April 28, 2014

ಕನವರಿಕೆಗಳ ಪ್ರವಾದಿ: ಎಡ್ಗರ್ ಕೇಸಿ

ಕನವರಿಕೆಗಳ ಪ್ರವಾದಿ: ಎಡ್ಗರ್ ಕೇಸಿ

 “ಬರ್ಮುಡಾ ಟ್ರ್ಯಾಂಗಲ್ಸ” ಬಗ್ಗೆ ಯಾರಿಗೆಗೊತ್ತಿಲ್ಲ. ಹೇಳಿ. ಡೆವಿಲ್ಸ್ ಟ್ರ್ಯಾಂಗಲ್ ಎಂದು ಪ್ರಸಿದ್ಧವಾಗಿದ್ದ ಅದನ್ನು ಭೂತ ಪಿಶಾಚಿಗಳ ತಾಣ ಎಂತಲೂ ಸಹ ಕರೆಯುತ್ತಾರೆ. ಅದಕ್ಯಾಕೆ ಆ ಹೆಸರು ಎಂದಿರ! ಇದೊಂದು ಅಂಟ್ಲಾಟಿಕ್ ತೀರದಲ್ಲಿನ ಬರ್ಮುಡಾ, ಮಯಾಮಿ, ಪ್ಲೋರಿಡಾ, ಪೋರ್ಟೊರಿಕಾ, ಸಾನ್‍ಜುವಾನ್ ದೇಶಗಳ ನಡುವಿನ ತ್ರಿಕೋಣ ಪ್ರದೇಶವಾಗಿದ್ದು, ವಿಸ್ಮಯಗಳ ಹಾಗೂ ಕೌತುಕಗಳ ಆಗರವಾಗಿದೆ ಮತ್ತು ವಿಜ್ಞಾನಕ್ಕೆ ಬಿಡಿಸಲಾಗದ ಕಗ್ಗಂಟಾಗಿದೆ. ಈ ಪ್ರದೇಶದಲ್ಲಿ ನಡೆದ ವಿಮಾನ ಮತ್ತು ಹಡಗುಗಳ ನಾಪತ್ತೆ ಪ್ರಕರಣಗಳು ಜಗತ್ತಿನ ಬೇರೆ ಕಡೆ ನಡೆದ ಎಲ್ಲಾ ಪ್ರಕರಣಗಳಿಗಿಂತ ವಿಶಿಷ್ಠವಾದವು ಮತ್ತು ಗಮನಾರ್ಹವಾದವುಗಳಾಗಿವೆ. 

ಇಲ್ಲಿ ನಡೆದ ನಾಪತ್ತೆ ಪ್ರಕರಣಗಳಿಗೆ ಕಾರಣಗಳ ಹಾದಿ ಹಿಡಿದು ಹುಡುಕಲು ಹೊರಟವರೂ ಸಹ ನಾಪತ್ತೆಯಾಗಿ ಸಂಶೋಧನೆಯ ಸ್ವರೂಪವೇ ಬುಡಮೇಲಾದ ಅನೇಕ ಪುರಾವೆಗಳು ದೊರೆತವಾದರೂ ನಂಬಲಸಾಧ್ಯವಾದ್ದರಿಂದ ಅವು ದಂತಕತೆಯಾಗಿಯೇ ಉಳಿದವು. ಆದರೆ ಸಾಧಕರಿಗೆ, ಸಂಶೋಧಕರಿಗೆ, ಸಾಹಸಿಗಳಿಗೆ ವೈಜ್ಞಾನಿಕ ಪುರಾವೆಗಳು ದೊರೆತರೆ ಅವರನ್ನು ತಡೆ ಹಿಡಿವವರ್ಯಾರು? ಬರ್ಮುಡಾ sಟ್ರ್ಯಾಂಗಲ್‍ನ ವಿಸ್ಮಯದ ಸಂಗತಿಗಳಿಗೆ ಕಾರಣಗಳನ್ನು, ಅದರ ಸ್ವರೂಪದ ಬಗ್ಗೆ ಕಂಡು ಕೇಳರಿಂiÀiದ ವ್ಯಕ್ತಿಯೊಬ್ಬ ಕನಸಿನಲ್ಲಿ ಕಂಡದನ್ನು ಹೇಳಿದಾಗ ಇಡೀ ಜಗತ್ತೇ ಮೂಕವಿಸ್ಮತವಾಗಿತ್ತು. ಏಕೆಂದರೆ ಬರ್ಮುಡಾ ಟ್ರ್ಯಾಂಗಲ್ ಕುರಿತು ಆ ವ್ಯಕ್ತಿ ಹೇಳಿದ ಮಾತು ಅಕ್ಷರ ಸಹ ನಂಬಲರ್ಹವಾಗಿತ್ತು. ಬರ್ಮುಡಾ ಟ್ರ್ಯಾಂಗಲ್ ಕುರಿತು ಮತೆ ಜನಮನದಲ್ಲಿ ಕುತೂಹಲ ಕೆರಳಿಸಿದ ಆ ವ್ಯಕ್ತಿಯೇ ಎಡ್ಗರ್ ಕೇಸಿ.

ಎಡ್ಗರ್ ಕೇಸಿ ಅಮೇರಿಕಾದ ಕೆಂಟುಕಿ ಎಂಬಲ್ಲಿ 1877ರಲ್ಲಿ ಜನಿಸಿದನು. ಬಾಲ್ಯದಲ್ಲಿ ಪ್ರತಿಭಾವಂತನೆನಿಸಿಕೊಳ್ಳದಿದ್ದರೂ ತನ್ನ ವಿಲಕ್ಷಣವಾದ ಕೆಲವು ವರ್ತನೆಗಳಿಂದ ಇತರರನ್ನು ಆಕರ್ಷಿಸಿಕೊಂಡಿದ್ದ.ತನಗೆ ಸತ್ತವರೊಂದಿಗೆ ಮಾತನಾಡುವ ವಿಶಿಷ್ಠ ಶಕ್ತಿಯಿದೆ ಎಂದು ಆಗಾಗ್ಗೆ ಹೇಳುತ್ತಿದ್ದರೂ, ಪೋಷಕರು ಅದೊಂದು ಅವನ ಹುಚ್ಚಾಟ ಎಂದು ಹೇಳಿ ಅವನನ್ನು ಗದರಿಸುತ್ತಿದ್ದರು.

ಒಮ್ಮೆ ಅವನಿಗೆ ಹದಿವಯಸ್ಸಿನಲ್ಲುಂಟಾದ ಗಂಟಲು ಬೇನೆ ಯಾವ ವೈದ್ಯಕೀಯ ಔಷಧೋಪಚಾರದಿಂದಲೂ ಫಲಕಾರಿಯಾಗದಿರುವುದರಿಂದ ರೋಸಿ ಹೋದ ಕೇಸಿ ತನ್ನ ಸ್ನೇಹಿತನ ಸಹಾಯದಿಂದ ಸುಪ್ತನಿದ್ರಾವಸ್ಥೆಗೆ ತೆರೆಳಲ್ಪಟ್ಟು ತನ್ನ ಸಂಕಷ್ಟಗಳಿಗೆ ಕಾರಣಗಳನ್ನು ಮತ್ತು ಪರಿಹಾರಗಳನ್ನು ಹೇಳುವ ಅವನ ರೀತಿ ಸುತ್ತಮುತ್ತಲ ಹಳ್ಳಿಗಳಿಗೆ ಹಬ್ಬಿತ್ತು. ರೋಗ ಉಪಶಮನಕ್ಕೆಂದು ತಿಳಿಸಿದರೆ ಸಾಕು, ಈತ ಸುಪ್ತಾನಿದ್ರಾವಸ್ಥೆಗೆ ತೆರಳಿ ರೋಗಕ್ಕೆ ಕಾರಣ ಹಾಗೂ ನಿವಾರಣಾ ಮಾರ್ಗವನ್ನು ಹೇಳುತ್ತಿದ್ದ. ಇದರಿಂದ ಅನೇಕ ರೋಗಿಗಳು ಗುಣಮುಖರಾದರು. ಕೆಲವರು ಜಗತ್ತಿನ ಆಗುಹೋಗುಗಳ ಪ್ರಶ್ನೆಗಳಿಗೆ ಕೇಸಿ ಸೂಕ್ತ ಉತ್ತರ ನೀಡುತ್ತಾ ಕನವರಿಕೆಯ ಪ್ರವಾದಿ ಎನಿಸಿಕೊಂಡ.

ಎಚ್ಚೆತ್ತ ಸಹಜ ಸ್ಥಿತಿಯಲ್ಲಿ ಕೇಸಿ ಎಲ್ಲರಂತೆ ತೀರಾ ಸಾಧಾರಣ ವ್ಯಕ್ತಿಯಾಗಿರುತ್ತಿದ್ದ. ಆದರೆ ಸುಪ್ತನಿದ್ರಾವಸ್ಥೆಯಲ್ಲಿ ಸಾವಿರಾರು ಜನರ ಸಂಕಷ್ಟಹರ ಚಿಕಿತ್ಸಕನಾಗಿದ್ದುದು ಅವನ ಹಿರಿಮೆಯ ಗರಿ. ಕೇಸಿ ತನ್ನೂರಿನ ಶಾಲಾ ಮಕ್ಕಳ ಪ್ರೀತಿಯ ಮಾಸ್ತರನಾಗಿ, ಉತ್ತಮ ಛಯಾಗ್ರಾಹಕನಾಗಿ, ಮನೆಮಂದಿಯ ಆತ್ಮೀಯ ಒಡನಾಡಿಯಾಗಿ ಜೀವನ ನಡೆಸಿದ್ದ.

ತನ್ನ ಸಹಜ ಸ್ಥಿತಿಯಲ್ಲಿ ಅಟ್ಲಾಂಟಿಸ್ ಬಗ್ಗೆ ಕಿಂಚಿತ್ತೂ ಆಸಕ್ತಿ ತೋರಿಸದ ಕೇಸಿ ಸುಪ್ತನಿದ್ರಾವಸ್ಥೆಯಲ್ಲಿ ಅಂಟ್ಲಾಂಟಿಸ್ ಕುರಿತು ನೂರಾರು ಬಾರಿ ಕನವರಿಸಿದ್ದಾನೆ. ಅದು ಅವನಿಗೇ ಆಸ್ಚರ್ಯದ ಸಂಗತಿಯಾಗಿತ್ತು. ಈಗಿನ ಬಿಮಿನಿ ದ್ವೀಪದಲ್ಲಿ ಹಿಂದೊಮ್ಮೆ ಉನ್ನತವಾದ ನಾಗರೀಕತೆಯೊಂದು ಬೆಳೆದು, ಜಗತ್ತಿನ ಶ್ರೇಷ್ಠ ಜನಾಂಗವಾಗಿ ಮೆರೆದು, ತನ್ನ ಕೈಯಾರ ತಾನೇ ಅವಸಾನ ಹೊಂದಿತೆಂದು ಕೇಸಿ ಹೇಳುತ್ತಿದ್ದನು. ಅಟ್ಲಾಂಟಿಸ್‍ನ ಅವಸಾನಕ್ಕೆ ಅಣುಶಕ್ತಿಯ ದುರುಪಯೋಗವೇ ಕಾರಣವೆಂದು ಹೇಳಿದ ಕೇಸಿ ಬರ್ಮುಡಾ ಟ್ರ್ಯಾಂಗಲ್‍ನ ಎಲ್ಲಾ ನಾಪತ್ತೆ ಪ್ರಕರಣಗಳಿಗೆ ಅಟ್ಲಾಂಟಿಸ್ ನಾಗರಿಕತೆಯಲ್ಲಿ ಶಕ್ತಿ ಸ್ಥಾವರಗಳ ಶಕ್ತಿಯೇ ಕಾರಣವೆಂದು ತಿಳಿಸಿದ್ದಾನೆ. ಲೇಸರ್ ಕಿರಣಗಳನ್ನು (1942) ಕಂಡು ಹಿಡಿಯುವುದಕ್ಕಿಂತ ಮೊದಲೇ ಅಟ್ಲಾಂಟಿಸ್ ನಾಗರೀಕತೆಯ ಜನರು ಲೇಸರ್ ಮತ್ತು ಮೇಸರ್ ಕಿರಣಗಳನ್ನು ಪಳಗಿಸಿಕೊಂಡಿದ್ದರು ಎಂದು ಹೇಳಿದ್ದಾನೆ.

ಈಗ್ಗೆ ಹನ್ನೆರಡು ಸಾವಿರ ವರ್ಷಗಳ ಹಿಂದೆ ಅವಸಾನ ಹೊಂದಿದ ಇಂತಹ ಶಕ್ತಿ ಕೇಂದ್ರಗಳು ಬರ್ಮುಡಾ ಟ್ರ್ಯಾಂಗಲ್‍ನಲ್ಲಿ ಈಗಲೂ ಸಹ ಕ್ರಿಯಾಶೀಲವಾಗಿವೆಯೆಂದರೆ ನಂಬುವುದು ಸ್ವಲ್ಪ ಕಷ್ಟದ ಸಂಗತಿಯಾದರೂ ಅಪೋಲೋ-12 ರ ಗಗನಯಾತ್ರಿಗಳು ಕಂಡಂತೆ ಬಿಳಿ ನೀರಿನ ಬುಗ್ಗೆಯೊಂದು ಹೊರನುಗ್ಗಿ ಇತರೆಡೆ ಹರಿದು ಪ್ರಕಾಶಮಾನವಾಗಿ ಹೊಳೆಯುವ ದೃಶ್ಯ ಕಂಡಿದ್ದರಿಂದ ಅದು ಸಾಗರದಾಳದಲ್ಲಿ ಅದುಮಿಟ್ಟ ಅನಿಲಗಳು ಹೊರನುಗ್ಗುವ ಘಟನೆಯ ಪರಿಣಾಮ ಇದ್ದರೂ ಇರಬಹುದು ಎಂದು ತೀರ್ಮಾನಿಸಲಾಯಿತು.

ಹೀಗೆ ಅಟ್ಲಾಂಟಿಸ್‍ನ ದಂತ ಕತೆಗಳಲ್ಲಿ ಒಂದು ಪಾತ್ರವಾಗುಳಿದ ಕೇಸಿ 1940ರಲ್ಲಿ ಒಂದು ಮಹತ್ತರವಾದ ಕನವರಿಕೆಯನ್ನು ಹೊರಹಾಕಿದೆ. ಅದೇನೆಂದರೆ 1968-69ರಲ್ಲಿ ಅಟ್ಲಾಂಟಿಸ್‍ನ ಭಾಗವಾದ ಪೊಸಿಡಿಯಾ ಮತ್ತೊಮ್ಮೆ ಮೇಲೆದ್ದು ಬರುತ್ತದೆಂದು ಹೇಳಿದ. ಅವನ ಈ ಕನವರಿಕೆಯನ್ನು ನಿಜಪಡಿಸಲೆಂಬಂತೆಯೋ ಅಥವಾ ಪರೀಕ್ಷೀಸಲೆಂಬತೆಯೋ 1967 ರಲ್ಲಿ ಡಾ!! ಮೆವರ್ ಹಾಗೂ ಶ್ರೀಮತಿ ವರ್ಮೋಲ್ ಎಂಬ ಸಂಶೋಧಕರು ಆ ಪೊಸಿಡಿಯಾ ಪ್ರದೇಶದಲ್ಲಿ ಸಮುದ್ರಮಟ್ಟದಿಂದ ಕೇವಲ 30 ಅಡಿ ಆಳದಲ್ಲಿ ಲಾವಾ ಶಿಲೆಗಳಡಿ ಹುದುಗಿದ್ದ ಮಿನೂಂವ್ ಎಂಬ ಮುಳುಗಡೆಯಾದ ನಗರವನ್ನು ಪತ್ತೆ ಹಚ್ಚಿದರು. ಕೇಸಿಯ ಭವಿಷ್ಯದ ಕನವರಿಕೆಯ ಕಾಕತಾಳೀಯವೆಂಬಂತೆ ಅಲ್ಲೊಂದು ಮುಳುಗಿದ ನಗರದ ಕುರುಹು ಪತ್ತೆಯಾಗಿತ್ತು.

ಹೀಗೆ ಕನವರಿಕೆಗಳ ಸರಮಾಲೆಯನ್ನೇ ಹೊತ್ತುಕೊಂಡಿದ್ದ ಎಡ್ಗರ್‍ಕೇಸಿ 1945ರ ಜನವರಿ 3 ರಂದು ಮರಣಹೊಂದಿ ಇಂದಿಗೂ ಜಗತ್ತಿನ ಕನವರಿಕೆಯಾಗೇ ಉಳಿದನು.

‘ಟೀಚರ್’ ಜುಲೈ 2006
- ಆರ್.ಬಿ.ಗುರುಬಸವರಾಜ

No comments:

Post a Comment