್ಯಂತ ಸುಲಭ ಕಲಿಕಾ ಮಾರ್ಗ.

ಆರ್.ಬಿ.ಗುರುಬಸವರಾಜ ಹೊಳಗುಂದಿ