May 30, 2018

ವೈಯಕ್ತಿಕ ಸಾಧನೆಯ ತತ್ವಗಳು Principles of success

ದಿನಾಂಕ 16-5-2018ರ ಪ್ರಜಾವಾಣಿಯಲ್ಲಿ ಪ್ರಕಟವಾದ ನನ್ನ ಬರಹ.

ವೈಯಕ್ತಿಕ ಸಾಧನೆಯ ತತ್ವಗಳು


ಪ್ರತಿಯೊಬ್ಬರೂ ಜೀವನದಲ್ಲಿ ಯಶಸ್ವಿಯಾಗಬೇಕೆಂದು ಬಯಸುತ್ತಾರೆ. ಆದರೆ ಬಹುತೇಕ ವೇಳೆ ಒಂದು ಸಣ್ಣ ಸಾಧನೆಯನ್ನು ಮಾಡಲೂ ಸಾಧ್ಯವಾಗುವುದಿಲ್ಲ. ಸಾಧಿಸಲು ಅನೇಕ ಅಡೆತಡೆಗಳು ಎದುರಾಗುತ್ತವೆ. ಸೋಲಿನ ಭೀತಿ ಆವರಿಸಿ ಸಾಧನೆಯ ಹಾದಿಗೆ ಮುಳ್ಳಾಗುತ್ತದೆ. ಕೆಲವು ವೇಳೆ ಗುರಿಗಳನ್ನು ಕಾರ್ಯ ರೂಪಕ್ಕೆ ತರಲಾಗದೇ ಸೋಲನ್ನು ಹಿಂಬಾಲಿಸಬೇಕಾಗುತ್ತದೆ. ಗುರಿಗಳನ್ನು ತಲುಪುವ ಹಾದಿಯಲ್ಲಿನ ಅಡೆತಡೆಗಳನ್ನು ನಿವಾರಿಸಲು ಬುದ್ದಿವಂತಿಕೆಗಿಂತ ತಂತ್ರಗಾರಿಕೆಯು ಮುಖ್ಯವಾಗಿರುತ್ತದೆ. ಯಾರಿಗೆ ತಂತ್ರಗಾರಿಕೆಯು ತಿಳಿದಿದೆಯೋ ಅವರು ಮಾತ್ರ ಯಶಸ್ವಿಯಾಗಬಲ್ಲರು. ಪ್ರಾಮಾಣಿಕ ಪ್ರಯತ್ನ ಮತ್ತು ಅವಕಾಶದ ಸದುಪಯೋದಿಂದ ಎಲ್ಲರೂ ಆ ಯಶಸ್ಸನ್ನು ಗಳಿಸಬಹುದು.  ಸಾಧನೆಗೆ ಶ್ರಿÃಮಂತಿಕೆ ಬೇಕಿಲ್ಲ. ಆದರೆ ಸಾಧಿಸುವ ಛಲ ಮತ್ತು ಪರಿಶ್ರಮ ಬೇಕು. ಅಂತಹ ಕೆಲ ತಂತ್ರಗಾರಿಕೆ ಮತ್ತು ಸಾಧನೆಯ ತತ್ವಗಳನ್ನು ಕೆಳಗೆ ನೀಡಲಾಗಿದೆ. ಅವುಗಳನ್ನು ಅನುಸರಿಸುವ ಸಾಧನೆಯ ಶಿಖರನ್ನು ನೀವೂ ಏರಬಹುದು. ಪ್ರಯತ್ನಿಸಿ.
ಸಾಧನೆಯ ಮಾರ್ಗಗಳು:
ಸಾಧನೆಯ ಉದ್ದೆÃಶ ಮತ್ತು ಗುರಿ ತಲುಪುವ ಕಾರ್ಯ ಯೋಜನೆಗಳು ಸ್ಪಷ್ಟವಾಗಿರಬೇಕು. 
ಕೇವಲ ಬುದ್ದಿ ಇದ್ದರೆ ಸಾಲದು. ಬುದ್ದಿಯಲ್ಲಿ ಚತುರತೆ ಬಹಳ ಮುಖ್ಯ. ಉದ್ದೆÃಶವನ್ನು ಸಾಧಿಸಲು ಸಾಮರಸ್ಯದಿಂದ ಕೆಲಸ ಮಾಡುವುದು ಅನಿವಾರ್ಯ. ಸಾಮರಸ್ಯದ ಕೆಲಸಕ್ಕೆ ಸಹಕಾರಿ ತತ್ವದ ಮೈತ್ರಿಯ ತಂತ್ರಗಾರಿಕೆ ತಿಳಿದಿರಬೇಕು.
ನಂಬಿಕೆ ಎಂಬುದು ಆಸೆ, ಉದ್ದೆÃಶ ಮತ್ತು ಯೋಜನೆಗಳ ಭೌತಿಕ ಮತ್ತು ಆರ್ಥಿಕ ಸ್ಥಿತಿಯಾಗಿದೆ. ಅದಕ್ಕಾಗಿ ಅನ್ವಯಿಕ ನಂಬಿಕೆ ಅಗತ್ಯ. ಕಾರ್ಯಕ್ಷೆÃತ್ರದಲ್ಲಿ ನಂಬಿಕೆ ಉಳಿಸಿಕೊಳ್ಳುವ ಮತ್ತು ಬೆಳೆಸಿಕೊಳ್ಳುವ ಪ್ರಯತ್ನ ಅವಶ್ಯಕ.
ಕಾರ್ಯಕ್ಷೆÃತ್ರದಲ್ಲಿ ಜವಾಬ್ದಾರಿ ತೆಗೆದುಕೊಳ್ಳವಿಕೆ ನಿಮ್ಮನ್ನು ಉನ್ನತ ಹಂತಕ್ಕೆ ತೆಗೆದುಕೊಂಡೊಯ್ಯುತ್ತದೆ. ನೀಡಿದ ಕೆಲಸಕ್ಕಿಂತ ಹೆಚ್ಚುವರಿಯಾಗಿ ತೆಗೆದುಕೊಳ್ಳುವ ಜವಾಬ್ದಾರಿಯು ನಿಮ್ಮ ಉತ್ತಮ ಸೇವೆಯನ್ನು ಪ್ರಶಂಸಿಸುವಂತೆ ಮಾಡುತ್ತದೆ. ಅದು ನಿಮ್ಮ ಸಾಧನೆಯ ಸೋಪಾನವಾಗಿದೆ.
ವ್ಯಕ್ತಿತ್ವವು ಒಬ್ಬ ವ್ಯಕ್ತಿಯ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ವೈಚಾರಿಕತೆಯ ಲಕ್ಷಣವಾಗಿದೆ. ಸಾಧನೆಯ ಶಿಖರ ತಲುಪಬಯಸುವ ಮುನ್ನ ಇನ್ನೊಬ್ಬರಿಗೆ ಮಾದರಿಯಾಗುವಂತಹ ವಿಭಿನ್ನ ವ್ಯಕ್ತಿತ್ವ ರೂಪಿಸಿಕೊಳ್ಳುವುದು ಅಗತ್ಯವಾಗಿದೆ. 
ವೈಯಕ್ತಿಕ ಉಪಕ್ರಮ ಸಾಧನೆಯ ಮತ್ತೊಂದು ಮೆಟ್ಟಿಲಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ. ವೈಯಕ್ತಿಕ ಭಿನ್ನತೆಯಲ್ಲಿ ತನ್ನದೇ ಆದ ಪದ್ದತಿ ಅಥವಾ ಕ್ರಮಗಳ ಮೂಲಕ ವಿಶೇಷತೆಯನ್ನು ಸಾಧಿಸುವುದೇ ಉಪಕ್ರಮ. ಇದು ಕೆಲಸದ ಪ್ರಾರಂಭದಿಂದ ಹಿಡಿದು ಅದನ್ನು ಯಶಸ್ವಿಯಾಗಿ ಪುರ್ಣಗೊಳಸಿವವರೆಗಿನ ಎಲ್ಲಾ ಹಂತಗಳ ಕಾರ್ಯ ವಿಧಾನವಾಗಿದೆ. ಸಾಧನೆಗೈದ ಪ್ರತಿಯೊಬ್ಬರೂ ಇದನ್ನು ಬೆಳೆಸಿಕೊಂಡಿರುತ್ತಾರೆ.
ಸಕಾರಾತ್ಮಕ ಮಾನಸಿಕ ವರ್ತನೆಯು ನಿಮ್ಮನ್ನು ಸಾಧನೆಯ ಉತ್ತುಂಗಕ್ಕೆ ಒಯ್ಯುತ್ತದೆ. ಸಕಾರಾತ್ಮಕತೆಯು ಯಶಸ್ಸನ್ನು ಆಕರ್ಷಿಸುತ್ತದೆ ಮತ್ತು ವೈಪಲ್ಯಗಳನ್ನು ದೂರವಿರಿಸುತ್ತದೆ.
ಉತ್ಸಾಹವು ಆಂತರಿಕ ಧ್ವನಿಯಾಗಿದ್ದು ಮುಖಭಾವದ ಅಭಿವ್ಯಕ್ತಿಯಲ್ಲಿ ಹೊರಸೂಸುತ್ತದೆ ಮತ್ತು ಕಾರ್ಯದ ಯಶಸ್ಸಿಗೆ ಕಾರಣವಾಗುತ್ತದೆ. ಉತ್ಸಾಹದಿಂದ ಕಾರ್ಯದಲ್ಲಿ ನಂಬಿಕೆ ಉಂಟಾಗುತ್ತದೆ. 
ಚಿಂತನೆಯ ಪಾಂಡಿತ್ಯದಿಂದ ಸ್ವಯಂ ಶಿಸ್ತು ಪ್ರಾರಂಭವಾಗುತ್ತದೆ. ನಿಮ್ಮ ಆಲೋಚನೆಗಳನ್ನು ನೀವು ನಿಯಂತ್ರಿಸದಿದ್ದರೆ ನಿಮ್ಮ ಅಗತ್ಯಗಳನ್ನು ನಿಯಂತ್ರಿಸಲಾಗದು. ಸ್ವಯಂ ಶಿಸ್ತು ತರ್ಕಶಾಸ್ತçದ ಬೋಧನೆಯೊಂದಿಗೆ ನಿಮ್ಮ ಹೃದಯದ ಭಾವನೆಗಳನ್ನು ಸಮತೋಲನದಲ್ಲಿಡುತ್ತದೆ. ಇದರಿಂದ ಯಶಸ್ಸು ನಿಮ್ಮದಾಗುತ್ತದೆ.
ಚಿಂತನೆಯು ಮನುಷ್ಯನಿಗೆ ಅತ್ಯಂತ ಅಪಾಯಕಾರಿ ಅಥವಾ ಪ್ರಯೋಜನಕಾರಿ ಶಕ್ತಿಯಾಗಿದೆ. ಆದರೆ ಅದು ಹೇಗೆ ಬಳಸಲ್ಪಡುತ್ತದೆ ಎಂಬುದರ ಆಧಾರದ ಮೇಲೆ ಅದರ ಪರಿಣಾಮ ಅಡಗಿದೆ. ಆದ್ದರಿಂದ ಸರಿಯಾದ ಅಥವಾ ನಿಖರವಾದ ಚಿಂತನೆಯು ನಿಮ್ಮದಾಗಿರಲಿ.
ಸಾಧನೆಗೆ ನಿರ್ದಿಷ್ಟ ಕಾರ್ಯದಲ್ಲಿನ ಗಮನ ಬಹಳ ಮುಖ್ಯ. ಆದರೆ ಗಮನವು ನಿಮ್ಮ ನಿಯಂತ್ರಣದಲ್ಲಿರಬೇಕು. ಸಾಧನೆಗೆ ಕಾರ್ಯದ ಮೇಲೆ ಮನಸ್ಸಿನ ಶಕ್ತಿಯನ್ನು ಕೇಂದ್ರಿÃಕರಿಸುವುದು ಮತ್ತು ತನ್ನ ಇಚ್ಛೆಯಂತೆ ಅದನ್ನು ನಿರ್ದೇಶಿಸುವುದು ಅಗತ್ಯ. ನಿಯಂತ್ರಿತ ಗಮನವು ಮಾನವ ಪ್ರಯತ್ನದಲ್ಲಿ ಪಾಂಡಿತ್ಯಕ್ಕೆ ಕಾರಣವಾಗುತ್ತದೆ.
ಸಾಂಘಿಕ ಕೆಲಸವು ಉಧ್ಯಮದಲ್ಲಿ ಚೈತನ್ಯ ಮೂಡಿಸುತ್ತದೆ. ಸೌಹಾರ್ಧಯುತ ಸಹಭಾಗಿತ್ವವು ಸಾಮರಸ್ಯದ ಸಹಕಾರಕ್ಕೆ ಕಾರಣವಾಗುತ್ತದೆ. ಸಾಮರಸ್ಯದ ಸಹಕಾರವು ಅಮೂಲ್ಯ ಆಸ್ತಿಯಾಗಿದ್ದು ಅದರ ಕೊಡುಗೆ ಅನನ್ಯ. ಇದೊಂದು ಸಾಧನೆಯ ಹಾದಿಯಲ್ಲಿನ ಬಹು ಪ್ರಮುಖ ಮೈಲಿಗಲ್ಲು. 
ಸಾಧನೆಯ ಹಾದಿಯಲ್ಲಿನ ಕೆಲ ವೈಫಲ್ಯಗಳು ತಾತ್ಕಾಲಿಕ ಸೋಲನ್ನು ಪ್ರತಿನಿಧಿಸುತ್ತವೆ. ಸೋಲಿನ ನಿಖರವಾದ ಕಾರಣವು ಅದನ್ನು ಎದುರಿಸುವ ಮಾರ್ಗ ಸೂಚಿಸುತ್ತವೆ. ಹಾಗಾಗಿ ಸೋಲಿಗೆ ಎದುರದೇ ಅದನ್ನು ಮೆಟ್ಟಿನಿಲ್ಲುವ ತಾಳ್ಮೆ ಬೆಳೆಸಿಕೊಳ್ಳಬೇಕು.
ಸೃಜನಾತ್ಮಕ ದೃಷ್ಟಿಕೋನವು ಯಶಸ್ಸಿನ ಮತ್ತೊಂದು ಆಯಾಮವನ್ನು ತೆರೆದಿಡುತ್ತದೆ. ಕೇವಲ ಬುದ್ದಿವಂತಿಕೆ  ಇದ್ದರೆ ಸಾಲದು. ಬುದ್ದಿವಂತಿಕೆಯನ್ನು ಒರೆಗೆ ಹಚ್ಚುವ ಸೃಜನಾತ್ಮಕ ಬುದ್ದಿವಂತಿಕೆ ಪ್ರತಿಭಾವಂತಿಕೆಯನ್ನು ಗಳಿಸಿಕೊಡುತ್ತದೆ. 
ಆರೋಗ್ಯವು ಪ್ರಜ್ಞಾಪೂರ್ವಕ ಸಂಜ್ಞೆಯೊಂದಿಗೆ ಆರ್ಥಿಕ ಯಶಸ್ಸನ್ನು ಗಳಿಸುವ ಮೂಲಕ ಸಾಮಾಜಿಕ ಮನ್ನಣೆಗೆ ಕಾರಣವಾಗುತ್ತದೆ. ಆರೋಗ್ಯವಾದ ದೇಹದಲ್ಲಿ ಆರೋಗ್ಯವಾದ ಮನಸ್ಸಿರಬೇಕು ಎಂದಿರುವುದು ಇದಕ್ಕೆÃ ಅಲ್ಲವೇ?
ಸಮಯ ಮತ್ತು ಹಣ ಅಮೂಲ್ಯವವಾದ ಸಂಪನ್ಮೂಲಗಳಾಗಿವೆ. ಯಶಸ್ಸಿನ ಪ್ರಯತ್ನದಲ್ಲಿ ಇವುಗಳ ಬಳಕೆ ಮತ್ತು ಸದ್ವಿನಿಯೋಗ ತುಂಬಾ ಮಹತ್ವದ್ದಾಗಿದೆ. ಸಂದರ್ಭೋಚಿತವಾಗಿ ಇವುಗಳನ್ನು ಬಳಸುವ ಚಾಣಾಕ್ಷತೆ ತಿಳಿದಿರಬೇಕು.
ಮನಸ್ಸಿನ ಶಾಂತಿ ಮತ್ತು ಆರೋಗ್ಯಕ್ಕೆ ಆಹಾರ  ಪ್ರಮುಖವಾದದ್ದು. ಧನಾತ್ಮಕ ಆಹಾರ ಪದ್ದತಿಗಳನ್ನು ಬೆಳೆಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಬಹುದು. 

ಆರ್.ಬಿ.ಗುರುಬಸವರಾಜ ಹೊಳಗುಂದಿ


No comments:

Post a Comment